Reference ID Tags Quote Occurrence Question Response 1:1 bh82 ಪೌಲನು ಹೇಗೆ ಅಪೊಸ್ತಲನಾದನು? ಯೇಸು ಕ್ರಿಸ್ತನು ಮತ್ತು ತಂದೆಯಾದ ದೇವರಿಂದ ಪೌಲನು ಅಪೊಸ್ತಲನಾದನು. 1:4 q9lg ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಯಾವುದರಿಂದ ಬಿಡುಗಡೆ ಹೊಂದಿದ್ದಾರೆ? ಈ ಈಗಿನ ದುಷ್ಟ ಯುಗದಿಂದ ಯೇಸು ಕ್ರಿಸ್ತನಲ್ಲಿ ಇರುವ ವಿಶ್ವಾಸಿಗಳು ಬಿಡುಗಡೆ ಹೊಂದಿದ್ದಾರೆ. 1:6 et4q ಯಾವುದರಿಂದ ಪೌಲನು ಗಲಾತ್ಯದ ಸಭೆಯ ಬಗ್ಗೆ ಆಶ್ಚರ್ಯಪಟ್ಟನು? ಅವರು ಬೇರೆ ಸುವಾರ್ತೆಗೆ ಇಷ್ಟು ಬೇಗನೆ ತಿರುಗಿಕೊಳ್ಳುತ್ತಿರುವುದನ್ನು ಕಂಡು ಪೌಲನು ಆಶ್ಚರ್ಯಪಟ್ಟನು. 1:7 nnd7 ಸತ್ಯವಾದ ಸುವಾರ್ತೆಗಳು ಎಷ್ಟಿವೆ? ಒಂದೇ ಒಂದು ಸತ್ಯವಾದ ಸುವಾರ್ತೆ ಇದೆ, ಅದು ಕ್ರಿಸ್ತನ ಸುವಾರ್ತೆ. 1:8-9 duup ಕ್ರಿಸ್ತನ ಸುವಾರ್ತೆಗಿಂತ ಬೇರೆ ಸುವಾರ್ತೆಯನ್ನು ಸಾರುವ ಯಾರಿಗಾದರೂ ಏನು ಆಗಬೇಕು ಎಂದು ಪೌಲನು ಹೇಳುತ್ತಾನೆ? ಯಾರಾದರೂ ಬೇರೆ ಸುವಾರ್ತೆಯನ್ನು ಸಾರುತ್ತಿದ್ದರೆ ಅವರು ಶಾಪಗ್ರಸ್ತನಾಗಲಿ ಎಂದು ಪೌಲನು ಹೇಳುತ್ತಾನೆ. 1:10 hguy ಕ್ರಿಸ್ತನ ದಾಸರು ಮೊದಲು ಯಾರ ಮೆಚ್ಚುಗೆಯನ್ನು ಹುಡುಕಬೇಕು? ಕ್ರಿಸ್ತನ ದಾಸರು ಮೊದಲು ದೇವರ ಮೆಚ್ಚುಗೆಯನ್ನಯ ಹುಡುಕಬೇಕು. 1:12 etbx ಕ್ರಿಸ್ತನ ಸುವಾರ್ತೆಯ ಜ್ಞಾನವನ್ನು ಪೌಲನು ಹೇಗೆ ಹೊಂದಿದನು? ಕ್ರಿಸ್ತನ ಸುವಾರ್ತೆಯನ್ನು ಪ್ರಕಟಣೆಯ ಮೂಲಕ ಯೇಸು ಕ್ರಿಸ್ತನಿಂದ ನೇರವಾಗಿ ಪೌಲನು ಸ್ವೀಕರಿಸಿದನು. \n 1:13-14 fmu8 ಪೌಲನು ಕ್ರಿಸ್ತನ ಸುವಾರ್ತೆಯ ಪ್ರಕಟಣೆಯನ್ನು ಸ್ವೀಕರಿಸುವ ಮೊದಲು ತನ್ನ ಜೀವನದಲ್ಲಿ ಏನು ಮಾಡುತ್ತಿದ್ದನು? ಪೌಲನು ಯೆಹೂದ್ಯ ಧರ್ಮದ ಬಗ್ಗೆ ಬಹಳ ಆಸಕ್ತನಾಗಿದ್ದನು. ಅವನು ದೇವರ ಸಭೆಯನ್ನು ಹಿಂಸೆಪಡಿಸುತ್ತಾ ಅದನ್ನು ಹಾಳುಮಾಡುತ್ತಿದ್ದನು. 1:15 ws4e ದೇವರು ಪೌಲನನ್ನು ಆತನ ಅಪೋಸ್ತಲನನ್ನಾಗಿ ಯಾವಾಗ ಆರಿಸಿಕೊಂಡನು? ಪೌಲನು ಅವನ ತಾಯಿಯ ಗರ್ಭದಲ್ಲಿ ಇದ್ದಾಗಲೇ ದೇವರು ಅವನನ್ನು ಅಪೊಸ್ತಲನನ್ನಾಗಿ ಆರಿಸಿಕೊಂಡನು.\r\n\n 1:16 gv0o ಯಾವ ಉದ್ದೇಶಕ್ಕಾಗಿ ದೇವರು ಪೌಲನನ್ನು ತನ್ನ ಅಪೊಸ್ತಲನಾಗಿ ಆರಿಸಿಕೊಂಡನು?\r\n\n ಪೌಲನು ಅನ್ಯಜನರ ಮಧ್ಯದಲ್ಲಿ ಕ್ರಿಸ್ತನನ್ನು ಸಾರುವುದಕ್ಕಾಗಿ ದೇವರು ಪೌಲನನ್ನು ತನ್ನ ಅಪೊಸ್ತಲನನ್ನಾಗಿ ಆರಿಸಿಕೊಂಡನು. 1:18-19 n7ls ಅಂತಿಮವಾಗಿ ಪೌಲನು ಇತರ ಅಪೊಸ್ತಲರನ್ನು ಎಲ್ಲಿ ಭೇಟಿಯಾದನು?\r\n\n ಅಂತಿಮವಾಗಿ, ಪೌಲನು ಯೆರೂಸಲೇಮಿಗೆ ಹೋದನು ಮತ್ತು ಅಪೊಸ್ತಲರಾದ ಕೇಫ ಮತ್ತು ಯಾಕೋಬರನ್ನು ಭೇಟಿಯಾದನು.