Merge pull request 'Merge Vishwanath-tc-create-1 into master by Vishwanath' (#4) from Vishwanath-tc-create-1 into master

Reviewed-on: https://git.door43.org/translationCore-Create-BCS/kn_tQ/pulls/4
This commit is contained in:
Amos Khokhar 2023-09-01 11:54:08 +00:00
commit 7de2ed6449
2 changed files with 459 additions and 0 deletions

144
tq_2CO.tsv Normal file
View File

@ -0,0 +1,144 @@
Reference ID Tags Quote Occurrence Question Response
1:1 krio ಈ ಪತ್ರಿಕೆಯನ್ನು ಬರೆದವರು ಯಾರು? ಪೌಲನು ಮತ್ತು ತಿಮೋಥೆಯನು ಈ ಪತ್ರಿಕೆಯನ್ನು ಬರೆದರು.
1:1 nkj4 ಈ ಪತ್ರಿಕೆಯು ಯಾರಿಗಾಗಿ ಬರೆಯಲ್ಪಟ್ಟಿತು? ಈ ಪತ್ರಿಕೆಯನ್ನು ಕೊರಿಂಥದಲ್ಲಿಂದ್ದಂತ ದೇವರ ಸಭೆಗಾಗಿ ಮತ್ತು ಅಖಾಯ ಸೀಮೆಯಲೆಲ್ಲಾ ಪರಿಶುದ್ಧರಿಗೆ ಬರೆಯಲ್ಪಟ್ಟಿತು.
1:3 zfqy ಪೌಲನು ದೇವರ ಕುರಿತು ಹೇಗೆ ವಿವರಿಸುತ್ತಾನೆ? ಪೌಲನು ದೇವರ ಕುರಿತು ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆ, ಕನಿಕರವುಳ್ಳ ತಂದೆ, ಮತ್ತು ಎಲ್ಲಾ ರೀತಿಯಲ್ಲಿ ಸಂತೈಸುವ ದೇವರಾಗಿದ್ದಾನೆ ಎಂದು ವಿವರಿಸಿದ್ದಾನೆ.
1:4 yoz4 ನಮ್ಮ ಸಂಕಟಗಳಲ್ಲಿ ದೇವರು ಯಾಕೆ ನಮ್ಮನ್ನು ಸಂತೈಸುತ್ತಾನೆ? ದೇವರಿಂದ ನಾವು ಹೇಗೆ ಸಂತೈಸಲ್ಪಟ್ಟೆವೋ ಅದೇ ರೀತಿಯ ಸಂತೈಸುವಿಕೆಯಿಂದ ಸಂಕಟದಲ್ಲಿ ಇರುವವರನ್ನು ನಾವು ಸಂತೈಸಲಾಗುವಂತೆ ಆತನು ನಮ್ಮನ್ನು ಸಂತೈಸುತ್ತಾನೆ.
1:8-9 khhr ಅಸ್ಯ ಸೀಮೆಯಲ್ಲಿ ಪೌಲನು ಮತ್ತು ಅವನ ಸಂಗಡಿಗರು ಯಾವ ತೊಂದರೆಗೆ ಒಳಗಾದರು? ಅವರು ತಾಳಿಕೊಳ್ಳಲಾರದಷ್ಟು ಭಾರವನ್ನು ಹೊತ್ತುಕೊಂಡಿದ್ದರು, ಆದುದರಿಂದ ಅವರು ಸಾಯಲು ನಿರೀಕ್ಷಿಸಿದರು.
1:9 cz6y ಪೌಲನಿಗೂ ಅವನ ಸಂಗಡಿಗರಿಗೂ ಯಾವ ಕಾರಣಕ್ಕಾಗಿ ಮರಣದಂಡನೆಯನ್ನು ವಿಧಿಸಲಾಯಿತು? ತಮ್ಮ ಮೇಲೆಯೇ ಅವರ ಭರವಸೆಯನ್ನು ಇಟ್ಟುಕೊಳ್ಳದೆ, ಆದಕ್ಕೆ ಬದಲಾಗಿ ದೇವರಲ್ಲಿ ಭರವಸೆಯನ್ನು ಇಡುವಂತೆ ಅವರಿಗೆ ಮರಣದಂಡನೆಯನ್ನು ವಿಧಿಸಲಾಯಿತು.
1:11 jd06 ಕೊರಿಂಥ ಸಭೆಯಯು ಅವರಿಗೆ ಹೇಗೆ ಸಹಾಯ ಮಾಡುತ್ತದೆ ಎಂದು ಪೌಲನು ಹೇಳಿದನು? ಕೊರಿಂಥ ಸಭೆಯವರು ಅವರ ಪ್ರಾರ್ಥನೆಯಿಂದ ಅವರಿಗೆ ಸಹಾಯ ಮಾಡಬಹುದೆಂದು ಪೌಲನು ಹೇಳಿದನು.
1:12 yux4 ಯಾವುದರ ಬಗ್ಗೆ ಪೌಲನು ಮತ್ತು ಅವನ ಸಂಗಡಿಗರು ಹೆಮ್ಮೆಯುಳ್ಳವರಾಗಿದ್ದಾರೆಂದು ಹೇಳಿದನು? ಅವರು ಲೋಕದಲ್ಲಿ ಮತ್ತು ವಿಶೇಷವಾಗಿ ಕೊರಿಂಥ ಸಭೆಯವರೊಂದಿಗೆ ನಡೆದುಕೊಂಡ ಬಗ್ಗೆ ಅವರು ತಮ್ಮ ಮನಸಾಕ್ಷಿಯ ಸಾಕ್ಷ್ಯದ ಕುರಿತು ಹೆಮ್ಮೆಪಡುತ್ತಿದ್ದರು, ಅವರು ಲೋಕದ ಜ್ಞಾನದ ಪ್ರಕಾರವಲ್ಲ ಆದರೆ ದೇವರ ಕೃಪೆಯಿಂದ ದೇವರಿಂದ ಬರುವ ಪರಿಶುದ್ದತೆ ಮತ್ತು ಪ್ರಾಮಾಣಿಕತೆಯೊಂದಿಗೆ ನಡೆದುಕೊಂಡರು.
1:14 ikct ನಮ್ಮ ಕರ್ತನಾದ ಯೇಸುವಿನ ದಿನದಲ್ಲಿ ಏನಾಗುತ್ತದೆ ಎಂದು ಪೌಲನಿಗೆ ಭರವಸೆ ಇದ್ದಿತು? ಆ ದಿನದಲ್ಲಿ ಪೌಲನು ಮತ್ತು ಅವನ ಸಂಗಡಿಗರು ಕೊರಿಂಥದ ದೇವಜನರ ಹೆಮ್ಮೆಗೆ ಕಾರಣವಾಗುತ್ತದೆ ಎಂಬುದರ ಬಗ್ಗೆ ಅವನಿಗೆ ಭರವಸೆ ಇತ್ತು.
1:15 hzbm ಕೊರಿಂಥದ ದೇವಜನರನ್ನು ಭೇಟಿಮಾಡಲು ಪೌಲನು ಎಷ್ಟು ಸಾರಿ ಆಲೋಚಿಸಿದ್ದನು? ಅವನು ಎರಡು ಬಾರಿ ಅವರನ್ನು ಭೇಟಿ ಮಾಡಲು ಆಲೋಚಿಸಿದ್ದನು.
1:22 t3mt ಕ್ರಿಸ್ತನು ನಮ್ಮ ಹೃದಯಗಳಿಗೆ ಆತ್ಮವನ್ನು ಕೊಟ್ಟಿದ್ದಕ್ಕೆ ಒಂದು ಕಾರಣ ಯಾವುದು? ಆತನು ಮುಂದೆ ನಮಗೆ ಕೊಡಲಿರುವಂಥದ್ದಕ್ಕೆ ಸಂಚಕಾರವಾಗಿ ಅಥವಾ ಖಾತರಿಯಾಗಿ ಆತ್ಮನನ್ನು ಕೊಟ್ಟನು.
1:23 ycfl ಪೌಲನು ಯಾಕೆ ಕೊರಿಂಥಕ್ಕೆ ಬರಲಿಲ್ಲ? ಅವನು ಅವರನ್ನು ಉಳಿಸುವ ಸಲುವಾಗಿ ಕೊರಿಂಥಕ್ಕೆ ಬರಲಿಲ್ಲ.
1:24 ove4 ಪೌಲನು ಮತ್ತು ತಿಮೋಥೆಯನನ್ನು ಕೊರಿಂಥದ ಸಭೆಯವರೊಂದಿಗೆ ಏನು ಮಾಡುತ್ತಿದ್ದರು ಮತ್ತು ಏನನ್ನು ಮಾಡುತ್ತಿರಲಿಲ್ಲವೆಂಬುದರ ಬಗ್ಗೆ ಪೌಲನು ಏನು ಹೇಳಿದನು? ಅವರು ತಮ್ಮ ನಂಬಿಕೆಯು ಏನು ಆಗಿರಬೇಕೆಂಬುದನ್ನು ನಿಯಂತ್ರಿಸಲು ಪ್ರಯತ್ನಿಸುತ್ತಾ ಇರಲಿಲ್ಲ, ಆದರೆ ಅವರು ಕೊರಿಂಥ ಸಭೆಯೊಂದಿಗೆ ತಮ್ಮ ಸಂತೋಷಕ್ಕಾಗಿ ಕೆಲಸ ಮಾಡುತ್ತಿದ್ದರು ಎಂದು ಪೌಲನು ಹೇಳಿದನು.
2:1 tl9b ಯಾವ ಸಂದರ್ಭಗಳಲ್ಲಿ ಕೊರಿಂಥದ ಸಭೆಗೆ ಬರುವುದನ್ನು ತಳ್ಳಿಹಾಕಲು ಪೌಲನು ಪ್ರಯತ್ನಿಸುತ್ತಿದ್ದನು? ಪೌಲನು ಕನಿಕರದಿಂದ ಕೊರಿಂಥದ ಸಭೆಗೆ ಬರಲು ತಳ್ಳಿಹಾಕುತ್ತಿದ್ದನು.
2:3 k6hk ತನ್ನ ಹಿಂದಿನ ಪತ್ರದಲ್ಲಿ ಬರೆದಂತೆ ಪೌಲನು ಕೊರಿಂಥ ಸಭೆಗೆ ಏಕೆ ಬರೆದನು? ಅವನು ಅವರ ಬಳಿಗೆ ಬಂದಾಗ ಅವನನ್ನು ಸಂತೋಷ ಪಡಿಸಬೇಕಾದವರಿಂದ ದು:ಖಪಡಬಾರದೆಂದು ಹೀಗೆ ಬರೆದನು.
2:4 c81q ಮೊದಲು ಪೌಲನು ಕೊರಿಂಥದವರಿಗೆ ಬರೆದಾಗ, ಅವನ ಮನಸ್ಥಿತಿ ಹೇಗಿತ್ತು? ಅವನು ಹೃದಯದಲ್ಲಿ ಮಹಾ ಸಂಕಟದಲ್ಲಿಯೂ ಮತ್ತು ವೇದನೆಯಲ್ಲಿ ಉಳ್ಳವನಾಗಿದ್ದನು.
2:4 gclm ಪೌಲನು ಕೊರಿಂಥದ ಸಭೆಗೆ ಯಾಕೆ ಈ ಪತ್ರವನ್ನು ಬರೆದನು? ಅವರ ಮೇಲಿರುವ ತನ್ನ ಪ್ರೀತಿಯ ಆಳವನ್ನು ಅವರು ತಿಳಿದುಕೊಳ್ಳವಂತೆ ಅವನು ಅವರಿಗೆ ಈ ಪತ್ರವನ್ನು ಬರೆದನು.
2:6-7 xw3l ಕೊರಿಂಥದ ದೇವಜನರು ಈಗ ತಾವು ಶಿಕ್ಷಿಸಿದವನಿಗೆ ಏನು ಮಾಡಬೇಕೆಂದು ಪೌಲನು ಹೇಳಿದನು? ಅವರು ಆ ವ್ಯಕ್ತಿಯನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕೆಂದು ಪೌಲನು ಹೇಳಿದನು.
2:7 jbk8 ಕೊರಿಂಥದ ದೇವಜನರು ತಾವು ಶಿಕ್ಷಿಸಿದವರನ್ನು ಕ್ಷಮಿಸಬೇಕು ಮತ್ತು ಸಂತೈಸಬೇಕೆಂದು ಪೌಲನು ಯಾಕೆ ಹೇಳಿದನು? ಅವರು ಶಿಕ್ಷಿಸಿದ ವ್ಯಕ್ತಿಯು ಬಹು ದು:ಖದಿಂದ ಬಳಲಬಾರದೆಂಬ ಉದ್ದೇಶದಿಂದ ಹೇಳಿದನು.
2:9 acyb ಪೌಲನು ಕೊರಿಂಥ ಸಭೆಯವರಿಗೆ ಬರೆದದ್ದಕ್ಕೆ ಇನ್ನೊಂದು ಕಾರಣ ಏನು? ಪೌಲನು ಅವರನ್ನು ಪರೀಕ್ಷಿಸಿ ಅವರು ಎಲ್ಲಾ ವಿಷಯಗಳಲ್ಲಿ ವಿಧೇಯರಾಗಿದ್ದಾರೋ ಇಲ್ಲವೋ ಎಂದು ತಿಳಿದುಕೊಳ್ಳಲು ಬರೆದನು.
2:11 rono ತಾವು ಯಾರನ್ನು ಕ್ಷಮಿಸಿದರೋ ಅವರು ಪೌಲನಿಂದಲೂ ಕ್ರಿಸ್ತನ ಪ್ರಸನ್ನತೆಯಲ್ಲಿ ಕ್ಷಮಿಸಲ್ಪಟ್ಟಿದ್ದಾರೆಂದು ತಿಳಿಯುವುದು ಕೊರಿಂಥದ ಸಭೆಗೆ ಯಾಕೆ ಮುಖ್ಯವಾಗಿತ್ತು? ಸೈತಾನನು ಅವರನ್ನು ಮೋಸಗೊಳಿಸಬಾರದೆಂಬ ಕಾರಣ.
2:13 cosq ಪೌಲನು ತ್ರೋವ ಪಟ್ಟಣಕ್ಕೆ ಹೋದಾಗ ಶಾಂತ ಮನಸ್ಸು ಯಾಕೆ ಇರಲಿಲ್ಲ? ತ್ರೋವದಲ್ಲಿ ಅವನ ಸಹೋದರನಾದ ತೀತನನ್ನು ಕಾಣಲಿಲ್ಲವಾದ್ದರಿಂದ ಅವನಿಗೆ ಶಾಂತ ಮನಸ್ಸು ಇರಲಿಲ್ಲ.
2:14-15 h163 ದೇವರು ಪೌಲನ ಮತ್ತು ಅವನ ಸಂಗಡಿಗರ ಮೂಲಕ ಏನು ಮಾಡಿದನು? ಪೌಲನ ಮತ್ತು ಅವನ ಸಂಗಡಿಗರ ಮೂಲಕ ದೇವರು ಕ್ರಿಸ್ತನ ತಿಳಿವಳಿಕೆಯ ಪರಿಮಳವನ್ನು ಎಲ್ಲಾ ಕಡೆಯಲ್ಲಿಯೂ ಹರಡಿದನು.
2:17 x0a7 ಪೌಲನು ಮತ್ತು ಅವನ ಸಂಗಡಿಗರು ದೇವರ ವಾಕ್ಯವನ್ನು ಲಾಭಕ್ಕಾಗಿ ಮಾರಾಟ ಮಾಡಿದ ಅನೇಕ ಜನರಿಂದ ಭಿನ್ನರಾಗಿ ಇದ್ದರು ಎಂದು ಹೇಗೆ ಹೇಳಿದನು? ಪೌಲ ಮತ್ತು ಅವನ ಸಂಗಡಿಗರು ಭಿನ್ನರಾಗಿದ್ದರು, ಹೇಗೆಂದರೆ ಅವರು ದೇವರ ಸನ್ನಿಧಿಯಲ್ಲಿ ಕ್ರಿಸ್ತನ ಹೆಸರಿನಲ್ಲಿ ದೇವರಿಂದ ಕಳುಹಿಸಲ್ಪಟ್ಟವರಾಗಿ ಪ್ರಾಮಾಣಿಕಕತನದಿಂದ ಮಾತನಾಡಿದರು.
3:2 fzs6 ಪೌಲನು ಮತ್ತು ಅವನ ಸಂಗಡಿಗರ ಬಳಿ ಯಾವ ಶಿಫಾರಸ್ಸಿನ ಪತ್ರವಿತ್ತು? ಕೊರಿಂಥದ ದೇವಜನರೇ ಅವರ ಶಿಫಾರಸ್ಸಿನ ಪತ್ರವಾಗಿದ್ದರು, ಅದು ಎಲ್ಲಾ ಜನರಿಗೂ ತಿಳಿದಿತ್ತು ಮತ್ತು ಎಲ್ಲರು ಅದನ್ನು ಓದಿದ್ದರು
3:4-5 fwm9 ಪೌಲನು ಮತ್ತು ಅವನ ಸಂಗಡಿಗರು ಕ್ರಿಸ್ತನ ಮೂಲಕ ದೇವರಲ್ಲಿ ಯಾವ ಭರವಸೆಯನ್ನು ಹೊಂದಿದ್ದರು? ಅವರ ಭರವಸೆಯು ತಮ್ಮ ಸಾಮರ್ಥ್ಯದಲ್ಲಿ ಇರಲಿಲ್ಲ, ಆದರೆ ದೇವರು ಅವರಿಗೆ ಒದಗಿಸಿದ ಸಾಮರ್ಥ್ಯದ ಮೇಲೆ ಇತ್ತು.
3:6 q5yd ದೇವರು ಪೌಲನನ್ನು ಮತ್ತು ಅವನ ಸಂಗಡಿಗರನ್ನು ಸೇವಕರಾಗಿ ಅರ್ಹರನ್ನಾಗಿ ಮಾಡಿದ ಹೊಸ ಒಡಂಬಡಿಕೆಯ ಆಧಾರವೇನು? ಹೊಸ ಒಡಂಬಡಿಕೆಯು ಜೀವವನ್ನು ಕೊಡುವ ಆತ್ಮದ ಮೇಲೆ ಆಧಾರವಾಗಿದೆ. ಅದು ಮರಣಕ್ಕೆ ಕಾರಣವಾಗುವ ಪತ್ರದ ಮೇಲೆ ಆಧಾರವಾಗಿ ಇಲ್ಲ.
3:7 sbaz ಇಸ್ರಾಯೇಲರು ಮೋಶೆಯ ಮುಖವನ್ನು ನೇರವಾಗಿ ಯಾಕೆ ನೋಡಲು ಸಾಧ್ಯವಾಗಲಿಲ್ಲ? ಅವನ ಮುಖದಲ್ಲಿ ಮಹಿಮೆ ಅಂದರೆ ಕುಂದಿಹೋಗುವ ಮಹಿಮೆಯು ನಿಮಿತ್ತವಾಗಿ ಅವರು ನೇರವಾಗಿ ಅವನ ಮುಖವನ್ನು ನೋಡಲು ಸಾಧ್ಯವಾಗಲಿಲ್ಲ.
3:9 ov3q ದಂಡನಾ ತೀರ್ಪಿನ ಸೇವೆಯೋ ಅಥವಾ ನೀತಿಯ ಸೇವೆಯೋ ಇವುಗಳಲ್ಲಿ ಯಾವುದು ಹೆಚ್ಚು ಮಹಿಮೆಯನ್ನು ಹೊಂದಿರುತ್ತದೆ? ನೀತಿಯ ಸುವಾರ್ತಾ ಸೇವೆಯು ಹೆಚ್ಚಿನ ಮಹಿಮೆಯಿಂದ ತುಂಬಿರುತ್ತದೆ.
3:14 t89r ಇಸ್ರಾಯೇಲರ ಮನಸ್ಸನ್ನು ತೆರೆಯುವುದು ಮತ್ತು ಅವರ ಹೃದಯದಿಂದ ಮುಸುಕನ್ನು ತೆಗೆಯುವುದು ಹೇಗೆ? ಇಸ್ರಾಯೇಲರು ಕರ್ತನಾದ ಕ್ರಿಸ್ತನ ಕಡೆಗೆ ತಿರುಗಿಕೊಂಡಾಗ ಮಾತ್ರ ಅವರ ಮನಸ್ಸುಗಳು ತೆರೆಯಲ್ಪಡುತ್ತದೆ ಮತ್ತು ಮುಸುಕು ಎತ್ತಲ್ಪಡುತ್ತದೆ.
3:15 zb0n ಮೋಶೆಯ ಹಳೆಯ ಒಡಂಬಡಿಕೆಯು ಯಾವಾಗೆಲ್ಲಾ ಓದುತ್ತಾರೋ ಅವಾಗೆಲ್ಲಾ ಯಾವ ಸಮಸ್ಯೆಯು ಇಂದಿನವರೆಗೂ ಇಸ್ರಾಯೇಲರ ಜನರಿಗೆ ಹಾಗೆಯೇ ಉಳಿದಿರುತ್ತದೆ? ಅವರ ಸಮಸ್ಯೆ ಏನೆಂದರೆ ಅವರ ಮನಸ್ಸುಗಳು ಮುಚ್ಚಿಹೋಗಿದೆ ಮತ್ತು ಅವರ ಹೃದಯಗಳ ಮೇಲೆ ಮುಸುಕು ಇದೆ.
3:16 h66q ಇಸ್ರಾಯೇಲರ ಮನಸ್ಸನ್ನು ಮತ್ತು ಅವರ ಹೃದಯಗಳಿಂದ ಮುಸುಕನ್ನು ಹೇಗೆ ತೆಗೆಯಬಹುದು? ಇಸ್ರಾಯೇಲರು ಕರ್ತನಾದ ಕ್ರಿಸ್ತನ ಕಡೆಗೆ ತಿರುಗಿಕೊಂಡಾಗ ಮಾತ್ರ ಅವರ ಮನಸ್ಸುಗಳು ತೆರೆಯಲ್ಪಡುತ್ತದೆ ಮತ್ತು ಮುಸುಕು ಎತ್ತಲ್ಪಡುತ್ತದೆ.
3:17 islc ಕರ್ತನ ಆತ್ಮನಲ್ಲಿ ಏನಿದೆ? ಕರ್ತನ ಆತ್ಮನು ಎಲ್ಲಿ ಇರುತ್ತಾನೋ ಅಲ್ಲಿ ಬಿಡುಗಡೆಯಿದೆ.
3:18 el3x ಕರ್ತನ ಮಹಿಮೆಯನ್ನು ನೋಡುತ್ತಿರುವ ಎಲ್ಲರೂ ಯಾವುದರಲ್ಲಿ ರೂಪಾಂತರಗೊಳ್ಳುತ್ತಿದ್ದಾರೆ? ಅವರು ಮಹಿಮೆಯ ಮಟ್ಟದಿಂದ ಮಹಿಮೆಯ ಮತ್ತೊಂದು ಮಟ್ಟಕ್ಕೆ ಸಾಗುತ್ತಾ ಅದೇ ಮಹಿಮೆಯ ಹೋಲಿಕೆಯಲ್ಲಿ ರೂಪಾಂತರಗೊಳ್ಳುತ್ತಾ ಇದ್ದಾರೆ.
4:1 zdyl ಪೌಲನು ಮತ್ತು ಅವನ ಸಂಗಡಿಗರು ಯಾಕೆ ನಿರಾಶೆಗೊಳ್ಳಲಿಲ್ಲ? ಯಾಕೆಂದರೆ ಅವರು ಮಾಡುತ್ತಿದ್ದ ಸುವಾರ್ತಾ ಸೇವೆಯಿಂದಾಗಿ ಮತ್ತು ಅವರು ಕನಿಕರವನ್ನು ಸ್ವೀಕರಿಸಿದ್ದರಿಂದ ಅವರು ನಿರಾಸೆಗೊಳ್ಳಲಿಲ್ಲ.
4:2 agpr ಪೌಲನು ಮತ್ತು ಅವನ ಸಂಗಡಿಗರು ಯಾವ ಮಾರ್ಗಗಳನ್ನು ತ್ಯಜಿಸಿದರು? ನಾಚಿಕೆಯ ಮತ್ತು ಗುಪ್ತವಾದ ಮಾರ್ಗಗಳನ್ನು ಅವರು ತ್ಯಜಿಸಿದರು. ಅವರು ಕಪಟದಿಂದ ಬದುಕಲಿಲ್ಲ ಮತ್ತು ದೇವರ ವಾಕ್ಯವನ್ನು ತಪ್ಪಾಗಿ ನಿರ್ವಹಿಸಲಿಲ್ಲ.
4:2 ksfp ಪೌಲ ಮತ್ತು ಅವನಂತೆ ಇರುವವರು ದೇವರ ದೃಷ್ಟಿಯಲ್ಲಿ ಪ್ರತಿಯೊಬ್ಬರ ಮನಸಾಕ್ಷಿಗೆ ತಮ್ಮನ್ನು ತಾವು ಹೇಗೆ ಶಿಫಾರಸು ಮಾಡಿಕೊಂಡರು? ಸತ್ಯವನ್ನು ತಿಳಿಸುವ ಮೂಲಕ ಅವರು ಇದನ್ನು ಮಾಡಿದರು.
4:3 wn02 ಸುವಾರ್ತೆಯು ಯಾರಿಗೆ ಮರೆಯಾಗಿದೆ? ನಶಿಸಿಹೋಗುತ್ತಿರುವವರಿಗೆ ಮರೆಯಾಗಿದೆ.
4:4 eo9q ನಶಿಸಿಹೋಗುತ್ತಿರುವವರಿಗೆ ಸುವಾರ್ತೆಯು ಯಾಕೆ ಮರೆಯಾಗಿದೆ? ಈ ಲೋಕದ ದೇವರು ನಂಬಿಕೆ ಇಲ್ಲದ ಅವರ ಮನಸ್ಸುಗಳನ್ನು ಕುರುಡಾಗಿ ಮಾಡಿದನು ಹಾಗಾಗಿ ಅವರು ಸುವಾರ್ತೆಯ ಬೆಳಕನ್ನು ನೋಡಲು ಸಾಧ್ಯವಾಗದಿದ್ದರಿಂದ ಅದು ಮರೆಯಾಗಿದೆ.
4:5 up8p ಪೌಲನು ಮತ್ತು ಅವನ ಸಂಗಡಿಗರು ಯೇಸುವಿನ ಬಗ್ಗೆ ಮತ್ತು ಅವರುಗಳ ಬಗ್ಗೆ ಏನನ್ನು ಪ್ರಚುರಪಡಿಸಿದರು? ಅವರು ಕ್ರಿಸ್ತನಾದ ಯೇಸುವನ್ನು ಕರ್ತನೆಂದು ಮತ್ತು ಯೇಸುವಿನ ನಿಮಿತ್ತ ತಮ್ಮನ್ನು ತಾವು ಕೊರಿಂಥ ಸಭೆಯ ಸೇವಕರೆಂದು ಪ್ರಚುರಪಡಿಸಿದರು.
4:7 hiqn ಪೌಲನು ಮತ್ತು ಅವನ ಸಂಗಡಿಗರು ಯಾಕೆ ಈ ನಿಕ್ಷೇಪವನ್ನು ಮಣ್ಣಿನ ಪಾತ್ರೆಗಳಲ್ಲಿ ಹೊಂದಿದ್ದರು? ಮಹಾ ಶಕ್ತಿಯು ದೇವರಿಗೆ ಸೇರಿದ್ದು ಮತ್ತು ಅದು ಅವರಿಗೆ ಸೇರಿದ್ದಾಗಿರಲಿಲ್ಲ ಎಂಬುದು ಸ್ಪಷ್ಟವಾಗಲೆಂದೇ ಅವರು ಈ ನಿಕ್ಷೇಪವನ್ನು ಮಣ್ಣಿನ ಪಾತ್ರೆಗಳಲ್ಲಿ ಹೊಂದಿದ್ದರು.
4:10 x6tq ಪೌಲನು ಮತ್ತು ಅವನ ಸಂಗಡಿಗರು ಯೇಸುವಿನ ಮರಣವನ್ನು ತಮ್ಮ ದೇಹಗಳಲ್ಲಿ ಯಾಕೆ ಹೊರುತ್ತಿದರು? ಯಾಕೆಂದರೆ ಯೇಸುವಿನ ಜೀವವು ಅವರ ದೇಹಗಳಲ್ಲಿಯೂ ಕೂಡ ತೋರ್ಪಡಲಿ ಎಂದು ಅವರು ತಮ್ಮ ದೇಹಗಳಲ್ಲಿ ಯೇಸುವಿನ ಮರಣವನ್ನು ಹೊರುತ್ತಿದರು.
4:14 uaiv ಕರ್ತನಾದ ಯೇಸುವನ್ನು ಎಬ್ಬಿಸಿದಾತನ ಸನ್ನಿಧಿಗೆ ಯಾರನ್ನು ಎಬ್ಬಿಸಿ ಕರೆತರಲಾಗುತ್ತದೆ? ಕರ್ತನಾದ ಯೇಸುವನ್ನು ಎಬ್ಬಿಸಿದಾತನ ಸನ್ನಿಧಿಗೆ ಪೌಲನೂ, ಅವನ ಸಂಗಡಿಗರೂ ಮತ್ತು ಕೊರಿಂಥದ ದೇವಜನರು ಕರೆತರಲ್ಪಡುವರು
4:15 gi5u ಕೃಪೆಯು ಅನೇಕ ಜನರಿಗೆ ಹರಡುವುದರ ಪರಿಣಾಮವಾಗಿ ಏನು ಆಗುತ್ತದೆ? ಕೃಪೆಯು ಅನೇಕ ಜನರಿಗೆ ಹರಡುವುದರಿಂದ ದೇವರ ಮಹಿಮೆಗಾಗಿ ಕೃತಜ್ಞತಾ ಸ್ತುತಿಯು ಹೆಚ್ಚಾಗುತ್ತದೆ.
4:16 nnhv ಪೌಲನು ಮತ್ತು ಅವನ ಸಂಗಡಿಗರು ನಿರಾಶೆಗೊಳ್ಳಲು ಇದ್ದ ಕಾರಣ ಯಾವುದು? ಅವರು ನಿರಾಶೆಗೊಳ್ಳಲು ಕಾರಣವೇನೆಂದರೆ, ಹೊರಗಿನಿಂದ ಅವರು ನಾಶವಾಗುತ್ತಿದ್ದರು.
4:16-18 f2sj ಪೌಲ ಮತ್ತು ಅವನ ಸಂಗಡಿಗರು ಯಾಕೆ ನಿರಾಶೆಗೊಳ್ಳಲಿಲ್ಲ? ಯಾಕೆಂದರೆ ಅವರು ದಿನದಿಂದ ದಿನಕ್ಕೆ ಒಳಗಿನಿಂದ ಹೊಸದಾಗುತ್ತಿದ್ದರು, ಅಲ್ಲದೆ, ಕ್ಷಣಿಕವಾದ, ಹಗುರವಾದ ಸಂಕಟವು ಎಲ್ಲಾ ಅಳತೆಗಳನ್ನು ಮೀರಿದ ಮಹಿಮೆಯ ಶಾಶ್ವತತೆಗಾಗಿ ಅವರನ್ನು ಸಿದ್ದಪಡಿಸುತ್ತಿತ್ತು ಇದ್ದಿದ್ದರಿಂದ ಅವರು ನಿರಾಶೆಗೊಳ್ಳಲಿಲ್ಲ. ಕೊನೆಗೆ, ಅವರು ಕಾಣದೆ ಇದ್ದಂತ ಶಾಶ್ವತವಾದ ವಿಷಯಗಳನ್ನು ನೋಡುತ್ತಾರೆ.
5:1 i3tr ನಮ್ಮ ಭೂಮಿಯ ವಾಸಸ್ಥಳವು ನಾಶವಾದರೂ ನಮ್ಮ ಹತ್ತಿರ ಇನ್ನೂ ಏನು ಇದೆ ಎಂದು ಹೇಳಿದನು? ನಾವು ದೇವರಿಂದ ಕಟ್ಟಡವನ್ನು ಹೊಂದಿದ್ದೇವೆ, ಮನುಷ್ಯನ ಕೈಗಳಿಂದ ಮಾಡದೇ ಇರುವಂತಹ ಮನೆ, ಆದರೆ ಪರಲೋಕದಲ್ಲಿ ಶಾಶ್ವತವಾದ ಮನೆಯಿದೆ ಎಂದು ಪೌಲನು ಹೇಳಿದನು.
5:4 kz4m ನಾವು ಈ ಗುಡಾರದಲ್ಲಿ ಇದ್ದಾಗ ನಾವು ಯಾಕೆ ನರಳುತ್ತೇವೆ ಎಂದು ಪೌಲನು ಹೇಳಿದನು? ಈ ಗುಡಾರದಲ್ಲಿ ನಾವು ವಾಸವಾಗಿರುವಾಗಲೇ ನಾವು ಭಾರವನ್ನು ಹೊತ್ತುಕೊಂಡಿದ್ದೇವೆ ಮತ್ತು ಧರಿಸಿಕೊಳ್ಳಬೇಕೆಂದು ನಾವು ಬಯಸುತ್ತೇವೆ. ಆದ್ದರಿಂದ ಜೀವವು ಮರ್ತ್ಯವಾದುದು ನುಂಗಿಹಾಕುವುದು ಎಂದು ಪೌಲನು ಇದನ್ನು ಹೇಳಿದನು.
5:5 tqpu ಮುಂದೆ ಬರಲಿಕ್ಕಿರುವಂಥದ್ದಕ್ಕೆ ಸಂಚಕಾರವಾಗಿ ದೇವರು ನಮಗೆ ಏನನ್ನು ಕೊಟ್ಟಿದ್ದಾನೆ? ಮುಂದೆ ಏನು ಬರುತ್ತದೆ ಎಂಬುವುದಕ್ಕೆ ದೇವರು ನಮಗೆ ಆತ್ಮವನ್ನು ಸಂಚಕಾರವಾಗಿ ಕೊಟ್ಟಿದ್ದಾನೆ.
5:8 lyor ಪೌಲನು ದೇಹದಲ್ಲಿ ಇರಲು ಬಯಸುತ್ತಾನೋ ಅಥವಾ ಕರ್ತನ ಬಳಿಯಲ್ಲಿ ಇರಲು ಬಯಸುತ್ತಾನೋ? ಪೌಲನು, “ನಾವು ಈ ದೇಹದಿಂದ ದೂರವಿದ್ದು ಮತ್ತು ಕರ್ತನೊಂದಿಗೆ ಮನೆಯಲ್ಲಿ ಇರುವೆನು” ಎಂದು ಹೇಳಿದನು.
