ಸತ್ಯವೇದದಲ್ಲಿನ ಕೆಲವು ಮೆಟೋನಿಮಿಸ್ ಗಳನ್ನು ಅಕ್ಷರಾನುಕ್ರಮವಾಗಿ ಈ ಕೆಳಕಂಡಂತೆ ಪಟ್ಟಿಮಾಡಲಾಗಿದೆ. ದೊಡ್ಡ ಅಕ್ಷರಗಳಲ್ಲಿರುವುದು ಒಂದು ಉದ್ದೇಶವನ್ನು ಪ್ರತಿನಿಧಿಸುತ್ತದೆ. ಈ ಪದ ಪ್ರತಿವಾಕ್ಯದಲ್ಲೂ ಬರಬೇಕೆಂಬ ಅವಶ್ಯಕತೆ ಇಲ್ಲ, ಈ ಚಿತ್ರಣಗಳ ಉದ್ದೇಶ ಪದಗಳಲ್ಲಿ ಬಂದು ಆ ಅರ್ಥವನ್ನು ಪ್ರತಿಬಿಂಬಿಸುತ್ತದೆ. #### ಒಂದು ಬಟ್ಟಲು ಅಥವಾ ಬೋಗುಣಿ ಅದರಲ್ಲಿ ಇರುವುದನ್ನು ಪ್ರತಿನಿಧಿಸುತ್ತದೆ. >ನನ್ನ ಬಟ್ಟಲುತುಂಬಿಹರಿಯುತ್ತದೆ. (ದಾ.ಕೀ 23:5 ULB) ಈ ಬಟ್ಟಲಿನಲ್ಲಿರುವುದು ಹೊರಗೆ ಹರಿದು ಚೆಲ್ಲುವಷ್ಟು ತುಂಬಿದೆ. >ಪ್ರತಿಸಲ ನೀವು ಈ ರೊಟ್ಟಿಯನ್ನು ತಿಂದು, ಈ ಪಾತ್ರೆಯಲ್ಲಿ ದ್ರಾಕ್ಷಾರಸ ಪಾನಮಾಡುವಾಗೆಲ್ಲಾ ,ಕರ್ತನ ಮರಣವನ್ನು, ಆತನು ಬರುವ ತನಕ ಪ್ರಸಿದ್ಧಿ ಪಡಿಸುತ್ತೀರಿ. (1 ನೇ ಕೊರಿಂಥ 11:26 ULB) ದಯವಿಟ್ಟು ಈ ಬಟ್ಟಲಿನಲ್ಲಿ ಪಾನಮಾಡಬೇಡಿ. ಅವರು ಆ ಬಟ್ಟಲಿನಲ್ಲಿ ಇರುವುದನ್ನು ಪಾನಮಾಡುತ್ತಾರೆ. #### ಬಾಯಿಮಾತು ಅಥವಾ ಪದಗಳನ್ನು ಪ್ರತಿನಿಧಿಸುತ್ತದೆ. >ಜ್ಞಾನಹೀನನಿಗೆ ಅವನ ಬಾಯಿಂದ ಬರುವ ಮಾತೆ ಅವನನ್ನು ನಾಶಕ್ಕೆ ಗುರಿಮಾಡುತ್ತದೆ. (ಜ್ಞಾನೋಕ್ತಿ 18:7 ULB)
ನಾನು ಬಾಯಮಾತುಗಳಿಂದ ನಿಮ್ಮನ್ನು ಧೈರ್ಯಗೊಳಿಸಿ !ನಿಮ್ಮ ದುಃಖವನ್ನು ಶಮನಗೊಳಿಸುತ್ತೇನೆ. (ಯೋಬಾ 16:5 ULB)
>ನೀನು ನನ್ನನ್ನು ದೂಷಿಸಿ ನಿನ್ನ ಬಾಯಿಂದ ಮಾತನಾಡಿದ ಮಾತುಗಳನ್ನು ;ಕೇಳಿದ್ದೇನೆ, ನೀನು ನನ್ನ ವಿರುದ್ಧವಾಗಿ ಆಡಿದ ಮಾತುಗಳನ್ನು ಕೇಳಿದ್ದೇನೆ. ನಾನು ಅವುಗಳನ್ನು ಕೇಳಿದ್ದೇನೆ. (ಯೆಹೆಜ್ಕೇಲ 35:13 ULB) ಇಲ್ಲಿ ಬರುವ ಉದಾಹರಣೆ ವಾಕ್ಯಗಳಲ್ಲಿ ಬಾಯಿ ಎಂಬ ಪದ ಒಬ್ಬ ಮನುಷ್ಯನ ಮಾತನ್ನು