\r\n\n 1:22-23 fxfg ಯೂದಾಯಲ್ಲಿ ಇದ್ದ ಸಭೆಗಳು ಪೌಲನ ಬಗ್ಗೆ ಏನನ್ನು ಕೇಳಿಸಿಕೊಂಡಿದ್ದವು? ಪೌಲನು ಮೊದಲು ಯೆಹೂದ್ಯರನ್ನು ಹಿಂಸೆಪಡಿಸುತ್ತಿದ್ದನು. ಆದರೆ ಈಗ ಅವನು ಯೆಹೂದ್ಯರ ನಂಬಿಕೆಯನ್ನು ಸಾರುತ್ತಿದ್ದಾನೆ ಎಂದು ಯೆಹೂದ್ಯದಲ್ಲಿನ ಸಭೆಗಳು ಕೇಳಿಸಿಕೊಂಡಿದ್ದವು. 2:1-2 sg6l ಪೌಲನು 14 ವರ್ಷಗಳ ನಂತರ ಯೆರೂಸಲೇಮಿಗೆ ಹೋದಾಗ ಏನು ಮಾಡಿದನು? ಪೌಲನು ಪ್ರತ್ಯೇಕವಾಗಿ ಸಭೆಯ ನಾಯಕರೊಂದಿಗೆ ಮಾತಾಡಿ, ತಾನು ಸಾರುತ್ತಿದ್ದ ಸುವಾರ್ತೆಯನ್ನು ಅವರಿಗೆ ವಿವರಿಸಿದನು. 2:3 ryvx ಯೆಹೂದ್ಯನಲ್ಲದ ತೀತನು ಏನು ಮಾಡಿಸಿಕೊಳ್ಳುವುದು ಅಗತ್ಯವಿರಲಿಲ್ಲ? ತೀತನು ಸುನ್ನತಿ ಮಾಡಿಸಿಕೊಳ್ಳುವ ಅಗತ್ಯವಿರಲಿಲ್ಲ. 2:4 n7kn ಸುಳ್ಳು ಸಹೋದರರು ಏನು ಮಾಡಲು ಅಪೇಕ್ಷಿಸಿದರು? ಸುಳ್ಳು ಸಹೋದರರು ಪೌಲನನ್ನೂ ಅವನ ಸಂಗಡಿರನ್ನೂ ಧರ್ಮಶಾಸ್ತ್ರದ ಗುಲಾಮರನ್ನಾಗಿ ಮಾಡಲು ಅಪೇಕ್ಷಿಸಿದ್ದರು.\n\n 2:6 l735 ಯೆರೂಸಲೇಮಿನ ಸಭೆಯ ನಾಯಕರು ಪೌಲನ ಸಂದೇಶವನ್ನು ಬದಲಾಯಿಸಿದರಾ? ಇಲ್ಲ, ಪೌಲನ ಸಂದೇಶಕ್ಕೆ ಅವರು ಏನನ್ನೂ ಸೇರಿಸಲಿಲ್ಲ. 2:7-8 gi1g ಮುಖ್ಯವಾಗಿ ಸುವಾರ್ತೆಯನ್ನು ಯಾರಿಗೆ ಸಾರುವದಕ್ಕೆ ಪೌಲನನ್ನು ಕಳುಹಿಸಲಾಯಿತು? ಮುಖ್ಯವಾಗಿ ಸುನ್ನತಿಯಿಲ್ಲದವರಿಗೆ, ಅನ್ಯಜನರಿಗೆ ಸುವಾರ್ತೆಯನ್ನು ಸಾರುವಂತೆ ಪೌಲನನ್ನು ಕಳುಹಿಸಲಾಯಿತು. 2:7-8 u2cc ಮುಖ್ಯವಾಗಿ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಯಾರಲ್ಲಿಗೆ ಕಳುಹಿಸಲಾಯಿತು? ಮುಖ್ಯವಾಗಿ ಸುನ್ನತಿ ಆಗಿರುವ ಯೆಹೂದ್ಯರಿಗೆ ಸುವಾರ್ತೆಯನ್ನು ಸಾರುವಂತೆ ಪೇತ್ರನನ್ನು ಕಳುಹಿಸಲಾಗಿತ್ತು. 2:9 bx0g ಯೆರೂಸಲೇಮಿನ ನಾಯಕರು ಪೌಲನ ಸೇವೆಯನ್ನು ಒಪ್ಪಿಕೊಂಡಿರುವುದನ್ನು ಹೇಗೆ ತೋರಿಸಿದರು? ಯೆರೂಸಲೇಮಿನ ನಾಯಕರು ಪೌಲ ಮತ್ತು ಬಾರ್ನಬರಿಗೆ ತಮ್ಮ ಒಪ್ಪಿಗೆಯನ್ನು ತೋರಿಸಲು ಅನ್ಯೋನತೆಯ ಬಲಗೈಯನ್ನು ಕೊಟ್ಟರು. 2:11-12 gfg5 ಪೇತ್ರನು ಅಂತಿಯೋಕ್ಯಕ್ಕೆ ಬಂದಾಗ ಯಾವ ತಪ್ಪು ಮಾಡಿದನು? ಯೆಹೂದ್ಯರಲ್ಲದವರೊಂದಿಗೆ ಊಟಮಾಡುವುದನ್ನು ಪೇತ್ರನು ನಿಲ್ಲಿಸಿದನು. ಯಾಕೆಂದರೆ ಅವನು ಸುನ್ನತಿ ಮಾಡಿಸಿಕೊಂಡಿದ್ದ ಯೆಹೂದ್ಯರಿಗೆ ಭಯಪಡುತ್ತಿದ್ದನು. 2:14 q11q ಎಲ್ಲರ ಮುಂದೆ ಕೇಫನನ್ನು ಪೌಲನು ಏನು ಕೇಳಿದನು? ಕೇಫನು ಯೆಹೂದ್ಯನಲ್ಲದವನಾಗಿ ಜೀವಿಸುತ್ತಿರುವಾಗ ಯೆಹೂದ್ಯರಲ್ಲದವರು ಯೆಹೂದ್ಯರಂತೆ ಜೀವಿಸುವಂತೆ ಅವನು ಹೇಗೆ ಒತ್ತಾಯಿಸಬಹುದೆಂದು ಪೌಲನು ಕೇಫನನ್ನು ಕೇಳಿದನು. 2:16 zqqn ಯಾವುದರಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು? ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೂ ನೀತಿವಂತರಾಗುವುದಿಲ್ಲ ಎಂದು ಪೌಲನು ಹೇಳಿದನು. 2:16 h9tg ಒಬ್ಬನು ದೇವರ ಮುಂದೆ ಹೇಗೆ ನೀತಿವಂತನಾಗುತ್ತಾನೆ? ಒಬ್ಬ ವ್ಯಕ್ತಿಯು ಯೇಸು ಕ್ರಿಸ್ತನಲ್ಲಿನ ನಂಬಿಕೆಯಿಂದ ದೇವರ ಮುಂದೆ ನೀತಿವಂತನಾಗುವನು. 2:18 eljf ಕ್ರಿಸ್ತನಲ್ಲಿ ನಂಬಿಕೆಯಿಟ್ಟ ನಂತರ ಒಬ್ಬನು ಮತ್ತೆ ಧರ್ಮಶಾಸ್ತ್ರವನ್ನು ಹಿಂಬಾಲಿಸಲು ಪ್ರಯತ್ನಿಸಿದರೆ, ಅವನು ನಿಜವಾಗಿಯೂ ಏನು ಆಗುತ್ತಾನೆ ಎಂದು ಪೌಲನು ಹೇಳುತ್ತಾನೆ? ಪೌಲನು ಹೇಳುತ್ತಾ ತಾನು ನಿಜವಾಗಿ ಧರ್ಮಶಾಸ್ತ್ರವನ್ನು ಮುರಿದವನು ಎಂದು ತೋರಿಸಿಕೊಳ್ಳುತ್ತಾನೆ. 2:20 c7ji ಈಗ ತನ್ನಲ್ಲಿ ಯಾರು ಜೀವಿಸುತ್ತಾರೆ ಎಂದು ಪೌಲನು ಹೇಳಿದನು? ತನ್ನಲ್ಲಿ ಕ್ರಿಸ್ತನು ಜೀವಿಸುತ್ತಾನೆ ಎಂದು ಪೌಲನು ಹೇಳಿದನು. 2:20 stq0 ದೇವರ ಮಗನು ತನಗಾಗಿ ಏನು ಮಾಡಿದನೆಂದು ಪೌಲನು ಹೇಳುತ್ತಾನೆ? ದೇವರ ಮಗನು ಅವನನ್ನು ಪ್ರೀತಿಸಿದನು ಮತ್ತು ತನ್ನನ್ನು ತಾನು ಪೌಲನಿಗಾಗಿ ಕೊಟ್ಟನು ಎಂದು ಪೌಲನು ಹೇಳುತ್ತಾನೆ. 3:6 n5o2 ದೇವರ ಮುಂದೆ ಅಬ್ರಹಾಮನು ನೀತಿವಂತನೆಂದು ಹೇಗೆ ಪರಿಗಣಿಸಲ್ಪಟ್ಟನು? ಅಬ್ರಹಾಮನು ದೇವರನ್ನು ನಂಬಿದನು, ಮತ್ತು ಅದಕ್ಕಾಗಿಯೇ ದೇವರು ಅಬ್ರಹಾಮನನ್ನು ನೀತಿವಂತನೆಂದು ಪರಿಗಣಿಸಿದನು. 3:7 ihwt ಅಬ್ರಹಾಮನ ಮಕ್ಕಳು ಯಾರು? ಯಾರು ದೇವರನ್ನು ನಂಬಿದರೋ ಅವರು ಅಬ್ರಹಾಮನ ಮಕ್ಕಳು. 3:8 ibj7 ಯೆಹೂದ್ಯರಲ್ಲದವರು ಯಾವ ರೀತಿಯಲ್ಲಿ ನೀತಿವಂತರಾಗುತ್ತಾರೆ ಎಂಬುದನ್ನು ಗ್ರಂಥವು ಯಾವ ರೀತಿಯಲ್ಲಿ ಮೊದಲೇ ತಿಳಿಸಿತ್ತು? ಯೆಹೂದ್ಯರಲ್ಲದವರು ನಂಬಿಕೆಯಿಂದಲೇ ನೀತಿವಂತರಾಗುವರು ಎಂದು ಗ್ರಂಥವು ಮೊದಲೇ ಹೇಳಿತ್ತು. 3:10 t6yk ಧರ್ಮಶಾಸ್ತ್ರದ ಕ್ರಿಯೆಗಳ ಮೇಲೆ ಯಾರು ಅವಲಂಬಿತರಾದವರು ಯಾವುದರ ಕೆಳಗೆ ನೀತಿವಂತರಾಗಬೇಕು? ಆದರೆ ಧರ್ಮಶಾಸ್ತ್ರದ ಕ್ರಿಯೆಗಳಿಂದ ನೀತಿವಂತರೆಂಬ ನಿರ್ಣಯವನ್ನು ಹೊಂದುವವರು ಶಾಪಗ್ರಸ್ತರಾಗಿದ್ದಾರೆ. 3:11 wofi ಎಷ್ಟು ಜನರು ಧರ್ಮಶಾಸ್ತ್ರದ ಕ್ರಿಯೆಗಳಿಂದ ದೇವರ ಮೂಲಕ ನೀತಿವಂತರೆಂದು ನಿರ್ಣಯಿಸಲ್ಲಪಟ್ಟರು? ಧರ್ಮಶಾಸ್ತ್ರದ ಕ್ರಿಯೆಗಳಿಂದ ಯಾರೊಬ್ಬರೂ ನೀತಿವಂತರಾಗುವುದಿಲ್ಲ. 3:14 ks37 ಕ್ರಿಸ್ತನು ನಮಗೋಸ್ಕರ ಶಾಪವಾಗುವುದಕ್ಕೆ ನಮ್ಮನ್ನು ಯಾಕೆ ವಿಮೋಚಿಸಿದನು?\r\n\n ಅಬ್ರಹಾಮನ ಆಶೀರ್ವಾದವು ಅನ್ಯಜನರಿಗೆ ಬರಬಹುದೆಂದು ಕ್ರಿಸ್ತನು ನಮಗೋಸ್ಕರ ಶಾಪವನ್ನು ಹೊತ್ತುಕೊಂಡು ನಮ್ಮನ್ನು ಬಿಡಿಸಿದನು. 3:16 kljb ಅಬ್ರಹಾಮನಿಗೆ ನೀಡಲಾದ ವಾಗ್ದಾನದಲ್ಲಿ ಹೇಳಲಾಗಿರುವ "ಸಂತತಿ" ಯಾರು?