34 KiB
34 KiB
1 | Reference | ID | Tags | Quote | Occurrence | Question | Response |
---|---|---|---|---|---|---|---|
2 | 1:1 | bh82 | ಪೌಲನು ಹೇಗೆ ಅಪೊಸ್ತಲನಾದನು? | ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರಿಂದ ಪೌಲನು ಅಪೊಸ್ತಲನಾದನು. | |||
3 | 1:4 | q9lg | ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಯಾವುದರಿಂದ ಬಿಡುಗಡೆ ಹೊಂದಿದ್ದಾರೆ? | ಈ ಈಗಿನ ದುಷ್ಟ ಯುಗದಿಂದ ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಬಿಡುಗಡೆ ಹೊಂದಿದ್ದಾರೆ. | |||
4 | 1:6 | et4q | ಯಾವುದರಿಂದ ಪೌಲನು ಗಲಾತ್ಯದ ಸಭೆಯ ಬಗ್ಗೆ ಆಶ್ಚರ್ಯಪಟ್ಟನು? | ಅವರು ಬೇರೆ ಸುವಾರ್ತೆಗೆ ಇಷ್ಟು ಬೇಗನೆ ತಿರುಗಿಕೊಳ್ಳುತ್ತಿರುವುದನ್ನು ಕಂಡು ಪೌಲನು ಆಶ್ಚರ್ಯಪಟ್ಟನು. | |||
5 | 1:7 | nnd7 | ಸತ್ಯವಾದ ಸುವಾರ್ತೆಗಳು ಎಷ್ಟಿವೆ? | ಒಂದೇ ಒಂದು ಸತ್ಯವಾದ ಸುವಾರ್ತೆ ಇದೆ, ಅದು ಕ್ರಿಸ್ತನ ಸುವಾರ್ತೆ. | |||
6 | 1:8-9 | duup | ಕ್ರಿಸ್ತನ ಸುವಾರ್ತೆಗಿಂತ ಬೇರೆ ಸುವಾರ್ತೆಯನ್ನು ಸಾರುವ ಯಾರಿಗಾದರೂ ಏನು ಆಗಬೇಕು ಎಂದು ಪೌಲನು ಹೇಳುತ್ತಾನೆ? | ಯಾರಾದರೂ ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ ಅವರು ಶಾಪಗ್ರಸ್ತನಾಗಲಿ ಎಂದು ಪೌಲನು ಹೇಳುತ್ತಾನೆ. | |||
7 | 1:10 | hguy | ಕ್ರಿಸ್ತನ ದಾಸರು ಮೊದಲು ಯಾರ ಮೆಚ್ಚುಗೆಯನ್ನು ಹುಡುಕಬೇಕು? | ಕ್ರಿಸ್ತನ ದಾಸರು ಮೊದಲು ದೇವರ ಮೆಚ್ಚುಗೆಯನ್ನಯ ಹುಡುಕಬೇಕು. | |||
8 | 1:12 | etbx | ಕ್ರಿಸ್ತನ ಸುವಾರ್ತೆಯ ಜ್ಞಾನವನ್ನು ಪೌಲನು ಹೇಗೆ ಹೊಂದಿದನು? | ಕ್ರಿಸ್ತನ ಸುವಾರ್ತೆಯನ್ನು ಪ್ರಕಟಣೆಯ ಮೂಲಕ ಯೇಸು ಕ್ರಿಸ್ತನಿಂದ ನೇರವಾಗಿ ಪೌಲನು ಸ್ವೀಕರಿಸಿದನು. \n | |||
9 | 1:13-14 | fmu8 | ಪೌಲನು ಕ್ರಿಸ್ತನ ಸುವಾರ್ತೆಯ ಪ್ರಕಟಣೆಯನ್ನು ಸ್ವೀಕರಿಸುವ ಮೊದಲು ತನ್ನ ಜೀವನದಲ್ಲಿ ಏನು ಮಾಡುತ್ತಿದ್ದನು? | ಪೌಲನು ಯೆಹೂದ್ಯ ಧರ್ಮದ ಬಗ್ಗೆ ಬಹಳ ಆಸಕ್ತನಾಗಿದ್ದನು. ಅವನು ದೇವರ ಸಭೆಯನ್ನು ಹಿಂಸೆಪಡಿಸುತ್ತಾ ಅದನ್ನು ಹಾಳುಮಾಡುತ್ತಿದ್ದನು. | |||
10 | 1:15 | ws4e | ದೇವರು ಪೌಲನನ್ನು ಆತನ ಅಪೋಸ್ತಲನನ್ನಾಗಿ ಯಾವಾಗ ಆರಿಸಿಕೊಂಡನು? | ಪೌಲನು ಅವನ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ಅವನನ್ನು ಅಪೊಸ್ತಲನನ್ನಾಗಿ ಆರಿಸಿಕೊಂಡನು.\r\n\n | |||
11 | 1:16 | gv0o | ಯಾವ ಉದ್ದೇಶಕ್ಕಾಗಿ ದೇವರು ಪೌಲನನ್ನು ತನ್ನ ಅಪೊಸ್ತಲನಾಗಿ ಆರಿಸಿಕೊಂಡನು?\r\n\n | ಪೌಲನು ಅನ್ಯಜನರ ಮಧ್ಯದಲ್ಲಿ ಕ್ರಿಸ್ತನನ್ನು ಸಾರುವುದಕ್ಕಾಗಿ ದೇವರು ಪೌಲನನ್ನು ತನ್ನ ಅಪೊಸ್ತಲನನ್ನಾಗಿ ಆರಿಸಿಕೊಂಡನು. | |||
