1:2-3 a4zc ಕರ್ತನು ಬರುವ ಮೊದಲು ಏನು ಆಗುವುದೆಂದು ಪ್ರವಾದಿಯಾದ ಯೆಶಾಯನು ಮುನ್ನುಡಿದಿದ್ದನು? ದೇವರು ಒಬ್ಬ ದೇವದೂತನನ್ನು ಕಳುಹಿಸುವನು, ಕರ್ತನಿಗೆ ದಾರಿಯನ್ನು ಸಿದ್ದಮಾಡಿರಿ ಎಂದು ಅಡವಿಯಲ್ಲಿ ಕೂಗುವವನ ಶಬ್ದವಿದೆ ಎಂದು ಮುನ್ನುಡಿದದ್ದನು.
1:5 kdd7 ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿರುವಾಗ ಅವರು ಏನು ಮಾಡುತ್ತಿದ್ದರು? ಜನರು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿರುವಾಗ ಅವರು ತಮ್ಮ ತಮ್ಮ ಪಾಪಗಳನ್ನು ಅರಿಕೆ ಮಾಡಿದರು
1:8 yakl ಅವನ ನಂತರ ಬರುವವನು ಯಾವುದರಿಂದ ದೀಕ್ಷಾಸ್ನಾನ ಮಾಡಿಸುವನೆಂದು ಯೋಹಾನನು ಹೇಳಿದನು? ಅವನ ನಂತರ ಬರುವವನು ಪವಿತ್ರ ಆತ್ಮದಿಂದ ದೀಕ್ಷಾಸ್ನಾನ ಮಾಡಿಸುವನೆಂದು ಯೋಹಾನನು ಹೇಳಿದನು.
1:10 y6fa ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ ನೀರಿನಿಂದ ಮೇಲೆ ಬಂದಾಗ ಯೇಸು ಏನನ್ನು ನೋಡಿದನು? ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ, ಆಕಾಶವು ತೆರೆದು ಆತ್ಮವು ಪಾರಿವಾಳದ ರೂಪದಲ್ಲಿ ಆತನ ಮೇಲೆ ಇಳಿದು ಬರುವುದನ್ನು ಯೇಸು ನೋಡಿದನು.
1:11 f2a4 ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡ ನಂತರ ಪರಲೋಕದಿಂದ ಬಂದಂತ ಸ್ವರವು ಏನು ಹೇಳಿತು? ಪರಲೋಕದಿಂದ ಬಂದಂತ ಸ್ವರವು, “ನೀನು ನನ್ನ ಪ್ರಿಯನಾಗಿರುವ ಮಗನು; ನಾನು ನಿನ್ನನ್ನು ಬಹಳವಾಗಿ ಮೆಚ್ಚಿದ್ದೇನೆ” ಎಂದು ಹೇಳಿತು.
1:17 r3ba ಸೀಮೋನನನ್ನು ಮತ್ತು ಆಂದ್ರೆಯನನ್ನು ಏನಾಗಿ ಮಾಡುವೆನೆಂದು ಯೇಸು ಹೇಳಿದನು? ಸೀಮೋನನನ್ನು ಮತ್ತು ಆಂದ್ರೆಯನನ್ನು ಮನುಷ್ಯರನ್ನು ಹಿಡಿಯುವ ಬೆಸ್ತರನ್ನಾಗಿ ಮಾಡುವೆನೆಂದು ಯೇಸು ಹೇಳಿದನು.
1:24 rtx4 ಸಭಾಮಂದಿರದಲ್ಲಿದ್ದ ಅಶುದ್ದ ಆತ್ಮವು ಯೇಸುವಿಗೆ ಯಾವ ಬಿರುದನ್ನು ಕೊಟ್ಟಿತು? ಸಭಾಮಂದಿರದಲ್ಲಿದ್ದ ಅಶುದ್ದ ಆತ್ಮವು ಯೇಸುವಿಗೆ ದೇವರಿಂದ ಬಂದ ಪರಿಶುದ್ಧನು ಎಂಬ ಬಿರುದನ್ನು ಕೊಟ್ಟಿತು.
1:40-41 xyj3 ಸ್ವಸ್ಥನಾಗಬೇಕೆಂದು ಯೇಸುವನ್ನು ಬೇಡಿಕೊಂಡ ಕುಷ್ಟರೋಗಿಯ ಬಗ್ಗೆ ಯೇಸು ಯಾವ ಮನೋಭಾವವನ್ನು ಹೊಂದಿದ್ದನು? ಕುಷ್ಟರೋಗಿಯ ಮೇಲೆ ಯೇಸು ಕನಿಕರಪಟ್ಟು ಅವನನ್ನು ಸ್ವಸ್ಥ ಮಾಡಿದನು.
1:44 dzi8 ಯೇಸು ಕುಷ್ಟರೋಗಿಗೆ ಏನು ಮಾಡಲು ಹೇಳಿದನು, ಮತ್ತು ಯಾಕೆ ಹೇಳಿದನು? ಮೋಶೆಯು ಆಜ್ಞಾಪಿಸಿದ ಪ್ರಕಾರ ಹೋಗಿ ಯಜ್ಞಗಳನ್ನು ಅರ್ಪಿಸುವಂತೆ ಕುಷ್ಟರೋಗಿಗೆ ಯೇಸು ಹೇಳಿದನು. ಅವನು ಸ್ವಸ್ಥಗೊಂಡಿದ್ದು ಸಮುದಾಯದಲ್ಲಿ ಸಾಕ್ಷಿಯಾಗಿ ಕಾರ್ಯ ಮಾಡುತ್ತದೆ.
2:4 zvpg ಪಾರ್ಶ್ವವಾಯು ರೋಗಿಯನ್ನು ಹೊತ್ತುಕೊಂಡು ಬಂದಿದ್ದ ನಾಲ್ಕು ಜನರು ಏನು ಮಾಡಿದರು? ಪುರುಷರು ಮನೆಯ ಮೇಲ್ಚಾವಣಿಯನ್ನು ತೆಗೆದು ಪಾರ್ಶ್ವವಾಯು ರೋಗಿಯನ್ನು ಯೇಸುವಿನ ಬಳಿಗೆ ಇಳಿಸಿದರು
2:5 efne ಪಾರ್ಶ್ವವಾಯು ರೋಗಿಗೆ ಯೇಸು ಏನು ಹೇಳಿದನು? ಯೇಸು, “ಮಗುವೇ, ನಿನ್ನ ಪಾಪಗಳು ಕ್ಷಮಿಸಲ್ಪಟ್ಟಿವೆ” ಎಂದು ಹೇಳಿದನು.
2:6-7 k9lq ಯೇಸು ಹೇಳಿದ್ದಕ್ಕೆ ಕೆಲವು ಶಾಸ್ತ್ರಿಗಳು ಯಾಕೆ ವಿರೋಧಿಸಿದರು? ದೇವರು ಮಾತ್ರ ಪಾಪಗಳನ್ನು ಕ್ಷಮಿಸಲು ಸಾಧ್ಯ ಆದ್ದರಿಂದ ಯೇಸು ದೇವದೂಷಣೆ ಮಾಡಿದ್ದಾನೆ ಎಂದು ಕೆಲವು ಶಾಸ್ತ್ರಿಗಳು ಯೋಚಿಸಿದರು.
2:10-12 v3ys ಈ ಭೂಮಿಯ ಪಾಪಗಳನ್ನು ಮೇಲೆ ಕ್ಷಮಿಸಲು ಆತನಿಗೆ ಅಧಿಕಾರವಿದೆಯೆಂದು ಯೇಸು ಹೇಗೆ ತೋರ್ಪಡಿಸಿದನು? ಯೇಸು ಪಾರ್ಶ್ವವಾಯು ರೋಗಿಗೆ ನಿನ್ನ ಹಾಸಿಗೆಯನ್ನು ತೆಗೆದುಕೊಂಡು ಮನೆಗೆ ಹೋಗು ಎಂದು ಯೇಸು ಹೇಳಿದನು, ಮತ್ತು ಆ ಮನುಷ್ಯನು ಹಾಗೆಯೇ ಮಾಡಿದನು.
2:13-14 llaq ಯೇಸು ಲೇವಿಗೆ ತನ್ನನ್ನು ಹಿಂಬಾಲಿಸು ಎಂದು ಹೇಳಿದಾಗ ಲೇವಿಯು ಏನು ಮಾಡುತ್ತಿದ್ದನು? ಯೇಸು ಅವನನ್ನು ಕರೆದಾಗ ಲೇವಿಯು ಸುಂಕ ವಸೂಲಿ ಮಾಡುವ ಸ್ಥಳದಲ್ಲಿ ಕುಳಿತುಕೊಂಡಿದ್ದನು.
2:18 p9ln ಕೆಲವು ಜನರು ಉಪವಾಸದ ಬಗ್ಗೆ ಯೇಸುವನ್ನು ಯಾವ ಪ್ರಶ್ನೆಯನ್ನು ಕೇಳಿದರು? ಯೋಹಾನನ ಶಿಷ್ಯರು ಮತ್ತು ಫರಿಸಾಯರ ಶಿಷ್ಯರು ಉಪವಾಸ ಮಾಡುತ್ತಾರೆ ಆದರೆ ಯೇಸುವಿನ ಶಿಷ್ಯರು ಯಾಕೆ ಉಪವಾಸ ಮಾಡಲಿಲ್ಲವೆಂದು ಅವರು ಯೇಸುವನ್ನು ಕೇಳಿದರು.
2:19 w6go ಆತನ ಶಿಷ್ಯರು ಯಾಕೆ ಉಪವಾಸ ಮಾಡಿತ್ತಿಲ್ಲವೆಂದು ಯೇಸು ಹೇಗೆ ವಿವರಿಸಿದನು? ಮದುಮಗನ ಜೊತೆಯಲ್ಲಿ ಇನ್ನೂ ಮದುವೆಯ ಜನರು ಇರುವಾಗ, ಅವರು ಉಪವಾಸ ಮಾಡಲು ಆಗುವುದಿಲ್ಲವೆಂದು ಯೇಸು ಹೇಳಿದನು.
2:23-24 ej7h ಫರಿಸಾಯರಿಗೆ ಬೇಸರಿಕೆ ಬರುವಂತೆ ಸಬ್ಬತ್ ದಿನದಲ್ಲಿ ಯೇಸುವಿನ ಶಿಷ್ಯರು ಹೊಲದಲ್ಲಿ ಏನು ಮಾಡಿದರು? ಸಬ್ಬತ್ ದಿನದಲ್ಲಿ ಯೇಸುವಿನ ಶಿಷ್ಯರು ಹೊಲದಲ್ಲಿದ್ದ ತೆನೆಗಳನ್ನು ಮುರಿದುಕೊಂಡು ಅವುಗಳನ್ನು ತಿಂದರು.
2:25-26 iwe2 ಸಾಮಾನ್ಯವಾಗಿ ನಿಷೇಧಿಸಲ್ಪಟ್ಟ ರೊಟ್ಟಿಯು ಬೇಕಾದವರ ಮತ್ತು ತಿನ್ನುವವರ ಬಗ್ಗೆ ಯೇಸು ಯಾವ ಉದಾಹರಣೆಯನ್ನು ಕೊಟ್ಟನು? ದಾವೀದನು ಕೊರತೆಯುಳ್ಳವನಾಗಿ, ಯಾಜಕರ ಹೊರತು ಮತ್ತಾರು ತಿನ್ನಬಾರದ ರೊಟ್ಟಿಯನ್ನು ತಿಂದಂಥ ಉದಾಹರಣೆಯನ್ನು ಯೇಸು ಉದಾಹರಣೆಯಾಗಿ ಕೊಟ್ಟನು.
3:1-2 o82f ಸಬ್ಬತ್ ದಿನದಲ್ಲಿ ಸಭಾಮಂದಿರದಲ್ಲಿ ಅವರು ಯೇಸುವನ್ನು ಯಾಕೆ ಗಮನಿಸುತ್ತಿದ್ದರು? ಸಬ್ಬತ್ ದಿನದಲ್ಲಿ ಆತನು ಸ್ವಸ್ಥಮಾಡುತ್ತಾನೋ, ಸ್ವಸ್ಥಮಾಡುವುದಾದರೆ ಆತನನ್ನು ದೂಷಿಸಬಹುದೆಂದು ಅವರುಗಳು ಯೇಸುವನ್ನು ಗಮನಿಸುತ್ತಿದ್ದರು.
