initial conversion

This commit is contained in:
Larry Versaw 2019-06-25 19:09:17 -06:00
parent 777fa6b848
commit 86d48e2a23
56 changed files with 2693 additions and 2 deletions

View File

@ -1,3 +1,3 @@
# kn_obs
# Kannada Open Bible Stories
Kannada Open Bible Stories
STR https://git.door43.org/unfoldingWord/SourceTextRequestForm/issues/322

68
content/01.md Normal file
View File

@ -0,0 +1,68 @@
# 1. ಸೃಷ್ಠಿ
![OBS Image](https://cdn.door43.org/obs/jpg/360px/obs-en-01-01.jpg)
ದೇವರು ಆದಿಯಲ್ಲಿ ಎಲ್ಲವನ್ನೂ ಹೀಗೆ ಉಂಟುಮಾಡಿದನು. ಆತನು ಆರು ದಿನಗಳಲ್ಲಿ ಈ ವಿಶ್ವವನ್ನು ಮತ್ತು ಅದರಲ್ಲಿರುವುದೆಲ್ಲವನ್ನು ಸೃಷ್ಟಿಸಿದನು. ದೇವರು ಭೂಮಿಯನ್ನು ಸೃಷ್ಟಿಸಿದ ನಂತರ ಅದು ಕತ್ತಲಾಗಿಯೂ ಮತ್ತು ಬರಿದಾಗಿಯೂ ಇತ್ತು, ಏಕೆಂದರೆ ಆತನು ಇನ್ನೂ ಅದರಲ್ಲಿ ಯಾವುದನ್ನೂ ರೂಪಿಸಿರಲಿಲ್ಲ. ಆದರೆ ದೇವರ ಆತ್ಮವು ಜಲಸಮೂಹದ ಮೇಲೆ ಸಂಚರಿಸುತ್ತಿತ್ತು
![OBS Image](https://cdn.door43.org/obs/jpg/360px/obs-en-01-02.jpg)
ಅನಂತರ ದೇವರು “ಬೆಳಕಾಗಲಿ” ಎಂದು ಆಜ್ಞಾಪಿಸಲು ಬೆಳಕಾಯಿತು. ದೇವರು ಆ ಬೆಳಕನ್ನು ಒಳ್ಳೆಯದೆಂದು ಕಂಡನು. ದೇವರು ಬೆಳಕನ್ನೂ ಕತ್ತಲನ್ನೂ ಬೇರ್ಪಡಿಸಿ ಬೆಳಕಿಗೆ “ಹಗಲು” ಎಂದೂ, ಕತ್ತಲೆಗೆ “ಇರುಳು” ಎಂದೂ ಹೆಸರಿಟ್ಟನು. ಸೃಷ್ಟಿಯ ಮೊದಲನೆಯ ದಿನದಲ್ಲಿ ದೇವರು ಬೆಳಕನ್ನು ಸೃಷ್ಟಿಸಿದನು.
![OBS Image](https://cdn.door43.org/obs/jpg/360px/obs-en-01-03.jpg)
ಸೃಷ್ಟಿಯ ಎರಡನೆಯ ದಿನದಲ್ಲಿ, ದೇವರು: “ಜಲರಾಶಿಗಳ ಮೇಲೆ ಗುಮ್ಮಟವು ಉಂಟಾಗಲಿ” ಎನ್ನಲು ಗುಮ್ಮಟವು ಉಂಟಾಯಿತ್ತು. ದೇವರು ಆ ಗುಮ್ಮಟಕ್ಕೆ “ಆಕಾಶ” ಎಂದು ಹೆಸರಿಟ್ಟನು.
![OBS Image](https://cdn.door43.org/obs/jpg/360px/obs-en-01-04.jpg)
ಮೂರನೆಯ ದಿನದಲ್ಲಿ, ದೇವರು: “ಆಕಾಶದ ಕೆಳಗಿರುವ ನೀರೆಲ್ಲಾ ಒಂದೇ ಸ್ಥಳದಲ್ಲಿ ಒಟ್ಟಿಗೆ ಕೂಡಿಕೊಳ್ಳಲಿ ಮತ್ತು ಒಣನೆಲವು ಕಾಣಿಸಲಿ” ಅಂದನು. ದೇವರು ಒಣನೆಲಕ್ಕೆ “ಭೂಮಿ” ಎಂದೂ ಜಲರಾಶಿಗೆ “ಸಮುದ್ರ” ಎಂದೂ ಹೆಸರಿಟ್ಟನು. ದೇವರು ತಾನು ಸೃಷ್ಟಿಸಿರುವುಗಳನ್ನು ಒಳ್ಳೆಯದೆಂದು ಕಂಡನು.
![OBS Image](https://cdn.door43.org/obs/jpg/360px/obs-en-01-05.jpg)
ತರುವಾಯ ದೇವರು, “ಭೂಮಿಯು ಸಕಲವಿಧವಾದ ಮರಗಳನ್ನು ಮತ್ತು ಸಸ್ಯಗಳನ್ನೂ ಬೆಳೆಯಿಸಲಿ” ಎಂದು ಹೇಳಿದನು, ಹಾಗೆಯೇ ಆಯಿತು. ದೇವರು ತಾನು ಸೃಷ್ಟಿಸಿರುವುದನ್ನು ಒಳ್ಳೆಯದೆಂದು ಕಂಡನು.
![OBS Image](https://cdn.door43.org/obs/jpg/360px/obs-en-01-06.jpg)
ಸೃಷ್ಟಿಯ ನಾಲ್ಕನೆಯ ದಿನದಲ್ಲಿ, ದೇವರು: “ಆಕಾಶ ಮಂಡಲದಲ್ಲಿ ಬೆಳಕುಗಳು ಉಂಟಾಗಲಿ” ಅಂದನು, ಸೂರ್ಯ, ಚಂದ್ರ ಮತ್ತು ನಕ್ಷತ್ರಗಳು ಉಂಟಾದವು. ಭೂಮಿಯ ಮೇಲೆ ಬೆಳಕು ಕೊಡುವುದಕ್ಕೆ ಮತ್ತು ಹಗಲಿರುಳುಗಳನ್ನು ಹಾಗೂ ಕಾಲಗಳನ್ನೂ, ದಿನಸಂವತ್ಸರಗಳನ್ನೂ ಸೂಚಿಸುವ ಗುರುತುಗಳಾಗಿರುವುದಕ್ಕೆ ದೇವರು ಅವುಗಳನ್ನು ಉಂಟುಮಾಡಿದನು. ದೇವರು ತಾನು ಸೃಷ್ಟಿಸಿರುವುದನ್ನು ಒಳ್ಳೆಯದೆಂದು ಕಂಡನು.
![OBS Image](https://cdn.door43.org/obs/jpg/360px/obs-en-01-07.jpg)
ಐದನೆಯ ದಿನದಲ್ಲಿ, ದೇವರು: “ಜಲಜಂತುಗಳು ನೀರಿನಲ್ಲಿ ತುಂಬಿಕೊಳ್ಳಲಿ ಮತ್ತು ಪಕ್ಷಿಗಳು ಅಂತರಿಕ್ಷದಲ್ಲಿ ಹಾರಾಡಲಿ” ಅಂದನು. ಹೀಗೆ ದೇವರು ನೀರಿನಲ್ಲಿ ತುಂಬಿರುವ ಸಕಲವಿಧವಾದ ಜೀವಿಗಳನ್ನೂ ಮತ್ತು ಸಕಲವಿಧವಾದ ಪಕ್ಷಿಗಳನ್ನೂ ಉಂಟುಮಾಡಿದನು. ದೇವರು ಅದನ್ನು ಒಳ್ಳೆಯದೆಂದು ಕಂಡನು, ಮತ್ತು ಅವುಗಳನ್ನು ಆಶೀರ್ವದಿಸಿದನು.
![OBS Image](https://cdn.door43.org/obs/jpg/360px/obs-en-01-08.jpg)
ಸೃಷ್ಟಿಯ ಆರನೆಯ ದಿನದಲ್ಲಿ, ದೇವರು: “ಭೂಮಿಯ ಮೇಲೆ ಸಕಲವಿಧವಾದ ಪ್ರಾಣಿಗಳು ಉಂಟಾಗಲಿ” ಅಂದನು! ದೇವರು ಹೇಳಿದಂತೆಯೇ ಎಲ್ಲವು ಉಂಟಾಯಿತು. ಅದರಲ್ಲಿ ಕೆಲವು ಸಾಕುಪ್ರಾಣಿಗಳು, ಕೆಲವು ನೆಲದ ಮೇಲೆ ಹರಿದಾಡುವ ಪ್ರಾಣಿಗಳು ಇನ್ನು ಕೆಲವು ಕಾಡುಮೃಗಗಳು ಇದ್ದವು. ದೇವರು ಅವುಗಳನ್ನು ಒಳ್ಳೆಯದೆಂದು ಕಂಡನು.
![OBS Image](https://cdn.door43.org/obs/jpg/360px/obs-en-01-09.jpg)
ಆಮೇಲೆ ದೇವರು, “ನಮ್ಮ ಸ್ವರೂಪದಲ್ಲಿ ನಮ್ಮ ಹೋಲಿಕೆಗೆ ಸರಿಯಾಗಿ ಮನುಷ್ಯರನ್ನು ಉಂಟು ಮಾಡೋಣ, ಅವರು ಭೂಮಿಯ ಮೇಲೆಯೂ ಮತ್ತು ಪ್ರಾಣಿಗಳ ಮೇಲೆಯೂ ದೊರೆತನಮಾಡಲಿ” ಅಂದನು.
![OBS Image](https://cdn.door43.org/obs/jpg/360px/obs-en-01-10.jpg)
ಆದ್ದರಿಂದ ದೇವರು ನೆಲದ ಮಣ್ಣನ್ನು ತೆಗೆದುಕೊಂಡು ಮನುಷ್ಯನನ್ನು ರೂಪಿಸಿದನು ಮತ್ತು ಅವನಲ್ಲಿ ಜೀವಶ್ವಾಸವನ್ನು ಊದಿದನು. ಆ ಮನುಷ್ಯನ ಹೆಸರು ಆದಾಮನು. ದೇವರು ಅಲ್ಲಿ ಒಂದು ದೊಡ್ಡ ಉದ್ಯಾನವನವನ್ನು ಸೃಷ್ಟಿಸಿ ಅದರಲ್ಲಿ ಆದಾಮನು ತಂಗುವಂತೆ ಮಾಡಿದನು ಮತ್ತು ಅದನ್ನು ನೋಡಿಕೊಳ್ಳುವುದಕ್ಕಾಗಿ ಅವನನ್ನು ಅದರಲ್ಲಿ ಇರಿಸಿದನು.
![OBS Image](https://cdn.door43.org/obs/jpg/360px/obs-en-01-11.jpg)
ಉದ್ಯಾನವನದ ಮಧ್ಯದಲ್ಲಿ ದೇವರು ಎರಡು ವಿಶೇಷವಾದ ಮರಗಳನ್ನು ಬೆಳೆಯಿಸಿದನು - ಜೀವದಾಯಕ ವೃಕ್ಷ ಮತ್ತು ಒಳ್ಳೇಯದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ವೃಕ್ಷ. ಒಳ್ಳೇಯದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ಹೊರತುಪಡಿಸಿ ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣನ್ನು ತಿನ್ನಬಹುದೆಂದು ಒಂದು ವೇಳೆಅವನು ಆ ಮರದ ಹಣ್ಣನ್ನು ತಿಂದರೆ, ಅವನು ಸತ್ತುಹೋಗುವನು.ಎಂದು ದೇವರು ಹೇಳಿದನು
![OBS Image](https://cdn.door43.org/obs/jpg/360px/obs-en-01-12.jpg)
ಅನಂತರ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ” ಅಂದನು. ಯಾವ ಪ್ರಾಣಿಯು ಆದಾಮನಿಗೆ ಸಹಕಾರಿಯಾಗಿ ಕಂಡುಬರಲಿಲ್ಲ.
![OBS Image](https://cdn.door43.org/obs/jpg/360px/obs-en-01-13.jpg)
ಹೀಗಿರುವಲ್ಲಿ ದೇವರು ಆದಾಮನಿಗೆ ಗಾಢನಿದ್ರೆಯನ್ನು ಬರಮಾಡಿ, ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದನ್ನು ಸ್ತ್ರೀಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು.
![OBS Image](https://cdn.door43.org/obs/jpg/360px/obs-en-01-14.jpg)
ಆದಾಮನು ಆಕೆಯನ್ನು ನೋಡಿದಾಗ, ಅವನು, "ಈಗ ಸರಿ! ಈಕೆಯು ನನ್ನಂತೆಯೇ ಇದ್ದಾಳೆ! ಈಕೆಯು ಮನುಷ್ಯನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳಲಿ” ಅಂದನು. ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯೊಂದಿಗೆ ಒಂದಾಗುವನು.
![OBS Image](https://cdn.door43.org/obs/jpg/360px/obs-en-01-15.jpg)
ದೇವರು ತನ್ನ ಸ್ವರೂಪದಲ್ಲಿ ಪುರುಷನನ್ನು ಮತ್ತು ಸ್ತ್ರೀಯನ್ನು ಉಂಟುಮಾಡಿದನು. ಆತನು ಅವರನ್ನು ಆಶೀರ್ವದಿಸಿ ಅವರಿಗೆ, "ನೀವು ಅನೇಕ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಪಡೆದು ಭೂಮಿಯನ್ನು ತುಂಬಿಕೊಳ್ಳಿರಿ!" ಎಂದು ಹೇಳಿದನು. ದೇವರು ತಾನು ಉಂಟುಮಾಡಿದ್ದೆಲ್ಲವುಗಳನ್ನು ಬಹಳ ಒಳ್ಳೆಯದೆಂದು ಕಂಡನು, ಮತ್ತು ಆತನು ಅವೆಲ್ಲವುಗಳನ್ನು ಬಹು ಇಷ್ಟಪಟ್ಟನು. ಇವೆಲ್ಲವುಗಳು ಸೃಷ್ಟಿಯ ಆರನೆಯ ದಿನದಲ್ಲಿ ಸಂಭವಿಸಿದವು.
![OBS Image](https://cdn.door43.org/obs/jpg/360px/obs-en-01-16.jpg)
ಏಳನೇಯ ದಿನ ಬಂದಾಗ, ದೇವರು ತಾನು ಮಾಡುತ್ತಿದ್ದ ಎಲ್ಲಾ ಕೆಲಸವನ್ನು ಪೂರ್ಣಗೊಳಿಸಿದನು. ಆತನು ಏಳನೇ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು, ಏಕೆಂದರೆ ಆ ದಿನದಲ್ಲಿ ಆತನು ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟನು. ಹೀಗೆ ದೇವರು ಈ ವಿಶ್ವವನ್ನು ಮತ್ತು ಅದರಲ್ಲಿರುವ ಸಮಸ್ತವನ್ನು ಸೃಷ್ಟಿಸಿದನು.
_ಸತ್ಯವೇದದ ಕಥೆ: ಆದಿಕಾಂಡ 1-2_

52
content/02.md Normal file
View File

@ -0,0 +1,52 @@
# 2. ಪಾಪವು ಲೋಕವನ್ನು ಪ್ರವೇಶಿಸಿದ್ದು
![OBS Image](https://cdn.door43.org/obs/jpg/360px/obs-en-02-01.jpg)
ದೇವರು ಅವರಿಗಾಗಿ ಉಂಟುಮಾಡಿದ ಸುಂದರವಾದ ಉದಾನ್ಯವನದಲ್ಲಿ ಆದಾಮನು ಮತ್ತು ಅವನ ಹೆಂಡತಿಯು ಬಹಳ ಸಂತೋಷದಿಂದ ಜೀವಿಸುತ್ತಿದ್ದರು. ಅವರುವಸ್ತ್ರಗಳನ್ನು ಧರಿಸಿಕೊಂಡಿರಲಿಲ್ಲ, ಅದು ಅವರಿಗೆ ನಾಚಿಕೆಯನ್ನುಂಟು ಮಾಡಲಿಲ್ಲ, ಏಕೆಂದರೆ ಲೋಕದಲ್ಲಿ ಪಾಪವಿರಲಿಲ್ಲ. ಅವರು ಯಾವಾಗಲುಉದಾನ್ಯವನದಲ್ಲಿ ನಡೆದಾಡುತ್ತಾ ದೇವರೊಂದಿಗೆ ಮಾತನಾಡುತ್ತಿದ್ದರು.
![OBS Image](https://cdn.door43.org/obs/jpg/360px/obs-en-02-02.jpg)
ಆದರೆ ತೋಟದಲ್ಲಿ ಒಂದು ಸರ್ಪವಿತ್ತು. ಅದು ಅತಿ ಯುಕ್ತಿಯುಳ್ಳದ್ದಾಗಿತ್ತು. ಅದು ಆ ಸ್ತ್ರೀಯನ್ನು, "ಏನಮ್ಮಾ, ತೋಟದಲ್ಲಿರುವ ಯಾವ ಮರದ ಹಣ್ಣನ್ನು ನೀವು ತಿನ್ನಬಾರದೆಂದು ದೇವರು ಅಪ್ಪಣೆ ಕೊಟ್ಟಿರುವುದು ನಿಜವೋ?" ಎಂದು ಕೇಳಿತು.
![OBS Image](https://cdn.door43.org/obs/jpg/360px/obs-en-02-03.jpg)
ಆ ಸ್ತ್ರೀಯು, “ಒಳ್ಳೇಯದರ ಮತ್ತು ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಮರದ ಹಣ್ಣನ್ನು ಹೊರತುಪಡಿಸಿ ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ತಿನ್ನಬಹುದು ನೀವು ಅ ಎರಡು ಮರದ ಹಣ್ಣನ್ನು ತಿನ್ನಲೂ ಬಾರದು, ಮುಟ್ಟಲೂ ಕೂಡದು, ತಿಂದರೆ ಸಾಯುವಿರಿ’” ಎಂದು ದೇವರು ನಮಗೆ ಹೇಳಿದ್ದಾನೆ ಅಂದಳು.
![OBS Image](https://cdn.door43.org/obs/jpg/360px/obs-en-02-04.jpg)
ಸರ್ಪವು ಸ್ತ್ರೀಗೆ, "ಅದು ಸತ್ಯವಲ್ಲ! ನೀವು ಸಾಯುವುದಿಲ್ಲ, ನೀವು ಇದರ ಹಣ್ಣನ್ನು ತಿಂದ ಕ್ಷಣವೇ ನಿಮ್ಮ ಕಣ್ಣುಗಳು ತೆರೆಯುವವು, ನೀವು ದೇವರುಗಳಂತೆ ಆಗಿ ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನು ತಿಳಿಯುವಿರಿ, ಇದು ದೇವರಿಗೆ ಚೆನ್ನಾಗಿ ಗೊತ್ತು" ಎಂದು ಹೇಳಿತು.
![OBS Image](https://cdn.door43.org/obs/jpg/360px/obs-en-02-05.jpg)
ಆ ಸ್ತ್ರೀಯು ಹಣ್ಣು ತಿನ್ನುವುದಕ್ಕೆ ರುಚಿಕರವಾಗಿಯೂ, ನೋಡುವುದಕ್ಕೆ ರಮ್ಯವಾಗಿಯೂ ಇದೆ ಎಂದು ಕಂಡಳು. ಅವಳು ಜ್ಞಾನವಂತಳಾಗಬೇಕೆಂದು ಬಯಸಿದಳು, ಆದ್ದರಿಂದ ಅವಳು ಕೆಲವು ಹಣ್ಣುಗಳನ್ನು ತೆಗೆದುಕೊಂಡು ತಿಂದಳು. ಅವಳು ತನ್ನ ಸಂಗಡ ಇದ್ದ ಗಂಡನಿಗೂ ಕೊಡಲೂ, ಅವನೂ ತಿಂದನು.
![OBS Image](https://cdn.door43.org/obs/jpg/360px/obs-en-02-06.jpg)
ಕೂಡಲೆ ಅವರ ಕಣ್ಣುಗಳು ತೆರೆದವು, ಮತ್ತು ಅವರು ತಾವು ಬೆತ್ತಲೆಯಾಗಿದ್ದೇವೆಂದು ತಿಳಿದುಕೊಂಡರು. ಅವರು ತಮ್ಮ ದೇಹಗಳನ್ನು ಮುಚ್ಚಿಕೊಳ್ಳಲು ಎಲೆಗಳನ್ನು ಹೊಲೆದು ವಸ್ತ್ರವನ್ನಾಗಿ ಮಾಡಿಕೊಂಡರು.
![OBS Image](https://cdn.door43.org/obs/jpg/360px/obs-en-02-07.jpg)
ಆ ಮನುಷ್ಯನು ಮತ್ತು ಅವನ ಹೆಂಡತಿಯು ದೇವರು ತೋಟದಲ್ಲಿ ಸಂಚರಿಸುವ ಸಪ್ಪಳವನ್ನು ಕೇಳಿಸಿಕೊಂಡರು. ಅವರು ದೇವರಿಗೆ ಕಾಣದಂತೆ ಬಚ್ಚಿಟ್ಟುಕೊಂಡರು. ಆಗ ದೇವರು ಆ ಮನುಷ್ಯನನ್ನು , “ನೀನು ಎಲ್ಲಿದ್ದೀ?” ಎಂದು ಕೇಳಿದನು. ಅದಕ್ಕೆ ಆದಾಮನು, “ನೀನು ತೋಟದಲ್ಲಿ ಸಂಚರಿಸುವ ಸಪ್ಪಳವನ್ನು ನಾನು ಕೇಳಿ, ಬೆತ್ತಲೆಯಾಗಿರುವುದರಿಂದ ಹೆದರಿ ಅಡಗಿಕೊಂಡೆನು” ಎಂದನು.
![OBS Image](https://cdn.door43.org/obs/jpg/360px/obs-en-02-08.jpg)
ಆಗ ದೇವರು “ನೀನು ಬೆತ್ತಲೆಯಾಗಿದ್ದೀಯೆಂದು ನಿನಗೆ ತಿಳಿಸಿದವರಾರು? ತಿನ್ನಬಾರದೆಂದು ನಾನು ನಿನಗೆ ಆಜ್ಞಾಪಿಸಿದ ಮರದ ಹಣ್ಣನ್ನು ತಿಂದಿದ್ದಿಯಾ?” ಎಂದು ಕೇಳಿದನು. ಅದಕ್ಕೆ ಆ ಮನುಷ್ಯನು, “ನನ್ನ ಜೊತೆಯಲ್ಲಿರುವುದಕ್ಕೆ ನೀನು ಕೊಟ್ಟ ಈ ಸ್ತ್ರೀಯು, ಆ ಮರದ ಹಣ್ಣನ್ನು ನನಗೆ ಕೊಟ್ಟಳು” ಅಂದನು. ಆಗ ದೇವರು ಆ ಸ್ತ್ರೀಗೆ, “ಇದೇನು ನೀನು ಮಾಡಿದ್ದು?” ಎಂದು ಕೇಳಲು, ಆ ಸ್ತ್ರೀಯು, “ಸರ್ಪವು ನನ್ನನ್ನು ವಂಚಿಸಿತು” ಎಂದು ಉತ್ತರ ಕೊಟ್ಟಳು.
![OBS Image](https://cdn.door43.org/obs/jpg/360px/obs-en-02-09.jpg)
ದೇವರು ಸರ್ಪಕ್ಕೆ, “ನೀನು ಶಾಪಗ್ರಸ್ತವಾದಿ! ನೀನು ಹೊಟ್ಟೆಯಿಂದ ಹರಿದು ಮಣ್ಣೇ ತಿನ್ನುವಿ. ನೀನು ಮತ್ತು ಸ್ತ್ರೀಯು ಪರಸ್ಪರ ದ್ವೇಷಿಸುವಿರಿ, ಮತ್ತು ನಿನ್ನ ಮಕ್ಕಳು ಮತ್ತು ಆಕೆಯ ಮಕ್ಕಳು ಸಹ ಪರಸ್ಪರ ದ್ವೇಷಿಸುವರು. ಸ್ತ್ರೀಯ ಸಂತಾನವು ನಿನ್ನ ತಲೆಯನ್ನು ಜಜ್ಜುವದು. ನೀನು ಅದರ ಹಿಮ್ಮಡಿಯನ್ನು ಕಚ್ಚುವಿ” ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-02-10.jpg)
ಆಮೇಲೆ ದೇವರು ಸ್ತ್ರೀಗೆ, “ನಾನು ನಿನ್ನ ಗರ್ಭವೇದನೆಯನ್ನು ಅಧಿಕವಾಗಿ ಹೆಚ್ಚಿಸುವೆನು. ಗಂಡನ ಮೇಲೆ ನಿನಗೆ ಬಯಕೆ ಇರುವುದು, ಆದರೆ ಅವನು ನಿನ್ನ ಮೇಲೆ ಆಳ್ವಿಕೆ ಮಾಡುವನು” ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-02-11.jpg)
ಪುರುಷನಿಗೆ, “ನೀನು ನಿನ್ನ ಹೆಂಡತಿಯ ಮಾತನ್ನು ಕೇಳಿ ನನಗೆ ಅವಿಧೇಯನಾದೆ. ಇದರ ನಿಮಿತ್ತ ಈಗ ಭೂಮಿಯು ಶಾಪಗ್ರಸ್ತವಾಯಿತು, ಮತ್ತು ನೀನು ಆಹಾರಪದಾರ್ಥಗಳನ್ನು ಬೆಳೆಯಲು ಕಠಿಣವಾಗಿ ದುಡಿಯಬೇಕು. ಅನಂತರ ನೀನು ಸಾಯುವಿ, ಮತ್ತು ನಿನ್ನ ದೇಹವು ಮಣ್ಣಿಗೆ ಸೇರುವುದು” ಎಂದು ಹೇಳಿದನು. ಆ ಮನುಷ್ಯನು ತನ್ನ ಹೆಂಡತಿಗೆ ಹವ್ವ ಎಂದು ಹೆಸರಿಟ್ಟನು. ಅದರ್ ಅರ್ಥ “ಜೀವದಾಯಕಿ” ಎಂಬುದು , ಏಕೆಂದರೆ ಆಕೆಯೇ ಎಲ್ಲಾ ಜನರಿಗೆ ಮೂಲತಾಯಿಯಾಗಿದ್ದಾಳೆ. ದೇವರು ಆದಾಮನಿಗೂ ಅವನ ಹವ್ವಳಿಗೂ ಪ್ರಾಣಿಯ ಚರ್ಮದಿಂದ ವಸ್ತ್ರವನ್ನು ಮಾಡಿ ತೊಡಿಸಿದನು.
![OBS Image](https://cdn.door43.org/obs/jpg/360px/obs-en-02-12.jpg)
ದೇವರು, “ಈ ಮನುಷ್ಯರು ಒಳ್ಳೆಯದರ ಮತ್ತು ಕೆಟ್ಟದ್ದರ ಬೇಧವನ್ನರಿತು ನಮ್ಮಂತೆ ಅದರಲ್ಲಾ? ಇದರಿಂದ ಇವನು ಕೈಚಾಚಿ ಜೀವವೃಕ್ಷದ ಫಲವನ್ನು ಸಹ ತಿಂದು ಶಾಶ್ವತವಾಗಿ ಬದುಕುವವನಾಗಬಾರದು” ಎಂದು ಹೇಳಿದನು. ಅದುದರಿಂದ ದೇವರು ಆದಾಮ ಮತ್ತು ಹವ್ವರನ್ನು ತೋಟದಿಂದ ಹೊರಗೆ ಕಳುಹಿಸಿದನು. ಯಾರು ಜೀವವೃಕ್ಷದ ಹಣ್ಣನ್ನು ತಿನ್ನದಂತೆ ತಡೆಯಲು ದೇವರು ಶಕ್ತಿಯುತವಾದ ದೇವದೂತರನ್ನು ತೋಟದ ಪ್ರವೇಶದ್ವಾರದಲ್ಲಿ ಇರಿಸಿದನು.
_ಸತ್ಯವೇದದ ಕಥೆ: ಆದಿಕಾಂಡ 3_

68
content/03.md Normal file
View File

@ -0,0 +1,68 @@
# 3. ಜಲಪ್ರಳಯ
![OBS Image](https://cdn.door43.org/obs/jpg/360px/obs-en-03-01.jpg)
ದೀರ್ಘಕಾಲದ ನಂತರ, ಅನೇಕ ಜನರು ಲೋಕದಲ್ಲಿ ಜೀವಿಸುತ್ತಿದ್ದರು. ಅವರು ಬಹಳ ಕೆಟ್ಟವರು ಮತ್ತು ಹಿಂಸಾತ್ಮಕರು ಆಗಿದ್ದರು. ಅವರ ಕೆಟ್ಟತನದ ನಿಮಿತ್ತ ಇಡೀ ಲೋಕವನ್ನು ದೊಡ್ಡ ಜಲಪ್ರಳಯದಿಂದ ನಾಶಮಾಡಲು ದೇವರು ನಿರ್ಧರಿಸಿದನು.
![OBS Image](https://cdn.door43.org/obs/jpg/360px/obs-en-03-02.jpg)
ಆದರೆ ದೇವರು ನೋಹನಿಗೆ ದಯೆತೋರಿಸಿದನು. ಅವನು ಕೆಟ್ಟ ಜನರ ನಡುವೆ ಜೀವಿಸುತ್ತಿದ್ದರೂ ನೀತಿವಂತನಾದ ವ್ಯಕ್ತಿಯಾಗಿದ್ದನು. ದೇವರು ತಾನು ದೊಡ್ಡ ಜಲಪ್ರಳಯವನ್ನು ಬರಮಾಡುವುದಾಗಿ ದೇವರು ನೋಹನಿಗೆ ಹೇಳಿ ದೊಡ್ಡ ನಾವೆಯನ್ನು ಕಟ್ಟಬೇಕೆಂದು ಹೇಳಿದನು.
![OBS Image](https://cdn.door43.org/obs/jpg/360px/obs-en-03-03.jpg)
140 ಮೀಟರ್ ಉದ್ದ, 23 ಮೀಟರ್ ಅಗಲ, ಮತ್ತು 13.5 ಮೀಟರ್ ಎತ್ತರದ ನಾವೆಯನ್ನು ಕಟ್ಟಲು ದೇವರು ನೋಹನಿಗೆ ಹೇಳಿದನು. ಅದನ್ನು ಮರದಿಂದ ಕಟ್ಟಬೇಕು ಮತ್ತು ಮೂರು ಅಂತಸ್ತುಗಳನ್ನು, ಅದರಲ್ಲಿ ಅನೇಕ ಕೊಠಡಿಗಳನ್ನು, ಛಾವಣಿಯನ್ನು ಮತ್ತು ಕಿಟಕಿಯನ್ನು ಮಾಡಬೇಕು ಎಂದು ನೋಹನಿಗೆ ಹೇಳಲಾಯಿತು. ಅ ನಾವೆ ಜಲಪ್ರಳಯದ ಸಮಯದಲ್ಲಿ ನೋಹನನ್ನು, ಅವನ ಕುಟುಂಬವನ್ನು, ಮತ್ತು ಸಕಲವಿಧವಾದ ಭೂ ಪ್ರಾಣಿಗಳನ್ನು ಸುರಕ್ಷಿತವಾಗಿ ಕಾಪಾಡುವುದುದಾಗಿ ದೇವರು ತಿಳಿಸಿದನು.
![OBS Image](https://cdn.door43.org/obs/jpg/360px/obs-en-03-04.jpg)
ನೋಹನು ದೇವರಿಗೆ ವಿಧೇಯನಾದನು. ಅವನು ಮತ್ತು ಅವನ ಮೂವರು ಮಕ್ಕಳು ದೇವರು ಅವರಿಗೆ ಹೇಳಿದ ರೀತಿಯಲ್ಲಿಯೇ ನಾವೆಯನ್ನು ನಿರ್ಮಿಸಿದರು. ನಾವೆಯನ್ನು ಕಟ್ಟಲು ಅನೇಕ ವರ್ಷಗಳು ಬೇಕಾಯಿತು, ಏಕೆಂದರೆ ಅದು ತುಂಬಾ ದೊಡ್ಡದಾಗಿತ್ತು. ನೋಹನು ಮುಂಬರುವಂಥ ಜಲಪ್ರಳಯದ ಕುರಿತು ಜನರಿಗೆ ಎಚ್ಚರಿಕೆ ಕೊಟ್ಟನು ಮತ್ತು ದೇವರ ಕಡೆಗೆ ತಿರುಗಿಕೊಳ್ಳಲು ಅವರಿಗೆ ಹೇಳಿದನು, ಆದರೆ ಅವರು ಅವನನ್ನು ನಂಬಲಿಲ್ಲ.
![OBS Image](https://cdn.door43.org/obs/jpg/360px/obs-en-03-05.jpg)
ತಮಗೂ ಮತ್ತು ಪ್ರಾಣಿಗಳಿಗೂ ಬೇಕಾದಷ್ಟು ಆಹಾರವನ್ನು ಸಂಗ್ರಹಿಸಿಕೊಳ್ಳಬೇಕೆಂದು ದೇವರು ನೋಹನಿಗೂ ಮತ್ತು ಅವನ ಕುಟುಂಬದವರಿಗೂ ಆಜ್ಞಾಪಿಸಿದನು. ಎಲ್ಲವೂ ಸಿದ್ಧವಾಗಿದ್ದಾಗ, ದೇವರು ನೋಹನಿಗೆ, ಅವನು, ತನ್ನ ಹೆಂಡತಿಯು, ಮೂವರು ಗಂಡು ಮಕ್ಕಳು ಮತ್ತು ಅವರ ಹೆಂಡತಿಯರು ಅಂದರೆ ಒಟ್ಟು ಎಂಟು ಜನರು ನಾವೆಯೊಳಗೆ ಹೋಗುವಂತೆ ಅಪ್ಪಣೆ ಕೊಟ್ಟನು. .
![OBS Image](https://cdn.door43.org/obs/jpg/360px/obs-en-03-06.jpg)
ಅವುಗಳು ಹಡಗಿನೊಳಗೆ ಹೋಗಿ ಜಲಪ್ರಳಯದ ಸಮಯದಲ್ಲಿ ಸುರಕ್ಷಿತವಾಗಿರುವಂತೆ ದೇವರು ಸಕಲ ಪ್ರಾಣಿಪಕ್ಷಿಗಳಲ್ಲಿ ಒಂದು ಗಂಡು ಮತ್ತು ಒಂದು ಹೆಣ್ಣನ್ನು ನೋಹನ ಬಳಿಗೆ ಕಳುಹಿಸಿದನು. ಯಜ್ಞಕ್ಕಾಗಿ ಬಳಸಬಹುದಾದ ಸಕಲವಿಧವಾದ ಪ್ರಾಣಿಗಳಲ್ಲಿ ಏಳು ಗಂಡು ಮತ್ತು ಏಳು ಹೆಣ್ಣುಗಳನ್ನು ದೇವರು ಕಳುಹಿಸಿದನು. ಅವರೆಲ್ಲರು ಹಡಗಿನಲ್ಲಿರುವಾಗ, ದೇವರೇ ತಾನೇ ನಾವೆಯ ಬಾಗಿಲನ್ನು ಮುಚ್ಚಿದನು.
![OBS Image](https://cdn.door43.org/obs/jpg/360px/obs-en-03-07.jpg)
ತರುವಾಯ ಸತತವಾಗಿ ಮಳೆ ಬರಲು ಪ್ರಾರಂಭವಾಯಿತು. ನಲವತ್ತು ದಿನ ಹಗಲುರಾತ್ರಿ ನಿಲ್ಲದೇ ಮಳೆ ಸುರಿಯಿತು! ಭೂಮಿಯಿಂದಲೂ ಕೂಡ ನೀರು ನುಗ್ಗಿಬಂದಿತು. ಲೋಕಲ್ಲಿರುವ ಎಲ್ಲವು ನೀರಿನಿಂದ ಮುಚ್ಚಲ್ಪಟ್ಟವು, ಅತ್ಯುನ್ನತ ಪರ್ವತಗಳು ಸಹ ಮುಚ್ಚಿಹೋದವು.
![OBS Image](https://cdn.door43.org/obs/jpg/360px/obs-en-03-08.jpg)
ಹಡಗಿನಲ್ಲಿದ್ದ ಜನರು ಮತ್ತು ಪ್ರಾಣಿಗಳನ್ನು ಹೊರತುಪಡಿಸಿ, ಒಣನೆಲದಲ್ಲಿ ಜೀವಿಸುತ್ತಿದ್ದ ಎಲ್ಲವು ಸತ್ತುಹೋದವು. ನಾವೆ ನೀರಿನ ಮೇಲೆ ತೇಲಲು ಪ್ರಾರಂಭಿಸಿತು, ಆದರೂ ಮುಳುಗಲಿಲ್ಲ. ನಾವೆಯ ಒಳಗಿರುವುದೆಲ್ಲವನ್ನು ಎಲ್ಲವನ್ನೂ ಸುರಕ್ಷಿತವಾಗಿರಿಸಿತು.
![OBS Image](https://cdn.door43.org/obs/jpg/360px/obs-en-03-09.jpg)
ಮಳೆಯು ನಿಂತ ನಂತರ, ಹಡಗು ಐದು ತಿಂಗಳ ಕಾಲ ನೀರಿನ ಮೇಲೆ ತೇಲಾಡುತ್ತಿತ್ತು, ಮತ್ತು ಈ ಸಮಯದಲ್ಲಿ ನೀರು ತಗ್ಗಲು ಆರಂಭಿಸಿತು. ನಂತರ ಒಂದು ದಿನ ಹಡಗು ಬೆಟ್ಟದ ತುದಿಯಲ್ಲಿ ನಿಂತಿತು, ಆದರೆ ಲೋಕವು ಇನ್ನೂ ನೀರಿನಿಂದ ಮುಚ್ಚಲ್ಪಟ್ಟಿತು. ಮೂರು ತಿಂಗಳುಗಳ ನಂತರ, ಬೆಟ್ಟಗಳ ಶಿಖರಗಳು ಕಾಣಿಸಲಾರಂಭಿಸಿದವು.
![OBS Image](https://cdn.door43.org/obs/jpg/360px/obs-en-03-10.jpg)
ನಲವತ್ತು ದಿನಗಳ ನಂತರ, ನೀರು ಒಣಗಿದೆಯೇ ಎಂದು ನೋಡಲು ನೋಹನು ಕಾಗೆಯನ್ನು ಕಳುಹಿಸಿದನು. ಕಾಗೆಯು ಒಣನೆಲವನ್ನು ಹುಡುಕುತ್ತಾ ಹೋಗುತ್ತಾ ಬರುತ್ತಾ ಇತ್ತು, ಆದರೆ ಅದಕ್ಕೆ ಏನೂ ಸಿಗಲಿಲ್ಲ.
![OBS Image](https://cdn.door43.org/obs/jpg/360px/obs-en-03-11.jpg)
ನಂತರ ನೋಹನು ಒಂದು ಪಾರಿವಾಳವನ್ನು ಕಳುಹಿಸಿದನು. ಆದರೆ ಇದಕ್ಕೂ ಯಾವುದೇ ಒಣನೆಲವು ಸಿಗಲಿಲ್ಲ, ಆದ್ದರಿಂದ ಅದು ನೋಹನ ಬಳಿಗೆ ಹಿಂತಿರುಗಿ ಬಂತು. ಒಂದು ವಾರದ ನಂತರ ಆತ ಮತ್ತೆ ಪಾರಿವಾಳವನ್ನು ಕಳುಹಿಸಿದನು, ಮತ್ತು ಅದು ಅದರ ಕೊಕ್ಕಿನಲ್ಲಿ ಎಣ್ಣೆ ಮರದ ಚಿಗುರನ್ನು ತೆಗೆದುಕೊಂಡು ಹಿಂತಿರುಗಿ ಬಂತು! ನೀರು ತಗ್ಗುತ್ತಾ ಬಂತು ಮತ್ತು ಗಿಡಮರಗಳು ಮತ್ತೆ ಬೆಳೆಯಲರಂಭಿಸಿದವು!
![OBS Image](https://cdn.door43.org/obs/jpg/360px/obs-en-03-12.jpg)
ನೋಹನು ಮತ್ತೊಂದು ವಾರ ಕಾದನು ಮತ್ತು ಪಾರಿವಾಳವನ್ನು ಮೂರನೇ ಬಾರಿಗೆ ಕಳುಹಿಸಿದನು. ಈ ಸಮಯದಲ್ಲಿ, ಅದು ಇಳಿದುಕೊಳ್ಳಲು ಸ್ಥಳವನ್ನು ಕಂಡುಕೊಂಡಿತು ಮತ್ತು ಹಿಂತಿರುಗಿ ಬರಲಿಲ್ಲ. ಭೂಮಿ ಮೇಲಿನ ನೀರು ಒಣಗುತ್ತಿತ್ತು!
![OBS Image](https://cdn.door43.org/obs/jpg/360px/obs-en-03-13.jpg)
ಎರಡು ತಿಂಗಳುಗಳ ನಂತರ ದೇವರು ನೋಹನಿಗೆ, "ನೀನು ಮತ್ತು ನಿನ್ನ ಕುಟುಂಬ ಮತ್ತು ಎಲ್ಲಾ ಪ್ರಾಣಿಗಳು ಈಗ ಹಡಗನ್ನು ಬಿಟ್ಟು ಹೋಗಬಹುದು, ನೀವು ಅನೇಕ ಮಕ್ಕಳು ಮತ್ತು ಮೊಮ್ಮಕ್ಕಳನ್ನು ಪಡೆದುಕೊಳ್ಳಿರಿ ಮತ್ತು ಭೂಮಿಯು ತುಂಬಿಕೊಳ್ಳಿರಿ" ಎಂದು ಹೇಳಿದನು. ಆದ್ದರಿಂದ ನೋಹನೂ ಅವನ ಕುಟುಂಬವೂ ನಾವೆಯಿಂದ ಹೊರಬಂದರು.
![OBS Image](https://cdn.door43.org/obs/jpg/360px/obs-en-03-14.jpg)
ನೋಹನು ಹಡಗನ್ನು ಬಿಟ್ಟು ಹೊರಬಂದ ನಂತರ, ಅವನು ಒಂದು ಯಜ್ಞವೇದಿಯನ್ನು ಕಟ್ಟಿದನು ಮತ್ತು ಯಜ್ಞಕ್ಕಾಗಿ ಬಳಸಬಹುದಾದ ಸಕಲವಿಧವಾದ ಪ್ರಾಣಿಗಳಲ್ಲಿ ಕೆಲವನ್ನು ಯಜ್ಞಮಾಡಿದನು. ದೇವರು ಆ ಯಜ್ಞದಲ್ಲಿ ಸಂತೋಷಿಸಿದನು ಮತ್ತು ನೋಹನನ್ನು ಮತ್ತು ಅವನ ಕುಟುಂಬವನ್ನು ಆಶೀರ್ವದಿಸಿದನು.
![OBS Image](https://cdn.door43.org/obs/jpg/360px/obs-en-03-15.jpg)
ಆಗ ದೇವರು, "ಜನರು ಚಿಕ್ಕಂದಿನಿಂದಲೇ ಪಾಪಿಷ್ಠರಾಗಿದ್ದರೂ, ನಾನು ಜನರು ಮಾಡುವ ಕೆಟ್ಟ ಕಾರ್ಯಗಳ ನಿಮಿತ್ತ ಭೂಮಿಯನ್ನು ಎಂದಿಗೂ ಪುನಃ ಶಪಿಸುವುದಿಲ್ಲ ಅಥವಾ ಜಲಪ್ರಳಯವನ್ನು ಉಂಟುಮಾಡುವ ಮೂಲಕ ಪ್ರಪಂಚವನ್ನು ನಾಶಮಾಡುವುದಿಲ್ಲ ಎಂದು ನಾನು ವಾಗ್ದಾನ ಮಾಡುತ್ತೇನೆ" ಎಂದು ದೇವರು ಹೇಳಿದನು.
![OBS Image](https://cdn.door43.org/obs/jpg/360px/obs-en-03-16.jpg)
ದೇವರು ತನ್ನ ವಾಗ್ದಾನದ ಗುರುತಾಗಿ ಮೊದಲ ಮಳೆಬಿಲ್ಲನ್ನು ಉಂಟುಮಾಡಿದನು. ಪ್ರತಿ ಬಾರಿ ಮಳೆಬಿಲ್ಲು ಆಕಾಶದಲ್ಲಿ ಕಾಣಿಸಿಕೊಂಡಾಗ, ದೇವರು ತಾನು ವಾಗ್ದಾನ ಮಾಡಿದದ್ದನ್ನು ನೆನಪಿಸಿಕೊಳ್ಳುತ್ತಾನೆ ಮತ್ತು ಅವನ ಜನರು ಹಾಗೆಯೇ ನೆನಪಿಸಿಕೊಳ್ಳುತ್ತಾರೆ.
_ಸತ್ಯವೇದದ ಕಥೆ: ಆದಿಕಾಂಡ 6-8_