ಪ್ರತಿನಿಧಿಸುತ್ತದೆ. #### ಒಬ್ಬ ಮನುಷ್ಯನ ನೆನಪು ಎಂಬುದು ಅವನ ಸಂತತಿಯನ್ನು ಪ್ರತಿನಿಧಿಸುತ್ತದೆ. ಒಬ್ಬ ವ್ಯಕ್ತಿಯ ನೆನಪು ಆತನ ಸಂತತಿಯನ್ನು ನೆನಪಿಸಿಕೊಳ್ಳುತ್ತದೆ, ಏಕೆಂದರೆ ಆ ಸಂತತಿಯವರೇ ಆತನನ್ನು ಸ್ಮರಿಸಿ ಗೌರವಿಸಬೇಕಿದೆ. ಸತ್ಯವೇದದಲ್ಲಿ ವ್ಯಕ್ತಿಯೋರ್ವನ ನೆನಪಿನ ಶಕ್ತಿ ಸತ್ತು ಹೋದರೆ (ಇಲ್ಲವಾದರೆ) ಆ ವ್ಯಕ್ತಿಗೆ ಯಾವ ಸಂತತಿಯೂ ಇಲ್ಲ.ಅಥವಾ ಆತನ ಸಂತತಿ ಇಲ್ಲವಾಗಿದೆ ಎಂದು ಅರ್ಥ. >ನೀನು ಜನಾಂಗಗಳನ್ನು ಎದುರಿಸಿ, ಯುದ್ಧದ ಮೂಲಕ ನಾಶಮಾಡಿರುವೆ. >ದುಷ್ಟರನ್ನು ನಾಶಮಾಡಿದ್ದೀ. >ಅವರ ಹೆಸರಿನ ನೆನಪನ್ನು ಯುಗಯುಗಾಂತರಕ್ಕೂ ಅಳಿಸಿಬಿಟ್ಟಿದ್ದೀ. >ಶತೃಗಳು ನಿಶ್ಶೇಷವಾದರೂ. >ನೀನು ಅವರ ಊರು, ಕೋಟೆಗಳನ್ನು ಕೆಡವಿ ನಾಶಮಾಡಿದಿ. >ಅವರ ಸ್ಮರಣೆಯೇ ಇಲ್ಲದಂತೆ ನಾಶಮಾಡಿರುವೆ. (ದಾ.ಕೀ. 9:5-6 ULB)
ಆತನ ಸ್ಮರಣೆಯು ಭೂಮಿಯ ಮೇಲಿನಿಂದ ಅಳಿದು ಹೋಗುವುದು (ಯೋಬ 18:17 ULB)
>ದುಷ್ಟಕಾರ್ಯಮಾಡುವ ಕೆಡುಕರಿಗೆ ಕೋಪದಿಂದ ಶಿಕ್ಷಿಸುವನು. >ಲೋಕದಲ್ಲಿ ಅವರ ನೆನಪೇ ಉಳಿಯದಂತೆ ನಿರ್ಮೂಲ ಮಾಡುವನು (ದಾ.ಕೀ 4:16 ULB) #### ಒಬ್ಬ ವ್ಯಕ್ತಿ ಒಂದು ಗುಂಪನ್ನು ಪ್ರತಿನಿಧಿಸುತ್ತಾನೆ. >ದುಷ್ಟನು ತನ್ನ ಮನೋರಥವು ನೆರವೇರಿತೆಂದು ಕೊಚ್ಚಿಕೊಳ್ಳುತ್ತಾನೆ. >ಅವನು ಯೆಹೋವನನ್ನು ಅಲ್ಲಗೆಳೆದು ದುಷ್ಟನನ್ನೂ ಅತಿಯಾಸೆ ಉಳ್ಳವರನ್ನು ಮೆಚ್ಚುತ್ತಾನೆ, ಆಶೀರ್ವದಿಸುತ್ತಾನೆ. (ದಾ.ಕೀ. 10:3 ULB) ಈ ವಾಕ್ಯಗಳು ನಿರ್ದಿಷ್ಟವಾಗಿ ಒಬ್ಬ ದುಷ್ಟವ್ಯಕ್ತಿಯನ್ನು ಕುರಿತು ಹೇಳಿರುವುದಲ್ಲ ಆದರೆ ಅವನಂತಹ ದುಷ್ಟಜನರನ್ನು ಕುರಿತು ಹೇಳಿರುವಂತದ್ದು. #### ಒಬ್ಬ ವ್ಯಕ್ತಿಯ ಹೆಸರು ಆತನ ಸಂತತಿಯವರಿಗೂ ಬರುತ್ತದೆ. >ಗಾದನು – ಸುಲಿಗೆ ಮಾಡುವವರು ದಂಡೆತ್ತಿ ಅವನ ಮೇಲೆ ಬೀಳಲು ಇವನು ಅವರನ್ನು ಹಿಮ್ಮೆಟ್ಟಿಕೊಂಡು ಹೋದನು. >ಅಶೇರನಿಗೆ ಧಾನ್ಯ ಸಮೃದ್ಧಿಯಾಗುವುದು, ಅವನಲ್ಲಿ ರಾಜಭೋಗ್ಯವಾದ ಪದಾರ್ಥಗಳು ದೊರಕುವವು. >ನಫ್ತಾಲಿ ಬಿಡುಗಡೆಯಾದ ಜಿಂಕೆಯಂತಿದ್ದಾನೆ ಅವನಿಂದ ಇಂಪಾದ ಮಾತುಗಳು ಬರುತ್ತವೆ. (ಆದಿಕಾಂಡ 49:19-21 ULB) ಗಾದ, ಅಶೇರ, ನಫ್ತಾಲಿಯವರ ಹೆಸರುಗಳು ಅವರಿಗೆ ಮಾತ್ರ ಸೀಮಿತವಾಗಿರದೆ ಅವರ ಸಂತತಿಯವರು ಅದರ ಪ್ರಯೋಜನಗಳನ್ನು ಪಡೆದರು. #### ಒಬ್ಬ ವ್ಯಕ್ತಿಯ ಹೆಸರು ಆತನನ್ನು ಆತನಿಗೆ ಸೇರಿದ ಜನರನ್ನು ಪ್ರತಿನಿಧಿಸುತ್ತಾನೆ. >ಅಬ್ರಹಾಮನು ಐಗುಪ್ತದೇಶವನ್ನು ಪ್ರವೇಶಿಸಿದಾಗ ಅಬ್ರಹಾಮನನ್ನು ಅವನ ಸಂಗಡ ಇದ್ದ ಸಾರೆಯಳನ್ನು ನೋಡಿ ಬಹು ಸುಂದರವಾಗಿದ್ದಾಳೆ ಎಂದರು. (ಆದಿಕಾಂಡ 12:14 ULB) ಅಲ್ಲಿ ಅಬ್ರಹಾಮ ಎಂದರೆ ಅವನೊಂದಿಗೆ ಪ್ರಯಾಣಿಸುತ್ತಿದ್ದ ಎಲ್ಲರೂ ಸಂಬಂಧಪಟ್ಟವರಾದರು. ಇಲ್ಲಿ ಅಬ್ರಹಾಮನ ಮೇಲೆ ಎಲ್ಲವೂ ಕೇಂದ್ರೀಕೃತವಾಗಿದೆ. #### ಇರಿಯುವುದು ಎಂದರೆ ಕೊಲ್ಲುವುದು ಎಂದು ಅರ್ಥ. >ಆತನ ಹಸ್ತವು ವೇಗವಾಗಿ ಓಡುವ ಇಗೋ ಆತನು ಮೇಘಗಳೊಂದಿಗೆ ಬರುತ್ತಾನೆ. ಎಲ್ಲರ ಕಣ್ಣುಗಳು ಆತನನ್ನು ಕಾಣುವವು ಆತನನ್ನು ಇರಿದವರು ಸಹ ಕಾಣುವರು. (ಪ್ರಕಟಣೆ 1:7 ULB) "ಆತನನ್ನು ಇರಿದವರು ಯಾರು ? ಎಂಬುದು ಯೇಸುವನ್ನು ಕೊಂದವರನ್ನು ಕುರಿತು ಹೇಳಿರುವುದು" #### ಪಾಪಗಳು (ಅಧರ್ಮ) ಪಾಪಕ್ಕೆ ತಕ್ಕ ಶಿಕ್ಷೆಯನ್ನು ಪ್ರತಿನಿಧಿಸುತ್ತದೆ. >ಯೆಹೋವನು ನಮ್ಮೆಲ್ಲರ ದೋಷವನ್ನು ಪಾಪವನ್ನು ತನ್ನ ಮೇಲೆ ಹಾಕಿಕೊಂಡನು (ಯೆಶಾಯ 53:6 ULB) ಇದರ ಅರ್ಥ ಯಹೋವನು ನಮ್ಮ ಪಾಪಗಳಿಂದ ಉಂಟಾದ ಶಿಕ್ಷೆಯನ್ನು ತಾನು ಅನುಭವಿಸಿದನು.