3:4 dk1g ಸಬ್ಬತ್ ದಿನದ ಬಗ್ಗೆ ಜನರನ್ನು ಯೇಸು ಯಾವ ಪ್ರಶ್ನೆಯನ್ನು ಕೇಳಿದನು? ಸಬ್ಬತ್ ದಿನದಲ್ಲಿ ಕೆಟ್ಟದ್ದನ್ನು ಮಾಡುವುದು, ಅಥವಾ ಒಳ್ಳೆಯದನ್ನು ಮಾಡುವುದು ಯಾವುದು ಶಾಸ್ತ್ರಸಮ್ಮತವಾದುದು ಎಂದು ಯೇಸು ಜನರನ್ನು ಕೇಳಿದನು.
3:14-15 e2s0 ಯೇಸು ಎಷ್ಟು ಮಂದಿ ಅಪೊಸ್ತಲರನ್ನು ನೇಮಿಸಿದನು ಮತ್ತು ಅವರುಗಳು ಏನು ಮಾಡಬೇಕಾಗಿತ್ತು? ಯೇಸು ತನ್ನ ಜೊತೆಯಲ್ಲಿರಲು, ಸುವಾರ್ತೆ ಸಾರಲು, ಮತ್ತು ದೆವ್ವಗಳನ್ನು ಬಿಡಿಸುವ ಅಧಿಕಾರವನ್ನು ಹೊಂದಿದವರಾಗಿರಲು 12 ಮಂದಿ ಅಪೊಸ್ತಲರನ್ನು ನೇಮಿಸಿದನು.
3:21 rh8o ಯೇಸುವಿನ ಸುತ್ತವಿದ್ದ ಜನರ ಗುಂಪುಗಳ ಮತ್ತು ಘಟನೆಗಳ ಬಗ್ಗೆ ಯೇಸುವಿನ ಕುಟುಂಬದವರು ಏನೆಂದು ಯೋಚಿಸಿದರು? ಯೇಸುವಿನ ಕುಟುಂಬದವರು ಆತನಿಗೆ ಆತನಿಗೆ ಹುಚ್ಚುಹಿಡಿದಿದೆ ಎಂದು ಯೋಚಿಸಿದರು.
3:23-24 ob9v ಶಾಸ್ತ್ರಿಗಳ ಆರೋಪಕ್ಕೆ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಯಾವುದೇ ರಾಜ್ಯವು ತನಗೆ ವಿರುದ್ದವಾಗಿ ವಿಭಜನೆಗೊಂಡಿದ್ದರೆ ನಿಲ್ಲುವುದಿಲ್ಲವೆಂದು ಯೇಸು ಪ್ರತಿಕ್ರಿಯಿಸಿದನು.
4:11 o0ss ಯೇಸು ಹನ್ನೆರಡು ಮಂದಿಗೆ ಏನನ್ನು ಕೊಡಲಾಗಿದೆ ಆದರೆ ಹೊರಗಿನವರಿಗೆ ಯಾಕೆ ಕೊಡಲಾಗಿಲ್ಲ ಎಂದು ಹೇಳಿದನು? ಹನ್ನೆರಡು ಮಂದಿಗೆ ದೇವರ ರಾಜ್ಯದ ಗುಟ್ಟು ಕೊಡಲಾಗಿದೆ ಆದರೆ ಹೊರಗಿನವರಿಗೆ ಕೊಡಲಾಗಿಲ್ಲ ಎಂದು ಯೇಸು ಹೇಳಿದನು.
4:15 t1r5 ದಾರಿಯ ಮೇಲೆ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯವನ್ನು ಕೇಳಿದರೂ, ತಕ್ಷಣವೇ ಸೈತಾನನು ಅದನ್ನು ಅವರಿಂದ ತೆಗೆದುಕೊಂಡು ಹೋಗುತ್ತಾನೆ ಅಂಥವರನ್ನು ಅದು ಪ್ರತಿನಿಧಿಸುತ್ತದೆ.
4:16-17 zy18 ಬಂಡೆಯ ನೆಲದ ಮೇಲೆ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ವಾಕ್ಯವನ್ನು ಸಂತೋಷದಿಂದ ಕೇಳಿಕೊಂಡರೂ, ಸಂಕಟವು ಬಂದಾಗ, ಅವರು ಎಡವಿಬೀಳುವಂಥವರನ್ನು ಅದು ಪ್ರತಿನಿಧಿಸುತ್ತದೆ.
4:18-19 alo5 ಮುಳ್ಳು ಗಿಡಗಳ ಮಧ್ಯದಲ್ಲಿ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯವನ್ನು ಕೇಳಿಸಿಕೊಂಡರೂ, ಲೋಕದ ಚಿಂತೆಗಳು ಅವುಗಳನ್ನು ಅಡಗಿಸಿಬಿಡುವಂಥವರನ್ನು ಅದು ಪ್ರತಿನಿಧಿಸುತ್ತದೆ.
4:20 lhwr ಒಳ್ಳೆಯ ಮಣ್ಣಿನಲ್ಲಿ ಬಿತ್ತಿದ್ದ ಬೀಜವು ಏನನ್ನು ಪ್ರತಿನಿಧಿಸುತ್ತದೆ? ದೇವರ ವಾಕ್ಯವನ್ನು ಕೇಳಿಸಿಕೊಂಡು, ಅದನ್ನು ಸ್ವೀಕರಿಸಿ, ಫಲವನ್ನು ಕೊಡುವಂಥವರನ್ನು ಅದು ಪ್ರತಿನಿಧಿಸುತ್ತದೆ.
4:26-27 fteq ಬೀಜವನ್ನು ನೆಲದಲ್ಲಿ ಬಿತ್ತು ಒಬ್ಬ ಮನುಷ್ಯನಿಗೆ ದೇವರ ರಾಜ್ಯವು ಹೇಗೆ ಹೋಲಿಕೆಯಾಗಿದೆ? ಮನುಷ್ಯನು ಬೀಜವನ್ನು ಬಿತ್ತುತ್ತಾನೆ, ಅದು ಬೆಳೆಯುತ್ತದೆ, ಆದರೆ ಅದು ಹೇಗೆ ಎಂದು ಅವನಿಗೆ ತಿಳಿಯದು, ಸುಗ್ಗಿಕಾಲ ಬಂದು ಫಸಲು ಮಾಗಿದಾಗ ಅವನು ಅದನ್ನು ಕೊಯ್ಯಿದು ಸಂಗ್ರಹಿಸುತ್ತಾನೆ.
4:30-32 tzc2 ಯಾವ ರೀತಿಯಲ್ಲಿ ದೇವರ ರಾಜ್ಯವು ಸಾಸಿವೆ ಬೀಜಕ್ಕೆ ಹೋಲಿಕೆಯಾಗಿದೆ? ಸಾಸಿವೆಕಾಳು ಬಹಳ ಸಣ್ಣ ಬೀಜವಾಗಿ ಪ್ರಾರಂಭವಾಗುತ್ತದೆ, ಆದಾಗ್ಯೂ ಅನೇಕರು ಅವರುಗಳಿಗೆ ಗೂಡುಗಳನ್ನು ಮಾಡಿಕೊಳ್ಳುವಷ್ಟು ದೊಡ್ಡ ಗಿಡವಾಗಿ ಬೆಳೆಯುತ್ತದೆ.
4:41 fkpr ಯೇಸು ಇದನ್ನು ಮಾಡಿದ ನಂತರ, ಶಿಷ್ಯರ ಪ್ರತಿಕ್ರಿಯೆ ಏನಾಗಿತ್ತು? ಶಿಷ್ಯರು ಮಹಾ ಭಯದಿಂದ ಕೂಡಿದರು, ಗಾಳಿಯೂ ಸಮುದ್ರವೂ ಆತನಿಗೆ ವಿಧೇಯವಾಗುತ್ತಲ್ಲಾ, ಹಾಗಾದರೆ ಯೇಸು ಯಾರಾಗಿರಬಹುದೆಂದು ಆಶ್ಚರ್ಯಪಟ್ಟರು.
5:4 pvch ಈ ಮನುಷ್ಯನನ್ನು ಸರಪಳಿಗಳಿಂದ ಕಟ್ಟಿ ಅಡಗಿಸಲು ಜನರು ಪ್ರಯತ್ನಿಸಿದಾಗ ಏನಾಯಿತು? ಈ ಮನುಷ್ಯನನ್ನು ಸರಪಳಿಗಳಿಂದ ಕಟ್ಟಿ ಅಡಗಿಸಲು ಜನರು ಪ್ರಯತ್ನಿಸಿದಾಗ, ಅವನು ಸರಪಳಿಯನ್ನು ಮುರಿದು ಹಾಕಿದನು.
5:19 w96x ಗುಹೆಗಳಲ್ಲಿ ವಾಸಿಸುತ್ತಿದ್ದ ಆ ಮನುಷ್ಯನಿಗೆ ಈಗ ಏನು ಮಾಡುವಂತೆ ಯೇಸು ಹೇಳಿದನು? ಕರ್ತನು ಅವನಿಗೆ ಏನು ಮಾಡಿದ್ದಾನೆಂದು ಜನರಿಗೆ ಹೇಳುವಂತೆ ಯೇಸು ಆ ಮನುಷ್ಯನಿಗೆ ಹೇಳಿದನು.
5:22-23 pj22 ಸಭಾಮಂದಿರದ ನಾಯಕನಾದ ಯಾಯೀರನು ಯೇಸುವಿಗೆ ಏನೆಂದು ಭಿನ್ನವಿಸಿದನು? ಯಾಯೀರನು ಯೇಸುವಿಗೆ ಮರಣದ ಅಂಚಿನಲ್ಲಿರುವ ತನ್ನ ಮಗಳ ಮೇಲೆ ಕೈ ಇಡಲು ತನ್ನ ಜೊತೆಗೆ ಬರುವಂತೆ ಕೇಳಿಕೊಂಡನು.
5:30 mrlf ಆ ಹೆಂಗಸು ಆತನ ಬಟ್ಟೆಯ ಗೊಂಡೆಯನ್ನು ಮುಟ್ಟಿದಾಗ ಯೇಸು ಏನು ಮಾಡಿದನು? ತನ್ನ ಮೂಲಕ ಶಕ್ತಿಯು ಹರಿದು ಹೋಯಿತು ಎಂದು ತಿಳಿದು ಯೇಸು ತನ್ನ ಬಟ್ಟೆಯನ್ನು ಯಾರು ಮುಟ್ಟಿದರು ಎಂದು ಕೇಳಿದನು.
5:34 jfch ಆ ಹೆಂಗಸು ಎಲ್ಲಾ ಸತ್ಯವನ್ನು ಯೇಸುವಿಗೆ ಹೇಳಿದಾಗ, ಯೇಸು ಆಕೆಗೆ ಏನು ಹೇಳಿದನು? ಆಕೆಯ ನಂಬಿಕೆಯೇ ಆಕೆಯನ್ನು ಸ್ವಸ್ಥಮಾಡಿತು, ಸಮಾಧಾನದಿಂದ ಹೋಗು ಎಂದು ಯೇಸು ಆಕೆಗೆ ಹೇಳಿದನು.
5:40 sunl ಯಾಯೀರನ ಮಗಳು ನಿದ್ರೆ ಮಾಡುತ್ತಿದ್ದಾಳೆ ಎಂದು ಯೇಸು ಹೇಳಿದಾಗ ಮನೆಯಲ್ಲಿದ್ದ ಜನರು ಏನು ಮಾಡಿದರು? ಯಾಯೀರನ ಮಗಳು ನಿದ್ರೆ ಮಾಡುತ್ತಿದ್ದಾಳೆ ಎಂದು ಯೇಸು ಹೇಳಿದಾಗ ಜನರು ಯೇಸುವನ್ನು ಅಪಹಾಸ್ಯ ಮಾಡಿದರು.
6:4 d9fa ಎಲ್ಲಿ ಪ್ರವಾದಿಗೆ ಗೌರವ ಇರುವುದಿಲ್ಲ ಎಂದು ಯೇಸು ಹೇಳಿದನು? ಪ್ರವಾದಿಗೆ ಅವನ ಸ್ವಂತ ಊರಿನಲ್ಲಿಯೂ, ಅವನ ಸಂಬಂಧಿಕರ ಮಧ್ಯದಲ್ಲಿಯೂ, ಅವನ ಸ್ವಂತ ಮನೆಯಲ್ಲಿಯೂ ಗೌರವ ಇರುವುದಿಲ್ಲ ಎಂದು ಯೇಸು ಹೇಳಿದನು.