41
content/04.md Normal file
View File

@ -0,0 +1,41 @@
# 4. ಅಬ್ರಹಾಮನೊಂದಿಗಿನ ದೇವರ ಒಡಂಬಡಿಕೆ
![OBS Image](https://cdn.door43.org/obs/jpg/360px/obs-en-04-01.jpg)
ಜಲಪ್ರಳಯವಾಗಿ ಹಲವು ವರ್ಷಗಳಾದ ನಂತರ, ಲೋಕದಲ್ಲಿ ಮತ್ತೊಮ್ಮೆ ಜನರು ಹೆಚ್ಚುತ್ತಾ ಇದ್ದರು, ಅವರು ಪುನಃ:
ದೇವರಿಗೂ ಮತ್ತು ಇತರರಿಗೂ ವಿರುದ್ಧವಾಗಿ ಪಾಪ ಮಾಡಿದರು. ಅವರೆಲ್ಲರು ಒಂದೇ ಭಾಷೆಯನ್ನು ಮಾತನಾಡುತ್ತಿದ್ದರಿಂದ, ಅವರು ಒಟ್ಟಾಗಿ ಕೂಡಿಕೊಂಡರು ಮತ್ತು ದೇವರು ಆಜ್ಞಾಪಿಸಿದಂತೆ ಭೂಮಿಯನ್ನು ತುಂಬಿಕೊಳ್ಳುವ ಬದಲು ಒಂದು ಪಟ್ಟಣವನ್ನು ಕಟ್ಟಿದರು.
![OBS Image](https://cdn.door43.org/obs/jpg/360px/obs-en-04-02.jpg)
ಅವರು ಬಹಳ ಅಹಂಕಾರಿಗಳಾಗಿದ್ದರು ಮತ್ತು ಅವರು ಹೇಗೆ ಜೀವಿಸಬೇಕು ಎಂಬುದರ ಕುರಿತಾದ ದೇವರ ಆಜ್ಞೆಗಳನ್ನು ಅನುಸರಿಸಲು ಅವರು ಬಯಸಲಿಲ್ಲ. ಅವರು ಆಕಾಶವನ್ನು ಮುಟ್ಟುವಂಥ ಎತ್ತರದ ಗೋಪುರವನ್ನು ಕಟ್ಟಲು ಪ್ರಾರಂಭಿಸಿದರು. ಅವರು ಕೆಟ್ಟದ್ದನ್ನು ಮಾಡಲು ಒಟ್ಟಾಗಿ ಕೆಲಸ ಮಾಡುವುದಾದರೆ, ಅವರು ಹೆಚ್ಚೆಚ್ಚು ಪಾಪದ ಕೆಲಸಗಳನ್ನು ಮಾಡಬಹುದೆಂದು ದೇವರು ತಿಳಿದನು.
![OBS Image](https://cdn.door43.org/obs/jpg/360px/obs-en-04-03.jpg)
ಆದ್ದರಿಂದ ದೇವರು ಅವರ ಭಾಷೆಯನ್ನು ಬೇರೆ ಬೇರೆ ಭಾಷೆಗಳನ್ನಾಗಿ ಬದಲಾಯಿಸಿದನು ಮತ್ತು ಲೋಕದಾದ್ಯಂತ ಜನರನ್ನು ಚದುರಿಸಿಬಿಟ್ಟನು. ಅವರು ಕಟ್ಟಲು ಆರಂಭಿಸಿದ ಪಟ್ಟಣವನ್ನು ಬಾಬೆಲ್ ಎಂದು ಕರೆಯಲಾಗುತ್ತಿತ್ತು, "ಗಲಿಬಿಲಿ" ಎಂಬುದು ಇದರರ್ಥವಾಗಿದೆ.
![OBS Image](https://cdn.door43.org/obs/jpg/360px/obs-en-04-04.jpg)
ನೂರಾರು ವರ್ಷಗಳ ನಂತರ, ದೇವರು ಅಬ್ರಾಮ್ ಎಂಬ ಮನುಷ್ಯನೊಂದಿಗೆ ಮಾತಾಡಿದನು. ದೇವರು ಅವನಿಗೆ, "ನೀನು ಸ್ವದೇಶವನ್ನೂ ಮತ್ತು ಕುಟುಂಬವನ್ನೂ ಬಿಟ್ಟು ನಾನು ತೋರಿಸುವ ದೇಶಕ್ಕೆ ಹೊರಟು ಹೋಗು. ನಾನು ನಿನ್ನನ್ನು ದೊಡ್ಡ ಜನಾಂಗವಾಗುವಂತೆ ಮಾಡಿ ಆಶೀರ್ವದಿಸುವೆನು. ನಿನ್ನ ಹೆಸರನ್ನು ಪ್ರಖ್ಯಾತಿಗೆ ತರುವೆನು. ನಿನ್ನನ್ನು ಹರಸುವವರನ್ನು ಹರಸುವೆನು;ನಿನ್ನನ್ನು ಶಪಿಸುವವರನ್ನು ಶಪಿಸುವೆನು. ನಿನ್ನ ನಿಮಿತ್ತವಾಗಿ ಭೂಲೋಕದ ಎಲ್ಲಾ ಕುಟುಂಬದವರಿಗೂ ಆಶೀರ್ವಾದವುಂಟಾಗುವುದು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-04-05.jpg)
ಅಬ್ರಾಮನು ದೇವರಿಗೆ ವಿಧೇಯರಾದನು. ಅವನು ತನ್ನ ಹೆಂಡತಿಯಾದ ಸಾರಯಳನ್ನು, ತನ್ನ ಎಲ್ಲಾ ಸೇವಕರೊಂದಿಗೆ ಮತ್ತು ಅವನ ಒಡೆತನದಲ್ಲಿದ್ದ ಎಲ್ಲವುಗಳನ್ನು ತೆಗೆದುಕೊಂಡು, ದೇವರು ಅವನಿಗೆ ತೋರಿಸಿದ ಕಾನಾನ್ ದೇಶಕ್ಕೆ ಹೊರಟುಹೋದನು.
![OBS Image](https://cdn.door43.org/obs/jpg/360px/obs-en-04-06.jpg)
ಅಬ್ರಾಮನು ಕಾನಾನಿಗೆ ಬಂದಾಗ ದೇವರು "ನಿನ್ನ ಸುತ್ತಲೂ ನೋಡು, ನಾನು ಈ ದೇಶವನ್ನೆಲ್ಲಾ ನಿನಗೆ ಕೊಡುವೆನು, ನಿನ್ನ ಸಂತತಿಯು ಯಾವಾಗಲೂ ಅದನ್ನು ಸ್ವಾಧೀನಪಡಿಸಿಕೊಳ್ಳುವುದು" ಎಂದು ಹೇಳಿದನು. ನಂತರ ಅಬ್ರಾಮನು ಆ ದೇಶದಲ್ಲಿ ನೆಲೆಸಿದನು.
![OBS Image](https://cdn.door43.org/obs/jpg/360px/obs-en-04-07.jpg)
ಪರಾತ್ಪರನಾದ ದೇವರ ಯಾಜಕನಾದ ಮೆಲ್ಕೀಚೆದೆಕನು ಎಂಬ ಓರ್ವ ಮನುಷ್ಯನಿದ್ದನು. ಒಂದು ದಿನ ಯುದ್ದವಾದ ನಂತರ, ಅವನು ಅಬ್ರಾಮನನ್ನು ಭೇಟಿಯಾದರು. ಮೆಲ್ಕೀಚೆದೆಕನು ಅಬ್ರಾಮನನ್ನು ಆಶೀರ್ವದಿಸಿ, "ಭೂಮ್ಯಾಕಾಶವನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರು ಅಬ್ರಾಮನನ್ನು ಆಶೀರ್ವದಿಸಲಿ" ಎಂದು ಹೇಳಿದನು. ನಂತರ ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಮೆಲ್ಕೀಚೆದೆಕನಿಗೆ ಕೊಟ್ಟನು.
![OBS Image](https://cdn.door43.org/obs/jpg/360px/obs-en-04-08.jpg)
ಅನೇಕ ವರ್ಷಗಳು ಕಳೆದುಹೋದವು, ಆದರೆ ಅಬ್ರಾಮ್ ಮತ್ತು ಸಾರಯಳಿಗೆ ಇನ್ನೂ ಮಗನಿರಲಿಲ್ಲ. ದೇವರು ಅಬ್ರಾಮನೊಂದಿಗೆ ಮಾತನಾಡಿ, ಅವನು ಮಗನನ್ನು ಪಡೆಯುವನು ಮತ್ತು ಆಕಾಶದಲ್ಲಿರುವ ನಕ್ಷತ್ರಗಳಂತೆ ಅನೇಕ ವಂಶಸ್ಥರನ್ನು ಪಡೆಯುವನು ಎಂದು ಪುನಃ ವಾಗ್ದಾನ ಮಾಡಿದನು. ಅಬ್ರಾಮನು ದೇವರ ವಾಗ್ದಾನವನ್ನು ನಂಬಿದ್ದನು. ಅಬ್ರಾಮನು ದೇವರ ವಾಗ್ದಾನವನ್ನು ನಂಬಿದ್ದರಿಂದ ದೇವರು ಅವನನ್ನು ನೀತಿವಂತನೆಂದು ಘೋಷಿಸಿದನು.
![OBS Image](https://cdn.door43.org/obs/jpg/360px/obs-en-04-09.jpg)
ಆಗ ದೇವರು ಅಬ್ರಾಮನೊಂದಿಗೆ ಒಂದು ಒಡಂಬಡಿಕೆಯನ್ನು ಮಾಡಿಕೊಂಡನು. ಸಾಮಾನ್ಯವಾಗಿ, ಒಡಂಬಡಿಕೆಯು ಇಬ್ಬರು ವ್ಯಕ್ತಿಗಳು ಪರಸ್ಪರ ಒಬ್ಬರಿಗೊಬ್ಬರು ಕೆಲಸಗಳನ್ನು ಮಾಡುವುದಕ್ಕಾಗಿ ತಮ್ಮ ನಡುವೆ ಮಾಡಿಕೊಳ್ಳುವಂಥ ಒಪ್ಪಂದವಾಗಿದೆ. ಆದರೆ ಈ ಸಂಗತಿಯಲ್ಲಿ, ಅಬ್ರಾಮನು ಗಾಢವಾದ ನಿದ್ರೆಯಲ್ಲಿದ್ದಾಗ ದೇವರು ಅಬ್ರಾಮನಿಗೆ ವಾಗ್ದಾನ ಮಾಡಿದನು, ಆದರೂ ಅವನು ದೇವರ ಸ್ವರವನ್ನು ಕೇಳಲು ಸಾಧ್ಯವಾಯಿತು. ದೇವರು ಅವನಿಗೆ, "ನಾನು ನಿನ್ನ ಮೂಲಕವಾಗಿಯೇ ನಿನಗೆ ಒಬ್ಬ ಮಗನನ್ನು ಕೊಡುವೆನು, ನಿನ್ನ ಸಂತತಿಗೆ ನಾನು ಕಾನಾನ್ ದೇಶವನ್ನು ಕೊಡುವೆನು" ಎಂದು ವಾಗ್ದಾನ ಮಾಡಿದನು. ಆದರೆ ಅಬ್ರಾಮನಿಗೆ ಇನ್ನೂ ಮಗನಿರಲಿಲ್ಲ.
_ಸತ್ಯವೇದದ ಕಥೆ: ಆದಿಕಾಂಡ 11-15_

44
content/05.md Normal file
View File

@ -0,0 +1,44 @@
# 5. ವಾಗ್ದಾನದ ಮಗನು
![OBS Image](https://cdn.door43.org/obs/jpg/360px/obs-en-05-01.jpg)
ಅಬ್ರಾಮನು ಮತ್ತು ಸಾರಯಳು ಕಾನಾನಿಗೆ ಬಂದು ಹತ್ತು ವರ್ಷಗಳಾದ ನಂತರವೂ, ಅವರಿಗೆ ಇನ್ನೂ ಮಗುವಿರಲಿಲ್ಲ. ಹಾಗಾಗಿ ಅಬ್ರಾಮನ ಹೆಂಡತಿಯಾದ ಸಾರಾಯಳು ಅವನಿಗೆ, "ದೇವರು ನನಗೆ ಮಕ್ಕಳಾಗುವಂತೆ ಮಾಡಲಿಲ್ಲ ಮತ್ತು ಈಗ ನಾನು ಮಕ್ಕಳನ್ನು ಪಡೆಯಲು ತುಂಬಾ ವೃದ್ಧಳಾಗಿರುವ ಕಾರಣ, ಇಗೋ ನನ್ನ ದಾಸಿಯಾದ, ಹಾಗರಳು ಇಲ್ಲಿದ್ದಾಳೆ, ಅವಳನ್ನು ಮದುವೆಯಾಗು, ಆಕೆಯು ನನಗಾಗಿ ಮಗುವನ್ನು ಪಡೆಯಬಹುದು" ಎಂದು ಹೇಳಿದಳು.
![OBS Image](https://cdn.door43.org/obs/jpg/360px/obs-en-05-02.jpg)
ಆದ್ದರಿಂದ ಅಬ್ರಾಮನು ಹಾಗರಳನ್ನು ಮದುವೆಯಾದನು. ಹಾಗರಳಿಗೆ ಗಂಡು ಮಗುವಾಯಿತು ಮತ್ತು ಅಬ್ರಾಮನು ಅವನಿಗೆ ಇಷ್ಮಾಯೇಲ್ ಎಂದು ಹೆಸರಿಟ್ಟನು. ಆದರೆ ಸಾರಾಯಳು ಹಾಗರಳ ಬಗ್ಗೆ ಅಸೂಯೆಪಟ್ಟಳು. ಇಷ್ಮಾಯೇಲನು ಹದಿಮೂರು ವರ್ಷ ವಯಸ್ಸಿನವನಿದ್ದಾಗ, ದೇವರು ಮತ್ತೆ ಅಬ್ರಾಮನೊಂದಿಗೆ ಮಾತನಾಡಿದನು.
![OBS Image](https://cdn.door43.org/obs/jpg/360px/obs-en-05-03.jpg)
ದೇವರು, "ನಾನು ಸರ್ವಶಕ್ತನಾದ ದೇವರು, ನಾನು ನಿನ್ನ ಸಂಗಡ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ" ಎಂದು ಹೇಳಿದನು. ಆಗ ಅಬ್ರಾಮನು ಅಡ್ಡಬಿದ್ದನು. ದೇವರು ಅಬ್ರಾಮನಿಗೆ, "ನೀನು ಅನೇಕ ಜನಾಂಗಗಳ ತಂದೆಯಾಗುವಿ ಮತ್ತು ನಾನು ನಿನಗೂ ಮತ್ತು ನಿನ್ನ ಸಂತತಿಗೂ ಕಾನಾನ್ ದೇಶವನ್ನು ಸ್ವಾಸ್ತ್ಯವಾಗಿ ಕೊಡುವೆನು ಮತ್ತು ನಾನು ಎಂದೆಂದಿಗೂ ಅವರಿಗೆ ದೇವರಾಗಿರುವೆನು, ನಿನ್ನ ಕುಟುಂಬದ ಪ್ರತಿಯೊಬ್ಬ ಗಂಡು ಮಗುವಿಗೂ ನೀನು ಸುನ್ನತಿ ಮಾಡಿಸಬೇಕು" ಎಂದು ಸಹ ಹೇಳಿದನು.
![OBS Image](https://cdn.door43.org/obs/jpg/360px/obs-en-05-04.jpg)
"ನಿನ್ನ ಹೆಂಡತಿಯಾದ, ಸಾರಯಳು ಮಗನನ್ನು ಪಡೆಯುವಳು - ಅವನು ವಾಗ್ದಾನ ಮಗನಾಗಿರುತ್ತಾನೆ, ಅವನಿಗೆ ಇಸಾಕ್ ಎಂದು ಹೆಸರಿಡು, ನಾನು ಅವನೊಂದಿಗೆ ನನ್ನ ಒಡಂಬಡಿಕೆಯನ್ನು ಮಾಡಿಕೊಳ್ಳುತ್ತೇನೆ ಮತ್ತು ಅವನು ದೊಡ್ಡ ಜನಾಂಗವಾಗುವನು. ನಾನು ಇಸ್ಮಾಯೇಲನನ್ನು ಸಹ ದೊಡ್ಡ ಜನಾಂಗವನ್ನಾಗಿ ಮಾಡುವೆನು, ಆದರೆ ನನ್ನ ಒಡಂಬಡಿಕೆಯು ಇಸಾಕನೊಂದಿಗೆ ಇರುತ್ತದೆ" ಅಂದನು. ಆಗ ದೇವರು ಅಬ್ರಾಮನ ಹೆಸರನ್ನು ಅಬ್ರಹಾಮ್ ಎಂದು ಬದಲಿಸಿದನು, "ಬಹುಜನರ ತಂದೆ" ಎಂಬುದು ಇದರರ್ಥವಾಗಿದೆ. ದೇವರು ಸಾರಯಳ ಹೆಸರನ್ನು ಸಾರಾ ಎಂದು ಬದಲಿಸಿದನು, ಅಂದರೆ "ರಾಣಿ" ಎಂದರ್ಥ.
![OBS Image](https://cdn.door43.org/obs/jpg/360px/obs-en-05-05.jpg)
ಆ ದಿನದಲ್ಲಿ ಅಬ್ರಹಾಮನು ತನ್ನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೆ ಸುನ್ನತಿಮಾಡಿಸಿದನು. ಸುಮಾರು ಒಂದು ವರ್ಷದ ನಂತರ, ಅಬ್ರಹಾಮನು 100 ವರ್ಷ ವಯಸ್ಸಿನವನಿದ್ದಾಗ ಮತ್ತು ಸಾರಳು 90 ವರ್ಷ ವಯಸ್ಸಿನವಳಾಗಿದ್ದಾಗ, ಸಾರಳು ಅಬ್ರಹಾಮನ ಮಗನಿಗೆ ಜನ್ಮವಿತ್ತಳು. ದೇವರು ಅವರಿಗೆ ಮಾಡಬೇಕೆಂದು ಹೇಳಿದಂತೆಯೇ ಅವರು ಅವನಿಗೆ ಇಸಾಕ್ ಎಂದು ಹೆಸರಿಟ್ಟರು.
![OBS Image](https://cdn.door43.org/obs/jpg/360px/obs-en-05-06.jpg)
ಇಸಾಕನು ಯುವಕನಾಗಿದ್ದಾಗ, "ನಿನ್ನ ಏಕೈಕ ಮಗನಾದ ಇಸಾಕನನ್ನು ಕರೆದುಕೊಂಡು ಹೋಗಿ ಅವನನ್ನು ನನಗೆ ಯಜ್ಞವಾಗಿ ವಧಿಸು" ಎಂದು ಹೇಳುವುದರ ಮೂಲಕ ದೇವರು ಅಬ್ರಹಾಮನ ನಂಬಿಕೆಯನ್ನು ಪರೀಕ್ಷಿಸಿದನು. ಮತ್ತೆ ಅಬ್ರಹಾಮನು ದೇವರಿಗೆ ವಿಧೇಯನಾಗಿ ತನ್ನ ಮಗನನ್ನು ಅರ್ಪಿಸಲು ಸಿದ್ಧಮಾಡಿಕೊಂಡನು.
![OBS Image](https://cdn.door43.org/obs/jpg/360px/obs-en-05-07.jpg)
ಅಬ್ರಹಾಮನು ಮತ್ತು ಇಸಾಕನು ಯಜ್ಞದ ಸ್ಥಳಕ್ಕೆ ನಡೆದುಕೊಂಡು ಹೋಗುವಾಗ, ಇಸಾಕನು, "ಅಪ್ಪಾ, ಯಜ್ಞಕ್ಕೆ ಬೇಕಾದ ಕಟ್ಟಿಗೆಯೂ ಉಂಟು; ಆದರೆ ಕುರಿಮರಿ ಎಲ್ಲಿ?" ಎಂದು ಕೇಳಿದನು. ಅಬ್ರಹಾಮನು, "ಮಗನೇ, ಯಜ್ಞಕ್ಕೆ ಬೇಕಾದ ಕುರಿಮರಿಯನ್ನು ದೇವರೇ ಒದಗಿಸುವನು" ಎಂದು ಉತ್ತರಕೊಟ್ಟನು.
![OBS Image](https://cdn.door43.org/obs/jpg/360px/obs-en-05-08.jpg)
ಅವರು ಯಜ್ಞದ ಸ್ಥಳವನ್ನು ತಲುಪಿದಾಗ, ಅಬ್ರಹಾಮನು ತನ್ನ ಮಗನಾದ ಇಸಾಕನನ್ನು ಕಟ್ಟಿ ಯಜ್ಞವೇದಿಯ ಮೇಲೆ ಮಲಗಿಸಿದನು. ಅವನು ತನ್ನ ಮಗನನ್ನು ಕೊಲ್ಲುವುದಕ್ಕಿದ್ದಾಗ, ದೇವರು, "ನಿಲ್ಲಿಸು! ಹುಡುಗನಿಗೆ ಹಾನಿಮಾಡಬೇಡ! ನೀನು ನಿನ್ನ ಒಬ್ಬನೇ ಮಗನನ್ನು ನನಗೆ ಸಮರ್ಪಿಸುವುದಕ್ಕೆ ಹಿಂಜರಿಯಲಿಲ್ಲವಾದುದರಿಂದ ಈಗ ನೀನು ನನ್ನಲ್ಲಿ ಭಯಭಕ್ತಿಯುಳ್ಳವನು ಎಂದು ನನಗೆ ಗೊತ್ತಾಯಿತು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-05-09.jpg)
ಅಬ್ರಹಾಮನು ಹತ್ತಿರವಿರುವ ಪೊದೆಗಳಲ್ಲಿ ಸಿಲುಕಿರುವ ಒಂದು ಟಗರನ್ನು ಕಂಡನು. ಇಸಾಕನಿಗೆ ಬದಲಾಗಿ ಯಜ್ಞವಾಗಿ ಅರ್ಪಿಸಲು ದೇವರು ಟಗರನ್ನು ಒದಗಿಸಿಕೊಟ್ಟನು. ಅಬ್ರಹಾಮನು ಸಂತೋಷದಿಂದ ಈ ಟಗರನ್ನು ಯಜ್ಞವಾಗಿ ಅರ್ಪಿಸಿದನು.
![OBS Image](https://cdn.door43.org/obs/jpg/360px/obs-en-05-10.jpg)
ಆಗ ದೇವರು ಅಬ್ರಹಾಮನಿಗೆ, "ನೀನು ನನಗೆ ಎಲ್ಲವನ್ನೂ ಕೊಡಲು, ನಿನ್ನ ಏಕೈಕ ಮಗನನ್ನು ಸಹ ಕೊಡಲು ನೀನು ಸಿದ್ಧನಾದುದರಿಂದ, ನಾನು ನಿನ್ನನ್ನು ಆಶೀರ್ವದಿಸುವೆನೆಂದು ವಾಗ್ದಾನ ಮಾಡುತ್ತೇನೆ. ನಿನ್ನ ಸಂತತಿಯವರು ಆಕಾಶದಲ್ಲಿರುವ ನಕ್ಷತ್ರಗಳಿಗಿಂತ ಹೆಚ್ಚಾಗಿರುವರು, ನೀನು ನನಗೆ ವಿಧೇಯನಾದ ಕಾರಣ ನಾನು ನಿನ್ನ ಕುಟುಂಬದ ಮೂಲಕ ಲೋಕದ ಎಲ್ಲಾ ಕುಟುಂಬಗಳನ್ನು ಆಶೀರ್ವದಿಸುವೆನು" ಎಂದು ಹೇಳಿದನು.
_ಸತ್ಯವೇದದ ಕಥೆ: ಆದಿಕಾಂಡ 16-22_

32
content/06.md Normal file
View File

@ -0,0 +1,32 @@
# 6. ದೇವರು ಇಸಾಕನಿಗಾಗಿ ಹೆಂಡತಿಯನ್ನು ಒದಗಿಸಿಕೊಟ್ಟದ್ದು
![OBS Image](https://cdn.door43.org/obs/jpg/360px/obs-en-06-01.jpg)
ಅಬ್ರಹಾಮನು ಬಹಳ ವೃದ್ಧನಾಗಿದ್ದಾಗ, ಅವನ ಮಗನಾದ ಇಸಾಕನು ಪ್ರಾಯದವನಾಗಿ ಬೆಳೆದನು. ಅಬ್ರಹಾಮನು ತನ್ನ ಸೇವಕರಲ್ಲಿ ಒಬ್ಬನನ್ನು ತನ್ನ ಮಗನಾದ ಇಸಾಕನಿಗೆ ಹೆಂಡತಿಯನ್ನ ಹುಡುಕಿ ಕರೆತರಲು ಅವನ ಬಂಧುಗಳು ವಾಸಿಸುತ್ತಿದ್ದ ದೇಶಕ್ಕೆ ಕಳುಹಿಸಿದನು.
![OBS Image](https://cdn.door43.org/obs/jpg/360px/obs-en-06-02.jpg)
ಅಬ್ರಹಾಮನ ಬಂಧುಗಳು ವಾಸಿಸುತ್ತಿದ್ದ ದೇಶಕ್ಕೆ ದೀರ್ಘಕಾಲ ಪ್ರಯಾಣ ಮಾಡಿದ ನಂತರ ದೇವರು ಆ ಸೇವಕನನ್ನು ರೆಬೆಕ್ಕಳ ಬಳಿಗೆ ನಡೆಸಿದನು. ಅವಳು ಅಬ್ರಹಾಮನ ಸಹೋದರನ ಮೊಮ್ಮಗಳು.
![OBS Image](https://cdn.door43.org/obs/jpg/360px/obs-en-06-03.jpg)
ರೆಬೆಕ್ಕಳು ತನ್ನ ಕುಟುಂಬವನ್ನು ಬಿಟ್ಟು ಸೇವಕನೊಂದಿಗೆ ಇಸಾಕನ ಮನೆಗೆ ಹೋಗಲು ಒಪ್ಪಿಕೊಂಡಳು. ಅವಳು ಬಂದ ಕೂಡಲೇ ಇಸಾಕನು ಅವಳನ್ನು ಮದುವೆಯಾದನು.
![OBS Image](https://cdn.door43.org/obs/jpg/360px/obs-en-06-04.jpg)
ಬಹಳ ಸಮಯದ ನಂತರ, ಅಬ್ರಹಾಮನು ಸತ್ತುಹೋದನು. ಅಬ್ರಹಾಮನೊಂದಿಗೆ ಮಾಡಿಕೊಂಡಿದ ಒಡಂಬಡಿಕೆಯ ನಿಮಿತ್ತ ದೇವರು ಅಬ್ರಹಾಮನ ಮಗನಾದ ಇಸಾಕನನ್ನು ಆಶೀರ್ವದಿಸಿದನು. ಆ ಒಡಂಬಡಿಕೆಯಲ್ಲಿರುವ ದೇವರ ವಾಗ್ದಾನಗಳಲ್ಲಿ ಒಂದು ಅಬ್ರಹಾಮನು ಅಸಂಖ್ಯಾತವಾದ ಸಂತತಿಯನ್ನು ಹೊಂದುವನು ಎಂಬುದಾಗಿದೆ. ಆದರೆ ಇಸಾಕನ ಹೆಂಡತಿಯಾದ ರೆಬೆಕ್ಕಳಿಗೆ ಮಕ್ಕಳಿರಲಿಲ್ಲ.
![OBS Image](https://cdn.door43.org/obs/jpg/360px/obs-en-06-05.jpg)
ಇಸಾಕನು ರೆಬೆಕ್ಕಳಿಗಾಗಿ ಪ್ರಾರ್ಥಿಸಿದನು, ಮತ್ತು ಅವಳು ಅವಳಿ ಮಕ್ಕಳಿಗೆ ಗರ್ಭವತಿಯಾಗುವಂತೆ ದೇವರು ಅವಳಿಗೆ ಅವಕಾಶ ಮಾಡಿಕೊಟ್ಟನು. ರೆಬೆಕ್ಕಳ ಗರ್ಭದಲ್ಲಿರುವಾಗಲೇ ಎರಡು ಶಿಶುಗಳು ಪರಸ್ಪರ ಒಂದನ್ನೊಂದು ನೂಕಾಡುತ್ತಿದ್ದವು, ಆದ್ದರಿಂದ ರೆಬೆಕ್ಕಳು ಏನು ನಡೆಯುತ್ತಿದೆ ಎಂದು ದೇವರನ್ನು ವಿಚಾರಿಸಿದಳು.
![OBS Image](https://cdn.door43.org/obs/jpg/360px/obs-en-06-06.jpg)
ದೇವರು ರೆಬೆಕ್ಕಳಿಗೆ, "ನೀನು ಇಬ್ಬರು ಗಂಡುಮಕ್ಕಳಿಗೆ ಜನ್ಮ ನೀಡುವಿ. ಅವರ ವಂಶಸ್ಥರು ಎರಡು ವಿಭಿನ್ನ ಜನಾಂಗಗಳಾಗುತ್ತಾರೆ. ಅವರು ಪರಸ್ಪರ ಒಬ್ಬರೊಂದಿಗೊಬ್ಬರು ಹೋರಾಡುವರು. ಆದರೆ ನಿನ್ನ ಹಿರಿಯ ಮಗನಿಂದ ಬರುವ ಜನಾಂಗವು ನಿನ್ನ ಕಿರಿಯ ಮಗನಿಂದ ಬರುವ ಜನಾಂಗಕ್ಕೆ ಅಧೀನವಾಗಿರುತ್ತದೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-06-07.jpg)
ರೆಬೆಕ್ಕಳ ಶಿಶುಗಳು ಜನಿಸಿದಾಗ, ಹಿರಿಯ ಮಗನು ಕೆಂಪಾಗಿಯೂ ಮತ್ತು ರೋಮವುಳ್ಳವನಾಗಿಯೂ ಹೊರಗೆ ಬಂದನು, ಮತ್ತು ಅವರು ಅವನಿಗೆ ಏಸಾವ ಎಂದು ಹೆಸರಿಟ್ಟರು. ಅನಂತರ ಕಿರಿಯ ಮಗನು ಏಸಾವನ ಹಿಮ್ಮಡಿಯನ್ನು ಹಿಡಿದುಕೊಂಡು ಹೊರಬಂದನು ಮತ್ತು ಅವರು ಅವನಿಗೆ ಯಾಕೋಬ ಎಂದು ಹೆಸರಿಟ್ಟರು.
_ಸತ್ಯವೇದದ ಕಥೆ: ಆದಿಕಾಂಡ 24:1-25:26_