\r\n\n ಅಬ್ರಹಾಮನಿಗೆ ನೀಡಲಾದ ವಾಗ್ದಾನದಲ್ಲಿ ಹೇಳಲಾಗಿರುವ "ಸಂತತಿ" ಕ್ರಿಸ್ತನು. 3:17 rkbr ದೇವರು ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ಯೆಹೂದ್ಯರ ಧರ್ಮಶಾಸ್ತ್ರವು ರದ್ದುಗೊಳಿಸಿತೋ?\n ಇಲ್ಲ, ಅಬ್ರಹಾಮನಿಗೆ ಮಾಡಿದಂತ ವಾಗ್ದಾನವನ್ನು ಧರ್ಮಶಾಸ್ತ್ರವು ರದ್ದುಗೊಳಿಸಲಿಲ್ಲ. 3:19 r3x5 ಹಾಗಾದರೆ ಅಲ್ಲಿ ಧರ್ಮಶಾಸ್ತ್ರವು ಯಾಕೆ ಇದ್ದಿತು? ಅಬ್ರಹಾಮನ ಸಂತತಿಯು ಬರುವ ತನಕ ಅಪರಾಧಗಳ ನಿಮಿತ್ತ ಧರ್ಮಶಾಸ್ತ್ರವು ಬಂದಿತು. 3:22 jvvr ಗ್ರಂಥದಲ್ಲಿರುವ ಧರ್ಮಶಾಸ್ತ್ರವು ಎಲ್ಲರನ್ನು ಯಾವುದರ ಅಡಿಯಲ್ಲಿ ಬಂಧಿಸಿದೆ? ಗ್ರಂಥದಲ್ಲಿರುವ ಧರ್ಮಶಾಸ್ತ್ರವು ಎಲ್ಲರನ್ನು ಪಾಪದ ಅಡಿಯಲ್ಲಿ ಬಂಧಿಸಿದೆ. 3:23-26 vaww ಧರ್ಮಶಾಸ್ತ್ರದ ಬಂಧನದಿಂದ ನಾವು ಹೇಗೆ ಬಿಡುಗಡೆಯಾಗುತ್ತೇವೆ? ಕ್ರಿಸ್ತ ಯೇಸುವಿನಲ್ಲಿನ ನಂಬಿಕೆಯ ಮೂಲಕ ನಾವು ಧರ್ಮಶಾಸ್ತ್ರದ ಬಂಧನದಿಂದ ಬಿಡುಗಡೆಯಾಗಿದ್ದೇವೆ.\r\n. 3:27 dti9 ಕ್ರಿಸ್ತನಲ್ಲಿ ಯಾರು ಧರಿಸಿಕೊಂಡಿದ್ದಾರೆ? ಕ್ರಿಸ್ತನಲ್ಲಿ ದೀಕ್ಷಾಸ್ನಾನವನ್ನು ಮಾಡಿಸಿಕೊಂಡಿರುವ ನೀವು ಕ್ರಿಸ್ತನಲ್ಲಿ ಧರಿಸಿಕೊಂಡಿದ್ದೀರಿ.\n 3:28 bp4h ಯಾವ ವಿಭಿನ್ನ ರೀತಿಯ ಜನರು ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ? ಯಹೂದ್ಯರು, ಗ್ರೀಕರು, ದಾಸರು, ಸ್ವತಂತ್ರರು, ಪುರುಷರು ಮತ್ತು ಸ್ತ್ರೀಯರು ಎಲ್ಲರೂ ಕ್ರಿಸ್ತ ಯೇಸುವಿನಲ್ಲಿ ಒಬ್ಬರಾಗಿದ್ದಾರೆ. 4:1-2 kml9 ಆಸ್ತಿಯ ಬಾಧ್ಯಸ್ಥನು ಮಗುವಾಗಿದ್ದಾಗ ಅವನು ಹೇಗೆ ಬದುಕುತ್ತಾನೆ? ಬಾಧ್ಯಸ್ಥನು ಅವನ ತಂದೆಯು ನಿಗದಿಪಡಿಸಿದ ದಿನದವರೆಗೆ ಅವನು ದಾಸನಾಗಿ ಪಾಲಕರ ಮತ್ತು ಮನೆವಾರ್ತೆಯವರ ಅಧೀನದಲ್ಲಿ ಇರುತ್ತಾನೆ. 4:4-5 gsoo ಸರಿಯಾದ ಸಮಯದ ಇತಿಹಾಸದಲ್ಲಿ ದೇವರು ಏನು ಮಾಡಿದನು?\n\n ಸರಿಯಾದ ಸಮಯದಲ್ಲಿ ಧರ್ಮಶಾಸ್ತ್ರದ ಅಡಿಯಲ್ಲಿರುವವರನ್ನು ಬಿಡುಗಡೆ ಮಾಡಲು ದೇವರು ತನ್ನ ಮಗನನ್ನು ಕಳುಹಿಸಿದನು. 4:5 aa5k ಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ದೇವರು ತನ್ನ ಕುಟುಂಬಕ್ಕೆ ಹೇಗೆ ಸೇರಿಸಿಕೊಂಡನು?\n\n ದೇವರು ಧರ್ಮಶಾಸ್ತ್ರದ ಅಡಿಯಲ್ಲಿರುವ ಮಕ್ಕಳನ್ನು ಮಕ್ಕಳನ್ನಾಗಿ ದತ್ತು ಸ್ವೀಕರಿಸಿದನು. 4:6 ge9i ದೇವರು ತನ್ನ ಮಕ್ಕಳ ಹೃದಯಗಳಿಗೆ ಏನನ್ನು ಕಳುಹಿಸಿದನು? ದೇವರು ತನ್ನ ಮಗನ ಆತ್ಮವನ್ನು ತನ್ನ ಮಕ್ಕಳ ಹೃದಯಗಳಿಗೆ ಕಳುಹಿಸುತ್ತಾನೆ.\r\n\n 4:8 lmva ದೇವರ ಬಗ್ಗೆ ನಾವು ತಿಳಿದುಕೊಳ್ಳುವ ಮೊದಲು, ನಾವು ಯಾರಿಗೆ ಗುಲಾಮರಾಗಿದ್ದೆವು? ನಾವು ದೇವರನ್ನು ತಿಳಿಯುವುದಕ್ಕಿಂತ ಮುಂಚೆ, ದೇವರುಗಳೇ ಅಲ್ಲದ, ಈ ಲೋಕವನ್ನು ಆಳುವ ಆತ್ಮಗಳಿಗೆ ನಾವು ಗುಲಾಮರಾಗಿದ್ದೆವು. 