12 | 1:18-19 | n7ls | ಅಂತಿಮವಾಗಿ ಪೌಲನು ಇತರ ಅಪೊಸ್ತಲರನ್ನು ಎಲ್ಲಿ ಭೇಟಿಯಾದನು?\r\n\n | ಅಂತಿಮವಾಗಿ, ಪೌಲನು ಯೆರೂಸಲೇಮಿಗೆ ಹೋದನು ಮತ್ತು ಅಪೊಸ್ತಲರಾದ ಕೇಫ ಮತ್ತು ಯಾಕೋಬರನ್ನು ಭೇಟಿಯಾದನು.\r\n\n | |||
13 | 1:22-23 | fxfg | ಯೂದಾಯಲ್ಲಿ ಇದ್ದ ಸಭೆಗಳು ಪೌಲನ ಬಗ್ಗೆ ಏನನ್ನು ಕೇಳಿಸಿಕೊಂಡಿದ್ದವು? | ಪೌಲನು ಮೊದಲು ಯೆಹೂದ್ಯರನ್ನು ಹಿಂಸೆಪಡಿಸುತ್ತಿದ್ದನು. ಆದರೆ ಈಗ ಅವನು ಯೆಹೂದ್ಯರ ನಂಬಿಕೆಯನ್ನು ಸಾರುತ್ತಿದ್ದಾನೆ ಎಂದು ಯೆಹೂದ್ಯದಲ್ಲಿನ ಸಭೆಗಳು ಕೇಳಿಸಿಕೊಂಡಿದ್ದವು. | |||
14 | 2:1-2 | sg6l | ಪೌಲನು 14 ವರ್ಷಗಳ ನಂತರ ಯೆರೂಸಲೇಮಿಗೆ ಹೋದಾಗ ಏನು ಮಾಡಿದನು? | ಪೌಲನು ಪ್ರತ್ಯೇಕವಾಗಿ ಸಭೆಯ ನಾಯಕರೊಂದಿಗೆ ಮಾತಾಡಿ, ತಾನು ಸಾರುತ್ತಿದ್ದ ಸುವಾರ್ತೆಯನ್ನು ಅವರಿಗೆ ವಿವರಿಸಿದನು. | |||
15 | 2:3 | ryvx | ಯೆಹೂದ್ಯನಲ್ಲದ ತೀತನು ಏನು ಮಾಡಿಸಿಕೊಳ್ಳುವುದು ಅಗತ್ಯವಿರಲಿಲ್ಲ? | ತೀತನು ಸುನ್ನತಿ ಮಾಡಿಸಿಕೊಳ್ಳುವ ಅಗತ್ಯವಿರಲಿಲ್ಲ. | |||
16 | 2:4 | n7kn | ಸುಳ್ಳು ಸಹೋದರರು ಏನು ಮಾಡಲು ಅಪೇಕ್ಷಿಸಿದರು? | ಸುಳ್ಳು ಸಹೋದರರು ಪೌಲನನ್ನೂ ಅವನ ಸಂಗಡಿರನ್ನೂ ಧರ್ಮಶಾಸ್ತ್ರದ ಗುಲಾಮರನ್ನಾಗಿ ಮಾಡಲು ಅಪೇಕ್ಷಿಸಿದ್ದರು.\n\n | |||
17 | 2:6 | l735 | ಯೆರೂಸಲೇಮಿನ ಸಭೆಯ ನಾಯಕರು ಪೌಲನ ಸಂದೇಶವನ್ನು ಬದಲಾಯಿಸಿದರಾ? | ಇಲ್ಲ, ಪೌಲನ ಸಂದೇಶಕ್ಕೆ ಅವರು ಏನನ್ನೂ ಸೇರಿಸಲಿಲ್ಲ. | |||
18 | 2:7-8 | gi1g | ಮುಖ್ಯವಾಗಿ ಸುವಾರ್ತೆಯನ್ನು ಯಾರಿಗೆ ಸಾರುವದಕ್ಕೆ ಪೌಲನನ್ನು ಕಳುಹಿಸಲಾಯಿತು? | ಮುಖ್ಯವಾಗಿ ಸುನ್ನತಿಯಿಲ್ಲದವರಿಗೆ, ಅನ್ಯಜನರಿಗೆ ಸುವಾರ್ತೆಯನ್ನು ಸಾರುವಂತೆ ಪೌಲನನ್ನು ಕಳುಹಿಸಲಾಯಿತು. | |||
19 | 2:7-8 | u2cc | ಮುಖ್ಯವಾಗಿ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಯಾರಲ್ಲಿಗೆ ಕಳುಹಿಸಲಾಯಿತು? | ಮುಖ್ಯವಾಗಿ ಸುನ್ನತಿ ಆಗಿರುವ ಯೆಹೂದ್ಯರಿಗೆ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಕಳುಹಿಸಲಾಗಿತ್ತು. | |||
20 | 2:9 | bx0g | ಯೆರೂಸಲೇಮಿನ ನಾಯಕರು ಪೌಲನ ಸೇವೆಯನ್ನು ಒಪ್ಪಿಕೊಂಡಿರುವುದನ್ನು ಹೇಗೆ ತೋರಿಸಿದರು? | ಯೆರೂಸಲೇಮಿನ ನಾಯಕರು ಪೌಲ ಮತ್ತು ಬಾರ್ನಬರಿಗೆ ತಮ್ಮ ಒಪ್ಪಿಗೆಯನ್ನು ತೋರಿಸಲು ಅನ್ಯೋನತೆಯ ಬಲಗೈಯನ್ನು ಕೊಟ್ಟರು. | |||
21 | 2:11-12 | gfg5 | ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಯಾವ ತಪ್ಪು ಮಾಡಿದನು? | ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ಪೇತ್ರನು ನಿಲ್ಲಿಸಿದನು. ಯಾಕೆಂದರೆ ಅವನು ಸುನ್ನತಿ ಮಾಡಿಸಿಕೊಂಡಿದ್ದ ಯೆಹೂದ್ಯರಿಗೆ ಭಯಪಡುತ್ತಿದ್ದನು. | |||
22 | 2:14 | q11q | ಎಲ್ಲರ ಮುಂದೆ ಕೇಫನನ್ನು ಪೌಲನು ಏನು ಕೇಳಿದನು? | ಕೇಫನು ಯೆಹೂದ್ಯನಲ್ಲದವನಾಗಿ ಜೀವಿಸುತ್ತಿರುವಾಗ ಯೆಹೂದ್ಯರಲ್ಲದವರು ಯೆಹೂದ್ಯರಂತೆ ಜೀವಿಸುವಂತೆ ಅವನು ಹೇಗೆ ಒತ್ತಾಯಿಸಬಹುದೆಂದು ಪೌಲನು ಕೇಫನನ್ನು ಕೇಳಿದನು. | |||