5:9 dei6 ಪೌಲನ ಗುರಿ ಏನಾಗಿತ್ತು? ಕರ್ತನನ್ನು ಮೆಚ್ಚಿಸುವುದನ್ನು ಪೌಲನು ತನ್ನ ಗುರಿಯನ್ನಾಗಿ ಮಾಡಿಕೊಂಡಿದ್ದನು.
5:10 jo62 ಕರ್ತನನ್ನು ಮೆಚ್ಚಿಸುವುದನ್ನು ಏಕೆ ಪೌಲನು ತನ್ನ ಗುರಿಯನ್ನಾಗಿ ಮಾಡಿಕೊಂಡಿದ್ದನು? ನಾವೆಲ್ಲರೂ ಕ್ರಿಸ್ತನ ನ್ಯಾಯಾಸನದ ಮುಂದೆ ಕಾಣಿಸಿಕೊಳ್ಳುವೆವು. ನಮ್ಮ ದೇಹದಲ್ಲಿ ನಾವು ಮಾಡಿದ ಒಳ್ಳೆಯ ಅಥವಾ ಕೆಟ್ಟದ್ದಕ್ಕಾಗಿ ತಕ್ಕ ಪ್ರತಿಫಲವನ್ನು ಹೊಂದುವೆವು ಎಂದು ಪೌಲನು ಈ ಗುರಿಯನ್ನು ಮಾಡಿದನು.
5:11 xb3x ಪೌಲನು ಮತ್ತು ಅವನ ಸಂಗಡಿಗರು ಯಾಕೆ ಜನರ ಮನವೊಲಿಸಿದರು? ಅವರು ಕರ್ತನ ಭಯವನ್ನು ತಿಳಿದಿದ್ದರಿಂದ ಜನರ ಮನವೊಲಿಸಿದರು.
5:12 tyx7 ಕೊರಿಂಥದ ದೇವಜನರ ಮುಂದೆ ತಮ್ಮನ್ನು ತಾವು ಮತ್ತೊಮ್ಮೆ ಶಿಫಾರಸ್ಸು ಮಾಡಿಕೊಳ್ಳುತ್ತಿಲ್ಲವೆಂದು ಪೌಲನು ಹೇಳಿದನು. ಹಾಗಾದರೆ ಅವರು ಏನು ಮಾಡುತ್ತಿದ್ದರು? ಅವು ಕೊರಿಂಥದ ದೇವಜನರಿಗೆ ತಮ್ಮ ಬಗ್ಗೆ ಹೆಮ್ಮೆಪಡುವ ಕಾರಣವನ್ನು ನೀಡುತ್ತಿದ್ದರು. ಇದರಿಂದಾಗಿ ಕೊರಿಂಥದ ದೇವಜನರು ಹೃದಯದಲ್ಲಿ ಇಲ್ಲದ ಹೊರ ನೋಟದ ಬಗ್ಗೆ ಹೆಮ್ಮೆ ಪಡುವವರಿಗೆ ಉತ್ತರವನ್ನು ಕೊಡಬಹುದಾಗಿತ್ತು.
5:15 tm1r ಕ್ರಿಸ್ತನು ಎಲ್ಲರಿಗೋಸ್ಕರ ಮರಣವನ್ನು ಹೊಂದಿದರಿಂದ, ಜೀವಿಸುತ್ತಿರುವವರು ಏನು ಮಾಡಬೇಕು? ಅವರು ತಮಗಾಗಿ ಜೀವಿಸದೆ, ಸತ್ತು ಜೀವಂತವಾಗಿ ಎದ್ದು ಬಂದಾತನಿಗಾಗಿ ಜೀವಿಸಬೇಕು.
5:16 wb64 ಯಾವ ಮಾನದಂಡಗಳ ಮೂಲಕ ಇನ್ನು ಮುಂದೆ ದೇವಜನರು ಯಾರನ್ನು ತೀರ್ಪು ಮಾಡುವುದಿಲ್ಲ? ಇನ್ನು ಮುಂದೆ ದೇವಜನರು ಮಾನವ ಮಾನದಂಡಗಳಿಂದ ಯಾರಿಗೂ ತೀರ್ಪು ಮಾಡುವುದಿಲ್ಲ.
5:17 fjw3 ಯಾರಾದರೂ ಕ್ರಿಸ್ತನಲ್ಲಿ ಇದ್ದರೆ ಅವರಿಗೆ ಏನಾಗುತ್ತದೆ? ಆತನು ನೂತನ ಸೃಷ್ಟಿಯಾಗುವನು. ಹಳೆಯ ಸಂಗತಿಗಳೆಲ್ಲಾ ಹೋಗಿವೆ; ಹೊಸ ಸಂಗತಿಗಳು ಬರುತ್ತವೆ.
5:19 epiw ದೇವರು ಕ್ರಿಸ್ತನ ಮೂಲಕ ಜನರನ್ನು ತನ್ನೊಂದಿಗೆ ಸಂಧಾನಮಾಡಿಕೊಳ್ಳುವ ಮೂಲಕ, ಆತನು ಅವರಿಗೆ ಏನು ಮಾಡುತ್ತಾನೆ? ದೇವರು ಅವರ ಪಾಪಗಳನ್ನು ಅವರ ಮೇಲೆ ಎಣಿಸುವುದಿಲ್ಲ ಮತ್ತು ಅವರನ್ನು ಸಂಧಾನದ ಸಂದೇಶವನ್ನು ಅವರಿಗೆ ಒಪ್ಪಿಸುತ್ತಾನೆ.
5:20 plr8 ಕ್ರಿಸ್ತನು ನೇಮಿಸಿದ ಪ್ರತಿನಿಧಿಗಳಾಗಿ ಪೌಲ ಮತ್ತು ಅವನ ಸಂಗಡಿಗರು ಕೊರಿಂಥದವರಿಗೆ ಏನು ಮನವಿ ಮಾಡಿದರು? ಕ್ರಿಸ್ತನ ನಿಮಿತ್ತ ದೇವರೊಂದಿಗೆ ಸಂಧಾನವಾಗಬೇಕು ಎಂದು ಕೊರಿಂಥದವರಿಗೆ ಅವರ ಮನವಿಯಾಗಿತ್ತು.
5:21 n2e0 ಕ್ರಿಸ್ತನು ನೇಮಿಸಿದ ಪ್ರತಿನಿಧಿಗಳಾಗಿ ಪೌಲ ಮತ್ತು ಅವನ ಸಂಗಡಿಗರು ಕೊರಿಂಥದವರಿಗೆ ಏನು ಮನವಿ ಮಾಡಿದರು? ಕ್ರಿಸ್ತನ ನಿಮಿತ್ತ ದೇವರೊಂದಿಗೆ ಸಮನ್ವಯಗೊಳ್ಳಿರಿ ಎಂದು ಕೊರಿಂಥದವರಿಗೆ ಅವರ ಮನವಿಯಾಗಿತ್ತು.
6:1 j8xg ಪೌಲ ಮತ್ತು ಅವನ ಸಂಗಡಿಗರು ಕೊರಿಂಥದವರನ್ನು ಏನನ್ನು ಮಾಡದಂತೆ ಬೇಡಿಕೊಂಡರು? ದೇವರ ಕೃಪೆಯನ್ನು ವ್ಯರ್ಥವಾಗಿ ಸ್ವೀಕರಿಸದಂತೆ ಕೊರಿಂಥದವರಿಗೆ ಬೇಡಿಕೊಂಡರು.
6:2 dczo ಅನುಕೂಲಕರವಾದ ಸಮಯ ಯಾವಾಗ? ರಕ್ಷಣೆಯ ದಿನ ಯಾವಾಗ? ಈಗಲೇ ಅನುಕೂಲತೆಯ ಸಮಯ. ಈಗಲೇ ರಕ್ಷಣೆಯ ದಿನ.
6:3 kyu3 ಪೌಲ ಮತ್ತು ಅವನ ಸಂಗಡಿಗರು ಯಾರ ಮುಂದೆಯೂ ತಡೆಯನ್ನು ಯಾಕೆ ಉಂಟುಮಾಡಲಿಲ್ಲ? ಅವರು ಯಾರ ಮುಂದೆಯೂ ತಡೆಯನ್ನು ಉಂಟುಮಾಡಲಿಲ್ಲ, ಯಾಕೆಂದರೆ ಅವರ ಸುವಾರ್ತಾ ಸೇವೆಯನ್ನು ದೂಷಿಸಲು ಬಯಸಲಿಲ್ಲ.
6:4 e2c5 ಪೌಲ ಮತ್ತು ಅವನ ಸಂಗಡಿಗರ ಕಾರ್ಯಗಳು ಏನನ್ನು ಸಾಬೀತುಪಡಿಸಿದವು? ಅವರ ಕಾರ್ಯಗಳು ಅವರು ದೇವರ ಸೇವಕರೆಂದು ಸಾಬೀತುಪಡಿಸಿದವು.
6:4-5 q45m ಪೌಲ ಮತ್ತು ಅವನ ಸಂಗಡಿಗರು ಸಹಿಸಿಕೊಂಡ ಕೆಲವು ವಿಷಯಗಳು ಯಾವುವು? ಅವರು ಕಷ್ಟಗಳನ್ನು, ಸಂಕಟಗಳನ್ನು, ತೊಂದರೆಗಳನ್ನು, ಹೊಡೆತಗಳನ್ನು, ಸೆರೆಮನೆಗಳಲ್ಲಿ, ಗಲಭೆಗಳು, ಶ್ರಮೆ, ನಿದ್ರಾಹೀನತೆ, ಹಸಿವು ಇವುಗಳನ್ನು ಸಹಿಸಿಕೊಂಡರು.
6:8 ik7g ಪೌಲ ಮತ್ತು ಅವನ ಸಂಗಡಿಗರು ಸತ್ಯವಂತರಾಗಿದ್ದರೂ ಕೂಡ, ಯಾವ ಆರೋಪದಿಂದ ಅವರನ್ನು ದೂಷಿಸಲಾಯಿತು? ಅವರು ಮೋಸಗಾರರೆಂದು ದೂಷಿಸಲಾಯಿತು.
6:11 zq4x ಪೌಲನು ಕೊರಿಂಥದವರೊಂದಿಗೆ ಯಾವ ವಿನಿಮಯವನ್ನು ಮಾಡಿಕೊಳ್ಳಲು ಬಯಸುತ್ತಾನೆ? ಪೌಲನು ತನ್ನ ಹೃದಯವನ್ನು ಕೊರಿಂಥದವರಿಗೆ ವಿಶಾಲವಾಗಿ ತೆರೆದಿದ್ದಾನೆ ಅದಕ್ಕೆ ಸರಿಯಾದ ವಿನಿಮಯವಾಗಿ, ಕೊರಿಂಥದ ದೇವಜನರು ತಮ್ಮ ಹೃದಯವನ್ನು ಪೌಲನಿಗೂ ಅವನ ಸಹಚರರಿಗೂ ವಿಶಾಲವಾಗಿ ತೆರೆಯಬೇಕೆಂದು ಪೌಲನು ಬಯಸಿದನು ಎಂದು ಅವನೇ ಹೇಳಿದನು.
6:13 hzou ಪೌಲನು ಕೊರಿಂಥದವರೊಂದಿಗೆ ಯಾವ ವಿನಿಮಯವನ್ನು ಮಾಡಿಕೊಳ್ಳಲು ಬಯಸುತ್ತಾನೆ? ಪೌಲನು ತನ್ನ ಹೃದಯವನ್ನು ಕೊರಿಂಥದವರಿಗೆ ವಿಶಾಲವಾಗಿ ತೆರೆದಿದ್ದಾನೆ ಅದಕ್ಕೆ ಸರಿಯಾದ ವಿನಿಮಯವಾಗಿ, ಕೊರಿಂಥದ ದೇವಜನರು ತಮ್ಮ ಹೃದಯವನ್ನು ಪೌಲನಿಗೂ ಅವನ ಸಹಚರರಿಗೂ ವಿಶಾಲವಾಗಿ ತೆರೆಯಬೇಕೆಂದು ಪೌಲನು ಬಯಸಿದನು ಎಂದು ಅವನೇ ಹೇಳಿದನು.
6:14-16 x642 ಕೊರಿಂಥದ ದೇವಜನರು ಅವಿಶ್ವಾಸಿಗಳೊಂದಿಗೆ ಇಜ್ಜೋಡಾಗಬಾರದೆಂಬುದಕ್ಕೆ ಪೌಲನು ಕೊಟ್ಟ ಕಾರಣಗಳೇನು? ನೀತಿಗೆ ಅಧರ್ಮದೊಂದಿಗೆ ಯಾವ ಸಂಬಂಧವಿದೆ? ಬೆಳಕು ಕತ್ತಲೆಯೊಂದಿಗೆ ಅನ್ಯೋನತೆಯನ್ನು ಹೊಂದಲಾಗುವುದೇ? ಕ್ರಿಸ್ತನು ಬೆಲಿಯಾರ್‌ ಸಂಗಡ ಒಮ್ಮತವನ್ನು ಹೊಂದಬಹುದೇ? ವಿಶ್ವಾಸಿಯು ಅವಿಶ್ವಾಸಿಯೊಂದಿಗೆ ಯಾವ ಸಂಬಂಧವನ್ನು ಹೊಂದಿದ್ದಾನೆ? ದೇವರ ಆಲಯಕ್ಕೂ ವಿಗ್ರಹಗಳಿಗೂ ಯಾವ ಒಪ್ಪಂದವಿದೆಯೇ? ಎಂದು ಕಾರಣಗಳನ್ನು ಪೌಲನು ಕೊಟ್ಟನು.
6:17-18 u5ti “ಅವರ ಮಧ್ಯದಿಂದ ಹೊರಬಂದು ಪ್ರತ್ಯೇಕವಾಗಿರುವ ಮತ್ತು ಅಶುದ್ದವಾದದ್ದನ್ನು ಮುಟ್ಟದಿರುವವರಿಗಾಗಿ ತಾನು ಏನು ಮಾಡುತ್ತೇನೆ…”? ಎಂದು ಕರ್ತನು ಹೇಳುತ್ತಾನೆ. ಅವರನ್ನು ಸ್ವಾಗತಿಸುತ್ತೇನೆ ಎಂದು ಕರ್ತನು ಹೇಳುತ್ತಾನೆ. ಆತನು ಅವರಿಗೆ ತಂದೆಯಾಗಿರುವನು ಮತ್ತು ಅವರು ಆತನ ಪುತ್ರರು ಮತ್ತು ಪುತ್ರಿಯರಾಗಿರುವರು.
7:1 yeyh ನಮ್ಮನ್ನು ನಾವು ಯಾವುದರಿಂದ ಶುದ್ದೀಕರಿಸಿಕೊಳ್ಳಬೇಕೆಂದು ಪೌಲನು ಹೇಳುತ್ತಾನೆ? ದೇಹದಲ್ಲಿ ಮತ್ತು ಆತ್ಮದಲ್ಲಿ ನಮ್ಮನ್ನು ಅಶುದ್ದಗೊಳಿಸುವ ಎಲ್ಲವುಗಳಿಂದ ನಮ್ಮನ್ನು ನಾವು ಶುದ್ದೀಕರಿಸಿಕೊಳ್ಳಬೇಕು.
7:2 ax17 ಕೊರಿಂಥದ ದೇವಜನರು ತನಗೆ ಮತ್ತು ತನ್ನ ಸಂಗಡಿಗರಿಗೆ ಏನು ಮಾಡಬೇಕೆಂದು ಪೌಲನು ಆಶಿಸಿದನು? ಅವರು “ನಮಗಾಗಿ ಸ್ಥಳ ಮಾಡಿಕೊಡಿರಿ!” ಎಂದು ಪೌಲನು ಬಯಸಿದ್ದನು.
7:3-4 kc7w ಕೊರಿಂಥದಲ್ಲಿರುವ ದೇವಜನರಿಗೆ ಪೌಲನ ಬಳಿ ಎಂತಹ ಪ್ರೋತ್ಸಾಹದ ಮಾತುಗಳಿದ್ದವು. ಪೌಲನು ಕೊರಿಂಥದ ದೇವಜನರಿಗೆ ನೀವು ತನ್ನ ಮತ್ತು ತನ್ನ ಸಂಗಡಿಗರ ಹೃದಯದಲ್ಲಿ ಇದ್ದೀರಿ ಎಂದೂ ಅವರೊಟ್ಟಿಗೆ ಸಾಯಲೂ ಬದುಕಲೂ ಸಿದ್ಧ ಎಂದು ಹೇಳಿದನು. ಅವರಲ್ಲಿ ತನಗೆ ತುಂಬಾ ಭರವಸೆಯಿದೆ ಮತ್ತು ಅವರ ಬಗ್ಗೆ ಹೆಮ್ಮೆ ಇದೆ ಎಂದು ಸಹ ಪೌಲನು ಹೇಳಿದನು.
7:6-7 uwbv ಪೌಲ ಮತ್ತು ಅವನ ಸಂಗಡಿಗರು ಮಕೆದೋನ್ಯಕ್ಕೆ ಬಂದಾಗ ಮತ್ತು ಅವರು ಎಲ್ಲಾ ರೀತಿಯಲ್ಲಿ ತೊಂದರೆಗೆ ಒಳಗಾದಾಗ-ಹೊರಗಿನ ಸಂಘರ್ಷಗಳು ಮತ್ತು ಒಳಗಿನ ಭಯಗಳಿಗೆ ಒಳಗಾದಾಗ ದೇವರು ಎಂತಹ ಸಾಂತ್ವನವನ್ನು ಅವರಿಗೆ ಕೊಟ್ಟನು? ತೀತನ ಆಗಮನದಿಂದಲೂ, ತೀತನಿಗೆ ಕೊರಿಂಥದ ದೇವಜನರು ಸಂತೈಸುವಿಕೆಯನ್ನು ತೋರಿದ ಸುದ್ದಿಯಿಂದಲೂ, ಕೊರಿಂಥದವರು ಪೌಲನ ಬಗ್ಗೆ ಎಷ್ಟು ಪ್ರೀತಿ, ವ್ಯಥೆ ಮತ್ತು ಕಾಳಜಿಯನ್ನು ಉಳ್ಳವರಾಗಿದ್ದರು ಎಂಬುದರಿಂದಲೂ ದೇವರು ಅವರನ್ನು ಸಂತೈಸಿದನು.
7:8-9 esxj ಪೌಲನ ಹಿಂದಿನ ಪತ್ರಿಕೆಯು ಕೊರಿಂಥದ ದೇವಜನರಲ್ಲಿ ಏನನ್ನು ಉಂಟುಮಾಡಿತು? ಪೌಲನ ಹಿಂದಿನ ಪತ್ರಿಕೆಗೆ ಸ್ಪಂದಿಸಿ ಕೊರಿಂಥದ ದೇವಜನರು ಪಶ್ಚಾತ್ತಾಪದಿಂದ ದು:ಖಿಸಿದರು.
7:9 ygq7 ಕೊರಿಂಥದ ದೇವಜನರಲ್ಲಿ ದೈವಿಕ ದು:ಖವು ಏನನ್ನು ಉಂಟುಮಾಡಿತು? ದು:ಖವು ಅವರಲ್ಲಿ ಪಶ್ಚಾತ್ಥಾಪವನ್ನು ತಂದಿತು.
7:12 m7z2 ಪೌಲನು ಕೊರಿಂಥದ ದೇವಜನರಿಗೆ ತನ್ನ ಹಿಂದಿನ ಪತ್ರಿಕೆಯನ್ನು ಯಾಕೆ ಬರೆದೆನು ಎಂದು ಹೇಳಿದನು? ಪೌಲನಿಗಾಗಿ ಮತ್ತು ಅವನ ಸಂಗಡಿಗರಿಗಾಗಿ ಕೊರಿಂಥದ ದೇವರಜನರಿಗೆ ಇದ್ದ ಆಸಕ್ತಿಯು ದೇವರ ದೃಷ್ಟಿಯಲ್ಲಿ ಕೊರಿಂಥದ ದೇವಜನರಿಗೆ ತಿಳಿದುಬರಬೇಕೆಂದು ಬರೆದೆನು ಎಂದು ಪೌಲನು ಹೇಳಿರುತ್ತಿರುವನು.
7:13 k2om ತೀತನು ಯಾಕೆ ಸಂತೋಷವಾಗಿದ್ದನು? ಕೊರಿಂಥದ ದೇವಜನರೆಲ್ಲರಿಂದ ಅವನ ಆತ್ಮವು ಉಲ್ಲಾಸಗೊಂಡಿದ್ದರಿಂದ ಅವನು ಸಂತೋಷವಾಗಿದ್ದನು.
7:15 mitf ಕೊರಿಂಥದ ದೇವಜನರ ಮೇಲೆ ತೀತನ ಮಮತೆಯು ಇನ್ನೂ ಹೆಚ್ಚಾಗಲು ಕಾರಣವೇನು? ಕೊರಿಂಥದ ದೇವಜನರು ಭಯದಿಂದ ನಡುಗುತ್ತಾ ಅವನನ್ನು ಸ್ವಾಗತಿಸುತ್ತಿರುವಾಗ ಅವರು ತೋರಿದ ವಿಧೇಯತೆಯನ್ನು ಅವನು ನೆನಪಿಸಿಕೊಂಡಾಗ, ಕೊರಿಂಥದ ದೇವಜನರ ಮೇಲೆ ಅವನ ಮಮತೆಯು ಇನ್ನೂ ಹೆಚ್ಚಾಯಿತು.
8:1 r2ai ಕೊರಿಂಥದ ಸಹೋದರರು ಮತ್ತು ಸಹೋದರಿಯರು ಏನನ್ನು ತಿಳಿದುಕೊಳ್ಳಬೇಕೆಂದು ಪೌಲನು ಬಯಸಿದನು? ಮಕೆದೋನ್ಯದ ಸಭೆಗಳಿಗೆ ಕೊಡಲ್ಪಟ್ಟಿರುವ ದೇವರ ಕೃಪೆಯು ಬಗ್ಗೆ ಅವರು ತಿಳಿದುಕೊಳ್ಳಬೇಕೆಂದು ಪೌಲನು ಬಯಸಿದನು
8:2 lrui ಮಕೆದೋನ್ಯದ ಸಭೆಗಳು ಮಹಾ ಸಂಕಟದ ಪರೀಕ್ಷೆಯ ಸಮಯದಲ್ಲಿಯೂ, ಅವರು ಅತ್ಯಂತ ಬಡವರಾಗಿದ್ದರೂ ಅವರು ಏನು ಮಾಡಿದರು? ಅವರು ಉದಾರತೆಯಿಂದ ದೊಡ್ಡ ಸಂಪತ್ತನ್ನು ಕೊಟ್ಟರು.
8:6 nvfq ಪೌಲನು ತೀತನನ್ನು ಏನು ಮಾಡುವಂತೆ ಕೇಳಿಕೊಂಡನು? ಕೊರಿಂಥದ ದೇವಜನರ ಕಡೆಯಿಂದ ಈ ಕೃಪೆಯ ಕಾರ್ಯವನ್ನು ಪೂರ್ಣಗೊಳಿಸುವಂತೆ ಪೌಲನು ತೀತನನ್ನು ಕೇಳಿಕೊಂಡನು.
8:7 nsw3 ಕೊರಿಂಥದ ದೇವಜನರು ಬೇರೆ ಯಾವ ವಿಷಯದಲ್ಲಿ ಸಮೃದ್ದರಾಗಿದ್ದರು? ಅವರು ನಂಬಿಕೆಯಲ್ಲಿ, ಮಾತಿನಲ್ಲಿ, ತಿಳಿವಳಿಕೆಯಲ್ಲಿ, ಸಕಲ ವಿಧವಾದ ಆಸಕ್ತಿಯಲ್ಲಿ, ಮತ್ತು ಪೌಲನ ಮೇಲಿನ ಪ್ರೀತಿಯಲ್ಲಿ ಸಮೃದ್ದರಾಗಿದ್ದರು.
8:12 ek7v ಯಾವುದು ಒಳ್ಳೆಯದು ಮತ್ತು ಸ್ವೀಕಾರಾರ್ಹವಾದ ವಿಷಯ ಎಂದು ಪೌಲನು ಹೇಳುತ್ತಾನೆ. ಪೌಲನು ಕೊರಿಂಥದ ದೇವಜನರಿಗೆ ಆ ಕೆಲಸವನ್ನು ಮಾಡಲು ಸನ್ನದ್ದರಾಗಿರುವುದು ಒಳ್ಳೆಯದು ಮತ್ತು ಸ್ವೀಕಾರಾರ್ಹವೆಂದು ಹೇಳುತ್ತಾನೆ.
8:13-14 ghbz ಇತರರು ಉಪಶಮನಗೊಳ್ಳಬಹುದು ಮತ್ತು ಕೊರಿಂಥದ ದೇವಜನರಿಗೆ ಹೊರೆಯಾಗಬಹುದೆಂದು ಪೌಲನು ಈ ಕಾರ್ಯವು ಆಗಬೇಕೆಂದು ಬಯಸಿದನೋ? ಇಲ್ಲ. ಪೌಲನು ಹೇಳಿದ್ದೇನೆಂದರೆ ಕೊರಿಂಥದ ದೇವಜನರು ಆ ಸಮಯದಲ್ಲಿ ಹೊಂದಿದ್ದ ಸಮೃದ್ದಿಯು ಅವರಿಗೆ (ಇತರ ದೇವಜನರಿಗೆ) ಬೇಕಾದದ್ದನ್ನು ಪೂರೈಸುತ್ತದೆ ಮತ್ತು ಅವರ ಸಮೃದ್ದಿಯು ಕೊರಿಂಥದ ದೇವಜನರಿಗೆ ಬೇಕಾದದ್ದನ್ನು ಪೂರೈಸುತ್ತದೆ ಮತ್ತು ನ್ಯಾಯಯುತವಾಗಿ ಇರುತ್ತದೆ.
8:16-17 oufl ಪೌಲನು ಕೊರಿಂಥದ ದೇವಜನರಿಗೋಸ್ಕರ ಹೊಂದಿದ್ದ ಅದೇ ರೀತಿಯ ಆಸಕ್ತಿಯುಳ್ಳ ಕಾಳಜಿಯನ್ನು ದೇವರು ಅವನ ಹೃದಯದಲ್ಲಿ ಇಟ್ಟ ನಂತರ ತೀತನು ಏನು ಮಾಡಿದನು? ತೀತನು ಪೌಲನ ಮನವಿಯನ್ನು ಸ್ವೀಕರಿಸಿದನು, ಮತ್ತು ಅದರ ಬಗ್ಗೆ ಬಹಳ ಆಸಕ್ತಿಯುಳ್ಳವನಾಗಿ, ಅವನು ತನ್ನ ಸ್ವಂತ ಇಚ್ಚೆಯಿಂದ ಕೊರಿಂಥದ ದೇವಜನರ ಬಳಿಗೆ ಬಂದನು.
8:20 pf1h ಈ ಉದಾರತೆಯ ಕೃತ್ಯದ ಕುರಿತಾದ ತನ್ನ ಕಾರ್ಯಗಳಲ್ಲಿ ಪೌಲನು ಏನನ್ನು ದೂರವಿಡಲು ಎಚ್ಚರವಹಿಸಿದ್ದನು? ಪೌಲನು ತನ್ನ ಕಾರ್ಯಗಳ ಬಗ್ಗೆ ಅಪಾದನೆಯನ್ನು ಹೊರಿಸಲು ಯಾರಿಗೂ ಕಾರಣವನ್ನು ಕೊಡದ ಹಾಗೆ ಎಚ್ಚರವಹಿಸಿದ್ದನು.
8:24 vglq ಇತರ ಸಭೆಗಳಿಂದ ಕಳುಹಿಸಲ್ಪಟ್ಟ ಸಹೋದರರ ಬಗ್ಗೆ ಏನು ಮಾಡಬೇಕೆಂದು ಕೊರಿಂಥದ ದೇವಜನರಿಗೆ ಪೌಲನು ಹೇಳಿದನು? ಪೌಲನು ಕೊರಿಂಥದ ಸಭೆಯವರು ತಮ್ಮ ಪ್ರೀತಿಯನ್ನು ಅವರಿಗೆ ತೋರಿಸಬೇಕೆಂದು ಮತ್ತು ಇತರ ಸಭೆಗಳ ನಡುವೆ ಪೌಲನು ಕೊರಿಂಥದ ಸಭೆಯ ಬಗ್ಗೆ ಹೆಮ್ಮೆಪಡುವ ಕಾರಣವನ್ನು ತೋರಿಸಬೇಕೆಂದು ಹೇಳಿದನು.
9:1 o3wa ಪೌಲನು ಕೊರಿಂಥದ ದೇವಜನರಿಗೆ ಯಾವ ವಿಷಯದ ಬಗ್ಗೆ ಬರೆಯುವುದು ಅವಶ್ಯವಲ್ಲವೆಂದು ಹೇಳುತ್ತಾನೆ? ದೇವಜನರಿಗಾಗಿರುವ ಸೇವೆಯ ಕುರಿತಾಗಿ ಅವರಿಗೆ ಬರೆಯುವುದು ಅವಶ್ಯವಿಲ್ಲವೆಂದು ಪೌಲನು ಹೇಳುತ್ತಾನೆ.
9:3 bjar ಪೌಲನು ಸಹೋದರರನ್ನು ಯಾಕೆ ಕೊರಿಂಥಕ್ಕೆ ಕಳುಹಿಸಿದನು? ಪೌಲನು ಕೊರಿಂಥದವರ ವಿಷಯದಲ್ಲಿ ಹೊಗಳಿಕೊಂಡಿದ್ದು ವ್ಯರ್ಥವಾಗಬಾರದೆಂದು ಮತ್ತು ತಾನು ಹೇಳಿದಂತೆ ಅವರು ಸಿದ್ದರಾಗಬೇಕೆಂದು ಅವನು ಸಹೋದರರನ್ನು ಕಳುಹಿಸಿದನು.
9:4-5 tumg ಪೌಲನು ಕೊರಿಂಥದ ದೇವಜನರ ಬಳಿಗೆ ಹೋಗಿ ಕೊರಿಂಥದವರು ವಾಗ್ದಾನ ಮಾಡಿದ ಉಡುಗೊರೆಗೆ ಮುಂಚಿತವಾಗಿ ಸಿದ್ದತೆಗಳನ್ನು ಮಾಡಬೇಕೆಂದು ಸಹೋದರರನ್ನು ಒತ್ತಾಯಿಸುವುದು ಅಗತ್ಯವೆಂದು ಯಾಕೆ ಭಾವಿಸಿದನು? ಪೌಲನ ಜೊತೆಯಲ್ಲಿ ಮಕೆದೋನ್ಯದಿಂದ ಯಾರಾದರೂ ಬಂದು ಮತ್ತು ಕೊರಿಂಥದವರು ಸಿದ್ದವಿಲ್ಲದಿರುವುದನ್ನು ಕಂಡರೆ ಪೌಲನು ಮತ್ತು ಅವನ ಸಂಗಡಿಗರು ನಾಚಿಕೆ ಪಡಬೇಕಾಗಿಲ್ಲವೆಂದು ಯೋಚಿಸಿದನು. ಕೊರಿಂಥದವರು ಉಡುಗೊರೆಯನ್ನು ಕೊಡಲು ಸಿದ್ದರಾಗಿರಬೇಕೆಂದು, ಕೊರಿಂಥದವರು ಅದನ್ನು ಕೊಡುವಂತೆ ಒತ್ತಾಯಿಸದೆ ಮನಃಪೂರ್ವಕವಾಗಿ ಕೊಡುವಂತೆ ಪೌಲನು ಬಯಸಿದನು.
9:6 rbsa ಪೌಲನು ಹೇಳುವ ಪ್ರಕಾರ ಅವರ ಕೊಡುಗೆಯ ಉದ್ದೇಶ ಏನು? ಸ್ವಲ್ಪವಾಗಿ ಬಿತ್ತುವವನು ಸ್ವಲ್ಪವನ್ನು ಕೊಯ್ಯುವನು, ಮತ್ತು ಹೆಚ್ಚಾಗಿ ಬಿತ್ತುವವನೋ ಹೆಚ್ಚು ಕೊಯ್ಯುವನು ಎಂಬ ಉದ್ದೇಶ ಎಂದು ಪೌಲನು ಹೇಳಿದನು.
9:7 clv5 ಪ್ರತಿಯೊಬ್ಬರೂ ಹೇಗೆ ಕೊಡಬೇಕು? ಪ್ರತಿಯೊಬ್ಬನು ತನ್ನ ಹೃದಯದಲ್ಲಿ ನಿರ್ಣಯಿಸಿದ ಪ್ರಕಾರ ಕೊಡಲಿ-ಬಲವಂತದ ಬದ್ಧತೆಯಿಂದಲ್ಲ ಅಥವಾ ಅವನು ಕೊಡುವಾಗ ದು:ಖಪಡುವಾಗೆ ಅಲ್ಲ.
9:10-11 n3di ಬಿತ್ತುವವನಿಗೆ ಬೀಜವನ್ನು ಮತ್ತು ಆಹಾರಕ್ಕಾಗಿ ರೊಟ್ಟಿಯನ್ನು ಒದಗಿಸಿಕೊಡುವವನು ಕೊರಿಂಥದ ದೇವಜನರಿಗೆ ಏನು ಮಾಡಲಿದ್ದಾನೆ? ಆತನು ಬಿತ್ತುವುದಕ್ಕೆ ಬೀಜವನ್ನು ಪೂರೈಸುವನು, ಹೆಚ್ಚಿಸುವನು ಮತ್ತು ಅವರ ನೀತಿಯ ಫಸಲನ್ನು ಹೆಚ್ಚಿಸುವನು. ಅವರು ಉದಾರ ಭಾವನೆಯುಳ್ಳವರಾಗಿರುವುದರಿಂದ ಎಲ್ಲಾ ರೀತಿಯಲ್ಲಿಯೂ ಅವರು ಶ್ರೀಮಂತರಾಗುತ್ತಾರೆ.