44
content/07.md Normal file
View File

@ -0,0 +1,44 @@
# 7. ದೇವರು ಯಾಕೋಬನನ್ನು ಆಶೀರ್ವದಿಸಿದನು
![OBS Image](https://cdn.door43.org/obs/jpg/360px/obs-en-07-01.jpg)
ಹುಡುಗರು ಬೆಳೆದಾಗ, ಯಾಕೋಬನು ಮನೆಯಲ್ಲಿ ಇರಲು ಇಷ್ಟಪಟ್ಟನು, ಆದರೆ ಏಸಾವನು ಪ್ರಾಣಿಗಳ ಬೇಟೆಯಾಡುವುದನ್ನು ಇಷ್ಟಪಟ್ಟನು. ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು, ಆದರೆ ಇಸಾಕನು ಏಸಾವನನ್ನು ಪ್ರೀತಿಸಿದನು.
![OBS Image](https://cdn.door43.org/obs/jpg/360px/obs-en-07-02.jpg)
ಒಂದು ದಿನ, ಏಸಾವನು ಬೇಟೆಯಿಂದ ಹಿಂತಿರುಗಿ ಬಂದಾಗ, ಅವನು ತುಂಬಾ ಹಸಿದವನಾಗಿದ್ದನು. ಏಸಾವನು ಯಾಕೋಬನಿಗೆ, "ದಯಮಾಡಿ ನೀನು ಮಾಡಿದ ಆಹಾರದಲ್ಲಿ ಸ್ವಲ್ಪ ನನಗೆ ಕೊಡು" ಅಂದನು. ಯಾಕೋಬನು, "ನೀನು ಮೊದಲು ಹುಟ್ಟಿರುವ ಕಾರಣ ನಿನಗೆ ದೊರೆಯಬೇಕಾದ ಎಲ್ಲವುಗಳ ಹಕ್ಕನ್ನೂ ನನಗೆ ಕೊಡುವೆನೆಂದು ಮೊದಲಿಗೆ ಮಾತು ಕೊಡು" ಎಂದು ಉತ್ತರಿಸಿದನು. ಆದ್ದರಿಂದ ಏಸಾವನು ಆ ಎಲ್ಲಾ ವಿಷಯಗಳನ್ನು ಯಾಕೋಬನಿಗೆ ಕೊಡುವುದಾಗಿ ಮಾತು ಕೊಟ್ಟನು. ಆಗ ಯಾಕೋಬನು ಅವನಿಗೆ ಸ್ವಲ್ಪ ಆಹಾರವನ್ನು ಕೊಟ್ಟನು.
![OBS Image](https://cdn.door43.org/obs/jpg/360px/obs-en-07-03.jpg)
ಇಸಾಕನು ತನ್ನ ಆಶೀರ್ವಾದವನ್ನು ಏಸಾವನಿಗೆ ಕೊಡಲು ಬಯಸಿದನು. ಆದರೆ ಅವನು ಹಾಗೆ ಮಾಡುವ ಮುನ್ನ, ಯಾಕೋಬನು ಏಸಾವನಾಗಿ ನಟಿಸುವ ಮೂಲಕ ರೆಬೆಕ್ಕಳು ಮತ್ತು ಯಾಕೋಬನು ಅವನನ್ನು ಮೋಸಗೊಳಿಸಿದರು. ಇಸಾಕನು ವೃದ್ಧನು ಮತ್ತು ಕಣ್ಣು ಕಾಣಲಾರದವನು ಆಗಿದ್ದನು. ಆದ್ದರಿಂದ ಯಾಕೋಬನು ಏಸಾವನ ವಸ್ತ್ರಗಳನ್ನು ಧರಿಸಿಕೊಂಡನು ಮತ್ತು ಅವನ ಕುತ್ತಿಗೆ ಹಾಗೂ ಕೈಗಳಿಗೆ ಮೇಕೆಗಳ ಚರ್ಮಗಳನ್ನು ಸುತ್ತಿಕೊಂಡನು.
![OBS Image](https://cdn.door43.org/obs/jpg/360px/obs-en-07-04.jpg)
ಯಾಕೋಬನು ಇಸಾಕನ ಬಳಿಗೆ ಬಂದು, "ನಾನು ಏಸಾವನು, ನೀನು ನನ್ನನ್ನು ಆಶೀರ್ವದಿಸುವಂತೆ ನಾನು ನಿನ್ನ ಬಳಿ ಬಂದಿದ್ದೇನೆ" ಎಂದು ಹೇಳಿದನು. ಇಸಾಕನು ಆಡಿನ ರೋಮವನ್ನು ಮುಟ್ಟಿ ಮತ್ತು ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿದಾಗ ಅವನು ಅವನನ್ನು ಏಸಾವನೆಂದು ಭಾವಿಸಿದನು ಮತ್ತು ಅವನನ್ನು ಆಶೀರ್ವದಿಸಿದನು.
![OBS Image](https://cdn.door43.org/obs/jpg/360px/obs-en-07-05.jpg)
ಏಸಾವನ್ನು ಯಾಕೋಬನನ್ನು ದ್ವೇಷಿಸುತ್ತಿದ್ದನು ಏಕೆಂದರೆ ಯಾಕೋಬನು ಹಿರಿಯ ಮಗನಿಗಿರುವ ಅವನ ಹಕ್ಕುಗಳನ್ನು ಮತ್ತು ಅವನ ಆಶೀರ್ವಾದವನ್ನು ಕದ್ದುಕೊಂಡಿದ್ದನು. ಆದ್ದರಿಂದ ಏಸಾವನ್ನು ಅವರ ತಂದೆಯು ಮರಣಹೊಂದಿದ ನಂತರ ಯಾಕೋಬನನ್ನು ಕೊಲ್ಲಲು ಯೋಜಿಸಿದ್ದನು.
![OBS Image](https://cdn.door43.org/obs/jpg/360px/obs-en-07-06.jpg)
ಆದರೆ ರೆಬೆಕ್ಕಳು ಏಸಾವನ ಯೋಜನೆಯ ಕುರಿತು ಅರಿತವಳಾದ್ದರಿಂದ ಆಕೆಯು ಮತ್ತು ಇಸಾಕನು ಯಾಕೋಬನನ್ನು ದೂರದಲ್ಲಿದ್ದ ಸಂಬಂಧಿಕರೊಂದಿಗೆ ಜೀವಿಸಲು ಕಳುಹಿಸಿದರು.
![OBS Image](https://cdn.door43.org/obs/jpg/360px/obs-en-07-07.jpg)
ಯಾಕೋಬನು ರೆಬೆಕ್ಕಳ ಸಂಬಂಧಿಕರೊಂದಿಗೆ ಅನೇಕ ವರ್ಷಗಳ ಕಾಲ ವಾಸಿಸಿದ್ದನು. ಆ ಸಮಯದಲ್ಲಿ ಅವನು ವಿವಾಹವಾದನು ಮತ್ತು ಹನ್ನೆರಡು ಗಂಡುಮಕ್ಕಳನ್ನು ಮತ್ತು ಒಬ್ಬಳು ಮಗಳನ್ನು ಪಡೆದನು. ದೇವರು ಅವನನ್ನು ಬಹಳ ಐಶ್ವ್ಸರ್ಯವಂತನನ್ನಾಗಿ ಮಾಡಿದನು.
![OBS Image](https://cdn.door43.org/obs/jpg/360px/obs-en-07-08.jpg)
ಕಾನಾನಿನಲ್ಲಿರುವ ತನ್ನ ಮನೆಯಿಂದ ಇಪ್ಪತ್ತು ವರ್ಷಗಳ ದೂರವಿದ್ದ ತರುವಾಯ ಯಾಕೋಬನು ತನ್ನ ಕುಟುಂಬ, ತನ್ನ ಸೇವಕರು ಮತ್ತು ಪ್ರಾಣಿಗಳ ಎಲ್ಲಾ ಹಿಂಡುಗಳ ಜೊತೆಯಲ್ಲಿ ಹಿಂದಿರುಗಿ ಬಂದನು.
![OBS Image](https://cdn.door43.org/obs/jpg/360px/obs-en-07-09.jpg)
ಯಾಕೋಬನು ಬಹಳ ಭಯವುಳ್ಳವನಾಗಿದ್ದನು ಏಕೆಂದರೆ ಅವನ ಮನಸಿನಲ್ಲಿ ಎಸಾವನು ತನ್ನನ್ನು ಕೊಲ್ಲತಾನೂ ಎಂಬ ಭಯ ಅವನನ್ನು ಕಾಡುತಿತ್ತು. ಆದ್ದರಿಂದ ಅವನು ತನ್ನಲ್ಲಿದ್ದ ಅನೇಕ ಪಶುಗಳನ್ನು, ಹಿಂಡಗಳನ್ನು ಏಸಾವನಿಗೆ ಉಡುಗೊರೆಯಾಗಿ ಕಳುಹಿಸಿದನು. ಪ್ರಾಣಿಗಳನ್ನು ತೆಗೆದುಕೊಂಡು ಬಂದ ಸೇವಕನು ಏಸಾವನಿಗೆ, "ನಿನ್ನ ಸೇವಕನಾದ ಯಾಕೋಬನು ಈ ಪ್ರಾಣಿಗಳನ್ನು ನಿನಗೆ ಉಡುಗೊರೆಯಾಗಿ ಕೊಟ್ಟಿದ್ದಾನೆ, ಅವನು ಶೀಘ್ರದಲ್ಲೇ ಬರಲಿದ್ದಾನೆ" ಎಂಬ ಸುವಾರ್ತೆಯನ್ನು ಹೇಳಿದನು.
![OBS Image](https://cdn.door43.org/obs/jpg/360px/obs-en-07-10.jpg)
ಆದರೆ ಏಸಾವನು ಯಾಕೋಬನಿಗೆ ಇನ್ನೂ ಕೇಡು ಮಾಡಬೇಕೆಂದಿರಲಿಲ್ಲ. ಬದಲಾಗಿ, ಅವನನ್ನು ಮತ್ತೆ ನೋಡಲು ಅವನು ಬಹು ಸಂತೋಷವುಳ್ಳವನಾಗಿದ್ದನು. ನಂತರ ಯಾಕೋಬನು ಕಾನಾನಿನಲ್ಲಿ ಸಮಾಧಾನಕರವಾಗಿ ಜೀವಿಸಿದನು. ಆಗ ಇಸಾಕನು ಸತ್ತುಹೋದನು ಮತ್ತು ಯಾಕೋಬನು ಹಾಗೂ ಏಸಾವನು ಅವನನ್ನು ಹೂಣಿಟ್ಟರು. ದೇವರು ಅಬ್ರಹಾಮನಿಗೆ ವಾಗ್ದಾನ ಮಾಡಿದ್ದ ಒಡಂಬಡಿಕೆಯ ವಾಗ್ದಾನಗಳು ಈಗ ಇಸಾಕನಿಂದ ಯಾಕೋಬನಿಗೆ ವರ್ಗಾಯಿಸಲ್ಪಟ್ಟವು.
_ಸತ್ಯವೇದದ ಕಥೆ: ಆದಿಕಾಂಡ 25:27-35:29_

64
content/08.md Normal file
View File

@ -0,0 +1,64 @@
# 8. ದೇವರು ಯೋಸೇಫನನ್ನು ಮತ್ತು ಅವನ ಕುಟುಂಬವನ್ನು ಕಾಪಾಡಿದನು
![OBS Image](https://cdn.door43.org/obs/jpg/360px/obs-en-08-01.jpg)
ಅನೇಕ ವರ್ಷಗಳ ನಂತರ, ಯಾಕೋಬನು ವೃದ್ಧನಾಗಿದ್ದಾಗ, ತನ್ನ ನೆಚ್ಚಿನ ಮಗನಾದ ಯೋಸೇಫನನ್ನು, ಹಿಂಡುಗಳನ್ನು ಮೇಯಿಸುತ್ತಿದ್ದ ಅವನ ಸಹೋದರರನ್ನು ವಿಚಾರಿಸುವುದಕ್ಕಾಗಿ ಕಳುಹಿಸಿದನು.
![OBS Image](https://cdn.door43.org/obs/jpg/360px/obs-en-08-02.jpg)
ಯೋಸೇಫನ ಸಹೋದರರು ಅವನನ್ನು ದ್ವೇಷಿಸುತ್ತಿದ್ದರು ಏಕೆಂದರೆ ಅವರ ತಂದೆಯು ಆವನನ್ನು ಹೆಚ್ಚು ಪ್ರೀತಿಸುತ್ತಿದ್ದನು ಮತ್ತು ಯೋಸೇಫನು ಅವರ ಅಧಿಪತಿಯಾಗುವನೆಂಬ ಕನಸನ್ನು ಕಂಡಿದ್ದನು. ಯೋಸೇಫನು ತನ್ನ ಸಹೋದರರ ಬಳಿಗೆ ಬಂದಾಗ ಅವರು ಅವನನ್ನು ಅಪಹರಿಸಿದರು ಮತ್ತು ಅವನನ್ನು ಗುಲಾಮ ವ್ಯಾಪಾರಿಗಳಿಗೆ ಮಾರಿಬಿಟ್ಟರು.
![OBS Image](https://cdn.door43.org/obs/jpg/360px/obs-en-08-03.jpg)
ಯೋಸೇಫನ ಸಹೋದರರು ಮನೆಗೆ ಹಿಂದಿರುಗುವ ಮುನ್ನ, ಅವರು ಯೋಸೇಫನ ನಿಲುವಂಗಿಯನ್ನು ಹರಿದುಹಾಕಿ ಅದನ್ನು ಮೇಕೆ ರಕ್ತದಲ್ಲಿ ಅದ್ದಿ ಕಾಡುಮೃಗವು ಯೋಸೇಫನನ್ನು ಕೊಂದುಹಾಕಿತ್ತು ಎಂದು ಅವನು ಯೋಚಿಸುವಂತೆ ಮಾಡಲು ಅವರು ತಮ್ಮ ತಂದೆಗೆ ನಿಲುವಂಗಿಯನ್ನು ತೋರಿಸಿದರು. ಯಾಕೋಬನು ಬಹಳ ದುಃಖಿತನಾದ್ದನು.
![OBS Image](https://cdn.door43.org/obs/jpg/360px/obs-en-08-04.jpg)
ಗುಲಾಮ ವ್ಯಾಪಾರಿಗಳು ಯೋಸೇಫನನ್ನು ಈಜಿಪ್ಟಿಗೆ ಐಗುಪ್ತ್ಯ ದೇಶಕ್ಕೆಕರೆದೊಯ್ದರು. ಅದು ನೈಲ್ ನದಿಯ ತೀರದಲ್ಲಿರುವ ದೊಡ್ಡ ಶಕ್ತಿಶಾಲಿ ದೇಶವಾಗಿತು. ಗುಲಾಮ ವ್ಯಾಪಾರಿಗಳು ಯೋಸೇಫನನ್ನು ಶ್ರೀಮಂತ ಸರ್ಕಾರಿ ಅಧಿಕಾರಿಗೆ ಗುಲಾಮನನ್ನಾಗಿ ಮಾರಿಬಿಟ್ಟರು. ಯೋಸೇಫನು ತನ್ನ ಯಜಮಾನನಿಗೆ ಚೆನ್ನಾಗಿ ಸೇವೆಮಾಡಿದನು, ಮತ್ತು ದೇವರು ಯೋಸೇಫನನ್ನು ಆಶೀರ್ವದಿಸಿದನು.
![OBS Image](https://cdn.door43.org/obs/jpg/360px/obs-en-08-05.jpg)
ಅವನ ಯಜಮಾನನ ಹೆಂಡತಿಯು ಯೋಸೇಫನೊಂದಿಗೆ ಸಂಗಮಿಸಲು ಪ್ರಯತ್ನಿಸಿದಳು, ಆದರೆ ಯೋಸೇಫನು ಈ ರೀತಿಯಲ್ಲಿ ದೇವರಿಗೆ ವಿರುದ್ಧವಾಗಿ ಪಾಪಮಾಡಲು ನಿರಾಕರಿಸಿದನು. ಅವಳು ಕೋಪಗೊಂಡಳು ಮತ್ತು ಯೋಸೇಫನ ಮೇಲೆ ತಪ್ಪು ಆರೋಪ ಮಾಡಿದಳು. ಹಾಗಾಗಿ ಅವನನ್ನು ಬಂಧಿಸಿ ಸೆರೆಮನೆಗೆ ಹಾಕಲಾಯಿತು. ಸೆರೆಮನೆಯಲ್ಲಿಯೂ, ಯೋಸೇಫನು ದೇವರಿಗೆ ನಂಬಿಗಸ್ತನಾಗಿದ್ದನು, ಮತ್ತು ದೇವರು ಅವನನ್ನು ಆಶೀರ್ವದಿಸಿದನು.
![OBS Image](https://cdn.door43.org/obs/jpg/360px/obs-en-08-06.jpg)
ಎರಡು ವರ್ಷಗಳ ನಂತರವೂ, ಯೋಸೇಫನು ಇನ್ನೂ ಸೆರೆಮನೆಯಲ್ಲಿದ್ದನು, ಅವನು ನಿರಪರಾಧಿಯಾಗಿದ್ದರೂ ಸಹ ಇನ್ನೂ ಸೆರೆಮನೆಯಲ್ಲಿದ್ದನು. ಒಂದು ರಾತ್ರಿ, ಫರೋಹನು ಎರಡು ಕನಸುಗಳನ್ನು ಕಂಡನು. ಈಜಿಪ್ಟಿನವರು ತಮ್ಮ ರಾಜರನ್ನು ಫರೋಹ ಎಂದು ಕರೆಯುತ್ತಿದ್ದರು, ಫರೋಹನು ಕಂಡ ಕನಸ್ಸುಗಳು ಅವನನ್ನು ಬಹಳವಾಗಿ ಕಳವಳಗೊಳಿಸಿದ್ದವು. ಅವನ ಆಲೋಚನೆಗಾರರಲ್ಲಿ ಒಬ್ಬರಿಗೂ ಅವನಿಗೆ ಕನಸುಗಳ ಅರ್ಥವನ್ನು ಹೇಳಲಾಗಲಿಲ್ಲ.
![OBS Image](https://cdn.door43.org/obs/jpg/360px/obs-en-08-07.jpg)
ದೇವರು ಯೋಸೇಫನಿಗೆ ಕನಸುಗಳನ್ನು ಅರ್ಥ ವಿವರಿಸುವ ಸಾಮರ್ಥ್ಯವನ್ನು ಕೊಟ್ಟಿದ್ದನು, ಆದ್ದರಿಂದ ಫರೋಹನು ಯೋಸೇಫನನ್ನು ಸೆರೆಮನೆಯಿಂದ ತನ್ನ ಬಳಿಗೆ ಕರೆಯಿಸಿಕೊಂಡನು. ಯೋಸೇಫನು ಫರೋಹನಿಗೆ ಬಂದ್ದಿದ್ದ ಕನಸುಗಳ ಅರ್ಥವನ್ನು ವಿವರಿಸಿದನು ಮತ್ತು "ದೇವರು ಸಮೃದ್ಧವಾದ ಫಸಲುಗಳ ಏಳು ವರ್ಷಗಳನ್ನು ಬರಮಾಡುತ್ತಾನೆ, ಅದಾದ ನಂತರ ಕ್ಷಾಮದ ಏಳು ವರ್ಷಗಳನ್ನು ಬರಮಾಡುತ್ತಾನೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-08-08.jpg)
ಫರೋಹನು ಯೋಸೇಫನನ್ನು ಮೆಚ್ಚಿಕೊಂಡನು, ಅವನನ್ನು ಈಜಿಪ್ಟಿನಲ್ಲೆಲ್ಲಾ ಅತ್ಯಂತ ಪ್ರಬಲವುಳ್ಳ ದ್ವಿತೀಯ ವ್ಯಕ್ತಿಯಾಗಿ ನೇಮಿಸಿದನು!
![OBS Image](https://cdn.door43.org/obs/jpg/360px/obs-en-08-09.jpg)
ಉತ್ತಮ ಫಸಲಿನ ಏಳು ವರ್ಷಗಳ ಸಮಯದಲ್ಲಿ ದೊಡ್ಡ ಪ್ರಮಾಣದಲ್ಲಿ ಆಹಾರವನ್ನು ಸಂಗ್ರಹಿಸಬೇಕೆಂದು ಯೋಸೇಫನು ಜನರಿಗೆ ಹೇಳಿದನು. ನಂತರ ಕ್ಷಾಮದ ಏಳು ವರ್ಷಗಳು ಬಂದಾಗ ಯೋಸೇಫನು ಜನರಿಗೆ ಆಹಾರವನ್ನು ಮಾರಿಸಿದನು, ಆದ್ದರಿಂದ ಅವರಿಗೆ ತಿನ್ನಲು ಬೇಕಾದಷ್ಟು ಆಹಾರವನ್ನು ಹೊಂದಿಕೊಂಡರು.
![OBS Image](https://cdn.door43.org/obs/jpg/360px/obs-en-08-10.jpg)
ಕ್ಷಾಮವು ಈಜಿಪ್ಟಿನಲ್ಲಿ ಮಾತ್ರವಲ್ಲದೆ ಯಾಕೋಬನು ಮತ್ತು ಅವನ ಕುಟುಂಬದವರು ವಾಸಿಸುತ್ತಿದ್ದ ಕಾನಾನಿನಲ್ಲಿಯೂ ಕೂಡಾ ತೀವ್ರವಾಗಿತ್ತು.
![OBS Image](https://cdn.door43.org/obs/jpg/360px/obs-en-08-11.jpg)
ಆದ್ದರಿಂದ ಯಾಕೋಬನು ಆಹಾರವನ್ನು ಖರೀದಿಸಲು ತನ್ನ ಹಿರಿಯ ಮಕ್ಕಳನ್ನು ಈಜಿಪ್ಟಿಗೆ ಕಳುಹಿಸಿದನು. ಆ ಸಹೋದರರು ಆಹಾರವನ್ನು ಖರೀದಿಸಲು ಯೋಸೇಫನ ಮುಂದೆ ನಿಂತಾಗ ಅವರು ಅವನ ಗುರುತನ್ನು ಹಿಡಿಯಲಿಲ್ಲ. ಆದರೆ ಯೋಸೇಫನು ಅವರ ಗುರುತನ್ನು ಹಿಡಿದನು.
![OBS Image](https://cdn.door43.org/obs/jpg/360px/obs-en-08-12.jpg)
ಯೋಸೇಫನು ತನ್ನ ಸಹೋದರರು ಬದಲಾಗಿದ್ದಾರೋ ಎಂದು ತಿಳಿದುಕೊಳ್ಳಲು ಅವರನ್ನು ಪರೀಕ್ಷಿಸಿದ ನಂತರ, ಅವನು ಅವರಿಗೆ, "ನಾನು ನಿಮ್ಮ ಸಹೋದರನಾದ ಯೋಸೇಫನು, ಭಯಪಡಬೇಡಿರಿ, ನೀವು ನನ್ನನ್ನು ಗುಲಾಮನಾಗಿ ಮಾರಿದಾಗ ಕೇಡನ್ನು ಮಾಡಲು ಪ್ರಯತ್ನಿಸಿದ್ದೀರಿ, ಆದರೆ ದೇವರು ಕೇಡನ್ನು ಒಳ್ಳೆಯದಕ್ಕಾಗಿ ಉಪಯೋಗಿಸಿದನು! ನಾನು ನಿಮಗೂ ಮತ್ತು ನಿಮ್ಮ ಕುಟುಂಬಗಳಿಗೂ ಒದಗಿಸಿಕೊಡಲು ಆಗುವಂತೆ ನೀವು ಬಂದು ಈಜಿಪ್ಟಿನಲ್ಲಿ ವಾಸಿಸಿರಿ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-08-13.jpg)
ಯೋಸೇಫನ ಸಹೋದರರು ಮನೆಗೆ ಹಿಂದಿರುಗಿ ಬಂದಾಗ ಅವರ ತಂದೆಯಾದ ಯಾಕೋಬನಿಗೆ ಯೋಸೇಫನು ಇನ್ನೂ ಬದುಕಿದ್ದಾನೆ ಎಂದು ಹೇಳಿದರು, ಅವನು ತುಂಬಾ ಸಂತೋಷಪಟ್ಟನು.
![OBS Image](https://cdn.door43.org/obs/jpg/360px/obs-en-08-14.jpg)
ಯಾಕೋಬನು ವೃದ್ಧನಾಗಿದ್ದರೂ, ಅವನು ತನ್ನ ಸರ್ವ ಕುಟುಂಬ ಸಮೇತನಾಗಿ ಈಜಿಪ್ಟಿಗೆ ತೆರಳಿದನು ಮತ್ತು ಅವರೆಲ್ಲರೂ ಅಲ್ಲಿ ವಾಸಿಸುತ್ತಿದ್ದರು. ಯಾಕೋಬನು ಸಾಯುವ ಮುನ್ನ ತನ್ನ ಪ್ರತಿಯೊಬ್ಬ ಮಕ್ಕಳನ್ನು ಆಶೀರ್ವದಿಸಿದನು.
![OBS Image](https://cdn.door43.org/obs/jpg/360px/obs-en-08-15.jpg)
ದೇವರು ಅಬ್ರಹಾಮನಿಗೆ ಕೊಟ್ಟ ಒಡಂಬಡಿಕೆಯು ವಾಗ್ದಾನಗಳು ಇಸಾಕನಿಗೆ, ನಂತರ ಯಾಕೋಬನಿಗೆ, ನಂತರ ಯಾಕೋಬನ ಹನ್ನೆರಡು ಗಂಡುಮಕ್ಕಳಿಗೆ ಮತ್ತು ಅವರ ಕುಟುಂಬಗಳಿಗೆ ವರ್ಗಾಯಿಸಲ್ಪಟ್ಟಿತು. ಹನ್ನೆರಡು ಮಕ್ಕಳ ಸಂತತಿಯರು ಇಸ್ರಾಯೇಲಿನ ಹನ್ನೆರಡು ಕುಲಗಳಾದರು.
_ಸತ್ಯವೇದದ ಕಥೆ: ಆದಿಕಾಂಡ 37-50_

64
content/09.md Normal file
View File

@ -0,0 +1,64 @@
# 9. ಮೋಶೆಯನ್ನು ಕರೆದ ದೇವರು
![OBS Image](https://cdn.door43.org/obs/jpg/360px/obs-en-09-01.jpg)
ಯೋಸೇಫನು ಸತ್ತ ನಂತರ ಅವನ ಎಲ್ಲಾ ಸಂಬಂಧಿಕರು ಈಜಿಪ್ಟಿನಲ್ಲಿಯೇ ತಂಗಿದರು. ಅವರು ಮತ್ತು ಅವರ ಸಂತತಿಯವರು ಬಹಳ ವರ್ಷಗಳು ಅಲ್ಲಿಯೇ ವಾಸಿಸುತ್ತಿದ್ದರು ಮತ್ತು ಅನೇಕ ಮಕ್ಕಳನ್ನು ಪಡೆದರು. ಅವರನ್ನು ಇಸ್ರಾಯೇಲ್ಯರು ಎಂದು ಕರೆಯಲಾಯಿತು.
![OBS Image](https://cdn.door43.org/obs/jpg/360px/obs-en-09-02.jpg)
ನೂರಾರು ವರ್ಷಗಳ ನಂತರ, ಇಸ್ರಾಯೇಲ್ಯರ ಸಂಖ್ಯೆಯು ಬಹಳ ಅಧಿಕವಾಯಿತ್ತು. ಯೋಸೇಫನು ಅವರಿಗೆ ಮಾಡಿದ ಸಹಾಯಗಳಿಗೆ ಈಜಿಪ್ತಿಯರು ಕೃತಜ್ಞರಾಗಿರಲಿಲ್ಲ. ಅವರು ಇಸ್ರಾಯೇಲ್ಯರಿಗೆ ಭಯಪಟ್ಟರು ಏಕೆಂದರೆ ಅವರು ಅಧಿಕವಾಗಿದ್ದರು. ಆ ಸಮಯದಲ್ಲಿ ಈಜಿಪ್ಟನ್ನು ಆಳುತ್ತಿದ್ದ ಫರೋಹನು ಇಸ್ರಾಯೇಲ್ಯರನ್ನು ಈಜಿಪ್ತಿಯರಿಗೆ ಗುಲಾಮರನ್ನಾಗಿ ಮಾಡಿದನು.
![OBS Image](https://cdn.door43.org/obs/jpg/360px/obs-en-09-03.jpg)
ಅನೇಕ ಕಟ್ಟಡಗಳನ್ನು ಮತ್ತು ಇಡೀ ಪಟ್ಟಣಗಳನ್ನು ಕಟ್ಟುವಂತೆ ಈಜಿಪ್ತಿಯರು ಇಸ್ರಾಯೇಲ್ಯರನ್ನು ಬಲಾತ್ಕರಿಸಿದರು. ಕಠಿಣವಾದ ಕೆಲಸವು ಅವರ ಜೀವನವನ್ನು ಬೇಸರಗೊಳಿಸಿತು, ಆದರೆ ದೇವರು ಅವರನ್ನು ಆಶೀರ್ವದಿಸಿದನು, ಮತ್ತು ಅವರು ಇನ್ನೂ ಅಧಿಕ ಮಕ್ಕಳನ್ನು ಪಡೆದರು.
![OBS Image](https://cdn.door43.org/obs/jpg/360px/obs-en-09-04.jpg)
ಇಸ್ರಾಯೇಲ್ಯರು ಅನೇಕ ಕೂಸುಗಳನ್ನು ಪಡೆದುಕೊಳ್ಳುತ್ತಿದ್ದಾರೆಂದು ಫರೋಹನು ನೋಡಿದನು. ಆದ್ದರಿಂದ ಅವನು ಇಸ್ರಾಯೇಲ್ಯರ ಗಂಡು ಕೂಸುಗಳನ್ನೆಲ್ಲಾ ನೈಲ್ ನದಿಗೆ ಎಸೆದು ಕೊಲ್ಲುವಂತೆ ತನ್ನ ಜನರಿಗೆ ಆಜ್ಞಾಪಿಸಿದನು.
![OBS Image](https://cdn.door43.org/obs/jpg/360px/obs-en-09-05.jpg)
ಒಬ್ಬ ಇಸ್ರಾಯೇಲ್ಯ ಸ್ತ್ರೀಯು ಮಗುವನ್ನು ಹೆತ್ತಳು. ಅವಳು ಮತ್ತು ಅವಳ ಪತಿಯು ಅವರಿಂದ ಆಗುವಷ್ಟರ ಮಟ್ಟಿಗೆ ಆ ಮಗುವನ್ನು ಬಚ್ಚಿಟ್ಟರು.
![OBS Image](https://cdn.door43.org/obs/jpg/360px/obs-en-09-06.jpg)
ಹುಡುಗನ ತಂದೆತಾಯಿಗಳು ಅವನನ್ನು ಬಚ್ಚಿಡಲು ಆಗದೆಹೋದಾಗ, ಕೊಲ್ಲಲ್ಪಡುವುದರಿಂದ ಅವನನ್ನು ಕಾಪಾಡುವುದಕ್ಕಾಗಿ ಅವರು ತೇಲುವ ಪೆಟ್ಟಿಗೆಯಲ್ಲಿ ಅವನನ್ನು ಇಟ್ಟು, ನೈಲ್ ನದಿಯ ಅಂಚಿನಲ್ಲಿರುವ ಜಂಬುಹುಲ್ಲಿನಲ್ಲಿ ಇಟ್ಟರು. ಅವನಿಗೆ ಏನಾಗುವುದೆಂದು ತಿಳಿದುಕೊಳ್ಳುವುದಕ್ಕೆ ಅವನ ಅಕ್ಕ ಅದನ್ನು ನೋಡುತ್ತಿದ್ದಳು.
![OBS Image](https://cdn.door43.org/obs/jpg/360px/obs-en-09-07.jpg)
ಫರೋಹನ ಮಗಳು ಪೆಟ್ಟಿಗೆಯನ್ನು ನೋಡಿದಳು ಮತ್ತು ಅದರೊಳಗೆ ಇದ್ದ ಮಗುವನ್ನು ನೋಡಿದಳು. ಅವಳು ಮಗುವನ್ನು ನೋಡಿದಾಗ, ಅವಳು ಅವನನ್ನು ತನ್ನ ಸ್ವಂತ ಮಗನಾಗಿ ತೆಗೆದುಕೊಂಡಳು. ಸ್ತ್ರೀಯು ಮಗುವಿನ ಸ್ವಂತ ತಾಯಿಯೆಂದು ತಿಳಿಯದೆಯೇ ಅವನನ್ನು ಸಾಕಲು ಅವಳು ಆ ಇಸ್ರಾಯೇಲ್ ಸ್ತ್ರೀಯನ್ನು ಸಂಬಳಕ್ಕೆ ಗೊತ್ತುಮಾಡಿದಳು. ಆ ಮಗುವು ದೊಡ್ಡವನಾಗುವ ತನಕ ಅಂದರೆ ತನ್ನ ತಾಯಿಯ ಹಾಲಿನ ಅಗತ್ಯವಿರುವ ತನಕ ಅವನನ್ನು ಸಾಕಿದಳು, ನಂತರ ಅವಳು ಅವನನ್ನು ಫರೋಹನ ಮಗಳಿಗೆ ಹಿಂದಿರುಗಿಸಿದಳು, ಆಕೆಯು ಅವನಿಗೆ ಮೋಶೆ ಎಂದು ಹೆಸರಿಟ್ಟಳು.
![OBS Image](https://cdn.door43.org/obs/jpg/360px/obs-en-09-08.jpg)
ಮೋಶೆಯು ಬೆಳೆದು ದೊಡ್ಡವನಾದಾಗ, ಒಂದು ದಿನ, ಒಬ್ಬ ಈಜಿಪ್ಟಿನವನು ಇಸ್ರಾಯೇಲ್ಯರ ಗುಲಾಮನನ್ನು ಹೊಡೆಯುತ್ತಿರುವುದನ್ನು ನೋಡಿದನು. ಮೋಶೆಯು ತನ್ನ ಜೊತೆ ಇಸ್ರಾಯೇಲ್ಯನನ್ನು ರಕ್ಷಿಸಲು ಪ್ರಯತ್ನಿಸಿದನು.
![OBS Image](https://cdn.door43.org/obs/jpg/360px/obs-en-09-09.jpg)
ಮೋಶೆಯು ಯಾರೂ ನೋಡುವುದಿಲ್ಲ ಎಂದು ಭಾವಿಸಿ, ಅವನು ಈಜಿಪ್ಟಿನವನನ್ನು ಕೊಂದು ಅವನ ಶವವನ್ನು ಹೂಣ್ಣಿಟ್ಟನು. ಆದರೆ ಮೋಶೆಯು ಮಾಡಿದ್ದನ್ನು ಯಾರೊ ಒಬ್ಬರು ನೋಡಿದರು.
![OBS Image](https://cdn.door43.org/obs/jpg/360px/obs-en-09-10.jpg)
ಮೋಶೆಯು ಮಾಡಿದ್ದನ್ನು ಫರೋಹನು ತಿಳಿದುಕೊಂಡನು. ಅವನು ಅವನನ್ನು ಕೊಲ್ಲಲು ಪ್ರಯತ್ನಿಸಿದನು, ಆದರೆ ಮೋಶೆಯು ಈಜಿಪ್ಟಿನಿಂದ ಮರುಭೂಮಿಗೆ ಓಡಿಹೋದನು. ಫರೋಹನ ಸೈನಿಕರಿಗೆ ಅವನು ಅಲ್ಲಿ ಸಿಗಲಿಲ್ಲ.
![OBS Image](https://cdn.door43.org/obs/jpg/360px/obs-en-09-11.jpg)
ಮೋಶೆಯು ಐಗುಪ್ತದಿಂದ ದೂರದಲ್ಲಿರುವ ಅಡವಿಯಲ್ಲಿ ಕುರುಬನಾದನು. ಅವನು ಆ ಸ್ಥಳದಲ್ಲಿರುವ ಒಬ್ಬ ಸ್ತ್ರೀಯನ್ನು ಮದುವೆಯಾದನು ಮತ್ತು ಇಬ್ಬರು ಗಂಡುಮಕ್ಕಳನ್ನು ಪಡೆದನು.
![OBS Image](https://cdn.door43.org/obs/jpg/360px/obs-en-09-12.jpg)
ಮೋಶೆಯು ತನ್ನ ಮಾವನ ಕುರಿಗಳ ಹಿಂಡನ್ನು ಮೇಯಿಸುತ್ತಿದ್ದನು. ಒಂದು ದಿನ ಅವನು ಬೂದಿಯಾಗದೆ ಬೆಂಕಿಯಿಂದ ಉರಿಯುತ್ತಿರುವ ಪೊದೆಯನ್ನು ಕಂಡನು. ಅವನು ಅದನ್ನು ನೋಡಲು ಪೊದೆಯ ಹತ್ತಿರಕ್ಕೆ ಹೋದನು. ಅವನು ಬಹಳ ಹತ್ತಿರಕ್ಕೆ ಹೋದಾಗ, ದೇವರು ಅವನೊಂದಿಗೆ ಮಾತಾಡಿದನು. ಆತನು, "ಮೋಶೆ, ನಿನ್ನ ಕೆರಗಳನ್ನು ತೆಗೆದುಹಾಕು. ನೀನು ಪರಿಶುದ್ಧ ಸ್ಥಳದ ಮೇಲೆ ನಿಂತಿರುವಿ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-09-13.jpg)
ದೇವರು, "ನನ್ನ ಜನರ ಕಷ್ಟಗಳನ್ನು ನಾನು ನೋಡಿದೆನು. ನಾನು ಈಜಿಪ್ಟಿನಲ್ಲಿರುವ ಇಸ್ರಾಯೇಲ್ಯರನ್ನು ಗುಲಾಮಗಿರಿಯಿಂದ ಹೊರಗೆ ಕರೆತರಲು ನಿನ್ನನ್ನು ಫರೋಹನ ಬಳಿಗೆ ಕಳುಹಿಸುತ್ತೇನೆ. ನಾನು ಅಬ್ರಹಾಮ್, ಇಸಾಕ್ ಯಾಕೋಬರಿಗೆ ವಾಗ್ದಾನ ಮಾಡಿದ ಕಾನಾನ್ ದೇಶವನ್ನು ಅವರಿಗೆ ಕೊಡುವೆನು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-09-14.jpg)
ಮೋಶೆಯು, "ನನ್ನನ್ನು ಕಳುಹಿಸಿದವರು ಯಾರೆಂದು ಜನರು ತಿಳಿಯಬೇಕೆಂದು ಬಯಸಿದರೆ, ನಾನು ಏನು ಹೇಳಬೇಕು?" ಎಂದು ಕೇಳಿದನು. ದೇವರು, " ನಾನು ಇರುವಾತನೆ (ಇರುವವನಾಗಿ ಇರುವವನು ನಾನೇ), (ಇರುವಾತನು) ನಿಮ್ಮ ಬಳಿಗೆ ನನ್ನನ್ನು ಕಳುಹಿಸಿದ್ದಾನೆ’ ಎಂದು ಅವರಿಗೆ ಹೇಳು, ‘ನಾನು ಯೆಹೋವನು, ನಿಮ್ಮ ಪೂರ್ವಿಕರಾದ ಅಬ್ರಹಾಮ್, ಇಸಾಕ್, ಯಾಕೋಬರ ದೇವರು. ಇದು ಸದಾಕಾಲಕ್ಕೂ ಇರುವ ನನ್ನ ಹೆಸರು’ ಎಂದು ಸಹ ಅವರಿಗೆ ಹೇಳಬೇಕು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-09-15.jpg)
ಮೋಶೆಯು ಭಯಭೀತನಾಗಿದ್ದನು ಮತ್ತು ಫರೋಹನ ಬಳಿಗೆ ಹೋಗಲು ಬಯಸಲಿಲ್ಲ, ಏಕೆಂದರೆ ಅವನು ತನಗೆ ಚೆನ್ನಾಗಿ ಮಾತನಾಡಲು ಬರುವುದಿಲ್ಲವೆಂದು ಯೋಚಿಸಿದನು, ಆದ್ದರಿಂದ ಮೋಶೆಯ ಅಣ್ಣನಾದ ಆರೋನನನ್ನು ಅವನಿಗೆ ಸಹಾಯ ಮಾಡಲು ದೇವರು ಕಳುಹಿಸಿದನು.
_ಸತ್ಯವೇದದ ಕಥೆ: ವಿಮೋಚನಕಾಂಡ 1-4_