23 | 2:16 | zqqn | ಯಾವುದರಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು? | ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು. | |||
24 | 2:16 | h9tg | ಒಬ್ಬನು ದೇವರ ಮುಂದೆ ಹೇಗೆ ನೀತಿವಂತನಾಗುತ್ತಾನೆ? | ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನಲ್ಲಿನ ನಂಬಿಕೆಯಿಂದ ದೇವರ ಮುಂದೆ ನೀತಿವಂತನಾಗುವನು. | |||
25 | 2:18 | eljf | ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಂತರ ಒಬ್ಬನು ಮತ್ತೆ ಧರ್ಮಶಾಸ್ತ್ರವನ್ನು ಹಿಂಬಾಲಿಸಲು ಪ್ರಯತ್ನಿಸಿದರೆ, ಅವನು ನಿಜವಾಗಿಯೂ ಏನು ಆಗುತ್ತಾನೆ ಎಂದು ಪೌಲನು ಹೇಳುತ್ತಾನೆ? | ಪೌಲನು ಹೇಳುತ್ತಾ ತಾನು ನಿಜವಾಗಿ ಧರ್ಮಶಾಸ್ತ್ರವನ್ನು ಮುರಿದವನು ಎಂದು ತೋರಿಸಿಕೊಳ್ಳುತ್ತಾನೆ. | |||
26 | 2:20 | c7ji | ಈಗ ತನ್ನಲ್ಲಿ ಯಾರು ಜೀವಿಸುತ್ತಾರೆ ಎಂದು ಪೌಲನು ಹೇಳಿದನು? | ತನ್ನಲ್ಲಿ ಕ್ರಿಸ್ತನು ಜೀವಿಸುತ್ತಾನೆ ಎಂದು ಪೌಲನು ಹೇಳಿದನು. | |||
27 | 2:20 | stq0 | ದೇವರ ಮಗನು ತನಗಾಗಿ ಏನು ಮಾಡಿದನೆಂದು ಪೌಲನು ಹೇಳುತ್ತಾನೆ? | ದೇವರ ಮಗನು ಅವನನ್ನು ಪ್ರೀತಿಸಿದನು ಮತ್ತು ತನ್ನನ್ನು ತಾನು ಪೌಲನಿಗಾಗಿ ಕೊಟ್ಟನು ಎಂದು ಪೌಲನು ಹೇಳುತ್ತಾನೆ. | |||
28 | 3:6 | n5o2 | ದೇವರ ಮುಂದೆ ಅಬ್ರಹಾಮನು ನೀತಿವಂತನೆಂದು ಹೇಗೆ ಪರಿಗಣಿಸಲ್ಪಟ್ಟನು? | ಅಬ್ರಹಾಮನು ದೇವರನ್ನು ನಂಬಿದನು, ಮತ್ತು ಅದಕ್ಕಾಗಿಯೇ ದೇವರು ಅಬ್ರಹಾಮನನ್ನು ನೀತಿವಂತನೆಂದು ಪರಿಗಣಿಸಿದನು. | |||
29 | 3:7 | ihwt | ಅಬ್ರಹಾಮನ ಮಕ್ಕಳು ಯಾರು? | ಯಾರು ದೇವರನ್ನು ನಂಬಿದರೋ ಅವರು ಅಬ್ರಹಾಮನ ಮಕ್ಕಳು. | |||
30 | 3:8 | ibj7 | ಯೆಹೂದ್ಯರಲ್ಲದವರು ಯಾವ ರೀತಿಯಲ್ಲಿ ನೀತಿವಂತರಾಗುತ್ತಾರೆ ಎಂಬುದನ್ನು ಗ್ರಂಥವು ಯಾವ ರೀತಿಯಲ್ಲಿ ಮೊದಲೇ ತಿಳಿಸಿತ್ತು? | ಯೆಹೂದ್ಯರಲ್ಲದವರು ನಂಬಿಕೆಯಿಂದಲೇ ನೀತಿವಂತರಾಗುವರು ಎಂದು ಗ್ರಂಥವು ಮೊದಲೇ ಹೇಳಿತ್ತು. | |||
31 | 3:10 | t6yk | ಧರ್ಮಶಾಸ್ತ್ರದ ಕ್ರಿಯೆಗಳ ಮೇಲೆ ಯಾರು ಅವಲಂಬಿತರಾದವರು ಯಾವುದರ ಕೆಳಗೆ ನೀತಿವಂತರಾಗಬೇಕು? | ಆದರೆ ಧರ್ಮಶಾಸ್ತ್ರದ ಕ್ರಿಯೆಗಳಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವವರು ಶಾಪಗ್ರಸ್ತರಾಗಿದ್ದಾರೆ. | |||
32 | 3:11 | wofi | ಎಷ್ಟು ಜನರು ಧರ್ಮಶಾಸ್ತ್ರದ ಕ್ರಿಯೆಗಳಿಂದ ದೇವರ ಮೂಲಕ ನೀತಿವಂತರೆಂದು ನಿರ್ಣಯಿಸಲ್ಲಪಟ್ಟರು? | ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೊಬ್ಬರೂ ನೀತಿವಂತರಾಗುವುದಿಲ್ಲ. | |||