4:9 et22 ಗಲಾತ್ಯದವರು ಯಾವುದಕ್ಕೆ ಹಿಂದಿರುಗುತ್ತಿದ್ದಾರೆಂದು ಪೌಲನು ಗೊಂದಲಕ್ಕೆ ಒಳಗಾದನು? ಗಲಾತ್ಯದವರು ಮತ್ತೊಮ್ಮೆ ಲೋಕವನ್ನು ಆಳುತ್ತಿರುವ ಆತ್ಮಗಳಿಗೆ ಹಿಂದಿರುಗುತ್ತಿರುವುದರಿಂದ ಪೌಲನಿಗೆ ಗೊಂದಲವಾಯಿತು. 4:9-11 dcls ಗಲಾತ್ಯದವರು ಹಿಂದಕ್ಕೆ ತಿರುಗುವುದನ್ನು ನೋಡಿದಾಗ ಪೌಲನು ಅವರ ವಿಷಯದಲ್ಲಿ ಏಕೆ ಭಯಪಟ್ಟನು? ಗಲಾತ್ಯದವರು ಮತ್ತೆ ಗುಲಾಮರಾಗುತ್ತಾರೆ, ಮತ್ತು ನಾನು ಅವರ ಮೇಲೆ ಪ್ರಯಾಸಪಟ್ಟಿದ್ದು ವ್ಯರ್ಥವಾಯಿತೋ ಎಂದು ಪೌಲನು ಭಯಪಟ್ಟನು. 4:13 grkg ಪೌಲನು ಮೊದಲು ಗಲಾತ್ಯಕ್ಕೆ ಬಂದಾಗ, ಅವನಿಗೆ ಯಾವ ಸಮಸ್ಯೆ ಇದ್ದಿತು?\r\n\n ಪೌಲನು ಮೊದಲು ಗಲಾತ್ಯಕ್ಕೆ ಬಂದಾಗ, ಅವನು ದೈಹೀಕ ಬಲಹೀನತೆ ಇದ್ದಿತು.\n\n 4:14 v4yn ಪೌಲನಿಗೆ ಸಮಸ್ಯೆ ಇದ್ದರೂ ಗಲಾತ್ಯದವರು ಅವನನ್ನು ಹೇಗೆ ಸ್ವೀಕರಿಸಿದರು? ಪೌಲನಿಗೆ ಸಮಸ್ಯೆಯು ಇದ್ದರೂ, ಗಲಾತ್ಯದವರು ಪೌಲನನ್ನು ದೇವರ ದೂತನಾಗಿ, ಯೇಸು ಕ್ರಿಸ್ತನಾಗಿ ಸ್ವೀಕರಿಸಿದರು. 4:17 d3xb ಬೇರೆಮಾಡಲು ಪ್ರಯತ್ನಿಸಿದ ಗಲಾತ್ಯದ ಸುಳ್ಳು ಬೋಧಕರು ಯಾರು? ಗಲಾತ್ಯದ ಸುಳ್ಳು ಬೋಧಕರು ಪೌಲನಿಂದ ಬೇರೆಮಾಡಲು ಪ್ರಯತ್ನಿಸಿದರು . 4:20-21 s4s2 ಸುಳ್ಳು ಬೋಧಕರು ಗಲಾತ್ಯದವರನ್ನು ಯಾವುದರ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ?\r\n\n ಸುಳ್ಳು ಬೋಧಕರು ಗಲಾತ್ಯದವರನ್ನು ಮತ್ತೆ ಧರ್ಮಶಾಸ್ತ್ರದ ಅಡಿಯಲ್ಲಿ ತರಲು ಪ್ರಯತ್ನಿಸುತ್ತಿದ್ದಾರೆ. 4:22 tswh ಯಾವ ಎರಡು ವಿಧದ ಹೆಂಗಸರಿಂದ ಅಬ್ರಹಾಮನಿಗೆ ಇಬ್ಬರು ಗಂಡುಮಕ್ಕಳಿದ್ದರು?\n ಅಬ್ರಹಾಮನಿಗೆ ಇಬ್ಬರು ಗಂಡು ಮಕ್ಕಳು ಇದ್ದರು. ಒಬ್ಬನು ದಾಸಿಯ ಮಗನು ಮತ್ತು ಇನ್ನೊಬ್ಬನು ಸ್ವತಂತ್ರಳಾದ ಸ್ತ್ರೀಯಿಂದ.\r\n 4:26 wwsm ಪೌಲ ಮತ್ತು ನಂಬುವ ಗಲಾತ್ಯದವರ ಸಾಂಕೇತಿಕ ತಾಯಿ ಯಾರು? ಮೇಲಣ ಯೆರೂಸಲೇಮ್, ಸ್ವತಂತ್ರ ಸ್ತ್ರೀ, ಪೌಲನ ಮತ್ತು ನಂಬುವ ಗಲಾತ್ಯದವರ ಸಾಂಕೇತಿಕ ತಾಯಿಯಾಗಿದ್ದಾಳೆ.\n 4:28 gz32 ಕ್ರಿಸ್ತನಲ್ಲಿನ ವಿಶ್ವಾಸಿಗಳು ಶರೀರಸಂಬಂಧದ ಮಕ್ಕಳೋ ಅಥವಾ ವಾಗ್ದಾನದ ಮಕ್ಕಳೋ? ಕ್ರಿಸ್ತನಲ್ಲಿನ ವಿಶ್ವಾಸಿಗಳು ವಾಗ್ದಾನದ ಮಕ್ಕಳು. 4:29 jmva ವಾಗ್ದಾನದ ಮಕ್ಕಳನ್ನು ಯಾರು ಹಿಂಸಿಸುತ್ತಾರೆ?\n\n ಮಾಂಸದ ಮಕ್ಕಳು ವಾಗ್ದಾನದ ಮಕ್ಕಳನ್ನು ಹಿಂಸೆಪಡಿಸಿದರು.\r\n\n 4:30 sdh3 ದಾಸಿಯಾದ ಸ್ತ್ರೀಯ ಮಕ್ಕಳು ಏನನ್ನು ಬಾದ್ಯಸ್ಥವಾಗಿ ಪಡೆಯುವುದಿಲ್ಲ?