54
content/10.md Normal file
View File

@ -0,0 +1,54 @@
# 10. ಹತ್ತು ಬಾಧೆಗಳು
![OBS Image](https://cdn.door43.org/obs/jpg/360px/obs-en-10-01.jpg)
ಫರೋಹನು ಮೊಂಡನಾಗಿರುತ್ತಾನೆ ಎಂದು ದೇವರು ಮೋಶೆ ಮತ್ತು ಆರೋನರಿಗೆ ಎಚ್ಚರಿಕೆ ಕೊಟ್ಟನು. ಅವರು ಫರೋಹನ ಬಳಿಗೆ ಹೋದಾಗ ಅವರು, "ನನ್ನ ಜನರು ಹೊರಟುಹೋಗುವಂತೆ ಬಿಡು ಎಂದು ಇಸ್ರಾಯೇಲಿನ ದೇವರಾದ ಯೆಹೋವನು ಹೇಳುತ್ತಾನೆ" ಎಂದು ಹೇಳಿದರು. ಆದರೆ ಫರೋಹನು ಅವರಿಗೆ ಕಿವಿಗೊಡಲಿಲ್ಲ. ಇಸ್ರಾಯೇಲ್ಯರು ಬಿಡುಗಡೆಯಾಗಿ ಹೋಗಲು ಅವಕಾಶ ಕೊಡುವುದಕ್ಕೆ ಬದಲಾಗಿ, ಅವರನ್ನು ಇನ್ನಷ್ಟು ಕಠಿಣವಾಗಿ ಕೆಲಸ ಮಾಡುವಂತೆ ಬಲಾತ್ಕರಿಸಿದನು!
![OBS Image](https://cdn.door43.org/obs/jpg/360px/obs-en-10-02.jpg)
ಫರೋಹನು ಜನರನ್ನು ಹೊರಟುಹೋಗುವಂತೆ ಬಿಟ್ಟುಬಿಡಲು ನಿರಾಕರಿಸುತ್ತಿದ್ದನು, ಆದ್ದರಿಂದ ದೇವರು ಈಜಿಪ್ಟಿನ ಮೇಲೆ ಹತ್ತು ದೊಡ್ಡ ಬಾಧೆಗಳನ್ನು ಕಳುಹಿಸಿದನು. ಈ ಬಾಧೆಗಳ ಮೂಲಕ, ದೇವರು ತಾನು ಫರೋಹನಿಗಿಂತಲೂ ಮತ್ತು ಈಜಿಪ್ಟಿನ ಸರ್ವ ದೇವರುಗಳಿಗಿಂತಲೂ ಅಧಿಕ ಶಕ್ತಿಶಾಲಿ ಎಂದು ಫರೋಹನಿಗೆ ತೋರಿಸಿದನು.
![OBS Image](https://cdn.door43.org/obs/jpg/360px/obs-en-10-03.jpg)
ದೇವರು ನೈಲ್ ನದಿಯನ್ನು ರಕ್ತವಾಗಿ ಮಾರ್ಪಾಡಿಸಿದನು, ಆದರೂ ಫರೋಹನು ಇಸ್ರಾಯೇಲ್ಯರನ್ನು ಹೊರಟುಹೋಗಲು ಬಿಡಲಿಲ್ಲ.
![OBS Image](https://cdn.door43.org/obs/jpg/360px/obs-en-10-04.jpg)
ದೇವರು ಈಜಿಪ್ಟಿನ ಮೇಲೆಲ್ಲಾ ಕಪ್ಪೆಗಳನ್ನು ಬರಮಾಡಿದನು. ಕಪ್ಪೆಗಳನ್ನು ತೊಲಗಿಸಬೇಕು ಎಂದು ಫರೋಹನು ಮೋಶೆಯನ್ನು ಬೇಡಿಕೊಂಡನು. ಆದರೆ ಕಪ್ಪೆಗಳೆಲ್ಲವು ಸತ್ತುಹೋದ ನಂತರ, ಫರೋಹನು ತನ್ನ ಹೃದಯವನ್ನು ಕಠಿಣಮಾಡಿಕೊಂಡನು ಮತ್ತು ಇಸ್ರಾಯೇಲ್ಯರು ಈಜಿಪ್ಟನ್ನು ಬಿಟ್ಟು ಹೊರಟುಹೋಗಲು ಬಿಡಲಿಲ್ಲ.
![OBS Image](https://cdn.door43.org/obs/jpg/360px/obs-en-10-05.jpg)
ಆದುದರಿಂದ ದೇವರು ಹೇನುಗಳ ಬಾಧೆಯನ್ನು ಬರಮಾಡಿದನು. ನಂತರ ಆತನು ನೊಣಗಳ ಬಾಧೆಯನ್ನು ಬರಮಾಡಿದನು. ಫರೋಹನು ಮೋಶೆ ಮತ್ತು ಆರೋನರನ್ನು ಕರೆಯಿಸಿ, ಈ ಬಾಧೆಯನ್ನು ನಿಲ್ಲಿಸಿದರೆ ಇಸ್ರಾಯೇಲ್ಯರು ಈಜಿಪ್ಟನ್ನು ಬಿಟ್ಟು ಹೋಗಬಹುದೆಂದು ಅವರಿಗೆ ಹೇಳಿದನು. ಮೋಶೆಯು ಪ್ರಾರ್ಥಿಸಿದಾಗ, ದೇವರು ಈಜಿಪ್ಟಿನಿಂದ ಎಲ್ಲಾ ನೊಣಗಳನ್ನು ತೊಲಗಿಸಿದನು. ಆದರೆ ಫರೋಹನು ತನ್ನ ಹೃದಯವನ್ನು ಕಠಿಣಮಾಡಿಕೊಂಡನು ಮತ್ತು ಜನರು ಬಿಡುಗಡೆಯಾಗಿ ಹೊರಟುಹೋಗಲು ಒಪ್ಪಲಿಲ್ಲ.
![OBS Image](https://cdn.door43.org/obs/jpg/360px/obs-en-10-06.jpg)
ಅನಂತರ, ದೇವರು ಈಜಿಪ್ಟಿನವರಿಗೆ ಸೇರಿದ ಎಲ್ಲಾ ಪ್ರಾಣಿಗಳು ವ್ಯಾಧಿಯಿಂದ ಸಾಯುವಂತೆ ಮಾಡಿದನು. ಆದರೆ ಫರೋಹನ ಹೃದಯವು ಕಠಿಣವಾಯಿತ್ತು ಅವನು ಇಸ್ರಾಯೇಲ್ಯರನ್ನು ಹೊರಟುಹೋಗಲು ಬಿಡಲಿಲ್ಲ.
![OBS Image](https://cdn.door43.org/obs/jpg/360px/obs-en-10-07.jpg)
ಆಗ ಫರೋಹನ ಎದುರಿನಲ್ಲಿ ಬೂದಿಯನ್ನು ಗಾಳಿಯಲ್ಲಿ ತೂರಬೇಕೆಂದು ದೇವರು ಮೋಶೆಗೆ ಹೇಳಿದನು. ಅವನು ಅದನ್ನು ಮಾಡಿದ ನಂತರ, ಈಜಿಪ್ಟಿನವರ ಚರ್ಮದ ಮೇಲೆ ಘೋರವಾದ ಹುಣ್ಣುಗಳು ಕಾಣಿಸಿಕೊಂಡವು, ಆದರೆ ಇಸ್ರಾಯೇಲ್ಯರ ಮೇಲೆ ಅವು ಬರಲಿಲ್ಲ. ದೇವರು ಫರೋಹನ ಹೃದಯವನ್ನು ಕಠಿಣ ಮಾಡಿದನು ಮತ್ತು ಫರೋಹನು ಇಸ್ರಾಯೇಲ್ಯರು ಬಿಡುಗಡೆಯಾಗಿ ಹೋಗಲು ಅಪ್ಪಣೆ ಕೊಡಲಿಲ್ಲ.
![OBS Image](https://cdn.door43.org/obs/jpg/360px/obs-en-10-08.jpg)
ಅದರ ನಂತರ, ದೇವರು ಈಜಿಪ್ಟಿನ ಬಹುತೇಕ ಬೆಳೆಗಳನ್ನು ನಾಶಪಡಿಸುವಂತ ಮತ್ತು ಹೊರಗೆ ಹೋದವರನ್ನು ಸಾಯಿಸುವಂತ ಆಲಿಕಲ್ಲಿನ ಮಳೆಯನ್ನು ಬರಮಾಡಿದನು. ಫರೋಹನು ಮೋಶೆ ಆರೋನರನ್ನು ಕರೆಯಿಸಿ ಅವರಿಗೆ, "ನಾನು ಪಾಪಮಾಡಿದ್ದೇನೆ, ನೀನು ಹೋಗಬಹುದು" ಎಂದು ಹೇಳಿದನು. ಆದ್ದರಿಂದ ಮೋಶೆಯು ಪ್ರಾರ್ಥಿಸಿದನು, ಮತ್ತು ಆಕಾಶದಿಂದ ಆಲಿಕಲ್ಲು ಬೀಳುವುದು ನಿಂತುಹೋಯಿತು.
![OBS Image](https://cdn.door43.org/obs/jpg/360px/obs-en-10-09.jpg)
ಆದರೆ ಫರೋಹನು ಪುನಃ ಪಾಪಮಾಡಿದನು ಮತ್ತು ತನ್ನ ಹೃದಯವನ್ನು ಕಠಿಣಪಡಿಸಿಕೊಂಡನು. ಅವನು ಇಸ್ರಾಯೇಲ್ಯರು ಬಿಡುಗಡೆಯಾಗಿ ಹೋಗಲು ಬಿಡಲಿಲ್ಲ.
![OBS Image](https://cdn.door43.org/obs/jpg/360px/obs-en-10-10.jpg)
ಆದ್ದರಿಂದ ದೇವರು ಈಜಿಪ್ಟಿನ ಮೇಲೆ ಮಿಡತೆಗಳ ಗುಂಪು ಬರುವಂತೆ ಮಾಡಿದನು. ಆಲಿಕಲ್ಲಿನ ಮಳೆಯಿಂದ ನಾಶವಾಗದೆ ಉಳಿದಿದ್ದೆಲ್ಲವನ್ನು ಮಿಡತೆಗಳು ತಿಂದುಬಿಟ್ಟವು.
![OBS Image](https://cdn.door43.org/obs/jpg/360px/obs-en-10-11.jpg)
ನಂತರ ದೇವರು ಮೂರು ದಿನಗಳ ಕಾಲವಿರುವಂಥ ಕತ್ತಲೆಯನ್ನು ಬರಮಾಡಿದನು. ಈಜಿಪ್ಟಿನವರು ತಮ್ಮ ಮನೆಗಳನ್ನು ಬಿಟ್ಟು ಹೊರಗೆ ಹೋಗಲಾರದಷ್ಟರ ಮಟ್ಟಿಗೆ ಬಹಳ ಕತ್ತಲಾಗಿತ್ತು. ಆದರೆ ಇಸ್ರಾಯೇಲ್ಯರು ವಾಸವಾಗಿದ್ದ ಕಡೆಯಲ್ಲಿ ಬೆಳಕು ಇತ್ತು.
![OBS Image](https://cdn.door43.org/obs/jpg/360px/obs-en-10-12.jpg)
ಈ ಒಂಭತ್ತು ಬಾಧೆಗಳ ನಂತರವೂ, ಇಸ್ರಾಯೇಲ್ಯರು ಬಿಡುಗಡೆಯಾಗಿ ಹೋಗಲು ಫರೋಹನು ನಿರಾಕರಿಸಿದನು. ಫರೋಹನು ಕಿವಿಗೊಡದ ಕಾರಣ, ಇನ್ನೊಂದು ಕೊನೆಯ ಬಾಧೆಯನ್ನು ಕಳುಹಿಸಲು ದೇವರು ಯೋಜಿಸಿದನು. ಇದು ಫರೋಹನ ಮನಸ್ಸನ್ನು ಬದಲಾಯಿಸುವಂಥದ್ದಾಗಿತ್ತು.
_ಸತ್ಯವೇದದ ಕಥೆ: ವಿಮೋಚನಕಾಂಡ 5-10_

36
content/11.md Normal file
View File

@ -0,0 +1,36 @@
# 11. ಪಸ್ಕ
![OBS Image](https://cdn.door43.org/obs/jpg/360px/obs-en-11-01.jpg)
ಇಸ್ರಾಯೇಲ್ಯರನ್ನು ಬಿಟ್ಟುಬಿಡಬೇಕೆಂದು ಫರೋಹನಿಗೆ ತಿಳಿಸಲು ದೇವರು ಮೋಶೆ ಮತ್ತು ಆರೋನರನ್ನು ಕಳುಹಿಸಿದನು. ಅವನು ಅವರನ್ನು ಬಿಟ್ಟುಬಿಡದಿದ್ದರೆ ದೇವರು ಈಜಿಪ್ಟಿನ ಜನರ ಮತ್ತು ಪ್ರಾಣಿಗಳ ಚೊಚ್ಚಲಾದ ಗಂಡಾದವುಗಳನ್ನು ಕೊಲ್ಲುವೆನು ಎಂದು ಅವರು ಎಚ್ಚರಿಸಿದರು. ಫರೋಹನು ಇದನ್ನು ಕೇಳಿದಾಗ್ಯೂ ಅವನು ದೇವರನ್ನು ನಂಬಲು ಮತ್ತು ದೇವರಿಗೆ ವಿಧೇಯನಾಗಲು ನಿರಾಕರಿಸಿದನು.
![OBS Image](https://cdn.door43.org/obs/jpg/360px/obs-en-11-02.jpg)
ಅತನನ್ನು ನಂಬಿದವರ ಚೊಚ್ಚಲ ಮಗನನ್ನು ರಕ್ಷಿಸಲು ದೇವರು ಒಂದು ಮಾರ್ಗವನ್ನು ಒದಗಿಸಿಕೊಟ್ಟನು. ಪ್ರತಿಯೊಂದು ಕುಟುಂಬವೂ ಒಂದು ಪೂರ್ಣಾಂಗವಾದ ಕುರಿಮರಿಯನ್ನು ಆರಿಸಿಕೊಳ್ಳಬೇಕು ಮತ್ತು ಅದನ್ನು ವಧಿಸಬೇಕು ಎಂದು ಅವರಿಗೆ ತಿಳಿಸಲಾಯಿತು.
![OBS Image](https://cdn.door43.org/obs/jpg/360px/obs-en-11-03.jpg)
ಈ ಕುರಿಮರಿಯ ರಕ್ತವನ್ನು ಅವರ ಮನೆಗಳ ಬಾಗಿಲ ಸುತ್ತ ಹಚ್ಚಬೇಕು ಎಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು. ಅವರು ಮಾಂಸವನ್ನು ಸುಟ್ಟು, ತಕ್ಷಣವೇ ಅದನ್ನು ಅವರು ಹುಳಿಯಿಲ್ಲದ ರೊಟ್ಟಿಯೊಡನೆ ತಿನ್ನಬೇಕು. ಅವರು ಈ ಊಟವನ್ನು ತಿಂದ ತಕ್ಷಣವೇ ಈಜಿಪ್ಟನ್ನು ಬಿಟ್ಟು ಹೊರಡಲು ಸಿದ್ಧವಾಗಬೇಕೆಂದು ಸಹ ಆತನು ಹೇಳಿದನು.
![OBS Image](https://cdn.door43.org/obs/jpg/360px/obs-en-11-04.jpg)
ದೇವರು ಇಸ್ರಾಯೇಲ್ಯರಿಗೆ ಏನು ಮಾಡಬೇಕೆಂದು ಆಜ್ಞಾಪಿಸಿದ್ದನೋ ಅವರು ಎಲ್ಲವನ್ನೂ ಮಾಡಿದರು. ಮಧ್ಯರಾತ್ರಿಯಲ್ಲಿ, ದೇವರು ಈಜಿಪ್ಟಿನ ನಡುವೆ ಹಾದುಹೋಗುತ್ತಾ ಪ್ರತಿಯೊಬ್ಬ ಚೊಚ್ಚಲ ಮಗನನ್ನು ಸಂಹರಿಸತೊಡಗಿದನು.
![OBS Image](https://cdn.door43.org/obs/jpg/360px/obs-en-11-05.jpg)
ಇಸ್ರಾಯೇಲ್ಯರ ಎಲ್ಲಾ ಮನೆಗಳು ಬಾಗಿಲು ಸುತ್ತಲೂ ರಕ್ತವನ್ನು ಹಚ್ಚಿದ್ದರು, ಆದ್ದರಿಂದ ದೇವರು ಆ ಮನೆಗಳನ್ನು ದಾಟಿಹೋದನು. ಅವುಗಳೊಳಗೆ ಇದ್ದವರೆಲ್ಲರು ಸುರಕ್ಷಿತರಾಗಿದ್ದರು. ಕುರಿಮರಿಯ ರಕ್ತದ ನಿಮಿತ್ತ ಅವರು ಸಂರಕ್ಷಿಸಲ್ಪಟ್ಟರು.
![OBS Image](https://cdn.door43.org/obs/jpg/360px/obs-en-11-06.jpg)
ಆದರೆ ಈಜಿಪ್ತಿಯನ್ನರು ದೇವರನ್ನು ನಂಬಲಿಲ್ಲ ಅಥವಾ ಆತನ ಆಜ್ಞೆಗಳನ್ನು ಅನುಸರಿಸಲಿಲ್ಲ. ಆದ್ದರಿಂದ ದೇವರು ಅವರ ಮನೆಗಳನ್ನು ದಾಟಿಹೋಗಲಿಲ್ಲ. ದೇವರು ಈಜಿಪ್ಟಿನವರ ಚೊಚ್ಚಲ ಮಕ್ಕಳಲ್ಲಿ ಪ್ರತಿಯೊಬ್ಬನನ್ನು ಸಂಹರಿಸಿದನು.
![OBS Image](https://cdn.door43.org/obs/jpg/360px/obs-en-11-07.jpg)
ಫರೋಹನ ಚೊಚ್ಚಲು ಮಗನು ಮೊದಲುಗೊಂಡು ಸೆರೆಯಲ್ಲಿದ್ದ ಸೆರೆಯವನ ಚೊಚ್ಚಲು ಮಗನವರೆಗೂ, ಈಜಿಪ್ತಿಯನ್ನರ ಎಲ್ಲಾ ಚೊಚ್ಚಲ ಗಂಡುಮಕ್ಕಳು ಸತ್ತುಹೋದರು. ಈಜಿಪ್ಟಿನಲ್ಲಿ ಬಹಳ ಜನರು ಗಾಢವಾದ ದುಃಖದಿಂದ ಅಳುತ್ತಿದ್ದರು ಮತ್ತು ಗೋಳಾಡುತ್ತಿದ್ದರು.
![OBS Image](https://cdn.door43.org/obs/jpg/360px/obs-en-11-08.jpg)
ಅದೇ ರಾತ್ರಿಯಲ್ಲಿ ಫರೋಹನು ಮೋಶೆ ಆರೋನರನ್ನು ಕರೆಯಿಸಿ, "ಇಸ್ರಾಯೇಲ್ಯರನ್ನು ಕರೆದುಕೊಂಡು ತಕ್ಷಣವೇ ಈಜಿಪ್ಟನ್ನು ಬಿಟ್ಟುಹೋಗಿರಿ!" ಎಂದು ಹೇಳಿದನು. ಈಜಿಪ್ಟಿನ ಜನರು ಸಹ ಇಸ್ರಾಯೇಲ್ಯರನ್ನು ತಕ್ಷಣವೇ ಹೊರಟುಹೋಗುವಂತೆ ಬಲವಂತಮಾಡಿದರು.
_ಸತ್ಯವೇದದ ಕಥೆ: ವಿಮೋಚನಕಾಂಡ 11:1-12:32_

60
content/12.md Normal file
View File

@ -0,0 +1,60 @@
# 12. ವಿಮೋಚನೆ (ನಿರ್ಗಮನ)
![OBS Image](https://cdn.door43.org/obs/jpg/360px/obs-en-12-01.jpg)
ಇಸ್ರಾಯೇಲ್ಯರು ಈಜಿಪ್ಟನ್ನು ಬಿಟ್ಟುಹೋಗುವುದರಲ್ಲಿ ಬಹಳ ಸಂತೋಷವುಳ್ಳವರಾಗಿದ್ದರು. ಅವರು ಇನ್ನೂ ಗುಲಾಮರಾಗಿರಲಿಲ್ಲ ಮತ್ತು ಅವರು ವಾಗ್ದತ್ತ ದೇಶಕ್ಕೆ ಹೋಗುತ್ತಿದ್ದರು! ಇಸ್ರಾಯೇಲ್ಯರು ಕೇಳಿಕೊಂಡದ್ದೆಲ್ಲವನ್ನು ಅಂದರೆ ಚಿನ್ನ, ಬೆಳ್ಳಿ ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ಸಹ ಈಜಿಪ್ಟಿನವರು ಅವರಿಗೆ ಕೊಟ್ಟುಬಿಟ್ಟರು. ಇತರ ಜನಾಂಗಗಳ ಕೆಲವು ಜನರು ದೇವರನ್ನು ನಂಬಿದರು ಮತ್ತು ಇಸ್ರಾಯೇಲ್ಯರು ಈಜಿಪ್ಟನ್ನು ಬಿಟ್ಟುಹೋಗುವಾಗ ಅವರೊಂದಿಗೆ ಹೋದರು.
![OBS Image](https://cdn.door43.org/obs/jpg/360px/obs-en-12-02.jpg)
ಉನ್ನತವಾದ ಮೇಘಸ್ತಂಭವು ಹಗಲಿನಲ್ಲಿ ಅವರ ಮುಂದೆ ಹೋಗುತ್ತಿತ್ತು. ರಾತ್ರಿಯಲ್ಲಿ ಅದು ಉನ್ನತವಾದ ಅಗ್ನಿಸ್ತಂಭದ ಹಾಗೆ ಅವರನನ್ನು ಮುನ್ನಡೆಸುತಿತ್ತು. ಮೇಘಸ್ತಂಭದಲ್ಲಿ ಮತ್ತು ಅಗ್ನಿಸ್ತಂಭದಲ್ಲಿ ಇದ್ದ ದೇವರು ಯಾವಾಗಲೂ ಅವರೊಂದಿಗೆ ಇದ್ದುಕೊಂಡು, ಅವರು ಪ್ರಯಾಣ ಮಾಡುವಾಗ ಅವರಿಗೆ ಮಾರ್ಗದರ್ಶನ ನೀಡಿದನು. ಅವರು ಮಾಡಬೇಕಾದ್ದದು ಇಷ್ಟೇ, ಅದೇನಂದರೆ ಆತನನ್ನು ಹಿಂಬಾಲಿಸುವುದು.
![OBS Image](https://cdn.door43.org/obs/jpg/360px/obs-en-12-03.jpg)
ಸ್ವಲ್ಪ ಸಮಯದ ನಂತರ, ಫರೋಹನು ಮತ್ತು ಅವನ ಜನರು ತಮ್ಮ ಮನಸ್ಸನ್ನು ಬದಲಾಯಿಸಿಕೊಂಡರು. ಅವರು ಇಸ್ರಾಯೇಲ್ಯರನ್ನು ಪುನಃ ತಮ್ಮ ಗುಲಾಮರನ್ನಾಗಿ ಮಾಡಿಕೊಳ್ಳಲು ಬಯಸಿದರು. ಆದ್ದರಿಂದ ಅವರು ಇಸ್ರಾಯೇಲ್ಯರನ್ನು ಬೆನ್ನಟ್ಟಿದರು. ದೇವರೇ ಅವರ ಮನಸ್ಸನ್ನು ಬದಲಾಯಿಸಿದನು. ಯೆಹೋವನು ತಾನು ಫರೋಹನಿಗಿಂತಲೂ ಮತ್ತು ಈಜಿಪ್ಟಿನವರ ಸರ್ವ ದೇವರುಗಳಿಗಿಂತಲೂ ಅಧಿಕ ಶಕ್ತಿಶಾಲಿ ಎಂದು ಎಲ್ಲರೂ ತಿಳಿಯಬೇಕೆಂದು ಬಯಸಿದ್ದರಿಂದ ಆತನು ಹೀಗೆ ಮಾಡಿದನು.
![OBS Image](https://cdn.door43.org/obs/jpg/360px/obs-en-12-04.jpg)
ಈಜಿಪ್ಟಿನ ಸೈನ್ಯವು ಬರುವುದನ್ನು ಇಸ್ರಾಯೇಲ್ಯರು ನೋಡಿದಾಗ, ತಾವು ಫರೋಹನ ಸೈನ್ಯಮತ್ತು ಕೆಂಪು ಸಮುದ್ರದ ನಡುವೆ ಸಿಕ್ಕಿಬಿದ್ದೇವು ಎಂದು ಅವರು ಅರಿತುಕೊಂಡರು. ಅವರು ಬಹಳ ಭಯಪಟ್ಟವರಾಗಿ, "ನಾವು ಯಾಕೆ ಈಜಿಪ್ಟನ್ನು ಬಿಟ್ಟು ಬಂದೆವು? ನಾವು ಸಾಯುತ್ತೇವಲ್ಲಾ!" ಎಂದು ಕೂಗಿದರು.
![OBS Image](https://cdn.door43.org/obs/jpg/360px/obs-en-12-05.jpg)
ಮೋಶೆಯು ಇಸ್ರಾಯೇಲ್ಯರಿಗೆ, "ಭಯಪಡಬೇಡಿರಿ! ದೇವರು ತಾನೇ ಇಂದು ನಿಮಗಾಗಿ ಹೋರಾಡುತ್ತಾನೆ ಮತ್ತು ನಿಮ್ಮನ್ನು ಕಾಪಾಡುತ್ತಾನೆ" ಎಂದು ಹೇಳಿದನು. ಆಗ ದೇವರು ಮೋಶೆಗೆ, "ಜನರಿಗೆ ಕೆಂಪು ಸಮುದ್ರದ ಕಡೆಗೆ ಹೋಗುವಂತೆ ಹೇಳು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-12-06.jpg)
ಆಗ ದೇವರು ಮೇಘಸ್ತಂಭವನ್ನು ಇಸ್ರಾಯೇಲ್ಯರ ಮತ್ತು ಈಜಿಪ್ಟಿನವರ ನಡುವೆ ನಿಲ್ಲಿಸಿದನು, ಆದ್ದರಿಂದ ಈಜಿಪ್ಟಿನವರಿಗೆ ಇಸ್ರಾಯೇಲ್ಯರನ್ನು ನೋಡಲು ಆಗಲಿಲ್ಲ.
![OBS Image](https://cdn.door43.org/obs/jpg/360px/obs-en-12-07.jpg)
ಸಮುದ್ರದ ಮೇಲೆ ನಿನ್ನ ಕೈಯನ್ನು ಚಾಚು ಎಂದು ದೇವರು ಮೋಶೆಗೆ ಹೇಳಿದನು. ಆಗ ದೇವರು ಗಾಳಿಯು ಸಮುದ್ರದಲ್ಲಿರುವ ನೀರನ್ನು ಎಡಕ್ಕೆ ಮತ್ತು ಬಲಕ್ಕೆ ನೂಕುವಂತೆ ಮಾಡಿದನು, ಹಾಗೆ ಮಾಡಿದಾಗ ಸಮುದ್ರದಲ್ಲಿ ಮಾರ್ಗವುಂಟಾಯಿತ್ತು.
![OBS Image](https://cdn.door43.org/obs/jpg/360px/obs-en-12-08.jpg)
ಇಸ್ರಾಯೇಲ್ಯರು ಸಮುದ್ರದ ಮಧ್ಯೆ ಒಣನೆಲದಲ್ಲಿ ನಡೆದುಹೋದರು ಅವರ ಎರಡೂ ಬದಿಗಳಲ್ಲಿ ನೀರು ಗೋಡೆಯಂತೆ ಇತ್ತು.
![OBS Image](https://cdn.door43.org/obs/jpg/360px/obs-en-12-09.jpg)
ಇಸ್ರಾಯೇಲ್ಯರು ತಪ್ಪಿಸಿಕೊಂಡು ಹೋಗುವುದನ್ನು ಈಜಿಪ್ಟಿನವರು ನೋಡುವಂತೆ ದೇವರು ಮೇಘವನ್ನು ದಾರಿಯಿಂದ ಮೇಲಕ್ಕೆ ತೆಗೆದುಬಿಟ್ಟನು. ಈಜಿಪ್ಟಿನವರು ಅವರನ್ನು ಬೆನ್ನಟ್ಟಲು ನಿರ್ಧರಿಸಿದರು.
![OBS Image](https://cdn.door43.org/obs/jpg/360px/obs-en-12-10.jpg)
ಅವರು ಇಸ್ರಾಯೇಲ್ಯರನ್ನು ಸಮುದ್ರದ ಮಾರ್ಗವಾಗಿ ಬೆನ್ನಟ್ಟಿದರು, ಆದರೆ ದೇವರು ಈಜಿಪ್ಟಿನವರು ದಿಗಿಲುಪಡುವಂತೆ ಮಾಡಿದನು ಮತ್ತು ಅವರ ರಥಗಳು ಸಿಕ್ಕಿಕೊಳ್ಳುವಂತೆ ಮಾಡಿದನು. ಅವರು "ಓಡಿಹೋಗಿರಿ! ದೇವರು ಇಸ್ರಾಯೇಲ್ಯರಿಗಾಗಿ ಯುದ್ಧಮಾಡುತ್ತಿದ್ದಾನೆ" ಎಂದು ಕೂಗಿದರು.
![OBS Image](https://cdn.door43.org/obs/jpg/360px/obs-en-12-11.jpg)
ಇಸ್ರಾಯೇಲ್ಯರು ಸಮುದ್ರದ ಇನ್ನೊಂದು ಕಡೆಗೆ ಬಂದರು. ಆಗ ನೀರಿನ ಮೇಲೆ ತನ್ನ ಕೈಯನ್ನು ಮತ್ತೊಮ್ಮೆ ಚಾಚಬೇಕೆಂದು ಎಂದು ದೇವರು ಮೋಶೆಗೆ ಹೇಳಿದನು. ಮೋಶೆ ಅದನ್ನು ಮಾಡಿದಾಗ, ಈಜಿಪ್ಟ್ ಸೈನ್ಯದ ಮೇಲೆ ನೀರು ಅವರನ್ನು ಆವರಿಸಿಕೊಂಡು ನಂತರ ಅದರ ಸಾಮಾನ್ಯ ಸ್ಥಿತಿಗೆ ಮರಳಿತು. ಆಗ ಇಡೀ ಈಜಿಪ್ಟಿನ ಸೈನ್ಯವು ಮುಳುಗಿಹೋಯಿತು.
![OBS Image](https://cdn.door43.org/obs/jpg/360px/obs-en-12-12.jpg)
ಈಜಿಪ್ಟಿನವರು ಸತ್ತುಹೋದ್ದದನ್ನು ಇಸ್ರಾಯೇಲ್ಯರು ನೋಡಿದಾಗ, ಅವರು ದೇವರನ್ನು ನಂಬಿದರು . ಅದು ಮಾತ್ರವಲ್ಲ ಮೋಶೆಯು ದೇವರ ಪ್ರವಾದಿ ಎಂದು ಸಹ ಅವರು . ನಂಬಿದರು.
![OBS Image](https://cdn.door43.org/obs/jpg/360px/obs-en-12-13.jpg)
ದೇವರು ಅವರನ್ನು ಮರಣದಿಂದಲೂ ಮತ್ತು ಗುಲಾಮಗಿರಿಯಿಂದಲೂ ರಕ್ಷಿಸಿದ ಕಾರಣ ಇಸ್ರಾಯೇಲ್ಯರು ಬಹಳವಾಗಿ ಸಂತೋಷಪಟ್ಟರು . ಈಗ ಅವರು ದೇವರನ್ನು ಆರಾಧಿಸಲು ಮತ್ತು ಆತನಿಗೆ ವಿಧೇಯರಾಗಿರಲು ಸ್ವತಂತ್ರರಾಗಿದ್ದರು. ಆತನು ಅವರನ್ನು ಈಜಿಪ್ಟಿನ ಸೈನ್ಯದಿಂದ ಕಾಪಾಡಿದ್ದರಿಂದ. ಇಸ್ರಾಯೇಲ್ಯರು ತಮ್ಮ ಸ್ವಾತಂತ್ರ್ಯವನ್ನು ಸಂಭ್ರಮಿಸಲು ಮತ್ತು ದೇವರನ್ನು ಸ್ತುತಿಸಲು ಅನೇಕ ಹಾಡುಗಳನ್ನು ಹಾಡಿದರು ಏಕೆಂದರೆ
![OBS Image](https://cdn.door43.org/obs/jpg/360px/obs-en-12-14.jpg)
ದೇವರು ಈಜಿಪ್ಟಿನವರನ್ನು ಹೇಗೆ ಸೋಲಿಸಿದನೆಂಬುದನ್ನು ಮತ್ತು ಗುಲಾಮತನದಿಂದ ಅವರನ್ನು ಹೇಗೆ ಬಿಡುಗಡೆ ಮಾಡಿದನೆಂಬುದನ್ನು ನೆನಪಿಸಿಕೊಳ್ಳಲು ಪ್ರತಿ ವರ್ಷವು ಹಬ್ಬವನ್ನು ಆಚರಿಸಬೇಕೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದನು. ಈ ಹಬ್ಬವನ್ನು ಪಸ್ಕ ಹಬ್ಬ ಎಂದು ಕರೆಯುತ್ತಾರೆ. ಅದರಲ್ಲಿ, ಅವರು ಆರೋಗ್ಯಕರವಾದ ಕುರಿಮರಿಯನ್ನು ವಧಿಸಿ, ಅದನ್ನು ಸುಟ್ಟು, ಹುಳಿಯಿಲ್ಲದೆ ಮಾಡಿದ ರೊಟ್ಟಿಯೊಂದಿಗೆ ಅದನ್ನು ತಿನ್ನುವ ಮೂಲಕ ಆಚರಿಸಬೇಕಾಗಿತು.
_ಸತ್ಯವೇದದ ಕಥೆ: ವಿಮೋಚನಕಾಂಡ 12:33-15:21_