33 | 3:14 | ks37 | ಕ್ರಿಸ್ತನು ನಮಗೋಸ್ಕರ ಶಾಪವಾಗುವುದಕ್ಕೆ ನಮ್ಮನ್ನು ಯಾಕೆ ವಿಮೋಚಿಸಿದನು?\r\n\n | ಅಬ್ರಹಾಮನ ಆಶೀರ್ವಾದವು ಅನ್ಯಜನರಿಗೆ ಬರಬಹುದೆಂದು ಕ್ರಿಸ್ತನು ನಮಗೋಸ್ಕರ ಶಾಪವನ್ನು ಹೊತ್ತುಕೊಂಡು ನಮ್ಮನ್ನು ಬಿಡಿಸಿದನು. | |||
34 | 3:17 | rkbr | ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ಯೆಹೂದ್ಯರ ಧರ್ಮಶಾಸ್ತ್ರವು ರದ್ದುಗೊಳಿಸಿತೋ?\n | ಇಲ್ಲ, ಅಬ್ರಹಾಮನಿಗೆ ಮಾಡಿದಂತ ವಾಗ್ದಾನವನ್ನು ಧರ್ಮಶಾಸ್ತ್ರವು ರದ್ದುಗೊಳಿಸಲಿಲ್ಲ. | |||
35 | 3:19 | r3x5 | ಹಾಗಾದರೆ ಅಲ್ಲಿ ಧರ್ಮಶಾಸ್ತ್ರವು ಯಾಕೆ ಇದ್ದಿತು? | ಅಬ್ರಹಾಮನ ಸಂತತಿಯು ಬರುವ ತನಕ ಅಪರಾಧಗಳ ನಿಮಿತ್ತ ಧರ್ಮಶಾಸ್ತ್ರವು ಬಂದಿತು. | |||
36 | 3:22 | jvvr | ಗ್ರಂಥದಲ್ಲಿರುವ ಧರ್ಮಶಾಸ್ತ್ರವು ಎಲ್ಲರನ್ನು ಯಾವುದರ ಅಡಿಯಲ್ಲಿ ಬಂಧಿಸಿದೆ? | ಗ್ರಂಥದಲ್ಲಿರುವ ಧರ್ಮಶಾಸ್ತ್ರವು ಎಲ್ಲರನ್ನು ಪಾಪದ ಅಡಿಯಲ್ಲಿ ಬಂಧಿಸಿದೆ. | |||
37 | 3:23-26 | vaww | ಧರ್ಮಶಾಸ್ತ್ರದ ಬಂಧನದಿಂದ ನಾವು ಹೇಗೆ ಬಿಡುಗಡೆಯಾಗುತ್ತೇವೆ? | ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ನಾವು ಧರ್ಮಶಾಸ್ತ್ರದ ಬಂಧನದಿಂದ ಬಿಡುಗಡೆಯಾಗಿದ್ದೇವೆ.\r\n. | |||
38 | 3:27 | dti9 | ಕ್ರಿಸ್ತನಲ್ಲಿ ಯಾರು ಧರಿಸಿಕೊಂಡಿದ್ದಾರೆ? | ಕ್ರಿಸ್ತನಲ್ಲಿ ದೀಕ್ಷಾಸ್ನಾನವನ್ನು ಮಾಡಿಸಿಕೊಂಡಿರುವ ನೀವು ಕ್ರಿಸ್ತನಲ್ಲಿ ಧರಿಸಿಕೊಂಡಿದ್ದೀರಿ.\n | |||
39 | 3:28 | bp4h | ಯಾವ ವಿಭಿನ್ನ ರೀತಿಯ ಜನರು ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ? | ಯಹೂದ್ಯರು, ಗ್ರೀಕರು, ದಾಸರು, ಸ್ವತಂತ್ರರು, ಪುರುಷರು ಮತ್ತು ಸ್ತ್ರೀಯರು ಎಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ. | |||
40 | 4:1-2 | kml9 | ಆಸ್ತಿಯ ಬಾಧ್ಯಸ್ಥನು ಮಗುವಾಗಿದ್ದಾಗ ಅವನು ಹೇಗೆ ಬದುಕುತ್ತಾನೆ? | ಬಾಧ್ಯಸ್ಥನು ಅವನ ತಂದೆಯು ನಿಗದಿಪಡಿಸಿದ ದಿನದವರೆಗೆ ಅವನು ದಾಸನಾಗಿ ಪಾಲಕರ ಮತ್ತು ಮನೆವಾರ್ತೆಯವರ ಅಧೀನದಲ್ಲಿ ಇರುತ್ತಾನೆ. | |||
41 | 4:4-5 | gsoo | ಸರಿಯಾದ ಸಮಯದ ಇತಿಹಾಸದಲ್ಲಿ ದೇವರು ಏನು ಮಾಡಿದನು?\n\n | ಸರಿಯಾದ ಸಮಯದಲ್ಲಿ ಧರ್ಮಶಾಸ್ತ್ರದ ಅಡಿಯಲ್ಲಿರುವವರನ್ನು ಬಿಡುಗಡೆ ಮಾಡಲು ದೇವರು ತನ್ನ ಮಗನನ್ನು ಕಳುಹಿಸಿದನು. | |||
42 | 4:5 | aa5k | ಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ದೇವರು ತನ್ನ ಕುಟುಂಬಕ್ಕೆ ಹೇಗೆ ಸೇರಿಸಿಕೊಂಡನು?\n\n | ದೇವರು ಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ಮಕ್ಕಳನ್ನಾಗಿ ದತ್ತು ಸ್ವೀಕರಿಸಿದನು. | |||
43 | 4:6 | ge9i | ದೇವರು ತನ್ನ ಮಕ್ಕಳ ಹೃದಯಗಳಿಗೆ ಏನನ್ನು ಕಳುಹಿಸಿದನು? | ದೇವರು ತನ್ನ ಮಗನ ಆತ್ಮವನ್ನು ತನ್ನ ಮಕ್ಕಳ ಹೃದಯಗಳಿಗೆ ಕಳುಹಿಸುತ್ತಾನೆ.\r\n\n | |||