6:11 yfhp ಆ ಸ್ಥಳದವರು ಅವರನ್ನು ಸ್ವೀಕರಿಸದಿದ್ದರೆ ಆ ಸ್ಥಳಕ್ಕೆ ಏನು ಮಾಡುವಂತೆ ಯೇಸು ಆ ಹನ್ನೆರಡು ಮಂದಿಗೆ ಹೇಳಿದನು? ಯೇಸು ಆ ಹನ್ನೆರಡು ಮಂದಿಗೆ ಅವರ ಕಾಲ ಕೆಳಗೆ ಇರುವ ಧೂಳನ್ನು ಅವರ ವಿರುದ್ದ ಸಾಕ್ಷಿಯಾಗಿ ಜಾಡಿಸಿ ಬಿಡಿರಿ ಎಂದು ಹೇಳಿದನು.
6:18 wv8i ಸ್ನಾನಿಕನಾದ ಯೋಹಾನನು ಹೆರೋದನಿಗೆ ಯಾವ ಅಧರ್ಮವನ್ನು ಮಾಡುತ್ತಿದ್ದಿಯಾ ಎಂದು ಹೇಳಿದನು? ಯೋಹಾನನು ಹೆರೋದನಿಗೆ ನಿನ್ನ ಸಹೋದರನ ಹೆಂಡತಿಯನ್ನು ಮದುವೆ ಮಾಡಿಕೊಳ್ಳುವುದು ಅಧರ್ಮವೆಂದು ಹೇಳಿದನು.
6:20 l858 ಯೋಹಾನನು ಉಪದೇಶ ಮಾಡುವುದನ್ನು ಕೇಳಿಸಿಕೊಂಡಾಗ ಹೆರೋದನು ಹೇಗೆ ಪ್ರತಿಕ್ರಿಯಿಸಿದನು? ಯೋಹಾನನು ಉಪದೇಶ ಮಾಡುವುದನ್ನು ಕೇಳಿಸಿಕೊಂಡ ಹೆರೋದನು ಗಲಿಬಿಲಿ ಗೊಂಡನು, ಆದರೂ ಅವನ ಮಾತನ್ನು ಸಂತೋಷದಿಂದ ಕೇಳಿಸಿಕೊಳ್ಳುತ್ತಿದ್ದನು.
6:23 fzf0 ಹೆರೋದನು ಅಣೆಯಿಟ್ಟು ಹೆರೋದ್ಯಳಿಗೆ ಏನೆಂದು ಮಾತು ಕೊಟ್ಟನು? ಆಕೆ ಏನೇ ಕೇಳಿಕೊಂಡರೂ, ಅರ್ಧ ರಾಜ್ಯವನ್ನೇ ಕೇಳಿಕೊಂಡರೂ ಆಕೆಗೆ ಕೊಡುತ್ತೆನೆಂದು ಹೆರೋದನು ಆಣೆಯಿಟ್ಟು ಹೇಳಿದನು.
6:26 cu47 ಹೆರೋದ್ಯಳ ಕೋರಿಕೆಗೆ ಹೆರೋದನು ಹೇಗೆ ಪ್ರತಿಕ್ರಿಯಿಸಿದನು? ಹೆರೋದನಿಗೆ ಬಹಳ ದು:ಖವಾಯಿತು, ಆದರೂ ಅವನು ಅತಿಥಿಗಳ ಮುಂದೆ ಮಾಡಿದ್ದ ಆಣೆಗಳ ನಿಮಿತ್ತವಾಗಿ ಆಕೆಯ ಕೋರಿಕೆಯನ್ನು ನಿರಾಕರಿಸಲಿಲ್ಲ.
6:33 c20j ಯೇಸು ಮತ್ತು ಅಪೋಸ್ತಲರು ವಿಶ್ರಾಂತಿಯನ್ನು ತೆಗೆದುಕೊಳ್ಳಲು ಹೋಗುವುದಕ್ಕೆ ಪ್ರಯತ್ನಿಸುತ್ತಿರುವಾಗ ಏನಾಯಿತು? ಅನೇಕ ಜನರು ಅವರನ್ನು ಗುರುತಿಸಿ ಓಡುತ್ತಾ ಯೇಸು ಮತ್ತು ಅಪೊಸ್ತಲರ ಬರುವುದಕ್ಕೆ ಮೊದಲೇ ಅವರು ಅಲ್ಲಿಗೆ ಬಂದರು.
6:37 if60 ಯೇಸು ಜನರಿಗೆ ಊಟಕ್ಕೆ ಏನು ಕೊಡಬೇಕೆಂದು ಇದ್ದೀರಿ ಎಂದು ಕೇಳಿದಾಗ ಶಿಷ್ಯರು ಅದರ ಬಗ್ಗೆ ಏನು ಯೋಚಿಸಿದರು? ಅವರು ಹೋಗಿ 200 ದಿನಾರಿನ ಬೆಲೆಯ ರೊಟ್ಟಿಯನ್ನು ಖರೀದಿಸಬೇಕೆಂದು ಶಿಷ್ಯರು ಆಲೋಚಿಸಿದರು.
6:41 bqyw ರೊಟ್ಟಿಗಳನ್ನು ಮತ್ತು ಮೀನನ್ನು ತೆಗೆದುಕೊಂಡು ಯೇಸು ಏನು ಮಾಡಿದನು? ರೊಟ್ಟಿಗಳನ್ನು ಮತ್ತು ಮೀನನ್ನು ತೆಗೆದುಕೊಂಡು, ಯೇಸು ಪರಲೋಕದ ಕಡೆಗೆ ನೋಡಿ, ರೊಟ್ಟಿಗಳನ್ನು ಆಶೀರ್ವದಿಸಿ ಮುರಿದು, ಆತನ ಶಿಷ್ಯರಿಗೆ ಕೊಟ್ಟನು.
6:52 icdc ರೊಟ್ಟಿಗಳಿಂದ ಆದ ಅದ್ಬುತವನ್ನು ಶಿಷ್ಯರು ಯಾಕೆ ಅರ್ಥಮಾಡಿಕೊಳ್ಳಲಿಲ್ಲ? ರೊಟ್ಟಿಗಳಿಂದ ಆದ ಅದ್ಬುತವನ್ನು ಶಿಷ್ಯರು ಅರ್ಥಮಾಡಿಕೊಳ್ಳಲಿಲ್ಲ ಯಾಕೆಂದರೆ ಅರ್ಥಮಾಡಿಕೊಳ್ಳಲು ಅವರ ಮನಸ್ಸುಗಳು ತುಂಬಾ ಮಂದವಾಗಿದ್ದವು.
6:55 qidu ಆ ಪ್ರದೇಶದ ಜನರು ಯೇಸುವನ್ನು ಗುರುತಿಸಿದ ಮೇಲೆ ಏನು ಮಾಡಿದರು? ಯೇಸು ಎಲ್ಲೆಲ್ಲಿಗೆ ಬರುತ್ತಿದ್ದಾನೆ ಎಂದು ಕೇಳಿಸಿಕೊಂಡ ಜನರು ರೋಗಿಗಳನ್ನು ಡೋಲಿಗಳಲ್ಲಿ ಕರೆದುಕೊಂಡು ಬರುತ್ತಿದ್ದರು.
7:3-4 ym0v ಊಟ ಮಾಡುವ ಮೊದಲು ಕೈಗಳನ್ನು, ಲೋಟಗಳನ್ನು, ಚೊಂಬುಗಳನ್ನು, ಮತ್ತು ತಾಮ್ರದ ಪಾತ್ರೆಗಳನ್ನು ತೊಳೆಯುವುದು ಯಾರ ಸಂಪ್ರದಾಯವಾಗಿತ್ತು? ಊಟ ಮಾಡುವ ಮೊದಲು ಕೈಗಳನ್ನು, ಲೋಟಗಳನ್ನು, ಚೊಂಬುಗಳನ್ನು, ಮತ್ತು ತಾಮ್ರದ ಪಾತ್ರೆಗಳನ್ನು ತೊಳೆಯುವುದು ಹಿರಿಯರ ಸಂಪ್ರದಾಯವಾಗಿತ್ತು
7:8-9 qrmr ತೊಳೆಯುವ ವಿಷಯದ ಬಗ್ಗೆ ಫರಿಸಾಯರು ಮತ್ತು ಶಾಸ್ತ್ರಿಗಳ ಉಪದೇಶದ ಬಗ್ಗೆ ಯೇಸು ಏನು ಹೇಳಿದನು? ಯೇಸು ಫರಿಸಾಯರು ಮತ್ತು ಶಾಸ್ತ್ರಿಗಳು ಪುರುಷರಿಗೆ ದೇವರ ಆಜ್ಞೆಯನ್ನು ಬಿಟ್ಟು ಮನುಷ್ಯರು ಕಲ್ಪಿಸಿದ ನಿಯಮವನ್ನು ಹಿಡಿದಿದ್ದೀರಿ ಎಂದು ಹೇಳಿದನು.
7:11-13 d1yr ನಿಮ್ಮ ತಂದೆ ಮತ್ತು ತಾಯಿಯನ್ನು ಸನ್ಮಾನಿಸಿರಿ ಎಂದು ದೇವರು ಕೊಟ್ಟ ಆಜ್ಞೆಯನ್ನು ಫರಿಸಾಯರು ಮತ್ತು ಶಾಸ್ತ್ರಿಗಳು ಹೇಗೆ ಅಲ್ಲಗಳೆದರು? ಅವರು ತಮ್ಮ ತಂದೆ ತಾಯಿಗೆ ಸಹಾಯಕವಾಗುವಂತೆ ಕೊಡುವ ಹಣವನ್ನು ಕೊರ್ಬಾನಿನಂತೆ ಕೊಡಬೇಕೆಂದು ಜನರಿಗೆ ಹೇಳುತ್ತಾ ದೇವರ ಆಜ್ಞೆಯನ್ನು ಅಲ್ಲಗಳೆದರು.
7:15 nqfn ಒಬ್ಬ ವ್ಯಕ್ತಿಯನ್ನು ಯಾವುದು ಮಲಿನ ಮಾಡುವುದಿಲ್ಲ ಎಂದು ಯೇಸು ಹೇಳಿದನು? ಒಬ್ಬ ವ್ಯಕ್ತಿಯ ಹೊರಗಿನಿಂದ ಬರುವುದು ಅವನೊಳಗೆ ಹೋಗಿ ಅವನನ್ನು ಮಲಿನ ಮಾಡುವುದಿಲ್ಲವೆಂದು ಯೇಸು ಹೇಳಿದನು.
7:21-22 t1rz ಒಬ್ಬ ಮನುಷ್ಯನನ್ನು ಮಲಿನ ಮಾಡಲು ಅವನೊಳಗಿನಿಂದ ಬರುವಂಥ ವಿಷಯಗಳು ಯಾವುವು ಎಂದು ಯೇಸು ಹೇಳಿದನು? ದುರಾಲೋಚನೆಗಳು, ಲೈಂಗಿಕ ಅನೈತಿಕತೆ, ಕಳ್ಳತನ, ಕೊಲೆ, ಹಾದರ, ದ್ರವ್ಯಾಶೆ, ಕೆಡಕುತನ, ಮೋಸ, ಬಂಡುತನ, ಹೊಟ್ಟೆಕಿಚ್ಚು, ಬೈಗುಳ, ಸೊಕ್ಕು, ಮತ್ತು ಬುದ್ದಿಗೇಡುತನಗಳು ಒಬ್ಬ ವ್ಯಕ್ತಿಯೊಳಗಿಂದ ಬಂದು ಅವನನ್ನು ಮಲಿನಗೊಳಿಸುತ್ತದೆಂದು ಯೇಸು ಹೇಳಿದನು.
7:28 q2o4 ಮಕ್ಕಳ ರೊಟ್ಟಿಗಳನ್ನು ತೆಗೆದುಕೊಂಡು ನಾಯಿಗಳಿಗೆ ಹಾಕುವುದು ಸರಿಯಲ್ಲವೆಂದು ಯೇಸು ಆಕೆಗೆ ಹೇಳಿದಾಗ ಆ ಹೆಂಗಸು ಹೇಗೆ ಪ್ರತಿಕ್ರಿಯಿಸಿದಳು? ಆ ಹೆಂಗಸು ಮೇಜಿನ ಕೆಳಗಿರುವ ನಾಯಿಗಳೂ ಕೂಡ ಮಕ್ಕಳು ತಿಂದು ಬಿಟ್ಟ ರೊಟ್ಟಿಯ ಚೂರುಗಳನ್ನು ತಿನ್ನುತ್ತವೆಂದು ಹೇಳಿದಳು.