64
content/13.md Normal file
View File

@ -0,0 +1,64 @@
# 13. ಇಸ್ರಾಯೇಲರೊಂದಿಗಿನ ದೇವರ ಒಡಂಬಡಿಕೆ
![OBS Image](https://cdn.door43.org/obs/jpg/360px/obs-en-13-01.jpg)
ದೇವರು ಇಸ್ರಾಯೇಲ್ಯರನ್ನು ಕೆಂಪು ಸಮುದ್ರದ ಮೂಲಕ ಕರೆದುಕೊಂಡು ಹೋದ ನಂತರ, ಆತನು ಅವರನ್ನು ಸೀನಾಯಿ ಎಂಬ ಬೆಟ್ಟಕ್ಕೆ ಅರಣ್ಯದ ಮೂಲಕ ಕರೆದೊಯ್ದನು. ಇದು ಮೋಶೆಯು ಉರಿಯುವ ಪೊದೆಯನ್ನು ನೋಡಿದಂಥ ಅದೇ ಬೆಟ್ಟವಾಗಿತ್ತು. ಜನರು ಬೆಟ್ಟದ ಅಡಿಯಲ್ಲಿ ತಮ್ಮ ಡೇರೆಗಳನ್ನು ಹಾಕಿಕೊಂಡರು.
![OBS Image](https://cdn.door43.org/obs/jpg/360px/obs-en-13-02.jpg)
ದೇವರು ಮೋಶೆಗೂ ಮತ್ತು ಇಸ್ರಾಯೇಲರೆಲ್ಲರಿಗೂ, "ನೀನು ಯಾವಾಗಲೂ ನನಗೆ ವಿಧೇಯರಾಗಿರಬೇಕು ಮತ್ತು ನಾನು ನಿಮ್ಮೊಂದಿಗೆ ಮಾಡಿಕೊಳ್ಳುವ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಹೀಗೆ ಮಾಡಿದರೆ, ನೀವು ನನ್ನ ಸ್ವಕೀಯ ಜನವು, ಯಾಜಕರಾಜ್ಯವೂ ಮತ್ತು ಪರಿಶುದ್ದ ಜನವೂ ಆಗಿರುವಿರಿ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-13-03.jpg)
ದೇವರು ಅವರ ಬಳಿಗೆ ಬರುವುದಕ್ಕಾಗುವಂತೆ ಜನರು ಮೂರು ದಿವಸಗಳ ಕಾಲ ತಮ್ಮನ್ನೇ ಸಿದ್ಧಪಡಿಸಿಕೊಂಡರು. ಆಗ ದೇವರು ಸೀನಾಯಿ ಬೆಟ್ಟದ ಮೇಲಕ್ಕೆ ಇಳಿದುಬಂದನು. ಆತನು ಇಳಿದುಬಂದಾಗ, ಗುಡುಗು, ಮಿಂಚು, ಹೊಗೆ ಮತ್ತು ತುತ್ತೂರಿಗಳ ಜೋರಾದ ಶಬ್ದಗಳು ಇದ್ದವು. ಆಗ ಮೋಶೆಯು ಬೆಟ್ಟದ ಮೇಲಕ್ಕೆ ಹತ್ತಿಹೋದನು.
![OBS Image](https://cdn.door43.org/obs/jpg/360px/obs-en-13-04.jpg)
ಆಗ ದೇವರು ಜನರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡನು. ಆತನು ಅವರಿಗೆ ಹೇಳಿದ್ದೇನಂದರೆ, "ನಾನು ನಿಮ್ಮ ದೇವರಾದ ಯೆಹೋವನು, ನಿಮ್ಮನ್ನು ಐಗುಪ್ತದ ಗುಲಾಮತನದಿಂದ ಬಿಡಿಸಿದವನು ನಾನೇ. ನೀವು ಬೇರೆ ಯಾವ ದೇವರನ್ನು ಆರಾಧಿಸಬಾರದು."
![OBS Image](https://cdn.door43.org/obs/jpg/360px/obs-en-13-05.jpg)
"ವಿಗ್ರಹಗಳನ್ನು ಮಾಡಿಕೊಳ್ಳಬಾರದು ಮತ್ತು ಅವುಗಳನ್ನು ಪೂಜಿಸಬಾರದು, ಏಕೆಂದರೆ ಯೆಹೋವನಾದ ನಾನು ಮಾತ್ರವೇ ನಿಮ್ಮ ಏಕೈಕ ದೇವರಾಗಿರಬೇಕು, ನನ್ನ ಹೆಸರನ್ನು ಅಯೋಗ್ಯವಾಗಿ ಬಳಸಬಾರದು, ಸಬ್ಬತ್ ದಿನವನ್ನು ಪರಿಶುದ್ಧ ದಿನವೆಂದು ಆಚರಿಸಬೇಕು. ಬೇರೊಂದು ರೀತಿಯಲ್ಲಿ ಹೇಳುವುದಾದರೆ, ಆರು ದಿನಗಳಲ್ಲಿ ನಿಮ್ಮ ಎಲ್ಲಾ ಕೆಲಸಗಳನ್ನು ಮಾಡಿಕೊಳ್ಳಬೇಕು, ಏಳನೆಯ ದಿನವು ನಿಮಗೆ ವಿಶ್ರಾಂತಿಯ ಮತ್ತು ನನ್ನ ಸ್ಮರಣೆಯ ದಿನವಾಗಿರಬೇಕು."
![OBS Image](https://cdn.door43.org/obs/jpg/360px/obs-en-13-06.jpg)
“ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ನರಹತ್ಯಮಾಡಬಾರದು. ವ್ಯಭಿಚಾರಮಾಡಬಾರದು. ಕದಿಯಬಾರದು. ಮತ್ತೊಬ್ಬನ ಮೇಲೆ ಸುಳ್ಳುಸಾಕ್ಷಿಹೇಳಬಾರದು. ನಿನ್ನ ನೆರೆಯವನ ಹೆಂಡತಿಯನ್ನು, ಅವನ ಮನೆಯನ್ನು ಅಥವಾ ಅವನಿಗೆ ಸಂಬಂಧಿಸಿರುವಂಥವುಗಳನ್ನು ಆಶಿಸಬಾರದು” ಎಂದು ತಿಳಿಸಿದನು.
![OBS Image](https://cdn.door43.org/obs/jpg/360px/obs-en-13-07.jpg)
ನಂತರ ದೇವರು ಈ ದಶಾಜ್ಞೆಗಳನ್ನು ಎರಡು ಕಲ್ಲಿನ ಹಲಗೆಗಳಲ್ಲಿ ಬರೆದು ಮೋಶೆಗೆ ಕೊಟ್ಟನು. ಜನರು ಅನುಸರಿಸಬೇಕಾದಂಥ ಇತರ ಅನೇಕ ನಿಯಮಗಳನ್ನು ಮತ್ತು ಕಟ್ಟಳೆಗಳನ್ನು ಸಹ ದೇವರು ಅವರಿಗೆ ಕೊಟ್ಟನು. ಜನರು ಈ ನಿಯಮಗಳಿಗೆ ವಿಧೇಯರಾದರೆ, ಅವರನ್ನು ಆಶೀರ್ವದಿಸುವೆನು ಮತ್ತು ಸಂರಕ್ಷಿಸುವೆನು ಎಂದು ದೇವರು ವಾಗ್ದಾನ ಮಾಡಿದನು. ಆದರೆ ಅವರು ಅವುಗಳಿಗೆ ಅವಿಧೇಯರಾದರೆ ಅವರನ್ನು ಶಿಕ್ಷಿಸುವೆನು ಎಂದು ಆತನು ಹೇಳಿದನು.
![OBS Image](https://cdn.door43.org/obs/jpg/360px/obs-en-13-08.jpg)
ಅವರು ಒಂದು ದೊಡ್ಡ ಗುಡಾರವನ್ನು ಅಂದರೆ ದೇವದರ್ಶನದ ಗುಡಾರವನ್ನು ಸಹ ಮಾಡಬೇಕೆಂದು ದೇವರು ಇಸ್ರಾಯೇಲ್ಯರಿಗೆ ಹೇಳಿದನು. ಈ ಗುಡಾರವನ್ನು ಹೇಗೆ ಮಾಡಬೇಕೆಂದು ಮತ್ತು ಅದರಲ್ಲಿ ಯಾವ ಯಾವ ವಸ್ತುಗಳನ್ನು ಇಡಬೇಕೆಂದು ಆತನು ನಿಖರವಾಗಿ ಅವರಿಗೆ ಹೇಳಿದನು. ಗುಡಾರವನ್ನು ಎರಡು ಕೋಣೆಗಳನ್ನಾಗಿ ಪ್ರತ್ಯೇಕಿಸುವುದಕ್ಕಾಗಿ ದೊಡ್ಡ ಪರದೆಯನ್ನು ಮಾಡಬೇಕೆಂದು ಆತನು ಅವರಿಗೆ ಹೇಳಿದನು. ದೇವರು ಪರದೆಯ ಹಿಂದಿರುವ ಕೋಣೆಯೊಳಗೆ ಬಂದು ಅಲ್ಲಿ ಇರುವನು. ದೇವರು ಇರುವಂಥ ಆ ಕೋಣೆಯೊಳಗೆ ಹೋಗಲು ಮಹಾಯಾಜಕನಿಗೆ ಮಾತ್ರವೇ ಅವಕಾಶ ನೀಡಲಾಗಿತು.
![OBS Image](https://cdn.door43.org/obs/jpg/360px/obs-en-13-09.jpg)
ದೇವದರ್ಶನ ಗುಡಾರದ ಮುಂದೆ ಜನರು ಯಜ್ಞವೇದಿಯನ್ನು ಸಹ ಮಾಡಬೇಕಾಗಿತ್ತು. ಯಾರಾದರೂ ದೇವರ ನಿಯಮಕ್ಕೆ ಅವಿಧೇಯನಾದರೆ ಅಂಥವನು ಆ ಯಜ್ಞವೇದಿಯ ಬಳಿಗೆ ಪ್ರಾಣಿಯನ್ನು ತರಬೇಕಾಗಿತ್ತು. ಯಾಜಕನು ಅದನ್ನು ಕೊಂದು ಯಜ್ಞವೇದಿಯ ಮೇಲಿಟ್ಟು ಅದನ್ನು ದೇವರಿಗೆ ಯಜ್ಞವಾಗಿ ಸಮರ್ಪಿಸುವನು. ಪ್ರಾಣಿಗಳ ರಕ್ತವು ಆ ವ್ಯಕ್ತಿಯ ಪಾಪವನ್ನು ಮರೆಮಾಡುತ್ತದೆ ಎಂದು ದೇವರು ಹೇಳಿದನು. ಈ ರೀತಿಯಾಗಿ, ದೇವರು ಆ ಪಾಪವನ್ನು ಇನ್ನೂ ಮುಂದೆ ನೋಡುತ್ತಿದ್ದಿಲ್ಲ. ಆ ವ್ಯಕ್ತಿಯು ದೇವರ ದೃಷ್ಟಿಯಲ್ಲಿ "ಶುದ್ಧನಾಗುವನು". ದೇವರು ಮೋಶೆಯ ಸಹೋದರನಾದ ಆರೋನನನ್ನು ಮತ್ತು ಆರೋನನ ಸಂತತಿಯವರನ್ನು ತನ್ನ ಯಾಜಕರನ್ನಾಗಿ ಆರಿಸಿಕೊಂಡನು.
![OBS Image](https://cdn.door43.org/obs/jpg/360px/obs-en-13-10.jpg)
ದೇವರು ಅವರಿಗೆ ಕೊಟ್ಟಿರುವ ನಿಯಮಗಳನ್ನು ಅನುಸರಿಸುವೆವು ಎಂದು ಜನರು ಒಪ್ಪಿಕೊಂಡರು. ಅವರು ದೇವರಿಗೆ ಮಾತ್ರವೇ ಸೇರಿದವರಾಗಿದ್ದು ಆತನನ್ನು ಮಾತ್ರವೇ ಆರಾಧಿಸಲು ಒಪ್ಪಿಕೊಂಡರು.
![OBS Image](https://cdn.door43.org/obs/jpg/360px/obs-en-13-11.jpg)
ಮೋಶೆಯು ಸೀನಾಯಿ ಬೆಟ್ಟದ ಮೇಲೆ ಬಹಳ ದಿನಗಳವರೆಗೂ ಇದ್ದನು. ಅವನು ದೇವರೊಂದಿಗೆ ಮಾತನಾಡುತ್ತಿದ್ದನು. ಆದರೆ ಜನರು ಅವನು ತಮ್ಮ ಬಳಿಗೆ ಹಿಂದಿರುಗಿ ಬರುವುದನ್ನು ಕಾಯುತ್ತಾ ಬೇಸತ್ತುಹೋದರು. ಆದ್ದರಿಂದ ಅವರು ಆರೋನನ ಬಳಿಗೆ ಬಂಗಾರವನ್ನು ತೆಗೆದುಕೊಂಡು ಬಂದು, ಅವರು ದೇವರಿಗೆ ಬದಲಾಗಿ ಆರಾಧಿಸುವುದಕ್ಕಾಗುವಂತೆ ಒಂದು ವಿಗ್ರಹವನ್ನು ಮಾಡಿಕೊಡಬೇಕೆಂದು ಅವನನ್ನು ಕೇಳಿಕೊಂಡರು. ಅವರು ಈ ರೀತಿಯಾಗಿ ದೇವರಿಗೆ ವಿರುದ್ಧವಾಗಿ ಘೋರವಾದ ಪಾಪ ಮಾಡಿದರು.
![OBS Image](https://cdn.door43.org/obs/jpg/360px/obs-en-13-12.jpg)
ಆರೋನನು ಹೋರಿಕರುವಿನ ಆಕಾರದಲ್ಲಿ ಬಂಗಾರದ ವಿಗ್ರಹವನ್ನು ಮಾಡಿದನು. ಜನರು ಹುಚ್ಚುಹುಚ್ಚಾಗಿ ವಿಗ್ರಹವನ್ನು ಪೂಜಿಸಲು ಮತ್ತು ಅದಕ್ಕೆ ಯಜ್ಞವನ್ನರ್ಪಿಸಲು ಆರಂಭಿಸಿದರು! ಅವರ ಪಾಪದ ನಿಮಿತ್ತ ದೇವರು ಅವರ ಮೇಲೆ ಬಹಳ ಕೋಪಗೊಂಡನು. ಆತನು ಅವರನ್ನು ನಾಶಮಾಡಬೇಕೆಂದು ಬಯಸಿದ್ದನು. ಆದರೆ ಅವರನ್ನು ಸಾಯಿಸಬಾರದೆಂದು ಮೋಶೆಯು ದೇವರನ್ನು ಬೇಡಿಕೊಂಡನು. ದೇವರು ಅವನ ಪ್ರಾರ್ಥನೆಯನ್ನು ಕೇಳಿ ಅವರನ್ನು ನಾಶಮಾಡಲಿಲ್ಲ.
![OBS Image](https://cdn.door43.org/obs/jpg/360px/obs-en-13-13.jpg)
ಅಂತಿಮವಾಗಿ ಮೋಶೆಯು ಸೀನಾಯಿ ಬೆಟ್ಟದಿಂದ ಕೆಳಗಿಳಿದು ಬಂದನು. ದೇವರು ದಶಾಜ್ಞೆಗಳನ್ನು ಬರೆದುಕೊಟ್ಟಿದಂತಹ ಎರಡು ಕಲ್ಲಿನ ಹಲಗೆಗಳನ್ನು ಅವನು ತೆಗೆದುಕೊಂಡು ಬಂದನು. ನಂತರ ಅವನು ಆ ವಿಗ್ರಹವನ್ನು ನೋಡಿದನು. ಅವನು ಬಹು ಕೋಪಗೊಂಡು, ಆ ಹಲಗೆಗಳನ್ನು ಒಡೆದುಹಾಕಿದನು.
![OBS Image](https://cdn.door43.org/obs/jpg/360px/obs-en-13-14.jpg)
ಆಗ ಮೋಶೆಯು ಆ ವಿಗ್ರಹವನ್ನು ಪುಡಿ ಪುಡಿಯಾಗಿ ಮಾಡಿ , ಆ ಪುಡಿಯನ್ನು ನೀರಿನಲ್ಲಿ ಹಾಕಿದನು ಮತ್ತು ಜನರು ಆ ನೀರನ್ನು ಕುಡಿಯುವಂತೆ ಮಾಡಿದನು. ದೇವರು ಜನರ ಮೇಲೆ ಉಪದ್ರವವನ್ನು ಬರಮಾಡಿದನು ಮತ್ತು ಅವರಲ್ಲಿ ಅನೇಕರು ಸತ್ತುಹೋದರು.
![OBS Image](https://cdn.door43.org/obs/jpg/360px/obs-en-13-15.jpg)
ಮೋಶೆಯು ತಾನು ಒಡೆದುಹಾಕಿದವುಗಳಿಗೆ ಬದಲಾಗಿ ದಶಾಜ್ಞೆಗಳಿಗೋಸ್ಕರ ಕಲ್ಲಿನ ಹೊಸ ಹಲಗೆಗಳನ್ನು ಮಾಡಿದನು. ಅನಂತರ ಅವನು ಮತ್ತೊಮ್ಮೆ ಬೆಟ್ಟವನ್ನು ಹತ್ತಿಹೋಗಿ, ದೇವರು ಜನರನ್ನು ಕ್ಷಮಿಸಬೇಕೆಂದು ಪ್ರಾರ್ಥಿಸಿದನು. ದೇವರು ಮೋಶೆಯ ಪ್ರಾರ್ಥನೆಯನ್ನು ಕೇಳಿ ಅವರನ್ನು ಕ್ಷಮಿಸಿದನು. ದಶಾಜ್ಞೆಗಳಿದ್ದ ಹೊಸ ಹಲಗೆಗಳೊಂದಿಗೆ ಮೋಶೆಯು ಬೆಟ್ಟದಿಂದ ಇಳಿದು ಬಂದನು. ಅನಂತರ ದೇವರು ಇಸ್ರಾಯೇಲ್ಯರನ್ನು ಸೀನಾಯಿ ಬೆಟ್ಟದಿಂದ ವಾಗ್ದತ್ತ ದೇಶದ ಕಡೆಗೆ ನಡೆಸಿದನು.
_ಸತ್ಯವೇದದ ಕಥೆ: ವಿಮೋಚನಕಾಂಡ 19-34_

64
content/14.md Normal file
View File

@ -0,0 +1,64 @@
# 14. ಅರಣ್ಯದಲ್ಲಿ ಅಲೆದಾಟ
![OBS Image](https://cdn.door43.org/obs/jpg/360px/obs-en-14-01.jpg)
ಆತನು ಅವರೊಂದಿಗೆ ಒಡಂಬಡಿಕೆಯನ್ನು ಮಾಡಿಕೊಂಡಿದ್ದರಿಂದ ಇಸ್ರಾಯೇಲ್ಯರು ಅನುಸರಿಸಬೇಕಾದ ಎಲ್ಲಾ ನಿಯಮಗಳ ಬಗ್ಗೆ ದೇವರು ಅವರಿಗೆ ಹೇಳಿ ಮುಗಿಸಿದನು. ಅನಂತರ ಆತನು ಅವರನ್ನು ಸೀನಾಯಿ ಬೆಟ್ಟದಿಂದ ಬೇರೆಡೆಗೆ ನಡಿಸಿದನು. ಆತನು ಅವರನ್ನು ವಾಗ್ದತ್ತ ದೇಶಕ್ಕೆ ಕರೆದುಕೊಂಡು ಹೋಗಲು ಬಯಸಿದ್ದನು. ಈ ದೇಶವನ್ನು ಕಾನಾನ್ ಎಂದು ಸಹ ಕರೆಯಲಾಗುತ್ತದೆ. ದೇವರು ಮೇಘಸ್ತಂಭವಾಗಿ ಅವರ ಮುಂದೆ ಹೋದನು ಮತ್ತು ಅವರು ಆತನನ್ನು ಹಿಂಬಾಲಿಸಿದರು.
![OBS Image](https://cdn.door43.org/obs/jpg/360px/obs-en-14-02.jpg)
ವಾಗ್ದತ್ತ ದೇಶವನ್ನು ಅವರ ಸಂತತಿಯವರಿಗೆ ಕೊಡುವೆನೆಂದು ದೇವರು ಅಬ್ರಹಾಮ್, ಇಸಾಕ್ ಮತ್ತು ಯಾಕೋಬರಿಗೆ ವಾಗ್ದಾನ ಮಾಡಿದನು, ಆದರೆ ಈಗ ಅಲ್ಲಿ ಅನೇಕ ಜನಾಂಗಗಳು ವಾಸಿಸುತ್ತಿದ್ದವು. ಅವರನ್ನು ಕಾನಾನ್ಯರು ಎಂದು ಕರೆಯಲಾಗುತ್ತಿತ್ತು. ಕಾನಾನ್ಯರು ದೇವರನ್ನು ಆರಾಧಿಸುತ್ತಿರಲಿಲ್ಲ ಅಥವಾ ಅನುಸರಿಸುತ್ತಿರಲಿಲ್ಲ. ಅವರು ಮಿಥ್ಯ ದೇವರುಗಳನ್ನು ಪೂಜಿಸುತ್ತಿದ್ದರು ಮತ್ತು ಅನೇಕ ದುಷ್ಟ ಕೆಲಸಗಳನ್ನು ಮಾಡುತ್ತಿದ್ದರು.
![OBS Image](https://cdn.door43.org/obs/jpg/360px/obs-en-14-03.jpg)
ದೇವರು ಇಸ್ರಾಯೇಲ್ಯರಿಗೆ, "ನೀವು ವಾಗ್ದತ್ತ ದೇಶಕ್ಕೆ ಹೋದ ನಂತರ ಅಲ್ಲಿರುವ ಎಲ್ಲಾ ಕಾನಾನ್ಯರನ್ನು ನೀವು ಹೊರದೂಡಬೇಕು, ಅವರೊಂದಿಗೆ ಸಮಾಧಾನದ ಒಪ್ಪಂದವನ್ನು ಮಾಡಿಕೊಳ್ಳಬಾರದು ಮತ್ತು ಅವರನ್ನು ಮದುವೆಯಾಗಬಾರದು. ನೀವು ಅವರ ಎಲ್ಲಾ ವಿಗ್ರಹಗಳನ್ನು ಸಂಪೂರ್ಣವಾಗಿ ನಾಶಮಾಡಬೇಕು. ನೀವು ನನಗೆ ವಿಧೇಯರಾಗದಿದ್ದರೆ, ನನಗೆ ಬದಲಾಗಿ ನೀವು ಅವರ ವಿಗ್ರಹಗಳನ್ನು ಆರಾಧಿಸುವವರಾಗುವಿರಿ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-14-04.jpg)
ಇಸ್ರಾಯೇಲ್ಯರು ಕಾನಾನಿನ ಮೇರೆಯನ್ನು ತಲುಪಿದಾಗ, ಮೋಶೆಯು ಇಸ್ರಾಯೇಲರ ಒಂದೊಂದು ಕುಲದಿಂದ ಒಬ್ಬನಂತೆ ಹನ್ನೆರಡು ಜನರನ್ನು ಆರಿಸಿಕೊಂಡನು. ಆ ದೇಶಕ್ಕೆ ಹೋಗಿ ಅದು ಹೇಗಿದೆ ಎಂದು ಹೊಂಚಿ ನೋಡಿಕೊಂಡು ಬರಬೇಕೆಂದು ಅವನು ಆ ಮನುಷ್ಯರಿಗೆ ಆದೇಶ ನೀಡಿದ್ದನು. ಕಾನಾನ್ಯರು ಬಲಿಷ್ಠರೋ ಅಥವಾ ದುರ್ಬಲರೋ ಎಂದು ಕಂಡುಕೊಳ್ಳಲು ಅವರು ಕಾನಾನ್ಯರನ್ನು ಸಹ ಹೊಂಚಿ ನೋಡಬೇಕಾಗಿತ್ತು.
![OBS Image](https://cdn.door43.org/obs/jpg/360px/obs-en-14-05.jpg)
ಅವರಲ್ಲಿ ಹನ್ನೆರಡು ಮಂದಿ ಕಾನಾನ್ ದೇಶದ ಪರ್ಯಂತರ ನಲವತ್ತು ದಿನಗಳವರೆಗೆ ಪ್ರಯಾಣಿಸಿ, ಅನಂತರ ಅವರು ಹಿಂದಿರುಗಿ ಬಂದರು. ಅವರು ಜನರಿಗೆ, "ದೇಶವು ಬಹಳ ಫಲವತ್ತಾಗಿದೆ ಮತ್ತು ಬೆಳೆಗಳು ಸಮೃದ್ಧವಾಗಿವೆ!" ಎಂದು ಹೇಳಿದರು. ಆದರೆ ಹತ್ತು ಮಂದಿ ಗೂಢಚಾರರು, "ಪಟ್ಟಣಗಳು ಬಹಳ ಬಲವಾಗಿವೆ ಮತ್ತು ಅಲ್ಲಿನ ಜನರು ದೈತ್ಯರಾಗಿದ್ದಾರೆ! ನಾವು ಅವರ ಮೇಲೆ ದಾಳಿ ಮಾಡಿದರೆ, ಅವರು ನಮ್ಮನ್ನು ಸೋಲಿಸುವರು ಮತ್ತು ನಮ್ಮನ್ನು ಕೊಲ್ಲುವರು!" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-14-06.jpg)
ಇತರ ಇಬ್ಬರು ಗೂಢಚಾರರು ಅಂದರೆ ಕಾಲೇಬನು ಮತ್ತು ಯೆಹೋಶುವನು ತಕ್ಷಣವೇ, "ಕಾನಾನಿನ ಜನರು ಉನ್ನತರು ಮತ್ತು ಬಲಿಷ್ಠರು ಆಗಿದ್ದಾರೆ ನಿಜ, ಆದರೆ ನಾವು ಅವರನ್ನು ಖಂಡಿತವಾಗಿಯೂ ಸೋಲಿಸಬಹುದು! ದೇವರು ನಮಗಾಗಿ ಯುದ್ಧಮಾಡುವನು!" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-14-07.jpg)
ಆದರೆ ಜನರು ಕಾಲೇಬನಿಗೂ ಮತ್ತು ಯೆಹೋಶುವನಿಗೂ ಕಿವಿಗೊಡಲಿಲ್ಲ. ಅವರು ಮೋಶೆ ಆರೋನರ ಮೇಲೆ ಕೋಪಗೊಂಡು, "ನೀನು ಈ ಭಯಾನಕ ಸ್ಥಳಕ್ಕೆ ನಮ್ಮನ್ನು ಕರೆತಂದಿದ್ದೇಕೆ? ನಾವು ಈಜಿಪ್ಟಿನಲ್ಲಿಯೇ ಇರಬೇಕಾಗಿತ್ತು. ನಾವು ಆ ದೇಶಕ್ಕೆ ಹೋದರೆ ಯುದ್ಧದಲ್ಲಿ ನಾವು ಸಾಯುತ್ತೇವೆ ಮತ್ತು ಕಾನಾನ್ಯರು ನಮ್ಮ ಹೆಂಡತಿ ಮಕ್ಕಳನ್ನು ಗುಲಾಮರನ್ನಾಗಿ ಮಾಡಿಕೊಳ್ಳುತ್ತಾರೆ" ಎಂದು ಹೇಳಿದರು. ಜನರು ತಮ್ಮನ್ನು ಈಜಿಪ್ಟಿಗೆ ಹಿಂತಿರುಗಿ ಕರೆದುಕೊಂಡು ಹೋಗುವುದಕ್ಕಾಗಿ ಬೇರೊಬ್ಬ ನಾಯಕನನ್ನು ಆರಿಸಿಕೊಳ್ಳಲು ಬಯಸಿದರು.
![OBS Image](https://cdn.door43.org/obs/jpg/360px/obs-en-14-08.jpg)
ಜನರು ಇದನ್ನು ಹೇಳಿದಾಗ ದೇವರು ಬಹಳ ಕೋಪಗೊಂಡನು. ಆತನು ದೇವದರ್ಶನ ಗುಡಾರಕ್ಕೆ ಇಳಿದುಬಂದು "ನೀವು ನನಗೆ ವಿರುದ್ಧವಾಗಿ ತಿರುಗಿಬಿದ್ದಿದ್ದೀರಿ, ಆದ್ದರಿಂದ ನೀವೆಲ್ಲರೂ ಅರಣ್ಯದಲ್ಲಿ ಅಲೆದಾಡಬೇಕು. ಇಪ್ಪತ್ತು ವರುಷ ಮೊದಲುಗೊ೦ಡು ಹೆಚ್ಚಾದ ವಯಸ್ಸುಳ್ಳವರೆಲ್ಲರೂ ಸಾಯುವರು ಮತ್ತು ನಾನು ನಿಮಗೆ ಕೊಡುವ ದೇಶಕ್ಕೆ ನೀವ್ಯಾರು ಸೇರುವುದಿಲ್ಲ. ಯೆಹೋಶುವನು ಮತ್ತು ಕಾಲೇಬನು ಮಾತ್ರ ಆ ದೇಶಕ್ಕೆ ಸೇರುವರು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-14-09.jpg)
ದೇವರು ಹೀಗೆ ಹೇಳುವುದನ್ನು ಜನರು ಕೇಳಿದಾಗ, ತಾವು ಪಾಪಮಾಡಿದ್ದೇವೆ ಎಂದು ಅವರು ದುಃಖಪಟ್ಟರು. ಆದ್ದರಿಂದ ಅವರು ಕಾನಾನಿನ ಜನರ ಮೇಲೆ ದಾಳಿ ಮಾಡಲು ನಿರ್ಧರಿಸಿದರು. ದೇವರು ನಿಮ್ಮೊಂದಿಗೆ ಬರುವುದಿಲ್ಲ ಆದ್ದರಿಂದ ನೀವು ಹೋಗಬೇಡಿರಿ ಎಂದು ಮೋಶೆ ಅವರಿಗೆ ಎಚ್ಚರಿಕೆ ಕೊಟ್ಟರೂ ಅವರು ಅವನಿಗೆ ಕಿವಿಗೊಡಲಿಲ್ಲ.
![OBS Image](https://cdn.door43.org/obs/jpg/360px/obs-en-14-10.jpg)
ಈ ಯುದ್ಧದಲ್ಲಿ ದೇವರು ಅವರೊಂದಿಗೆ ಹೋಗಲಿಲ್ಲ, ಆದ್ದರಿಂದ ಕಾನಾನ್ಯರು ಅವರನ್ನು ಸೋಲಿಸಿ ಅವರಲ್ಲಿ ಅನೇಕರನ್ನು ಕೊಂದುಹಾಕಿದರು. ಆಗ ಇಸ್ರಾಯೇಲ್ಯರು ಕಾನಾನನಿಂದ ಹಿಂತಿರುಗಿ ಬಂದರು. ಮುಂದಿನ ನಲವತ್ತು ವರ್ಷಗಳ ಕಾಲ ಅವರು ಅರಣ್ಯದಲ್ಲಿ ಅಲೆದಾಡುತ್ತಿದ್ದರು.
![OBS Image](https://cdn.door43.org/obs/jpg/360px/obs-en-14-11.jpg)
ನಲವತ್ತು ವರ್ಷಗಳ ಕಾಲ ಇಸ್ರಾಯೇಲ್ ಜನರು ಅರಣ್ಯದಲ್ಲಿ ಅಲೆದಾಡಿದರು, ದೇವರು ಅವರ ಎಲ್ಲಾ ಅಗತ್ಯತೆಗಳನ್ನು ಒದಗಿಸಿಕೊಟ್ಟನು. "ಮನ್ನಾ" ಎಂದು ಕರೆಯಲ್ಪಡುವ ಆಹಾರವನ್ನು ಆತನು ಪರಲೋಕದಿಂದ ಅವರಿಗೆ ಕೊಟ್ಟನು. ಆತನು ಲಾವಕ್ಕಿಯ ಹಿಂಡುಗಳನ್ನು ಸಹ (ಅವು ಮಧ್ಯಮ ಗಾತ್ರದ ಪಕ್ಷಿಗಳು) ಅವರ ಪಾಳೆಯಕ್ಕೆ ಬರಮಾಡಿದನು, ಆದ್ದರಿಂದ ಅವರಿಗೆ ತಿನ್ನಲು ಮಾಂಸವು ದೊರಕಿತು. ಆ ಸಮಯದಲ್ಲೆಲ್ಲಾ, ದೇವರು ಅವರ ಬಟ್ಟೆಗಳು ಮತ್ತು ಕೆರಗಳು ಹರಿದುಹೋಗದಂತೆ ಕಾಪಾಡಿದನು.
![OBS Image](https://cdn.door43.org/obs/jpg/360px/obs-en-14-12.jpg)
ಅವರಿಗೆ ಕುಡಿಯುವದಕ್ಕಾಗಿ ನೀರನ್ನು ಬಂಡೆಯಿಂದ ದೇವರು ಅದ್ಭುತವಾದ ರೀತಿಯಲ್ಲಿ ಬರಮಾಡಿದನು. ಆದರೆ ಇವೆಲ್ಲವುಗಳ ಹೊರತಾಗಿಯೂ, ಇಸ್ರಾಯೇಲ್ ಜನರು ದೇವರಿಗೆ ಮತ್ತು ಮೋಶೆಗೆ ವಿರುದ್ಧವಾಗಿ ದೂರುಹೇಳುತ್ತಿದ್ದರು ಮತ್ತು ಗುಣಗುಟ್ಟುತ್ತಿದ್ದರು. ಹಾಗಿದ್ದರೂ, ಆದಾಗ್ಯೂ ದೇವರು ನಂಬಿಗಸ್ತನಾಗಿದ್ದನು. ದೇವರು ಅಬ್ರಹಾಮ್, ಇಸಾಕ್ ಮತ್ತು ಯಾಕೋಬರ ಸಂತತಿಯವರಿಗೆ ಮಾಡಿದ ವಾಗ್ದಾನಗಳನ್ನು ನೆರವೆರಿಸಿದನು.
![OBS Image](https://cdn.door43.org/obs/jpg/360px/obs-en-14-13.jpg)
ಜನರಿಗೆ ನೀರಿಲ್ಲದ ಇನ್ನೊಂದು ಸಮಯದಲ್ಲಿ ದೇವರು ಮೋಶೆಗೆ, "ಬಂಡೆಗೆ ನುಡಿ ಅದರೊಳಗಿಂದ ನೀರು ಬರುತ್ತದೆ" ಎಂದು ಹೇಳಿದನು. ಆದರೆ ಮೋಶೆಯು ಬಂಡೆಗೆ ನುಡಿಯಲಿಲ್ಲ. ಬದಲಾಗಿ, ಅವನು ಕೋಲಿನಿಂದ ಎರಡು ಬಾರಿ ಬಂಡೆಯನ್ನು ಹೊಡೆದನು. ಈ ರೀತಿಯಾಗಿ ಅವನು ದೇವರನ್ನು ಅವಮಾನಿಸಿದನು. ಎಲ್ಲರು ಕುಡಿಯುವುದಕ್ಕಾಗಿ ಬಂಡೆಯಿಂದ ನೀರು ಬಂತು, ಆದರೆ ದೇವರು ಮೋಶೆಯ ಮೇಲೆ ಕೋಪಗೊಂಡನು. ಆತನು, "ನೀನು ಹೀಗೆ ಮಾಡಿದ್ದರಿಂದ, ನೀನು ವಾಗ್ದತ್ತ ದೇಶವನ್ನು ಸೇರುವುದಿಲ್ಲ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-14-14.jpg)
ಇಸ್ರಾಯೇಲ್ಯರು ನಲವತ್ತು ವರ್ಷಗಳ ಕಾಲ ಅರಣ್ಯದಲ್ಲಿ ಅಲೆದಾಡಿದ ನಂತರ, ದೇವರಿಗೆ ವಿರೋಧವಾಗಿ ತಿರುಗಿಬಿದ್ದವರೆಲ್ಲರು ಸತ್ತುಹೋದರು. ಅನಂತರ ದೇವರು ಜನರನ್ನು ಮತ್ತೊಮ್ಮೆ ವಾಗ್ದತ್ತ ದೇಶದ ಅಂಚಿಗೆ ನಡೆಸಿದನು. ಮೋಶೆಯು ಬಹಳ ವೃದ್ಧನಾಗಿದ್ದರಿಂದ, ಜನರನ್ನು ನಡೆಸುವುದಕ್ಕೆ ಅವನಿಗೆ ಸಹಾಯ ಮಾಡುವುದಕ್ಕಾಗಿ ದೇವರು ಯೆಹೋಶುವನನ್ನು ಆರಿಸಿಕೊಂಡನು. ಒಂದು ದಿನ ಮೋಶೆಯಂತಹ ಇನ್ನೊಬ್ಬ ಪ್ರವಾದಿಯನ್ನು ಜನರ ಬಳಿಗೆ ಕಳುಹಿಸುವನೆಂದು ದೇವರು ಮೋಶೆಗೆ ವಾಗ್ದಾನ ಮಾಡಿದನು.
![OBS Image](https://cdn.door43.org/obs/jpg/360px/obs-en-14-15.jpg)
ಅವನು ವಾಗ್ದತ್ತ ದೇಶವನ್ನು ನೋಡಲಾಗುವಂತೆ ಬೆಟ್ಟದ ಮೇಲಕ್ಕೆ ಹೋಗಲು ದೇವರು ಮೋಶೆಗೆ ಹೇಳಿದನು. ಮೋಶೆಯು ವಾಗ್ದತ್ತ ದೇಶವನ್ನು ನೋಡಿದನು ಆದರೆ ದೇವರು ಅವನನ್ನು ಆ ದೇಶಕ್ಕೆ ಪ್ರವೇಶಿಸಲು ಅನುಮತಿಸಲಿಲ್ಲ. ಅನಂತರ ಮೋಶೆಯು ಸತ್ತನು ಮತ್ತು ಇಸ್ರಾಯೇಲ್ಯರು ಮೂವತ್ತು ದಿನಗಳ ಕಾಲ ಶೋಕಿಸಿದರು. ಯೆಹೋಶುವನು ಅವರ ಹೊಸ ನಾಯಕನಾದನು. ಯೆಹೋಶುವನು ದೇವರನ್ನು ನಂಬಿ ಮತ್ತು ಆತನಿಗೆ ವಿಧೇಯನಾಗಿದ್ದ ಕಾರಣ ಒಬ್ಬ ಒಳ್ಳೆಯ ನಾಯಕನಾಗಿ ಕಂಡು ಬಂದನು
_ಸತ್ಯವೇದದ ಕಥೆ: ವಿಮೋಚನಕಾಂಡ 16-17; ಅರಣ್ಯಕಾಂಡ 10-14; 20; 27; ಧರ್ಮೋಪದೇಶಕಾಂಡ 34_