44 | 4:8 | lmva | ದೇವರ ಬಗ್ಗೆ ನಾವು ತಿಳಿದುಕೊಳ್ಳುವ ಮೊದಲು, ನಾವು ಯಾರಿಗೆ ಗುಲಾಮರಾಗಿದ್ದೆವು? | ನಾವು ದೇವರನ್ನು ತಿಳಿಯುವುದಕ್ಕಿಂತ ಮುಂಚೆ, ದೇವರುಗಳೇ ಅಲ್ಲದ, ಈ ಲೋಕವನ್ನು ಆಳುವ ಆತ್ಮಗಳಿಗೆ ನಾವು ಗುಲಾಮರಾಗಿದ್ದೆವು. | |||
45 | 4:9 | et22 | ಗಲಾತ್ಯದವರು ಯಾವುದಕ್ಕೆ ಹಿಂದಿರುಗುತ್ತಿದ್ದಾರೆಂದು ಪೌಲನು ಗೊಂದಲಕ್ಕೆ ಒಳಗಾದನು? | ಗಲಾತ್ಯದವರು ಮತ್ತೊಮ್ಮೆ ಲೋಕವನ್ನು ಆಳುತ್ತಿರುವ ಆತ್ಮಗಳಿಗೆ ಹಿಂದಿರುಗುತ್ತಿರುವುದರಿಂದ ಪೌಲನಿಗೆ ಗೊಂದಲವಾಯಿತು. | |||
46 | 4:9-11 | dcls | ಗಲಾತ್ಯದವರು ಹಿಂದಕ್ಕೆ ತಿರುಗುವುದನ್ನು ನೋಡಿದಾಗ ಪೌಲನು ಅವರ ವಿಷಯದಲ್ಲಿ ಏಕೆ ಭಯಪಟ್ಟನು? | ಗಲಾತ್ಯದವರು ಮತ್ತೆ ಗುಲಾಮರಾಗುತ್ತಾರೆ, ಮತ್ತು ನಾನು ಅವರ ಮೇಲೆ ಪ್ರಯಾಸಪಟ್ಟಿದ್ದು ವ್ಯರ್ಥವಾಯಿತೋ ಎಂದು ಪೌಲನು ಭಯಪಟ್ಟನು. | |||
47 | 4:13 | grkg | ಪೌಲನು ಮೊದಲು ಗಲಾತ್ಯಕ್ಕೆ ಬಂದಾಗ, ಅವನಿಗೆ ಯಾವ ಸಮಸ್ಯೆ ಇದ್ದಿತು?\r\n\n | ಪೌಲನು ಮೊದಲು ಗಲಾತ್ಯಕ್ಕೆ ಬಂದಾಗ, ಅವನು ದೈಹೀಕ ಬಲಹೀನತೆ ಇದ್ದಿತು.\n\n | |||
48 | 4:14 | v4yn | ಪೌಲನಿಗೆ ಸಮಸ್ಯೆ ಇದ್ದರೂ ಗಲಾತ್ಯದವರು ಅವನನ್ನು ಹೇಗೆ ಸ್ವೀಕರಿಸಿದರು? | ಪೌಲನಿಗೆ ಸಮಸ್ಯೆಯು ಇದ್ದರೂ, ಗಲಾತ್ಯದವರು ಪೌಲನನ್ನು ದೇವರ ದೂತನಾಗಿ, ಯೇಸು ಕ್ರಿಸ್ತನಾಗಿ ಸ್ವೀಕರಿಸಿದರು. | |||
49 | 4:17 | d3xb | ಬೇರೆಮಾಡಲು ಪ್ರಯತ್ನಿಸಿದ ಗಲಾತ್ಯದ ಸುಳ್ಳು ಬೋಧಕರು ಯಾರು? | ಗಲಾತ್ಯದ ಸುಳ್ಳು ಬೋಧಕರು ಪೌಲನಿಂದ ಬೇರೆಮಾಡಲು ಪ್ರಯತ್ನಿಸಿದರು . | |||
50 | 4:20-21 | s4s2 | ಸುಳ್ಳು ಬೋಧಕರು ಗಲಾತ್ಯದವರನ್ನು ಯಾವುದರ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ?\r\n\n | ಸುಳ್ಳು ಬೋಧಕರು ಗಲಾತ್ಯದವರನ್ನು ಮತ್ತೆ ಧರ್ಮಶಾಸ್ತ್ರದ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ. | |||
51 | 4:22 | tswh | ಯಾವ ಎರಡು ವಿಧದ ಹೆಂಗಸರಿಂದ ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು?\n | ಅಬ್ರಹಾಮನಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಒಬ್ಬನು ದಾಸಿಯ ಮಗನು ಮತ್ತು ಇನ್ನೊಬ್ಬನು ಸ್ವತಂತ್ರಳಾದ ಸ್ತ್ರೀಯಿಂದ.\r\n | |||
52 | 4:26 | wwsm | ಪೌಲ ಮತ್ತು ನಂಬುವ ಗಲಾತ್ಯದವರ ಸಾಂಕೇತಿಕ ತಾಯಿ ಯಾರು? | ಮೇಲಣ ಯೆರೂಸಲೇಮ್, ಸ್ವತಂತ್ರ ಸ್ತ್ರೀ, ಪೌಲನ ಮತ್ತು ನಂಬುವ ಗಲಾತ್ಯದವರ ಸಾಂಕೇತಿಕ ತಾಯಿಯಾಗಿದ್ದಾಳೆ.\n | |||
53 | 4:28 | gz32 | ಕ್ರಿಸ್ತನಲ್ಲಿನ ವಿಶ್ವಾಸಿಗಳು ಶರೀರಸಂಬಂಧದ ಮಕ್ಕಳೋ ಅಥವಾ ವಾಗ್ದಾನದ ಮಕ್ಕಳೋ? | ಕ್ರಿಸ್ತನಲ್ಲಿನ ವಿಶ್ವಾಸಿಗಳು ವಾಗ್ದಾನದ ಮಕ್ಕಳು. | |||
54 | 4:29 | jmva | ವಾಗ್ದಾನದ ಮಕ್ಕಳನ್ನು ಯಾರು ಹಿಂಸಿಸುತ್ತಾರೆ?\n\n | ಮಾಂಸದ ಮಕ್ಕಳು ವಾಗ್ದಾನದ ಮಕ್ಕಳನ್ನು ಹಿಂಸೆಪಡಿಸಿದರು.\r\n\n | |||