9:13 bh3f ಕೊರಿಂಥದ ದೇವಜನರು ದೇವರನ್ನು ಹೇಗೆ ಮಹಿಮೆ ಪಡಿಸಿದರು? ಅವರು ಕ್ರಿಸ್ತನ ಸುವಾರ್ತೆಯ ಅರಿಕೆಗೆ ವಿಧೇಯರಾಗುವ ಮೂಲಕ ಮತ್ತು ಅವರು ತಮ್ಮ ಕೊಡುಗೆಯನ್ನು ಉದಾರವಾಗಿ ಕೊಡುವ ಮೂಲಕ ಅವರು ದೇವರನ್ನು ಮಹಿಮೆಪಡಿಸಿದರು.
9:14 b12z ಕೊರಿಂಥದ ದೇವಜನರಿಗಾಗಿ ಇತರ ದೇವಜನರು ಪ್ರಾರ್ಥಿಸುವಾಗ ಅವರಿಗಾಗಿ ಯಾಕೆ ಹಾತೊರೆಯುತ್ತಿದ್ದರು? ದೇವರ ಅಪಾರವಾದ ಕೃಪೆಯು ಕೊರಿಂಥದವರ ಮೇಲೆ ಇದ್ದಿದ್ದರಿಂದ ಅವರು ಅವರಿಗಾಗಿ ಹಾತೊರೆಯುತ್ತಿದ್ದರು.
10:2 v5cq ಪೌಲನು ಕೊರಿಂಥದ ದೇವಜನರಲ್ಲಿ ಏನು ಬೇಡಿಕೊಂಡನು? ಪೌಲನು ಅವರೊಂದಿಗೆ ಇದ್ದಾಗ, ಆತ್ಮವಿಶ್ವಾಸದಿಂದ ದಿಟ್ಟನಾಗಿ ಇರಬೇಕಾಗಿಲ್ಲ ಎಂದು ಅವರನ್ನು ಬೇಡಿಕೊಂಡನು.
10:2 v6f7 ಯಾವ ಸಂದರ್ಭಕ್ಕಾಗಿ ಪೌಲನು ಆತ್ಮವಿಶ್ವಾಸದಿಂದ ದಿಟ್ಟನಾಗಿರಬೇಕೆಂದು ಭಾವಿಸಿದನು? ಪೌಲನೂ ಅವನ ಸಂಗಡಿಗರೂ ಶರೀಕ್ಕನುಸಾರವಾಗಿ ಜೀವಿಸುತ್ತಾರೆಂದು ಭಾವಿಸಿದವರು ವಿರೋಧಿಸುವಾಗ ಅವನು ಆತ್ಮವಿಶ್ವಾಸದಿಂದ ದಿಟ್ಟನಾಗಿರಬೇಕೆಂದು ಪೌಲನು ಭಾವಿಸಿದನು.
10:4 v4sc ಪೌಲ ಮತ್ತು ಅವನ ಸಂಗಡಿಗರು ಯುದ್ದ ಮಾಡಿದಾಗ, ಅವರು ಯಾವ ರೀತಿಯ ಆಯುಧಗಳನ್ನು ಬಳಸಲಿಲ್ಲ? ಪೌಲ ಮತ್ತು ಅವನ ಸಂಗಡಿಗರು ಯುದ್ದ ಮಾಡುವಾಗ ಲೋಕಸಂಬಂಧವಾದ ಆಯುಧಗಳನ್ನು ಬಳಸಲಿಲ್ಲ.
10:4 f5m5 ಪೌಲನು ಬಳಸಿದ ಆಯುಧಗಳಿಗೆ ಏನನ್ನು ಮಾಡುವಂತಹ ಶಕ್ತಿ ಇದ್ದಿತು? ಪೌಲನು ಬಳಸಿದ ಆಯುಧಗಳು ಬಲವಾದ ಕೋಟೆಗಳನ್ನು ಕೆಡವಲು ದೈವಿಕ ಶಕ್ತಿ ಉಳ್ಳವುಗಳಾಗಿದ್ದವು.
10:8 gvuy ಯಾವ ಕಾರಣಕ್ಕಾಗಿ ಕರ್ತನು ಪೌಲನಿಗೆ ಮತ್ತು ಅವನ ಸಂಗಡಿಗರಿಗೆ ಅಧಿಕಾರವನ್ನು ಕೊಟ್ಟನು? ಕೊರಿಂಥದ ದೇವಜನರನ್ನು ನಾಶಮಾಡದೆ ಮತ್ತು ಅವರನ್ನು ಕಟ್ಟುವುದಕ್ಕಾಗಿ ಕರ್ತನು ಪೌಲನಿಗೆ ಮತ್ತು ಅವನ ಸಂಗಡಿಗರಿಗೆ ಅಧಿಕಾರವನ್ನು ಕೊಟ್ಟನು.
10:10 x852 ಪೌಲ ಮತ್ತು ಅವನ ಪತ್ರಿಕೆಗಳ ಬಗ್ಗೆ ಕೆಲವರು ಏನು ಹೇಳುತ್ತಿದ್ದರು? ಪೌಲನ ಪತ್ರಿಕೆಗಳು ಗಂಭೀರವಾದವುಗಳೂ ಪ್ರಬಲವಾದವುಗಳೂ ಆಗಿವೆ ಆದರೆ ಪೌಲನು ಶರೀರಸಂಬಂಧದಲ್ಲಿ ಬಲಹೀನನಾಗಿದ್ದಾನೆ ಮತ್ತು ಅವನ ಬೋಧನೆಯು ಕೇಳಲು ಯೋಗ್ಯವಲ್ಲವೆಂದು ಎಂದು ಕೆಲವರು ಹೇಳುತ್ತಿದ್ದರು.
10:11 o9m6 ಅವನ ಪತ್ರಿಕೆಗಳಲ್ಲಿ ಕಾಣಬರುವುದಕ್ಕಿಂತಲೂ ಅವನು ಬೇರೆ ತರಹದ ವ್ಯಕ್ತಿ ಎಂದು ಭಾವಿಸಿದವರಿಗೆ ಪೌಲನು ಏನು ಹೇಳಿದನು? ಪೌಲನು ತಾನು ದೂರದಲ್ಲಿರುವಾಗ ಪತ್ರಿಕೆಯಲ್ಲಿ ಏನೂ ಹೇಳಿದ್ದನ್ನೋ ಅದನ್ನೇ ಕೊರಿಂಥದಲ್ಲಿರುವ ದೇವಜನರೊಂದಿಗೆ ಇರುವಾಗಲೂ ಮಾಡುತ್ತೇನೆಂದು ಹೇಳಿದನು.
10:12 qkvy ತಮ್ಮನ್ನು ತಾವು ಹೊಗಳಿಕೊಳ್ಳುವವರು ತಮಗೆ ವಿವೇಕವಿಲ್ಲವೆಂದು ತೋರಿಸಲು ಏನು ಮಾಡಿದರು? ಅವರು ಪರಸ್ಪರ ಒಬ್ಬರೊಂದಿಗೊಬ್ಬರ ಅಳೆಯುವ ಮತ್ತು ಹೋಲಿಸುವ ಮೂಲಕ ಅವರಿಗೆ ವಿವೇಕವಿಲ್ಲವೆಂದು ಅವರು ತೋರಿಸಿದರು.
10:13 gpyw ಪೌಲನ ಹೊಗಳಿಕೆಯ ಮಿತಿಗಳೇನು? ತನ್ನ ಹೊಗಳಿಕೆಯು ದೇವರು ತಮಗೆ ನೇಮಿಸಿದ ಪ್ರದೇಶದಲ್ಲಿ ಮಾತ್ರ ಇರುತ್ತದೆ, ಅದು ಕೊರಿಂಥದವರ ಮಟ್ಟಿಗೂ ಸಹ ತಲುಪುವುದು ಎಂದು ಪೌಲನು ಹೇಳಿದನು. ಅವರು ಬೇರೆಯವರ ಶ್ರಮದ ಬಗ್ಗೆ, ಬೇರೊಬ್ಬರ ಪ್ರದೇಶದಲ್ಲಿ ಮಾಡುವ ಕೆಲಸದ ಬಗ್ಗೆ ಹೊಗಳಿಕೊಳ್ಳುವುದಿಲ್ಲವೆಂದು ಪೌಲನು ಹೇಳಿದನು.
10:15-16 afkv ಪೌಲನ ಹೊಗಳಿಕೆಯ ನಿರ್ದಿಷ್ಟವಾದ ಮಿತಿಗಳು ಯಾವುವು? ತನ್ನ ಹೊಗಳಿಕೆಯು ದೇವರು ತಮಗೆ ನೇಮಿಸಿದ ಪ್ರದೇಶದಲ್ಲಿ ಮಾತ್ರ ಇರುತ್ತದೆ, ಅದು ಕೊರಿಂಥದವರ ಮಟ್ಟಿಗೂ ಸಹ ತಲುಪುವುದು ಎಂದು ಪೌಲನು ಹೇಳಿದನು. ಅವರು ಬೇರೆಯವರ ಶ್ರಮದ ಬಗ್ಗೆ, ಬೇರೊಬ್ಬರ ಪ್ರದೇಶದಲ್ಲಿ ಮಾಡುವ ಕೆಲಸದ ಬಗ್ಗೆ ಹೊಗಳಿಕೊಳ್ಳುವುದಿಲ್ಲವೆಂದು ಪೌಲನು ಹೇಳಿದನು.
10:18 vgxf ಯೋಗ್ಯನು ಯಾರು? ಕರ್ತನು ಯಾರನ್ನು ಹೊಗಳುತ್ತಾನೋ ಅವನೇ ಯೋಗ್ಯನು.
11:2 qdgp ಪೌಲನು ಕೊರಿಂಥದ ದೇವಜನರ ಮೇಲೆ ಯಾಕೆ ದೈವಿಕ ಅಸೂಯೆಯನ್ನು ಉಳ್ಳವನಾಗಿದ್ದನು? ಅವನು ಅವರ ಮೇಲೆ ಅಸೂಯೆಗೊಂಡಿದ್ದನು, ಯಾಕೆಂದರೆ, ಅವರನ್ನು ಕ್ರಿಸ್ತನಿಗೆ ಶುದ್ದವಾದ ಕನ್ಯೆಯಂತೆ ಒಪ್ಪಿಸಬೇಕೆಂದು, ಒಂದೇ ಗಂಡನಿಗೆ ವಿವಾಹವಾಗುವುದಕ್ಕೆ ವಾಗ್ದಾನಮಾಡಿದ್ದನು.
11:3 boci ಕೊರಿಂಥದ ದೇವಜನರ ಬಗ್ಗೆ ಪೌಲನು ಯಾಕೆ ಹೆದರುತ್ತಿದ್ದನು? ಕ್ರಿಸ್ತನಿಗಾಗಿ ಇರುವ ಅವರ ಶುದ್ದವಾದ ಮತ್ತು ಪ್ರಾಮಾಣಿಕ ಭಕ್ತಿಯಿಂದ ಅವರ ಆಲೋಚನೆಗಳು ಬೇರೆಡೆಗೆ ಹೋಗಬಹುದೆಂದು ಪೌಲನು ಭಯಪಟ್ಟನು.
11:4 dh9x ಕೊರಿಂಥದ ದೇವಜನರು ಏನನ್ನು ಸಹಿಸಿಕೊಂಡರು? ಪೌಲನು ಮತ್ತು ಅವನ ಸಂಗಡಿಗರು ಸಾರಿದ ಸುವಾರ್ತೆಗಿಂತಲೂ ಭಿನ್ನವಾದ ಸುವಾರ್ತೆಯನ್ನು ಯಾರಾದರೂ ಬಂದು ಇನ್ನೊಬ್ಬ ಯೇಸುವಿನ ಬಗ್ಗೆ ಸಾರಿದ್ದನ್ನು ಅವರು ಸಹಿಸಿಕೊಂಡರು.
11:7 xbyg ಕೊರಿಂಥದವರಿಗೆ ಸುವಾರ್ತೆಯನ್ನು ಪೌಲನು ಹೇಗೆ ಸಾರಿದನು? ಪೌಲನು ಕೊರಿಂಥದವರಿಗೆ ಉಚಿತವಾಗಿ ಸುವಾರ್ತೆಯನ್ನು ಸಾರಿದನು.
11:8 zb8y ಇತರ ಸಭೆಗಳನ್ನು ಪೌಲನು ಹೇಗೆ “ಸುಲುಕೊಂಡನು”? ಅವನು ಕೊರಿಂಥದವರಿಗೆ ಸೇವೆ ಮಾಡಲು ಅವರ ಸಹಾಯವನ್ನು ಅಂಗೀಕರಿಸುವ ಮೂಲಕ ಅವರನ್ನು “ಸುಲುಕೊಂಡನು.”
11:13 temx ಪೌಲನು ಮತ್ತು ಅವನ ಸಂಗಡಿಗರು ಹೊಗಳಿಕೊಳ್ಳುವ ವಿಷಯಗಳಲ್ಲಿ ತಾವು ಕೂಡ ಸಮಾನರಾಗಬೇಕೆಂದು ಬಯಸುವವರ ಕುರಿತು ಪೌಲನು ಹೇಗೆ ವಿವರಿಸುತ್ತಾನೆ? ಅಂತಹ ಜನರನ್ನು ಪೌಲನು ಸುಳ್ಳು ಅಪೋಸ್ತಲರೆಂದು, ಮೋಸದ ಕೆಲಸಗಾರರು, ಕ್ರಿಸ್ತನ ಅಪೊಸ್ತಲರಂತೆ ತಮಗೆ ತಾವೇ ವೇಷವನ್ನು ಹಾಕಿಕೊಳ್ಳುತ್ತಾರೆಂದು ವಿವರಿಸುತ್ತಾನೆ.
11:14 mzrh ಸೈತಾನನು ತನ್ನನ್ನು ತಾನು ಹೇಗೆ ವೇಷಮರೆಸಿಕೊಳ್ಳುತ್ತಾನೆ? ಅವನು ತನ್ನನ್ನು ತಾನು ಬೆಳಕಿನ ದೂತನಂತೆ ವೇಷಮರೆಸಿಕೊಳ್ಳುತ್ತಾನೆ.
11:16 s9lm ಪೌಲನು ತನ್ನನ್ನು ಮೂರ್ಖನಂತೆ ಸ್ವೀಕರಿಸಿಕೊಳ್ಳಿರಿ ಎಂದು ಕೊರಿಂಥದ ದೇವಜನರನ್ನು ಯಾಕೆ ಕೇಳಿಕೊಂಡನು? ತನ್ನನ್ನು ತಾನು ಸ್ವಲ್ಪ ಹೊಗಳಿಕೊಳ್ಳಲಾಗುವಂತೆ ತನ್ನನ್ನು ಮೂರ್ಖನಂತೆ ಸ್ವೀಕರಿಸಿಕೊಳ್ಳಿರಿ ಎಂದು ಪೌಲನು ಅವರನ್ನು ಕೇಳಿಕೊಂಡನು.
11:19-20 go6f ಕೊರಿಂಥದ ದೇವಜನರು ಸಂತೋಷದಿಂದ ಯಾರನ್ನು ಸಹಿಸಿಕೊಳ್ಳುತ್ತಾರೆಂದು ಪೌಲನು ಹೇಳಿದನು? ಅವರು ಬುದ್ಧಿಹೀನರನ್ನು, ತಮ್ಮನ್ನು ದಾಸರನ್ನಾಗಿ ಮಾಡಿಕೊಂಡವರನ್ನು, ಅವರ ಮಧ್ಯೆ ಒಡಕುಗಳನ್ನು ಉಂಟುಮಾಡುವವರನ್ನು, ಅವರಿಂದ ಲಾಭವನ್ನು ಪಡೆದುಕೊಳ್ಳುವವರನ್ನು, ತಮ್ಮನ್ನು ಹೆಚ್ಚಿಸಿಕೊಳ್ಳವವರನ್ನು, ಅಥವಾ ತಮ್ಮ ಕೆನೆಗೆ ಹೊಡೆಯುವವರನ್ನು ಸಂತೋಷದಿಂದ ಸಹಿಸಿಕೊಳ್ಳುತ್ತಾರೆ ಎಂದು ಪೌಲನು ಹೇಳಿದನು.
11:22-23 y0t3 ಪೌಲನಿಗೆ ಸಮನಾಗಿ ಕಾಣಿಸಿಕೊಳ್ಳಬೇಕೆಂದು ಬಯಸುವವರೊಂದಿಗೆ ತನ್ನನ್ನು ಹೋಲಿಸಿಕೊಂಡು ಅವರ ಹೊಗಳಿಕೊಳ್ಳುವ ಸಂಗತಿಗಳೊಂದಿಗೆ ಹೋಲಿಸಿಕೊಂಡು ಅವನು ಹೊಗಳಿಕೊಳ್ಳುವ ವಿಷಯಗಳೇನು? ಪೌಲನಿಗೆ ಸಮಾನರೆಂದು ಹೇಳಿಕೊಳುತ್ತಿದ್ದವರು ಹೊಗಳಿಕೊಳ್ಳುತ್ತಿದ್ದ ಹಾಗೆಯೇ ಪೌಲನು ಸಹ ತಾನು ಇಬ್ರಿಯನು, ಇಸ್ರಾಯೇಲನು ಮತ್ತು ಅಬ್ರಹಾಮನ ವಂಶದವನೆಂದು ಹೊಗಳಿಕೊಳ್ಳುತ್ತಿದ್ದನು. ತಾವು ಕ್ರಿಸ್ತನ ಸೇವಕರೆಂದು ಹೇಳಿಕೊಳ್ಳುತ್ತಿದ್ದವರಿಗಿಂತಲೂ ಹೆಚ್ಚಾಗಿ ಪ್ರಯಾಸಗಳಲ್ಲಿ, ಸೆರೆಮನೆಗಳಲ್ಲಿ, ಮಿತಿಮೀರಿದ ಹೊಡೆತಗಳನ್ನು ತಿಂದಿದ್ದರಲ್ಲಿ, ಮರಣದ ಅನೇಕ ಅಪಾಯಗಳನ್ನು ಎದುರಿಸುವಲ್ಲಿ ತಾನು ಅವರಿಗಿಂತಲೂ ಅಧಿಕವಾಗಿ ಕ್ರಿಸ್ತನ ಸೇವಕನಾಗಿದ್ದಾನೆಂದು ಪೌಲನ್ನು ಹೊಗಳಿಕೊಂಡನು.
11:24-26 r6hw ಪೌಲನು ತಾಳಿಕೊಂಡ ಕೆಲವು ನಿರ್ದಿಷ್ಟವಾದ ಅಪಾಯಗಳು ಯಾವುವು? ಪೌಲನಿಗೆ ಯೆಹೂದ್ಯರಿಂದ “ಒಂದು ಕಡಿಮೆ 40 ಏಟುಗಳನ್ನು” ಐದು ಸಾರಿ ಹೊಡಿಸಿಕೊಂಡನು. ಮೂರು ಬಾರಿ ಛಡಿಗಳಿಂದ ಹೊಡೆಸಿಕೊಂಡನು. ಒಂದು ಸಾರಿ ಕಲ್ಲುಗಳಿಂದ ಹೊಡೆಸಿಕೊಂಡಿದ್ದನು. ಮೂರು ಸಾರಿ ಅವನಿದ್ದ ಹಡಗು ಒಡೆದುಹೋಯಿತು. ಅವನು ಒಂದು ರಾತ್ರಿ ಮತ್ತು ಒಂದು ಹಗಲನ್ನು ಸಮುದ್ರದಲ್ಲಿ ಕಳೆದನು. ಅವನು ನದಿಗಳಿಂದ, ಕಳ್ಳರಿಂದ, ತನ್ನ ಸ್ವಂತ ಜನರಿಂದ, ಅನ್ಯಜನರಿಂದ ಅಪಾಯವನ್ನು ಎದುರಿಸಿದನು.
11:29 sbcz ಪೌಲನ ಪ್ರಕಾರ, ಅವನು ಕೋಪದಿಂದ ಉರಿಯಲು ಕಾರಣವೇನು? ಒಬ್ಬನು ಮತ್ತೊಬ್ಬನನ್ನು ಪಾಪಕ್ಕೆ ಬೀಳುವಂತೆ ಮಾಡುತ್ತಿದ್ದರಿಂದ ಪೌಲನು ತನ್ನೊಳಗೆ ಕೋಪದಿಂದ ಉರಿಯುತ್ತಿದ್ದನು.
11:30 s4tr ಪೌಲನು ತಾನು ಹೊಗಳಿಕೊಳ್ಳಬೇಕೆಂದಿದ್ದರೆ ಯಾವುದರ ಬಗ್ಗೆ ಹೊಗಳಿಕೊಳ್ಳುತ್ತೇನೆಂದು ಹೇಳಿದನು? ಪೌಲನು ತನ್ನ ದೌರ್ಬಲ್ಯಗಳನ್ನು ತೋರ್ಪಡಿಸುವ ವಿಷಯಗಳ ಬಗ್ಗೆ ಹೊಗಳಿಕೊಳ್ಳುತ್ತೇನೆಂದು ಹೇಳಿದನು.
11:32 xdhi ದಮಸ್ಕದಲ್ಲಿ ಪೌಲನಿಗೆ ಯಾವ ಅಪಾಯವು ಎದುರಾಯಿತು? ಪೌಲನನ್ನು ಸೆರೆಹಿಡಿಯಲು ದಮಸ್ಕದ ರಾಜ್ಯಪಾಲನು ಪಟ್ಟಣವನ್ನು ಕಾವಲು ಕಾಯುತ್ತಿದ್ದನು.
12:1 c7ux ಈಗ ಯಾವುದರ ಬಗ್ಗೆ ಹೊಗಳಿಕೊಳ್ಳುತ್ತೇನೆಂದು ಪೌಲನು ಹೇಳಿದನು? ಪೌಲನು ತಾನು ಕರ್ತನಿಂದ ಪಡೆದುಕೊಂಡ ದರ್ಶನಗಳು ವಿಷಯವಾಗಿಯೂ ಪ್ರಕಟನೆಗಳ ವಿಷಯವಾಗಿಯೂ ಹೊಗಳಿಕೊಳ್ಳುತ್ತೇನೆಂದು ಹೇಳಿದನು.
12:2 pc03 14 ವರ್ಷಗಳ ಹಿಂದೆ ಕ್ರಿಸ್ತನಲ್ಲಿದ್ದ ಮನುಷ್ಯನಿಗೆ ಏನಾಯಿತು? ಆತನು ಮೂರನೆಯ ಪರಲೋಕಕ್ಕೆ ಒಯ್ಯಲ್ಪಟ್ಟನು.
12:6 j4ow ಪೌಲನು ತಾನು ಹೊಗಳಿಕೊಳ್ಳುವುದು ಮೂರ್ಖತನವಲ್ಲವೆಂದು ಯಾಕೆ ಹೇಳುತ್ತಾನೆ? ಪೌಲನು ತಾನು ಸತ್ಯವನ್ನು ಮಾತನಾಡುತ್ತಾ ಇದ್ದುದರಿಂದ ತಾನು ಹೊಗಳಿಕೊಳ್ಳುವುದು ಮೂರ್ಖತನವಲ್ಲವೆಂದು ಹೇಳಿದನು.
12:7 qkhc ಪೌಲನನ್ನು ಉಬ್ಬಿಕೊಳ್ಳದಂತೆ ತಡೆಯಲು ಅವನಿಗೆ ಏನು ಸಂಭವಿಸಿತು? ಪೌಲನಿಗೆ ಶರೀರದಲ್ಲಿ ಒಂದು ಮುಳ್ಳನ್ನು ಕೊಡಲಾಯಿತು, ಅದೇನಂದರೆ ಅವನನ್ನು ಹಿಂಸಿಸಲು ಸೈತಾನನಿಂದ ಒಬ್ಬ ದೂತನನ್ನು ಕಳುಹಿಸಲಾಯಿತು.
12:9 qb1l ಪೌಲನು ತನ್ನ ಶರೀರದಲ್ಲಿರುವ ಮುಳ್ಳನ್ನು ತೆಗೆದು ಹಾಕಬೇಕೆಂದು ಕರ್ತನನ್ನು ಕೇಳಿದಾಗ ಕರ್ತನು ಪೌಲನಿಗೆ ಏನೆಂದು ಹೇಳಿದನು? ಕರ್ತನು ಪೌಲನಿಗೆ, "ನನ್ನ ಕೃಪೆಯು ನಿನಗೆ ಸಾಕು; ಯಾಕೆಂದರೆ ಬಲಹೀನತೆಯಲ್ಲಿ ಶಕ್ತಿಯು ಪರಿಪೂರ್ಣವಾಗಿದೆʼ ಎಂದು ಹೇಳಿದನು.
12:9 aey9 ಪೌಲನು ತನ್ನ ಬಲಹೀನತೆಯ ವಿಷಯದಲ್ಲಿ ಹೊಗಳಿಕೊಳ್ಳುವುದು ಮೇಲೆಂದು ಏಕೆ ಹೇಳಿದನು? ಕ್ರಿಸ್ತನ ಶಕ್ತಿಯು ಅವನಲ್ಲಿ ನೆಲೆಸುವಂತೆ ಇದು ಮೇಲೆಂದು ಎಂದು ಪೌಲನು ಹೇಳಿದನು.
12:12 s3fj ಕೊರಿಂಥದವರಲ್ಲಿ ಪೂರ್ಣ ತಾಳ್ಮೆಯಿಂದ ಏನನ್ನು ಮಾಡಲಾಯಿತು? ಅವರ ಮಧ್ಯೆ ಪೂರ್ಣ ತಾಳ್ಮೆಯಿಂದ ಸೂಚಕಕಾರ್ಯಗಳನ್ನೂ, ಅದ್ಬುತಕಾರ್ಯಗಳನ್ನೂ, ಮಹತ್ಕಾರ್ಯಗಳನ್ನೂ, ಅಪೊಸ್ತಲನ ಲಕ್ಷಣಗಳನ್ನೂ ಮಾಡಲಾಯಿತು.
12:14 wcan ಪೌಲನು ಕೊರಿಂಥದವರಿಗೆ ತಾನು ಅವರಿಗೆ ಭಾರವಾಗುವುದಿಲ್ಲ ಎಂದು ಯಾಕೆ ಹೇಳಿದನು? ಅವನಿಗೆ ಅವರು ಬೇಕಾಗಿದ್ದರಿಂದ ಪೌಲನು ಅವರ ಆಸ್ತಿಗಳನ್ನು ಬಯಸುವುದಿಲ್ಲದೆಂದು ಅವರಿಗೆ ತಿಳಿಸಲು ಹೀಗೆ ಹೇಳಿದನು.
12:15 gfv8 ಕೊರಿಂಥದಲ್ಲಿರುವ ದೇವಜನರಿಗೋಸ್ಕರ ತಾನು ಬಹಳ ಸಂತೋಷದಿಂದ ಏನು ಮಾಡುತ್ತೇನೆಂದು ಪೌಲನು ಹೇಳಿದನು. ಪೌಲನು ಅವರ ಜೀವಾತ್ಮಗಳಿಗಾಗಿ ತನ್ನನ್ನೇ ವೆಚ್ಚಮಾಡಲು ಬಹಳ ಸಂತೋಷಪಡುತ್ತೇನೆ ಎಂದು ಹೇಳಿದನು.
12:19 xz62 ಪೌಲನು ಕೊರಿಂಥದ ದೇವಜನರಿಗೆ ಈ ಎಲ್ಲಾ ವಿಷಯಗಳನ್ನು ಹೇಳಿದ ಉದ್ದೇಶ ಏನು? ಪೌಲನು ಕೊರಿಂಥದ ದೇವಜನರನ್ನು ವೃದ್ಧಿಪಡಿಸುವುದಕ್ಕಾಗಿ ಈ ಸಂಗತಿಗಳನ್ನು ಹೇಳಿದನು.
12:20 ihut ಪೌಲನು ಕೊರಿಂಥದ ದೇವಜನರ ಬಳಿಗೆ ಹಿಂದಿರುಗಿದಾಗ ಏನನ್ನು ಕಂಡುಕೊಳ್ಳಬಹುದೆಂದು ಭಯಪಟ್ಟನು? ಪೌಲನು ಅವರಲ್ಲಿ ವಾಗ್ವಾದಗಳು, ಅಸೂಯೆ, ಕೋಪ, ಸ್ವಾರ್ಥದಾಶೆ, ಚಾಡಿ, ಅಹಂಕಾರ ಮತ್ತು ಗೊಂದಲವನ್ನು ಕಂಡುಕೊಳ್ಳಬಹುದೆಂದು ಭಯಪಟ್ಟನು.
12:21 rfkd ದೇವರು ಅವನಿಗೆ ಏನು ಮಾಡಬಹುದೆಂದು ಪೌಲನು ಭಯಪಟ್ಟನು? ಕೊರಿಂಥದ ದೇವಜನರ ಮುಂದೆ ದೇವರು ಪೌಲನನ್ನು ತಲೆತಗ್ಗಿಸುವಂತೆ ಮಾಡುವನೋ ಎಂದು ಪೌಲನು ಭಯಪಟ್ಟನು.
12:21 tdhb ಹಿಂದೆ ಪಾಪಮಾಡಿದ ಕೊರಿಂಥದ ದೇವಜನರಿಗೋಸ್ಕರ ದು:ಖಿಸಬಹುದೆಂದು ಪೌಲನು ಯಾವ ಕಾರಣಕ್ಕಾಗಿ ಯೋಚಿಸುತ್ತಾನೆ? ಅವರು ಹಿಂದೆ ಮಾಡುತ್ತಿದ್ದ ಅಶುದ್ದತೆ, ಲೈಂಗಿಕ ಅನೈತಿಕತೆ ಮತ್ತು ಕಾಮುಕ ನಡವಳಿಕೆಯಿಂದ ಪಶ್ಚಾತ್ತಾಪಪಡದೆ ಇರಬಹುದೆಂದು ಪೌಲನು ಭಯಪಟ್ಟನು.
13:1-2 cf6k 2ನೇ ಕೊರಿಂಥದ ಪತ್ರಿಕೆಯು ಬರೆಯಲ್ಪಡುವ ವೇಳೆಗೆ ಪೌಲನು ಈಗಾಗಲೇ ಕೊರಿಂಥದಲ್ಲಿರುವ ದೇವಜನರ ಬಳಿಗೆ ಎಷ್ಟು ಬಾರಿ ಬಂದಿದ್ದನು? 2ನೇ ಕೊರಿಂಥದವರಿಗೆ ಪತ್ರಿಕೆಯು ಬರೆಯಲ್ಪಡುವ ವೇಳೆಗೆ ಪೌಲನು ಈಗಾಗಲೇ ಎರಡು ಬಾರಿ ಅವರ ಬಳಿಗೆ ಬಂದಿದ್ದನು.
13:3 v2d0 ಕೊರಿಂಥದಲ್ಲಿ ಪಾಪಮಾಡಿದ ದೇವಜನರಿಗೆ ಮತ್ತು ಮಿಕ್ಕಾದವರೆಲ್ಲರಿಗೆ ಅವನು ಮತ್ತೆ ಬಂದರೆ, ಅವನು ಅವರನ್ನು ಬಿಡುವುದಿಲ್ಲವೆಂದು ಪೌಲನು ಏಕೆ ಹೇಳಿದನು? ಕೊರಿಂಥದ ದೇವಜನರು ಪೌಲನ ಮುಖಾಂತರ ಕ್ರಿಸ್ತನು ಮಾತನಾಡುತ್ತಿದ್ದಾನೆಂಬುವುದಕ್ಕೆ ಸಾಕ್ಷಿಯನ್ನು ಹುಡುಕುತ್ತಿದ್ದರು ಆದ್ದರಿಂದ ಪೌಲನು ಈ ಮಾತನ್ನು ಹೇಳಿದನು.
13:5 oyi5 ಪೌಲನು ಕೊರಿಂಥದ ದೇವಜನರಿಗೆ ಯಾವ ವಿಷಯದಲ್ಲಿ ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ ಹೇಳಿದನು? ಅವರು ನಂಬಿಕೆಯಲ್ಲಿ ಇದ್ದಾರೋ ಇಲ್ಲವೋ ಎಂದು ತಮ್ಮನ್ನು ತಾವು ಪರೀಕ್ಷಿಸಿಕೊಳ್ಳುವಂತೆ ಪೌಲನು ಅವರಿಗೆ ಹೇಳಿದನು.
13:6 tpme ಪೌಲನ ಮತ್ತು ಅವನ ಸಂಗಡಿಗರ ಬಗ್ಗೆ ಕೊರಿಂಥದ ದೇವಜನರು ಏನನ್ನು ಕಂಡುಕೊಳ್ಳುತ್ತಾರೆಂದು ಪೌಲನಿಗೆ ಭರವಸೆ ಇದ್ದಿತು? ಕೊರಿಂಥದ ದೇವಜನರು ಅವರನ್ನು ಅನುಮೋದಿಸಲ್ಪಡದವರಲ್ಲ, ಆದರೆ ದೇವರಿಂದ ಅನುಮೋದಿತರೆಂದು ಕಂಡುಕೊಳ್ಳುವರು ಎಂಬ ಭರವಸೆ ಪೌಲನಿಗೆ ಇತ್ತು.
13:8 x6m8 ಪೌಲನು ಮತ್ತು ಅವನ ಸಂಗಡಿಗರು ಏನನ್ನು ಮಾಡಲು ಸಾಧ್ಯವಾಗಲಿಲ್ಲ ಎಂದು ಹೇಳಿದನು? ಸತ್ಯಕ್ಕೆ ವಿರುದ್ದವಾಗಿ ಅವರು ಏನನ್ನೂ ಮಾಡಲಾರರು ಎಂದು ಪೌಲನು ಹೇಳಿದನು.
13:10 m3b8 ಪೌಲನು ಕೊರಿಂಥದ ದೇವಜನರಿಂದ ದೂರವಿದ್ದ ವೇಳೆಯಲ್ಲಿ ಈ ವಿಷಯಗಳನು ಯಾಕೆ ಬರೆದನು? ಅವನು ಅವರ ಸಂಗಡ ಇದ್ದಾಗ ಅವರೊಂದಿಗೆ ಕಠಿಣವಾಗಿ ವರ್ತಿಸಬಾರದೆಂದು ಪೌಲನು ಹೀಗೆ ಮಾಡಿದನು.