56
content/15.md Normal file
View File

@ -0,0 +1,56 @@
# 15. ವಾಗ್ದತ್ತ ದೇಶ
![OBS Image](https://cdn.door43.org/obs/jpg/360px/obs-en-15-01.jpg)
ಕೊನೆಗೂ ಇಸ್ರಾಯೇಲ್ಯರು ವಾಗ್ದತ್ತ ದೇಶವಾದ ಕಾನಾನ್ ದೇಶವನ್ನು ಪ್ರವೇಶಿಸುವ ಸಮಯ ಬಂದಿತ್ತು. ಆ ದೇಶದಲ್ಲಿ ಯೆರಿಕೋ ಎಂಬ ಪಟ್ಟಣವಿತ್ತು. ಅದರ ಸುತ್ತಲೂ ಅದನ್ನು ಕಾಪಾಡುವಂಥ ಬಲವಾದ ಗೋಡೆಗಳನ್ನು ಅದಕ್ಕಿದ್ದವು. ಯೆಹೋಶುವನು ಇಬ್ಬರು ಗೂಢಚಾರರನ್ನು ಆ ಪಟ್ಟಣಕ್ಕೆ ಕಳುಹಿಸಿದನು. ಆ ಪಟ್ಟಣದಲ್ಲಿ ರಾಹಾಬ್ ಎಂಬ ವೇಶ್ಯೆಯೊಬ್ಬಳು ವಾಸಿಸುತ್ತಿದ್ದಳು. ಅವಳು ಈ ಗೂಢಚಾರರನ್ನು ಅಡಗಿಸಿಟ್ಟಳು, ಅನಂತರ ಅವರು ಪಟ್ಟಣದಿಂದ ತಪ್ಪಿಸಿಕೊಂಡು ಹೋಗುವಂತೆ ಸಹಾಯ ಮಾಡಿದಳು. ಅವಳು ದೇವರನ್ನು ನಂಬಿದ್ದರಿಂದ ಆಕೆ ಹೀಗೆ ಮಾಡಿದ್ದಳು. ಇಸ್ರಾಯೇಲ್ಯರು ಯೆರಿಕೋವನ್ನು ನಾಶಪಡಿಸುವಾಗ ರಾಹಾಬಳನ್ನು ಮತ್ತು ಅವಳ ಕುಟುಂಬವನ್ನು ಸಂರಕ್ಷಿಸುವುದಾಗಿ ಅವರು ಮಾತು ಕೊಟ್ಟರು.
![OBS Image](https://cdn.door43.org/obs/jpg/360px/obs-en-15-02.jpg)
ವಾಗ್ದತ್ತ ದೇಶವನ್ನು ಪ್ರವೇಶಿಸುವುದಕ್ಕಾಗಿ ಇಸ್ರಾಯೇಲ್ಯರು ಯೊರ್ದನ್ ನದಿಯನ್ನು ದಾಟಬೇಕಾಗಿತ್ತು. ದೇವರು ಯೆಹೋಶುವನಿಗೆ, "ಯಾಜಕರು ಮೊದಲು ಹೊರಡಬೇಕು" ಎಂದು ಹೇಳಿದನು. ಯಾಜಕರು ಯೊರ್ದನ್ ನದಿಗೆ ಕಾಲಿಡಲು ಪ್ರಾರಂಭಿಸಿದಾಗ, ಮೇಲಣಿಂದ ಹರಿದುಬರುತ್ತಿದ್ದ ನೀರು ನಿಂತುಹೋಯಿತು, ಆದ್ದರಿಂದ ಇಸ್ರಾಯೇಲ್ಯರು ಒಣ ನೆಲದ ಮೇಲೆ ನಡೆದು ನದಿಯ ಇನ್ನೊಂದು ಕಡೆಗೆ ದಾಟಿಹೋಗಲು ಸಾಧ್ಯವಾಯಿತು.
![OBS Image](https://cdn.door43.org/obs/jpg/360px/obs-en-15-03.jpg)
ಜನರು ಯೊರ್ದನ್ ನದಿಯನ್ನು ದಾಟಿದ ನಂತರ, ಯೆರಿಕೋ ಪಟ್ಟಣವು ಬಲಿಷ್ಠವಾಗಿದ್ದರೂ ಸಹ ಅದರ ಮೇಲೆ ಯುದ್ಧಮಾಡಲು ಸಿದ್ಧರಾಗಬೇಕೆಂದು ದೇವರು ಯೆಹೋಶುವನಿಗೆ ಹೇಳಿದನು. ಆರು ದಿನಗಳ ಕಾಲ ದಿನಕ್ಕೆ ಒಂದು ಬಾರಿ ಅವರ ಯಾಜಕರು ಮತ್ತು ಸೈನಿಕರು ಪಟ್ಟಣವನ್ನು ಸುತ್ತಬೇಕೆಂದು ದೇವರು ಜನರಿಗೆ ಹೇಳಿದನು. ಆದ್ದರಿಂದ ಯಾಜಕರು ಮತ್ತು ಸೈನಿಕರು ಅದನ್ನು ಮಾಡಿದರು.
![OBS Image](https://cdn.door43.org/obs/jpg/360px/obs-en-15-04.jpg)
ಏಳನೆಯ ದಿನದಲ್ಲಿ ಇಸ್ರಾಯೇಲ್ಯರು ಈ ಪಟ್ಟಣವನ್ನು ಏಳು ಬಾರಿ ಸುತ್ತಿದರು. ಏಳನೇ ಬಾರಿ ಅವರು ಪಟ್ಟಣವನ್ನು ಸುತ್ತಿ ಬಂದ ನಂತರ, ಯಾಜಕರು ತಮ್ಮ ತುತ್ತೂರಿಗಳನ್ನು ಊದಿದರು ಮತ್ತು ಸೈನಿಕರು ಆರ್ಭಟಿಸಿದರು.
![OBS Image](https://cdn.door43.org/obs/jpg/360px/obs-en-15-05.jpg)
ಆಗ ಯೆರಿಕೋವಿನ ಸುತ್ತಲಿದ್ದ ಗೋಡೆಗಳು ಬಿದ್ದುಹೋದವು! ದೇವರು ಆಜ್ಞಾಪಿಸಿದಂತೆಯೇ ಇಸ್ರಾಯೇಲ್ಯರು ಪಟ್ಟಣದಲ್ಲಿದ್ದ ಎಲ್ಲವನ್ನೂ ನಾಶಮಾಡಿದರು. ಅವರು ಇಸ್ರಾಯೇಲ್ಯರ ಭಾಗವಾಗಿ ಮಾರ್ಪಾಟ್ಟಂಥ ರಾಹಾಬಳನ್ನು ಮತ್ತು ಅವಳ ಕುಟುಂಬವನ್ನು ಮಾತ್ರ ಉಳಿಸಿ ಕಾಪಾಡಿದರು. ಇಸ್ರಾಯೇಲ್ಯರು ಯೆರಿಕೋವನ್ನು ನಾಶಮಾಡಿದ್ದಾರೆಂದು ಕಾನಾನಿನಲ್ಲಿ ವಾಸಿಸುತ್ತಿದ್ದ ಇತರ ಜನರು ಕೇಳಿದಾಗ, ಇಸ್ರಾಯೇಲ್ಯರು ತಮ್ಮ ಮೇಲೆಯೂ ಸಹ ಯುದ್ಧಮಾಡಬಹುದೆಂದು ಅವರು ಹೆದರಿದರು.
![OBS Image](https://cdn.door43.org/obs/jpg/360px/obs-en-15-06.jpg)
ಕಾನಾನಿನಲ್ಲಿರುವ ಯಾವುದೇ ಜನಾಂಗಗಳೊಂದಿಗೆ ಸಮಾಧಾನದ ಒಪ್ಪಂದವನ್ನು ಮಾಡಿಕೊಳ್ಳಬಾರದೆಂದು ದೇವರು ಇಸ್ರಾಯೇಲ್ಯರಿಗೆ ಆಜ್ಞಾಪಿಸಿದ್ದನು. ಆದರೆ ಕಾನಾನ್ಯರ ಜನಾಂಗಗಳಲ್ಲಿ ಒಂದಾದ ಗಿಬ್ಯೋನ್ಯರು ಎಂದು ಕರೆಯಲ್ಪಡುವ ಜನಾಂಗವು ಯೆಹೋಶುವನಿಗೆ ತಾವು ಕಾನಾನಿನಿಂದ ದೂರದಲ್ಲಿರುವ ಸ್ಥಳದಿಂದ ಬಂದವರು ಎಂದು ಸುಳ್ಳು ಹೇಳಿದರು. ಅವರು ತಮ್ಮೊಂದಿಗೆ ಸಮಾಧಾನದ ಒಪ್ಪಂದವನ್ನು ಮಾಡಿಕೊಳ್ಳಬೇಕೆಂದು ಯೆಹೋಶುವನನ್ನು ಕೇಳಿಕೊಂಡರು. ಯೆಹೋಶುವನು ಮತ್ತು ಇಸ್ರಾಯೇಲ್ಯರ ಇತರ ನಾಯಕರು ತಾವು ಏನು ಮಾಡಬೇಕೆಂದು ದೇವರನ್ನು ವಿಚಾರಿಸಲಿಲ್ಲ. ಬದಲಾಗಿ ಅವರು ಗಿಬ್ಯೋನ್ಯರೊಂದಿಗೆ ಸಮಾಧಾನದ ಒಪ್ಪಂದವನ್ನು ಮಾಡಿಕೊಂಡರು.
![OBS Image](https://cdn.door43.org/obs/jpg/360px/obs-en-15-07.jpg)
ಮೂರು ದಿನಗಳ ನಂತರ, ಗಿಬ್ಯೋನ್ಯರು ನಿಜವಾಗಿಯೂ ಕಾನಾನಿನಲ್ಲಿ ವಾಸಿಸುತ್ತಿದ್ದಾರೆಂದು ಇಸ್ರಾಯೇಲ್ಯರು ಕಂಡುಕೊಂಡರು. ಗಿಬ್ಯೋನ್ಯರು ಅವರನ್ನು ಮೋಸಗೊಳಿಸಿದ್ದರಿಂದ ಅವರು ಕೋಪಗೊಂಡಿದ್ದರು. ಆದರೆ ಅವರು ಅವರೊಂದಿಗೆ ಮಾಡಿಕೊಂಡ ಸಮಾಧಾನದ ಒಪ್ಪಂದವನ್ನು ಪಾಲಿಸಿದ್ದರು ಏಕೆಂದರೆ ಅವರು ದೇವರ ಮುಂದೆ ಮಾತು ಕೊಟ್ಟಿದ್ದರು. ಸ್ವಲ್ಪ ಕಾಲವಾದ ನಂತರ, ಗಿಬ್ಯೋನ್ಯರು ಇಸ್ರಾಯೇಲ್ಯರೊಂದಿಗೆ ಸಮಾಧಾನ ಒಪ್ಪಂದವನ್ನು ಮಾಡಿಕೊಂಡಿದ್ದಾರೆ ಎಂದು ಕಾನಾನಿನಲ್ಲಿರುವ ಅಮೋರಿಯರೆಂಬ ಬೇರೊಂದು ಜನಾಂಗದ ರಾಜರು ಕೇಳಿಸಿಕೊಂಡರು, ಅದರ ನಿಮಿತ್ತವಾಗಿ ಅವರು ತಮ್ಮ ಸೈನ್ಯವನ್ನು ಒಂದು ದೊಡ್ಡ ಸೈನ್ಯವಾಗಿ ಒಟ್ಟುಗೂಡಿಸಿ ಗಿಬ್ಯೋನಿಗೆ ಮುತ್ತಿಗೆಹಾಕಿ ಯುದ್ಧಮಾಡಿದರು. ಗಿಬ್ಯೋನ್ಯರು ಬಂದು ಸಹಾಯ ಮಾಡಬೇಕೆಂಬ ಸಂದೇಶವನ್ನು ಯೆಹೋಶುವನಿಗೆ ಕಳುಹಿಸಿದರು.
![OBS Image](https://cdn.door43.org/obs/jpg/360px/obs-en-15-08.jpg)
ಆದ್ದರಿಂದ ಯೆಹೋಶುವನು ಇಸ್ರಾಯೇಲ್ಯರ ಸೈನ್ಯವನ್ನು ಒಟ್ಟುಗೂಡಿಸಿದನು ಮತ್ತು ಅವರು ಗಿಬ್ಯೋನ್ಯರ ಬಳಿಗೆ ಹೋಗಲು ರಾತ್ರಿಯೆಲ್ಲಾ ಪ್ರಯಾಣಮಾಡಿದರು. ಮುಂಜಾನೆಯಲ್ಲಿ ಅವರು ಅಮೋರಿಯರ ಸೈನ್ಯವನ್ನು ಅಚ್ಚರಿಗೊಳಿಸಿ ಅವರ ಮೇಲೆ ಆಕ್ರಮಣ ಮಾಡಿದರು.
![OBS Image](https://cdn.door43.org/obs/jpg/360px/obs-en-15-09.jpg)
ಆ ದಿನದಲ್ಲಿ ದೇವರು ಇಸ್ರಾಯೇಲಿಗಾಗಿ ಯುದ್ಧಮಾಡಿದನು. ಆತನು ಅಮೋರಿಯರನ್ನು ಕಳವಳಗೊಳ್ಳಿಸಿದನು ಮತ್ತು ಆತನು ದೊಡ್ಡ ಆಲಿಕಲ್ಲಿನ ಮಳೆಯನ್ನು ಸುರಿಸಿ ಬಹಳ ಮಂದಿ ಅಮೋರಿಯರನ್ನು ಸಾಯಿಸಿದನು.
![OBS Image](https://cdn.door43.org/obs/jpg/360px/obs-en-15-10.jpg)
ಇಸ್ರಾಯೇಲ್ಯರು ಅಮೋರಿಯರನ್ನು ಸಂಪೂರ್ಣವಾಗಿ ಸೋಲಿಸಲು ಸಾಕದಷ್ಟು ಸಮಯ ದೊರಕುವಂತೆ ದೇವರು ಸೂರ್ಯನನ್ನು ಆಕಾಶದಲ್ಲಿ ಒಂದು ಕಡೆ ನಿಲ್ಲಿಸಿಬಿಟ್ಟನು. . ಆ ದಿನದಲ್ಲಿ ದೇವರು ಇಸ್ರಾಯೇಲ್ಯರಿಗೆ ಮಹಾ ಜಯವನ್ನುಂಟುಮಾಡಿದನು.
![OBS Image](https://cdn.door43.org/obs/jpg/360px/obs-en-15-11.jpg)
ದೇವರು ಆ ಸೈನ್ಯಗಳನ್ನು ಸೋಲಿಸಿದ ನಂತರ, ಕಾನಾನ್ಯರ ಇತರ ಜನಾಂಗಗಳು ಇಸ್ರಾಯೇಲ್ ಮೇಲೆ ಆಕ್ರಮಣ ಮಾಡಲು ಒಟ್ಟುಗೂಡಿದರು. ಯೆಹೋಶುವನು ಮತ್ತು ಇಸ್ರಾಯೇಲ್ಯರು ಅವರ ಮೇಲೆ ಯುದ್ಧಮಾಡಿ ಅವರನ್ನು ಸಂಹರಿಸಿಬಿಟ್ಟರು.
![OBS Image](https://cdn.door43.org/obs/jpg/360px/obs-en-15-12.jpg)
ಈ ಯುದ್ಧಗಳಾದ ನಂತರ, ದೇವರು ವಾಗ್ದತ್ತ ದೇಶದ ಒಂದೊಂದು ಭಾಗವನ್ನು ಇಸ್ರಾಯೇಲ್ಯರ ಪ್ರತಿಯೊಂದು ಕುಲಕ್ಕೆ ಸ್ವಂತವಾಗಿ ಕೊಟ್ಟನು. ಅನಂತರ ದೇವರು ಇಸ್ರಾಯೇಲ್ಯರಿಗೆ ಅದರ ಸುತ್ತಣ ಎಲ್ಲಾ ಮೇರೆಗಳಲ್ಲಿಯೂ ಸಮಾಧಾನವನ್ನು ಕೊಟ್ಟನು.
![OBS Image](https://cdn.door43.org/obs/jpg/360px/obs-en-15-13.jpg)
ಯೆಹೋಶುವನು ವೃದ್ಧನಾದಾಗ ಅವನು ಇಸ್ರಾಯೇಲ್ ಜನರೆಲ್ಲರನ್ನು ಒಟ್ಟಾಗಿ ಕರೆಯಿಸಿದನು. ದೇವರು ಸೀನಾಯಿ ಬೆಟ್ಟದಲ್ಲಿ ಇಸ್ರಾಯೇಲ್ಯರೊಂದಿಗೆ ಮಾಡಿಕೊಂಡ ಒಡಂಬಡಿಕೆಯನ್ನು ಅನುಸರಿಸುವೆವು ಎಂದು ಅವರು ಕೊಟ್ಟಂಥ ಮಾತು ಯೆಹೋಶುವನು ಜನರಿಗೆ ನೆನಪಿಸಿದನು. ಆಗ ಜನರು ತಾವು ದೇವರಿಗೆ ನಂಬಿಗಸ್ತರಾಗಿರುವೆವು ಮತ್ತು ಆತನ ನಿಯಮಗಳಿಗೆ ವಿಧೇಯರಾಗಿರುವೆವು ಎಂದು ಮಾತು ಕೊಟ್ಟರು.
_ಸತ್ಯವೇದದ ಕಥೆ: ಯೆಹೋಶುವ 1-24_

76
content/16.md Normal file
View File

@ -0,0 +1,76 @@
# 16. ವಿಮೋಚಕರು
![OBS Image](https://cdn.door43.org/obs/jpg/360px/obs-en-16-01.jpg)
ಯೆಹೋಶುವನು ಸತ್ತ ನಂತರ, ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾದರು. ಅವರು ದೇವರ ನಿಯಮಗಳಿಗೆ ವಿಧೇಯರಾಗಲಿಲ್ಲ, ಮತ್ತು ಅವರು ವಾಗ್ದತ್ತ ದೇಶದಿಂದ ಉಳಿದ ಕಾನಾನ್ಯರನ್ನು ಹೊರಡಿಸಿಬಿಡಲಿಲ್ಲ. ಇಸ್ರಾಯೇಲ್ಯರು ಸತ್ಯ ದೇವರಾದ ಯೆಹೋವನಿಗೆ ಬದಲಾಗಿ ಕಾನಾನ್ಯರ ದೇವರುಗಳನ್ನು ಆರಾಧಿಸಲು ಪ್ರಾರಂಭಿಸಿದರು. ಇಸ್ರಾಯೇಲರೊಳಗೆ ಅರಸನಿರಲಿಲ್ಲ, ಪ್ರತಿಯೊಬ್ಬನೂ ತನ್ನ ಮನಸ್ಸಿಗೆ ಬಂದಂತೆ ನಡೆಯುತ್ತಿದ್ದನು.
![OBS Image](https://cdn.door43.org/obs/jpg/360px/obs-en-16-02.jpg)
ಇಸ್ರಾಯೇಲ್ಯರು ದೇವರಿಗೆ ಅವಿಧೇಯರಾಗುವುದನ್ನು ರೂಢಿಮಾಡಿಕೊಂಡರು . ಅವರು ನಡೆದುಕೊಳ್ಳುತ್ತಿದ್ದ ರೀತಿ ಹೀಗಿದೆ: ಇಸ್ರಾಯೇಲ್ಯರು ಅನೇಕ ವರ್ಷಗಳ ಕಾಲ ದೇವರಿಗೆ ಅವಿಧೇಯರಾಗಿರುವರು, ಅನಂತರ ಅವರ ವೈರಿಗಳು ಅವರನ್ನು ಸೋಲಿಸುವಂತೆ ಮಾಡುವ ಮೂಲಕ ಅವರನ್ನು ಶಿಕ್ಷಿಸುವನು. ಈ ಶತ್ರುಗಳು ಇಸ್ರಾಯೇಲ್ಯರ ವಸ್ತುಗಳನ್ನು ಕೊಳ್ಳೆಹೊಡೆಯವರು, ಅವರ ಆಸ್ತಿಯನ್ನು ನಾಶಮಾಡುವರು, ಮತ್ತು ಅವರಲ್ಲಿ ಅನೇಕರನ್ನು ಕೊಲ್ಲುವರು. ಅನಂತರ ಇಸ್ರಾಯೇಲ್ಯರ ಶತ್ರುಗಳು ಅವರನ್ನು ಅನೇಕ ವರ್ಷಗಳವರೆಗೂ ಬಾಧಿಸುವರು, ಇಸ್ರಾಯೇಲ್ಯರು ತಮ್ಮ ಪಾಪಕ್ಕಾಗಿ ಪಶ್ಚಾತ್ತಾಪ ಪಡುತ್ತಾರೆ ಮತ್ತು ತಮ್ಮನ್ನು ಬಿಡಿಸಬೇಕೆಂದು ದೇವರನ್ನು ಬೇಡಿಕೊಳ್ಳುತ್ತಾರೆ. ಇದು ಇಸ್ರಾಯೇಲ್ಯರ್ ಜೀವನವಾಗಿತ್ತು.
![OBS Image](https://cdn.door43.org/obs/jpg/360px/obs-en-16-03.jpg)
ಪ್ರತಿ ಬಾರಿಯೂ ಇಸ್ರಾಯೇಲ್ಯರು ಪಶ್ಚಾತ್ತಾಪಪಡುವಾಗ, ದೇವರು ಅವರನ್ನು ಬಿಡಿಸುತ್ತಿದ್ದನು. ಅವರ ಶತ್ರುಗಳ ವಿರುದ್ಧವಾಗಿ ಹೋರಾಡಿ ಅವರನ್ನು ಸೋಲಿಸುವಂಥ ಒಬ್ಬ ವಿಮೋಚಕನನ್ನು ಒದಗಿಸುವ ಮೂಲಕ ಆತನು ಇದನ್ನು ಮಾಡುತ್ತಿದ್ದನು. ನಂತರ ದೇಶದಲ್ಲಿ ಸಮಾಧಾನವಿರುತ್ತಿತ್ತು ಮತ್ತು ವಿಮೋಚಕನು ಅವರನ್ನು ಉತ್ತಮವಾಗಿ ಆಳುತ್ತಿದ್ದನು. ಜನರನ್ನು ಬಿಡಿಸುವುದಕ್ಕಾಗಿ ದೇವರು ಅನೇಕ ವಿಮೋಚಕರನ್ನು ಕಳುಹಿಸಿದನು. ಇಸ್ರಾಯೇಲ್ಯರನ್ನು ಸೋಲಿಸಲು ಸಮೀಪದ ಶತ್ರುಗಳ ಜನಾಂಗವಾದ ಮಿದ್ಯಾನ್ಯರನ್ನು ಅನುಮತಿಸಿದ ಬಳಿಕವು ದೇವರು ಮತ್ತೊಮ್ಮೆ ಇದನ್ನು ಮಾಡಿದನು.
![OBS Image](https://cdn.door43.org/obs/jpg/360px/obs-en-16-04.jpg)
ಮಿದ್ಯಾನ್ಯರು ಇಸ್ರಾಯೇಲ್ಯರ ಎಲ್ಲಾ ಬೆಳೆಗಳನ್ನೂ ಏಳು ವರ್ಷಗಳ ಕಾಲ ತೆಗೆದುಕೊಂಡರು. ಇಸ್ರಾಯೇಲ್ಯರು ಬಹು ಭಯಭೀತರಾಗಿ ಗುಹೆಗಳಲ್ಲಿ ಅಡಗಿಕೊಂಡರು, ಆದ್ದರಿಂದ ಮಿದ್ಯಾನ್ಯರು ಅವರನ್ನು ಹುಡುಕಲಾಗಲಿಲ್ಲ. ಅಂತಿಮವಾಗಿ, ತಮ್ಮನ್ನು ರಕ್ಷಿಸಬೇಕೆಂದು ಅವರು ದೇವರಿಗೆ ಮೊರೆಯಿಟ್ಟರು.
![OBS Image](https://cdn.door43.org/obs/jpg/360px/obs-en-16-05.jpg)
ಗಿದ್ಯೋನ್ ಎಂಬ ಹೆಸರುಳ್ಳ ಒಬ್ಬಇಸ್ರಾಯೇಲ್ಯನಿದ್ದನು. ಒಂದು ದಿನ ಮಿದ್ಯಾನ್ಯರು ಬೆಳೆಯನ್ನು ಕದಿಯಬಾರದೆಂದು ಮರೆಯಾದ ಸ್ಥಳದಲ್ಲಿ ಧಾನ್ಯವನ್ನು ಸಂಗ್ರಹಿಸಿ ಒಕ್ಕುತಿದ್ದನು, ಯೆಹೋವನ ದೂತನು ಗಿದ್ಯೋನನ ಬಳಿಗೆ ಬಂದು, “ಪರಾಕ್ರಮಶಾಲಿಯೇ, ದೇವರು ನಿನ್ನ ಸಂಗಡ ಇದ್ದಾನೆ, ನೀನು ಹೋಗಿ ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ಬಿಡಿಸು” ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-16-06.jpg)
ಗಿದ್ಯೋನನ ತಂದೆ ಬಳಿ ವಿಗ್ರಹಕ್ಕೆ ಸಮರ್ಪಿತವಾದ ಯಜ್ಞವೇದಿಯಿತ್ತು. ಆ ಯಜ್ಞವೇದಿಯನ್ನು ಕೆಡವಿಹಾಕಬೇಕೆಂಬುದೇ ದೇವರು ಗಿದ್ಯೋನನಿಗೆ ಮೊದಲು ಮಾಡಬೇಕೆಂದು ಹೇಳಿದ ಕಾರ್ಯವಾಗಿತ್ತು. ಆದರೆ ಗಿದ್ಯೋನನು ಜನರಿಗೆ ಭಯಪಟ್ಟನು, ಆದ್ದರಿಂದ ಅವನು ರಾತ್ರಿಯಾಗುವವರೆಗೂ ಕಾಯುತ್ತಿದ್ದನು. ನಂತರ ಅವನು ಯಜ್ಞವೇದಿಯನ್ನು ಕೆಡವಿಹಾಕಿ ಅದನ್ನು ತುಂಡುತುಂಡುಗಳಾಗಿ ಒಡೆದುಹಾಕಿದನು. ಅವನು ಅದರ ಸಮೀಪದಲ್ಲಿಯೇ ದೇವರಿಗೆ ಹೊಸ ಯಜ್ಞವೇದಿಯನ್ನು ಕಟ್ಟಿ, ಅದರ ಮೇಲೆ ದೇವರಿಗೆ ಯಜ್ಞಮಾಡಿದನು.
![OBS Image](https://cdn.door43.org/obs/jpg/360px/obs-en-16-07.jpg)
ಮರುದಿನ ಬೆಳಿಗ್ಗೆ ಜನರು ಯಾರೋ ಯಜ್ಞವೇದಿಯನ್ನು ಕೆಡವಿಬಿಟ್ಟು ನಾಶಮಾಡಿರುವುದನ್ನು ನೋಡಿದರು ಮತ್ತು ಅವರು ಬಹಳಷ್ಟು ಕೋಪಗೊಂಡರು. ಅವರು ಗಿದ್ಯೋನನ್ನು ಕೊಲ್ಲಲು ಅವನ ಮನೆಗೆ ಹೋದರು, ಆದರೆ ಗಿದ್ಯೋನನ ತಂದೆಯ, "ನೀವು ನಿಮ್ಮ ದೇವರಿಗೆ ಸಹಾಯ ಮಾಡಲು ಯಾಕೆ ಪ್ರಯತ್ನಿಸುತ್ತಿದ್ದೀರಿ? ಅವನು ದೇವರಾಗಿದ್ದರೆ, ಅವನು ತನ್ನನ್ನು ತಾನೇ ರಕ್ಷಿಸಿಕೊಳ್ಳಲಿ!" ಎಂದು ಹೇಳಿದನು. ಅವನು ಹೀಗೆ ಹೇಳಿದ್ದರಿಂದ ಜನರು ಗಿದ್ಯೋನನ್ನು ಕೊಲ್ಲಲಿಲ್ಲ.
![OBS Image](https://cdn.door43.org/obs/jpg/360px/obs-en-16-08.jpg)
ಆಗ ಮಿದ್ಯಾನ್ಯರು ಇಸ್ರಾಯೇಲ್ಯರಿಂದ ಕದ್ದುಕೊಳ್ಳಲು ಮತ್ತೆ ಬಂದರು. ಅವರನ್ನು ಎಣಿಸಲಾಗದಷ್ಟು ಬಹಳ ಮಂದಿಯಿದ್ದರು. ಅವರೊಂದಿಗೆ ಯುದ್ಧಮಾಡಲು ಗಿದ್ಯೋನನು ಇಸ್ರಾಯೇಲ್ಯರನ್ನು ಒಟ್ಟಾಗಿ ಕರೆಯಿಸಿದನು. ದೇವರು ಇಸ್ರಾಯೇಲ್ಯರನ್ನು ರಕ್ಷಿಸಲು ತನಗೆ ನಿಜವಾಗಿ ಹೇಳುತ್ತಿದ್ದಾನೆ ಎಂದು ದೃಢಪಡಿಸಿಕೊಳ್ಳಲು ಗಿದ್ಯೋನನು ದೇವರ ಬಳಿ ಎರಡು ಗುರುತಗಳನ್ನು ಬೇಡಿಕೊಂಡನು.
![OBS Image](https://cdn.door43.org/obs/jpg/360px/obs-en-16-09.jpg)
ಮೊದಲನೆಯ ಗುರುತಿಗಾಗಿ, ಗಿದ್ಯೋನನು ನೆಲದ ಮೇಲೆ ಕುರಿಯ ತುಪ್ಪಟವನ್ನು ಇಟ್ಟು, ಮುಂಜಾನೆಯ ಮಂಜು ಅದರಲ್ಲಿ ಮಾತ್ರ ಬಿದ್ದಿರಬೇಕು ನೆಲದಲ್ಲಿ ಬೀಳಬಾರದು ಎಂದು ದೇವರನ್ನು ಬೇಡಿಕೊಂಡನು. ದೇವರು ಅದನ್ನು ಮಾಡಿದನು. ಮರುದಿನದ ರಾತ್ರಿ, ಅವನು ನೆಲವು ಮಾತ್ರ ತೇವವಾಗಿರಬೇಕು ಆದರೆ ಕುರಿಯ ತುಪ್ಪಟ ಒಣಗಿರಬೇಕು ಎಂದು ಬೇಡಿಕೊಂಡನು. ದೇವರು ಅದನ್ನು ಕೂಡಾ ಮಾಡಿದನು. ಈ ಎರಡು ಗುರುತಗಳ ನಿಮಿತ್ತವಾಗಿ, ಇಸ್ರಾಯೇಲ್ಯರನ್ನು ಮಿದ್ಯಾನ್ಯರಿಂದ ತಾನು ನಿಜವಾಗಿಯೂ ರಕ್ಷಿಸಬೇಕೆಂದು ದೇವರು ಬಯಸಿದನೆಂದು ಗಿದ್ಯೋನನು ನಂಬಿದ್ದನು.
![OBS Image](https://cdn.door43.org/obs/jpg/360px/obs-en-16-10.jpg)
ಆಗ ಗಿದ್ಯೋನನು ಸೈನಿಕರನ್ನು ತನ್ನ ಬಳಿಗೆ ಕರೆಯಿಸಿದನು, 32,000 ಮಂದಿ ಅವನ ಬಳಿಗೆ ಬಂದರು. ಆದರೆ ದೇವರು ಅವನಿಗೆ ಇವರು ತುಂಬಾ ಅಧಿಕವಾಗಿದ್ದಾರೆ ಎಂದು ಹೇಳಿದನು. ಆದ್ದರಿಂದ ಗಿದ್ಯೋನನು ಯುದ್ಧಮಾಡಲ ದೈರ್ಯವಿಲ್ಲದ 22,000 ಮಂದಿಯನ್ನು ಮನೆಗೆ ಕಳುಹಿಸಿದನು. ಅವನ ಬಳಿ ಇನ್ನೂ ತುಂಬಾ ಜನರಿದ್ದಾರೆಂದು ದೇವರು ಗಿದ್ಯೋನನಿಗೆ ಹೇಳಿದನು. ಆದ್ದರಿಂದ ಗಿದ್ಯೋನನು 300 ಸೈನಿಕರು ಹೊರತುಪಡಿಸಿ ಬೇರೆ ಎಲ್ಲರನ್ನೂ ಮನೆಗೆ ಕಳುಹಿಸಿದನು.
![OBS Image](https://cdn.door43.org/obs/jpg/360px/obs-en-16-11.jpg)
ಆ ರಾತ್ರಿಯಲ್ಲಿ ದೇವರು ಗಿದ್ಯೋನನಿಗೆ, "ಮಿದ್ಯಾನ್ಯರ ಪಾಳೆಯಕ್ಕೆ ಹೋಗಿ ಅವರ ಮಾತನ್ನು ಲಾಲಿಸು, ಅವರು ಏನು ಹೇಳುತ್ತಿದ್ದಾರೆಂಬುದನ್ನು ನೀವು ಲಾಲಿಸವಾಗ ನೀವು ಅವರ ಮೇಲೆ ಆಕ್ರಮಣ ಮಾಡಲು ಹೆದರುವುದಿಲ್ಲ" ಎಂದು ಹೇಳಿದನು. ಆ ರಾತ್ರಿಯಲ್ಲಿ, ಗಿದ್ಯೋನನು ಪಾಳೆಯಕ್ಕೆ ಹೋದನು ಮತ್ತು ಮಿದ್ಯಾನ್ಯರ ಸೈನಿಕನು ತನ್ನ ಸ್ನೇಹಿತನಿಗೆ ತಾನು ಕಂಡ ಕನಸಿನ ಬಗ್ಗೆ ಹೇಳುತ್ತಿರುವುದನ್ನು ಕೇಳಿಸಿಕೊಂಡನು. ಆ ಮನುಷ್ಯನ ಸ್ನೇಹಿತನು, "ಗಿದ್ಯೋನನ ಸೈನ್ಯವು ನಮ್ಮನ್ನು ಅಂದರೆ ಮಿದ್ಯಾನ್ಯರ ಸೈನ್ಯವನ್ನು ಸೋಲಿಸುತ್ತದೆ ಎಂಬುದೇ ಆ ಕನಸಿನ ಅರ್ಥವಾಗಿದೆ" ಎಂದು ಹೇಳಿದನು. ಗಿದ್ಯೋನನು ಇದನ್ನು ಕೇಳಿಸಿಕೊಂಡಾಗ ದೇವರನ್ನು ಆರಾಧಿಸಿದನು.
![OBS Image](https://cdn.door43.org/obs/jpg/360px/obs-en-16-12.jpg)
ಆಗ ಗಿದ್ಯೋನನು ತನ್ನ ಸೈನ್ಯದ ಬಳಿಗೆ ಹಿಂದಿರುಗಿ ಬಂದನು ಮತ್ತು ಅವರಲ್ಲಿ ಪ್ರತಿಯೊಬ್ಬನಿಗೂ ಕೊಂಬನ್ನು, ಮಣ್ಣಿನ ಮಡಕೆಯನ್ನು ಮತ್ತು ಉರಿಯುವ ಪಂಜನ್ನು ಕೊಟ್ಟನು. ಅವರು ಮಿದ್ಯಾನ್ಯರ ಸೈನಿಕರು ಮಲಗಿದ್ದ ಪಾಳೆಯವನ್ನು ಸುತ್ತುವವರಿದ್ದರು. ಗಿದ್ಯೋನನ 300 ಸೈನಿಕರು ಮಡಿಕೆಗಳಲ್ಲಿ ಉರಿಯುವ ಪಂಜನ್ನು ಇಟ್ಟುಕೊಂಡಿದ್ದರು, ಆದ್ದರಿಂದ ಮಿದ್ಯಾನ್ಯರು ಪಂಜುಗಳ ಬೆಳಕನ್ನು ನೋಡಲಾಗಲಿಲ್ಲ.
![OBS Image](https://cdn.door43.org/obs/jpg/360px/obs-en-16-13.jpg)
ಅನಂತರ, ಗಿದ್ಯೋನನ ಸೈನಿಕರೆಲ್ಲರು ಒಂದೇ ಸಮಯದಲ್ಲಿ ತಮ್ಮಲ್ಲಿದ್ದ ಮಡಿಕೆಗಳನ್ನು ಒಡೆದುಬಿಟ್ಟು, ಹಠತ್ತಾಗಿ ಉರಿಯುವ ಪಂಜಗಳನ್ನು ಬಹಿರಂಗಪಡಿಸಿದರು. ಅವರು ತಮ್ಮ ಕೊಂಬುಗಳನ್ನು ಊದಿ, "ಯೆಹೋವನ ಮತ್ತು ಗಿದ್ಯೋನನ ಖಡ್ಗ!" ಎಂದು ಕೂಗಿದರು.
![OBS Image](https://cdn.door43.org/obs/jpg/360px/obs-en-16-14.jpg)
ದೇವರು ಮಿದ್ಯಾನ್ಯರನ್ನು ಗಲಿಬಿಲಿಗೊಳಿಸಿದನು, ಅವರು ಪರಸ್ಪರ ಒಬ್ಬರ ಮೇಲೊಬ್ಬರು ಆಕ್ರಮಣ ಮಾಡಿ ಕೊಂದಹಾಕಲು ಪ್ರಾರಂಭಿಸಿದರು. ತಕ್ಷಣವೇ, ಗಿದ್ಯೋನನು ಇತರ ಇಸ್ರಾಯೇಲ್ಯರು ತಮ್ಮ ಮನೆಗಳಿಂದ ಬಂದು ಮಿದ್ಯಾನ್ಯರನ್ನು ಬೆನ್ನಟ್ಟುವುದಕ್ಕೆ ಸಹಾಯ ಮಾಡಬೇಕೆಂದು ಕರೆಯಿಸುವುದಕ್ಕಾಗಿ ದೂತರನ್ನು ಕಳುಹಿಸಿದನು. ಅವರು ಅನೇಕರನ್ನು ಕೊಂದಹಾಕಿದರು ಮತ್ತು ಉಳಿದವರನ್ನು ಇಸ್ರಾಯೇಲ್ಯರ ದೇಶದಿಂದ ಓಡಿಸಿಬಿಟ್ಟರು. ಆ ದಿನದಲ್ಲಿ 120,000 ಮಿದ್ಯಾನ್ಯರು ಸತ್ತುಹೋದರು. ಹೀಗೆ ದೇವರು ಇಸ್ರಾಯೇಲನ್ನು ರಕ್ಷಿಸಿದನು.
![OBS Image](https://cdn.door43.org/obs/jpg/360px/obs-en-16-15.jpg)
ಜನರು ಗಿದ್ಯೋನನು ತಮ್ಮ ರಾಜನನ್ನಾಗಿ ಮಾಡಿಕೊಳ್ಳಬೇಕೆಂದು ಬಯಸಿದರು. ಹಾಗೆ ಮಾಡಲು ಗಿದ್ಯೋನನು ಅವರಿಗೆ ಅನುಮತಿ ಕೊಡಲಿಲ್ಲ, ಆದರೆ ಅವನು ಅವರಲ್ಲಿ ಪ್ರತಿಯೊಬ್ಬರೂ ಮಿದ್ಯಾನ್ಯರಿಂದ ತೆಗೆದುಕೊಂಡಿದ್ದಂಥ ಕೆಲವು ಬಂಗಾರದ ಉಂಗುರಗಳನ್ನು ಅಥವಾ ಓಲೆಗಳನ್ನು ಕೊಡಬೇಕೆಂದು ಅವರನ್ನು ಕೇಳಿಕೊಂಡನು. ಜನರು ಗಿದ್ಯೋನನಿಗೆ ದೊಡ್ಡ ಪ್ರಮಾಣದ ಬಂಗಾರವನ್ನು ಕೊಟ್ಟರು.
![OBS Image](https://cdn.door43.org/obs/jpg/360px/obs-en-16-16.jpg)
ಅನಂತರ ಗಿದ್ಯೋನನು ಮಹಾಯಾಜಕನು ಧರಿಸುತ್ತಿದ್ದಂಥ ವಿಶೇಷವಾದ ವಸ್ತ್ರವನ್ನು ಮಾಡಲು ಆ ಬಂಗಾರವನ್ನು ಬಳಸಿದನು. ಆದರೆ ಜನರು ಅದನ್ನು ವಿಗ್ರಹದಂತೆ ಪೂಜಿಸಲು ಪ್ರಾರಂಭಿಸಿದರು.ಅವರು ಹಾಗೆ ಮಾಡಿದ್ದರಿಂದ ದೇವರು ಇಸ್ರಾಯೇಲನ್ನು ಮತ್ತೊಮ್ಮೆ ಶಿಕ್ಷಿಸಿದನು . ದೇವರು ಅವರ ಶತ್ರುಗಳ ನಿಮಿತ್ತ ಅವರು ಸೋತುಹೋಗುವಂತೆ ಮಾಡಿದನು. ಅವರು ಅಂತಿಮವಾಗಿ ಸಹಾಯಕ್ಕಾಗಿ ದೇವರಿಗೆ ಮೊರೆಯಿಟ್ಟರು ಮತ್ತು ದೇವರು ಅವರನ್ನು ರಕ್ಷಿಸಲು ಮತ್ತೊಬ್ಬ ವಿಮೋಚಕನನ್ನು ಕಳುಹಿಸಿದನು.
![OBS Image](https://cdn.door43.org/obs/jpg/360px/obs-en-16-17.jpg)
ಇದೇ ಸಂಗತಿ ಅನೇಕ ಬಾರಿ ನಡೆಯಿತು: ಇಸ್ರಾಯೇಲ್ಯರು ಪಾಪ ಮಾಡುತ್ತಿದ್ದರು, ದೇವರು ಅವರನ್ನು ಶಿಕ್ಷಿಸುತ್ತಿದ್ದನು, ಅವರು ಪಶ್ಚಾತ್ತಾಪ ಪಡುತ್ತಿದ್ದರು ಮತ್ತು ದೇವರು ಅವರನ್ನು ಬಿಡಿಸಲು ಯಾರನ್ನಾದರೂ ಕಳುಹಿಸುತ್ತಿದ್ದನು. ಅನೇಕ ವರ್ಷಗಳಲ್ಲಿ, ಇಸ್ರಾಯೇಲ್ಯರನ್ನು ಅವರ ಶತ್ರುಗಳಿಂದ ರಕ್ಷಿಸಿದಂಥ ಅನೇಕ ವಿಮೋಚಕರನ್ನು ದೇವರು ಕಳುಹಿಸಿದನು.
![OBS Image](https://cdn.door43.org/obs/jpg/360px/obs-en-16-18.jpg)
ಅಂತಿಮವಾಗಿ ಜನರು ಇತರ ಎಲ್ಲಾ ಜನಾಂಗಗಳಿಗಿರುವಂತೆ ತಮ್ಮಗೊಬ್ಬ ಅರಸನು ಬೇಕೆಂದು ದೇವರನ್ನು ಬೇಡಿಕೊಂಡರು. ಉನ್ನತನೂ ಬಲಿಷ್ಠನೂ ಆದಂಥ ಮತ್ತು ಅವರನ್ನು ಯುದ್ಧದಲ್ಲಿ ನಡೆಸುವಂಥ ಅರಸನು ಬೇಕೆಂದು ಅವರು ಬಯಸಿದರು. ದೇವರು ಈ ಬಿನ್ನಹವನ್ನು ಇಷ್ಟಪಡಲಿಲ್ಲ, ಆದರೆ ಅವರು ಬೇಡಿಕೊಂಡಂತೆಯೇ ಅವರಿಗೆ ಅರಸನನ್ನು ಕೊಟ್ಟನು.
_ಸತ್ಯವೇದದ ಕಥೆ: ನ್ಯಾಯಸ್ಥಾಪಕರು 1-3; 6-8; 1 ಸಮುವೇಲ 1-10_