7:33-34 ca4d ಕಿವುಡು ಮತ್ತು ಮಾತನಾಡುವ ತೊಂದರೆ ಇದ್ದ ಮನುಷ್ಯನನ್ನು ಯೇಸುವಿನ ಬಳಿ ಕರೆದು ತಂದಾಗ, ಅವನನ್ನು ಸ್ವಸ್ಥಮಾಡಲು ಆತನು ಏನು ಮಾಡಿದನು? ಯೇಸು ತನ್ನ ಬೆರಳುಗಳನ್ನು ಮನುಷ್ಯನ ಕಿವಿಯೊಳಗೆ ಇಟ್ಟು, ಉಗುಳಿ, ಅವನ ನಾಲಿಗೆಯನ್ನು ಮುಟ್ಟಿ, ನಂತರ ಪರಲೋಕದ ಕಡೆಗೆ ನೋಡಿ, “ತೆರೆಯಲ್ಪಡಲಿ!” ಎಂದು ಹೇಳಿದನು.
7:36 hc18 ಆತನು ಮಾಡಿದಂತ ಸ್ವಸ್ಥತೆಗಳ ಬಗ್ಗೆ ಹೇಳಬಾರದೆಂದು ಯೇಸು ಅವರಿಗೆ ಹೇಳಿದಾಗ ಜನರು ಏನು ಮಾಡಿದರು? ಯೇಸು ಅವರಿಗೆ ಸುಮ್ಮನೆ ಇರಬೇಕೆಂದು ಹೆಚ್ಚಾಗಿ ಆಜ್ಞಾಪಿಸಿದರೂ, ಅವರುಗಳು ಅದರ ಬಗ್ಗೆ ಹೆಚ್ಚಾಗಿ ಮಾತನಾಡುತ್ತಿದ್ದರು.
8:1-2 slgu ಯೇಸು ತನ್ನನ್ನು ಹಿಂಬಾಲಿಸುತ್ತಿದ್ದ ದೊಡ್ಡ ಜನರ ಗುಂಪಿನ ಬಗ್ಗೆ ಕಾಳಜಿಯಿಂದ ಏನು ಹೇಳಿದನು? ಯೇಸು ತನ್ನ ಹಿಂಬಾಲಿಸುತ್ತಿದ್ದ ದೊಡ್ಡ ಜನರಗುಂಪಿಗೆ ಊಟಕ್ಕೆ ಏನೂ ಇಲ್ಲವೆಂದು ಕಾಳಜಿಯಿಂದ ಹೇಳಿದನು.
8:16 fjm2 ಯೇಸು ಯಾವುದರ ಬಗ್ಗೆ ಮಾತನಾಡುತ್ತಿದ್ದಾನೆಂದು ಶಿಷ್ಯರು ಆಲೋಚಿಸಿದರು? ಅವರು ರೊಟ್ಟಿಯನ್ನು ತರಲು ಮರೆತಿರುವುದರ ಬಗ್ಗೆ ಯೇಸು ಮಾತನಾಡುತ್ತಿದ್ದಾನೆಂದು ಶಿಷ್ಯರು ಆಲೋಚಿಸಿದರು.
8:19 nrwx ಯೇಸು ಐದು ರೊಟ್ಟಿಯ ತುಂಡುಗಳನ್ನು ಮುರಿದಾಗ ಏನು ನಡೆಯಿತೆಂದು ಯೇಸು ಶಿಷ್ಯರನ್ನು ನೆನಪಿಸಿದನು? ಆತನು ಐದು ರೊಟ್ಟಿಗಳನ್ನು ಮುರಿದಾಗ, 5,000 ಜನರಿಗೆ ಊಟ ಬಡಿಸಿದನು ಮತ್ತು ಮುರಿದ ತುಂಡುಗಳನ್ನು 12 ಪುಟ್ಟಿಗಳಷ್ಟು ಒಟ್ಟುಗೂಡಿಸಲಾಯಿತೆಂದು ಯೇಸು ಅವರಿಗೆ ನೆನಪಿಸಿದನು.
8:31 ssr3 ಮುಂದೆ ಆಗುವಂತ ಯಾವ ಘಟನೆಗಳ ಬಗ್ಗೆ ಯೇಸು ಸ್ಪಷ್ಟವಾಗಿ ಆತನ ಶಿಷ್ಯರಿಗೆ ಬೋಧಿಸಲು ಪ್ರಾರಂಭಿಸಿದನು? ಯೇಸು ಆತನ ಶಿಷ್ಯರಿಗೆ ಮನುಷ್ಯ ಕುಮಾರನು ಸಂಕಟನ್ನು ಅನುಭವಿಸಿ, ತಿರಸ್ಕರಿಸಲ್ಪಡಬೇಕು, ಕೊಲ್ಲಲ್ಪಡಬೇಕು, ಮತ್ತು ಮೂರು ದಿನಗಳ ನಂತರ ಎದ್ದೇಳಬೇಕೆಂದು ಬೋಧಿಸಿದನು.
8:33 o8md ಪೇತ್ರನು ಯೇಸುವನ್ನು ಗದರಿಸಲು ಪ್ರಾರಂಭಿಸಿದಾಗ ಯೇಸು ಏನೆಂದು ಹೇಳಿದನು? ಯೇಸು ಪೇತ್ರನಿಗೆ, “ಸೈತಾನನೇ, ನನ್ನ ಮುಂದೆ ನಿಲ್ಲಬೇಡ! ನಡೆ, ನಿನ್ನ ಯೋಚನೆ ಮನುಷ್ಯರ ಯೋಚನೆಯೇ ಹೊರತು ದೇವರದಲ್ಲ" ಎಂದು ಹೇಳಿದನು.
8:34 vqyx ಯಾರಾದರೂ ತನ್ನನ್ನು ಹಿಂಬಾಲಿಸಬೇಕಾದರೆ ಅವರು ಏನು ಮಾಡಬೇಕೆಂದು ಯೇಸು ಹೇಳಿದನು? ಯಾರಾದರೂ ತನ್ನನ್ನು ಹಿಂಬಾಲಿಸಬೇಕಾದರೆ ಅವರು ತಮ್ಮನ್ನು ತಾವೇ ಅಲ್ಲಗಳೆಯಬೇಕು, ತನ್ನ ಶಿಲುಬೆಯನ್ನು ಹೊತ್ತುಕೊಂಡು, ತನ್ನನ್ನು ಹಿಂಬಾಲಿಸಬೇಕು ಎಂದು ಯೇಸು ಹೇಳಿದನು.
8:36 eosc ಒಬ್ಬ ವ್ಯಕ್ತಿಯು ಲೋಕದ ವಸ್ತುಗಳನ್ನು ಪಡೆದುಕೊಳ್ಳುವ ಬಯಕೆಯ ಬಗ್ಗೆ ಯೇಸು ಏನು ಹೇಳಿದನು? ಯೇಸು, “ಒಬ್ಬ ಮನುಷ್ಯನು ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ಪ್ರಾಣ ನಷ್ಟಪಟ್ಟರೆ ಅವನಿಗೆ ಪ್ರಯೋಜನವೇನು?” ಎಂದು ಹೇಳಿದನು.
8:38 fczm ಯೇಸುವಿನ ಬಗ್ಗೆ ಮತ್ತು ಆತನ ಮಾತುಗಳ ಬಗ್ಗೆ ನಾಚಿಕೆ ಪಡುವವರ ಬಗ್ಗೆ ಯೇಸು ಏನು ಹೇಳಿದನು? ಯೇಸು ತನ್ನ ಬರೋಣದಲ್ಲಿ ತನ್ನನ್ನೂ ತನ್ನ ಮಾತುಗಳನ್ನೂ ನೋಡಿ ನಾಚಿಕೆಪಡುವವರನ್ನು ನಾಚಿಕೆಗೆ ಒಳಪಡಿಸುವನೆಂದು ಹೇಳಿದನು.
9:1 ryud ದೇವರ ರಾಜ್ಯವು ಶಕ್ತಿಯಿಂದ ಬರುವುದನ್ನು ಯಾರು ನೋಡುವರು ಎಂದು ಯೇಸು ಹೇಳಿದನು? ಯೇಸುವಿನೊಂದಿಗೆ ಅಲ್ಲಿ ನಿಂತಿದ್ದ ಕೆಲವರು ದೇವರ ರಾಜ್ಯವು ಶಕ್ತಿಯಿಂದ ಬರುವುದನ್ನು ನೋಡುವವರೆಗೂ ಅವರು ಸಾಯುವುದಿಲ್ಲ ಎಂದನು.
9:9 wh06 ಬೆಟ್ಟದ ಮೇಲೆ ಅವರು ನೋಡಿದ್ದರ ಬಗ್ಗೆ ಯೇಸು ಶಿಷ್ಯರಿಗೆ ಏನೆಂದು ಆಜ್ಞಾಪಿಸಿದನು? ಮನುಷ್ಯ ಕುಮಾರನು ಮರಣದಿಂದ ಎದ್ದು ಬರುವವರೆಗೂ ಅವರು ನೋಡಿದ್ದನ್ನು ಯಾರಿಗೂ ಹೇಳಬಾರದೆಂದು ಯೇಸು ಅವರಿಗೆ ಆಜ್ಞಾಪಿಸಿದನು.
9:11-13 ct8y ಎಲೀಯನ ಬರುವಿಕೆಯ ಬಗ್ಗೆ ಯೇಸು ಏನೆಂದು ಹೇಳಿದನು? ಎಲೀಯನು ಮೊದಲು ಬಂದು ಎಲ್ಲವನ್ನು ಪುನ:ಸ್ಥಾಪಿಸುತ್ತಾನೆ, ಮತ್ತು ಎಲೀಯನು ಈಗಾಗಲೇ ಬಂದಿದ್ದಾನೆ ಎಂದು ಯೇಸು ಹೇಳಿದನು.
9:22 ifim ದುರಾತ್ಮವು ಆ ಹುಡುಗನನ್ನು ಬಿಳಿಸಿ ಅವನನ್ನು ನಾಶಮಾಡುವುದಕ್ಕಾಗಿ ಏನು ಮಾಡಿತು? ದುರಾತ್ಮವು ಆ ಹುಡುಗನನ್ನು ಬೆಂಕಿಯ ಒಳಗೆ ಅಥವಾ ನೀರಿನ ಒಳಗೆ ಬಿಳಿಸಿ ಅವನನ್ನು ನಾಶಮಾಡಲು ಪ್ರಯತ್ನಿಸಿತು.
9:23-24 ay7z ಯಾರು ನಂಬುತ್ತಾರೋ ಅವರಿಗೆ ಎಲ್ಲವೂ ಸಾಧ್ಯವೆಂದು ಯೇಸು ಹೇಳಿದಾಗ ತಂದೆಯು ಹೇಗೆ ಪ್ರತಿಕ್ರಿಯಿಸಿದನು? “ನಾನು ನಂಬುತ್ತೇನೆ! ನನ್ನ ಅಪನಂಬಿಕೆಗೆ ಸಹಾಯ ಮಾಡಿ!” ಎಂದು ತಂದೆಯು ಪ್ರತಿಕ್ರಿಯಿಸಿದನು.
9:28-29 uh6o ಹುಡುಗನ ಒಳಗೆ ಇದ್ದ ಮೂಕ ಮತ್ತು ಕಿವುಡು ಆತ್ಮವನ್ನು ಶಿಷ್ಯರಿಂದ ಬಿಡಿಸಲು ಯಾಕೆ ಆಗಲಿಲ್ಲ? ಶಿಷ್ಯರಿಂದ ಆತ್ಮವನ್ನು ಬಿಡಿಸಲು ಸಾಧ್ಯವಾಗಲಿಲ್ಲ ಯಾಕೆಂದರೆ ಪ್ರಾರ್ಥನೆಯಿಂದ ಹೊರತು ಮತ್ತಾವುದರಿಂದಲೂ ಅದನ್ನು ಬಿಡಿಸಲು ಆಗುವುದಿಲ್ಲ.
9:31 uvpd ಆತನಿಗೆ ಏನಾಗುತ್ತದೆ ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು? ತನ್ನನ್ನು ಮರಣಕ್ಕೆ ಕೊಲ್ಲಲ್ಲುವರು, ಆಮೇಲೆ ಮೂರು ದಿನಗಳ ನಂತರ ತಾನು ತಿರುಗಿ ಎದ್ದು ಬರುವೆನು ಎಂದು ಯೇಸು ಅವರಿಗೆ ಹೇಳಿದನು.