13:10 qgbu ಪೌಲನು ಕೊರಿಂಥದ ದೇವಜನರ ವಿಷಯದಲ್ಲಿ ಕರ್ತನಿಂದ ಅವನಿಗೆ ಕೊಡಲ್ಪಟ್ಟ ಅಧಿಕಾರವನ್ನು ಹೇಗೆ ಉಪಯೋಗಿಸಲು ಬಯಸಿದನು? ಪೌಲನು ಕೊರಿಂಥದ ದೇವಜನರನ್ನು ಕಟ್ಟುವುದಕ್ಕಾಗಿ ತನ್ನ ಅಧಿಕಾರವನ್ನು ಉಪಯೋಗಿಸಲು ಬಯಸಿದ್ದಾನೇ ಹೊರತು ಅವರನ್ನು ಕೆಡವಿಹಾಕವುದಕ್ಕಾಗಿ ಅಲ್ಲ.
13:11-12 qz8o ಕೊನೆಯದಾಗಿ, ಪೌಲನು ಕೊರಿಂಥದವರಿಗೆ ಏನು ಮಾಡಬೇಕೆಂದು ಬಯಸಿದನು? ಅವರು ಸಂತೋಷಪಡಬೇಕು, ಪುನ:ಸ್ಥಾಪನೆಗಾಗಿ ಕೆಲಸ ಮಾಡಬೇಕು, ಪರಸ್ಪರ ಒಬ್ಬರೊಂದಿಗೊಬ್ಬರು ಸಮ್ಮತಿಯುಳ್ಳವರಾಗಿರಬೇಕು, ಶಾಂತಿಯಿಂದ ಬದುಕಬೇಕು, ಮತ್ತು ಒಬ್ಬರಿಗೊಬ್ಬರು ಪರಿಶುದ್ದವಾದ ಮುದ್ದಿಟ್ಟು ವಂದಿಸಬೇಕೆಂದು ಪೌಲನು ಬಯಸಿದನು.
13:14 jbtv ಕೊರಿಂಥದ ಎಲ್ಲಾ ದೇವಜನರೊಂದಿಗೆ ಏನು ಇರಬೇಕೆಂದು ಪೌಲನು ಬಯಸಿದನು? ಕರ್ತನಾದ ಯೇಸು ಕ್ರಿಸ್ತನ ಕೃಪೆಯೂ ದೇವರ ಪ್ರೀತಿಯೂ ಪವಿತ್ರಾತ್ಮನ ಸಹವಾಸವೂ ಅವರೆಲ್ಲರೊಂದಿಗೆ ಇರಬೇಕೆಂದು ಪೌಲನು ಬಯಸಿದನು.
Can't render this file because it contains an unexpected character in line 127 and column 334.

315
tq_MRK.tsv Normal file
View File

@ -0,0 +1,315 @@
Reference ID Tags Quote Occurrence Question Response
1:2-3 a4zc ಕರ್ತನು ಬರುವ ಮೊದಲು ಏನು ಆಗುವುದೆಂದು ಪ್ರವಾದಿಯಾದ ಯೆಶಾಯನು ಮುನ್ನುಡಿದಿದ್ದನು? ದೇವರು ಒಬ್ಬ ದೇವದೂತನನ್ನು ಕಳುಹಿಸುವನು, ಕರ್ತನಿಗೆ ದಾರಿಯನ್ನು ಸಿದ್ದಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವಿದೆ ಎಂದು ಮುನ್ನುಡಿದದ್ದನು.
1:4 g2v6 ಯೋಹಾನನು ಏನನ್ನು ಸಾರುತ್ತಾ ಬಂದನು? ಯೋಹಾನನು ಪಾಪಗಳ ಕ್ಷಮಾಪಣೆಗಾಗಿ ಪಶ್ಛಾತ್ತಾಪದ ದೀಕ್ಷಾಸ್ನಾನದ ಬಗ್ಗೆ ಸಾರುತ್ತಾ ಬಂದನು.
1:5 kdd7 ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿರುವಾಗ ಅವರು ಏನು ಮಾಡುತ್ತಿದ್ದರು? ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿರುವಾಗ ಅವರು ತಮ್ಮ ತಮ್ಮ ಪಾಪಗಳನ್ನು ಅರಿಕೆ ಮಾಡಿದರು
1:6 zlqi ಯೋಹಾನನು ಏನನ್ನು ತಿನ್ನುತ್ತಿದ್ದನು? ಯೋಹಾನನು ಮಿಡತೆಗಳನ್ನು ಮತ್ತು ಕಾಡು ಜೇನನ್ನು ತಿನ್ನುತ್ತಿದ್ದನು.
1:8 yakl ಅವನ ನಂತರ ಬರುವವನು ಯಾವುದರಿಂದ ದೀಕ್ಷಾಸ್ನಾನ ಮಾಡಿಸುವನೆಂದು ಯೋಹಾನನು ಹೇಳಿದನು? ಅವನ ನಂತರ ಬರುವವನು ಪವಿತ್ರ ಆತ್ಮದಿಂದ ದೀಕ್ಷಾಸ್ನಾನ ಮಾಡಿಸುವನೆಂದು ಯೋಹಾನನು ಹೇಳಿದನು.
1:10 y6fa ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ ನೀರಿನಿಂದ ಮೇಲೆ ಬಂದಾಗ ಯೇಸು ಏನನ್ನು ನೋಡಿದನು? ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ, ಆಕಾಶವು ತೆರೆದು ಆತ್ಮವು ಪಾರಿವಾಳದ ರೂಪದಲ್ಲಿ ಆತನ ಮೇಲೆ ಇಳಿದು ಬರುವುದನ್ನು ಯೇಸು ನೋಡಿದನು.
1:11 f2a4 ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ ಪರಲೋಕದಿಂದ ಬಂದಂತ ಸ್ವರವು ಏನು ಹೇಳಿತು? ಪರಲೋಕದಿಂದ ಬಂದಂತ ಸ್ವರವು, “ನೀನು ನನ್ನ ಪ್ರಿಯನಾಗಿರುವ ಮಗನು; ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂದು ಹೇಳಿತು.
1:12 ahm3 ಯೇಸುವನ್ನು ಯಾರು ಅರಣ್ಯಕ್ಕೆ ಕರೆದುಕೊಂಡು ಹೋದರು? ಆತ್ಮನು ಯೇಸುವನ್ನು ಅರಣ್ಯಕ್ಕೆ ಕರೆದುಕೊಂಡು ಹೋದನು.
1:13 ex5p ಯೇಸು ಎಷ್ಟು ಕಾಲ ಅರಣ್ಯದಲ್ಲಿದ್ದನು, ಮತ್ತು ಅಲ್ಲಿ ಆತನಿಗೆ ಏನು ಆಯಿತು? ಯೇಸು ಅರಣ್ಯದಲ್ಲಿ 40 ದಿನಗಳು ಇದ್ದನು, ಮತ್ತು ಅಲ್ಲಿ ಸೈತಾನನಿಂದ ಶೋಧಿಸಲ್ಪಟ್ಟನು.
1:15 kyxp ಯೇಸು ಏನನ್ನು ಸಾರಿದನು? ದೇವರ ರಾಜ್ಯವು ಹತ್ತಿರವಾಗಿದೆ, ಜನರು ಪಶ್ಚಾತ್ತಾಪಪಟ್ಟು ಸುವಾರ್ತೆಯನ್ನು ನಂಬಿರಿ ಎಂದು ಯೇಸು ಸಾರಿದನು.
1:16 yzo9 ಸೀಮೋನ ಮತ್ತು ಅಂದ್ರೆಯನ ಕೆಲಸ ಏನಾಗಿತ್ತು? ಸೀಮೋನನು ಮತ್ತು ಅಂದ್ರೆಯನು ಬೆಸ್ತರಾಗಿದ್ದರು.
1:17 r3ba ಸೀಮೋನನನ್ನು ಮತ್ತು ಆಂದ್ರೆಯನನ್ನು ಏನಾಗಿ ಮಾಡುವೆನೆಂದು ಯೇಸು ಹೇಳಿದನು? ಸೀಮೋನನನ್ನು ಮತ್ತು ಆಂದ್ರೆಯನನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನೆಂದು ಯೇಸು ಹೇಳಿದನು.
1:19 foqj ಯಾಕೋಬ ಮತ್ತು ಯೋಹಾನನ ಕೆಲಸ ಏನಾಗಿತ್ತು? ಯಾಕೋಬ ಮತ್ತು ಯೋಹಾನನು ಬೆಸ್ತರಾಗಿದ್ದರು.
1:22 lq6y ಯೇಸುವಿನ ಬೋಧನೆಯು ಸಭಾಮಂದಿರದಲ್ಲಿ ಯಾಕೆ ಜನರನ್ನು ಬೆರಗುಗೊಳಿಸಿತು? ಯೇಸುವಿನ ಬೋಧನೆಯು ಜನರನ್ನು ಬೆರಗುಗೊಳಿಸಿತು ಯಾಕೆಂದರೆ ಯೇಸು ಅಧಿಕಾರದಿಂದ ಬೋಧಿಸಿದನು.
1:24 rtx4 ಸಭಾಮಂದಿರದಲ್ಲಿದ್ದ ಅಶುದ್ದ ಆತ್ಮವು ಯೇಸುವಿಗೆ ಯಾವ ಬಿರುದನ್ನು ಕೊಟ್ಟಿತು? ಸಭಾಮಂದಿರದಲ್ಲಿದ್ದ ಅಶುದ್ದ ಆತ್ಮವು ಯೇಸುವಿಗೆ ದೇವರಿಂದ ಬಂದ ಪರಿಶುದ್ಧನು ಎಂಬ ಬಿರುದನ್ನು ಕೊಟ್ಟಿತು.
1:28 dn9o ಯೇಸುವಿನ ಕುರಿತಾದ ಸುದ್ದಿಯು ಏನಾಯಿತು? ಯೇಸುವಿನ ಕುರಿತಾದ ಸುದ್ದಿಯು ಎಲ್ಲೆಡೆಯೂ ಹಬ್ಬಿಹರಡಿತು.
1:30 ii0v ಅವರು ಸೀಮೋನನ ಮನೆಗೆ ಹೋದಾಗ, ಯೇಸು ಯಾರನ್ನು ಸ್ವಸ್ಥ ಮಾಡಿದನು? ಅವರು ಸೀಮೋನನ ಮನೆಗೆ ಹೋದಾಗ, ಯೇಸು ಸೀಮೋನನ ಅತ್ತೆಯನ್ನು ಸ್ವಸ್ಥಮಾಡಿದನು.
1:32-34 ywmc ಸಂಜೆಯಾದಾಗ ಏನಾಯಿತು? ಸಂಜೆಯಾದಾಗ, ಅಸ್ವಸ್ಥರಾದ ಎಲ್ಲರನ್ನೂ ಅಥವಾ ದೆವ್ವಗಳಿಂದ ಪೀಡಿತರಾದವರನ್ನು ಜನರು ಕರೆದುಕೊಂಡು ಬಂದರು, ಯೇಸು ಅವರನ್ನು ಸ್ವಸ್ಥ ಮಾಡಿದನು.
1:35 i2xa ಸೂರ್ಯ ಹುಟ್ಟುವುದಕ್ಕೆ ಮೊದಲು ಯೇಸು ಏನು ಮಾಡಿದನು? ಸೂರ್ಯ ಹುಟ್ಟುವ ಮೊದಲು, ಯೇಸುವು ಏಕಾಂತವಾದ ಸ್ಥಳಕ್ಕೆ ಹೋಗಿ ಅಲ್ಲಿ ಪ್ರಾರ್ಥಿಸಿದನು.
1:38-39 y32l ಏನು ಮಾಡಲು ಬಂದಿದ್ದೇನೆಂದು ಯೇಸು ಸೀಮೋನನಿಗೆ ಹೇಳಿದನು? ಸುತ್ತ ಮುತ್ತಲಿರುವ ಊರುಗಳಲ್ಲಿ ಸಾರಲು ಬಂದಿದ್ದೇನೆಂದು ಯೇಸು ಹೇಳಿದನು.
1:40-41 xyj3 ಸ್ವಸ್ಥನಾಗಬೇಕೆಂದು ಯೇಸುವನ್ನು ಬೇಡಿಕೊಂಡ ಕುಷ್ಟರೋಗಿಯ ಬಗ್ಗೆ ಯೇಸು ಯಾವ ಮನೋಭಾವವನ್ನು ಹೊಂದಿದ್ದನು? ಕುಷ್ಟರೋಗಿಯ ಮೇಲೆ ಯೇಸು ಕನಿಕರಪಟ್ಟು ಅವನನ್ನು ಸ್ವಸ್ಥ ಮಾಡಿದನು.
1:44 dzi8 ಯೇಸು ಕುಷ್ಟರೋಗಿಗೆ ಏನು ಮಾಡಲು ಹೇಳಿದನು, ಮತ್ತು ಯಾಕೆ ಹೇಳಿದನು? ಮೋಶೆಯು ಆಜ್ಞಾಪಿಸಿದ ಪ್ರಕಾರ ಹೋಗಿ ಯಜ್ಞಗಳನ್ನು ಅರ್ಪಿಸುವಂತೆ ಕುಷ್ಟರೋಗಿಗೆ ಯೇಸು ಹೇಳಿದನು. ಅವನು ಸ್ವಸ್ಥಗೊಂಡಿದ್ದು ಸಮುದಾಯದಲ್ಲಿ ಸಾಕ್ಷಿಯಾಗಿ ಕಾರ್ಯ ಮಾಡುತ್ತದೆ.
2:4 zvpg ಪಾರ್ಶ್ವವಾಯು ರೋಗಿಯನ್ನು ಹೊತ್ತುಕೊಂಡು ಬಂದಿದ್ದ ನಾಲ್ಕು ಜನರು ಏನು ಮಾಡಿದರು? ಪುರುಷರು ಮನೆಯ ಮೇಲ್ಚಾವಣಿಯನ್ನು ತೆಗೆದು ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ಇಳಿಸಿದರು
2:5 efne ಪಾರ್ಶ್ವವಾಯು ರೋಗಿಗೆ ಯೇಸು ಏನು ಹೇಳಿದನು? ಯೇಸು, “ಮಗುವೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
2:6-7 k9lq ಯೇಸು ಹೇಳಿದ್ದಕ್ಕೆ ಕೆಲವು ಶಾಸ್ತ್ರಿಗಳು ಯಾಕೆ ವಿರೋಧಿಸಿದರು? ದೇವರು ಮಾತ್ರ ಪಾಪಗಳನ್ನು ಕ್ಷಮಿಸಲು ಸಾಧ್ಯ ಆದ್ದರಿಂದ ಯೇಸು ದೇವದೂಷಣೆ ಮಾಡಿದ್ದಾನೆ ಎಂದು ಕೆಲವು ಶಾಸ್ತ್ರಿಗಳು ಯೋಚಿಸಿದರು.
2:10-12 v3ys ಈ ಭೂಮಿಯ ಪಾಪಗಳನ್ನು ಮೇಲೆ ಕ್ಷಮಿಸಲು ಆತನಿಗೆ ಅಧಿಕಾರವಿದೆಯೆಂದು ಯೇಸು ಹೇಗೆ ತೋರ್ಪಡಿಸಿದನು? ಯೇಸು ಪಾರ್ಶ್ವವಾಯು ರೋಗಿಗೆ ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು ಎಂದು ಯೇಸು ಹೇಳಿದನು, ಮತ್ತು ಆ ಮನುಷ್ಯನು ಹಾಗೆಯೇ ಮಾಡಿದನು.
2:13-14 llaq ಯೇಸು ಲೇವಿಗೆ ತನ್ನನ್ನು ಹಿಂಬಾಲಿಸು ಎಂದು ಹೇಳಿದಾಗ ಲೇವಿಯು ಏನು ಮಾಡುತ್ತಿದ್ದನು? ಯೇಸು ಅವನನ್ನು ಕರೆದಾಗ ಲೇವಿಯು ಸುಂಕ ವಸೂಲಿ ಮಾಡುವ ಸ್ಥಳದಲ್ಲಿ ಕುಳಿತುಕೊಂಡಿದ್ದನು.
2:15-16 c07h ಲೇವಿಯ ಮನೆಯಲ್ಲಿ, ಫರಿಸಾಯರಿಗೆ ಬೇಸರಿಕೆ ಬರುವಂತೆ ಯೇಸು ಏನು ಮಾಡಿದನು? ಯೇಸು ಪಾಪಿಗಳ ಮತ್ತು ಸುಂಕ ವಸೂಲಿ ಮಾಡುತ್ತಿದ್ದ ಜನರೊಂದಿಗೆ ಊಟ ಮಾಡುತ್ತಿದ್ದನು.
2:17 zqw0 ಯಾರನ್ನು ಕರೆಯಲು ಬಂದಿದ್ದೇನೆಂದು ಯೇಸು ಹೇಳಿದನು? ಪಾಪಿಯಾದ ಜನರನ್ನು ಕರೆಯಲು ಬಂದೆನೆಂದು ಯೇಸು ಹೇಳಿದನು.
2:18 p9ln ಕೆಲವು ಜನರು ಉಪವಾಸದ ಬಗ್ಗೆ ಯೇಸುವನ್ನು ಯಾವ ಪ್ರಶ್ನೆಯನ್ನು ಕೇಳಿದರು? ಯೋಹಾನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸ ಮಾಡುತ್ತಾರೆ ಆದರೆ ಯೇಸುವಿನ ಶಿಷ್ಯರು ಯಾಕೆ ಉಪವಾಸ ಮಾಡಲಿಲ್ಲವೆಂದು ಅವರು ಯೇಸುವನ್ನು ಕೇಳಿದರು.
2:19 w6go ಆತನ ಶಿಷ್ಯರು ಯಾಕೆ ಉಪವಾಸ ಮಾಡಿತ್ತಿಲ್ಲವೆಂದು ಯೇಸು ಹೇಗೆ ವಿವರಿಸಿದನು? ಮದುಮಗನ ಜೊತೆಯಲ್ಲಿ ಇನ್ನೂ ಮದುವೆಯ ಜನರು ಇರುವಾಗ, ಅವರು ಉಪವಾಸ ಮಾಡಲು ಆಗುವುದಿಲ್ಲವೆಂದು ಯೇಸು ಹೇಳಿದನು.
2:23-24 ej7h ಫರಿಸಾಯರಿಗೆ ಬೇಸರಿಕೆ ಬರುವಂತೆ ಸಬ್ಬತ್‌ ದಿನದಲ್ಲಿ ಯೇಸುವಿನ ಶಿಷ್ಯರು ಹೊಲದಲ್ಲಿ ಏನು ಮಾಡಿದರು? ಸಬ್ಬತ್‌ ದಿನದಲ್ಲಿ ಯೇಸುವಿನ ಶಿಷ್ಯರು ಹೊಲದಲ್ಲಿದ್ದ ತೆನೆಗಳನ್ನು ಮುರಿದುಕೊಂಡು ಅವುಗಳನ್ನು ತಿಂದರು.
2:25-26 iwe2 ಸಾಮಾನ್ಯವಾಗಿ ನಿಷೇಧಿಸಲ್ಪಟ್ಟ ರೊಟ್ಟಿಯು ಬೇಕಾದವರ ಮತ್ತು ತಿನ್ನುವವರ ಬಗ್ಗೆ ಯೇಸು ಯಾವ ಉದಾಹರಣೆಯನ್ನು ಕೊಟ್ಟನು? ದಾವೀದನು ಕೊರತೆಯುಳ್ಳವನಾಗಿ, ಯಾಜಕರ ಹೊರತು ಮತ್ತಾರು ತಿನ್ನಬಾರದ ರೊಟ್ಟಿಯನ್ನು ತಿಂದಂಥ ಉದಾಹರಣೆಯನ್ನು ಯೇಸು ಉದಾಹರಣೆಯಾಗಿ ಕೊಟ್ಟನು.
2:27 m19r ಸಬ್ಬತ್‌ ದಿನವು ಯಾರಿಗಾಗಿ ಮಾಡಲ್ಪಟ್ಟಿದೆ ಎಂದು ಯೇಸು ಹೇಳಿದನು? ಸಬ್ಬತ್‌ ದಿನವು ಜನರಿಗಾಗಿ ಮಾಡಲಾಯಿತು ಎಂದು ಯೇಸು ಹೇಳಿದನು.
2:28 ak51 ಯೇಸು ತನಗೆ ಯಾವ ಅಧಿಕಾರವಿದೆ ಎಂದು ಹೇಳಿಕೊಂಡನು? ನಾನು ಸಬ್ಬತ್‌ ದಿನಕ್ಕೂ ಸಹ ಕರ್ತನಾಗಿದ್ದೇನೆಂದು ಯೇಸು ಹೇಳಿದನು.
3:1-2 o82f ಸಬ್ಬತ್‌ ದಿನದಲ್ಲಿ ಸಭಾಮಂದಿರದಲ್ಲಿ ಅವರು ಯೇಸುವನ್ನು ಯಾಕೆ ಗಮನಿಸುತ್ತಿದ್ದರು? ಸಬ್ಬತ್‌ ದಿನದಲ್ಲಿ ಆತನು ಸ್ವಸ್ಥಮಾಡುತ್ತಾನೋ, ಸ್ವಸ್ಥಮಾಡುವುದಾದರೆ ಆತನನ್ನು ದೂಷಿಸಬಹುದೆಂದು ಅವರುಗಳು ಯೇಸುವನ್ನು ಗಮನಿಸುತ್ತಿದ್ದರು.
3:4 dk1g ಸಬ್ಬತ್‌ ದಿನದ ಬಗ್ಗೆ ಜನರನ್ನು ಯೇಸು ಯಾವ ಪ್ರಶ್ನೆಯನ್ನು ಕೇಳಿದನು? ಸಬ್ಬತ್‌ ದಿನದಲ್ಲಿ ಕೆಟ್ಟದ್ದನ್ನು ಮಾಡುವುದು, ಅಥವಾ ಒಳ್ಳೆಯದನ್ನು ಮಾಡುವುದು ಯಾವುದು ಶಾಸ್ತ್ರಸಮ್ಮತವಾದುದು ಎಂದು ಯೇಸು ಜನರನ್ನು ಕೇಳಿದನು.
3:4 p1z9 ಯೇಸುವಿನ ಪ್ರಶ್ನೆಗೆ ಜನರು ಹೇಗೆ ಪ್ರತಿಕ್ರಿಯಿಸಿದರು? ಜನರು ಮೌನವಾಗಿದ್ದರು.
3:5 mrbj ಅವರ ಮೇಲೆ ಯೇಸು ಎಂಥ ಮನೋಭಾವವುಳ್ಳವನಾಗಿದ್ದನು? ಯೇಸು ಅವರ ಮೇಲೆ ಕೋಪಗೊಂಡನು.
3:6 acwq ಯೇಸು ಮನುಷ್ಯನನ್ನು ಸ್ವಸ್ಥಮಾಡಿದಾಗ ಫರಿಸಾಯರು ಏನು ಮಾಡಿದರು? ಫರಿಸಾಯರು ಹೊರಟು ಹೋಗಿ ಯೇಸುವನ್ನು ಕೊಲ್ಲಲ್ಲು ಒಳಸಂಚು ಮಾಡಿದರು.
3:7-8 b2bk ಯೇಸು ಸಮುದ್ರದ ಬಳಿಗೆ ಹೋಗುತ್ತಿರುವಾಗ ಎಷ್ಟು ಜನರು ಆತನನ್ನು ಹಿಂಬಾಲಿಸಿದರು? ದೊಡ್ಡ ಜನರ ಗುಂಪು ಯೇಸುವನ್ನು ಹಿಂಬಾಲಿಸಿತು.
3:11 tke0 ಯೇಸುವನ್ನು ನೋಡಿದಾಗ ದೆವ್ವಗಳು ಏನೆಂದು ಕೂಗಿದವು? ಯೇಸು ದೇವರ ಮಗನೆಂದು ದೆವ್ವಗಳು ಕೂಗಿದವು.
3:14-15 e2s0 ಯೇಸು ಎಷ್ಟು ಮಂದಿ ಅಪೊಸ್ತಲರನ್ನು ನೇಮಿಸಿದನು ಮತ್ತು ಅವರುಗಳು ಏನು ಮಾಡಬೇಕಾಗಿತ್ತು? ಯೇಸು ತನ್ನ ಜೊತೆಯಲ್ಲಿರಲು, ಸುವಾರ್ತೆ ಸಾರಲು, ಮತ್ತು ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ಹೊಂದಿದವರಾಗಿರಲು 12 ಮಂದಿ ಅಪೊಸ್ತಲರನ್ನು ನೇಮಿಸಿದನು.
3:19 raj7 ಯೇಸುವಿಗೆ ದ್ರೋಹ ಮಾಡಿದ ಅಪೊಸ್ತಲನು ಯಾರು? ಯೇಸುವಿಗೆ ದ್ರೋಹ ಮಾಡಿದ ಅಪೊಸ್ತಲನು ಇಸ್ಕರಿಯೋತ ಯೂದನು.
3:21 rh8o ಯೇಸುವಿನ ಸುತ್ತವಿದ್ದ ಜನರ ಗುಂಪುಗಳ ಮತ್ತು ಘಟನೆಗಳ ಬಗ್ಗೆ ಯೇಸುವಿನ ಕುಟುಂಬದವರು ಏನೆಂದು ಯೋಚಿಸಿದರು? ಯೇಸುವಿನ ಕುಟುಂಬದವರು ಆತನಿಗೆ ಆತನಿಗೆ ಹುಚ್ಚುಹಿಡಿದಿದೆ ಎಂದು ಯೋಚಿಸಿದರು.
3:22 xmhs ಯೇಸುವಿನ ವಿರುದ್ದ ಶಾಸ್ತ್ರಿಗಳು ಯಾವ ಆರೋಪವನ್ನು ಮಾಡಿದರು? ದೆವ್ವಗಳ ಒಡೆಯನಿಂದ ದೆವ್ವಗಳನ್ನು ಬಿಡಿಸುತ್ತಿದ್ದಾನೆಂದು ಶಾಸ್ತ್ರಿಗಳು ಯೇಸುವಿನ ಮೇಲೆ ಆರೋಪ ಮಾಡಿದರು.
3:23-24 ob9v ಶಾಸ್ತ್ರಿಗಳ ಆರೋಪಕ್ಕೆ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಯಾವುದೇ ರಾಜ್ಯವು ತನಗೆ ವಿರುದ್ದವಾಗಿ ವಿಭಜನೆಗೊಂಡಿದ್ದರೆ ನಿಲ್ಲುವುದಿಲ್ಲವೆಂದು ಯೇಸು ಪ್ರತಿಕ್ರಿಯಿಸಿದನು.
3:28-29 txqb ಯಾವ ಪಾಪವು ಕ್ಷಮಿಸಲ್ಪಡುವುದಿಲ್ಲವೆಂದು ಯೇಸು ಹೇಳಿದನು? ಪವಿತ್ರ ಆತ್ಮನಿಗೆ ವಿರುದ್ದ ಮಾಡುವ ದೂಷಣೆಯು ಕ್ಷಮಿಸಲ್ಪಡುವುದಿಲ್ಲವೆಂದು ಯೇಸು ಹೇಳಿದನು.
3:33-35 xtjn ಆತನ ತಾಯಿ ಮತ್ತು ಸಹೋದರರು ಯಾರು ಎಂದು ಯೇಸು ಹೇಳಿದನು? ದೇವರ ಚಿತ್ತವನ್ನು ಮಾಡುವವರು ಆತನ ತಾಯಿ ಮತ್ತು ಸಹೋದರರು ಎಂದು ಯೇಸು ಹೇಳಿದನು.
4:1 bki3 ಯೇಸು ಬೋಧಿಸಲು ದೋಣಿಯ ಒಳಗೆ ಯಾಕೆ ಹೋದನು? ಯೇಸು ಕುಳಿತುಕೊಂಡು ಬೋಧಿಸಲು ದೋಣಿಯ ಒಳಗೆ ಹೋದನು ಯಾಕೆಂದರೆ ಆತನ ಸುತ್ತಲೂ ದೊಡ್ಡ ಗುಂಪು ಸೇರಿತ್ತು.
4:4 wzuu ದಾರಿಯ ಮೇಲೆ ಬಿತ್ತಿದ್ದ ಬೀಜಗಳಿಗೆ ಏನಾಯಿತು? ಹಕ್ಕಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
4:6 wyhf ಸೂರ್ಯನು ಹುಟ್ಟಿದಾಗ ಬಂಡೆ ನೆಲದ ಮೇಲೆ ಬಿತ್ತಿದ್ದ ಬೀಜಗಳಿಗೆ ಏನಾಯಿತು? ಅವುಗಳಿಗೆ ಬೇರಿಲ್ಲದ ಕಾರಣ ಅವು ಒಣಗಿಹೋದವು.
4:7 b6ma ಮುಳ್ಳು ಗಿಡಗಳ ಮಧ್ಯದಲ್ಲಿ ಬಿತ್ತಿದ್ದ ಬೀಜಗಳಿಗೆ ಏನಾಯಿತು? ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
4:8 ivy4 ಒಳ್ಳೆಯ ಮಣ್ಣಿನಲ್ಲಿ ಬಿತ್ತಿದ ಬೀಜಗಳಿಗೆ ಏನಾಯಿತು? ಬಿತ್ತಿದ್ದ ಬೀಜಗಳು ಕಾಳುಗಳನ್ನು ಉತ್ಪತ್ತಿಮಾಡಿ, 30, 60 ರಷ್ಟು ಮತ್ತು ಕೆಲವು 100 ರಷ್ಟು ಫಲವನ್ನು ಕೊಟ್ಟವು.
4:11 o0ss ಯೇಸು ಹನ್ನೆರಡು ಮಂದಿಗೆ ಏನನ್ನು ಕೊಡಲಾಗಿದೆ ಆದರೆ ಹೊರಗಿನವರಿಗೆ ಯಾಕೆ ಕೊಡಲಾಗಿಲ್ಲ ಎಂದು ಹೇಳಿದನು? ಹನ್ನೆರಡು ಮಂದಿಗೆ ದೇವರ ರಾಜ್ಯದ ಗುಟ್ಟು ಕೊಡಲಾಗಿದೆ ಆದರೆ ಹೊರಗಿನವರಿಗೆ ಕೊಡಲಾಗಿಲ್ಲ ಎಂದು ಯೇಸು ಹೇಳಿದನು.
4:14 pskj ಯೇಸುವಿನ ಸಾಮ್ಯದಲ್ಲಿ ಬೀಜ ಎಂದರೇನು? ಬೀಜ ಎಂದರೆ ದೇವರ ವಾಕ್ಯ.
4:15 t1r5 ದಾರಿಯ ಮೇಲೆ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯವನ್ನು ಕೇಳಿದರೂ, ತಕ್ಷಣವೇ ಸೈತಾನನು ಅದನ್ನು ಅವರಿಂದ ತೆಗೆದುಕೊಂಡು ಹೋಗುತ್ತಾನೆ ಅಂಥವರನ್ನು ಅದು ಪ್ರತಿನಿಧಿಸುತ್ತದೆ.
4:16-17 zy18 ಬಂಡೆಯ ನೆಲದ ಮೇಲೆ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ವಾಕ್ಯವನ್ನು ಸಂತೋಷದಿಂದ ಕೇಳಿಕೊಂಡರೂ, ಸಂಕಟವು ಬಂದಾಗ, ಅವರು ಎಡವಿಬೀಳುವಂಥವರನ್ನು ಅದು ಪ್ರತಿನಿಧಿಸುತ್ತದೆ.
4:18-19 alo5 ಮುಳ್ಳು ಗಿಡಗಳ ಮಧ್ಯದಲ್ಲಿ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯವನ್ನು ಕೇಳಿಸಿಕೊಂಡರೂ, ಲೋಕದ ಚಿಂತೆಗಳು ಅವುಗಳನ್ನು ಅಡಗಿಸಿಬಿಡುವಂಥವರನ್ನು ಅದು ಪ್ರತಿನಿಧಿಸುತ್ತದೆ.
4:20 lhwr ಒಳ್ಳೆಯ ಮಣ್ಣಿನಲ್ಲಿ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯವನ್ನು ಕೇಳಿಸಿಕೊಂಡು, ಅದನ್ನು ಸ್ವೀಕರಿಸಿ, ಫಲವನ್ನು ಕೊಡುವಂಥವರನ್ನು ಅದು ಪ್ರತಿನಿಧಿಸುತ್ತದೆ.
4:22 c1ey ಗುಪ್ತವಾದ ಮತ್ತು ರಹಸ್ಯದ ವಿಷಯಗಳಿಗೆ ಏನಾಗುತ್ತದೆ ಎಂದು ಯೇಸು ಹೇಳಿದನು? ಗುಪ್ತವಾದ ಮತ್ತು ರಹಸ್ಯದ ವಿಷಯಗಳು ಬೆಳಕಿಗೆ ಬರುತ್ತವೆ ಎಂದು ಯೇಸು ಹೇಳಿದನು.
4:26-27 fteq ಬೀಜವನ್ನು ನೆಲದಲ್ಲಿ ಬಿತ್ತು ಒಬ್ಬ ಮನುಷ್ಯನಿಗೆ ದೇವರ ರಾಜ್ಯವು ಹೇಗೆ ಹೋಲಿಕೆಯಾಗಿದೆ? ಮನುಷ್ಯನು ಬೀಜವನ್ನು ಬಿತ್ತುತ್ತಾನೆ, ಅದು ಬೆಳೆಯುತ್ತದೆ, ಆದರೆ ಅದು ಹೇಗೆ ಎಂದು ಅವನಿಗೆ ತಿಳಿಯದು, ಸುಗ್ಗಿಕಾಲ ಬಂದು ಫಸಲು ಮಾಗಿದಾಗ ಅವನು ಅದನ್ನು ಕೊಯ್ಯಿದು ಸಂಗ್ರಹಿಸುತ್ತಾನೆ.
4:30-32 tzc2 ಯಾವ ರೀತಿಯಲ್ಲಿ ದೇವರ ರಾಜ್ಯವು ಸಾಸಿವೆ ಬೀಜಕ್ಕೆ ಹೋಲಿಕೆಯಾಗಿದೆ? ಸಾಸಿವೆಕಾಳು ಬಹಳ ಸಣ್ಣ ಬೀಜವಾಗಿ ಪ್ರಾರಂಭವಾಗುತ್ತದೆ, ಆದಾಗ್ಯೂ ಅನೇಕರು ಅವರುಗಳಿಗೆ ಗೂಡುಗಳನ್ನು ಮಾಡಿಕೊಳ್ಳುವಷ್ಟು ದೊಡ್ಡ ಗಿಡವಾಗಿ ಬೆಳೆಯುತ್ತದೆ.