55 | 4:30 | sdh3 | ದಾಸಿಯಾದ ಸ್ತ್ರೀಯ ಮಕ್ಕಳು ಏನನ್ನು ಬಾದ್ಯಸ್ಥವಾಗಿ ಪಡೆಯುವುದಿಲ್ಲ?\n\n | ದಾಸಿಯ ಮಕ್ಕಳು ಸ್ವತಂತ್ರಳಾದ ಸ್ತ್ರೀಯ ಮಕ್ಕಳೊಂದಿಗೆ ಬಾಧ್ಯರಾಗುವದಿಲ್ಲ. | |||
56 | 4:31 | r7te | ಕ್ರಿಸ್ತನಲ್ಲಿನ ವಿಶ್ವಾಸಿಗಳು ದಾಸಿಯ ಮಕ್ಕಳೋ ಅಥವಾ ಸ್ವತಂತ್ರ ಸ್ತ್ರೀಯ ಮಕ್ಕಳೋ?\n\n | ಕ್ರಿಸ್ತನಲ್ಲಿನ ವಿಶ್ವಾಸಿಗಳು ಸ್ವತಂತ್ರ ಸ್ತ್ರೀಯ ಮಕ್ಕಳು. | |||
57 | 5:1 | rtss | ಕ್ರಿಸ್ತನು ನಮ್ಮನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಿದ್ದಾನೆ? | ಸ್ವತಂತ್ರಕ್ಕಾಗಿ ಕ್ರಿಸ್ತನು ನಮ್ಮನ್ನು ಬಿಡುಗಡೆಮಾಡಿದ್ದಾನೆ. | |||
58 | 5:2 | ow5t | ಸುನ್ನತಿ ಮಾಡಿಸಿಕೊಂಡರೆ ಏನಾಗುವುದೆಂದು ಪೌಲನು ಗಲಾತ್ಯದವರಿಗೆ ಎಚ್ಚರಿಕೆ ಕೊಟ್ಟನು?\r\n\n | ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನು ಅವರಿಗೆ ಯಾವ ಪ್ರಯೋಜನ ಆಗುವುದಿಲ್ಲ ಎಂದು ಪೌಲನು ಗಲಾತ್ಯದವರಿಗೆ ಹೇಳಿದನು. | |||
59 | 5:4 | unjp | ಧರ್ಮಶಾಸ್ತ್ರವನ್ನು ಅನುಸರಿಸುವ ಮೂಲಕ ನೀತಿವಂತರಾಗಲು ಎಲ್ಲಾ ಗಲಾತ್ಯರಿಗೆ ಏನು ಆಗುತ್ತದೆ ಎಂದು ಪೌಲನು ಎಚ್ಚರಿಸಿದನು? | ಪೌಲನು ಗಲಾತ್ಯದವರಿಗೆ, ಧರ್ಮಶಾಸ್ತ್ರವನ್ನು ಅನುಸರಿಸಿ ನೀತಿವಂತರಾಗಲು ಪ್ರಯತ್ನಿಸುವವರೆಲ್ಲರೂ ಕ್ರಿಸ್ತನಿಂದ ಮತ್ತು ಕೃಪೆಯಿಂದ ಬಿದ್ದುಹೋಗುತ್ತಾರೆ ಎಂದು ಎಚ್ಚರಿಸಿದನು. | |||
60 | 5:6 | izs9 | ಯೇಸು ಕ್ರಿಸ್ತನಲ್ಲಿ ಸುನ್ನತಿ ಮತ್ತು ಸುನ್ನತಿಯಿಲ್ಲದಿರುವಿಕೆಗೆ ವಿರುದ್ಧವಾಗಿ ಏನು ಮಾತ್ರ ಅರ್ಥಪೂರ್ಣವಾಗಿದೆ?\n\n | ಕ್ರಿಸ್ತ ಯೇಸುವಿನಲ್ಲಿ, ಪ್ರೀತಿಯ ಮೂಲಕ ಕ್ರಿಯೆ ಮಾಡುವ ನಂಬಿಕೆ ಮಾತ್ರವೇ ಏನಾದರೂ ಅರ್ಥವನ್ನು ನೀಡುತ್ತದೆ.\r\n | |||
61 | 5:10 | z2kn | ಗಲಾತ್ಯದವರಿಗೆ ಸುವಾರ್ತೆಯ ವಿಷಯದಲ್ಲಿ ಗೊಂದಲ ಉಂಟುಮಾಡಿದವನ ಬಗ್ಗೆ ಪೌಲನಿಗೆ ಯಾವ ಭರವಸೆ ಇದೆ? | ಗಲಾತ್ಯದವರಿಗೆ ಸುವಾರ್ತೆಯ ಬಗ್ಗೆ ಗೊಂದಲವನ್ನುಂಟು ಮಾಡಿದವನು ದೇವರ ತೀರ್ಪನ್ನು ಹೊಂದುವನೆಂದು ಪೌಲನಿಗೆ ಭರವಸೆಯಿದೆ. | |||
62 | 5:11 | v9ve | ಸುನ್ನತಿಯನ್ನು ಪ್ರಕಟಿಸುವುದರಿಂದ ಏನಾಗುತ್ತದೆ ಎಂದು ಪೌಲನು ಹೇಳಿದನು?\r\n\n | ಸುನ್ನತಿಯನ್ನು ಪ್ರಕಟಿಸುವಲ್ಲಿ, ಶಿಲುಬೆಯ ಅಡ್ಡಿಯು ನಾಶವಾಗುತ್ತದೆ ಎಂದು ಪೌಲನು ಹೇಳುತ್ತಾನೆ. | |||
63 | 5:13 | wgj2 | ಕ್ರಿಸ್ತನಲ್ಲಿನ ವಿಶ್ವಾಸಿಗಳು ತಮ್ಮ ಸ್ವಾತಂತ್ರವನ್ನು ಹೇಗೆ ಉಪಯೋಗಿಸಬಾರದು? | ವಿಶ್ವಾಸಿಗಳು ತಮ್ಮ ಸ್ವಾತಂತ್ರವನ್ನು ಮಾಂಸಕ್ಕಾಗಿ ಒಂದು ಅವಕಾಶವಾಗಿ ಉಪಯೋಗಿಸಬಾರದು.\n | |||
64 | 5:13 | hglc | ವಿಶ್ವಾಸಿಗಳು ಕ್ರಿಸ್ತನಲ್ಲಿ ತಮ್ಮ ಸ್ವಾತಂತ್ರವನ್ನು ಕ್ರಿಸ್ತನಲ್ಲಿ ಹೇಗೆ ಉಪಯೋಗಿಸಬೇಕು? | ವಿಶ್ತವಾಸಿಗಳು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆಮಾಡಲು ಉಪಯೋಗಿಸಿಕೊಳ್ಳಬೇಕು.\n | |||