9:36-37 d095 ಯಾರಾದರೂ ಯೇಸುವಿನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿದರೆ, ಅವರು ಯಾರನ್ನು ಸ್ವೀಕರಿಸಿದಂತೆ ಆಗುತ್ತದೆ? ಯಾರಾದರೂ ಯೇಸುವಿನ ಹೆಸರಿನಲ್ಲಿ ಒಂದು ಚಿಕ್ಕ ಮಗುವನ್ನು ಸ್ವೀಕರಿಸಿದರೆ, ಅವರೂ ಯೇಸುವನ್ನು ಮತ್ತು ಯೇಸುವನ್ನು ಕಳುಹಿಸಿಕೊಟ್ಟವನನ್ನು ಸ್ವೀಕರಿಸಿದಂತೆ ಆಗುವುದು.
9:42 xm92 ಯೇಸುವನ್ನು ನಂಬುವ ಚಿಕ್ಕವನನ್ನು ಎಡವಿಬೀಳುವಂತೆ ಮಾಡುವವನಿಗೆ ಉತ್ತಮವಾದದು ಯಾವುದು? ಅವನ ಕುತ್ತಿಗೆಯ ಸುತ್ತಲೂ ಬೀಸುವ ಕಲ್ಲನ್ನು ಕಟ್ಟಿ ಅವನನ್ನು ಸಮುದ್ರಕ್ಕೆ ಎಸೆಯುವುದೇ ಉತ್ತಮವಾದದು.
9:47 qvrv ನಿಮ್ಮ ಕಣ್ಣು ನಿಮ್ಮನ್ನು ಎಡವುವಂತೆ ಮಾಡಿದರೆ ಏನು ಮಾಡಬೇಕೆಂದು ಯೇಸು ಹೇಳಿದನು? ನಿಮ್ಮ ಕಣ್ಣು ನಿಮ್ಮನ್ನು ಎಡವುವಂತೆ ಮಾಡಿದರೆ ನಿಮ್ಮ ಕಣ್ಣನ್ನು ಕಿತ್ತು ಬಿಸಾಡಿರಿ ಎಂದು ಯೇಸು ಹೇಳಿದನು.
10:2 tk8r ಯೇಸುವನ್ನು ಪರೀಕ್ಷಿಸಲು ಫರಿಸಾಯರು ಆತನನ್ನು ಯಾವ ಪ್ರಶ್ನೆಯನ್ನು ಕೇಳಿದರು? ಗಂಡನು ತನ್ನ ಹೆಂಡತಿಗೆ ವಿಚ್ಚೇದನ ಕೊಡುವುದು ಶಾಸ್ತ್ರಸಮ್ಮತವೋ ಎಂದು ಫರಿಸಾಯರು ಯೇಸುವನ್ನು ಕೇಳಿದರು.
10:4 p0nl ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಕೊಟ್ಟ ಆಜ್ಞೆ ಏನು? ಒಬ್ಬ ಮನುಷ್ಯನು ವಿಚ್ಚೇದನದ ಪತ್ರವನ್ನು ಬರೆದು ಕೊಟ್ಟು ಆಮೇಲೆ ಅವನ ಹೆಂಡತಿಯನ್ನು ಕಳುಹಿಸಬಿಡುವುದಕ್ಕೆ ಮೋಶೆಯು ಅವಕಾಶ ಕೊಟ್ಟನು.
10:5 cuwg ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಏಕೆ ಈ ಆಜ್ಞೆಯನ್ನು ಕೊಟ್ಟನು? ಅವರ ಹೃದಯಗಳು ಕಠಿಣವಾಗಿದ್ದರಿಂದ ವಿಚ್ಚೇದನದ ವಿಷಯವಾಗಿ ಮೋಶೆಯು ಯೆಹೂದ್ಯರಿಗೆ ಈ ಆಜ್ಞೆಯನ್ನು ಕೊಟ್ಟನು
10:6 b18w ವಿವಾಹದ ಮೂಲ ಸಂಕಲ್ಪದ ಬಗ್ಗೆ ಯೇಸು ಫರಿಸಾಯರಿಗೆ ಹೇಳುವಾಗ ಯಾವ ಐತಿಹಾಸಿಕ ಘಟನೆಯನ್ನು ಉಲ್ಲೇಖಿಸಿದನು? ಯೇಸು ವಿವಾಹದ ಕುರಿತಾದ ದೇವರ ಮೂಲ ಸಂಕಲ್ಪದ ಬಗ್ಗೆ ಹೇಳುವಾಗ ಆದಿಯಲ್ಲಿ ಗಂಡು ಮತ್ತು ಹೆಣ್ಣಿನ ಸೃಷ್ಟಿಯ ಬಗ್ಗೆ ಉಲ್ಲೇಖಿಸಿದನು.
10:13-14 ftqq ಚಿಕ್ಕ ಮಕ್ಕಳನ್ನು ಆತನ ಬಳಿಗೆ ಕರೆದುಕೊಂಡು ಬರುತ್ತಿರುವವರನ್ನು ಶಿಷ್ಯರು ಗದರಿಸಿದಾಗ ಯೇಸುವಿನ ಪ್ರತಿಕ್ರಿಯೆ ಏನಾಗಿತ್ತು? ಯೇಸು ಶಿಷ್ಯರ ಮೇಲೆ ಕೋಪಗೊಂಡು ಮತ್ತು ಅವರಿಗೆ ಚಿಕ್ಕ ಮಕ್ಕಳನ್ನು ನನ್ನ ಹತ್ತಿರಕ್ಕೆ ಬರಲು ಬಿಡಿರಿ ಎಂದು ಅವರಿಗೆ ಹೇಳಿದನು.
10:15 s8f7 ದೇವರ ರಾಜ್ಯದೊಳಗೆ ಪ್ರವೇಶಿಸಲು ಅದನ್ನು ಹೇಗೆ ಸ್ವೀಕರಿಸಬೇಕು ಎಂದು ಯೇಸು ಹೇಳಿದನು? ದೇವರ ರಾಜ್ಯವನ್ನು ಪ್ರವೇಶಿಸಲು ಚಿಕ್ಕ ಮಕ್ಕಳನ್ನು ಸ್ವೀಕರಿಸುವಂತೆ ಅದನ್ನು ಸ್ವೀಕರಿಸಬೇಕು ಎಂದು ಯೇಸು ಹೇಳಿದನು.
10:19 slbl ಒಬ್ಬ ಮನುಷ್ಯನು ನಿತ್ಯಜೀವವನ್ನು ಪಡೆಯಲು ಮೊದಲು ಏನು ಮಾಡಬೇಕೆಂದು ಯೇಸು ಹೇಳಿದನು? ನರಹತ್ಯ ಮಾಡಬಾರದು; ವ್ಯಭಿಚಾರಮಾಡಬಾರದು; ಕದಿಯಬಾರದು; ಸುಳ್ಳುಸಾಕ್ಷಿ ಹೇಳಬಾರದು; ಮೋಸಮಾಡಬಾರದು; ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು ಎಂದು ಯೇಸು ಹೇಳಿದನು.
10:22 r5hj ಯೇಸು ಈ ಆಜ್ಞೆಯನ್ನು ಕೊಟ್ಟಾಗ, ಆ ಮನುಷ್ಯನು ಹೇಗೆ ಮತ್ತು ಯಾಕೆ ಪ್ರತಿಕ್ರಿಯಿಸಿದನು? ಆ ಮನುಷ್ಯನು ಬಹಳ ಆಸ್ತಿಯುಳ್ಳವನಾಗಿದ್ದದರಿಂದ ಈ ಮಾತಿಗೆ ದುಃಖಿತನಾಗಿ ಹೊರಟುಹೋದನು.
10:29-30 ut0n ಯೇಸುವಿನ ನಿಮಿತ್ತ ಮನೆಯನ್ನಾಗಲಿ ಕುಟುಂಬವನ್ನಾಗಲಿ ಮತ್ತು ಭೂವಿುಯನ್ನಾಗಲಿ ಬಿಟ್ಟುಬಿಟ್ಟಿರುವವನು ಏನನ್ನು ಸ್ವೀಕರಿಸುತ್ತಾನೆಂದು ಯೇಸು ಹೇಳಿದನು? ಅವರು ಈ ಲೋಕದಲ್ಲಿ ನೂರು ಪಟ್ಟು ಹೆಚ್ಚಿನದನ್ನು, ಹಿಂಸೆಗಳೊಂದಿಗೆ ಹೊಂದಿಕೊಳ್ಳುವರು ಮತ್ತು ಮುಂದಿನ ಲೋಕದಲ್ಲಿ ನಿತ್ಯಜೀವವನ್ನು ಪಡೆಯುತ್ತಾರೆ ಎಂದು ಯೇಸು ಹೇಳಿದನು.
10:33-34 ie59 ಯೆರೂಸಲೇಮಿನಲ್ಲಿ ತನಗೆ ಏನು ಆಗುತ್ತದೆಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು? ತನಗೆ ಮರಣದಂಡನೆಯನ್ನು ವಿಧಿಸುವರು ಮತ್ತು ಅನ್ಯರ ಕೈಗೆ ಒಪ್ಪಿಸುವರು ಎಂದು ಯೇಸು ಶಿಷ್ಯರಿಗೆ ಹೇಳಿದನು.
10:35-37 mu7d ಯಾಕೋಬ ಮತ್ತು ಯೋಹಾನ ಯೇಸುವಿಗೆ ಏನೆಂದು ಮನವಿ ಮಾಡಿದರು? ಯಾಕೋಬ ಮತ್ತು ಯೋಹಾನನು ಒಬ್ಬನು ಯೇಸುವಿನ ಮಹಿಮೆಯಲ್ಲಿ ಬಲಗಡೆಯಲ್ಲೂ ಮತ್ತೊಬ್ಬನು ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ನಮಗೆ ಅನುಗ್ರಹಮಾಡಬೇಕೆಂದು ಮನವಿ ಮಾಡಿಕೊಂಡರು.
10:39 xafk ಯಾಕೋಬ ಮತ್ತು ಯೋಹಾನನು ಏನನ್ನು ಅನುಭವಿಸುತ್ತಾರೆಂದು ಯೇಸು ಹೇಳಿದನು? ಯಾಕೋಬ ಮತ್ತು ಯೋಹಾನರು ಯೇಸು ಕುಡಿಯುವ ಪಾತ್ರೆಯಲ್ಲಿ ಕುಡಿಯುವರು; ಯೇಸುವಿಗೆ ಆಗುವ ದೀಕ್ಷಾಸ್ನಾನವು ಅವರಿಗೆ ಆಗುವದು ಎಂದು ಯೇಸು ಹೇಳಿದನು.
10:40 vd45 ಯಾಕೋಬ ಮತ್ತು ಯೋಹಾನರ ಮನವಿಯನ್ನು ಯೇಸು ಅನುಗ್ರಹಿಸಿದನೇ? ಇಲ್ಲ. ನನ್ನ ಬಲಗಡೆಯಲ್ಲಾದರೂ ಎಡಗಡೆಯಲ್ಲಾದರೂ ಕುಳಿತುಕೊಳ್ಳುವಂತೆ ಅನುಗ್ರಹಮಾಡುವದು ನನ್ನದಲ್ಲವೆಂದು ಯೇಸು ಹೇಳಿದನು.
10:42 m3q4 ಅನ್ಯಜನರ ಅಧಿಪತಿಗಳು ತಮ್ಮ ಅಧೀನದಲ್ಲಿ ಇರುವವರೊಂದಿಗೆ ಹೇಗೆ ವರ್ತಿಸುತ್ತಾರೆಂದು ಯೇಸು ಹೇಳಿದನು? ಅನ್ಯಜನರ ಅಧಿಪತಿಗಳು ತಮ್ಮ ಅಧೀನದಲ್ಲಿರುವವರ ಮೇಲೆ ದೊರೆತನ ಮಾಡುವರೆಂದು ಯೇಸು ಹೇಳಿದನು.
10:43-44 yky8 ಶಿಷ್ಯರಲ್ಲಿ ದೊಡ್ಡವರಾಗಬೇಕೆಂದು ಯಾರು ಬಯಸುತ್ತಾರೋ ಅವರು ಹೇಗೆ ಜೀವಿಸಬೇಕೆಂದು ಯೇಸು ಹೇಳಿದನು? ಶಿಷ್ಯರಲ್ಲಿ ದೊಡ್ಡವರಾಗಬೇಕೆಂದು ಯಾರು ಬಯಸುತ್ತಾರೋ ಅವರು ಎಲ್ಲರಿಗೂ ಸೇವಕರಾಗಿರಬೇಕೆಂದು ಯೇಸು ಹೇಳಿದನು.