4:35-37 tojt ಯೇಸು ಮತ್ತು ಶಿಷ್ಯರು ಸರೋವರವನ್ನು ದಾಟಿದಾಗ ಏನಾಯಿತು? ದೊಡ್ಡ ಬಿರುಗಾಳಿಯು ಪ್ರಾರಂಭವಾಗಿ, ದೋಣಿಯನ್ನು ನೀರಿನಿಂದ ತುಂಬಿಸುವಂತೆ ಭಯಪಡಿಸಿತು.
4:38 j9v3 ಯೇಸು ದೋಣಿಯಲ್ಲಿ ಏನು ಮಾಡುತ್ತಿದ್ದನು? ಯೇಸು ನಿದ್ರೆ ಮಾಡುತ್ತಿದ್ದನು.
4:38 vu2b ಶಿಷ್ಯರು ಯೇಸುವನ್ನು ಏನೆಂದು ಪ್ರಶ್ನೆ ಕೇಳಿದರು? ನಾವು ಸಾಯುತ್ತಿದ್ದೇವೆ ಎಂಬುದರ ಬಗ್ಗೆ ಆತನಿಗೆ ಚಿಂತೆ ಇದೆಯೋ ಎಂದು ಶಿಷ್ಯರು ಯೇಸುವನ್ನು ಕೇಳಿದರು.
4:39 vehj ಆಗ ಯೇಸು ಏನು ಮಾಡಿದನು? ಯೇಸು ಗಾಳಿಯನ್ನು ಗದರಿಸಿ, ಸಮುದ್ರವನ್ನು ಶಾಂತ ಮಾಡಿದನು.
4:41 fkpr ಯೇಸು ಇದನ್ನು ಮಾಡಿದ ನಂತರ, ಶಿಷ್ಯರ ಪ್ರತಿಕ್ರಿಯೆ ಏನಾಗಿತ್ತು? ಶಿಷ್ಯರು ಮಹಾ ಭಯದಿಂದ ಕೂಡಿದರು, ಗಾಳಿಯೂ ಸಮುದ್ರವೂ ಆತನಿಗೆ ವಿಧೇಯವಾಗುತ್ತಲ್ಲಾ, ಹಾಗಾದರೆ ಯೇಸು ಯಾರಾಗಿರಬಹುದೆಂದು ಆಶ್ಚರ್ಯಪಟ್ಟರು.
5:1-2 f3h1 ಗೆರೆಸೇನೆಯ ಪ್ರದೇಶಕ್ಕೆ ಅವರು ಬಂದಾಗ ಯೇಸುವನ್ನು ಯಾರು ಎದುರುಗೊಂಡರು? ದೆವ್ವ ಹಿಡಿದಿದ್ದ ಮನುಷ್ಯನು ಯೇಸುವನ್ನು ಎದುರುಗೊಂಡರು.
5:4 pvch ಈ ಮನುಷ್ಯನನ್ನು ಸರಪಳಿಗಳಿಂದ ಕಟ್ಟಿ ಅಡಗಿಸಲು ಜನರು ಪ್ರಯತ್ನಿಸಿದಾಗ ಏನಾಯಿತು? ಈ ಮನುಷ್ಯನನ್ನು ಸರಪಳಿಗಳಿಂದ ಕಟ್ಟಿ ಅಡಗಿಸಲು ಜನರು ಪ್ರಯತ್ನಿಸಿದಾಗ, ಅವನು ಸರಪಳಿಯನ್ನು ಮುರಿದು ಹಾಕಿದನು.
5:7 s4bf ದೆವ್ವುವ ಯೇಸುವಿಗೆ ಯಾವ ಬಿರುದನ್ನು ಕೊಟ್ಟಿತು? ದೆವ್ವವು ಯೇಸುವನ್ನು ಮಹೋನ್ನತನಾದ ದೇವರ ಮಗನು ಎಂದು ಹೇಳಿತು.
5:8 s0ay ಮನುಷ್ಯನ ಒಳಗಿದ್ದ ದೆವ್ವಕ್ಕೆ ಯೇಸು ಏನು ಹೇಳಿದನು? ಯೇಸು, “ದೆವ್ವವೇ, ಆ ಮನುಷ್ಯನ ಒಳಗಿನಿಂದ ಹೊರಗೆ ಬಾ” ಎಂದು ಹೇಳಿದನು.
5:9 yw86 ದೆವ್ವದ ಹೆಸರು ಏನು? ದೆವ್ವದ ಹೆಸರು ದಂಡು ಎಂದು, ಯಾಕೆಂದರೆ ಅವುಗಳು ಬಹಳವಾಗಿ ಇದ್ದವು.
5:13 jvth ಯೇಸು ಮನುಷ್ಯನಿಂದ ದೆವ್ವವನ್ನು ಬಿಡಿಸಿದಾಗ ಏನಾಯಿತು? ದೆವ್ವಗಳು ಹೊರ ಬಂದು ಹಂದಿಗಳ ಗುಂಪಿನೊಳಗೆ ಹೊಕ್ಕವು, ಅವು ಕಡಿದಾದ ಬೆಟ್ಟದತ್ತ ಓಡಿಹೋಗಿ ನದಿಯಲ್ಲಿ ಮುಳುಗಿದವು
5:15 ist0 ದೆವ್ವವನ್ನು ಬಿಡಿಸಿದ ನಂತರ, ಆ ಮನುಷ್ಯನ ಸ್ಥಿತಿಯು ಹೇಗಿತ್ತು? ಮನುಷ್ಯನು ಬಟ್ಟೆ ಹಾಕಿಕೊಂಡು ಸ್ವಸ್ಥ ಮನಸ್ಸಿನಿಂದ ಯೇಸುವಿನೊಂದಿಗೆ ಕುಳಿತಿದ್ದನು.
5:17 mpj9 ಆ ಪ್ರದೇಶದ ಜನರು ಯೇಸುವನ್ನು ಏನು ಮಾಡುವಂತೆ ಕೇಳಿಕೊಂಡರು? ಜನರು ಯೇಸುವನ್ನು ಅವರ ಪ್ರದೇಶವನ್ನು ಬಿಟ್ಟು ಹೋಗುವಂತೆ ಕೇಳಿಕೊಂಡರು.
5:19 w96x ಗುಹೆಗಳಲ್ಲಿ ವಾಸಿಸುತ್ತಿದ್ದ ಆ ಮನುಷ್ಯನಿಗೆ ಈಗ ಏನು ಮಾಡುವಂತೆ ಯೇಸು ಹೇಳಿದನು? ಕರ್ತನು ಅವನಿಗೆ ಏನು ಮಾಡಿದ್ದಾನೆಂದು ಜನರಿಗೆ ಹೇಳುವಂತೆ ಯೇಸು ಆ ಮನುಷ್ಯನಿಗೆ ಹೇಳಿದನು.
5:22-23 pj22 ಸಭಾಮಂದಿರದ ನಾಯಕನಾದ ಯಾಯೀರನು ಯೇಸುವಿಗೆ ಏನೆಂದು ಭಿನ್ನವಿಸಿದನು? ಯಾಯೀರನು ಯೇಸುವಿಗೆ ಮರಣದ ಅಂಚಿನಲ್ಲಿರುವ ತನ್ನ ಮಗಳ ಮೇಲೆ ಕೈ ಇಡಲು ತನ್ನ ಜೊತೆಗೆ ಬರುವಂತೆ ಕೇಳಿಕೊಂಡನು.
5:25 atxm ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿದ ಹೆಂಗಸಿನ ಸಮಸ್ಯೆ ಏನಾಗಿತ್ತು? ಆ ಹೆಂಗಸು 12 ವರ್ಷಗಳಿಂದ ರಕ್ತಕುಸುಮ ರೋಗದಿಂದ ಬಳಲುತ್ತಿದ್ದಳು.
5:28 afd1 ಆ ಹೆಂಗಸು ಯೇಸುವಿನ ಬಟ್ಟೆಯ ಗೊಂಡೆಯನ್ನು ಯಾಕೆ ಮುಟ್ಟಿದಳು? ಯೇಸುವಿನ ಬಟ್ಟೆಗಳನ್ನು ಮುಟ್ಟಿದರೆ ಆಕೆ ಸ್ವಸ್ಥಳಾಗುತ್ತೇನೆ ಎಂದು ಯೋಚಿಸಿ ಮುಟ್ಟಿದಳು.
5:30 mrlf ಆ ಹೆಂಗಸು ಆತನ ಬಟ್ಟೆಯ ಗೊಂಡೆಯನ್ನು ಮುಟ್ಟಿದಾಗ ಯೇಸು ಏನು ಮಾಡಿದನು? ತನ್ನ ಮೂಲಕ ಶಕ್ತಿಯು ಹರಿದು ಹೋಯಿತು ಎಂದು ತಿಳಿದು ಯೇಸು ತನ್ನ ಬಟ್ಟೆಯನ್ನು ಯಾರು ಮುಟ್ಟಿದರು ಎಂದು ಕೇಳಿದನು.
5:32 lyq8 ಆ ಹೆಂಗಸು ಯೇಸುವಿನ ಬಟ್ಟೆಯನ್ನು ಮುಟ್ಟಿದ ನಂತರ ಯೇಸು ಏನು ಮಾಡಿದನು? ಯೇಸು ಸುತ್ತಲೂ ತಿರುಗಿ ಯಾರು ತನ್ನನ್ನು ಮುಟ್ಟಿದವರು ಯಾರು ಎಂದು ನೋಡಿದನು.
5:34 jfch ಆ ಹೆಂಗಸು ಎಲ್ಲಾ ಸತ್ಯವನ್ನು ಯೇಸುವಿಗೆ ಹೇಳಿದಾಗ, ಯೇಸು ಆಕೆಗೆ ಏನು ಹೇಳಿದನು? ಆಕೆಯ ನಂಬಿಕೆಯೇ ಆಕೆಯನ್ನು ಸ್ವಸ್ಥಮಾಡಿತು, ಸಮಾಧಾನದಿಂದ ಹೋಗು ಎಂದು ಯೇಸು ಆಕೆಗೆ ಹೇಳಿದನು.
5:35 spbi ಯೇಸು ಮನೆಗೆ ಬಂದಾಗ ಯಾಯೀರನ ಮಗಳ ಸ್ಥಿತಿಯು ಏನಾಗಿತ್ತು? ಯಾಯೀರನ ಮಗಳು ಸತ್ತುಹೋಗಿದ್ದಳು.
5:36 fai5 ಆ ಸಮಯದಲ್ಲಿ ಯೇಸು ಯಾಯೀರನಿಗೆ ಏನು ಹೇಳಿದನು? ಯೇಸು ಯಾಯೀರನಿಗೆ ಭಯಪಡಬೇಡ, ನಂಬು ಎಂದು ಹೇಳಿದನು.
5:37 ffse ಮಗುವು ಇದ್ದ ಕೋಣೆಗೆ ಯೇಸುವಿನೊಂದಿಗೆ ಹೋದ ಶಿಷ್ಯರು ಯಾರು? ಪೇತ್ರ, ಯಾಕೋಬ, ಮತ್ತು ಯೋಹಾನ ಯೇಸುವಿನೊಂದಿಗೆ ಕೋಣೆಯ ಒಳಗೆ ಹೋದರು.
5:40 sunl ಯಾಯೀರನ ಮಗಳು ನಿದ್ರೆ ಮಾಡುತ್ತಿದ್ದಾಳೆ ಎಂದು ಯೇಸು ಹೇಳಿದಾಗ ಮನೆಯಲ್ಲಿದ್ದ ಜನರು ಏನು ಮಾಡಿದರು? ಯಾಯೀರನ ಮಗಳು ನಿದ್ರೆ ಮಾಡುತ್ತಿದ್ದಾಳೆ ಎಂದು ಯೇಸು ಹೇಳಿದಾಗ ಜನರು ಯೇಸುವನ್ನು ಅಪಹಾಸ್ಯ ಮಾಡಿದರು.
5:42 km08 ಮಗುವು ಎದ್ದು ನಡೆದಾಗ, ಜನರು ಹೇಗೆ ಪ್ರತಿಕ್ರಿಯಿಸಿದರು? ಜನರು ಬಹಳ ಆಶ್ಚರ್ಯಗೊಂಡು ಬೆರಗಾದರು.
6:2 o2l2 ಯೇಸುವಿನ ಸ್ವಂತ ಊರಿನ ಜನರು ಆತನ ಬಗ್ಗೆ ಯಾಕೆ ಆಶ್ಚರ್ಯಪಟ್ಟರು? ಆತನ ಉಪದೇಶಗಳು, ಆತನ ಜ್ಞಾನ, ಮತ್ತು ಆತನ ಅದ್ಭುತಗಳು ಎಲ್ಲಿಂದ ಬಂದವೆಂದು ಜನರಿಗೆ ತಿಳಿದಿರಲಿಲ್ಲ.
6:4 d9fa ಎಲ್ಲಿ ಪ್ರವಾದಿಗೆ ಗೌರವ ಇರುವುದಿಲ್ಲ ಎಂದು ಯೇಸು ಹೇಳಿದನು? ಪ್ರವಾದಿಗೆ ಅವನ ಸ್ವಂತ ಊರಿನಲ್ಲಿಯೂ, ಅವನ ಸಂಬಂಧಿಕರ ಮಧ್ಯದಲ್ಲಿಯೂ, ಅವನ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ ಎಂದು ಯೇಸು ಹೇಳಿದನು.
6:6 arwk ಆತನ ಸ್ವಂತ ಊರಿನ ಜನರ ಬಗ್ಗೆ ಯೇಸುವನ್ನು ಏನು ಬೆರಗುಗೊಳಿಸಿತು? ಆತನ ಸ್ವಂತ ಊರಿನ ಜನರ ಅಪನಂಬಿಕೆಯು ಯೇಸುವನ್ನು ಬೆರಗುಗೊಳಿಸಿತು.
6:7 djdl ಹನ್ನೆರಡು ಮಂದಿಯನ್ನು ಕಳುಹಿಸಿ ಕೊಡುವಾಗ ಯೇಸು ಅವರಿಗೆ ಯಾವ ಅಧಿಕಾರವನ್ನು ಕೊಟ್ಟನು? ದೆವ್ವಗಳ ಮೇಲೆ ಯೇಸು ಹನ್ನೆರಡು ಮಂದಿಗೆ ಅಧಿಕಾರವನ್ನು ಕೊಟ್ಟನು.
6:8-9 e4e2 ಹನ್ನೆರಡು ಮಂದಿಯು ಅವರ ಪ್ರಯಾಣದಲ್ಲಿ ಏನನ್ನು ತೆಗೆದುಕೊಂಡು ಹೋದರು? ಆ ಹನ್ನೆರಡು ಮಂದಿ ಕೋಲು, ಕೆರಗಳು, ಮತ್ತು ಒಂದು ಬಟ್ಟೆಯನ್ನು ತೆಗೆದುಕೊಂಡು ಹೋದರು.
6:11 yfhp ಆ ಸ್ಥಳದವರು ಅವರನ್ನು ಸ್ವೀಕರಿಸದಿದ್ದರೆ ಆ ಸ್ಥಳಕ್ಕೆ ಏನು ಮಾಡುವಂತೆ ಯೇಸು ಆ ಹನ್ನೆರಡು ಮಂದಿಗೆ ಹೇಳಿದನು? ಯೇಸು ಆ ಹನ್ನೆರಡು ಮಂದಿಗೆ ಅವರ ಕಾಲ ಕೆಳಗೆ ಇರುವ ಧೂಳನ್ನು ಅವರ ವಿರುದ್ದ ಸಾಕ್ಷಿಯಾಗಿ ಜಾಡಿಸಿ ಬಿಡಿರಿ ಎಂದು ಹೇಳಿದನು.
6:14-15 iota ಯೇಸು ಯಾರೆಂದು ಜನರು ಊಹಿಸಿದರು? ಜನರು ಯೇಸು ಸ್ನಾನಿಕನಾದ ಯೋಹಾನನು ಅಥವಾ ಎಲೀಯನು ಅಥವಾ ಪ್ರವಾದಿ ಎಂದು ಊಹಿಸಿದರು.
6:18 wv8i ಸ್ನಾನಿಕನಾದ ಯೋಹಾನನು ಹೆರೋದನಿಗೆ ಯಾವ ಅಧರ್ಮವನ್ನು ಮಾಡುತ್ತಿದ್ದಿಯಾ ಎಂದು ಹೇಳಿದನು? ಯೋಹಾನನು ಹೆರೋದನಿಗೆ ನಿನ್ನ ಸಹೋದರನ ಹೆಂಡತಿಯನ್ನು ಮದುವೆ ಮಾಡಿಕೊಳ್ಳುವುದು ಅಧರ್ಮವೆಂದು ಹೇಳಿದನು.
6:20 l858 ಯೋಹಾನನು ಉಪದೇಶ ಮಾಡುವುದನ್ನು ಕೇಳಿಸಿಕೊಂಡಾಗ ಹೆರೋದನು ಹೇಗೆ ಪ್ರತಿಕ್ರಿಯಿಸಿದನು? ಯೋಹಾನನು ಉಪದೇಶ ಮಾಡುವುದನ್ನು ಕೇಳಿಸಿಕೊಂಡ ಹೆರೋದನು ಗಲಿಬಿಲಿ ಗೊಂಡನು, ಆದರೂ ಅವನ ಮಾತನ್ನು ಸಂತೋಷದಿಂದ ಕೇಳಿಸಿಕೊಳ್ಳುತ್ತಿದ್ದನು.
6:23 fzf0 ಹೆರೋದನು ಅಣೆಯಿಟ್ಟು ಹೆರೋದ್ಯಳಿಗೆ ಏನೆಂದು ಮಾತು ಕೊಟ್ಟನು? ಆಕೆ ಏನೇ ಕೇಳಿಕೊಂಡರೂ, ಅರ್ಧ ರಾಜ್ಯವನ್ನೇ ಕೇಳಿಕೊಂಡರೂ ಆಕೆಗೆ ಕೊಡುತ್ತೆನೆಂದು ಹೆರೋದನು ಆಣೆಯಿಟ್ಟು ಹೇಳಿದನು.
6:25 tn2q ಹೆರೋದ್ಯಳು ಏನನ್ನು ಕೇಳಿಕೊಂಡಳು? ಸ್ನಾನಿಕನಾದ ಯೋಹಾನ ತಲೆಯನ್ನು ಪಾರಾತಿನಲ್ಲಿ ಕೊಡಬೇಕೆಂದು ಹೆರೋದ್ಯಳು ಕೇಳಿಕೊಂಡಳು.
6:26 cu47 ಹೆರೋದ್ಯಳ ಕೋರಿಕೆಗೆ ಹೆರೋದನು ಹೇಗೆ ಪ್ರತಿಕ್ರಿಯಿಸಿದನು? ಹೆರೋದನಿಗೆ ಬಹಳ ದು:ಖವಾಯಿತು, ಆದರೂ ಅವನು ಅತಿಥಿಗಳ ಮುಂದೆ ಮಾಡಿದ್ದ ಆಣೆಗಳ ನಿಮಿತ್ತವಾಗಿ ಆಕೆಯ ಕೋರಿಕೆಯನ್ನು ನಿರಾಕರಿಸಲಿಲ್ಲ.
6:33 c20j ಯೇಸು ಮತ್ತು ಅಪೋಸ್ತಲರು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಹೋಗುವುದಕ್ಕೆ ಪ್ರಯತ್ನಿಸುತ್ತಿರುವಾಗ ಏನಾಯಿತು? ಅನೇಕ ಜನರು ಅವರನ್ನು ಗುರುತಿಸಿ ಓಡುತ್ತಾ ಯೇಸು ಮತ್ತು ಅಪೊಸ್ತಲರ ಬರುವುದಕ್ಕೆ ಮೊದಲೇ ಅವರು ಅಲ್ಲಿಗೆ ಬಂದರು.
6:34 mdl0 ಅವರಿಗಾಗಿ ಕಾಯುತ್ತಿದ್ದ ಜನರ ಗುಂಪಿನ ಮೇಲೆ ಯೇಸುವಿನ ಮನೋಭಾವ ಏನಾಗಿತ್ತು? ಅವರು ಕುರುಬನಿಲ್ಲದ ಕುರಿಗಳಂತೆ ಇದ್ದದ್ದರಿಂದ ಯೇಸುವಿಗೆ ಅವರ ಮೇಲೆ ಕನಿಕರಪಟ್ಟನು
6:37 if60 ಯೇಸು ಜನರಿಗೆ ಊಟಕ್ಕೆ ಏನು ಕೊಡಬೇಕೆಂದು ಇದ್ದೀರಿ ಎಂದು ಕೇಳಿದಾಗ ಶಿಷ್ಯರು ಅದರ ಬಗ್ಗೆ ಏನು ಯೋಚಿಸಿದರು? ಅವರು ಹೋಗಿ 200 ದಿನಾರಿನ ಬೆಲೆಯ ರೊಟ್ಟಿಯನ್ನು ಖರೀದಿಸಬೇಕೆಂದು ಶಿಷ್ಯರು ಆಲೋಚಿಸಿದರು.
6:38 o56u ಈಗಾಗಲೇ ಶಿಷ್ಯರ ಬಳಿ ಯಾವ ಆಹಾರವಿತ್ತು? ಈಗಾಗಲೇ ಶಿಷ್ಯರ ಬಳಿ ಐದು ರೊಟ್ಟಿಗಳು ಮತ್ತು ಎರಡು ಮೀನುಗಳು ಇದ್ದವು.
6:41 bqyw ರೊಟ್ಟಿಗಳನ್ನು ಮತ್ತು ಮೀನನ್ನು ತೆಗೆದುಕೊಂಡು ಯೇಸು ಏನು ಮಾಡಿದನು? ರೊಟ್ಟಿಗಳನ್ನು ಮತ್ತು ಮೀನನ್ನು ತೆಗೆದುಕೊಂಡು, ಯೇಸು ಪರಲೋಕದ ಕಡೆಗೆ ನೋಡಿ, ರೊಟ್ಟಿಗಳನ್ನು ಆಶೀರ್ವದಿಸಿ ಮುರಿದು, ಆತನ ಶಿಷ್ಯರಿಗೆ ಕೊಟ್ಟನು.
6:43 zbvh ಎಲ್ಲರೂ ಊಟ ಮಾಡಿದ ನಂತರ ಎಷ್ಟು ಊಟ ಉಳಿದಿತ್ತು? ಎಲ್ಲರೂ ಊಟ ಮಾಡಿದ ನಂತರ 12 ಪುಟ್ಟಿಗಳಷ್ಟು ರೊಟ್ಟಿ, ಮತ್ತು ಮೀನಿನ ತುಂಡುಗಳು ಉಳಿದಿತ್ತು.
6:44 yrio ಎಷ್ಟು ಮಂದಿ ಪುರುಷರಿಗೆ ಊಟ ಬಡಿಸಲಾಯಿತು? 5,000 ಮಂದಿ ಪುರುಷರಿಗೆ ಊಟ ಬಡಿಸಲಾಯಿತು.
6:48 uxae ಸರೋವರದ ಮೇಲೆ ಯೇಸು ಶಿಷ್ಯರ ಬಳಿಗೆ ಹೇಗೆ ಬಂದನು? ಯೇಸು ಸರೋವರದ ಮೇಲೆ ನಡೆದುಕೊಂಡು ಶಿಷ್ಯರ ಬಳಿಗೆ ಬಂದನು.
6:50 j2xz ಅವರು ಆತನನ್ನು ನೋಡಿದಾಗ ಯೇಸು ಶಿಷ್ಯರಿಗೆ ಏನೆಂದು ಹೇಳಿದನು? ಯೇಸು ಶಿಷ್ಯರಿಗೆ ಧೈರ್ಯವಾಗಿರಿ ಭಯಪಡಬೇಡಿರಿ ಎಂದು ಹೇಳಿದನು.
6:52 icdc ರೊಟ್ಟಿಗಳಿಂದ ಆದ ಅದ್ಬುತವನ್ನು ಶಿಷ್ಯರು ಯಾಕೆ ಅರ್ಥಮಾಡಿಕೊಳ್ಳಲಿಲ್ಲ? ರೊಟ್ಟಿಗಳಿಂದ ಆದ ಅದ್ಬುತವನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ ಯಾಕೆಂದರೆ ಅರ್ಥಮಾಡಿಕೊಳ್ಳಲು ಅವರ ಮನಸ್ಸುಗಳು ತುಂಬಾ ಮಂದವಾಗಿದ್ದವು.
6:55 qidu ಆ ಪ್ರದೇಶದ ಜನರು ಯೇಸುವನ್ನು ಗುರುತಿಸಿದ ಮೇಲೆ ಏನು ಮಾಡಿದರು? ಯೇಸು ಎಲ್ಲೆಲ್ಲಿಗೆ ಬರುತ್ತಿದ್ದಾನೆ ಎಂದು ಕೇಳಿಸಿಕೊಂಡ ಜನರು ರೋಗಿಗಳನ್ನು ಡೋಲಿಗಳಲ್ಲಿ ಕರೆದುಕೊಂಡು ಬರುತ್ತಿದ್ದರು.
6:56 nkto ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿದವರಿಗೆ ಏನಾಯಿತು? ಯೇಸುವಿನ ಬಟ್ಟೆಯ ಗೊಂಡೆಯನ್ನು ಮುಟ್ಟಿದವರು ಸ್ವಸ್ಥರಾದರು.
7:2 t05x ಯೇಸುವಿನ ಕೆಲವು ಶಿಷ್ಯರು ಫರಿಸಾಯರು ಮತ್ತು ಶಾಸ್ತ್ರಿಗಳು ಬೇಸರಗೊಳ್ಳುವಂತೆ ಏನು ಮಾಡಿದರು? ಕೆಲವು ಶಿಷ್ಯರು ಕೈಗಳನ್ನು ತೊಳೆಯದೆ ಊಟ ಮಾಡುತ್ತಿದ್ದರು.
7:3-4 ym0v ಊಟ ಮಾಡುವ ಮೊದಲು ಕೈಗಳನ್ನು, ಲೋಟಗಳನ್ನು, ಚೊಂಬುಗಳನ್ನು, ಮತ್ತು ತಾಮ್ರದ ಪಾತ್ರೆಗಳನ್ನು ತೊಳೆಯುವುದು ಯಾರ ಸಂಪ್ರದಾಯವಾಗಿತ್ತು? ಊಟ ಮಾಡುವ ಮೊದಲು ಕೈಗಳನ್ನು, ಲೋಟಗಳನ್ನು, ಚೊಂಬುಗಳನ್ನು, ಮತ್ತು ತಾಮ್ರದ ಪಾತ್ರೆಗಳನ್ನು ತೊಳೆಯುವುದು ಹಿರಿಯರ ಸಂಪ್ರದಾಯವಾಗಿತ್ತು
7:8-9 qrmr ತೊಳೆಯುವ ವಿಷಯದ ಬಗ್ಗೆ ಫರಿಸಾಯರು ಮತ್ತು ಶಾಸ್ತ್ರಿಗಳ ಉಪದೇಶದ ಬಗ್ಗೆ ಯೇಸು ಏನು ಹೇಳಿದನು? ಯೇಸು ಫರಿಸಾಯರು ಮತ್ತು ಶಾಸ್ತ್ರಿಗಳು ಪುರುಷರಿಗೆ ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ಕಲ್ಪಿಸಿದ ನಿಯಮವನ್ನು ಹಿಡಿದಿದ್ದೀರಿ ಎಂದು ಹೇಳಿದನು.
7:11-13 d1yr ನಿಮ್ಮ ತಂದೆ ಮತ್ತು ತಾಯಿಯನ್ನು ಸನ್ಮಾನಿಸಿರಿ ಎಂದು ದೇವರು ಕೊಟ್ಟ ಆಜ್ಞೆಯನ್ನು ಫರಿಸಾಯರು ಮತ್ತು ಶಾಸ್ತ್ರಿಗಳು ಹೇಗೆ ಅಲ್ಲಗಳೆದರು? ಅವರು ತಮ್ಮ ತಂದೆ ತಾಯಿಗೆ ಸಹಾಯಕವಾಗುವಂತೆ ಕೊಡುವ ಹಣವನ್ನು ಕೊರ್ಬಾನಿನಂತೆ ಕೊಡಬೇಕೆಂದು ಜನರಿಗೆ ಹೇಳುತ್ತಾ ದೇವರ ಆಜ್ಞೆಯನ್ನು ಅಲ್ಲಗಳೆದರು.
7:15 nqfn ಒಬ್ಬ ವ್ಯಕ್ತಿಯನ್ನು ಯಾವುದು ಮಲಿನ ಮಾಡುವುದಿಲ್ಲ ಎಂದು ಯೇಸು ಹೇಳಿದನು? ಒಬ್ಬ ವ್ಯಕ್ತಿಯ ಹೊರಗಿನಿಂದ ಬರುವುದು ಅವನೊಳಗೆ ಹೋಗಿ ಅವನನ್ನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು.
7:15 l384 ಒಬ್ಬ ವ್ಯಕ್ತಿಯನ್ನು ಏನು ಮಲಿನ ಮಾಡುತ್ತದೆಂದು ಯೇಸು ಹೇಳಿದನು? ಒಬ್ಬ ವ್ಯಕ್ತಿಯಿಂದ ಹೊರಗೆ ಬರುವಂಥದ್ದು ಅವನನ್ನು ಮಲಿನ ಮಾಡುತ್ತದೆಂದು ಯೇಸು ಹೇಳಿದನು.
7:18-19 gvrq ಒಬ್ಬ ವ್ಯಕ್ತಿಯನ್ನು ಏನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು? ಒಬ್ಬ ವ್ಯಕ್ತಿಯ ಹೊರಗಿರುವಂಥದ್ದು ಅವನನ್ನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು.
7:19 yf7h ಯಾವ ರೀತಿಯ ಆಹಾರಗಳು ಶುದ್ದವಾದವೆಂದು ಯೇಸು ಹೇಳಿದನು? ಎಲ್ಲಾ ಆಹಾರಗಳು ಶುದ್ದವಾದವೆಂದು ಯೇಸು ಹೇಳಿದನು.
7:20-23 w1ic ಒಬ್ಬ ವ್ಯಕ್ತಿಯನ್ನು ಏನು ಮಲಿನ ಮಾಡುತ್ತದೆಂದು ಯೇಸು ಹೇಳಿದನು? ಒಬ್ಬ ವ್ಯಕ್ತಿಯಿಂದ ಹೊರರ ಬರುವಂಥದ್ದು ಅವನನ್ನು ಮಲಿನ ಮಾಡುತ್ತದೆಂದು ಯೇಸು ಹೇಳಿದನು.
7:21-22 t1rz ಒಬ್ಬ ಮನುಷ್ಯನನ್ನು ಮಲಿನ ಮಾಡಲು ಅವನೊಳಗಿನಿಂದ ಬರುವಂಥ ವಿಷಯಗಳು ಯಾವುವು ಎಂದು ಯೇಸು ಹೇಳಿದನು? ದುರಾಲೋಚನೆಗಳು, ಲೈಂಗಿಕ ಅನೈತಿಕತೆ, ಕಳ್ಳತನ, ಕೊಲೆ, ಹಾದರ, ದ್ರವ್ಯಾಶೆ, ಕೆಡಕುತನ, ಮೋಸ, ಬಂಡುತನ, ಹೊಟ್ಟೆಕಿಚ್ಚು, ಬೈಗುಳ, ಸೊಕ್ಕು, ಮತ್ತು ಬುದ್ದಿಗೇಡುತನಗಳು ಒಬ್ಬ ವ್ಯಕ್ತಿಯೊಳಗಿಂದ ಬಂದು ಅವನನ್ನು ಮಲಿನಗೊಳಿಸುತ್ತದೆಂದು ಯೇಸು ಹೇಳಿದನು.
7:25-26 y2wf ದೆವ್ವ ಹಿಡಿದಿದ್ದ ಹುಡುಗಿಯ ತಾಯಿಯು ಯೆಹೂದ್ಯಳೋ ಅಥವಾ ಗ್ರೀಕಳೋ? ದೆವ್ವ ಹಿಡಿದಿದ್ದ ಹುಡುಗಿಯ ತಾಯಿಯು ಗ್ರೀಕಿನವಳಾಗಿದಳು?
7:28 q2o4 ಮಕ್ಕಳ ರೊಟ್ಟಿಗಳನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವುದು ಸರಿಯಲ್ಲವೆಂದು ಯೇಸು ಆಕೆಗೆ ಹೇಳಿದಾಗ ಆ ಹೆಂಗಸು ಹೇಗೆ ಪ್ರತಿಕ್ರಿಯಿಸಿದಳು? ಆ ಹೆಂಗಸು ಮೇಜಿನ ಕೆಳಗಿರುವ ನಾಯಿಗಳೂ ಕೂಡ ಮಕ್ಕಳು ತಿಂದು ಬಿಟ್ಟ ರೊಟ್ಟಿಯ ಚೂರುಗಳನ್ನು ತಿನ್ನುತ್ತವೆಂದು ಹೇಳಿದಳು.
7:29-30 nb1x ಯೇಸು ಆ ಹೆಂಗಸಿಗಾಗಿ ಏನು ಮಾಡಿದನು? ಯೇಸು ಆ ಹೆಂಗಸಿನ ಮಗಳಲ್ಲಿದ್ದ ದೆವ್ವವನ್ನು ಬಿಡಿಸಿದನು.
7:33-34 ca4d ಕಿವುಡು ಮತ್ತು ಮಾತನಾಡುವ ತೊಂದರೆ ಇದ್ದ ಮನುಷ್ಯನನ್ನು ಯೇಸುವಿನ ಬಳಿ ಕರೆದು ತಂದಾಗ, ಅವನನ್ನು ಸ್ವಸ್ಥಮಾಡಲು ಆತನು ಏನು ಮಾಡಿದನು? ಯೇಸು ತನ್ನ ಬೆರಳುಗಳನ್ನು ಮನುಷ್ಯನ ಕಿವಿಯೊಳಗೆ ಇಟ್ಟು, ಉಗುಳಿ, ಅವನ ನಾಲಿಗೆಯನ್ನು ಮುಟ್ಟಿ, ನಂತರ ಪರಲೋಕದ ಕಡೆಗೆ ನೋಡಿ, “ತೆರೆಯಲ್ಪಡಲಿ!” ಎಂದು ಹೇಳಿದನು.