60
content/17.md Normal file
View File

@ -0,0 +1,60 @@
# 17. ದಾವೀದನೊಂದಿಗೆ ದೇವರ ಒಡಂಬಡಿಕೆ
![OBS Image](https://cdn.door43.org/obs/jpg/360px/obs-en-17-01.jpg)
ಸೌಲನು ಇಸ್ರಾಯೇಲಿನ ಮೊದಲನೆಯ ಅರಸನಾಗಿದ್ದನು. ಜನರು ಬಯಸಿದಂತೆಯೇ ಅವನು ಎತ್ತರವುಳ್ಳವನು ಮತ್ತು ಸುಂದರನು ಆಗಿದ್ದನು. ಸೌಲನು ಇಸ್ರಾಯೇಲನ್ನು ಆಳಿದ ಮೊದಲ ಕೆಲವು ವರ್ಷಗಳು ಒಳ್ಳೆಯ ಅರಸನಾಗಿದ್ದನು. ಆದರೆ ಅವನು ದೇವರಿಗೆ ವಿಧೇಯನಾಗದ ದುಷ್ಟ ಮನುಷ್ಯನಾದನು, ಆದ್ದರಿಂದ ಮುಂದೊಂದು ದಿನ ಅವನ ಸ್ಥಳದಲ್ಲಿ ಅರಸನಾಗುವುದಕ್ಕಾಗಿ ಬೇರೊಬ್ಬ ಮನುಷ್ಯನನ್ನು ದೇವರು ಆರಿಸಿಕೊಂಡನು.
![OBS Image](https://cdn.door43.org/obs/jpg/360px/obs-en-17-02.jpg)
ದೇವರು ದಾವೀದನೆಂಬ ಹೆಸರುಳ್ಳ ಒಬ್ಬ ಇಸ್ರಾಯೇಲಿನ ಯುವಕನನ್ನು ಆರಿಸಿಕೊಂಡನು ಮತ್ತು ಸೌಲನ ಬಳಿಕ ಅವನನ್ನು ಅರಸನನ್ನಾಗಿ ರೂಪಿಸಲು ಅವನನ್ನು ಸಿದ್ಧಮಾಡತೊಡಗಿದನು. ದಾವೀದನು ಬೇತ್ಲೆಹೇಮ್ ಎಂಬ ಊರಿನ ಒಬ್ಬ ಕುರುಬನಾಗಿದ್ದನು. ದಾವೀದನು ತನ್ನ ತಂದೆಯ ಕುರಿಗಳನ್ನು ಕಾಯುತ್ತಿದ್ದಾಗ ಅವುಗಳ ಮೇಲೆ ದಾಳಿ ಮಾಡಿದಂಥ ಸಿಂಹವನ್ನು ಮತ್ತು ಕರಡಿಗಳನ್ನು ವಿವಿಧ ಸಮಯಗಳಲ್ಲಿ ಎದುರಿಸಿ ಕೊಂದುಹಾಕಿದನು. ದಾವೀದನು ದೀನನು ಮತ್ತು ನೀತಿವಂತನಾಗಿದ್ದನು. ಅವನು ದೇವರನ್ನು ನಂಬಿದ್ದನು ಮತ್ತು ಆತನಿಗೆ ವಿಧೇಯನಾಗಿದ್ದನು.
![OBS Image](https://cdn.door43.org/obs/jpg/360px/obs-en-17-03.jpg)
ದಾವೀದನು ಇನ್ನೂ ಯುವಕನಾಗಿದ್ದಾಗ, ಗೊಲ್ಯಾತ್ ಎಂಬ ದೈತ್ಯನ ವಿರುದ್ಧ ಹೋರಾಡಿದನು. ಗೊಲ್ಯಾತನು ತುಂಬಾ ಒಳ್ಳೆಯ ಸೈನಿಕನಾಗಿದ್ದನು. ಅವರು ಬಹಳ ಶಕ್ತಿಶಾಲಿಯಾಗಿದ್ದನು ಮತ್ತು ಸುಮಾರು ಮೂರು ಮೀಟರ್ ಎತ್ತರವಿದ್ದನು! ಆದರೆ ದೇವರು ದಾವೀದನಿಗೆ ಗೊಲ್ಯಾತನನ್ನು ಕೊಂದು ಇಸ್ರಾಯೇಲನ್ನು ರಕ್ಷಿಸಲು ಸಹಾಯಮಾಡಿದನು. ಅದಾದ ನಂತರ, ದಾವೀದನು ಇಸ್ರಾಯೇಲ್ಯರ ಶತ್ರುಗಳ ಮೇಲೆ ಅನೇಕ ಜಯಗಳನ್ನು ಸಾಧಿಸಿದನು. ದಾವೀದನು ಮಹಾ ಸೈನಿಕನಾಗಿ ಮಾರ್ಪಟ್ಟನು ಮತ್ತು ಅವನು ಅನೇಕ ಯುದ್ಧಗಳಲ್ಲಿ ಇಸ್ರಾಯೇಲ್ ಸೈನ್ಯವನ್ನು ಮುನ್ನಡೆಸಿದನು. ಜನರು ಅವನನ್ನು ತುಂಬಾ ಹೊಗಳಿದರು.
![OBS Image](https://cdn.door43.org/obs/jpg/360px/obs-en-17-04.jpg)
ಜನರು ದಾವೀದನನ್ನು ಅಧಿಕವಾಗಿ ಪ್ರೀತಿಸಿದ ಕಾರಣ ಅರಸನಾದ ಸೌಲನಿಗೆ ಅವನ ಮೇಲೆ ಹೊಟ್ಟೆಕಿಚ್ಚು ಉಂಟಾಗಿತು. ಅಂತಿಮವಾಗಿ ಸೌಲನು ಅವನನ್ನು ಕೊಲ್ಲಲು ಒಳಸಂಚ್ಚು ರೋಪಿಸಿದ್ದನು, ಆದ್ದರಿಂದ ದಾವೀದನು ಅವನಿಂದ ಮತ್ತು ಅವನ ಸೈನಿಕರಿಂದ ತಪ್ಪಿಸಿಕೊಂಡು ಅಡಗಿಕೊಳ್ಳಲು ಅರಣ್ಯಕ್ಕೆ ಓಡಿಹೋದನು. ಒಂದು ದಿನ ಸೌಲನು ಮತ್ತು ಅವನ ಸೈನಿಕರು ಅವನನ್ನು ಹುಡುಕುತ್ತಿರುವಾಗ ಸೌಲನು ಒಂದು ಗುಹೆಯೊಳಕ್ಕೆ ಹೋದನು. ಅಲ್ಲಿ ದಾವೀದನೂ ಅಡಗಿಕೊಂಡಿದ್ದನ್ನು. ಅದರೆ ಸೌಲನು ಅವನನ್ನು ನೋಡಲಿಲ್ಲ. ದಾವೀದನು ಸೌಲನ ಹಿಂಬದಿಯಿಂದ ಅವನ ಹತ್ತಿರಕ್ಕೆ ಹೋಗಿ, ಅವನ ಬಟ್ಟೆಯ ತುದಿಯನ್ನು ಕತ್ತರಿಸಿ ತನ್ನ ವಶದಲ್ಲಿ ಇಟ್ಟುಕೊಂಡನು. ಅನಂತರ, ಸೌಲನು ಗುಹೆಯನ್ನು ಬಿಟ್ಟುಹೋಗುವ ಸಮಯದಲ್ಲಿ ದಾವೀದನು ತನ್ನ ವಶದಲ್ಲಿದ್ದ ಬಟ್ಟೆಯ ತುಂಡನ್ನು ನೋಡಬೇಕೆಂದು ಅರಸನಾದ ಸೌಲನಿಗೆ ಕೂಗಿ ಹೇಳಿದನು. ದಾವೀದನು ಅರಸನಾಗುವುದಕ್ಕಾಗಿ ತನ್ನನ್ನು ಕೊಲ್ಲಲು ಮುಂದಾಗಲಿಲ್ಲ ಎನ್ನುವ ಸತ್ಯ ಸೌಲನಿಗೆ ತಿಳಿದುಬಂತ್ತು.
![OBS Image](https://cdn.door43.org/obs/jpg/360px/obs-en-17-05.jpg)
ಸ್ವಲ್ಪ ಸಮಯದ ನಂತರ, ಸೌಲನು ಯುದ್ಧದಲ್ಲಿ ಸತ್ತುಹೋದನು, ಮತ್ತು ದಾವೀದನು ಇಸ್ರಾಯೇಲಿನ ಅರಸನಾದನು. ಅವನು ಒಳ್ಳೆಯ ಅರಸನಾಗಿದ್ದನು ಮತ್ತು ಜನರು ಅವನನ್ನು ಪ್ರೀತಿಸುತ್ತಿದ್ದರು. ದೇವರು ದಾವೀದನನ್ನು ಆಶೀರ್ವದಿಸಿ, ಅವನನ್ನು ಜಯಶಾಲಿಯನ್ನಾಗಿ ಮಾಡಿದನು. ದಾವೀದನು ಅನೇಕ ಯುದ್ಧಗಳನ್ನು ಮಾಡಿದನು, ಇಸ್ರಾಯೇಲ್ಯರ ಶತ್ರುಗಳನ್ನು ಸೋಲಿಸಲು ದೇವರು ಅವನಿಗೆ ಸಹಾಯಮಾಡಿದನು. ದಾವೀದನು ಯೆರೂಸಲೇಮ್ ನಗರವನ್ನು ವಶಪಡಿಸಿಕೊಂಡು ಅದನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು, ಅಲ್ಲಿಯೇ ಅವನು ವಾಸಿಸುತ್ತಿದ್ದನು ಮತ್ತು ಆಳುತ್ತಿದ್ದನು. ದಾವೀದನು ನಲವತ್ತು ವರ್ಷಗಳ ಕಾಲ ಅರಸನಾಗಿದ್ದನು. ಈ ಸಮಯದಲ್ಲಿ ಇಸ್ರಾಯೇಲ್ ದೇಶ ಬಲಿಷ್ಠ ಮತ್ತು ಶ್ರೀಮಂತ ದೇಶವಾಯಿತು.
![OBS Image](https://cdn.door43.org/obs/jpg/360px/obs-en-17-06.jpg)
ಇಸ್ರಾಯೇಲ್ಯರೆಲ್ಲರು ದೇವರನ್ನು ಆರಾಧಿಸಿ ಆತನಿಗೆ ಯಜ್ಞವನ್ನರ್ಪಿಸುವುದಕ್ಕಾಗುವಂತೆ ದೇವಾಲಯವನ್ನು ಕಟ್ಟಬೇಕೆಂದು ದಾವೀದನು ಬಯಸಿದನು. ಜನರು ಸುಮಾರು 400 ವರ್ಷಗಳಿಂದ ಮೋಶೆಯು ಮಾಡಿಸಿದ್ದ ದೇವದರ್ಶನ ಗುಡಾರದಲ್ಲಿ ದೇವರನ್ನು ಆರಾಧಿಸುತ್ತಿದ್ದರು ಮತ್ತು ಆತನಿಗೆ ಯಜ್ಞವನ್ನರ್ಪಿಸುತ್ತಿದ್ದರು.
![OBS Image](https://cdn.door43.org/obs/jpg/360px/obs-en-17-07.jpg)
ಆದರೆ ನಾತಾನ್ ಎಂಬ ಒಬ್ಬ ಪ್ರವಾದಿಯಿದ್ದನು. ದೇವರು : "ನೀನು ಅನೇಕ ಯುದ್ಧಗಳಲ್ಲಿ ಹೋರಾಡಿದ್ದೀ ಆದ್ದರಿಂದ ನೀನು ನನಗಾಗಿ ಈ ದೇವಾಲಯವನ್ನು ಕಟ್ಟಬಾರದು, ನಿನ್ನ ಮಗನು ಅದನ್ನು ಕಟ್ಟುವನು. ಆದರೂ ನಾನು ನಿನ್ನನ್ನು ಇನ್ನೂ ಅಧಿಕವಾಗಿ ಆಶೀರ್ವದಿಸುವೆನು. ನಿನ್ನ ಸಂತತಿಯವರಲ್ಲಿ ಒಬ್ಬನು ಅರಸನಾಗಿ ನನ್ನ ಜನರು ಶಾಶ್ವತವಾಗಿ ಆಳುವನು!" ಎಂಬ ಮಾತುಗಳನ್ನು ದಾವೀದನಿಗೆ ತಿಳಿಸುವುದಕ್ಕಾಗಿ ನಾತಾನನ್ನು ಕಳುಹಿಸಿದನು. ಶಾಶ್ವತವಾಗಿ ಆಳುವಂಥ ದಾವೀದನ ಏಕೈಕ ಸಂತತಿಯು ಮೆಸ್ಸೀಯನು ಮಾತ್ರವೇ. ಮೆಸ್ಸೀಯನು ದೇವರಿಂದ ಆರಿಸಿಕೊಳ್ಳಲ್ಪಟ್ಟವನಾಗಿದ್ದಾನೆ, ಆತನು ಲೋಕದ ಜನರನ್ನು ಅವರ ಪಾಪದಿಂದ ರಕ್ಷಿಸುವನು.
![OBS Image](https://cdn.door43.org/obs/jpg/360px/obs-en-17-08.jpg)
ದಾವೀದನು ನಾತಾನನ ಸಂದೇಶವನ್ನು ಕೇಳಿದಾಗ, ಅವನು ದೇವರಿಗೆ ಕೃತಜ್ಞತೆಯನ್ನು ಸಲ್ಲಿಸಿ ಆತನನ್ನು ಸ್ತುತಿಸಿದನು. ದೇವರು ಅವನನ್ನು ಸನ್ಮಾನಿಸಿ ಅವನಿಗೆ ಅಧಿಕ ಆಶೀರ್ವಾದಗಳನ್ನು ದಯಪಾಲಿಸುತ್ತಿದ್ದನು. ದೇವರು ಈ ಕಾರ್ಯಗಳನ್ನು ಯಾವಾಗ ಮಾಡುವನೆಂದು ದಾವೀದನಿಗೆ ತಿಳಿದಿರಲಿಲ್ಲ. ಮೆಸ್ಸೀಯನ ಬರೋಣಕ್ಕಾಗಿ ಇಸ್ರಾಯೇಲ್ಯರು ದೀರ್ಘಕಾಲ ಅಂದರೆ ಸರಿಸುಮಾರು 1,000 ವರ್ಷಗಳ ವರೆಗೆ ಕಾಯಬೇಕಾಗಿತ್ತು ಎಂದು ನಮಗೆ ತಿಳಿದಿದೆ.
![OBS Image](https://cdn.door43.org/obs/jpg/360px/obs-en-17-09.jpg)
ದಾವೀದನು ತನ್ನ ಜನರನ್ನು ಅನೇಕ ವರ್ಷಗಳು ನ್ಯಾಯಯುತವಾಗಿ ಆಳಿದನು. ಅವನು ದೇವರಿಗೆ ತುಂಬಾ ವಿಧೇಯನಾದನು ಮತ್ತು ದೇವರು ಅವನನ್ನು ಆಶೀರ್ವದಿಸಿದನು. ಆದಾಗ್ಯೂ, ಅವನ ಜೀವನದ ಕೊನೆಯ ಸಮಯಗಳಲ್ಲಿ ಅವನು ದೇವರಿಗೆ ವಿರುದ್ಧವಾಗಿ ಘೋರವಾದ ಪಾಪಮಾಡಿದನು.
![OBS Image](https://cdn.door43.org/obs/jpg/360px/obs-en-17-10.jpg)
ಒಂದು ದಿನ ದಾವೀದನು ತನ್ನ ಅರಮನೆಯಿಂದ ನೋಡುತ್ತಿದ್ದಾಗ ಸುಂದರವಾದ ಸ್ತ್ರೀಯು ಸ್ನಾನ ಮಾಡುತ್ತಿರುವುದನ್ನು ಅವನು ಕಂಡನು. ಅವನಿಗೆ ಆಕೆಯು ಯಾರೆಂದು ಗೊತ್ತಿರಲಿಲ್ಲ, ಆದರೆ ಆಕೆಯ ಹೆಸರು ಬತ್ಷೆಬೆ ಎಂದು ವಿಚಾರಿಸಿ ತಿಳಿದುಕೊಂಡನು.
![OBS Image](https://cdn.door43.org/obs/jpg/360px/obs-en-17-11.jpg)
ಅದರಿಂದ ಮುಖವನ್ನು ತಿರುಗಿಸಿಕೊಳ್ಳುವುದನ್ನು ಬಿಟ್ಟು, ದಾವೀದನು ಅವಳನ್ನು ತನ್ನ ಬಳಿಗೆ ಕರೆತರುವಂತೆ ಒಬ್ಬನನ್ನು ಕಳುಹಿಸಿದನು. ಅವನು ಅವಳೊಂದಿಗೆ ಸಂಗಮಿಸಿದನು ಅನಂತರ ಅವಳನ್ನು ಮನೆಗೆ ಹಿಂತಿರುಗಿ ಕಳುಹಿಸಿದನು. ಸ್ವಲ್ಪ ಕಾಲವಾದ ನಂತರ ಬತ್ಷೆಬಳು ದಾವೀದನಿಗೆ ತಾನು ಗರ್ಭಿಣಿಯಾಗಿದ್ದಾನೆ ಎಂಬ ವರ್ತಮಾನ ಕಳುಹಿಸಿದಳು.
![OBS Image](https://cdn.door43.org/obs/jpg/360px/obs-en-17-12.jpg)
ಊರೀಯನೆಂಬವನು ಬತ್ಷೆಬಳ ಗಂಡನಾಗಿದ್ದನು. ಅವನು ದಾವೀದನ ಅತ್ಯುತ್ತಮ ಸೈನಿಕರಲ್ಲಿ ಒಬ್ಬನಾಗಿದ್ದನು. ಅವನು ಈ ಸಮಯದಲ್ಲಿ ಯುದ್ಧದಲ್ಲಿ ಹೋರಾಡುವುದಕ್ಕಾಗಿ ಹೋಗಿದ್ದನು. ದಾವೀದನು ಉರೀಯನನ್ನು ಯುದ್ಧದಿಂದ ಹಿಂದಕ್ಕೆ ಕರೆಯಿಸಿಕೊಂಡು ಅವನ ಹೆಂಡತಿಯ ಬಳಿಗೆ ಹೋಗಬೇಕೆಂದು ಅವನಿಗೆ ಹೇಳಿದನು. ಆದರೆ ಇನ್ನಿತರ ಸೈನಿಕರು ಯುದ್ಧದಲ್ಲಿರುವಾಗ ಊರೀಯನು ಮನೆಗೆ ಹೋಗಲು ನಿರಾಕರಿಸಿದನು. ಆದ್ದರಿಂದ ದಾವೀದನು ಊರೀಯನನ್ನು ತಿರುಗಿ ಯುದ್ಧಕ್ಕೆ ಕಳುಹಿಸಿದನು ಮತ್ತು ಅವನು ಕೊಲ್ಲಲ್ಪಡುವಂತೆ ಶತ್ರುಗಳು ಬಲಿಷ್ಠವಾಗಿರುವ ಕಡೆಯಲ್ಲಿ ಅವನನ್ನು ನಿಲ್ಲಿಸಬೇಕೆಂದು ಸೇನಾಧಿಪತಿಗೆ ಹೇಳಿದನು. ಹಾಗೆಯೇ ಆಯಿತು: ಊರೀಯನು ಯುದ್ಧದಲ್ಲಿ ಸತ್ತುಹೋದನು.
![OBS Image](https://cdn.door43.org/obs/jpg/360px/obs-en-17-13.jpg)
ಊರೀಯನು ಯುದ್ಧದಲ್ಲಿ ಸತ್ತುಹೋದ ನಂತರ, ದಾವೀದನು ಬತ್ಷೆಬಳನ್ನು ಮದುವೆಯಾದನು. ತರುವಾಯ, ಅವಳು ದಾವೀದನ ಮಗನಿಗೆ ಜನ್ಮ ನೀಡಿದಳು. ದಾವೀದನು ಮಾಡಿದಂಥದ್ದರ ಬಗ್ಗೆ ದೇವರು ಬಹಳ ಕೋಪಗೊಂಡನು, ಆದ್ದರಿಂದ ಆತನು ಅವನ ಪಾಪವು ಎಷ್ಟು ಕೆಟ್ಟದಾಗಿತ್ತು ಎಂದು ದಾವೀದನಿಗೆ ಹೇಳಲು ಪ್ರವಾದಿಯಾದ ನಾತಾನನನ್ನು ಕಳುಹಿಸಿದನು. ದಾವೀದನು ತನ್ನ ಪಾಪದ ಕುರಿತು ಪಶ್ಚಾತ್ತಾಪಪಟ್ಟನು, ದೇವರು ಅವನನ್ನು ಕ್ಷಮಿಸಿದನು. ದಾವೀದನು ಉಳಿದ ತನ್ನ ಜೀವಮಾನವೆಲ್ಲವು ಹಾಗೂ ಕಷ್ಟದ ಸಮಯಗಳಲ್ಲಿಯೂ ದೇವರನ್ನು ಅನುಸರಿಸಿದನು ಮತ್ತು ವಿಧೇಯನಾದನು.
![OBS Image](https://cdn.door43.org/obs/jpg/360px/obs-en-17-14.jpg)
ಆದರೆ ದಾವೀದನ ಗಂಡುಮಗುವು ಸತ್ತುಹೋಯಿತು. ಹೀಗೆ ದೇವರು ದಾವೀದನನ್ನು ಶಿಕ್ಷಿಸಿದನು. ಇಷ್ಟು ಮಾತ್ರವಲ್ಲದೆ, ದಾವೀದನು ಸಾಯುವವರೆಗೂ, ಅವನ ಸ್ವಂತ ಕುಟುಂಬದವರಲ್ಲಿ ಕೆಲವರು ಅವನಿಗೆ ವಿರುದ್ಧ ಕಾದಾಡಿದರು, ಮತ್ತು ದಾವೀದನು ಅಧಿಕ ಶಕ್ತಿಯನ್ನು ಕಳೆದುಕೊಂಡನು. ಆದರೆ ದೇವರು ನಂಬಿಗಸ್ತನಾಗಿದ್ದನು ಮತ್ತು ದಾವೀದನು ಆತನಿಗೆ ಅವಿಧೇಯನಾಗಿದ್ದರೂ ಕೂಡ ಆತನು ತಾನು ದಾವೀದನಿಗೆ ಏನು ಮಾಡುವೆನೆಂದು ವಾಗ್ದಾನ ಮಾಡಿದ್ದನೋ ಅದನ್ನೇ ಆತನು ಅವನಿಗೆ ಮಾಡಿದನು. ತರುವಾಯ ದಾವೀದನು ಮತ್ತು ಬತ್ಷೆಬಳು ಮತ್ತೊಬ್ಬ ಮಗನನ್ನು ಪಡೆದು, ಅವನಿಗೆ ಸೊಲೊಮೋನ್ ಎಂದು ಹೆಸರಿಟ್ಟರು.
_ಸತ್ಯವೇದದ ಕಥೆ: 1 ಸಮುವೇಲ 10; 15-19; 24; 31; 2 ಸಮುವೇಲ 5; 7; 11-12_

56
content/18.md Normal file
View File

@ -0,0 +1,56 @@
# 18. ಇಬ್ಭಾಗವಾದ ರಾಜ್ಯ
![OBS Image](https://cdn.door43.org/obs/jpg/360px/obs-en-18-01.jpg)
ಅರಸನಾದ ದಾವೀದನು ದೇಶವನ್ನು ನಲವತ್ತು ವರ್ಷ ಆಳಿದನು. ಅನಂತರ ಅವನು ಸತ್ತನು, ಅವನ ಮಗನಾದ ಸೊಲೊಮೋನನು ಇಸ್ರಾಯೇಲನ್ನು ಆಳಲು ಆರಂಭಿಸಿದನು. ದೇವರು ಸೊಲೊಮೋನನ ಸಂಗಡ ಮಾತನಾಡಿ, ದೇವರು ತಾನು ಅವನಿಗೆ ಏನು ಮಾಡಬೇಕೆಂದು ಅವನು ಬಯಸುತ್ತಾನೆಂದು ಕೇಳಿದನು. ದೇವರು ತನ್ನನ್ನು ಬಹು ದೊಡ್ಡ ಜ್ಞಾನಿಯಾಗಿ ಮಾಡಬೇಕೆಂದು ಸೊಲೊಮೋನನು ದೇವರನ್ನು ಬೇಡಿಕೊಂಡನು. ಇದು ದೇವರಿಗೆ ಮೆಚ್ಚಿಕೆಯಾಯಿತು, ಆದ್ದರಿಂದ ಆತನು ಸೊಲೊಮೋನನನ್ನು ಲೋಕದ ಅತ್ಯಂತ ದೊಡ್ಡ ಜ್ಞಾನಿಯಾಗಿ ಮಾಡಿದನು. ಸೊಲೊಮೋನನು ಅನೇಕ ವಿಷಯಗಳನ್ನು ಕಲಿತುಕೊಂಡು, ಅತ್ಯಂತ ಜ್ಞಾನಿಯಾದ ಅರಸನಾದನು. ದೇವರು ಅವನನ್ನು ಅತ್ಯಂತ ಶ್ರೀಮಂತನನ್ನಾಗಿಯೂ ಸಹ ಮಾಡಿದನು.
![OBS Image](https://cdn.door43.org/obs/jpg/360px/obs-en-18-02.jpg)
ಸೊಲೊಮೋನನು ಯೆರೂಸಲೇಮಿನಲ್ಲಿ ದೇವಾಲಯವನ್ನು ಕಟ್ಟಿದನು, ಅವನ ತಂದೆಯಾದ ದಾವೀದನು ಅದಕ್ಕಾಗಿ ಯೋಜನೆಯನ್ನು ರೂಪಿಸಿದ್ದನು ಮತ್ತು ವಸ್ತುಗಳನ್ನು ಸಂಗ್ರಹಿಸಿಟ್ಟಿದ್ದನು. ಜನರು ದೇವದರ್ಶನ ಗುಡಾರಕ್ಕೆ ಬದಲಾಗಿ ಈಗ ದೇವಾಲಯದಲ್ಲಿ ದೇವರನ್ನು ಆರಾಧಿಸಿದರು ಮತ್ತು ಆತನಿಗೆ ಯಜ್ಞವನ್ನರ್ಪಿಸಿದರು. ದೇವರು ಬಂದು ದೇವಾಲಯದಲ್ಲಿದ್ದನು ಮತ್ತು ಆತನು ತನ್ನ ಜನರೊಂದಿಗೆ ವಾಸಿಸುತ್ತಿದ್ದನು.
![OBS Image](https://cdn.door43.org/obs/jpg/360px/obs-en-18-03.jpg)
ಆದರೆ ಸೊಲೊಮೋನನ ಇತರ ದೇಶಗಳ ಸ್ತ್ರೀಯರನ್ನು ಪ್ರೀತಿಸಿದ್ದನು. ಅವನು ಅನೇಕ ಸ್ತ್ರೀಯರನ್ನು ಅಂದರೆ ಸುಮಾರು 1,000 ಸ್ತ್ರೀಯರನ್ನು ಮದುವೆಯಾಗುವ ಮೂಲಕ ದೇವರಿಗೆ ಅವಿಧೇಯನಾದನು! ಈ ಸ್ತ್ರೀಯರಲ್ಲಿ ಅನೇಕರು ಅನ್ಯದೇಶಗಳಿಂದ ಬಂದವರಾಗಿದ್ದರು ಮತ್ತು ಅವರು ತಮ್ಮ ದೇವರುಗಳನ್ನು ತಮ್ಮೊಂದಿಗೆ ತೆಗೆದುಕೊಂಡು ಬಂದು ಅವುಗಳನ್ನು ಪೂಜಿಸುವುದನ್ನು ಮುಂದುವರೆಸಿದರು. ಸೊಲೊಮೋನನು ವೃದ್ಧನಾದ್ದಾಗ, ಅವನು ಸಹ ಅವರ ದೇವರುಗಳನ್ನು ಪೂಜಿಸಿದನು.
![OBS Image](https://cdn.door43.org/obs/jpg/360px/obs-en-18-04.jpg)
ಇದರ ನಿಮಿತ್ತವಾಗಿ ದೇವರು ಸೊಲೊಮೋನನ ಮೇಲೆ ಕೋಪಗೊಂಡನು. ಆತನು ಇಸ್ರಾಯೇಲ್ ದೇಶವನ್ನು ಎರಡು ರಾಜ್ಯಗಳಾಗಿ ಇಬ್ಭಾಗಿಸುವುದರ ಮೂಲಕ ಅವನನ್ನು ಶಿಕ್ಷಿಸುವೆನು ಎಂದು ಹೇಳಿದನು. ಆತನು ಇದನ್ನು ಸೊಲೊಮೋನನು ಸತ್ತ ನಂತರ ಮಾಡುವುದಾಗಿ ತಿಳಿಸಿದನು.
![OBS Image](https://cdn.door43.org/obs/jpg/360px/obs-en-18-05.jpg)
ಸೊಲೊಮೋನನು ಸತ್ತ ನಂತರ ಅವನ ಮಗನಾದ ರೆಹಬ್ಬಾಮನು ಅರಸನಾದನು. ಇಸ್ರಾಯೇಲ್ ದೇಶದ ಜನರೆಲ್ಲರು ಅವನನ್ನು ತಮ್ಮ ಅರಸನಾಗಿ ಸ್ವೀಕರಿಸಿಕೊಳ್ಳಲು ಒಟ್ಟಿಗೆ ಕೂಡಿಬಂದರು. ಸೊಲೊಮೋನನು ಅವರಿಗೆ ಬಹಳಷ್ಟು ಕಠಿಣವಾದ ಕೆಲಸವನ್ನು ಮಾಡುವಂತೆ ಮತ್ತು ಬಹಳಷ್ಟು ತೆರಿಗೆಗಳನ್ನು ಪಾವತಿಸುವಂತೆ ಮಾಡಿದ್ದಾನೆಂದು ಅವರು ರೆಹಬ್ಬಾಮನಿಗೆ ದೂರು ಹೇಳಿದರು. ತಮ್ಮ ಕೆಲಸವನ್ನು ಕಡಿಮೆ ಮಾಡಬೇಕೆಂದು ರೆಹಬ್ಬಾಮನನ್ನು ಕೇಳಿಕೊಂಡರು.
![OBS Image](https://cdn.door43.org/obs/jpg/360px/obs-en-18-06.jpg)
ಆದರೆ ರೆಹಬ್ಬಾಮನು ಅವರಿಗೆ ಬಹು ಮೂರ್ಖ ರೀತಿಯಲ್ಲಿ ಉತ್ತರಿಸಿದನು. ಅವನು, “ನನ್ನ ತಂದೆಯಾದ ಸೊಲೊಮೋನನು ನೀವು ಕಠಿಣವಾಗಿ ಕೆಲಸ ಮಾಡುವಂತೆ ಮಾಡಿದ್ದಾನೆಂದು ನೀವು ಹೇಳಿದ್ದೀರಿ, ಆದರೆ ನಾನು ಅವನು ಮಾಡಿದದ್ದಕ್ಕಿಂತಲೂ ಹೆಚ್ಚು ಕಠಿಣವಾಗಿ ನೀವು ಕೆಲಸ ಮಾಡುವಂತೆ ಮಾಡುವೆನು ಮತ್ತು ಅವನು ಮಾಡಿದದ್ದಕ್ಕಿಂತಲೂ ಹೆಚ್ಚು ನೀವು ಕಷ್ಟಪಡುವಂತೆ ಮಾಡುವೆನು” ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-18-07.jpg)
ಅವನು ಹೀಗೆ ಹೇಳುವುದನ್ನು ಜನರು ಕೇಳಿದಾಗ ಅವರಲ್ಲಿ ಬಹುಮಂದಿ ಅವನಿಗೆ ವಿರುದ್ಧವಾಗಿ ತಿರುಗಿಬಿದ್ದರು. ಹತ್ತು ಕುಲಗಳು ಅವನನ್ನು ಬಿಟ್ಟು ಹೋದವು; ಕೇವಲ ಎರಡು ಕುಲಗಳು ಮಾತ್ರ ಅವನೊಂದಿಗೆ ಉಳಿದುಕೊಂಡವು. ಈ ಎರಡು ಕುಲಗಳು ತಮ್ಮನ್ನು ಯೆಹೂದ್ಯ ರಾಜ್ಯವೆಂದು ಕರೆದುಕೊಂಡರು.
![OBS Image](https://cdn.door43.org/obs/jpg/360px/obs-en-18-08.jpg)
ಇತರ ಹತ್ತು ಕುಲಗಳು ಯಾರೊಬ್ಬಾಮನೆಂಬ ವ್ಯಕ್ತಿಯನ್ನು ತಮ್ಮ ಅರಸನನ್ನಾಗಿ ಮಾಡಿಕೊಂಡರು. ಈ ಕುಲಗಳು ದೇಶದ ಉತ್ತರ ಭಾಗದಲ್ಲಿದ್ದರು. ಅವರು ತಮ್ಮನ್ನು ಇಸ್ರಾಯೇಲ್ ರಾಜ್ಯ ಎಂದು ಕರೆದುಕೊಂಡರು.
![OBS Image](https://cdn.door43.org/obs/jpg/360px/obs-en-18-09.jpg)
ಆದರೆ ಯಾರೊಬ್ಬಾಮನು ದೇವರಿಗೆ ವಿರೋಧವಾಗಿ ತಿರುಗಿಬಿದ್ದನು ಮತ್ತು ಜನರು ಪಾಪಮಾಡುವಂತೆ ಮಾಡಿದನು. ಅವನು ತನ್ನ ಜನರು ಪೂಜಿಸುವುದಕ್ಕಾಗುವಂತೆ ಎರಡು ವಿಗ್ರಹಗಳನ್ನು ಕಟ್ಟಿಸಿದನು. ಅವರು ದೇವಾಲಯದಲ್ಲಿ ದೇವರನ್ನು ಆರಾಧಿಸುವಂತೆ ಯೆಹೂದದ ರಾಜ್ಯದಲ್ಲಿರುವಂಥ ಯೆರೂಸಲೇಮಿಗೆ ಹೋಗಲಿಲ್ಲ.
![OBS Image](https://cdn.door43.org/obs/jpg/360px/obs-en-18-10.jpg)
ಯೆಹೂದ ಮತ್ತು ಇಸ್ರಾಯೇಲ್ ರಾಜ್ಯಗಳು ವೈರಿಗಳಾದವು ಮತ್ತು ಅನೇಕ ಸಾರಿ ಪರಸ್ಪರ ಒಬ್ಬರಿಗೊಬ್ಬರು ಯುದ್ಧಮಾಡಿಕೊಂಡರು.
![OBS Image](https://cdn.door43.org/obs/jpg/360px/obs-en-18-11.jpg)
ಇಸ್ರಾಯೇಲಿನ ಹೊಸ ರಾಜ್ಯದಲ್ಲಿನ ಎಲ್ಲಾ ಅರಸರು ದುಷ್ಟರಾಗಿದ್ದರು. ಈ ಅರಸರಲ್ಲಿ ಅನೇಕರು ಅವರ ಸ್ಥಾನದಲ್ಲಿ ಅರಸರಾಗಲು ಬಯಸಿದ್ದಂಥ ಇತರ ಇಸ್ರಾಯೇಲ್ಯರಿಂದ ಕೊಲ್ಲಲ್ಪಟ್ಟರು.
![OBS Image](https://cdn.door43.org/obs/jpg/360px/obs-en-18-12.jpg)
ಇಸ್ರಾಯೇಲ್ ರಾಜ್ಯದ ಎಲ್ಲಾ ಅರಸರು ಮತ್ತು ಬಹುತೇಕ ಎಲ್ಲಾ ಜನರು ವಿಗ್ರಹಗಳನ್ನು ಪೂಜಿಸಿದರು. ಅವರು ಹೀಗೆ ಮಾಡುವಾಗ, ಅವರು ಸಾಮಾನ್ಯವಾಗಿ ವೇಶ್ಯೆಯರ ಜೊತೆ ಮಲಗಿದರು ಮತ್ತು ಕೆಲವೊಮ್ಮೆ ವಿಗ್ರಹಗಳಿಗೆ ಮಕ್ಕಳನ್ನು ಬಲಿಕೊಟ್ಟರು.
![OBS Image](https://cdn.door43.org/obs/jpg/360px/obs-en-18-13.jpg)
ಯೆಹೂದದ ಅರಸರು ದಾವೀದನ ಸಂತತಿಯವರಾಗಿದ್ದರು. ಈ ಅರಸರಲ್ಲಿ ಕೆಲವರು ನ್ಯಾಯಯುತವಾಗಿ ಆಳ್ವಿಕೆ ನಡೆಸುತ್ತಿದಂಥ ಮತ್ತು ದೇವರನ್ನು ಆರಾಧಿಸುತ್ತಿದ್ದಂಥ ಒಳ್ಳೆಯ ಅರಸರಾಗಿದ್ದರು. ಆದರೆ ಯೆಹೂದದಲ್ಲಿ ಅನೇಕ ಅರಸರು ದುಷ್ಟರಾಗಿದ್ದರು. ಅವರು ಕೆಟ್ಟ ರೀತಿಯಲ್ಲಿ ಆಳಿದರು ಮತ್ತು ಅವರು ವಿಗ್ರಹಗಳನ್ನು ಪೂಜಿಸಿದರು. ಈ ಅರಸರಲ್ಲಿ ಕೆಲವರು ತಮ್ಮ ಮಕ್ಕಳನ್ನು ಸುಳ್ಳು ದೇವರುಗಳಿಗೆ ಬಲಿಕೊಟ್ಟರು. ಯೆಹೂದದ ಬಹುತೇಕ ಜನರು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದು ಬೇರೆ ದೇವರುಗಳನ್ನು ಪೂಜಿಸಿದರು.
_ಸತ್ಯವೇದದ ಕಥೆ: 1 ಅರಸುಗಳು 1-6; 11-12_