10:48 ece0 ಕುರುಡನಾಗಿದ್ದ ಬಾರ್ತಿಮಾಯನನ್ನು ಅನೇಕರು ಸುಮ್ಮನೆ ಇರುವಂತೆ ಹೇಳಿ ಗದರಿಸುತ್ತಿರುವಾಗ ಅವನು ಏನು ಮಾಡಿದನು? “ದಾವೀದ ಕುಮಾರನೇ, ನನ್ನನ್ನು ಕರುಣಿಸು!” ಎಂದು ಬಾರ್ತಿಮಾಯನು ಗಟ್ಟಿಯಾಗಿ ಕೂಗಿದನು.
10:52 rato ಕುರುಡನಾಗಿದ್ದ ಬಾರ್ತಿಮಾಯನಿಗೆ ಸ್ವಸ್ಥತೆಯನ್ನುಂಟು ಮಾಡಿದ್ದು ಯಾವುದೆಂದು ಯೇಸು ಹೇಳಿದನು? ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥ ಮಾಡಿತು ಎಂದು ಯೇಸು ಬಾರ್ತಿಮಾಯನಿಗೆ ಹೇಳಿದನು.
11:5-6 u8he ಶಿಷ್ಯರು ಕತ್ತೆಮರಿಯನ್ನು ಬಿಚ್ಚಿದಾಗ ಏನಾಯಿತು? ಕೆಲವು ಜನರು, ನೀವು ಏನು ಮಾಡುತ್ತಾ ಇದ್ದೀರಿ ಎಂದು ಶಿಷ್ಯರನ್ನು ಕೇಳಿದರು, ಹಾಗಾಗಿ ಯೇಸು ಹೇಳಿದಂತೆಯೇ ಅವರು ಹೇಳಿದರು, ಮತ್ತು ಆಗ ಜನರು ಅವರನ್ನು ತೆಗೆದುಕೊಂಡು ಹೋಗಲು ಬಿಟ್ಟರು.
11:8 cgd8 ಯೇಸು ಕತ್ತೆ ಮರಿಯನ್ನು ಹತ್ತಿ ದಾರಿಯಲ್ಲಿ ಹೋಗುತ್ತಿರುವಾಗ ಜನರು ದಾರಿಯ ಮೇಲೆ ಏನನ್ನು ಹಾಸಿದರು? ಜನರು ದಾರಿಯ ಮೇಲೆ ತಮ್ಮ ಬಟ್ಟೆಗಳನ್ನು ಮತ್ತು ಹೊಲದಿಂದ ಕತ್ತರಿಸಿಕೊಂಡು ಬಂದ ಕೊಂಬೆಗಳನ್ನು ಹಾಸಿದರು.
11:10 vfq1 ಯೇಸು ಯೆರೂಸಲೇಮಿನ ಕಡೆಗೆ ಸವಾರಿ ಮಾಡಿಕೊಂಡು ಹೋಗುತ್ತಿರುವಾಗ ಜನರು ಯಾವ ರಾಜ್ಯವು ಬರುತ್ತದೆಂದು ಕೂಗುತ್ತಿದ್ದರು? ಜನರು ತಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆಂದು ಕೂಗುತ್ತಿದ್ದರು.
11:15-16 pbr1 ಈ ಸಮಯದಲ್ಲಿ ಯೇಸು ದೇವಾಲಯದ ಅಂಗಳಕ್ಕೆ ಸೇರಿದಾಗ ಯೇಸು ಏನು ಮಾಡಿದನು? ಯೇಸು ಮಾರುತ್ತಿದ್ದವರನ್ನೂ ಮತ್ತು ಕೊಳ್ಳುತ್ತಿದ್ದವರನ್ನೂ ಹೊರಗೆ ಹಾಕಿದನು ಮತ್ತು ದೇವಾಲಯದ ಮೂಲಕ ಸರಕುಗಳನ್ನು ತೆದುಕೊಂಡು ಹೋಗಲು ಬಿಡಲಿಲ್ಲ.
11:24 okwn ಪ್ರಾರ್ಥನೆಯಲ್ಲಿ ನಾವು ಕೇಳುವ ಪ್ರತಿಯೊಂದಕ್ಕೂ ಏನಾಗುತ್ತದೆಂದು ಯೇಸು ಹೇಳಿದನು? ಪ್ರಾರ್ಥನೆಯಲ್ಲಿ ನಾವು ಬೇಡಿಕೊಳ್ಳುವ ಎಲ್ಲವು ಸಿಕ್ಕಿದೆ, ಮತ್ತು ಅದು ನಮ್ಮದಾಗಿರುತ್ತದೆ ಎಂದು ಯೇಸು ಹೇಳಿದನು.
11:25 udpr ಪರಲೋಕದಲ್ಲಿರುವ ನಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವಂತೆ ನಾವು ಏನು ಮಾಡಬೇಕೆಂದು ಯೇಸು ಹೇಳಿದನು? ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ ಆಗ ಪರಲೋಕದಲ್ಲಿರುವ ತಂದೆಯು ಸಹ ನಮ್ಮ ತಪ್ಪುಗಳನ್ನು ಕ್ಷಮಿಸುವನು ಎಂದು ಯೇಸು ಹೇಳಿದನು.
11:27-28 y3u8 ದೇವಾಲಯದಲ್ಲಿ, ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರು ಯೇಸುವಿನಿಂದ ಏನನ್ನು ತಿಳಿದುಕೊಳ್ಳಲು ಬಯಸಿದ್ದರು? ಆತನು ಮಾಡುತ್ತಿದ್ದ ಕೆಲಸಗಳನ್ನು ಯಾವ ಅಧಿಕಾರದಿಂದ ಮಾಡುತ್ತಿದ್ದಾನೆಂದು ತಿಳಿದುಕೊಳ್ಳಲು ಬಯಸಿದ್ದರು.
11:29-30 cdce ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರನ್ನು ಯೇಸು ಯಾವ ಪ್ರಶ್ನೆಯನ್ನು ಕೇಳಿದನು? ಯೋಹಾನನಿಗೆ ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಪರಲೋಕದಿಂದಲೋ ಅಥವಾ ಮನುಷ್ಯರಿಂದಲೋ ಬಂದಿತೋ ಎಂದು ಯೇಸು ಅವರನ್ನು ಕೇಳಿದನು.
11:31 qfb1 ಯೋಹಾನನ ದೀಕ್ಷಾಸ್ನಾನವು ಪರಲೋಕದಿಂದ ಬಂದದ್ದು ಎಂದು ಉತ್ತರಿಸಲು ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರಿಗೆ ಏಕೆ ಇಷ್ಟವಿರಲಿಲ್ಲ? ಯಾಕೆಂದರೆ ಯೋಹಾನನನ್ನು ಅವರು ಏಕೆ ನಂಬಲಿಲ್ಲವೆಂದು ಯೇಸು ಕೇಳುತ್ತಾನೆಂದು ಈ ಉತ್ತರವನ್ನು ಕೊಡಲು ಅವರಿಗೆ ಇಷ್ಟವಿರಲಿಲ್ಲ.
11:32 zg5i ಯೋಹಾನನ ದೀಕ್ಷಾಸ್ನಾನವು ಮನುಷ್ಯರಿಂದ ಬಂದದ್ದು ಎಂದು ಮುಖ್ಯ ಯಾಜಕರು, ಶಾಸ್ತ್ರಿಗಳು, ಮತ್ತು ಹಿರಿಯರಿಗೆ ಉತ್ತರಿಸಲು ಏಕೆ ಇಷ್ಟವಿರಲಿಲ್ಲ? ಅವರಿಗೆ ಈ ಉತ್ತರವನ್ನು ಕೊಡಲು ಇಷ್ಟವಿರಲಿಲ್ಲ ಯಾಕೆಂದರೆ ಅವರು ಜನರಿಗೆ ಹೆದರಿದರು, ಜನರೆಲ್ಲರು ಯೋಹಾನನನ್ನು ಪ್ರವಾದಿಯೆಂದು ನಂಬಿದ್ದರು.
12:1 k9g4 ದ್ರಾಕ್ಷೇ ತೋಟವನ್ನು ಬೆಳೆಸಿ ಅದನ್ನು ವಾರಕ್ಕೆ ಕೊಟ್ಟ ನಂತರ, ಯಜಮಾನನು ಏನು ಮಾಡಿದನು? ದ್ರಾಕ್ಷೇ ತೋಟವನ್ನು ಬೆಳೆಸಿ ಅದನ್ನು ವಾರಕ್ಕೆಕೊಟ್ಟ ನಂತರ, ಯಜಮಾನನು ಬೇರೆ ದೇಶಕ್ಕೆ ಹೋದನು.
12:5 qm75 ದ್ರಾಕ್ಷೇ ತೋಟದ ಫಲವನ್ನು ತೆಗೆದುಕೊಳ್ಳಲು ಯಜಮಾನನು ಕಳುಹಿಸಿದ ಅನೇಕ ಸೇವಕರಿಗೆ ದ್ರಾಕ್ಷೇ ತೋಟಗಾರರು ಏನು ಮಾಡಿದರು? ದ್ರಾಕ್ಷೇ ತೋಟಗಾರರು ಕೆಲವರಿಗೆ ಹೊಡೆದರು ಮತ್ತು ಅನೇಕ ಸೇವಕರುಗಳನ್ನು ಕೊಂದರು.
12:14 n5ve ಫರಿಸಾಯರು ಮತ್ತು ಕೆಲವು ಹೆರೋದ್ಯರು ಯೇಸುವಿಗೆ ಯಾವ ಪ್ರಶ್ನೆಯನ್ನು ಕೇಳಿದರು? ಕೈಸರನಿಗೆ ತೆರಿಗೆಯನ್ನು ಕಟ್ಟುವುದು ನ್ಯಾಯವೋ ಅಥವಾ ಇಲ್ಲವೋ ಎಂದು ಅವರು ಆತನನ್ನು ಕೇಳಿದರು.
12:25 ks2q ಆ ಹೆಂಗಸಿನ ಬಗ್ಗೆ ಯೇಸು ಸದ್ದುಕಾಯರಿಗೆ ಯಾವ ಉತ್ತರವನ್ನು ಕೊಟ್ಟನು? ಪುನರುತ್ಥಾನದಲ್ಲಿ, ಪುರುಷನು ಮತ್ತು ಸ್ತ್ರೀಯು ಮದುವೆ ಆಗುವುದಿಲ್ಲ, ಆದರೆ ದೇವದೂತರ ಹಾಗೆ ಇರುವರೆಂದು ಯೇಸು ಹೇಳಿದನು.
12:26-27 ete1 ಪುನರುತ್ಥಾನವಿದೆ ಎಂದು ಪವಿತ್ರಗಂಥದ ಮೂಲಕ ಯೇಸು ಹೇಗೆ ತೋರಿಸಿದನು? ಯೇಸು ಮೋಶೆಯ ಪುಸ್ತಕದಿಂದ ಉಲ್ಲೇಖಿಸಿದನು, ಅದರಲ್ಲಿ ದೇವರು ಹೀಗೆ ಹೇಳುತ್ತಾನೆ ಆತನು ಅಬ್ರಹಾಮನ, ಇಸಾಕನ, ಮತ್ತು ಯಾಕೋಬನ ದೇವರೆಂದೂ ಹೇಳಿದನು-ಹಾಗಾದರೆ ಅವರೆಲ್ಲರೂ ಜೀವಂತವಾಗಿರಬೇಕು.
12:29-30 tzeh ಯಾವ ಆಜ್ಞೆಯು ಅತಿ ಮುಖ್ಯವಾದದೆಂದು ಯೇಸು ಹೇಳಿದನು? ಯೇಸು ಕರ್ತನಾದ ನಿಮ್ಮ ದೇವರನ್ನು ಪೂರ್ಣ ಹೃದಯದಿಂದಲೂ, ಪ್ರಾಣದಿಂದಲೂ, ಮನಸ್ಸಿನಿಂದಲೂ, ಬಲದಿಂದಲೂ ಪ್ರೀತಿಸಬೇಕು ಎಂಬುದು ಅತಿ ಮುಖ್ಯವಾದ ಆಜ್ಞೆ ಎಂದು ಹೇಳಿದನು.