7:36 hc18 ಆತನು ಮಾಡಿದಂತ ಸ್ವಸ್ಥತೆಗಳ ಬಗ್ಗೆ ಹೇಳಬಾರದೆಂದು ಯೇಸು ಅವರಿಗೆ ಹೇಳಿದಾಗ ಜನರು ಏನು ಮಾಡಿದರು? ಯೇಸು ಅವರಿಗೆ ಸುಮ್ಮನೆ ಇರಬೇಕೆಂದು ಹೆಚ್ಚಾಗಿ ಆಜ್ಞಾಪಿಸಿದರೂ, ಅವರುಗಳು ಅದರ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು.
8:1-2 slgu ಯೇಸು ತನ್ನನ್ನು ಹಿಂಬಾಲಿಸುತ್ತಿದ್ದ ದೊಡ್ಡ ಜನರ ಗುಂಪಿನ ಬಗ್ಗೆ ಕಾಳಜಿಯಿಂದ ಏನು ಹೇಳಿದನು? ಯೇಸು ತನ್ನ ಹಿಂಬಾಲಿಸುತ್ತಿದ್ದ ದೊಡ್ಡ ಜನರಗುಂಪಿಗೆ ಊಟಕ್ಕೆ ಏನೂ ಇಲ್ಲವೆಂದು ಕಾಳಜಿಯಿಂದ ಹೇಳಿದನು.
8:5 s9oj ಶಿಷ್ಯರ ಬಳಿ ಎಷ್ಟು ರೊಟ್ಟಿಗಳಿದ್ದವು? ಶಿಷ್ಯರ ಬಳಿಯಲ್ಲಿ ಏಳು ರೊಟ್ಟಿಗಳಿದ್ದವು.
8:6 y5p3 ಶಿಷ್ಯರ ಬಳಿಯಿದ್ದ ರೊಟ್ಟಿಗಳನ್ನು ಯೇಸು ಏನು ಮಾಡಿದನು? ಯೇಸು ಕೃತಜ್ಞತಾ ಸ್ತುತಿ ಸಲ್ಲಿಸಿ, ರೊಟ್ಟಿಗಳನ್ನು ಮುರಿದು, ಅದನ್ನು ಹಂಚುವಂತೆ ಶಿಷ್ಯರಿಗೆ ಕೊಟ್ಟನು.
8:8 ckyo ಎಲ್ಲರೂ ಊಟ ಮಾಡಿದ ನಂತರ ಎಷ್ಟು ಊಟ ಉಳಿದಿತ್ತು? ಎಲ್ಲರೂ ಊಟ ಮಾಡಿದ ನಂತರ ಏಳು ಪುಟ್ಟಿಗಳಷ್ಟು ರೊಟ್ಟಿಗಳು ಉಳಿದಿದ್ದವು.
8:9 h9sm ಎಷ್ಟು ಜನರು ಊಟ ಮಾಡಿ ತೃಪ್ತರಾದರು? ಸುಮಾರು 4,000 ಮಂದಿ ಗಂಡಸರು ಊಟಮಾಡಿ ತೃಪ್ತರಾದರು.
8:11 bo9w ಆತನನ್ನು ಪರೀಕ್ಷಿಸಲು, ಯೇಸು ಏನು ಮಾಡಬೇಕೆಂದು ಫರಿಸಾಯರು ಬಯಸಿದರು? ಯೇಸು ಪರಲೋಕದಿಂದ ಒಂದು ಸೂಚಕಕಾರ್ಯವನ್ನು ಮಾಡುವಂತೆ ಫರಿಸಾಯರು ಬಯಸಿದ್ದರು.
8:15 jt3x ಫರಿಸಾಯರ ವಿಚಾರವಾಗಿ ಯೇಸು ಶಿಷ್ಯರಿಗೆ ಯಾವುದರ ಬಗ್ಗೆ ಎಚ್ಚರಿಸಿದನು? ಫರಿಸಾಯರ ಹುಳಿಹಿಟ್ಟಿನ ವಿಷಯವಾಗಿ ಎಚ್ಚರಿಕೆಯಾಗಿರಬೇಕೆಂದು ಯೇಸು ಶಿಷ್ಯರಿಗೆ ಹೇಳಿದನು.
8:16 fjm2 ಯೇಸು ಯಾವುದರ ಬಗ್ಗೆ ಮಾತನಾಡುತ್ತಿದ್ದಾನೆಂದು ಶಿಷ್ಯರು ಆಲೋಚಿಸಿದರು? ಅವರು ರೊಟ್ಟಿಯನ್ನು ತರಲು ಮರೆತಿರುವುದರ ಬಗ್ಗೆ ಯೇಸು ಮಾತನಾಡುತ್ತಿದ್ದಾನೆಂದು ಶಿಷ್ಯರು ಆಲೋಚಿಸಿದರು.
8:19 nrwx ಯೇಸು ಐದು ರೊಟ್ಟಿಯ ತುಂಡುಗಳನ್ನು ಮುರಿದಾಗ ಏನು ನಡೆಯಿತೆಂದು ಯೇಸು ಶಿಷ್ಯರನ್ನು ನೆನಪಿಸಿದನು? ಆತನು ಐದು ರೊಟ್ಟಿಗಳನ್ನು ಮುರಿದಾಗ, 5,000 ಜನರಿಗೆ ಊಟ ಬಡಿಸಿದನು ಮತ್ತು ಮುರಿದ ತುಂಡುಗಳನ್ನು 12 ಪುಟ್ಟಿಗಳಷ್ಟು ಒಟ್ಟುಗೂಡಿಸಲಾಯಿತೆಂದು ಯೇಸು ಅವರಿಗೆ ನೆನಪಿಸಿದನು.
8:23 lkdf ಕುರುಡನಿಗೆ ಕಣ್ಣು ಕಾಣಿಸುವ ಹಾಗೆ ಮಾಡಲು ಯೇಸು ಮೊದಲು ಯಾವ ಎರಡು ಕಾರ್ಯವನ್ನು ಮಾಡಿದನು? ಮೊದಲು ಯೇಸು ಅವನ ಕಣ್ಣುಗಳ ಮೇಲೆ ಉಗುಳಿ, ಅವನ ಮೇಲೆ ತನ್ನ ಕೈಗಳನ್ನಿಟ್ಟನು.
8:25 w8lo ಆ ಕುರುಡನಿಗೆ ಪೂರ್ಣವಾಗಿ ಕಣ್ಣು ಕಾಣುವ ಹಾಗೆ ಯೇಸು ಯಾವ ಮೂರನೆಯ ಕಾರ್ಯವನ್ನು ಮಾಡಿದನು? ಯೇಸು ತಿರುಗಿ ಅವನ ಕಣ್ಣುಗಳ ಮೇಲೆ ತನ್ನ ಕೈಗಳನ್ನಿಟ್ಟನು.
8:28 scql ಜನರು ಯೇಸುವನ್ನು ಯಾರೆಂದು ಹೇಳುತ್ತಿದ್ದರು? ಜನರು ಯೇಸುವನ್ನು ಸ್ನಾನಿಕನಾದ ಯೋಹಾನನು, ಎಲೀಯನು, ಅಥವಾ ಪ್ರವಾದಿಗಳಲ್ಲಿ ಒಬ್ಬನು ಎಂದು ಹೇಳುತ್ತಿದ್ದರು.
8:29 pf6h ಪೇತ್ರನು ಯೇಸುವನ್ನು ಯಾರೆಂದು ಹೇಳಿದನು? ಯೇಸು ಕ್ರಿಸ್ತನೆಂದು ಪೇತ್ರನು ಹೇಳಿದನು.
8:31 ssr3 ಮುಂದೆ ಆಗುವಂತ ಯಾವ ಘಟನೆಗಳ ಬಗ್ಗೆ ಯೇಸು ಸ್ಪಷ್ಟವಾಗಿ ಆತನ ಶಿಷ್ಯರಿಗೆ ಬೋಧಿಸಲು ಪ್ರಾರಂಭಿಸಿದನು? ಯೇಸು ಆತನ ಶಿಷ್ಯರಿಗೆ ಮನುಷ್ಯ ಕುಮಾರನು ಸಂಕಟನ್ನು ಅನುಭವಿಸಿ, ತಿರಸ್ಕರಿಸಲ್ಪಡಬೇಕು, ಕೊಲ್ಲಲ್ಪಡಬೇಕು, ಮತ್ತು ಮೂರು ದಿನಗಳ ನಂತರ ಎದ್ದೇಳಬೇಕೆಂದು ಬೋಧಿಸಿದನು.
8:33 o8md ಪೇತ್ರನು ಯೇಸುವನ್ನು ಗದರಿಸಲು ಪ್ರಾರಂಭಿಸಿದಾಗ ಯೇಸು ಏನೆಂದು ಹೇಳಿದನು? ಯೇಸು ಪೇತ್ರನಿಗೆ, “ಸೈತಾನನೇ, ನನ್ನ ಮುಂದೆ ನಿಲ್ಲಬೇಡ! ನಡೆ, ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ" ಎಂದು ಹೇಳಿದನು.
8:34 vqyx ಯಾರಾದರೂ ತನ್ನನ್ನು ಹಿಂಬಾಲಿಸಬೇಕಾದರೆ ಅವರು ಏನು ಮಾಡಬೇಕೆಂದು ಯೇಸು ಹೇಳಿದನು? ಯಾರಾದರೂ ತನ್ನನ್ನು ಹಿಂಬಾಲಿಸಬೇಕಾದರೆ ಅವರು ತಮ್ಮನ್ನು ತಾವೇ ಅಲ್ಲಗಳೆಯಬೇಕು, ತನ್ನ ಶಿಲುಬೆಯನ್ನು ಹೊತ್ತುಕೊಂಡು, ತನ್ನನ್ನು ಹಿಂಬಾಲಿಸಬೇಕು ಎಂದು ಯೇಸು ಹೇಳಿದನು.
8:36 eosc ಒಬ್ಬ ವ್ಯಕ್ತಿಯು ಲೋಕದ ವಸ್ತುಗಳನ್ನು ಪಡೆದುಕೊಳ್ಳುವ ಬಯಕೆಯ ಬಗ್ಗೆ ಯೇಸು ಏನು ಹೇಳಿದನು? ಯೇಸು, “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣ ನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” ಎಂದು ಹೇಳಿದನು.
8:38 fczm ಯೇಸುವಿನ ಬಗ್ಗೆ ಮತ್ತು ಆತನ ಮಾತುಗಳ ಬಗ್ಗೆ ನಾಚಿಕೆ ಪಡುವವರ ಬಗ್ಗೆ ಯೇಸು ಏನು ಹೇಳಿದನು? ಯೇಸು ತನ್ನ ಬರೋಣದಲ್ಲಿ ತನ್ನನ್ನೂ ತನ್ನ ಮಾತುಗಳನ್ನೂ ನೋಡಿ ನಾಚಿಕೆಪಡುವವರನ್ನು ನಾಚಿಕೆಗೆ ಒಳಪಡಿಸುವನೆಂದು ಹೇಳಿದನು.
9:1 ryud ದೇವರ ರಾಜ್ಯವು ಶಕ್ತಿಯಿಂದ ಬರುವುದನ್ನು ಯಾರು ನೋಡುವರು ಎಂದು ಯೇಸು ಹೇಳಿದನು? ಯೇಸುವಿನೊಂದಿಗೆ ಅಲ್ಲಿ ನಿಂತಿದ್ದ ಕೆಲವರು ದೇವರ ರಾಜ್ಯವು ಶಕ್ತಿಯಿಂದ ಬರುವುದನ್ನು ನೋಡುವವರೆಗೂ ಅವರು ಸಾಯುವುದಿಲ್ಲ ಎಂದನು.
9:2-3 j5nw ಯೇಸುವಿನೊಂದಿಗೆ ಪೇತ್ರ, ಯಾಕೋಬ, ಯೋಹಾನರು ಎತ್ತರವಾದ ಬೆಟ್ಟಕ್ಕೆ ಹೋದಾಗ ಯೇಸುವಿಗೆ ಏನಾಯಿತು? ಯೇಸುವಿನ ರೂಪವು ಬದಲಾಯಿತು ಮತ್ತು ಆತನ ಉಡುಪುಗಳು ಬೆಳ್ಳಗೆ ಮಿನುಗುತ್ತಿದ್ದವು.
9:4 hssp ಬೆಟ್ಟದ ಮೇಲೆ ಯೇಸುವಿನೊಂದಿಗೆ ಯಾರು ಮಾತನಾಡುತ್ತಿದ್ದರು? ಎಲೀಯನೂ ಮೋಶೆಯೂ ಯೇಸುವಿನೊಂದಿಗೆ ಮಾತನಾಡುತ್ತಿದ್ದರು.
9:7 gnw6 ಬೆಟ್ಟದ ಮೇಲೆ, ಮೋಡದೊಳಗಿನಿಂದ ಬಂದ ಸ್ವರವು ಏನೆಂದು ಹೇಳಿತು? ಆ ಸ್ವರವು, “ಈತನು ನನ್ನ ಪ್ರಿಯ ಮಗನು. ಆತನ ಮಾತನ್ನು ಕೇಳಿರಿ” ಎಂದು ಹೇಳಿತು.
9:9 wh06 ಬೆಟ್ಟದ ಮೇಲೆ ಅವರು ನೋಡಿದ್ದರ ಬಗ್ಗೆ ಯೇಸು ಶಿಷ್ಯರಿಗೆ ಏನೆಂದು ಆಜ್ಞಾಪಿಸಿದನು? ಮನುಷ್ಯ ಕುಮಾರನು ಮರಣದಿಂದ ಎದ್ದು ಬರುವವರೆಗೂ ಅವರು ನೋಡಿದ್ದನ್ನು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದನು.
9:11-13 ct8y ಎಲೀಯನ ಬರುವಿಕೆಯ ಬಗ್ಗೆ ಯೇಸು ಏನೆಂದು ಹೇಳಿದನು? ಎಲೀಯನು ಮೊದಲು ಬಂದು ಎಲ್ಲವನ್ನು ಪುನ:ಸ್ಥಾಪಿಸುತ್ತಾನೆ, ಮತ್ತು ಎಲೀಯನು ಈಗಾಗಲೇ ಬಂದಿದ್ದಾನೆ ಎಂದು ಯೇಸು ಹೇಳಿದನು.
9:17-18 tzbr ತಂದೆ ಮತ್ತು ಅವನ ಮಗನಿಗೆ ಶಿಷ್ಯರು ಏನನ್ನು ಮಾಡಲು ಆಗಲಿಲ್ಲ? ಆ ತಂದೆಯ ಮಗನಿಂದ ದುರಾತ್ಮವನ್ನು ಬಿಡಿಸಲು ಶಿಷ್ಯರಿಗೆ ಆಗಲಿಲ್ಲ.
9:22 ifim ದುರಾತ್ಮವು ಆ ಹುಡುಗನನ್ನು ಬಿಳಿಸಿ ಅವನನ್ನು ನಾಶಮಾಡುವುದಕ್ಕಾಗಿ ಏನು ಮಾಡಿತು? ದುರಾತ್ಮವು ಆ ಹುಡುಗನನ್ನು ಬೆಂಕಿಯ ಒಳಗೆ ಅಥವಾ ನೀರಿನ ಒಳಗೆ ಬಿಳಿಸಿ ಅವನನ್ನು ನಾಶಮಾಡಲು ಪ್ರಯತ್ನಿಸಿತು.
9:23-24 ay7z ಯಾರು ನಂಬುತ್ತಾರೋ ಅವರಿಗೆ ಎಲ್ಲವೂ ಸಾಧ್ಯವೆಂದು ಯೇಸು ಹೇಳಿದಾಗ ತಂದೆಯು ಹೇಗೆ ಪ್ರತಿಕ್ರಿಯಿಸಿದನು? “ನಾನು ನಂಬುತ್ತೇನೆ! ನನ್ನ ಅಪನಂಬಿಕೆಗೆ ಸಹಾಯ ಮಾಡಿ!” ಎಂದು ತಂದೆಯು ಪ್ರತಿಕ್ರಿಯಿಸಿದನು.
9:28-29 uh6o ಹುಡುಗನ ಒಳಗೆ ಇದ್ದ ಮೂಕ ಮತ್ತು ಕಿವುಡು ಆತ್ಮವನ್ನು ಶಿಷ್ಯರಿಂದ ಬಿಡಿಸಲು ಯಾಕೆ ಆಗಲಿಲ್ಲ? ಶಿಷ್ಯರಿಂದ ಆತ್ಮವನ್ನು ಬಿಡಿಸಲು ಸಾಧ್ಯವಾಗಲಿಲ್ಲ ಯಾಕೆಂದರೆ ಪ್ರಾರ್ಥನೆಯಿಂದ ಹೊರತು ಮತ್ತಾವುದರಿಂದಲೂ ಅದನ್ನು ಬಿಡಿಸಲು ಆಗುವುದಿಲ್ಲ.
9:31 uvpd ಆತನಿಗೆ ಏನಾಗುತ್ತದೆ ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು? ತನ್ನನ್ನು ಮರಣಕ್ಕೆ ಕೊಲ್ಲಲ್ಲುವರು, ಆಮೇಲೆ ಮೂರು ದಿನಗಳ ನಂತರ ತಾನು ತಿರುಗಿ ಎದ್ದು ಬರುವೆನು ಎಂದು ಯೇಸು ಅವರಿಗೆ ಹೇಳಿದನು.
9:33-34 q8mj ದಾರಿಯುದ್ದಕ್ಕೂ ಶಿಷ್ಯರು ಯಾವುದರ ಬಗ್ಗೆ ವಾದ ಮಾಡುತ್ತಿದ್ದರು? ಅವರುಗಳೊಳಗೆ ಯಾರು ದೊಡ್ಡವರು ಎಂಬುದರ ಬಗ್ಗೆ ಶಿಷ್ಯರು ವಾದ ಮಾಡುತ್ತಿದ್ದರು.
9:35 xnwc ಯಾರು ಮೊದಲಿನವರು ಎಂದು ಯೇಸು ಹೇಳಿದನು? ಎಲ್ಲರಿಗೂ ಸೇವಕನಾದವನೇ ಮೊದಲಿನವನು ಎಂದು ಯೇಸು ಹೇಳಿದನು.
9:36-37 d095 ಯಾರಾದರೂ ಯೇಸುವಿನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿದರೆ, ಅವರು ಯಾರನ್ನು ಸ್ವೀಕರಿಸಿದಂತೆ ಆಗುತ್ತದೆ? ಯಾರಾದರೂ ಯೇಸುವಿನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿದರೆ, ಅವರೂ ಯೇಸುವನ್ನು ಮತ್ತು ಯೇಸುವನ್ನು ಕಳುಹಿಸಿಕೊಟ್ಟವನನ್ನು ಸ್ವೀಕರಿಸಿದಂತೆ ಆಗುವುದು.
9:42 xm92 ಯೇಸುವನ್ನು ನಂಬುವ ಚಿಕ್ಕವನನ್ನು ಎಡವಿಬೀಳುವಂತೆ ಮಾಡುವವನಿಗೆ ಉತ್ತಮವಾದದು ಯಾವುದು? ಅವನ ಕುತ್ತಿಗೆಯ ಸುತ್ತಲೂ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರಕ್ಕೆ ಎಸೆಯುವುದೇ ಉತ್ತಮವಾದದು.
9:47 qvrv ನಿಮ್ಮ ಕಣ್ಣು ನಿಮ್ಮನ್ನು ಎಡವುವಂತೆ ಮಾಡಿದರೆ ಏನು ಮಾಡಬೇಕೆಂದು ಯೇಸು ಹೇಳಿದನು? ನಿಮ್ಮ ಕಣ್ಣು ನಿಮ್ಮನ್ನು ಎಡವುವಂತೆ ಮಾಡಿದರೆ ನಿಮ್ಮ ಕಣ್ಣನ್ನು ಕಿತ್ತು ಬಿಸಾಡಿರಿ ಎಂದು ಯೇಸು ಹೇಳಿದನು.
9:48 l2p2 ನರಕದಲ್ಲಿ ಏನಾಗುತ್ತದೆ ಎಂದು ಯೇಸು ಹೇಳಿದನು? ನರಕದಲ್ಲಿ ಹುಳಗಳು ಸಾಯುವುದಿಲ್ಲ, ಮತ್ತು ಬೆಂಕಿಯು ಆರಿ ಹೋಗುವುದಿಲ್ಲ ಎಂದು ಯೇಸು ಹೇಳಿದನು.
10:2 tk8r ಯೇಸುವನ್ನು ಪರೀಕ್ಷಿಸಲು ಫರಿಸಾಯರು ಆತನನ್ನು ಯಾವ ಪ್ರಶ್ನೆಯನ್ನು ಕೇಳಿದರು? ಗಂಡನು ತನ್ನ ಹೆಂಡತಿಗೆ ವಿಚ್ಚೇದನ ಕೊಡುವುದು ಶಾಸ್ತ್ರಸಮ್ಮತವೋ ಎಂದು ಫರಿಸಾಯರು ಯೇಸುವನ್ನು ಕೇಳಿದರು.
10:4 p0nl ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಕೊಟ್ಟ ಆಜ್ಞೆ ಏನು? ಒಬ್ಬ ಮನುಷ್ಯನು ವಿಚ್ಚೇದನದ ಪತ್ರವನ್ನು ಬರೆದು ಕೊಟ್ಟು ಆಮೇಲೆ ಅವನ ಹೆಂಡತಿಯನ್ನು ಕಳುಹಿಸಬಿಡುವುದಕ್ಕೆ ಮೋಶೆಯು ಅವಕಾಶ ಕೊಟ್ಟನು.
10:5 cuwg ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಏಕೆ ಈ ಆಜ್ಞೆಯನ್ನು ಕೊಟ್ಟನು? ಅವರ ಹೃದಯಗಳು ಕಠಿಣವಾಗಿದ್ದರಿಂದ ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಈ ಆಜ್ಞೆಯನ್ನು ಕೊಟ್ಟನು
10:6 b18w ವಿವಾಹದ ಮೂಲ ಸಂಕಲ್ಪದ ಬಗ್ಗೆ ಯೇಸು ಫರಿಸಾಯರಿಗೆ ಹೇಳುವಾಗ ಯಾವ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸಿದನು? ಯೇಸು ವಿವಾಹದ ಕುರಿತಾದ ದೇವರ ಮೂಲ ಸಂಕಲ್ಪದ ಬಗ್ಗೆ ಹೇಳುವಾಗ ಆದಿಯಲ್ಲಿ ಗಂಡು ಮತ್ತು ಹೆಣ್ಣಿನ ಸೃಷ್ಟಿಯ ಬಗ್ಗೆ ಉಲ್ಲೇಖಿಸಿದನು.
10:7-8 lkz2 ಗಂಡು ಮತ್ತು ಹೆಣ್ಣು ಇಬ್ಬರೂ ವಿವಾಹವಾದಾಗ ಏನು ಆಗುತ್ತಾರೆಂದು ಯೇಸು ಹೇಳಿದನು? ಇಬ್ಬರೂ ಒಂದೇ ದೇಹವಾಗುವರು ಎಂದು ಯೇಸು ಹೇಳಿದನು.
10:9 bxgt ವಿವಾಹ ಕಾರ್ಯದಲ್ಲಿ ದೇವರು ಏನನ್ನು ಒಟ್ಟುಗೂಡಿಸಿದ್ದಾನೆಂದು ಯೇಸು ಹೇಳಿದನು? ದೇವರು ಕೂಡಿಸಿದ್ದನ್ನು, ಮನುಷ್ಯನು ಅಗಲಿಸಬಾರದೆಂದು ಯೇಸು ಹೇಳಿದನು.
10:13-14 ftqq ಚಿಕ್ಕ ಮಕ್ಕಳನ್ನು ಆತನ ಬಳಿಗೆ ಕರೆದುಕೊಂಡು ಬರುತ್ತಿರುವವರನ್ನು ಶಿಷ್ಯರು ಗದರಿಸಿದಾಗ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಯೇಸು ಶಿಷ್ಯರ ಮೇಲೆ ಕೋಪಗೊಂಡು ಮತ್ತು ಅವರಿಗೆ ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಲು ಬಿಡಿರಿ ಎಂದು ಅವರಿಗೆ ಹೇಳಿದನು.
10:15 s8f7 ದೇವರ ರಾಜ್ಯದೊಳಗೆ ಪ್ರವೇಶಿಸಲು ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಯೇಸು ಹೇಳಿದನು? ದೇವರ ರಾಜ್ಯವನ್ನು ಪ್ರವೇಶಿಸಲು ಚಿಕ್ಕ ಮಕ್ಕಳನ್ನು ಸ್ವೀಕರಿಸುವಂತೆ ಅದನ್ನು ಸ್ವೀಕರಿಸಬೇಕು ಎಂದು ಯೇಸು ಹೇಳಿದನು.
10:19 slbl ಒಬ್ಬ ಮನುಷ್ಯನು ನಿತ್ಯಜೀವವನ್ನು ಪಡೆಯಲು ಮೊದಲು ಏನು ಮಾಡಬೇಕೆಂದು ಯೇಸು ಹೇಳಿದನು? ನರಹತ್ಯ ಮಾಡಬಾರದು; ವ್ಯಭಿಚಾರಮಾಡಬಾರದು; ಕದಿಯಬಾರದು; ಸುಳ್ಳುಸಾಕ್ಷಿ ಹೇಳಬಾರದು; ಮೋಸಮಾಡಬಾರದು; ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂದು ಯೇಸು ಹೇಳಿದನು.
10:21 h1nt ಯೇಸು ಮನುಷ್ಯನಿಗೆ ಯಾವ ಹೆಚ್ಚಿನ ಆಜ್ಞೆಯನ್ನು ಕೊಟ್ಟನು? ಮನುಷ್ಯನನ್ನು ಅವನಲ್ಲಿರುವುದನ್ನೆಲ್ಲಾ ಮಾರಿ ತನ್ನನ್ನು ಹಿಂಬಾಲಿಸುವಂತೆ ಯೇಸು ಆಜ್ಞಾಪಿಸಿದನು.
10:22 r5hj ಯೇಸು ಈ ಆಜ್ಞೆಯನ್ನು ಕೊಟ್ಟಾಗ, ಆ ಮನುಷ್ಯನು ಹೇಗೆ ಮತ್ತು ಯಾಕೆ ಪ್ರತಿಕ್ರಿಯಿಸಿದನು? ಆ ಮನುಷ್ಯನು ಬಹಳ ಆಸ್ತಿಯುಳ್ಳವನಾಗಿದ್ದದರಿಂದ ಈ ಮಾತಿಗೆ ದುಃಖಿತನಾಗಿ ಹೊರಟುಹೋದನು.
10:23-25 fn0b ಯಾರಿಗೆ ದೇವರ ರಾಜ್ಯವನ್ನು ಪ್ರವೇಶಿಸಲು ಬಹಳ ಕಷ್ಟವೆಂದು ಯೇಸು ಹೇಳಿದನು? ದೇವರ ರಾಜ್ಯವನ್ನು ಪ್ರವೇಶಿಸಲು ಶ್ರೀಮಂತನಿಗೆ ಬಹಳ ಕಷ್ಟವೆಂದು ಯೇಸು ಹೇಳಿದನು.
10:26-27 a2pr ಶ್ರೀಮಂತನೂ ಕೂಡ ಹೇಗೆ ರಕ್ಷಿಸಲ್ಪಡಬಹುದು ಎಂದು ಯೇಸು ಹೇಳಿದನು? ಮನುಷ್ಯರಿಗೆ ಅದು ಅಸಾಧ್ಯ, ಆದರೆ ದೇವರಿಗೆ ಎಲ್ಲವೂ ಸಾಧ್ಯವೆಂದು ಯೇಸು ಹೇಳಿದನು.
10:29-30 ut0n ಯೇಸುವಿನ ನಿಮಿತ್ತ ಮನೆಯನ್ನಾಗಲಿ ಕುಟುಂಬವನ್ನಾಗಲಿ ಮತ್ತು ಭೂವಿುಯನ್ನಾಗಲಿ ಬಿಟ್ಟುಬಿಟ್ಟಿರುವವನು ಏನನ್ನು ಸ್ವೀಕರಿಸುತ್ತಾನೆಂದು ಯೇಸು ಹೇಳಿದನು? ಅವರು ಈ ಲೋಕದಲ್ಲಿ ನೂರು ಪಟ್ಟು ಹೆಚ್ಚಿನದನ್ನು, ಹಿಂಸೆಗಳೊಂದಿಗೆ ಹೊಂದಿಕೊಳ್ಳುವರು ಮತ್ತು ಮುಂದಿನ ಲೋಕದಲ್ಲಿ ನಿತ್ಯಜೀವವನ್ನು ಪಡೆಯುತ್ತಾರೆ ಎಂದು ಯೇಸು ಹೇಳಿದನು.
10:32 t4vq ಯೇಸು ಮತ್ತು ಆತನ ಶಿಷ್ಯರು ಯಾವ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರು? ಯೇಸು ಮತ್ತು ಆತನ ಶಿಷ್ಯರು ಯೆರೂಸಲೇಮಿಗೆ ಹೋಗುವ ದಾರಿಯಲ್ಲಿ ಪ್ರಯಾಣ ಮಾಡುತ್ತಿದ್ದರು.
10:33-34 ie59 ಯೆರೂಸಲೇಮಿನಲ್ಲಿ ತನಗೆ ಏನು ಆಗುತ್ತದೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು? ತನಗೆ ಮರಣದಂಡನೆಯನ್ನು ವಿಧಿಸುವರು ಮತ್ತು ಅನ್ಯರ ಕೈಗೆ ಒಪ್ಪಿಸುವರು ಎಂದು ಯೇಸು ಶಿಷ್ಯರಿಗೆ ಹೇಳಿದನು.
10:35-37 mu7d ಯಾಕೋಬ ಮತ್ತು ಯೋಹಾನ ಯೇಸುವಿಗೆ ಏನೆಂದು ಮನವಿ ಮಾಡಿದರು? ಯಾಕೋಬ ಮತ್ತು ಯೋಹಾನನು ಒಬ್ಬನು ಯೇಸುವಿನ ಮಹಿಮೆಯಲ್ಲಿ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಮಾಡಬೇಕೆಂದು ಮನವಿ ಮಾಡಿಕೊಂಡರು.
10:39 xafk ಯಾಕೋಬ ಮತ್ತು ಯೋಹಾನನು ಏನನ್ನು ಅನುಭವಿಸುತ್ತಾರೆಂದು ಯೇಸು ಹೇಳಿದನು? ಯಾಕೋಬ ಮತ್ತು ಯೋಹಾನರು ಯೇಸು ಕುಡಿಯುವ ಪಾತ್ರೆಯಲ್ಲಿ ಕುಡಿಯುವರು; ಯೇಸುವಿಗೆ ಆಗುವ ದೀಕ್ಷಾಸ್ನಾನವು ಅವರಿಗೆ ಆಗುವದು ಎಂದು ಯೇಸು ಹೇಳಿದನು.
10:40 vd45 ಯಾಕೋಬ ಮತ್ತು ಯೋಹಾನರ ಮನವಿಯನ್ನು ಯೇಸು ಅನುಗ್ರಹಿಸಿದನೇ? ಇಲ್ಲ. ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಅನುಗ್ರಹಮಾಡುವದು ನನ್ನದಲ್ಲವೆಂದು ಯೇಸು ಹೇಳಿದನು.
10:42 m3q4 ಅನ್ಯಜನರ ಅಧಿಪತಿಗಳು ತಮ್ಮ ಅಧೀನದಲ್ಲಿ ಇರುವವರೊಂದಿಗೆ ಹೇಗೆ ವರ್ತಿಸುತ್ತಾರೆಂದು ಯೇಸು ಹೇಳಿದನು? ಅನ್ಯಜನರ ಅಧಿಪತಿಗಳು ತಮ್ಮ ಅಧೀನದಲ್ಲಿರುವವರ ಮೇಲೆ ದೊರೆತನ ಮಾಡುವರೆಂದು ಯೇಸು ಹೇಳಿದನು.
10:43-44 yky8 ಶಿಷ್ಯರಲ್ಲಿ ದೊಡ್ಡವರಾಗಬೇಕೆಂದು ಯಾರು ಬಯಸುತ್ತಾರೋ ಅವರು ಹೇಗೆ ಜೀವಿಸಬೇಕೆಂದು ಯೇಸು ಹೇಳಿದನು? ಶಿಷ್ಯರಲ್ಲಿ ದೊಡ್ಡವರಾಗಬೇಕೆಂದು ಯಾರು ಬಯಸುತ್ತಾರೋ ಅವರು ಎಲ್ಲರಿಗೂ ಸೇವಕರಾಗಿರಬೇಕೆಂದು ಯೇಸು ಹೇಳಿದನು.
10:48 ece0 ಕುರುಡನಾಗಿದ್ದ ಬಾರ್ತಿಮಾಯನನ್ನು ಅನೇಕರು ಸುಮ್ಮನೆ ಇರುವಂತೆ ಹೇಳಿ ಗದರಿಸುತ್ತಿರುವಾಗ ಅವನು ಏನು ಮಾಡಿದನು? “ದಾವೀದ ಕುಮಾರನೇ, ನನ್ನನ್ನು ಕರುಣಿಸು!” ಎಂದು ಬಾರ್ತಿಮಾಯನು ಗಟ್ಟಿಯಾಗಿ ಕೂಗಿದನು.
10:52 rato ಕುರುಡನಾಗಿದ್ದ ಬಾರ್ತಿಮಾಯನಿಗೆ ಸ್ವಸ್ಥತೆಯನ್ನುಂಟು ಮಾಡಿದ್ದು ಯಾವುದೆಂದು ಯೇಸು ಹೇಳಿದನು? ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು ಎಂದು ಯೇಸು ಬಾರ್ತಿಮಾಯನಿಗೆ ಹೇಳಿದನು.
11:2 agr2 ಯೇಸು ತನ್ನ ಇಬ್ಬರು ಶಿಷ್ಯರಿಗೆ ಅವರಿಗೆ ಎದುರಿಗಿದ್ದ ಹಳ್ಳಿಗೆ ಏನು ಮಾಡಲು ಕಳುಹಿಸಿದನು? ಯೇಸು ಅವರನ್ನು ಯಾರೂ ಕುಳಿತಿರದ ಕತ್ತೆಮರಿಯನ್ನು ಕರೆತರಲು ಕಳುಹಿಸಿದನು.