\n\n ದಾಸಿಯ ಮಕ್ಕಳು ಸ್ವತಂತ್ರಳಾದ ಸ್ತ್ರೀಯ ಮಕ್ಕಳೊಂದಿಗೆ ಬಾಧ್ಯರಾಗುವದಿಲ್ಲ. 4:31 r7te ಕ್ರಿಸ್ತನಲ್ಲಿನ ವಿಶ್ವಾಸಿಗಳು ದಾಸಿಯ ಮಕ್ಕಳೋ ಅಥವಾ ಸ್ವತಂತ್ರ ಸ್ತ್ರೀಯ ಮಕ್ಕಳೋ?\n\n ಕ್ರಿಸ್ತನಲ್ಲಿನ ವಿಶ್ವಾಸಿಗಳು ಸ್ವತಂತ್ರ ಸ್ತ್ರೀಯ ಮಕ್ಕಳು. 5:1 rtss ಕ್ರಿಸ್ತನು ನಮ್ಮನ್ನು ಯಾವ ಉದ್ದೇಶಕ್ಕಾಗಿ ಬಿಡುಗಡೆ ಮಾಡಿದ್ದಾನೆ? ಸ್ವತಂತ್ರಕ್ಕಾಗಿ ಕ್ರಿಸ್ತನು ನಮ್ಮನ್ನು ಬಿಡುಗಡೆಮಾಡಿದ್ದಾನೆ. 5:2 ow5t ಸುನ್ನತಿ ಮಾಡಿಸಿಕೊಂಡರೆ ಏನಾಗುವುದೆಂದು ಪೌಲನು ಗಲಾತ್ಯದವರಿಗೆ ಎಚ್ಚರಿಕೆ ಕೊಟ್ಟನು?\r\n\n ಸುನ್ನತಿ ಮಾಡಿಸಿಕೊಂಡರೆ ಕ್ರಿಸ್ತನು ಅವರಿಗೆ ಯಾವ ಪ್ರಯೋಜನ ಆಗುವುದಿಲ್ಲ ಎಂದು ಪೌಲನು ಗಲಾತ್ಯದವರಿಗೆ ಹೇಳಿದನು. 5:4 unjp ಧರ್ಮಶಾಸ್ತ್ರವನ್ನು ಅನುಸರಿಸುವ ಮೂಲಕ ನೀತಿವಂತರಾಗಲು ಎಲ್ಲಾ ಗಲಾತ್ಯರಿಗೆ ಏನು ಆಗುತ್ತದೆ ಎಂದು ಪೌಲನು ಎಚ್ಚರಿಸಿದನು? ಪೌಲನು ಗಲಾತ್ಯದವರಿಗೆ, ಧರ್ಮಶಾಸ್ತ್ರವನ್ನು ಅನುಸರಿಸಿ ನೀತಿವಂತರಾಗಲು ಪ್ರಯತ್ನಿಸುವವರೆಲ್ಲರೂ ಕ್ರಿಸ್ತನಿಂದ ಮತ್ತು ಕೃಪೆಯಿಂದ ಬಿದ್ದುಹೋಗುತ್ತಾರೆ ಎಂದು ಎಚ್ಚರಿಸಿದನು. 5:6 izs9 ಯೇಸು ಕ್ರಿಸ್ತನಲ್ಲಿ ಸುನ್ನತಿ ಮತ್ತು ಸುನ್ನತಿಯಿಲ್ಲದಿರುವಿಕೆಗೆ ವಿರುದ್ಧವಾಗಿ ಏನು ಮಾತ್ರ ಅರ್ಥಪೂರ್ಣವಾಗಿದೆ?\n\n ಕ್ರಿಸ್ತ ಯೇಸುವಿನಲ್ಲಿ, ಪ್ರೀತಿಯ ಮೂಲಕ ಕ್ರಿಯೆ ಮಾಡುವ ನಂಬಿಕೆ ಮಾತ್ರವೇ ಏನಾದರೂ ಅರ್ಥವನ್ನು ನೀಡುತ್ತದೆ.\r\n 5:10 z2kn ಗಲಾತ್ಯದವರಿಗೆ ಸುವಾರ್ತೆಯ ವಿಷಯದಲ್ಲಿ ಗೊಂದಲ ಉಂಟುಮಾಡಿದವನ ಬಗ್ಗೆ ಪೌಲನಿಗೆ ಯಾವ ಭರವಸೆ ಇದೆ? ಗಲಾತ್ಯದವರಿಗೆ ಸುವಾರ್ತೆಯ ಬಗ್ಗೆ ಗೊಂದಲವನ್ನುಂಟು ಮಾಡಿದವನು ದೇವರ ತೀರ್ಪನ್ನು ಹೊಂದುವನೆಂದು ಪೌಲನಿಗೆ ಭರವಸೆಯಿದೆ. 5:11 v9ve ಸುನ್ನತಿಯನ್ನು ಪ್ರಕಟಿಸುವುದರಿಂದ ಏನಾಗುತ್ತದೆ ಎಂದು ಪೌಲನು ಹೇಳಿದನು?\r\n\n ಸುನ್ನತಿಯನ್ನು ಪ್ರಕಟಿಸುವಲ್ಲಿ, ಶಿಲುಬೆಯ ಅಡ್ಡಿಯು ನಾಶವಾಗುತ್ತದೆ ಎಂದು ಪೌಲನು ಹೇಳುತ್ತಾನೆ. 5:13 wgj2 ಕ್ರಿಸ್ತನಲ್ಲಿನ ವಿಶ್ವಾಸಿಗಳು ತಮ್ಮ ಸ್ವಾತಂತ್ರವನ್ನು ಹೇಗೆ ಉಪಯೋಗಿಸಬಾರದು? ವಿಶ್ವಾಸಿಗಳು ತಮ್ಮ ಸ್ವಾತಂತ್ರವನ್ನು ಮಾಂಸಕ್ಕಾಗಿ ಒಂದು ಅವಕಾಶವಾಗಿ ಉಪಯೋಗಿಸಬಾರದು.\n 5:13 hglc ವಿಶ್ವಾಸಿಗಳು ಕ್ರಿಸ್ತನಲ್ಲಿ ತಮ್ಮ ಸ್ವಾತಂತ್ರವನ್ನು ಕ್ರಿಸ್ತನಲ್ಲಿ ಹೇಗೆ ಉಪಯೋಗಿಸಬೇಕು? ವಿಶ್ತವಾಸಿಗಳು ತಮ್ಮ ಸ್ವಾತಂತ್ರ್ಯವನ್ನು ಪ್ರೀತಿಯಿಂದ ಒಬ್ಬರಿಗೊಬ್ಬರು ಸೇವೆಮಾಡಲು ಉಪಯೋಗಿಸಿಕೊಳ್ಳಬೇಕು.\n 5:14 dwbj ಇಡೀ ಧರ್ಮಶಾಸ್ತ್ರವು ಯಾವ ಒಂದು ಆಜ್ಞೆಯಲ್ಲಿ ನೆರವೇರುತ್ತದೆ?