12:35-37 qo6t ದಾವೀದನ ಬಗ್ಗೆ ಶಾಸ್ತ್ರಿಗಳ ಹತ್ತಿರ ಯೇಸು ಯಾವ ಪ್ರಶ್ನೆಯನ್ನು ಕೇಳಿದನು? ಕ್ರಿಸ್ತನು ದಾವೀದನ ಮಗನಾಗಿರುವುದರಿಂದ ದಾವೀದನು ಕ್ರಿಸ್ತನನ್ನು ಕರ್ತನು ಎಂದು ಹೇಗೆ ಕರೆಯಬಹುದೆಂದು ಯೇಸು ಕೇಳಿದನು.
12:38-40 ndcc ಶಾಸ್ತ್ರಿಗಳ ಬಗ್ಗೆ ಯಾವ ವಿಷಯದಲ್ಲಿ ಎಚ್ಚರಿಕೆಯಿಂದ ಇರಬೇಕೆಂದು ಯೇಸು ಜನರಿಗೆ ಹೇಳಿದನು? ಶಾಸ್ತ್ರಿಗಳು ಜನರಿಂದ ಗೌರವವನ್ನು ಪಡೆಯಲು ಬಯಸುತ್ತಾರೆ, ಆದರೆ ವಿಧವೆಯರ ಮನೆಗಳನ್ನು ನುಂಗಿಹಾಕುತ್ತಾರೆ ಮತ್ತು ಜನರು ನೋಡಲೆಂದು ಉದ್ದವಾದ ಪ್ರಾರ್ಥನೆಗಳನ್ನು ಮಾಡುತ್ತಾರೆ ಎಂದು ಯೇಸು ಹೇಳಿದನು.
12:44 vxj4 ಬೊಕ್ಕಸದಲ್ಲಿ ಹಾಕಿದವರೆಲ್ಲರಲ್ಲಿ ಬಡ ವಿಧವೆಯು ಎಲ್ಲರಿಗಿಂತಲೂ ಹೆಚ್ಚು ಕಾಣಿಕೆ ಹಾಕಿದ್ದಾಳೆಂದು ಯೇಸು ಯಾಕೆ ಹೇಳಿದನು? ಯೇಸು ಆಕೆ ಹೆಚ್ಚು ಹಾಕಿದ್ದಾಳೆಂದು ಹೇಳಿದನು ಯಾಕೆಂದರೆ ಎಲ್ಲರು ತಮಗೆ ಸಾಕಾಗಿ ವಿುಕ್ಕದ್ದರಲ್ಲಿ ಹಾಕಿದರು; ಈಕೆ ತನ್ನ ಬಡತನದಲ್ಲಿಯೂ ತನಗಿದ್ದದ್ದನ್ನೆಲ್ಲಾ ಕೊಟ್ಟಳು ಎಂದನು.
13:12 zlct ಕುಟುಂಬದ ಸದಸ್ಯರುಗಳ ಮಧ್ಯದಲ್ಲಿ ಏನಾಗುತ್ತದೆ ಎಂದು ಯೇಸು ಹೇಳಿದನು? ಯೇಸು ಕುಟುಂಬದ ಸದಸ್ಯನು ಕುಟುಂಬದ ಮತ್ತೊಬ್ಬ ಸದಸ್ಯನನ್ನು ಮರಣಕ್ಕೆ ಒಪ್ಪಿಸಿಕೊಡುವರು ಎಂದು ಯೇಸು ಹೇಳಿದನು.
13:14 a194 ಯೂದಾಯದಲ್ಲಿ ಇರುವವರು ಹಾಳುಮಾಡುವ ಅಸಹ್ಯ ವಸ್ತುವನ್ನು ಕಾಣುವಾಗ ಏನು ಮಾಡಬೇಕು ಎಂದು ಯೇಸು ಹೇಳಿದನು? ಯೂದಾಯದಲ್ಲಿ ಇರುವವರು ಹಾಳುಮಾಡುವ ಅಸಹ್ಯ ವಸ್ತುವನ್ನು ಕಾಣುವಾಗ ಬೆಟ್ಟಗಳಿಗೆ ಓಡಿಹೋಗಬೇಕು ಎಂದು ಯೇಸು ಹೇಳಿದನು.
13:20 pgpi ಆರಿಸಲ್ಪಟ್ಟವರ ರಕ್ಷಣೆ ಹೊಂದುವುದಕ್ಕಾಗಿ ಕರ್ತನು ಏನು ಮಾಡುತ್ತಾನೆ ಯೇಸು ಹೇಳಿದನು? ಆರಿಸಲ್ಪಟ್ಟವರಿಗೋಸ್ಕರ ಕರ್ತನು ಸಂಕಟದ ದಿನಗಳನ್ನು ಕಡಿಮೆ ಮಾಡುವನು ಎಂದು ಯೇಸು ಹೇಳಿದನು.
13:24-25 mxj5 ಆ ದಿನಗಳಲ್ಲಿ ಆಗುವ ಸಂಕಟಗಳ ನಂತರ ಬೆಳಕುಗಳಿಗೂ ಮತ್ತು ಪರಲೋಕದಲ್ಲಿರುವ ಶಕ್ತಿಗೂ ಏನಾಗುತ್ತದೆ? ಸೂರ್ಯ ಚಂದ್ರರು ಕತ್ತಲಾಗುವರು, ನಕ್ಷತ್ರಗಳು ಆಕಾಶದಿಂದ ಕೆಳಗೆ ಬೀಳುವವು. ಪರಲೋಕದಲ್ಲಿರುವ ಶಕ್ತಿಗಳು ನಡುಗುವವು.
13:30 zo90 ಈ ಎಲ್ಲಾ ಸಂಗತಿಗಳು ಆಗುವವರೆಗೂ ಯಾವುದು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು? ಈ ಎಲ್ಲಾ ಸಂಗತಿಗಳು ಆಗುವವರೆಗೂ ಈ ಸಂತತಿಯು ಅಳಿದು ಹೋಗುವುದಿಲ್ಲವೆಂದು ಯೇಸು ಹೇಳಿದನು.
13:33 mck3 ಆ ಕಾಲವು ಯಾವಾಗ ಬರುವುದು ಎಂಬುದರ ಬಗ್ಗೆ ಯೇಸು ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ತನ್ನ ಶಿಷ್ಯರಿಗೆ ಎಚ್ಚರಿಕೆಯಾಗಿರಿ, ಜಾಗರೂಕರಾಗಿರಿ, ಮತ್ತು ಪ್ರಾರ್ಥಿಸಿರಿ ಎಂದು ಹೇಳಿದನು.
13:35 zfgp ಯೇಸು ತನ್ನ ಬರೋಣದ ಬಗ್ಗೆ ತನ್ನ ಶಿಷ್ಯರಿಗೆ ಯಾವ ಆಜ್ಞೆಯನ್ನು ಕೊಟ್ಟನು? ಯೇಸು ತನ್ನ ಬರೋಣವನ್ನು ಎದುರುನೋಡುತ್ತಿರುವಾಗ ಎಚ್ಚರಿಕೆಯಿಂದ ಇರಬೇಕೆಂದು ತನ್ನ ಶಿಷ್ಯರಿಗೆ ಹೇಳಿದನು.
14:1 l7mb ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಯಾವ ಸಂಗತಿಯನ್ನು ಹೇಗೆ ಮಾಡಬೇಕೆಂದು ಯೋಚಿಸುತ್ತಿದ್ದರು? ಅವರು ಯೇಸುವನ್ನು ಉಪಾಯವಾಗಿ ಸೆರೆ ಹಿಡಿದು ಆತನನ್ನು ಕೊಲ್ಲುವುದರ ಬಗ್ಗೆ ಯೋಚಿಸುತ್ತಿದ್ದರು.
14:2 ezqi ಮುಖ್ಯ ಯಾಜಕರು ಮತ್ತು ಶಾಸ್ತ್ರಿಗಳು ಹುಳಿಯಿಲ್ಲದ ರೊಟ್ಟಿಯ ಹಬ್ಬದಂದು ಅದನ್ನು ಮಾಡಲು ಯಾಕೆ ಇಚ್ಚಿಸಲಿಲ್ಲ? ಜನರ ಮಧ್ಯದಲ್ಲಿ ಗದ್ದಲ ಆಗಬಹುದೆಂದು ಅವರು ಚಿಂತಿಸುತ್ತಿದ್ದರು.
14:3 lyx4 ಕುಷ್ಟರೋಗಿಯಾಗಿದ್ದ ಸೀಮೋನನ ಮನೆಯಲ್ಲಿ ಹೆಂಗಸು ಯೇಸುವಿಗೆ ಏನು ಮಾಡಿದಳು? ಒಬ್ಬ ಹೆಂಗಸು ಬಹು ಬೆಲೆಯುಳ್ಳ ಅಚ್ಚ ಜಟಾಮಾಂಸಿ ತೈಲದ ಭರಣಿಯನ್ನು ಒಡೆದು ಯೇಸುವಿನ ತಲೆಯ ಮೇಲೆ ಸುರಿದಳು.
14:5 tn7q ಕೆಲವರು ಆ ಹೆಂಗಸನ್ನು ಯಾಕೆ ಗದರಿಸುತ್ತಿದ್ದರು? ಆ ಹೆಂಗಸು ಸುಗಂಧತೈಲವನ್ನು ಮಾರಿ, ಅದರಿಂದ ಬಂದ ಹಣವನ್ನು ಬಡವರಿಗೆ ಕೊಡಬಹುದಿತ್ತಲ್ಲವೇ ಎಂದು ಕೆಲವರು ಆ ಹೆಂಗಸನ್ನು ಗದರಿಸುತ್ತಿದ್ದರು.
14:9 s2sy ಆ ಹೆಂಗಸು ಏನು ಮಾಡಿದಳೋ ಅದಕ್ಕೆ ಯೇಸು ಯಾವ ವಾಗ್ದಾನವನ್ನು ಮಾಡಿದನು? ಲೋಕದಲ್ಲಿ ಎಲ್ಲೆಲ್ಲಿ ಸುವಾರ್ತೆಯು ಸಾರಲ್ಪಡುವುದೋ ಅಲ್ಲೆಲ್ಲಾ ಈ ಹೆಂಗಸು ಏನು ಮಾಡಿದಳೋ ಅದನ್ನು ಅವಳ ನೆನಪಿಗಾಗಿ ಹೇಳಲ್ಪಡುವುದೆಂದು ಯೇಸು ವಾಗ್ದಾನ ಮಾಡಿದನು.
14:12-15 glcb ಅವರೆಲ್ಲರೂ ಪಸ್ಕ ಹಬ್ಬದ ಊಟವನ್ನು ಮಾಡಲು ಶಿಷ್ಯರು ಹೇಗೆ ಸ್ಥಳವನ್ನು ಕಂಡುಹಿಡಿದರು? ಯೇಸು ಅವರಿಗೆ ಪಟ್ಟಣದ ಒಳಗೆ ಹೋಗಿ ಅಲ್ಲಿ ಒಬ್ಬ ಮನುಷ್ಯನು ನೀರಿನ ಕೊಡವನ್ನು ಹೊತ್ತುಕೊಂಡು ಹೋಗುತ್ತಿರುವನು ಅವನನ್ನು ಹಿಂಬಾಲಿಸಿರಿ, ಮತ್ತು ಅವನನ್ನು ಪಸ್ಕದ ಊಟವನ್ನು ಮಾಡಲು ಉಪಯೋಗ ಆಗುವ ಅಥಿತಿಯ ಕೋಣೆಯು ಎಲ್ಲಿದೆ ಎಂದು ಅವನನ್ನು ಕೇಳಿರಿ ಅಂದನು.
14:18 kkmc ಅವರು ಮೇಜಿನ ಮೇಲೆ ಒರಗಿಕೊಂಡು ಊಟ ಮಾಡುತ್ತಿರುವಾಗ ಯೇಸು ಏನು ಹೇಳಿದನು? ಯೇಸು ನನ್ನ ಜೊತೆ ಊಟ ಮಾಡುತ್ತಿರುವ ಶಿಷ್ಯರಲ್ಲಿ ಒಬ್ಬನು ತನ್ನನ್ನು ಹಿಡಿದುಕೊಡುವನು ಎಂದು ಹೇಳಿದನು.
14:20 grhr ಯೇಸು ಯಾವ ಶಿಷ್ಯನು ತನ್ನನ್ನು ಹಿಡಿದುಕೊಡುತ್ತಾನೆ ಎಂದು ಹೇಳಿದನು? ಯೇಸು ತನ್ನೊಂದಿಗೆ ಊಟದ ಬಟ್ಟಲಿನ ಒಳಗೆ ಕೈ ಅದ್ದುವ ಶಿಷ್ಯನೇ ತನ್ನನ್ನು ಹಿಡಿದುಕೊಡುವನೆಂದು ಹೇಳಿದನು.