11:5-6 u8he ಶಿಷ್ಯರು ಕತ್ತೆಮರಿಯನ್ನು ಬಿಚ್ಚಿದಾಗ ಏನಾಯಿತು? ಕೆಲವು ಜನರು, ನೀವು ಏನು ಮಾಡುತ್ತಾ ಇದ್ದೀರಿ ಎಂದು ಶಿಷ್ಯರನ್ನು ಕೇಳಿದರು, ಹಾಗಾಗಿ ಯೇಸು ಹೇಳಿದಂತೆಯೇ ಅವರು ಹೇಳಿದರು, ಮತ್ತು ಆಗ ಜನರು ಅವರನ್ನು ತೆಗೆದುಕೊಂಡು ಹೋಗಲು ಬಿಟ್ಟರು.
11:8 cgd8 ಯೇಸು ಕತ್ತೆ ಮರಿಯನ್ನು ಹತ್ತಿ ದಾರಿಯಲ್ಲಿ ಹೋಗುತ್ತಿರುವಾಗ ಜನರು ದಾರಿಯ ಮೇಲೆ ಏನನ್ನು ಹಾಸಿದರು? ಜನರು ದಾರಿಯ ಮೇಲೆ ತಮ್ಮ ಬಟ್ಟೆಗಳನ್ನು ಮತ್ತು ಹೊಲದಿಂದ ಕತ್ತರಿಸಿಕೊಂಡು ಬಂದ ಕೊಂಬೆಗಳನ್ನು ಹಾಸಿದರು.
11:10 vfq1 ಯೇಸು ಯೆರೂಸಲೇಮಿನ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಜನರು ಯಾವ ರಾಜ್ಯವು ಬರುತ್ತದೆಂದು ಕೂಗುತ್ತಿದ್ದರು? ಜನರು ತಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆಂದು ಕೂಗುತ್ತಿದ್ದರು.
11:11 pj8s ಯೇಸು ದೇವಾಲಯದ ಅಂಗಳಕ್ಕೆ ಸೇರಿದಾಗ ಏನು ಮಾಡಿದನು? ಯೇಸು ಸುತ್ತಲೂ ನೋಡಿದನು ಮತ್ತು ಬೇಥಾನ್ಯಕ್ಕೆ ಹೋದನು.
11:14 qg7e ಹಣ್ಣು ಇಲ್ಲದಿರುವ ಅಂಜೂರದ ಮರವನ್ನು ನೋಡಿದಾಗ ಯೇಸು ಏನು ಮಾಡಿದನು? ಯೇಸು ಅಂಜೂರದ ಮರಕ್ಕೆ, “ನಿನ್ನಿಂದ ಯಾರೂ ಎಂದಿಗೂ ಹಣ್ಣನ್ನು ತಿನ್ನುವುದಿಲ್ಲ” ಎಂದು ಹೇಳಿದನು.
11:15-16 pbr1 ಈ ಸಮಯದಲ್ಲಿ ಯೇಸು ದೇವಾಲಯದ ಅಂಗಳಕ್ಕೆ ಸೇರಿದಾಗ ಯೇಸು ಏನು ಮಾಡಿದನು? ಯೇಸು ಮಾರುತ್ತಿದ್ದವರನ್ನೂ ಮತ್ತು ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಿದನು ಮತ್ತು ದೇವಾಲಯದ ಮೂಲಕ ಸರಕುಗಳನ್ನು ತೆದುಕೊಂಡು ಹೋಗಲು ಬಿಡಲಿಲ್ಲ.
11:17 dgql ಪವಿತ್ರಗ್ರಂಥದ ಪ್ರಕಾರ ದೇವಾಲಯವು ಏನಾಗಿರಬೇಕೆಂದು ಯೇಸು ಹೇಳಿದನು? ಎಲ್ಲಾ ದೇಶಗಳಿಗೂ ದೇವಾಲಯವು ಪ್ರಾರ್ಥನಾ ಮಂದಿರವಾಗಿರಬೇಕೆಂದು ಯೇಸು ಹೇಳಿದನು.
11:17 hpgp ಮುಖ್ಯ ಯಾಜಕರೂ ಶಾಸ್ತ್ರಿಗಳೂ ದೇವಾಲಯವನ್ನು ಏನು ಮಾಡಿದ್ದಾರೆಂದು ಯೇಸು ಹೇಳಿದನು? ಅವರು ದೇವಾಲಯವನು ಕಳ್ಳರ ಗವಿಯನ್ನಾಗಿ ಮಾಡಿದ್ದಾರೆಂದು ಯೇಸು ಹೇಳಿದನು.
11:18 x7nj ಮುಖ್ಯ ಯಾಜಕರೂ ಶಾಸ್ತ್ರಿಗಳೂ ಯೇಸುವಿಗೆ ಏನು ಮಾಡಬೇಕೆಂದು ಪ್ರಯತ್ನಿಸುತ್ತಿದ್ದರು? ಮುಖ್ಯ ಯಾಜಕರೂ ಮತ್ತು ಶಾಸ್ತ್ರಿಗಳೂ ಯೇಸುವನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದರು.
11:20 geb7 ಯೇಸು ನುಡಿದಂತ ಅಂಜೂರದ ಮರಕ್ಕೆ ಏನಾಯಿತು? ಯೇಸು ನುಡಿದಂತ ಅಂಜೂರದ ಮರವು ಬೇರು ಸಮೇತ ಒಣಗಿ ಹೋಗಿತ್ತು.
11:24 okwn ಪ್ರಾರ್ಥನೆಯಲ್ಲಿ ನಾವು ಕೇಳುವ ಪ್ರತಿಯೊಂದಕ್ಕೂ ಏನಾಗುತ್ತದೆಂದು ಯೇಸು ಹೇಳಿದನು? ಪ್ರಾರ್ಥನೆಯಲ್ಲಿ ನಾವು ಬೇಡಿಕೊಳ್ಳುವ ಎಲ್ಲವು ಸಿಕ್ಕಿದೆ, ಮತ್ತು ಅದು ನಮ್ಮದಾಗಿರುತ್ತದೆ ಎಂದು ಯೇಸು ಹೇಳಿದನು.
11:25 udpr ಪರಲೋಕದಲ್ಲಿರುವ ನಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವಂತೆ ನಾವು ಏನು ಮಾಡಬೇಕೆಂದು ಯೇಸು ಹೇಳಿದನು? ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ ಆಗ ಪರಲೋಕದಲ್ಲಿರುವ ತಂದೆಯು ಸಹ ನಮ್ಮ ತಪ್ಪುಗಳನ್ನು ಕ್ಷಮಿಸುವನು ಎಂದು ಯೇಸು ಹೇಳಿದನು.
11:27-28 y3u8 ದೇವಾಲಯದಲ್ಲಿ, ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರು ಯೇಸುವಿನಿಂದ ಏನನ್ನು ತಿಳಿದುಕೊಳ್ಳಲು ಬಯಸಿದ್ದರು? ಆತನು ಮಾಡುತ್ತಿದ್ದ ಕೆಲಸಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದಾನೆಂದು ತಿಳಿದುಕೊಳ್ಳಲು ಬಯಸಿದ್ದರು.
11:29-30 cdce ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರನ್ನು ಯೇಸು ಯಾವ ಪ್ರಶ್ನೆಯನ್ನು ಕೇಳಿದನು? ಯೋಹಾನನಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಪರಲೋಕದಿಂದಲೋ ಅಥವಾ ಮನುಷ್ಯರಿಂದಲೋ ಬಂದಿತೋ ಎಂದು ಯೇಸು ಅವರನ್ನು ಕೇಳಿದನು.
11:31 qfb1 ಯೋಹಾನನ ದೀಕ್ಷಾಸ್ನಾನವು ಪರಲೋಕದಿಂದ ಬಂದದ್ದು ಎಂದು ಉತ್ತರಿಸಲು ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರಿಗೆ ಏಕೆ ಇಷ್ಟವಿರಲಿಲ್ಲ? ಯಾಕೆಂದರೆ ಯೋಹಾನನನ್ನು ಅವರು ಏಕೆ ನಂಬಲಿಲ್ಲವೆಂದು ಯೇಸು ಕೇಳುತ್ತಾನೆಂದು ಈ ಉತ್ತರವನ್ನು ಕೊಡಲು ಅವರಿಗೆ ಇಷ್ಟವಿರಲಿಲ್ಲ.
11:32 zg5i ಯೋಹಾನನ ದೀಕ್ಷಾಸ್ನಾನವು ಮನುಷ್ಯರಿಂದ ಬಂದದ್ದು ಎಂದು ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರಿಗೆ ಉತ್ತರಿಸಲು ಏಕೆ ಇಷ್ಟವಿರಲಿಲ್ಲ? ಅವರಿಗೆ ಈ ಉತ್ತರವನ್ನು ಕೊಡಲು ಇಷ್ಟವಿರಲಿಲ್ಲ ಯಾಕೆಂದರೆ ಅವರು ಜನರಿಗೆ ಹೆದರಿದರು, ಜನರೆಲ್ಲರು ಯೋಹಾನನನ್ನು ಪ್ರವಾದಿಯೆಂದು ನಂಬಿದ್ದರು.
12:1 k9g4 ದ್ರಾಕ್ಷೇ ತೋಟವನ್ನು ಬೆಳೆಸಿ ಅದನ್ನು ವಾರಕ್ಕೆ ಕೊಟ್ಟ ನಂತರ, ಯಜಮಾನನು ಏನು ಮಾಡಿದನು? ದ್ರಾಕ್ಷೇ ತೋಟವನ್ನು ಬೆಳೆಸಿ ಅದನ್ನು ವಾರಕ್ಕೆಕೊಟ್ಟ ನಂತರ, ಯಜಮಾನನು ಬೇರೆ ದೇಶಕ್ಕೆ ಹೋದನು.
12:5 qm75 ದ್ರಾಕ್ಷೇ ತೋಟದ ಫಲವನ್ನು ತೆಗೆದುಕೊಳ್ಳಲು ಯಜಮಾನನು ಕಳುಹಿಸಿದ ಅನೇಕ ಸೇವಕರಿಗೆ ದ್ರಾಕ್ಷೇ ತೋಟಗಾರರು ಏನು ಮಾಡಿದರು? ದ್ರಾಕ್ಷೇ ತೋಟಗಾರರು ಕೆಲವರಿಗೆ ಹೊಡೆದರು ಮತ್ತು ಅನೇಕ ಸೇವಕರುಗಳನ್ನು ಕೊಂದರು.
12:6 p7p2 ಯಜಮಾನನು ಕೊನೆಯದಾಗಿ ದ್ರಾಕ್ಷೇ ತೋಟಗಾರರ ಹತ್ತಿರ ಯಾರನ್ನು ಕಳುಹಿಸಿದನು? ಯಜಮಾನನು ಕೊನೆಯದಾಗಿ ತನ್ನ ಪ್ರಿಯ ಮಗನನ್ನು ಕಳುಹಿಸಿದನು.
12:8 abgx ಯಜಮಾನನು ಕೊನೆಯದಾಗಿ ಕಳುಹಿಸಿದವನಿಗೆ ದ್ರಾಕ್ಷೇ ತೋಟಗಾರರು ಏನು ಮಾಡಿದರು? ದ್ರಾಕ್ಷೇ ತೋಟಗಾರರು ಆತನನ್ನು ಬಂಧಿಸಿ, ಕೊಂದು, ದ್ರಾಕ್ಷೇ ತೋಟದಿಂದ ಹೊರಗೆ ಹಾಕಿದರು.
12:9 bpsj ದ್ರಾಕ್ಷೇ ತೋಟಗಾರರಿಗೆ ದ್ರಾಕ್ಷೇತೋಟದ ಯಜಮಾನನು ಏನು ಮಾಡುತ್ತಾನೆ? ದ್ರಾಕ್ಷೇ ತೋಟದ ಯಜಮಾನನು ಬಂದು ದ್ರಾಕ್ಷೇ ತೋಟಗಾರರನ್ನು ನಾಶಮಾಡುವನು ಮತ್ತು ದ್ರಾಕ್ಷೇ ತೋಟವನ್ನು ಬೇರೆಯವರಿಗೆ ಕೊಡುವನು.
12:10 c54c ಪವಿತ್ರಗ್ರಂಥದಲ್ಲಿ, ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲಿಗೆ ಏನಾಗುತ್ತದೆ? ಕಟ್ಟುವವರು ಬೇಡವೆಂದು ಬಿಟ್ಟ ಕಲ್ಲು ಮೂಲೆಗಲ್ಲಾಯಿತು.
12:14 n5ve ಫರಿಸಾಯರು ಮತ್ತು ಕೆಲವು ಹೆರೋದ್ಯರು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದರು? ಕೈಸರನಿಗೆ ತೆರಿಗೆಯನ್ನು ಕಟ್ಟುವುದು ನ್ಯಾಯವೋ ಅಥವಾ ಇಲ್ಲವೋ ಎಂದು ಅವರು ಆತನನ್ನು ಕೇಳಿದರು.
12:17 z3xo ಅವರ ಪ್ರಶ್ನೆಗೆ ಯೇಸು ಹೇಗೆ ಉತ್ತರಿಸಿದನು? ಯೇಸು ಅವರಿಗೆ ಕೈಸರನದನ್ನು ಕೈಸರನಿಗೆ ಕೊಡಿರಿ ಮತ್ತು ದೇವರದನ್ನು ದೇವರಿಗೆ ಕೊಡಿರಿ ಎಂದು ಹೇಳಿದನು.
12:18 jy15 ಸದ್ದುಕಾಯರು ಯಾವುದರಲ್ಲಿ ನಂಬಿಕೆ ಇಡಲಿಲ್ಲ? ಸದ್ದುಕಾಯರು ಪುನರುತ್ಥಾನದಲ್ಲಿ ನಂಬಿಕೆ ಇಡಲಿಲ್ಲ.
12:22 nmuk ಸದ್ದುಕಾಯರು ಹೇಳಿದ ಕಥೆಯಲ್ಲಿ, ಒಬ್ಬ ಹೆಂಗಸಿಗೆ ಎಷ್ಟು ಜನ ಗಂಡಂದಿರು ಇದ್ದರು? ಅ ಹೆಂಗಸಿಗೆ ಏಳು ಜನ ಗಂಡಂದಿರು ಇದ್ದರು.
12:23 fehv ಆ ಹೆಂಗಸಿನ ಬಗ್ಗೆ ಸದ್ದುಕಾಯರು ಯೇಸುವನ್ನು ಯಾವ ಪ್ರಶ್ನೆ ಕೇಳಿದರು? ಪುನರುತ್ಥಾನದಲ್ಲಿ ಯಾವ ಪುರುಷನು ಆ ಹೆಂಗಸಿನ ಗಂಡನಾಗಿರುವನು ಎಂದು ಅವರು ಕೇಳಿದರು?
12:24 bs3e ಸದ್ದುಕಾಯರ ತಪ್ಪಿಗಾಗಿ ಯೇಸು ಯಾವ ಕಾರಣವನ್ನು ಕೊಟ್ಟನು? ಸದ್ದುಕಾಯರಿಗೆ ಪವಿತ್ರಗ್ರಂಥವಾಗಲಿ ಅಥವಾ ದೇವರ ಶಕ್ತಿಯಾಗಲಿ ತಿಳಿದಿಲ್ಲವೆಂದು ಯೇಸು ಹೇಳಿದನು.
12:25 ks2q ಆ ಹೆಂಗಸಿನ ಬಗ್ಗೆ ಯೇಸು ಸದ್ದುಕಾಯರಿಗೆ ಯಾವ ಉತ್ತರವನ್ನು ಕೊಟ್ಟನು? ಪುನರುತ್ಥಾನದಲ್ಲಿ, ಪುರುಷನು ಮತ್ತು ಸ್ತ್ರೀಯು ಮದುವೆ ಆಗುವುದಿಲ್ಲ, ಆದರೆ ದೇವದೂತರ ಹಾಗೆ ಇರುವರೆಂದು ಯೇಸು ಹೇಳಿದನು.
12:26-27 ete1 ಪುನರುತ್ಥಾನವಿದೆ ಎಂದು ಪವಿತ್ರಗಂಥದ ಮೂಲಕ ಯೇಸು ಹೇಗೆ ತೋರಿಸಿದನು? ಯೇಸು ಮೋಶೆಯ ಪುಸ್ತಕದಿಂದ ಉಲ್ಲೇಖಿಸಿದನು, ಅದರಲ್ಲಿ ದೇವರು ಹೀಗೆ ಹೇಳುತ್ತಾನೆ ಆತನು ಅಬ್ರಹಾಮನ, ಇಸಾಕನ, ಮತ್ತು ಯಾಕೋಬನ ದೇವರೆಂದೂ ಹೇಳಿದನು-ಹಾಗಾದರೆ ಅವರೆಲ್ಲರೂ ಜೀವಂತವಾಗಿರಬೇಕು.
12:29-30 tzeh ಯಾವ ಆಜ್ಞೆಯು ಅತಿ ಮುಖ್ಯವಾದದೆಂದು ಯೇಸು ಹೇಳಿದನು? ಯೇಸು ಕರ್ತನಾದ ನಿಮ್ಮ ದೇವರನ್ನು ಪೂರ್ಣ ಹೃದಯದಿಂದಲೂ, ಪ್ರಾಣದಿಂದಲೂ, ಮನಸ್ಸಿನಿಂದಲೂ, ಬಲದಿಂದಲೂ ಪ್ರೀತಿಸಬೇಕು ಎಂಬುದು ಅತಿ ಮುಖ್ಯವಾದ ಆಜ್ಞೆ ಎಂದು ಹೇಳಿದನು.
12:31 mh0y ಎರಡನೆಯ ಆಜ್ಞೆ ಯಾವುದೆಂದು ಯೇಸು ಹೇಳಿದನು? ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸು ಎಂಬುದು ಎರಡನೆಯ ಆಜ್ಞೆ ಎಂದು ಯೇಸು ಹೇಳಿದನು.
12:35-37 qo6t ದಾವೀದನ ಬಗ್ಗೆ ಶಾಸ್ತ್ರಿಗಳ ಹತ್ತಿರ ಯೇಸು ಯಾವ ಪ್ರಶ್ನೆಯನ್ನು ಕೇಳಿದನು? ಕ್ರಿಸ್ತನು ದಾವೀದನ ಮಗನಾಗಿರುವುದರಿಂದ ದಾವೀದನು ಕ್ರಿಸ್ತನನ್ನು ಕರ್ತನು ಎಂದು ಹೇಗೆ ಕರೆಯಬಹುದೆಂದು ಯೇಸು ಕೇಳಿದನು.
12:38-40 ndcc ಶಾಸ್ತ್ರಿಗಳ ಬಗ್ಗೆ ಯಾವ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಯೇಸು ಜನರಿಗೆ ಹೇಳಿದನು? ಶಾಸ್ತ್ರಿಗಳು ಜನರಿಂದ ಗೌರವವನ್ನು ಪಡೆಯಲು ಬಯಸುತ್ತಾರೆ, ಆದರೆ ವಿಧವೆಯರ ಮನೆಗಳನ್ನು ನುಂಗಿಹಾಕುತ್ತಾರೆ ಮತ್ತು ಜನರು ನೋಡಲೆಂದು ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ ಎಂದು ಯೇಸು ಹೇಳಿದನು.
12:44 vxj4 ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಬಡ ವಿಧವೆಯು ಎಲ್ಲರಿಗಿಂತಲೂ ಹೆಚ್ಚು ಕಾಣಿಕೆ ಹಾಕಿದ್ದಾಳೆಂದು ಯೇಸು ಯಾಕೆ ಹೇಳಿದನು? ಯೇಸು ಆಕೆ ಹೆಚ್ಚು ಹಾಕಿದ್ದಾಳೆಂದು ಹೇಳಿದನು ಯಾಕೆಂದರೆ ಎಲ್ಲರು ತಮಗೆ ಸಾಕಾಗಿ ವಿುಕ್ಕದ್ದರಲ್ಲಿ ಹಾಕಿದರು; ಈಕೆ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಕೊಟ್ಟಳು ಎಂದನು.
13:2 a889 ದೇವಾಲಯದ ಸುಂದರವಾದ ಕಲ್ಲುಗಳಿಗೆ ಮತ್ತು ಕಟ್ಟಡಗಳಿಗೆ ಏನಾಗುತ್ತದೆ ಎಂದು ಯೇಸು ಹೇಳಿದನು? ಯೇಸು ಕಲ್ಲಿನ ಮೇಲೆ ಕಲ್ಲು ನಿಲ್ಲುವುದಿಲ್ಲವೆಂದು ಹೇಳಿದನು.
13:4 et3p ಆಗ ಶಿಷ್ಯರು ಯೇಸುವನ್ನು ಯಾವ ಪ್ರಶ್ನೆಯನ್ನು ಕೇಳಿದರು? ಶಿಷ್ಯರು ಯೇಸುವಿಗೆ ಈ ಸಂಗತಿಗಳು ಯಾವಾಗ ನಡೆಯುತ್ತವೆ, ಮತ್ತು ಅದರ ಸೂಚನೆಗಳು ಯಾವುವು ಎಂದು ಕೇಳಿದರು.
13:5-6 znvi ಯಾವುದರ ಬಗ್ಗೆ ಶಿಷ್ಯರು ಎಚ್ಚರಿಕೆಯಿಂದ ಇರಬೇಕೆಂದು ಯೇಸು ಹೇಳಿದನು? ಯೇಸು ಶಿಷ್ಯರಿಗೆ ಯಾರೊಬ್ಬರಾಗಲಿ ಅವರನ್ನು ಮೋಸಗೊಳಿಸದಂತೆ ಎಚ್ಚರಿಕೆಯಿಂದ ಇರಬೇಕೆಂದು ಹೇಳಿದನು.
13:7-8 umt6 ಪ್ರಸವ ವೇದನೆಯ ಪ್ರಾರಂಭವು ಹೇಗಿರುತ್ತದೆ ಎಂದು ಯೇಸು ಹೇಳಿದನು? ಯೇಸು ಪ್ರಸವ ವೇದನೆಯ ಪ್ರಾರಂಭವು ಯುದ್ದಗಳು, ಯುದ್ದಗಳಾಗುವವೆಂಬ ಸುದ್ದಿಯು, ಭೂಕಂಪಗಳು, ಮತ್ತು ಬರಗಾಲಗಳು ಆಗಿರುತ್ತವೆಂದು ಹೇಳಿದನು.
13:9 arqh ಶಿಷ್ಯರಿಗೆ ಏನಾಗುತ್ತದೆ ಎಂದು ಯೇಸು ಹೇಳಿದನು? ಯೇಸು ಶಿಷ್ಯರಿಗೆ ನ್ಯಾಯವಿಚಾರಣೆಯ ಸಭೆಗಳಿಗೆ ಎಳಕೊಂಡು ಹೋಗುವರು; ಸಭಾಮಂದಿರಗಳಲ್ಲಿ ಹೊಡೆಯುವರು; ಮತ್ತು ಅಧಿಪತಿಗಳ ಮುಂದೆಯೂ ಅರಸುಗಳ ಮುಂದೆಯೂ ಸಾಕ್ಷಿಗಳಾಗಿ ನಿಲ್ಲಿಸುವರು ಎಂದು ಹೇಳಿದನು.
13:10 p9a0 ಮೊದಲು ಏನಾಗುತ್ತದೆಂದು ಯೇಸು ಹೇಳಿದನು? ಮೊದಲು ಸಕಲ ದೇಶಗಳಿಗೆ ಸುವಾರ್ತೆಯು ಸಾರಲ್ಪಡಬೇಕು ಎಂದು ಯೇಸು ಹೇಳಿದನು.
13:12 zlct ಕುಟುಂಬದ ಸದಸ್ಯರುಗಳ ಮಧ್ಯದಲ್ಲಿ ಏನಾಗುತ್ತದೆ ಎಂದು ಯೇಸು ಹೇಳಿದನು? ಯೇಸು ಕುಟುಂಬದ ಸದಸ್ಯನು ಕುಟುಂಬದ ಮತ್ತೊಬ್ಬ ಸದಸ್ಯನನ್ನು ಮರಣಕ್ಕೆ ಒಪ್ಪಿಸಿಕೊಡುವರು ಎಂದು ಯೇಸು ಹೇಳಿದನು.
13:13 trz5 ಯಾರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು? ಕೊನೆಯವರೆಗೂ ತಾಳಿಕೊಳ್ಳುವವನು ರಕ್ಷಣೆ ಹೊಂದುವನು ಎಂದು ಯೇಸು ಹೇಳಿದನು.
13:14 a194 ಯೂದಾಯದಲ್ಲಿ ಇರುವವರು ಹಾಳುಮಾಡುವ ಅಸಹ್ಯ ವಸ್ತುವನ್ನು ಕಾಣುವಾಗ ಏನು ಮಾಡಬೇಕು ಎಂದು ಯೇಸು ಹೇಳಿದನು? ಯೂದಾಯದಲ್ಲಿ ಇರುವವರು ಹಾಳುಮಾಡುವ ಅಸಹ್ಯ ವಸ್ತುವನ್ನು ಕಾಣುವಾಗ ಬೆಟ್ಟಗಳಿಗೆ ಓಡಿಹೋಗಬೇಕು ಎಂದು ಯೇಸು ಹೇಳಿದನು.
13:20 pgpi ಆರಿಸಲ್ಪಟ್ಟವರ ರಕ್ಷಣೆ ಹೊಂದುವುದಕ್ಕಾಗಿ ಕರ್ತನು ಏನು ಮಾಡುತ್ತಾನೆ ಯೇಸು ಹೇಳಿದನು? ಆರಿಸಲ್ಪಟ್ಟವರಿಗೋಸ್ಕರ ಕರ್ತನು ಸಂಕಟದ ದಿನಗಳನ್ನು ಕಡಿಮೆ ಮಾಡುವನು ಎಂದು ಯೇಸು ಹೇಳಿದನು.
13:22 zmok ಜನರನ್ನು ಮೋಸಗೊಳಿಸಲು ಯಾರು ಎದ್ದು ಬರುವರೆಂದು ಯೇಸು ಹೇಳಿದನು? ಸುಳ್ಳು ಕ್ರಿಸ್ತರೂ ಸುಳ್ಳು ಪ್ರವಾದಿಗಳೂ ಜನರನ್ನು ಮೋಸಗೊಳಿಸಲು ಎದ್ದೇಳುವರು ಎಂದು ಯೇಸು ಹೇಳಿದನು.
13:24-25 mxj5 ಆ ದಿನಗಳಲ್ಲಿ ಆಗುವ ಸಂಕಟಗಳ ನಂತರ ಬೆಳಕುಗಳಿಗೂ ಮತ್ತು ಪರಲೋಕದಲ್ಲಿರುವ ಶಕ್ತಿಗೂ ಏನಾಗುತ್ತದೆ? ಸೂರ್ಯ ಚಂದ್ರರು ಕತ್ತಲಾಗುವರು, ನಕ್ಷತ್ರಗಳು ಆಕಾಶದಿಂದ ಕೆಳಗೆ ಬೀಳುವವು. ಪರಲೋಕದಲ್ಲಿರುವ ಶಕ್ತಿಗಳು ನಡುಗುವವು.
13:26 ctur ಮೋಡಗಳಲ್ಲಿ ಜನರು ಏನನ್ನು ನೋಡುವರು? ಮನುಷ್ಯ ಕುಮಾರನು ಮಹಾ ಶಕ್ತಿ ಮತ್ತು ಮಹಿಮೆಯಿಂದ ಮೋಡಗಳಲ್ಲಿ ಬರುವುದನ್ನು ಅವರು ನೋಡುವರು.
13:27 kyem ಮನುಷ್ಯ ಕುಮಾರನು ಬರುವಾಗ ಏನು ಮಾಡುವನು? ಆಗ ಮನುಷ್ಯಕುಮಾರನು ಭೂಮಿಯ ಮತ್ತು ಆಕಾಶದ ಕಟ್ಟಕಡೆಯಿಂದ ತಾನು ಆರಿಸಿಕೊಂಡವರನ್ನು ಒಟ್ಟುಗೂಡಿಸುವನು.
13:30 zo90 ಈ ಎಲ್ಲಾ ಸಂಗತಿಗಳು ಆಗುವವರೆಗೂ ಯಾವುದು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು? ಈ ಎಲ್ಲಾ ಸಂಗತಿಗಳು ಆಗುವವರೆಗೂ ಈ ಸಂತತಿಯು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು.
13:31 oxg8 ಯಾವುದು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು? ತನ್ನ ವಾಕ್ಯಗಳು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು.
13:32 pmdn ಇವೆಲ್ಲವೂ ಯಾವಾಗ ಆಗುತ್ತದೆಂದು ಯೇಸು ಹೇಳಿದನು? ಯೇಸು ತಂದೆಯ ಹೊರತು ಮತ್ತಾರಿಗೂ ಆ ದಿನದ ಅಥವಾ ಗಳಿಗೆಯ ಬಗ್ಗೆ ತಿಳಿಯದು ಅಂದನು.
13:33 mck3 ಆ ಕಾಲವು ಯಾವಾಗ ಬರುವುದು ಎಂಬುದರ ಬಗ್ಗೆ ಯೇಸು ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆಯಾಗಿರಿ, ಜಾಗರೂಕರಾಗಿರಿ, ಮತ್ತು ಪ್ರಾರ್ಥಿಸಿರಿ ಎಂದು ಹೇಳಿದನು.
13:35 zfgp ಯೇಸು ತನ್ನ ಬರೋಣದ ಬಗ್ಗೆ ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ತನ್ನ ಬರೋಣವನ್ನು ಎದುರುನೋಡುತ್ತಿರುವಾಗ ಎಚ್ಚರಿಕೆಯಿಂದ ಇರಬೇಕೆಂದು ತನ್ನ ಶಿಷ್ಯರಿಗೆ ಹೇಳಿದನು.
13:37 c6rm ಯೇಸು ತನ್ನ ಬರೋಣದ ಬಗ್ಗೆ ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆಯಿಂದಿರಿ ಮತ್ತು ಜಾಗರೂಕರಾಗಿರಿ ಎಂದು ಹೇಳಿದನು.
14:1 l7mb ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಯಾವ ಸಂಗತಿಯನ್ನು ಹೇಗೆ ಮಾಡಬೇಕೆಂದು ಯೋಚಿಸುತ್ತಿದ್ದರು? ಅವರು ಯೇಸುವನ್ನು ಉಪಾಯವಾಗಿ ಸೆರೆ ಹಿಡಿದು ಆತನನ್ನು ಕೊಲ್ಲುವುದರ ಬಗ್ಗೆ ಯೋಚಿಸುತ್ತಿದ್ದರು.
14:2 ezqi ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಹುಳಿಯಿಲ್ಲದ ರೊಟ್ಟಿಯ ಹಬ್ಬದಂದು ಅದನ್ನು ಮಾಡಲು ಯಾಕೆ ಇಚ್ಚಿಸಲಿಲ್ಲ? ಜನರ ಮಧ್ಯದಲ್ಲಿ ಗದ್ದಲ ಆಗಬಹುದೆಂದು ಅವರು ಚಿಂತಿಸುತ್ತಿದ್ದರು.
14:3 lyx4 ಕುಷ್ಟರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಹೆಂಗಸು ಯೇಸುವಿಗೆ ಏನು ಮಾಡಿದಳು? ಒಬ್ಬ ಹೆಂಗಸು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ಒಡೆದು ಯೇಸುವಿನ ತಲೆಯ ಮೇಲೆ ಸುರಿದಳು.
14:5 tn7q ಕೆಲವರು ಆ ಹೆಂಗಸನ್ನು ಯಾಕೆ ಗದರಿಸುತ್ತಿದ್ದರು? ಆ ಹೆಂಗಸು ಸುಗಂಧತೈಲವನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲವೇ ಎಂದು ಕೆಲವರು ಆ ಹೆಂಗಸನ್ನು ಗದರಿಸುತ್ತಿದ್ದರು.
14:8 rqmp ಆ ಹೆಂಗಸು ತನಗೆ ಏನು ಮಾಡಿದಳೆಂದು ಯೇಸು ಹೇಳಿದನು? ಯೇಸು ಈ ಹೆಂಗಸು ಉತ್ತರಕ್ರಿಯೆಗೋಸ್ಕರ ತನ್ನ ದೇಹಕ್ಕೆ ಈ ತೈಲವನ್ನು ಹಚ್ಚಿದ್ದಾಳೆ ಎಂದನು.
14:9 s2sy ಆ ಹೆಂಗಸು ಏನು ಮಾಡಿದಳೋ ಅದಕ್ಕೆ ಯೇಸು ಯಾವ ವಾಗ್ದಾನವನ್ನು ಮಾಡಿದನು? ಲೋಕದಲ್ಲಿ ಎಲ್ಲೆಲ್ಲಿ ಸುವಾರ್ತೆಯು ಸಾರಲ್ಪಡುವುದೋ ಅಲ್ಲೆಲ್ಲಾ ಈ ಹೆಂಗಸು ಏನು ಮಾಡಿದಳೋ ಅದನ್ನು ಅವಳ ನೆನಪಿಗಾಗಿ ಹೇಳಲ್ಪಡುವುದೆಂದು ಯೇಸು ವಾಗ್ದಾನ ಮಾಡಿದನು.
14:10 rueu ಮುಖ್ಯ ಯಾಜಕರ ಬಳಿಗೆ ಇಸ್ಕರಿಯೋತ ಯೂದನು ಯಾಕೆ ಹೋದನು? ಇಸ್ಕರಿಯೋತ ಯೂದನು ಯೇಸುವನ್ನು ಅವರಿಗೆ ಹಿಡಿದುಕೊಡಲು ಮುಖ್ಯ ಯಾಜಕರ ಬಳಿಗೆ ಹೋದನು.
14:12-15 glcb ಅವರೆಲ್ಲರೂ ಪಸ್ಕ ಹಬ್ಬದ ಊಟವನ್ನು ಮಾಡಲು ಶಿಷ್ಯರು ಹೇಗೆ ಸ್ಥಳವನ್ನು ಕಂಡುಹಿಡಿದರು? ಯೇಸು ಅವರಿಗೆ ಪಟ್ಟಣದ ಒಳಗೆ ಹೋಗಿ ಅಲ್ಲಿ ಒಬ್ಬ ಮನುಷ್ಯನು ನೀರಿನ ಕೊಡವನ್ನು ಹೊತ್ತುಕೊಂಡು ಹೋಗುತ್ತಿರುವನು ಅವನನ್ನು ಹಿಂಬಾಲಿಸಿರಿ, ಮತ್ತು ಅವನನ್ನು ಪಸ್ಕದ ಊಟವನ್ನು ಮಾಡಲು ಉಪಯೋಗ ಆಗುವ ಅಥಿತಿಯ ಕೋಣೆಯು ಎಲ್ಲಿದೆ ಎಂದು ಅವನನ್ನು ಕೇಳಿರಿ ಅಂದನು.