\n "ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು" ಎಂಬ ಒಂದೇ ಆಜ್ಞೆಯಲ್ಲಿ ಇಡೀ ಧರ್ಮಶಾಸ್ತ್ರವೇ ನೆರವೇರಿದೆ. 5:16 ympc ವಿಶ್ವಾಸಿಗಳು ಹೇಗೆ ಮಾಂಸದ ಅಭಿಲಾಷೆಗಳನ್ನು ನೆರವೇರಿಸಬಾರದು? ವಿಶ್ವಾಸಿಗಳು ಆತ್ಮದಿಂದ ಬದುಕಬಹುದು, ಮತ್ತು ಹೀಗೆ, ಮಾಂಸದ ಅಭಿಲಾಷೆಗಳನ್ನು ನೆರವೇರಿಸುವುದಿಲ್ಲ. 5:17 a5pf ವಿಶ್ವಾಸಿಯಲ್ಲಿ ಯಾವ ಎರಡು ವಿಷಯಗಳು ಒಂದಕ್ಕೊಂದು ವಿರುದ್ಧವಾಗಿವೆ? ವಿಶ್ವಾಸಿಯಲ್ಲಿ ಆತ್ಮ ಮತ್ತು ಮಾಂಸವು ಒಂದಕ್ಕೊಂದು ವಿರುದ್ದವಾಗಿದೆ. 5:20-21 cztb ಮಾಂಸದ ಕಾರ್ಯಗಳ ಮೂರು ಉದಾಹರಣೆಗಳು ಯಾವುವು?\n\n ಮಾಂಸದ ಕಾರ್ಯಗಳ ಮೂರು ಉದಾಹರಣೆಗಳು ಯಾವುವೆಂದರೆ: ಜಾರತ್ವ, ಅಶುದ್ಧತೆ, ದುರಾಶೆ, ವಿಗ್ರಹಾರಾಧನೆ, ಮಾಟಗಾರಿಕೆ, ದ್ವೇಷ, ಕಲಹ, ಅಸೂಯೆ, ಕೋಪ, ಜಗಳ, ಭಿನ್ನಾಭಿಪ್ರಾಯ, ಭಿನ್ನಾಭಿಪ್ರಾಯ, ಅಸೂಯೆ, ಕುಡುಕತನ. 5:21 ubwn ಮಾಂಸದ ಕಾರ್ಯಗಳನ್ನು ಯಾರು ಅಭ್ಯಾಸಿಸುತ್ತಾರೋ ಮಾಡುವವರಿಗೆ ಏನನ್ನು ಹೊಂದುವುದಿಲ್ಲ? ಮಾಂಸದ ಕಾರ್ಯಗಳನ್ನು ಮಾಡುವವರು ದೇವರ ರಾಜ್ಯಕ್ಕೆ ಬಾಧ್ಯರಾಗುವುದಿಲ್ಲ. 5:22-23 k16e ಆತ್ಮದ ಫಲ ಎಂದರೆ ಏನು? ಪವಿತ್ರ ಆತ್ಮನ ಫಲವು ಪ್ರೀತಿಯೂ, ಸಂತೋಷವೂ, ಶಾಂತಿಯೂ, ದೀರ್ಘಶಾಂತಿಯೂ, ದಯೆಯೂ, ಒಳ್ಳೆಯತನವೂ, ನಂಬಿಕೆಯೂ, ಸಾತ್ವಿಕತೆಯೂ, ಸ್ವಯಂ ನಿಯಂತ್ರಣ ಆಗಿದೆ. 5:24 q615 ಯಾರು ಯೇಸು ಕ್ರಿಸ್ತನಿಗೆ ಸೇರಿದ್ದಾರೋ ಮಾಂಸ ಮತ್ತು ಅದರ ವ್ಯಾಮೋಹಗಳಿಂದ ಏನು ಮಾಡಿದರು? ಕ್ರಿಸ್ತ ಯೇಸುವಿಗೆ ಸೇರಿದವರು ತಮ್ಮ ಮಾಂಸದ ವ್ಯಾಮೋಹಗಳ ಮತ್ತು ಅಭಿಲಾಷೆಗಳ ಸಹಿತ ಶಿಲುಬೆಗೆ ಹಾಕಲ್ಪಟ್ಟಿದ್ದಾರೆ.\n 6:1 rthj ಒಬ್ಬನು ಯಾವದೋ ದೋಷದಲ್ಲಿ ಸಿಕ್ಕಿಕೊಂಡರೆ ಆಧ್ಯಾತ್ಮಿಕರಾದ ಅವರು ಏನು ಮಾಡಬೇಕು? ಆಧ್ಯಾತ್ಮಿಕವಾಗಿ ಇರುವವರು ಆ ಮನುಷ್ಯನನ್ನು ಸಾತ್ವಿಕ ಆತ್ಮದಿಂದ ನೀವು ಪುನಃಸ್ಥಾಪಿಸಬೇಕು. 6:1 xaix ಆಧ್ಯಾತ್ಮಿಕವಾಗಿ ಸಿಕ್ಕಿಹಾಕಿಕೊಂಡಿರುವವರು ಯಾವ ಅಪಾಯದಿಂದ ಎಚ್ಚರದಿಂದಿರಬೇಕು? ಆಧ್ಯಾತ್ಮಿಕವಾಗಿ ಸಿಕ್ಕಿಹಾಕಿಕೊಂಡಿರುವವರು ತಾವು ಸಹ ಶೋಧನೆಗೆ ಒಳಗಾಗದಂತೆ ಎಚ್ಚರದಿಂದಿರಬೇಕು. 6:2 c0kl ವಿಶ್ವಾಸಿಗಳು ಕ್ರಿಸ್ತನ ನಿಯಮವನ್ನು ಹೇಗೆ ನೆರವೇರಿಸುತ್ತಾರೆ? ವಿಶ್ವಾಸಿಗಳು ಒಬ್ಬರ ಹೊರೆಗಳನ್ನು ಮತ್ತೊಬ್ಬರು ಹೊತ್ತುಕೊಂಡು ಕ್ರಿಸ್ತನ ನಿಯಮವನ್ನು ನೆರವೇರಿಸುತ್ತಾರೆ.\n 6:4 uy96 ಒಬ್ಬ ವ್ಯಕ್ತಿಯು ತನ್ನ ಕೆಲಸಕ್ಕೆ ಸಂಬಂಧಿಸಿದಂತೆ ತನ್ನಲ್ಲಿ ಹೆಚ್ಚಳ ಪಡುವಂಥದ್ದನ್ನು ಹೇಗೆ ಹೊಂದಬಹುದು? ಒಬ್ಬ ವ್ಯಕ್ತಿಯು ತನ್ನನ್ನು ಬೇರೆಯವರೊಂದಿಗೆ ಹೋಲಿಸದೆ ತನ್ನ ಸ್ವಂತ ಕೆಲಸವನ್ನು ಪರಿಸೋದಿಸುವ ಮೂಲಕ ತನ್ನಲ್ಲಿ ಹೆಚ್ಚಳ ಪಡುವಂತಹದ್ದನ್ನು ಹೊಂದುತ್ತಾನೆ. 