14:25 r9so ಯೇಸು ತಿರುಗಿ ಯಾವಾಗ ದ್ರಾಕ್ಷಾರಸವನ್ನು ಕುಡಿಯುತ್ತೇನೆಂದು ಹೇಳಿದನು? ಯೇಸು ತಾನು ದೇವರ ರಾಜ್ಯದಲ್ಲಿ ಹೊಸದಾಗಿ ತಿರುಗಿ ದ್ರಾಕ್ಷಾರಸವನ್ನು ಕುಡಿಯುವೆನು ಎಂದು ಹೇಳಿದನು.
14:27 yns3 ಆಲಿವ್ ಮರದ ಗುಡ್ಡದಲ್ಲಿ, ಯೇಸು ತನ್ನ ಶಿಷ್ಯರ ಬಗ್ಗೆ ಏನೆಂದು ಮುಂತಿಳಿಸಿದನು? ಶಿಷ್ಯರೆಲ್ಲರೂ ತನ್ನ ನಿಮಿತ್ತವಾಗಿ ತನ್ನನ್ನು ಬಿಟ್ಟುಹೋಗುತ್ತಾರೆಂದು ಯೇಸು ಮುಂತಿಳಿಸಿದನು.
14:30 gvoq ಪೇತ್ರನು ತಾನು ಎಂದಿಗೂ ಬಿಟ್ಟುಹೋಗುವುದಿಲ್ಲ ಎಂದು ಹೇಳಿದಾಗ ಯೇಸು ಪೇತ್ರನಿಗೆ ಏನೆಂದು ಹೇಳಿದನು? ಯೇಸು ಪೇತ್ರನಿಗೆ ಕೋಳಿಯು ಎರಡು ಸಾರಿ ಕೂಗುವ ಮುಂಚೆ, ಪೇತ್ರನು ಯೇಸುವನ್ನು ಮೂರು ಸಾರಿ ಅಲ್ಲಗಳೆಯುತ್ತಾನೆಂದು ಹೇಳಿದನು.
14:48-49 afwa ಪವಿತ್ರಗ್ರಂಥದ ಮಾತು ನೆರವೇರುವಂತೆ ಯೇಸುವನ್ನು ಬಂಧಿಸಿದಾಗ ಏನು ಮಾಡಲಾಯಿತು ಎಂದು ಯೇಸು ಹೇಳಿದನು? ಯೇಸುವನ್ನು ಕಳ್ಳನಂತೆ ಕತ್ತಿ ಮತ್ತು ಕೋಲುಗಳಿಂದ ಹಿಡಿಯಲು ಬಂದಿದ್ದರಿಂದ ಪವಿತ್ರಗ್ರಂಥದ ವಾಕ್ಯವು ನೆರವೇರಿತು ಎಂದು ಯೇಸು ಹೇಳಿದನು.
14:53-54 mcjr ಯೇಸುವನ್ನು ಮಹಾಯಾಜಕನ ಬಳಿಗೆ ಕರೆದುಕೊಂಡು ಹೋದಾಗ ಪೇತ್ರನು ಎಲ್ಲಿ ಇದ್ದನು? ಬೆಂಕಿ ಕಾಯಿಸಿಕೊಳ್ಳಲು ಪೇತ್ರನು ಬೆಂಕಿಯ ಬಳಿ ಕಾವಲುಗಾರರ ಮಧ್ಯದಲ್ಲಿ ಕುಳಿತುಕೊಂಡಿದ್ದನು.
14:55-56 k3gb ಯೇಸು ನ್ಯಾಯಸ್ಥಾನಕ್ಕೆ ಒಪ್ಪಿಸಿದಾಗ ಆತನ ವಿರುದ್ದ ಹೇಳಿದ್ದ ಸಾಕ್ಷಿಯಲ್ಲಿ ಏನು ತಪ್ಪಾಗಿತ್ತು? ಯೇಸುವಿನ ವಿರುದ್ದ ಹೇಳಿದ್ದ ಸಾಕ್ಷಿಯು ತಪ್ಪಾಗಿತ್ತು ಮತ್ತು ಅವು ಒಂದಕ್ಕೊಂದು ಸರಿಬೀಳಲಿಲ್ಲ.
14:66-68 tjt2 ಪೇತ್ರನು ಯೇಸುವಿನೊಂದಿಗೆ ಇದ್ದನು ಎಂದು ಹೇಳಿದ ದಾಸಿಗೆ ಪೇತ್ರನು ಕೊಟ್ಟ ಉತ್ತರವೇನಾಗಿತ್ತು? ಆ ದಾಸಿಯು ಯಾವುದರ ಬಗ್ಗೆ ಮಾತನಾಡುತ್ತಿದ್ದಾಳೆ ಎಂದು ನನಗೆ ಅರ್ಥವಾಗಿಲ್ಲ ಅಥವಾ ಅವನಿಗೆ ತಿಳಿದಿಲ್ಲವೆಂದು ಪೇತ್ರನು ಹೇಳಿದನು.
14:71 orue ಯೇಸುವಿನ ಶಿಷ್ಯರಲ್ಲಿ ಇವನೂ ಒಬ್ಬನಾಗಿದ್ದನು ಎಂದು ಮೂರನೆಯ ಬಾರಿ ಅವನನ್ನು ಕೇಳಿದಾಗ ಪೇತ್ರನ ಪ್ರತಿಕ್ರಿಯೆಯು ಏನಾಗಿತ್ತು? ಯೇಸುವನ್ನು ತಾನು ಅರಿಯನೆಂದು ಆಣೆ ಮಾಡುತ್ತಾ ಪೇತ್ರನು ತನ್ನನ್ನು ತಾನು ಶಪಿಸಿಕೊಳ್ಳುವುದಕ್ಕೂ ಪ್ರಾರಂಭಿಸಿದನು.
15:5 w0fh ಮುಖ್ಯ ಯಾಜಕರು ಯೇಸುವಿನ ವಿರುದ್ದ ಅನೇಕ ಆರೋಪಗಳನ್ನು ಮಾಡುತ್ತಿದ್ದಾಗ, ಯೇಸುವಿನ ಬಗ್ಗೆ ಪಿಲಾತನಿಗೆ ಏನು ಆಶ್ಚರ್ಯವೆನಿಸಿತು? ಯೇಸು ಏನೂ ಉತ್ತರ ಕೊಡದೇ ಇದ್ದುದ್ದಕ್ಕೆ ಪಿಲಾತನಿಗೆ ಆಶ್ಚರ್ಯವಾಯಿತು.
15:6 juii ಸಾಮಾನ್ಯವಾಗಿ ಹಬ್ಬದ ಸಮಯಯಲ್ಲಿ ಪಿಲಾತನು ಜನರಿಗೆ ಏನು ಮಾಡುತ್ತಿದ್ದನು? ಸಾಮಾನ್ಯವಾಗಿ ಹಬ್ಬದ ಸಮಯಯಲ್ಲಿ ಪಿಲಾತನು ಜನರು ಯಾವ ಖೈದಿಯನ್ನು ಬಿಟ್ಟುಕೊಡಬೇಕೆಂದು ಕೇಳಿಕೊಳ್ಳುತ್ತಿದ್ದರೋ ಅವನನ್ನು ಬಿಟ್ಟುಕೊಡುತ್ತಿದ್ದನು.
15:29-30 dh4r ಹಾದು ಹೋಗುತ್ತಿರುವವರು ಯೇಸುವಿಗೆ ಏನು ಮಾಡುವಂತೆ ಸವಾಲು ಹಾಕಿದರು? ಹಾದು ಹೋಗುತ್ತಿರುವವರು ಯೇಸುವಿಗೆ ನಿನ್ನನ್ನು ನೀನು ರಕ್ಷಿಸಿಕೋ ಮತ್ತು ಶಿಲುಬೆಯಿಂದ ಕೆಳಗೆ ಇಳಿದು ಬಾ ಎಂದು ಸವಾಲು ಹಾಕಿದರು.
15:31-32 o4cc ಅವರುಗಳು ನಂಬುವಂತೆ ಯೇಸು ಏನು ಮಾಡಬೇಕು ಎಂದು ಮುಖ್ಯ ಯಾಜಕರು ಹೇಳಿದರು? ಅವರುಗಳು ನಂಬುವಂತೆ ಯೇಸು ಶಿಲುಬೆಯಿಂದ ಕೆಳಗೆ ಇಳಿದು ಬರಬೇಕೆಂದು ಮುಖ್ಯ ಯಾಜಕರು ಹೇಳಿದರು.
15:32 wdk2 ಯೇಸುವನ್ನು ಅಣಕಿಸುತ್ತಾ ಮುಖ್ಯ ಯಾಜಕರು ಯೇಸುವಿಗೆ ಯಾವ ಬಿರುದುಗಳನ್ನು ಉಪಯೋಗಿಸಿದರು? ಮುಖ್ಯ ಯಾಜಕರು ಯೇಸುವನ್ನು ಕ್ರಿಸ್ತನೆಂದು ಮತ್ತು ಇಸ್ರಾಯೇಲಿನ ಅರಸನು ಎಂದು ಕರೆದರು.
15:43-46 yusf ಯೇಸು ಸತ್ತ ನಂತರ ಅರಿಮಥಾಯದ ಯೋಸೇಫನು ಏನು ಮಾಡಿದನು? ಅರಿಮಥಾಯದ ಯೋಸೇಫನು ಶಿಲುಬೆಯಿಂದ ಯೇಸುವನ್ನು ಕೆಳಗೆ ಇಳಿಸಿದನು, ಆತನನ್ನು ನಾರುಮಡಿಯಲ್ಲಿ ಸುತ್ತಿದನು, ಮತ್ತು ಸಮಾಧಿಯಲ್ಲಿಟ್ಟನು, ಸಮಾಧಿಯ ಬಾಗಿಲಿಗೆ ಕಲ್ಲನ್ನು ಉರುಳಿಸಿದನು.
16:4 b2oz ಸಮಾಧಿಯ ಬಾಗಿಲನ್ನು ತುಂಬಾ ದೊಡ್ಡ ಕಲ್ಲಿನಿಂದ ಮುಚ್ಚಿಡಲಾಗಿತ್ತು. ಆದರೆ ಆ ಸ್ತ್ರೀಯರು ಸಮಾಧಿಯೊಳಗೆ ಹೇಗೆ ಪ್ರವೇಶಿಸಿದರು? ಸಮಾಧಿಯ ಪ್ರವೇಶ ದ್ವಾರದಿಂದ ಯಾರೋ ತುಂಬಾ ದೊಡ್ಡ ಕಲ್ಲನ್ನು ಉರುಳಿಸಿದ್ದರು.
16:5 habp ಆ ಸ್ತ್ರೀಯರು ಸಮಾಧಿಯ ಒಳಗೆ ಪ್ರವೇಶಿಸಿದಾಗ ಏನನ್ನು ನೋಡಿದರು? ಒಬ್ಬ ಯೌವನಸ್ಥನು ಬಿಳಿಯ ಬಟ್ಟೆಯನ್ನು ಹಾಕಿಕೊಂಡು ಬಲಗಡೆಯಲ್ಲಿ ಕುಳಿತುಕೊಂಡಿರುವುದನ್ನು ಆ ಸ್ತ್ರೀಯರು ನೋಡಿದರು.
16:17-18 l58h ನಂಬುವವರಿಗೆ ಯಾವ ಸೂಚಕಕಾರ್ಯಗಳು ಜೊತೆಯಾಗಿ ಬರುತ್ತವೆ ಎಂದು ಯೇಸು ಹೇಳಿದನು? ಯಾರು ನಂಬುತ್ತರೋ ಅವರು ದೆವ್ವಗಳನ್ನು ಬಿಡಿಸುತ್ತಾರೆ, ಹೊಸ ಭಾಷೆಗಳಲ್ಲಿ ಮಾತನಾಡುವರು, ವಿಷಪದಾರ್ಥವನ್ನೇನಾದರೂ ಕುಡಿದರೂ ಅವರಿಗೆ ಯಾವ ಕೇಡೂ ಆಗುವದಿಲ್ಲ, ಮತ್ತು ಇತರರನ್ನು ಸ್ವಸ್ಥ ಮಾಡುವರು ಎಂದು ಯೇಸು ಹೇಳಿದನು.