14:18 kkmc ಅವರು ಮೇಜಿನ ಮೇಲೆ ಒರಗಿಕೊಂಡು ಊಟ ಮಾಡುತ್ತಿರುವಾಗ ಯೇಸು ಏನು ಹೇಳಿದನು? ಯೇಸು ನನ್ನ ಜೊತೆ ಊಟ ಮಾಡುತ್ತಿರುವ ಶಿಷ್ಯರಲ್ಲಿ ಒಬ್ಬನು ತನ್ನನ್ನು ಹಿಡಿದುಕೊಡುವನು ಎಂದು ಹೇಳಿದನು.
14:20 grhr ಯೇಸು ಯಾವ ಶಿಷ್ಯನು ತನ್ನನ್ನು ಹಿಡಿದುಕೊಡುತ್ತಾನೆ ಎಂದು ಹೇಳಿದನು? ಯೇಸು ತನ್ನೊಂದಿಗೆ ಊಟದ ಬಟ್ಟಲಿನ ಒಳಗೆ ಕೈ ಅದ್ದುವ ಶಿಷ್ಯನೇ ತನ್ನನ್ನು ಹಿಡಿದುಕೊಡುವನೆಂದು ಹೇಳಿದನು.
14:21 lk7c ಯೇಸುವಿಗೆ ದ್ರೋಹ ಮಾಡಿದ ಶಿಷ್ಯನ ಗತಿಯ ಬಗ್ಗೆ ಯೇಸು ಏನು ಹೇಳಿದನು? ಯೇಸು ಆ ಮನುಷ್ಯನು ಹುಟ್ಟದಿದ್ದರೆ ಅವನಿಗೆ ಒಳ್ಳೇದಾಗಿತ್ತು ಎಂದು ಹೇಳಿದನು.
14:22 jok6 ಯೇಸು ಶಿಷ್ಯರಿಗೆ ಮುರಿದ ರೊಟ್ಟಿಯನ್ನು ಕೊಟ್ಟಾಗ ಏನು ಹೇಳಿದನು? ಯೇಸು, “ಇದನ್ನು ತೆಗೆದುಕೊಳ್ಳಿರಿ. ಇದು ನನ್ನ ದೇಹ.” ಎಂದು ಹೇಳಿದನು.
14:24 apk9 ಯೇಸು ಶಿಷ್ಯರಿಗೆ ಪಾತ್ರೆಯನ್ನು ಕೊಟ್ಟಾಗ ಏನು ಹೇಳಿದನು? ಯೇಸು, “ಇದು ನನ್ನ ಒಡಂಬಡಿಕೆಯ ರಕ್ತ, ಅನೇಕರಿಗೋಸ್ಕರ ಸುರಿಸಲ್ಪಡುವ ರಕ್ತ” ಎಂದು ಹೇಳಿದನು.
14:25 r9so ಯೇಸು ತಿರುಗಿ ಯಾವಾಗ ದ್ರಾಕ್ಷಾರಸವನ್ನು ಕುಡಿಯುತ್ತೇನೆಂದು ಹೇಳಿದನು? ಯೇಸು ತಾನು ದೇವರ ರಾಜ್ಯದಲ್ಲಿ ಹೊಸದಾಗಿ ತಿರುಗಿ ದ್ರಾಕ್ಷಾರಸವನ್ನು ಕುಡಿಯುವೆನು ಎಂದು ಹೇಳಿದನು.
14:27 yns3 ಆಲಿವ್ ಮರದ ಗುಡ್ಡದಲ್ಲಿ, ಯೇಸು ತನ್ನ ಶಿಷ್ಯರ ಬಗ್ಗೆ ಏನೆಂದು ಮುಂತಿಳಿಸಿದನು? ಶಿಷ್ಯರೆಲ್ಲರೂ ತನ್ನ ನಿಮಿತ್ತವಾಗಿ ತನ್ನನ್ನು ಬಿಟ್ಟುಹೋಗುತ್ತಾರೆಂದು ಯೇಸು ಮುಂತಿಳಿಸಿದನು.
14:30 gvoq ಪೇತ್ರನು ತಾನು ಎಂದಿಗೂ ಬಿಟ್ಟುಹೋಗುವುದಿಲ್ಲ ಎಂದು ಹೇಳಿದಾಗ ಯೇಸು ಪೇತ್ರನಿಗೆ ಏನೆಂದು ಹೇಳಿದನು? ಯೇಸು ಪೇತ್ರನಿಗೆ ಕೋಳಿಯು ಎರಡು ಸಾರಿ ಕೂಗುವ ಮುಂಚೆ, ಪೇತ್ರನು ಯೇಸುವನ್ನು ಮೂರು ಸಾರಿ ಅಲ್ಲಗಳೆಯುತ್ತಾನೆಂದು ಹೇಳಿದನು.
14:32-34 v9za ಯೇಸು ತಾನು ಪ್ರಾರ್ಥಿಸುತ್ತಿರುವಾಗ ತನ್ನ ಮೂವರು ಶಿಷ್ಯರಿಗೆ ಏನೆಂದು ಹೇಳಿದನು? ಯೇಸು ಅವರಿಗೆ ಅಲ್ಲೇ ಇದ್ದುಕೊಂಡು ಎಚ್ಚರವಾಗಿರಿ ಎಂದು ಹೇಳಿದನು.
14:35 uvgs ಯೇಸು ಯಾವುದಕ್ಕಾಗಿ ಪ್ರಾರ್ಥಿಸಿದನು? ಆ ಗಳಿಗೆಯು ತನ್ನಿಂದ ಬಿಟ್ಟುಹೋಗುವಂತೆ ಯೇಸು ಪ್ರಾರ್ಥಿಸಿದನು.
14:36 u792 ತಂದೆಗೆ ತಾನು ಮಾಡಿದ ಪ್ರಾರ್ಥನೆಗೆ ಉತ್ತರವಾಗಿ ಏನನ್ನು ಸ್ವೀಕರಿಸಲು ಯೇಸು ಬಯಸಿದನು? ಯೇಸು ತನ್ನ ಕುರಿತು ತಂದೆಯ ಚಿತ್ತವು ಏನಾಗಿದೆಯೋ ಅದನ್ನು ಸ್ವೀಕರಿಸಲು ಬಯಸಿದನು.
14:37 vaa4 ಯೇಸು ಮೂವರು ಜನ ಶಿಷ್ಯರ ಬಳಿಗೆ ಹಿಂತಿರುಗಿದಾಗ ಏನನ್ನು ಕಂಡನು? ಮೂವರು ಜನ ಶಿಷ್ಯರು ನಿದ್ರೆಮಾಡುತ್ತಿರುವುದನ್ನು ಯೇಸು ನೋಡಿದನು.
14:40 tadu ಎರಡನೆಯ ಸಾರಿ ಪ್ರಾರ್ಥನೆ ಮಾಡಿ ಹಿಂತಿರುಗಿದಾಗ ಯೇಸು ಏನನ್ನು ನೋಡಿದನು? ಮೂವರು ಜನ ಶಿಷ್ಯರು ನಿದ್ರೆಮಾಡುತ್ತಿರುವುದನ್ನು ಯೇಸು ನೋಡಿದನು.
14:41 yc6c ಮೂರನೆಯ ಸಾರಿ ಪ್ರಾರ್ಥನೆ ಮಾಡಿ ಹಿಂತಿರುಗಿದಾಗ ಯೇಸು ಏನನ್ನು ನೋಡಿದನು? ಮೂವರು ಜನ ಶಿಷ್ಯರು ನಿದ್ರೆಮಾಡುತ್ತಿರುವುದನ್ನು ಯೇಸು ನೋಡಿದನು.
14:44-45 xku4 ಯೇಸು ಯಾವ ವ್ಯಕ್ತಿ ಎಂದು ಕಾವಲುಗಾರರಿಗೆ ತೋರಿಸಲು ಯೂದನು ಯಾವ ಸೂಚನೆಯನ್ನು ಕೊಟ್ಟನು? ಯೇಸು ಯಾವ ವ್ಯಕ್ತಿ ಎಂದು ತೋರಿಸಲು ಯೂದನು ಯೇಸುವಿಗೆ ಮುದ್ದಿಟ್ಟನು.
14:48-49 afwa ಪವಿತ್ರಗ್ರಂಥದ ಮಾತು ನೆರವೇರುವಂತೆ ಯೇಸುವನ್ನು ಬಂಧಿಸಿದಾಗ ಏನು ಮಾಡಲಾಯಿತು ಎಂದು ಯೇಸು ಹೇಳಿದನು? ಯೇಸುವನ್ನು ಕಳ್ಳನಂತೆ ಕತ್ತಿ ಮತ್ತು ಕೋಲುಗಳಿಂದ ಹಿಡಿಯಲು ಬಂದಿದ್ದರಿಂದ ಪವಿತ್ರಗ್ರಂಥದ ವಾಕ್ಯವು ನೆರವೇರಿತು ಎಂದು ಯೇಸು ಹೇಳಿದನು.
14:50 v5q7 ಯೇಸುವು ಬಂಧಿತನಾದಾಗ ಆತನ ಜೊತೆಯಲ್ಲಿ ಇದ್ದವರು ಏನು ಮಾಡಿದರು? ಯೇಸುವಿನೊಂದಿಗೆ ಇದ್ದವರು ಆತನನ್ನು ಬಿಟ್ಟು ಓಡಿಹೋದರು.
14:51-52 xj5b ಯೇಸು ಬಂಧಿತನಾದಾಗ ಯೇಸುವನ್ನು ಹಿಂಬಾಲಿಸುತ್ತಿದ್ದ ಯೌವನಸ್ಥನು ಏನು ಮಾಡಿದನು? ಆ ಯೌವನಸ್ಥನು ತನ್ನ ನಾರುಮಡಿಯನ್ನು ಅಲ್ಲೇ ಬಿಟ್ಟು ಬರೀ ಮೈಲಿ ಓಡಿಹೋದನು.
14:53-54 mcjr ಯೇಸುವನ್ನು ಮಹಾಯಾಜಕನ ಬಳಿಗೆ ಕರೆದುಕೊಂಡು ಹೋದಾಗ ಪೇತ್ರನು ಎಲ್ಲಿ ಇದ್ದನು? ಬೆಂಕಿ ಕಾಯಿಸಿಕೊಳ್ಳಲು ಪೇತ್ರನು ಬೆಂಕಿಯ ಬಳಿ ಕಾವಲುಗಾರರ ಮಧ್ಯದಲ್ಲಿ ಕುಳಿತುಕೊಂಡಿದ್ದನು.
14:55-56 k3gb ಯೇಸು ನ್ಯಾಯಸ್ಥಾನಕ್ಕೆ ಒಪ್ಪಿಸಿದಾಗ ಆತನ ವಿರುದ್ದ ಹೇಳಿದ್ದ ಸಾಕ್ಷಿಯಲ್ಲಿ ಏನು ತಪ್ಪಾಗಿತ್ತು? ಯೇಸುವಿನ ವಿರುದ್ದ ಹೇಳಿದ್ದ ಸಾಕ್ಷಿಯು ತಪ್ಪಾಗಿತ್ತು ಮತ್ತು‌ ಅವು ಒಂದಕ್ಕೊಂದು ಸರಿಬೀಳಲಿಲ್ಲ.
14:61 g1ev ಯೇಸು ಯಾರೆಂದು ಕೇಳಲು ಮಹಾಯಾಜಕನು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದನು? ಮಹಾಯಾಜಕನು ಯೇಸುವಿಗೆ ನೀನು ಸ್ತುತ್ಯ ದೇವರ ಮಗನಾದ ಕ್ರಿಸ್ತನೋ ಎಂದು ಕೇಳಿದನು.
14:62 rabu ಮಹಾಯಾಜಕನ ಪ್ರಶ್ನೆಗೆ ಯೇಸು ಏನೆಂದು ಉತ್ತರಿಸಿದನು? ಯೇಸು, “ನಾನೇ” ಎಂದು ಹೇಳಿ ಉತ್ತರಿಸಿದನು.
14:64 xher ಯೇಸುವಿನ ಉತ್ತರವನ್ನು ಕೇಳಿಸಿಕೊಂಡು ಮಹಾಯಾಜಕನು ಯೇಸು ಯಾವ ವಿಷಯದಲ್ಲಿ ತಪ್ಪಿತಸ್ಥನೆಂದು ಹೇಳಿದನು? ದೇವದೂಷಣೆಯ ಬಗ್ಗೆ ಯೇಸು ತಪ್ಪಿತಸ್ಥನೆಂದು ಮಹಾಯಾಜಕನು ಹೇಳಿದನು.
14:65 if4h ಯೇಸುವಿಗೆ ಮರಣದಂಡನೆಯನ್ನು ವಿಧಿಸಿದ ಮೇಲೆ ಅವರು ಯೇಸುವಿಗೆ ಏನು ಮಾಡಿದರು? ಅವರು ಆತನ ಮೇಲೆ ಉಗುಳಿದರು, ಆತನಿಗೆ ಗುದಿದ್ದರು, ಮತ್ತು ಆತನನ್ನು ಹೊಡೆದರು.
14:66-68 tjt2 ಪೇತ್ರನು ಯೇಸುವಿನೊಂದಿಗೆ ಇದ್ದನು ಎಂದು ಹೇಳಿದ ದಾಸಿಗೆ ಪೇತ್ರನು ಕೊಟ್ಟ ಉತ್ತರವೇನಾಗಿತ್ತು? ಆ ದಾಸಿಯು ಯಾವುದರ ಬಗ್ಗೆ ಮಾತನಾಡುತ್ತಿದ್ದಾಳೆ ಎಂದು ನನಗೆ ಅರ್ಥವಾಗಿಲ್ಲ ಅಥವಾ ಅವನಿಗೆ ತಿಳಿದಿಲ್ಲವೆಂದು ಪೇತ್ರನು ಹೇಳಿದನು.
14:71 orue ಯೇಸುವಿನ ಶಿಷ್ಯರಲ್ಲಿ ಇವನೂ ಒಬ್ಬನಾಗಿದ್ದನು ಎಂದು ಮೂರನೆಯ ಬಾರಿ ಅವನನ್ನು ಕೇಳಿದಾಗ ಪೇತ್ರನ ಪ್ರತಿಕ್ರಿಯೆಯು ಏನಾಗಿತ್ತು? ಯೇಸುವನ್ನು ತಾನು ಅರಿಯನೆಂದು ಆಣೆ ಮಾಡುತ್ತಾ ಪೇತ್ರನು ತನ್ನನ್ನು ತಾನು ಶಪಿಸಿಕೊಳ್ಳುವುದಕ್ಕೂ ಪ್ರಾರಂಭಿಸಿದನು.
14:72 dgcn ಪೇತ್ರನು ಮೂರನೆಯ ಸಾರಿ ಉತ್ತರಿಸಿದ ನಂತರ ಏನಾಯಿತು? ಪೇತ್ರನು ಮೂರನೆಯ ಸಾರಿ ಉತ್ತರಿಸಿದ ನಂತರ, ಕೋಳಿಯು ಎರಡನೆಯ ಸಾರಿ ಕೂಗಿತು.
14:72 wesn ಕೋಳಿಯು ಕೂಗಿದ್ದನ್ನು ಕೇಳಿಸಿಕೊಂಡ ನಂತರ ಪೇತ್ರನು ಏನು ಮಾಡಿದನು? ಕೋಳಿಯು ಕೂಗಿದ್ದನ್ನು ಕೇಳಿಸಿಕೊಂಡ ನಂತರ, ಪೇತ್ರನು ವ್ಯಥೆಪಟ್ಟು ಅತ್ತನು.
15:1 myuo ಬೆಳಗಾದ ಕೂಡಲೇ ಮುಖ್ಯ ಯಾಜಕರು ಯೇಸುವಿಗೆ ಏನು ಮಾಡಿದರು? ಬೆಳಗಾದ ಕೂಡಲೇ, ಅವರು ಯೇಸುವನ್ನು ಕಟ್ಟಿ ಆತನನ್ನು ಪಿಲಾತನಿಗೆ ಒಪ್ಪಿಸಿದರು.
15:5 w0fh ಮುಖ್ಯ ಯಾಜಕರು ಯೇಸುವಿನ ವಿರುದ್ದ ಅನೇಕ ಆರೋಪಗಳನ್ನು ಮಾಡುತ್ತಿದ್ದಾಗ, ಯೇಸುವಿನ ಬಗ್ಗೆ ಪಿಲಾತನಿಗೆ ಏನು ಆಶ್ಚರ್ಯವೆನಿಸಿತು? ಯೇಸು ಏನೂ ಉತ್ತರ ಕೊಡದೇ ಇದ್ದುದ್ದಕ್ಕೆ ಪಿಲಾತನಿಗೆ ಆಶ್ಚರ್ಯವಾಯಿತು.
15:6 juii ಸಾಮಾನ್ಯವಾಗಿ ಹಬ್ಬದ ಸಮಯಯಲ್ಲಿ ಪಿಲಾತನು ಜನರಿಗೆ ಏನು ಮಾಡುತ್ತಿದ್ದನು? ಸಾಮಾನ್ಯವಾಗಿ ಹಬ್ಬದ ಸಮಯಯಲ್ಲಿ ಪಿಲಾತನು ಜನರು ಯಾವ ಖೈದಿಯನ್ನು ಬಿಟ್ಟುಕೊಡಬೇಕೆಂದು ಕೇಳಿಕೊಳ್ಳುತ್ತಿದ್ದರೋ ಅವನನ್ನು ಬಿಟ್ಟುಕೊಡುತ್ತಿದ್ದನು.
15:10 c38r ಯೇಸುವನ್ನು ಜನರಿಗೆ ಬಿಟ್ಟುಕೊಡಲು ಯಾಕೆ ಬಯಸಿದನು? ಪಿಲಾತನಿಗೆ ಮಹಾಯಾಜಕರು ಹೊಟ್ಟೇಕಿಚ್ಚಿನಿಂದ ಯೇಸುವನ್ನು ತನಗೆ ಒಪ್ಪಿಸಿಕೊಟ್ಟಿದ್ದಾರೆಂದು ತಿಳಿದಿತ್ತು.
15:11 cjv6 ಜನರ ಗುಂಪು ಯಾರನ್ನು ಬಿಟ್ಟುಕೊಡಬೇಕೆಂದು ಕೂಗಿತು? ಜನರ ಗುಂಪು ಬರ್ಬನನ್ನು ಬಿಟ್ಟುಕೊಡಬೇಕೆಂದು ಕೂಗಿತು.
15:12-13 v1o8 ಯೆಹೂದ್ಯರ ಅರಸನಿಗೆ ಏನು ಮಾಡಬೇಕೆಂದು ಜನರ ಗುಂಪು ಹೇಳಿತು? ಯೆಹೂದ್ಯರ ಅರಸನನ್ನು ಶಿಲುಬೆಗೆ ಹಾಕಿಸಬೇಕೆಂದು ಜನರ ಗುಂಪು ಹೇಳಿತು.
15:17 hku5 ಸೈನಿಕರ ಗುಂಪು ಯೇಸುವನ್ನು ಹೇಗೆ ಉಡಿಸಿದರು? ಸೈನಿಕರು ಯೇಸುವಿನ ಮೇಲೆ ಕೆಂಪು ಒಲ್ಲಿಯನ್ನು ಹೊದಿಸಿದರು ಮತ್ತು ಮುಳ್ಳಿನ ಕಿರೀಟವನ್ನು ಹೆಣೆದು ಆತನಿಗಿಟ್ಟರು.
15:21 vt0v ಯೇಸುವಿನ ಶಿಲುಬೆಯನ್ನು ಯಾರು ಹೊತ್ತರು? ದಾರಿಹೋಕನಾದ, ಕುರೇನೆ ಪಟ್ಟಣದ ಸೀಮೋನನ್ನು ಯೇಸುವಿನ ಶಿಲುಬೆಯನ್ನು ಹೊರುವಂತೆ ಬಲವಂತ ಮಾಡಿದರು.
15:22 ekh7 ಯೇಸುವನ್ನು ಶಿಲುಬೆಗೆ ಹಾಕಲು ಸೈನಿಕರು ಆತನನ್ನು ಕರೆದುಕೊಂಡು ಬಂದ ಸ್ಥಳದ ಹೆಸರೇನು? ಸ್ಥಳದ ಹೆಸರು ಗೊಲ್ಗತ್ತಾ ಎಂದು, ಅಂದರೆ ಕಪಾಲಸ್ಥಳ.
15:24 osm6 ಯೇಸುವಿನ ಉಡುಪುಗಳನ್ನು ಸೈನಿಕರು ಏನು ಮಾಡಿದರು? ಸೈನಿಕರು ಯೇಸುವಿನ ಉಡುಪುಗಳಿಗಾಗಿ ಚೀಟು ಹಾಕಿದರು.
15:26 pb4n ಸೈನಿಕರು ಯೇಸುವಿನ ವಿರುದ್ದ ಸೂಚಕಫಲಕದಲ್ಲಿ ಏನೆಂದು ಬರೆದರು? ಸೈನಿಕರು, “ಯೆಹೂದ್ಯರ ಅರಸನು”ಎಂಬ ಸೂಚಕಫಲಕದಲ್ಲಿ ಬರೆದರು.
15:29-30 dh4r ಹಾದು ಹೋಗುತ್ತಿರುವವರು ಯೇಸುವಿಗೆ ಏನು ಮಾಡುವಂತೆ ಸವಾಲು ಹಾಕಿದರು? ಹಾದು ಹೋಗುತ್ತಿರುವವರು ಯೇಸುವಿಗೆ ನಿನ್ನನ್ನು ನೀನು ರಕ್ಷಿಸಿಕೋ ಮತ್ತು ಶಿಲುಬೆಯಿಂದ ಕೆಳಗೆ ಇಳಿದು ಬಾ ಎಂದು ಸವಾಲು ಹಾಕಿದರು.
15:31-32 o4cc ಅವರುಗಳು ನಂಬುವಂತೆ ಯೇಸು ಏನು ಮಾಡಬೇಕು ಎಂದು ಮುಖ್ಯ ಯಾಜಕರು ಹೇಳಿದರು? ಅವರುಗಳು ನಂಬುವಂತೆ ಯೇಸು ಶಿಲುಬೆಯಿಂದ ಕೆಳಗೆ ಇಳಿದು ಬರಬೇಕೆಂದು ಮುಖ್ಯ ಯಾಜಕರು ಹೇಳಿದರು.
15:32 wdk2 ಯೇಸುವನ್ನು ಅಣಕಿಸುತ್ತಾ ಮುಖ್ಯ ಯಾಜಕರು ಯೇಸುವಿಗೆ ಯಾವ ಬಿರುದುಗಳನ್ನು ಉಪಯೋಗಿಸಿದರು? ಮುಖ್ಯ ಯಾಜಕರು ಯೇಸುವನ್ನು ಕ್ರಿಸ್ತನೆಂದು ಮತ್ತು ಇಸ್ರಾಯೇಲಿನ ಅರಸನು ಎಂದು ಕರೆದರು.
15:33 ppto ಆರು ಗಂಟೆಗೆ ಏನಾಯಿತು? ಆರು ಗಂಟೆಗೆ, ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.
15:34 t3wi ಒಂಬತ್ತು ಘಂಟೆಯ ಸಮಯದಲ್ಲಿ ಯೇಸು ಏನೆಂದು ಕೂಗಿದನು? ಯೇಸು, “ನನ್ನ ದೇವರೇ, ನನ್ನ ದೇವರೇ, ಯಾಕೆ ನನ್ನನ್ನು ಕೈಬಿಟ್ಟಿದ್ದೀ” ಎಂದು ಕೂಗಿದನು.
15:37 x92v ಯೇಸು ಸಾಯುವ ಮೊದಲು ಏನು ಮಾಡಿದನು? ಯೇಸು ಸಾಯುವ ಮೊದಲು ಮಹಾಶಬ್ದದಿಂದ ಕೂಗಿದನು.
15:38 jdq8 ಯೇಸು ಮರಣ ಹೊಂದಿದಾಗ ದೇವಾಲಯದಲ್ಲಿ ಏನಾಯಿತು? ಯೇಸು ಮರಣ ಹೊಂದಿದಾಗ ದೇವಾಲಯದ ಪರದೆಯು ಮೇಲಿನಿಂದ ಕೆಳಗಿನವರೆಗೂ ಎರಡು ಭಾಗವಾಗಿ ಹರಿದು ಹೋಯಿತು.
15:39 tf5m ಯೇಸು ಹೇಗೆ ಸತ್ತನು ಎಂದು ನೋಡಿದಾಗ ಶತಾಧಿಪತಿಯು ಏನು ಮಾಡಿದನು? ಶತಾಧಿಪತಿಯು ನಿಜವಾಗಲೂ ಈ ಮನುಷ್ಯನು ದೇವರ ಮಗನು ಎಂದು ಸಾಕ್ಷಿ ಹೇಳಿದನು.
15:42 mthb ಯೇಸುವು ಯಾವ ದಿನದಲ್ಲಿ ಸತ್ತನು? ಯೇಸು ಸಬ್ಬತ್‌ ದಿನದ ಹಿಂದಿನ ದಿನ ಸತ್ತನು.
15:43-46 yusf ಯೇಸು ಸತ್ತ ನಂತರ ಅರಿಮಥಾಯದ ಯೋಸೇಫನು ಏನು ಮಾಡಿದನು? ಅರಿಮಥಾಯದ ಯೋಸೇಫನು ಶಿಲುಬೆಯಿಂದ ಯೇಸುವನ್ನು ಕೆಳಗೆ ಇಳಿಸಿದನು, ಆತನನ್ನು ನಾರುಮಡಿಯಲ್ಲಿ ಸುತ್ತಿದನು, ಮತ್ತು ಸಮಾಧಿಯಲ್ಲಿಟ್ಟನು, ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು.
16:1-2 l3lc ಯೇಸುವಿನ ದೇಹಕ್ಕೆ ಸುಗಂಧ ತೈಲವನ್ನು ಹಚ್ಚಲು ಸ್ತ್ರೀಯರು ಯಾವಾಗ ಹೋದರು? ಸೂರ್ಯನು ಹುಟ್ಟುವ ಮೊದಲೇ, ವಾರದ ಮೊದಲನೆಯ ದಿನದಲ್ಲಿ ಆ ಹೆಂಗಸು ಸಮಾಧಿಯ ಬಳಿಗೆ ಹೋದಳು.
16:4 b2oz ಸಮಾಧಿಯ ಬಾಗಿಲನ್ನು ತುಂಬಾ ದೊಡ್ಡ ಕಲ್ಲಿನಿಂದ ಮುಚ್ಚಿಡಲಾಗಿತ್ತು. ಆದರೆ ಆ ಸ್ತ್ರೀಯರು ಸಮಾಧಿಯೊಳಗೆ ಹೇಗೆ ಪ್ರವೇಶಿಸಿದರು? ಸಮಾಧಿಯ ಪ್ರವೇಶ ದ್ವಾರದಿಂದ ಯಾರೋ ತುಂಬಾ ದೊಡ್ಡ ಕಲ್ಲನ್ನು ಉರುಳಿಸಿದ್ದರು.
16:5 habp ಆ ಸ್ತ್ರೀಯರು ಸಮಾಧಿಯ ಒಳಗೆ ಪ್ರವೇಶಿಸಿದಾಗ ಏನನ್ನು ನೋಡಿದರು? ಒಬ್ಬ ಯೌವನಸ್ಥನು ಬಿಳಿಯ ಬಟ್ಟೆಯನ್ನು ಹಾಕಿಕೊಂಡು ಬಲಗಡೆಯಲ್ಲಿ ಕುಳಿತುಕೊಂಡಿರುವುದನ್ನು ಆ ಸ್ತ್ರೀಯರು ನೋಡಿದರು.
16:6 nvic ಆ ಯೌವನಸ್ಥನು ಯೇಸುವಿನ ಬಗ್ಗೆ ಏನು ಹೇಳಿದನು? ಆ ಯೌವನಸ್ಥನು ಯೇಸು ಎದ್ದಿದ್ದಾನೆ, ಮತ್ತು ಆತನು ಇಲ್ಲಿ ಇಲ್ಲ ಎಂದು ಹೇಳಿದನು.
16:7 iqwx ಶಿಷ್ಯರು ಯೇಸುವನ್ನು ಎಲ್ಲಿ ಭೇಟಿಯಾಗುತ್ತರೆಂದು ಆ ಯೌವನಸ್ಥನು ಹೇಳಿದನು? ಶಿಷ್ಯರು ಯೇಸುವನ್ನು ಗಲಿಲಾಯದಲ್ಲಿ ಭೇಟಿಯಾಗುತ್ತರೆಂದು ಆ ಯೌವನಸ್ಥನು ಹೇಳಿದನು.
16:9 mgj4 ಯೇಸು ತನ್ನ ಪುನರುತ್ಥಾನದ ನಂತರ ಮೊದಲಿಗೆ ಯಾರಿಗೆ ಕಾಣಿಸಿಕೊಂಡನು? ಮೊದಲಿಗೆ ಯೇಸು ಮಗ್ದಲದ ಮರಿಯಳಿಗೆ ಕಾಣಿಸಿಕೊಂಡನು.
16:11 ge9j ಯೇಸುವು ಬದುಕಿರುವುದನ್ನು ಆಕೆ ನೋಡಿದ್ದಾಗಿ ಮರಿಯಳು ಹೇಳಿದಾಗ ಯೇಸುವಿನ ಶಿಷ್ಯರು ಹೇಗೆ ಪ್ರತಿಕ್ರಿಯಿಸಿದರು? ಶಿಷ್ಯರು ನಂಬಲಿಲ್ಲ.
16:13 bhrb ಇನ್ನೂ ಇಬ್ಬರು ಜನರು ಯೇಸು ಬದುಕಿರುವುದನ್ನು ನೋಡಿದ್ದೇವೆಂದು ಹೇಳಿದಾಗ ಯೇಸುವಿನ ಶಿಷ್ಯರ ಪ್ರತಿಕ್ರಿಯೆ ಹೇಗಿತ್ತು? ಶಿಷ್ಯರು ನಂಬಲಿಲ್ಲ.
16:14 f1b4 ಯೇಸು ಶಿಷ್ಯರಿಗೆ ಕಾಣಿಸಿಕೊಂಡಾಗ, ಅವರ ಅಪನಂಬಿಕೆಯ ಬಗ್ಗೆ ಆತನು ಏನು ಹೇಳಿದನು? ಅವರ ಅಪನಂಬಿಕೆಯ ನಿಮಿತ್ತ ಯೇಸು ಶಿಷ್ಯರನ್ನು ಗದರಿಸಿದನು.
16:15 zvc5 ಯೇಸು ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ಶಿಷ್ಯರಿಗೆ ಲೋಕದಲ್ಲೆಡೆ ಹೋಗಿ ಸುವಾರ್ತೆಯನ್ನು ಸಾರಿರಿ ಎಂದು ಯೇಸು ಆಜ್ಞಾಪಿಸಿದನು.
16:16 p7ix ಯಾರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು? ಯಾರು ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಾರೋ ಅವರು ರಕ್ಷಣೆ ಹೊಂದುವರು ಎಂದು ಯೇಸು ಹೇಳಿದನು.
16:16 u11w ಯಾರು ದಂಡನಾ ತೀರ್ಪಿಗೆ ಗುರಿಯಾಗುವರು ಎಂದು ಯೇಸು ಹೇಳಿದನು? ಯಾರು ನಂಬುವುದಿಲ್ಲವೋ ಅವರು ದಂಡನಾ ತೀರ್ಪಿಗೆ ಗುರಿಯಾಗುವರು ಎಂದು ಯೇಸು ಹೇಳಿದನು.
16:17-18 l58h ನಂಬುವವರಿಗೆ ಯಾವ ಸೂಚಕಕಾರ್ಯಗಳು ಜೊತೆಯಾಗಿ ಬರುತ್ತವೆ ಎಂದು ಯೇಸು ಹೇಳಿದನು? ಯಾರು ನಂಬುತ್ತರೋ ಅವರು ದೆವ್ವಗಳನ್ನು ಬಿಡಿಸುತ್ತಾರೆ, ಹೊಸ ಭಾಷೆಗಳಲ್ಲಿ ಮಾತನಾಡುವರು, ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ, ಮತ್ತು ಇತರರನ್ನು ಸ್ವಸ್ಥ ಮಾಡುವರು ಎಂದು ಯೇಸು ಹೇಳಿದನು.
16:19 bac6 ಶಿಷ್ಯರೊಂದಿಗೆ ಮಾತನಾಡಿದ ನಂತರ ಯೇಸುವಿಗೆ ಏನಾಯಿತು? ಶಿಷ್ಯರೊಂದಿಗೆ ಮಾತನಾಡಿದ ನಂತರ, ಯೇಸು ಪರಲೋಕಕ್ಕೆ ಎತ್ತಲ್ಪಟ್ಟನು ಮತ್ತು ದೇವರ ಬಲಗಡೆಯಲ್ಲಿ ಕುಳಿತುಕೊಂಡನು.
16:20 wd92 ಅನಂತರ ಶಿಷ್ಯರು ಏನು ಮಾಡಿದರು? ಅನಂತರ ಶಿಷ್ಯರು ಅಲ್ಲಿಂದ ಎಲ್ಲಾ ಕಡೆಗೂ ಹೋಗಿ ಸುವಾರ್ತೆ ಸಾರಿದರು.
16:20 f45x ಆಗ ಕರ್ತನು ಏನು ಮಾಡಿದನು? ಆಗ ಕರ್ತನು ಶಿಷ್ಯರೊಂದಿಗೆ ಕೆಲಸ ಮಾಡಿದನು ಮತ್ತು ವಾಕ್ಯವನ್ನು ಅನೇಕ ಅದ್ಬುತ ಸೂಚಕಕಾರ್ಯಗಳಿಂದ ದೃಢಪಡಿಸಿದನು.
Can't render this file because it contains an unexpected character in line 143 and column 443.