65 | 5:16 | ympc | ವಿಶ್ವಾಸಿಗಳು ಹೇಗೆ ಮಾಂಸದ ಅಭಿಲಾಷೆಗಳನ್ನು ನೆರವೇರಿಸಬಾರದು? | ವಿಶ್ವಾಸಿಗಳು ಆತ್ಮದಿಂದ ಬದುಕಬಹುದು, ಮತ್ತು ಹೀಗೆ, ಮಾಂಸದ ಅಭಿಲಾಷೆಗಳನ್ನು ನೆರವೇರಿಸುವುದಿಲ್ಲ. | |||
66 | 5:17 | a5pf | ವಿಶ್ವಾಸಿಯಲ್ಲಿ ಯಾವ ಎರಡು ವಿಷಯಗಳು ಒಂದಕ್ಕೊಂದು ವಿರುದ್ಧವಾಗಿವೆ? | ವಿಶ್ವಾಸಿಯಲ್ಲಿ ಆತ್ಮ ಮತ್ತು ಮಾಂಸವು ಒಂದಕ್ಕೊಂದು ವಿರುದ್ದವಾಗಿದೆ. | |||
67 | 5:20-21 | cztb | ಮಾಂಸದ ಕಾರ್ಯಗಳ ಮೂರು ಉದಾಹರಣೆಗಳು ಯಾವುವು?\n\n | ಮಾಂಸದ ಕಾರ್ಯಗಳ ಮೂರು ಉದಾಹರಣೆಗಳು ಯಾವುವೆಂದರೆ: ಜಾರತ್ವ, ಅಶುದ್ಧತೆ, ದುರಾಶೆ, ವಿಗ್ರಹಾರಾಧನೆ, ಮಾಟಗಾರಿಕೆ, ದ್ವೇಷ, ಕಲಹ, ಅಸೂಯೆ, ಕೋಪ, ಜಗಳ, ಭಿನ್ನಾಭಿಪ್ರಾಯ, ಭಿನ್ನಾಭಿಪ್ರಾಯ, ಅಸೂಯೆ, ಕುಡುಕತನ. | |||
68 | 5:21 | ubwn | ಮಾಂಸದ ಕಾರ್ಯಗಳನ್ನು ಯಾರು ಅಭ್ಯಾಸಿಸುತ್ತಾರೋ ಮಾಡುವವರಿಗೆ ಏನನ್ನು ಹೊಂದುವುದಿಲ್ಲ? | ಮಾಂಸದ ಕಾರ್ಯಗಳನ್ನು ಮಾಡುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. | |||
69 | 5:22-23 | k16e | ಆತ್ಮದ ಫಲ ಎಂದರೆ ಏನು? | ಪವಿತ್ರ ಆತ್ಮನ ಫಲವು ಪ್ರೀತಿಯೂ, ಸಂತೋಷವೂ, ಶಾಂತಿಯೂ, ದೀರ್ಘಶಾಂತಿಯೂ, ದಯೆಯೂ, ಒಳ್ಳೆಯತನವೂ, ನಂಬಿಕೆಯೂ, ಸಾತ್ವಿಕತೆಯೂ, ಸ್ವಯಂ ನಿಯಂತ್ರಣ ಆಗಿದೆ. | |||
70 | 5:24 | q615 | ಯಾರು ಯೇಸು ಕ್ರಿಸ್ತನಿಗೆ ಸೇರಿದ್ದಾರೋ ಮಾಂಸ ಮತ್ತು ಅದರ ವ್ಯಾಮೋಹಗಳಿಂದ ಏನು ಮಾಡಿದರು? | ಕ್ರಿಸ್ತ ಯೇಸುವಿಗೆ ಸೇರಿದವರು ತಮ್ಮ ಮಾಂಸದ ವ್ಯಾಮೋಹಗಳ ಮತ್ತು ಅಭಿಲಾಷೆಗಳ ಸಹಿತ ಶಿಲುಬೆಗೆ ಹಾಕಲ್ಪಟ್ಟಿದ್ದಾರೆ.\n | |||
71 | 6:1 | rthj | ಒಬ್ಬನು ಯಾವದೋ ದೋಷದಲ್ಲಿ ಸಿಕ್ಕಿಕೊಂಡರೆ ಆಧ್ಯಾತ್ಮಿಕರಾದ ಅವರು ಏನು ಮಾಡಬೇಕು? | ಆಧ್ಯಾತ್ಮಿಕವಾಗಿ ಇರುವವರು ಆ ಮನುಷ್ಯನನ್ನು ಸಾತ್ವಿಕ ಆತ್ಮದಿಂದ ನೀವು ಪುನಃಸ್ಥಾಪಿಸಬೇಕು. | |||
72 | 6:1 | xaix | ಆಧ್ಯಾತ್ಮಿಕವಾಗಿ ಸಿಕ್ಕಿಹಾಕಿಕೊಂಡಿರುವವರು ಯಾವ ಅಪಾಯದಿಂದ ಎಚ್ಚರದಿಂದಿರಬೇಕು? | ಆಧ್ಯಾತ್ಮಿಕವಾಗಿ ಸಿಕ್ಕಿಹಾಕಿಕೊಂಡಿರುವವರು ತಾವು ಸಹ ಶೋಧನೆಗೆ ಒಳಗಾಗದಂತೆ ಎಚ್ಚರದಿಂದಿರಬೇಕು. | |||
73 | 6:2 | c0kl | ವಿಶ್ವಾಸಿಗಳು ಕ್ರಿಸ್ತನ ನಿಯಮವನ್ನು ಹೇಗೆ ನೆರವೇರಿಸುತ್ತಾರೆ? | ವಿಶ್ವಾಸಿಗಳು ಒಬ್ಬರ ಹೊರೆಗಳನ್ನು ಮತ್ತೊಬ್ಬರು ಹೊತ್ತುಕೊಂಡು ಕ್ರಿಸ್ತನ ನಿಯಮವನ್ನು ನೆರವೇರಿಸುತ್ತಾರೆ.\n | |||
74 | 6:4 | uy96 | ಒಬ್ಬ ವ್ಯಕ್ತಿಯು ತನ್ನ ಕೆಲಸಕ್ಕೆ ಸಂಬಂಧಿಸಿದಂತೆ ತನ್ನಲ್ಲಿ ಹೆಚ್ಚಳ ಪಡುವಂಥದ್ದನ್ನು ಹೇಗೆ ಹೊಂದಬಹುದು? | ಒಬ್ಬ ವ್ಯಕ್ತಿಯು ತನ್ನನ್ನು ಬೇರೆಯವರೊಂದಿಗೆ ಹೋಲಿಸದೆ ತನ್ನ ಸ್ವಂತ ಕೆಲಸವನ್ನು ಪರಿಸೋದಿಸುವ ಮೂಲಕ ತನ್ನಲ್ಲಿ ಹೆಚ್ಚಳ ಪಡುವಂತಹದ್ದನ್ನು ಹೊಂದುತ್ತಾನೆ. | |||