6:6 vqa1 ದೇವರ ವಾಕ್ಯವನ್ನು ಕಲಿತುಕೊಳ್ಳುವವನು ತನಗೆ ಕಲಿಸುವವನೊಂದಿಗೆ ಏನು ಮಾಡಬೇಕು?\n ದೇವರ ವಾಕ್ಯವನ್ನು ಕಲಿತುಕೊಳ್ಳುವವನು ತನಗೆ ಕಲಿಸುವವನೊಂದಿಗೆ ಎಲ್ಲಾ ಮೇಲುಗಳಲ್ಲಿಯೂ ಪಾಲನ್ನು ಹಂಚಿಕೊಳ್ಳಲಿ. 6:7 z414 ಒಬ್ಬ ವ್ಯಕ್ತಿಯು ಆಧ್ಯಾತ್ಮಿಕವಾಗಿ ಏನನ್ನಾದರೂ ಬಿತ್ತಿದರೆ ಏನು ಆಗುತ್ತದೆ? ಒಬ್ಬನು ಆಧ್ಯಾತ್ಮಿಕವಾಗಿ ಏನನ್ನು ಬಿತ್ತುತ್ತಾನೋ ಅದನ್ನೇ ಕೊಯ್ಯುತ್ತಾನೆ. 6:8 q4vy ಆತ್ಮದಲ್ಲಿ ಬಿತ್ತುವವನು ಒಬ್ಬ ವ್ಯಕ್ತಿಯು ಏನನ್ನು ಕೊಯ್ಯುವನು?\n ಆತ್ಮದಲ್ಲಿ ಬಿತ್ತುವವನು ಆತ್ಮದಿಂದ ನಿತ್ಯಜೀವವನ್ನು ಕೊಯ್ಯುವನು. 6:8 onr9 ಒಬ್ಬನು ತನ್ನ ಸ್ವಂತ ಮಾಂಸಕ್ಕೆ ಬಿತ್ತಿದರೆ ಏನನ್ನು ಕೊಯ್ಯುವನು?\n ಒಬ್ಬನು ತನ್ನ ಸ್ವಂತ ಮಾಂಸಕ್ಕೆ ಬಿತ್ತುವವನು ತನ್ನ ಮಾಂಸದಿಂದ ನಾಶನವನ್ನು ಕೊಯ್ಯುವನು.\n 6:9 sx5e ಒಬ್ಬ ವಿಶ್ವಾಸಿಯು ಬೇಸರಗೊಳ್ಳಬಾರದು ಒಳ್ಳೇದನ್ನು ಮಾಡುವುದನ್ನು ಮುಂದುವರೆಸಿದರೆ ಅವನು ಏನನ್ನು ಸ್ವೀಕರಿಸುವನು?\n ಒಳ್ಳೇದನ್ನು ಮಾಡುವುದನ್ನು ಮುಂದುವರಿಸುವ ಒಬ್ಬ ವಿಶ್ವಾಸಿಯು ಬಿತ್ತುವುದನ್ನು ಕೊಯ್ಯುತ್ತಾನೆ. 6:10 kigw ವಿಶ್ವಾಸಿಗಳು ವಿಶೇಷವಾಗಿ ಯಾರಿಗೆ ಒಳ್ಳೇದನ್ನು ಮಾಡಬೇಕು?\n\n ವಿಶ್ವಾಸಿಯು ವಿಶೇಷವಾಗಿ ನಂಬಿಕೆಯ ಮನೆಯವರಿಗೆ ಒಳ್ಳೆಯದನ್ನು ಮಾಡಬೇಕು. 6:12 tst8 ವಿಶ್ವಾಸಿಗಳನ್ನು ಸುನ್ನತಿ ಮಾಡಿಸಿಕೊಳ್ಳುವಂತೆ ಒತ್ತಾಯಿಸಲು ಬಯಸುವವರ ಪ್ರೇರಣೆ ಏನು? ಕ್ರಿಸ್ತನ ಶಿಲುಬೆಯ ನಿಮಿತ್ತವಾಗಿ ಹಿಂಸೆಗೆ ಒಳಗಾಗಬಾರದೆಂಬ ಉದ್ದೇಶದಿಂದಲೇ ವಿಶ್ವಾಸಿಗಳು ಸುನ್ನತಿ ಮಾಡಿಸಿಕೊಳ್ಳುವಂತೆ ಇತರರನ್ನು ಒತ್ತಾಯಪಡಿಸುವವರು ಇದನ್ನು ಮಾಡುತ್ತಿದ್ದಾರೆ.\n 6:14 tx9g ಪೌಲನು ಯಾವ ವಿಷಯದ ಬಗ್ಗೆ ಹೆಚ್ಚಳ ಪಡುತ್ತಿದ್ದನು? ಪೌಲನು ನಮ್ಮ ಕರ್ತನಾದ ಯೇಸು ಕ್ರಿಸ್ತನ ಶಿಲುಬೆಯ ಬಗ್ಗೆ ಹೆಚ್ಚಳ ಪಡುತ್ತೇನೆ ಎಂದು ಹೇಳಿದನು.\n 6:15 xubf ಆದರೆ ಸುನ್ನತಿಯಾಗಿರಲಿ ಅಥವಾ ಸುನ್ನತಿಯಾಗದೇ ಇರುವವರಿಗೆ ಮುಖ್ಯವಾದದು ಏನು? ಮುಖ್ಯವಾದದು ಏನೆಂದರೆ ಒಂದು ಹೊಸ ಸೃಷ್ಟಿ. 6:16 d3zg ಪೌಲನು ಯಾರ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ? ಪೌಲನು ಸೂತ್ರಕ್ಕೆ ಸರಿಯಾಗಿ ನಡೆಯುವ ಎಲ್ಲರ ಮೇಲೆ ಮತ್ತು ದೇವರ ಇಸ್ರಾಯೇಲಿನ ಮೇಲೆ ಶಾಂತಿಯನ್ನು ಮತ್ತು ಕರುಣೆಯನ್ನು ಬಯಸುತ್ತಾನೆ. 6:17 veyw ಪೌಲನು ತನ್ನ ದೇಹದ ಮೇಲೆ ಏನನ್ನು ಹೊತ್ತುಕೊಂಡಿದ್ದಾನೆ? ಪೌಲನು ತನ್ನ ದೇಹದ ಮೇಲೆ ಮುದ್ರೆಗಳನ್ನು ಹೊತ್ತುಕೊಂಡಿದ್ದಾನೆ.