75 | 6:6 | vqa1 | ದೇವರ ವಾಕ್ಯವನ್ನು ಕಲಿತುಕೊಳ್ಳುವವನು ತನಗೆ ಕಲಿಸುವವನೊಂದಿಗೆ ಏನು ಮಾಡಬೇಕು?\n | ದೇವರ ವಾಕ್ಯವನ್ನು ಕಲಿತುಕೊಳ್ಳುವವನು ತನಗೆ ಕಲಿಸುವವನೊಂದಿಗೆ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಹಂಚಿಕೊಳ್ಳಲಿ. | |||
76 | 6:7 | z414 | ಒಬ್ಬ ವ್ಯಕ್ತಿಯು ಆಧ್ಯಾತ್ಮಿಕವಾಗಿ ಏನನ್ನಾದರೂ ಬಿತ್ತಿದರೆ ಏನು ಆಗುತ್ತದೆ? | ಒಬ್ಬನು ಆಧ್ಯಾತ್ಮಿಕವಾಗಿ ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. | |||
77 | 6:8 | q4vy | ಆತ್ಮದಲ್ಲಿ ಬಿತ್ತುವವನು ಒಬ್ಬ ವ್ಯಕ್ತಿಯು ಏನನ್ನು ಕೊಯ್ಯುವನು?\n | ಆತ್ಮದಲ್ಲಿ ಬಿತ್ತುವವನು ಆತ್ಮದಿಂದ ನಿತ್ಯಜೀವವನ್ನು ಕೊಯ್ಯುವನು. | |||
78 | 6:8 | onr9 | ಒಬ್ಬನು ತನ್ನ ಸ್ವಂತ ಮಾಂಸಕ್ಕೆ ಬಿತ್ತಿದರೆ ಏನನ್ನು ಕೊಯ್ಯುವನು?\n | ಒಬ್ಬನು ತನ್ನ ಸ್ವಂತ ಮಾಂಸಕ್ಕೆ ಬಿತ್ತುವವನು ತನ್ನ ಮಾಂಸದಿಂದ ನಾಶನವನ್ನು ಕೊಯ್ಯುವನು.\n | |||
79 | 6:9 | sx5e | ಒಬ್ಬ ವಿಶ್ವಾಸಿಯು ಬೇಸರಗೊಳ್ಳಬಾರದು ಒಳ್ಳೇದನ್ನು ಮಾಡುವುದನ್ನು ಮುಂದುವರೆಸಿದರೆ ಅವನು ಏನನ್ನು ಸ್ವೀಕರಿಸುವನು?\n | ಒಳ್ಳೇದನ್ನು ಮಾಡುವುದನ್ನು ಮುಂದುವರಿಸುವ ಒಬ್ಬ ವಿಶ್ವಾಸಿಯು ಬಿತ್ತುವುದನ್ನು ಕೊಯ್ಯುತ್ತಾನೆ. | |||
80 | 6:10 | kigw | ವಿಶ್ವಾಸಿಗಳು ವಿಶೇಷವಾಗಿ ಯಾರಿಗೆ ಒಳ್ಳೇದನ್ನು ಮಾಡಬೇಕು?\n\n | ವಿಶ್ವಾಸಿಯು ವಿಶೇಷವಾಗಿ ನಂಬಿಕೆಯ ಮನೆಯವರಿಗೆ ಒಳ್ಳೆಯದನ್ನು ಮಾಡಬೇಕು. | |||
81 | 6:12 | tst8 | ವಿಶ್ವಾಸಿಗಳನ್ನು ಸುನ್ನತಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಲು ಬಯಸುವವರ ಪ್ರೇರಣೆ ಏನು? | ಕ್ರಿಸ್ತನ ಶಿಲುಬೆಯ ನಿಮಿತ್ತವಾಗಿ ಹಿಂಸೆಗೆ ಒಳಗಾಗಬಾರದೆಂಬ ಉದ್ದೇಶದಿಂದಲೇ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳುವಂತೆ ಇತರರನ್ನು ಒತ್ತಾಯಪಡಿಸುವವರು ಇದನ್ನು ಮಾಡುತ್ತಿದ್ದಾರೆ.\n | |||
82 | 6:14 | tx9g | ಪೌಲನು ಯಾವ ವಿಷಯದ ಬಗ್ಗೆ ಹೆಚ್ಚಳ ಪಡುತ್ತಿದ್ದನು? | ಪೌಲನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ಬಗ್ಗೆ ಹೆಚ್ಚಳ ಪಡುತ್ತೇನೆ ಎಂದು ಹೇಳಿದನು.\n | |||
83 | 6:15 | xubf | ಆದರೆ ಸುನ್ನತಿಯಾಗಿರಲಿ ಅಥವಾ ಸುನ್ನತಿಯಾಗದೇ ಇರುವವರಿಗೆ ಮುಖ್ಯವಾದದು ಏನು? | ಮುಖ್ಯವಾದದು ಏನೆಂದರೆ ಒಂದು ಹೊಸ ಸೃಷ್ಟಿ. | |||
84 | 6:16 | d3zg | ಪೌಲನು ಯಾರ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ? | ಪೌಲನು ಸೂತ್ರಕ್ಕೆ ಸರಿಯಾಗಿ ನಡೆಯುವ ಎಲ್ಲರ ಮೇಲೆ ಮತ್ತು ದೇವರ ಇಸ್ರಾಯೇಲಿನ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ. | |||
85 | 6:17 | veyw | ಪೌಲನು ತನ್ನ ದೇಹದ ಮೇಲೆ ಏನನ್ನು ಹೊತ್ತುಕೊಂಡಿದ್ದಾನೆ? | ಪೌಲನು ತನ್ನ ದೇಹದ ಮೇಲೆ ಮುದ್ರೆಗಳನ್ನು ಹೊತ್ತುಕೊಂಡಿದ್ದಾನೆ. |