76
content/19.md Normal file
View File

@ -0,0 +1,76 @@
# 19. ಪ್ರವಾದಿಗಳು
![OBS Image](https://cdn.door43.org/obs/jpg/360px/obs-en-19-01.jpg)
ದೇವರು ಇಸ್ರಾಯೇಲ್ಯರ ಬಳಿಗೆ ಯಾವಾಗಲೂ ಪ್ರವಾದಿಗಳನ್ನು ಕಳುಹಿಸುತ್ತಿದ್ದನು. ಪ್ರವಾದಿಗಳು ದೇವರಿಂದ ಕೇಳಿಸಿಕೊಂಡಂಥ ಸಂದೇಶಗಳನ್ನು ಜನರಿಗೆ ಹೇಳುತ್ತಿದ್ದರು.
![OBS Image](https://cdn.door43.org/obs/jpg/360px/obs-en-19-02.jpg)
ಅಹಾಬನು ಇಸ್ರಾಯೇಲ್ ರಾಜ್ಯದ ಅರಸನಾಗಿದ್ದಾಗ ಎಲೀಯನು ಪ್ರವಾದಿಯಾಗಿದ್ದನು. ಅಹಾಬನು ದುಷ್ಟ ಮನುಷ್ಯನಾಗಿದ್ದನು. ಜನರು ಬಾಳ್ ಎಂಬ ಸುಳ್ಳು ದೇವರನ್ನು ಆರಾಧಿಸುವಂತೆ ಮಾಡಲು ಅವನು ಪ್ರಯತ್ನಿಸಿದನು. ಆದ್ದರಿಂದ ದೇವರು ಜನರನ್ನು ಶಿಕ್ಷಿಸುವನೆಂದು ಎಲೀಯನು ಅರಸನಾದ ಅಹಾಬನಿಗೆ ಹೇಳಿದನು. ಆತನು , “ನಾನು ತಿರುಗಿ ಮಳೆ ಬರಲಿ ಅನ್ನುವವರೆಗೂ ಇಸ್ರಾಯೇಲ್ ರಾಜ್ಯದಲ್ಲಿ ಮಳೆಯಾಗಲಿ ಮಂಜಾಗಲಿ ಇರುವುದಿಲ್ಲ” ಎಂದು ಅವನಿಗೆ ಹೇಳಿದನು. ಇದರಿಂದ ಅಹಾಬನು ತುಂಬಾ ಕೋಪಗೊಂಡು ಎಲೀಯನನ್ನು ಕೊಲ್ಲಬೇಕೆಂದು ನಿರ್ಧರಿಸಿದನು.
![OBS Image](https://cdn.door43.org/obs/jpg/360px/obs-en-19-03.jpg)
ಅಹಾಬನಿಗೆ ಕಾಣದಂತೆ ಅಡಗಿಕೊಳ್ಳಲು ಅರಣ್ಯಕ್ಕೆ ಹೋಗು ಎಂದು ದೇವರು ಎಲೀಯನಿಗೆ ಹೇಳಿದನು. ಎಲೀಯನು ಅರಣ್ಯಕ್ಕೆ ಹೋಗಿ, ದೇವರು ಅವನಿಗೆ ಆಜ್ಞಾಪಿಸಿದ ಒಂದು ನಿರ್ದಿಷ್ಟವಾದ ಹಳ್ಳಕ್ಕೆ ಹೋದನು. ಪ್ರತಿಯೊಂದು ಮುಂಜಾನೆಯು ಮತ್ತು ಸಂಜೆಯು, ಪಕ್ಷಿಗಳು ಎಲೀಯನಿಗೆ ರೊಟ್ಟಿ ಮತ್ತು ಮಾಂಸ ತಂದುಕೊಡುತ್ತಿದ್ದವು. ಈ ಸಮಯದಲ್ಲಿ, ಅಹಾಬನೂ ಅವನ ಸೈನ್ಯವೂ ಎಲೀಯನನ್ನು ಹುಡುಕುತ್ತಿದ್ದರು, ಆದರೆ ಅವರಿಗೆ ಅವನು ಕಂಡುಹಿಡಿಯಲಾಗಲಿಲ್ಲ.
![OBS Image](https://cdn.door43.org/obs/jpg/360px/obs-en-19-04.jpg)
ಮಳೆಯಿಲ್ಲದ್ದರಿಂದ ಸ್ವಲ್ಪ ಸಮಯವಾದ ನಂತರ ಹಳ್ಳವು ಬತ್ತಿಹೋಯಿತು. ಆದಕಾರಣ ಎಲೀಯನು ಹತ್ತಿರವಿದ್ದ ಬೇರೊಂದು ದೇಶಕ್ಕೆ ಹೋದನು. ಆ ದೇಶದಲ್ಲಿ ಒಬ್ಬ ಬಡ ವಿಧವೆಯಿದ್ದಳು. ಅವಳಿಗೆ ಒಬ್ಬ ಮಗನಿದ್ದನು. ಕೊಯ್ಲು ಇಲ್ಲದ್ದರಿಂದ ಅವರ ಆಹಾರವು ಬಹುತೇಕ ಮುಗಿಯುತ್ತಾ ಬಂದಿತ್ತು. ಆದರೂ ಆ ಸ್ತ್ರೀಯು ಎಲೀಯನನ್ನು ಪೋಷಿಸಿದ್ದಳು, ಆದ್ದರಿಂದ ದೇವರು ಅವಳಿಗೂ ಮತ್ತು ಅವಳ ಮಗನಿಗೂ ಒದಗಿಸಿಕೊಟ್ಟನು, ಇದರಿಂದಾಗಿ ಅವಳ ಹಿಟ್ಟಿನ ಮಡಿಕೆಯು, ಎಣ್ಣೆಯ ಕುಡಿಕೆಯು ಖಾಲಿಯಾಗಲಿಲ್ಲ. ಇಡೀ ಕ್ಷಾಮ ಕಾಲದಲ್ಲೆಲ್ಲಾ ಅವರಿಗೆ ಆಹಾರವಿತ್ತು. ಎಲೀಯನು ಹಲವಾರು ವರ್ಷಗಳು ಅಲ್ಲಿಯೇ ತಂಗಿದ್ದನು.
![OBS Image](https://cdn.door43.org/obs/jpg/360px/obs-en-19-05.jpg)
ಮೂರುವರೆ ವರ್ಷಗಳ ನಂತರ, ದೇವರು ತಾನು ಮತ್ತೇ ಮಳೆ ಬರುವಂತೆ ಮಾಡುವೆನು ಎಂದು ಎಲೀಯನಿಗೆ ಹೇಳಿದನು. ಇಸ್ರಾಯೇಲ್ ರಾಜ್ಯಕ್ಕೆ ಹಿಂದಿರುಗಿ ಹೋಗಿ ಅಹಾಬನೊಂದಿಗೆ ಮಾತನಾಡಬೇಕೆಂದು ಆತನು ಎಲೀಯನಿಗೆ ಹೇಳಿದನು. ಆದ್ದರಿಂದ ಎಲೀಯನು ಅಹಾಬನ ಬಳಿಗೆ ಹೋದನು. ಅಹಾಬನು ಅವನನ್ನು ನೋಡಿದಾಗ, ಅವನಿಗೆ, "ಆಪತ್ತನ್ನು ಬರಮಾಡಿದವನೇ, ನೀನು ಇಲ್ಲಿರುವೆಯಾ !" ಎಂದು ಹೇಳಿದನು. ಎಲೀಯನು ಅವನಿಗೆ, “ಆಪತ್ತನ್ನು ಬರಮಾಡಿದವನು ನೀನೇ, ನೀನು ಯೆಹೋವನನ್ನು ತೊರೆದುಬಿಟ್ಟಿದ್ದೀ. ಆತನು ನಿಜವಾದ ದೇವರಾಗಿದ್ದಾನೆ, ಆದರೆ ನೀನು ಬಾಳನನ್ನು ಆರಾಧಿಸುತ್ತಿರುವಿ , ಈಗ ನೀನು ಇಸ್ರಾಯೇಲ್ ರಾಜ್ಯದ ಜನರೆಲ್ಲರನ್ನು ಕರ್ಮೆಲ್ ಬೆಟ್ಟಕ್ಕೆ ಕರೆತರಿಸಬೇಕು" ಎಂದು ಉತ್ತರಿಸಿದನು.
![OBS Image](https://cdn.door43.org/obs/jpg/360px/obs-en-19-06.jpg)
ಆದ್ದರಿಂದ ಇಸ್ರಾಯೇಲ್ ಜನರೆಲ್ಲರು ಕರ್ಮೆಲ್ ಬೆಟ್ಟಕ್ಕೆ ಹೋದರು. ತಾವು ಬಾಳನಿಗಾಗಿ ಸಂದೇಶಗಳನ್ನು ನುಡಿದಂಥವರು ಎಂದು ಹೇಳಿದ ಮನುಷ್ಯರು ಕೂಡಾ ಬಂದರು. ಇವು ಬಾಳನ ಪ್ರವಾದಿಗಳು. ಅವರು 450 ಮಂದಿಯಿದ್ದರು. ಎಲೀಯನು ಜನರಿಗೆ, "ನೀವು ಎಷ್ಟರವರೆಗೆ ಮನಸ್ಸನ್ನು ಬದಲಿಸಿಕೊಳ್ಳುತ್ತಿರುವಿರಿ? ಯೆಹೋವನು ದೇವರಾಗಿದ್ದರೆ ಆತನನ್ನೇ ಆರಾಧಿಸಿರಿ! ಬಾಳನು ದೇವರಾಗಿದ್ದರೆ ಅವನನ್ನೇ ಆರಾಧಿಸಿರಿ!" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-19-07.jpg)
ಆಗ ಎಲೀಯನು ಬಾಳನ ಪ್ರವಾದಿಗಳಿಗೆ, “ಒಂದು ಹೋರಿಯನ್ನು ವಧಿಸಿ ಅದನ್ನು ಯಜ್ಞವಾಗಿ ಅರ್ಪಿಸಲು ಮಾಂಸವನ್ನು ಯಜ್ಞವೇದಿಯ ಮೇಲಿಡಿರಿ, ಆದರೆ ಬೆಂಕಿಯನ್ನು ಹೊತ್ತಿಸಬಾರದು. ತರುವಾಯ ನಾನೂ ಹಾಗೆಯೇ ಮಾಡುವೆನು ಮತ್ತು ನಾನು ಮಾಂಸವನ್ನು ಬೇರೆ ಯಜ್ಞವೇದಿಯ ಮೇಲಿಡುವೆನು. ಆಗ ದೇವರು ಯಜ್ಞವೇದಿಯ ಮೇಲೆ ಬೆಂಕಿಯನ್ನು ಕಳುಹಿಸಿದರೆ, ಅವನು ನಿಜವಾದ ದೇವರು ಎಂದು ನೀವು ತಿಳಿಯುವಿರಿ" ಎಂದು ಹೇಳಿದನು. ಆದ್ದರಿಂದ ಬಾಳನ ಪ್ರವಾದಿಗಳು ಯಜ್ಞವನ್ನು ಸಿದ್ಧಪಡಿಸಿದರು ಆದರೆ ಬೆಂಕಿಯನ್ನು ಹೊತ್ತಿಸಲಿಲ್ಲ.
![OBS Image](https://cdn.door43.org/obs/jpg/360px/obs-en-19-08.jpg)
ಅನಂತರ ಬಾಳನ ಪ್ರವಾದಿಗಳು ಬಾಳನಿಗೆ, “ಬಾಳನೇ, ನಮಗೆ ಕಿವಿಗೊಡು!” ಎಂದು ಪ್ರಾರ್ಥಿಸಿದರು. ಅವರು ಇಡೀ ದಿನವೆಲ್ಲಾ ಪ್ರಾರ್ಥಿಸಿದರು ಹಾಗೂ ಕೂಗಿದರು ಮತ್ತು ತಮ್ಮ ದೇಹವನ್ನು ಕತ್ತಿಯಿಂದ ಕತ್ತರಿಸಿಕೊಂಡರು, ಆದರೆ ಬಾಳನು ಉತ್ತರಿಸಲ್ಲೂ ಇಲ್ಲ, ಅವನು ಬೆಂಕಿಯನ್ನು ಕಳುಹಿಸಲ್ಲೂ ಇಲ್ಲ.
![OBS Image](https://cdn.door43.org/obs/jpg/360px/obs-en-19-09.jpg)
ಬಾಳನ ಪ್ರವಾದಿಗಳು ಬಾಳನಿಗೆ ಪ್ರಾರ್ಥಿಸುತ್ತಾ ಇಡೀ ದಿನವನ್ನೆಲ್ಲಾ ಕಳೆದರು. ಅವರು ಅಂತಿಮವಾಗಿ ಪ್ರಾರ್ಥಿಸುವುದನ್ನು ನಿಲ್ಲಿಸಿದರು. ಆಗ ಎಲೀಯನು ದೇವರಿಗಾಗಿ ಬೇರೊಂದು ಹೋರಿಯ ಮಾಂಸವನ್ನು ಯಜ್ಞವೇದಿಯ ಮೇಲಿಟ್ಟನು. ಅನಂತರ, ಅವನು ಮಾಂಸ, ಕಟ್ಟಿಗೆ, ಮತ್ತು ಯಜ್ಞವೇದಿಯ ಸುತ್ತಲಿರುವ ನೆಲವು ಸಂಪೂರ್ಣವಾಗಿ ನೆನೆಯುವ ವರೆಗೂ ಹನ್ನೆರಡು ದೊಡ್ಡ ಕೊಡಗಳ ನೀರನ್ನು ಯಜ್ಞದ ಮೇಲೆ ಸುರಿಯಿರಿ ಎಂದು ಜನರಿಗೆ ಹೇಳಿದನು.
![OBS Image](https://cdn.door43.org/obs/jpg/360px/obs-en-19-10.jpg)
ಆಗ ಎಲೀಯನು, "ಅಬ್ರಹಾಮ, ಇಸಾಕ, ಯಾಕೋಬರ ದೇವರೇ, ಯೆಹೋವನೇ, ನೀನೊಬ್ಬನೇ ಇಸ್ರಾಯೇಲರ ದೇವರಾಗಿರುತ್ತೀ ಮತ್ತು ನಾನು ನಿನ್ನ ಸೇವಕನಾಗಿರುತ್ತೇನೆ ಎಂಬುದನ್ನೂ ತೋರಿಸು. ಈ ಜನರು ನೀನೇ ನಿಜವಾದ ದೇವರು ಎಂದು ತಿಳಿದುಕೊಳ್ಳುವಂತೆ ನೀನು ನನಗೆ ಉತ್ತರವನ್ನು ದಯಪಾಲಿಸು" ಎಂದು ಪ್ರಾರ್ಥಿಸಿದನು.
![OBS Image](https://cdn.door43.org/obs/jpg/360px/obs-en-19-11.jpg)
ಕೂಡಲೇ, ಆಕಾಶದಿಂದ ಬೆಂಕಿ ಬಿದ್ದಿತು. ಅದು ಯಜ್ಞಮಾಂಸವನ್ನೂ, ಕಟ್ಟಿಗೆ, ಕಲ್ಲು ಮಣ್ಣುಗಳನ್ನೂ ದಹಿಸಿಬಿಟ್ಟು ಕಾಲುವೆಯಲ್ಲಿದ್ದ ನೀರನ್ನೆಲ್ಲಾ ಹೀರಿಬಿಟ್ಟಿತು. ಜನರು ಇದನ್ನು ನೋಡಿದಾಗ ಅವರು ನೆಲಕ್ಕೆ ಬೋರ್ಲಬಿದ್ದು, "ಯೆಹೋವನೇ ದೇವರು! ಯೆಹೋವನೇ ದೇವರು!" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-19-12.jpg)
ಆಗ ಎಲೀಯನು, "ಬಾಳನ ಪ್ರವಾದಿಗಳಲ್ಲಿ ಒಬ್ಬನೂ ತಪ್ಪಿಸಿಕೊಳ್ಳಲು ಬಿಡಬೇಡಿರಿ" ಎಂದು ಹೇಳಿದನು. ಆದ್ದರಿಂದ ಜನರು ಬಾಳನ ಪ್ರವಾದಿಗಳನ್ನು ಹಿಡಿದು ಅವರನ್ನು ಅಲ್ಲಿಂದ ಕರೆದುಕೊಂಡು ಹೋಗಿ ಕೊಂದುಹಾಕಿದರು.
![OBS Image](https://cdn.door43.org/obs/jpg/360px/obs-en-19-13.jpg)
ಆಗ ಎಲೀಯನು ಅರಸನಾದ ಅಹಾಬನಿಗೆ, "ತಥಟ್ಟನೆ ನೀನು ಮನೆಗೆ ಹಿಂತಿರುಗು, ದಾರಕರವಾದ ಮಳೆ ಬರಲಿದೆ" ಎಂದು ಹೇಳಿದನು. ಕೂಡಲೇ ಆಕಾಶವು ಕಪ್ಪಾಗಿ ದೊಡ್ಡ ಮಳೆಯು ಪ್ರಾರಂಭವಾಯಿತು. ಯೆಹೋವನು ಬರಗಾಲವನ್ನು ಹೀಗೆ ನಿಯಂತ್ರಿಸಿ ಈ ಮೂಲಕವಾಗಿ ತಾನೇ ನಿಜವಾದ ದೇವರು ಎಂದು ತೋರಿಸಿಕೊಟ್ಟನು
![OBS Image](https://cdn.door43.org/obs/jpg/360px/obs-en-19-14.jpg)
ಎಲೀಯನು ತನ್ನ ಕೆಲಸವನ್ನು ಪೂರ್ಣಗೊಳಿಸಿದಾಗ, ದೇವರು ಎಲೀಷನೆಂಬ ಮನುಷ್ಯನನ್ನು ತನ್ನ ಪ್ರವಾದಿಯನ್ನಾಗಿ ಆರಿಸಿಕೊಂಡನು. ದೇವರು ಎಲೀಷನ ಮೂಲಕ ಅನೇಕ ಅದ್ಭುತಗಳನ್ನು ಮಾಡಿದನು. ಆ ಅದ್ಭುತಗಳಲ್ಲಿ ಒಂದು ನಾಮಾನನ ಜೀವನದಲ್ಲಿ ಸಂಭವಿಸಿತು. ಅವನು ಶತ್ರು ಸೈನ್ಯದ ಸೇನಾಧಿಪತಿಯಾಗಿದ್ದನು, ಆದರೆ ಅವನಿಗೆ ಭೀಕರ ಚರ್ಮರೋಗವಿತ್ತು. ನಾಮಾನನು ಎಲೀಷನ ಕುರಿತು ಕೇಳಿಸಿಕೊಂಡಿದ್ದರಿಂದ ಅವನು ಎಲೀಷನ ಬಳಿಗೆ ಹೋಗಿ ತನ್ನನ್ನು ಸ್ವಸ್ಥಮಾಡಬೇಕೆಂದು ಆತನನ್ನು ಬೇಡಿಕೊಂಡನು. ಎಲೀಷನು ನಾಮಾನನಿಗೆ ಯೊರ್ದನ್ ನದಿಗೆ ಹೋಗಿ ಆ ನೀರಿನಲ್ಲಿ ಏಳು ಬಾರಿ ಮುಳುಗು ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-19-15.jpg)
ನಾಮಾನನು ಕೋಪಗೊಂಡನು. ಅವನು ಅದನ್ನು ಮಾಡಲು ನಿರಾಕರಿಸಿದನು, ಏಕೆಂದರೆ ಇದು ಅವನಿಗೆ ಮೂರ್ಖತನವಾಗಿ ತೋರಿತ್ತು. ಆದರೆ ತರುವಾಯ ಅವನು ತನ್ನ ಮನಸ್ಸನ್ನು ಬದಲಾಯಿಸಿಕೊಂಡನು. ಅವನು ಯೊರ್ದನ್ ನದಿಗೆ ಹೋಗಿ ಏಳು ಸಾರಿ ಆ ನೀರಿನಲ್ಲಿ ಮುಳುಗಿದನು. ಅವನು ಕೊನೆಯ ಬಾರಿಗೆ ನೀರಿನಲ್ಲಿ ಮುಳುಗಿ ಹೊರಗೆ ಬಂದಾಗ ದೇವರು ಅವನನ್ನು ಸ್ವಸ್ಥ ಮಾಡಿದನು.
![OBS Image](https://cdn.door43.org/obs/jpg/360px/obs-en-19-16.jpg)
ದೇವರು ಇತರ ಅನೇಕ ಪ್ರವಾದಿಗಳನ್ನು ಸಹ ಇಸ್ರಾಯೇಲ್ ಜನರ ಬಳಿಗೆ ಕಳುಹಿಸಿದನು. ವಿಗ್ರಹಗಳನ್ನು ಆರಾಧಿಸುವುದನ್ನು ನಿಲ್ಲಿಸುವಂತೆ ಅವರೆಲ್ಲರೂ ಜನರಿಗೆ ಹೇಳಿದರು. ಇದಕ್ಕೆ ಬದಲಾಗಿ ಅವರು ಪರಸ್ಪರ ಒಬ್ಬರಿಗೊಬ್ಬರು ನ್ಯಾಯಯುತವಾಗಿ ವರ್ತಿಸಬೇಕು ಮತ್ತು ಒಬ್ಬರಿಗೊಬ್ಬರು ಕರುಣೆಯನ್ನು ತೋರಿಸಬೇಕು ಎಂದು ತಿಳಿಸಿದರು. ಅದು ಮಾತ್ರವಲ್ಲದೆ ಆ ಪ್ರವಾದಿಗಳು ಜನರಿಗೆ “ಕೆಟ್ಟದ್ದನ್ನು ಮಾಡುವುದನ್ನು ನಿಲ್ಲಿಸಬೇಕು ಮತ್ತು ಅದಕ್ಕೆ ಬದಲಾಗಿ ದೇವರಿಗೆ ವಿಧೇಯರಾಗಬೇಕು” ಎಂದು ಎಚ್ಚರಿಕೆ ಕೊಟ್ಟರು. ಜನರು ಇದನ್ನು ಮಾಡದಿದ್ದರೆ, ದೇವರು ಅವರನ್ನು ತಪ್ಪಿತಸ್ಥರೆಂದು ನಿರ್ಣಯಿಸಿ, ಆತನು ಅವರನ್ನು ಶಿಕ್ಷಿಸುವನು ಎಂದು ಅವರಿಗೆ ತಿಳಿಸಲಾಗಿತ್ತು.
![OBS Image](https://cdn.door43.org/obs/jpg/360px/obs-en-19-17.jpg)
ಅನೇಕ ಬಾರಿ ಜನರು ದೇವರಿಗೆ ವಿಧೇಯರಾಗಲಿಲ್ಲ. ಅವರು ಅನೇಕವೇಳೆ ಪ್ರವಾದಿಗಳನ್ನು ಹಿಂಸೆಪಡಿಸಿದ್ದರು ಮತ್ತು ಕೆಲವೊಮ್ಮೆ ಅವರನ್ನು ಕೊಂದುಹಾಕಿದರು. ಒಮ್ಮೆ ಅವರು ಪ್ರವಾದಿಯಾದ ಯೆರೆಮೀಯನನ್ನು ಒಣ ಬಾವಿಗೆ ಹಾಕಿ ಸಾಯುವಂತೆ ಅವನನ್ನು ಅಲ್ಲಿಯೇ ಬಿಟ್ಟುಬಿಟ್ಟರು. ಅವನು ಬಾವಿಯ ಕೆಳಭಾಗದಲ್ಲಿರುವ ಕೆಸರಿನೊಳಗೆ ಸಿಕ್ಕಿಕೊಂಡನು. ಆದರೆ ಅರಸನು ಅವನ ಮೇಲೆ ಕರುಣೆಯನ್ನು ತೋರಿ, ಅವನು ಸಾಯುವುದಕ್ಕಿಂತ ಮುಂಚೆ ಯೆರೆಮೀಯನನ್ನು ಬಾವಿಯಿಂದ ಎತ್ತುವಂತೆ ತನ್ನ ಸೇವಕರಿಗೆ ಆಜ್ಞಾಪಿಸಿದನು.
![OBS Image](https://cdn.door43.org/obs/jpg/360px/obs-en-19-18.jpg)
ಜನರು ಅವರನ್ನು ದ್ವೇಷಿಸುತ್ತಿದ್ದರೂ ಸಹ ಪ್ರವಾದಿಗಳು ದೇವರಿಗಾಗಿ ಮಾತನಾಡುತ್ತಿದ್ದರು. ಪಶ್ಚಾತ್ತಾಪ ಪಡದಿದ್ದರೆ ದೇವರು ಅವರನ್ನು ನಾಶಮಾಡುವನೆಂದು ಅವರು ಜನರನ್ನು ಎಚ್ಚರಿಸಿದರು. ದೇವರು ಮೆಸ್ಸೀಯನನ್ನು ಕಳುಹಿಸುವುದಾಗಿ ವಾಗ್ದಾನ ಮಾಡಿದ್ದಾನೆಂದು ಅವರು ಜನರಿಗೆ ನೆನಪಿಸಿದರು.
_ಸತ್ಯವೇದದ ಕಥೆ: 1 ಅರಸುಗಳು 16-18; 2 ಅರಸುಗಳು 5; ಯೆರೆಮೀಯನು 38_

56
content/20.md Normal file
View File

@ -0,0 +1,56 @@
# 20. ಸೆರೆವಾಸ (ಗಡೀಪಾರು) ಮತ್ತು ಹಿಂದಿರುಗುವಿಕೆ
![OBS Image](https://cdn.door43.org/obs/jpg/360px/obs-en-20-01.jpg)
ಇಸ್ರಾಯೇಲ್ ರಾಜ್ಯ ಮತ್ತು ಯೆಹೂದ್ಯ ರಾಜ್ಯ ಇವೆರಡೂ ದೇವರಿಗೆ ವಿರುದ್ಧವಾಗಿ ಪಾಪಮಾಡಿತು. ದೇವರು ಸೀನಾಯಿ ಬೆಟ್ಟದಲ್ಲಿ ಅವರೊಂದಿಗೆ ಮಾಡಿಕೊಂಡಿದ ಒಡಂಬಡಿಕೆಯನ್ನು ಅವರು ಮುರಿದುಹಾಕಿದರು. ಅವರು ಪಶ್ಚಾತ್ತಾಪಪಟ್ಟು ಆತನನ್ನು ಪುನಃ ಆರಾಧಿಸುವಂತೆ ಅವರನ್ನು ಎಚ್ಚರಿಸಲು ದೇವರು ತನ್ನ ಪ್ರವಾದಿಗಳನ್ನು ಕಳುಹಿಸಿದನು, ಆದರೆ ಅವರು ವಿಧೇಯರಾಗಲು ನಿರಾಕರಿಸಿದರು.
![OBS Image](https://cdn.door43.org/obs/jpg/360px/obs-en-20-02.jpg)
ಆದ್ದರಿಂದ ದೇವರು ಅವರ ಶತ್ರುಗಳು ಅವರನ್ನು ನಾಶಮಾಡುವಂತೆ ಮಾಡಿ ಎರಡೂ ರಾಜ್ಯಗಳನ್ನು ಶಿಕ್ಷಿಸಿದನು. ಅಶ್ಶೂರ್ಯರು ಅತ್ಯಂತ ಶಕ್ತಿಶಾಲಿಯಾಗಿ ಮಾರ್ಪಾಟ್ಟಂತಹ ಮತ್ತೊಂದು ಜನಾಂಗವಾಗಿತ್ತು. ಅವರು ಇತರ ಜನಾಂಗಗಳಿಗೆ ಬಹಳ ಕ್ರೂರರಾಗಿದ್ದರು. ಅವರು ಬಂದು ಇಸ್ರಾಯೇಲ್ ರಾಜ್ಯವನ್ನು ನಾಶಮಾಡಿದರು. ಅಶ್ಶೂರ್ಯರು ಇಸ್ರಾಯೇಲ್ ರಾಜ್ಯದಲ್ಲಿ ಬಹಳ ಜನರನ್ನು ಕೊಂದರು, ಅವರು ತಾವು ಬಯಸಿದ್ದೆಲ್ಲವನ್ನೂ ತೆಗೆದುಕೊಂಡು, ದೇಶದ ಬಹುಭಾಗವನ್ನು ಸುಟ್ಟುಹಾಕಿದರು.
![OBS Image](https://cdn.door43.org/obs/jpg/360px/obs-en-20-03.jpg)
ಅಶ್ಶೂರ್ಯರು ಎಲ್ಲಾ ನಾಯಕರನ್ನು, ಶ್ರೀಮಂತರನ್ನು ಮತ್ತು ಅಮೂಲ್ಯ ವಸ್ತುಗಳನ್ನು ಮಾಡುವಂಥ ಜನರನ್ನು ಒಟ್ಟುಗೂಡಿಸಿದರು. ಅವರು ಅವರನ್ನು ಅಶ್ಶೂರ್ಯಕ್ಕೆ ಕರೆದುಕೊಂಡು ಹೋದರು. ತುಂಬಾ ಬಡವರಾದ ಇಸ್ರಾಯೇಲ್ಯರು ಮಾತ್ರವೇ ಇಸ್ರಾಯೇಲಿನಲ್ಲಿಯೇ ಇದ್ದರು.
![OBS Image](https://cdn.door43.org/obs/jpg/360px/obs-en-20-04.jpg)
ಅನಂತರ ಆ ದೇಶದಲ್ಲಿ ವಾಸಿಸುವುದಕ್ಕಾಗಿ ಅಶ್ಶೂರ್ಯರು ಅನ್ಯದೇಶದವರನ್ನು ಕರೆತಂದರು. ಅನ್ಯದೇಶದವರು ಆ ಪಟ್ಟಣಗಳನ್ನು ಪುನಃ ಕಟ್ಟಿದರು. ಅವರು ಅಲ್ಲಿ ಉಳಿದಿದ್ದ ಇಸ್ರಾಯೇಲ್ಯರೊಂದಿಗೆ ಮದುವೆಯಾದರು. ಈ ಜನರ ಸಂತತಿಯವರನ್ನು ಸಮಾರ್ಯದವರು ಎಂದು ಕರೆಯಲಾಗುತ್ತದೆ.
![OBS Image](https://cdn.door43.org/obs/jpg/360px/obs-en-20-05.jpg)
ಅವರು ಆತನನ್ನು ನಂಬದೆ ಮತ್ತು ಆತನಿಗೆ ವಿಧೇಯರಾಗದೆ ಇದ್ದರಿಂದ ದೇವರು ಇಸ್ರಾಯೇಲ್ ರಾಜ್ಯದ ಜನರನ್ನು ಹೇಗೆ ಶಿಕ್ಷಿಸಿದನು ಎಂದು ಯೆಹೂದ್ಯ ರಾಜ್ಯದಲ್ಲಿದ್ದ ಜನರು ನೋಡಿದರು. ಆದರೂ ಅವರು ವಿಗ್ರಹಗಳನ್ನೂ, ಕಾನಾನ್ಯರ ದೇವರುಗಳನ್ನೂ ಪೂಜಿಸುತ್ತಿದ್ದರು. ದೇವರು ಅವರನ್ನು ಎಚ್ಚರಿಸಲು ಪ್ರವಾದಿಗಳನ್ನು ಕಳುಹಿಸಿದನು, ಆದರೆ ಅವರು ಕಿವಿಗೊಡಲು ನಿರಾಕರಿಸಿದರು.
![OBS Image](https://cdn.door43.org/obs/jpg/360px/obs-en-20-06.jpg)
ಅಶ್ಶೂರ್ಯರು ಇಸ್ರಾಯೇಲ್ ರಾಜ್ಯವನ್ನು ನಾಶಮಾಡಿ ಸುಮಾರು 100 ವರ್ಷಗಳಾದ ನಂತರ, ಯೆಹೂದ್ಯ ರಾಜ್ಯಕ್ಕೆ ಮುತ್ತಿಗೆಹಾಕಲು, ಬಾಬಿಲೋನಿಯದ ಅರಸನಾದ ನೆಬೂಕದ್ನೆಚ್ಚರನನ್ನು ದೇವರು ಕಳುಹಿಸಿದನು. ಬಾಬಿಲೋನ್ ಶಕ್ತಿಶಾಲಿಯಾದ ದೇಶವಾಗಿತ್ತು. ಯೆಹೂದ್ಯದ ಅರಸನು ನೆಬೂಕದ್ನೆಚ್ಚರನ ದಾಸನಾಗಿರಲು ಮತ್ತು ಪ್ರತಿ ವರ್ಷವೂ ಅವನಿಗೆ ಬಹಳಷ್ಟು ಹಣವನ್ನು ಕೊಡಲು ಒಪ್ಪಿಕೊಂಡನು.
![OBS Image](https://cdn.door43.org/obs/jpg/360px/obs-en-20-07.jpg)
ಆದರೆ ಕೆಲವು ವರ್ಷಗಳಾದ ನಂತರ ಯೆಹೂದ್ಯದ ಅರಸನು ಬಾಬಿಲೋನಿಗೆ ವಿರೋಧವಾಗಿ ತಿರುಗಿಬಿದ್ದನು. ಆದ್ದರಿಂದ, ಬಾಬಿಲೋನಿಯದವರು ಮತ್ತೆ ಬಂದು ಯೆಹೂದ್ಯ ರಾಜ್ಯವನ್ನು ಮುತ್ತಿಗೆಹಾಕಿದರು. ಅವರು ಯೆರೂಸಲೇಮ್ ಪಟ್ಟಣವನ್ನು ವಶಪಡಿಸಿಕೊಂಡರು, ದೇವಾಲಯವನ್ನು ನಾಶಮಾಡಿದರು ಮತ್ತು ಪಟ್ಟಣದ ಹಾಗೂ ದೇವಾಲಯದ ಎಲ್ಲಾ ಸಂಪತ್ತು ತೆಗೆದುಕೊಂಡು ಹೋದರು.
![OBS Image](https://cdn.door43.org/obs/jpg/360px/obs-en-20-08.jpg)
ತಮಗೆ ವಿರುದ್ದವಾಗಿ ತಿರುಗಿಬಿದ್ದ ಯೆಹೂದ್ಯದ ಅರಸನನ್ನು ಶಿಕ್ಷಿಸಲು, ನೆಬೂಕದ್ನೆಚ್ಚರನ ಸೈನಿಕರು ಅರಸನ ಗಂಡುಮಕ್ಕಳನ್ನು ಅವನ ಮುಂದೆಯೇ ಕೊಂದುಹಾಕಿದರು ನಂತರ ಅವನನ್ನು ಕುರುಡನನ್ನಾಗಿ ಮಾಡಿದರು. ಅದಾದನಂತರ, ಬಾಬೇಲಿನಲ್ಲಿರುವ ಸೆರೆಮನೆಯಲ್ಲಿ ಸಾಯುವಂತೆ ಅವರು ಅರಸನನ್ನು ಹಿಡಿದುಕೊಂಡು ಹೋದರು.
![OBS Image](https://cdn.door43.org/obs/jpg/360px/obs-en-20-09.jpg)
ನೆಬೂಕದ್ನೆಚ್ಚರನು ಮತ್ತು ಅವನ ಸೈನ್ಯವು ಯೆಹೂದ್ಯ ರಾಜ್ಯದ ಎಲ್ಲಾ ಜನರನ್ನು ಬಾಬೇಲಿಗೆ ಹಿಡಿದುಕೊಂಡು ಹೋದರು, ಹೊಲಗಳಲ್ಲಿ ವ್ಯವಸಾಯ ಮಾಡುವುದಕ್ಕಾಗಿ ಬಡಜನರನ್ನು ಮಾತ್ರ ಬಿಟ್ಟುಹೋದರು. ದೇವರ ಜನರು ವಾಗ್ದತ್ತ ದೇಶವನ್ನು ಬಿಟ್ಟುಹೋಗುವಂತೆ ಬಲತ್ಕಾರ ಮಾಡಿದ ಈ ಸಮಯಾವಧಿಯನ್ನು ಸೆರೆವಾಸ ಅಥವಾ ಗಡೀಪಾರು ಎಂದು ಕರೆಯಲಾಗುತ್ತದೆ.
![OBS Image](https://cdn.door43.org/obs/jpg/360px/obs-en-20-10.jpg)
ದೇವರು ಅವರನ್ನು ಸೆರೆವಾಸಕ್ಕೆ ತೆಗೆದುಕೊಂಡು ಹೋಗುವ ಮೂಲಕ ತನ್ನ ಜನರನ್ನು ಅವರ ಪಾಪಕ್ಕಾಗಿ ಶಿಕ್ಷಿಸಿದರೂ ಸಹ, ಆತನು ಅವರನ್ನಾಗಲಿ ಅಥವಾ ತನ್ನ ವಾಗ್ದಾನಗಳನ್ನಾಗಲಿ ಮರೆಯಲಿಲ್ಲ. ದೇವರು ತನ್ನ ಜನರನ್ನು ಗಮನಿಸುತ್ತಿದ್ದನು ಮತ್ತು ತನ್ನ ಪ್ರವಾದಿಗಳ ಮೂಲಕ ಅವರೊಂದಿಗೆ ಮಾತನಾಡುತ್ತಿದ್ದನು. ಅವರು ಎಪ್ಪತ್ತು ವರ್ಷಗಳಾದ ನಂತರ, ಮತ್ತೆ ವಾಗ್ದತ್ತ ದೇಶಕ್ಕೆ ಹಿಂದಿರುಗಿ ಹೋಗುವರು ಎಂದು ಆತನು ವಾಗ್ದಾನ ಮಾಡಿದನು.
![OBS Image](https://cdn.door43.org/obs/jpg/360px/obs-en-20-11.jpg)
ಸುಮಾರು ಎಪ್ಪತ್ತು ವರ್ಷಗಳಾದ ನಂತರ, ಪರ್ಷಿಯನ್ನರ ಅರಸನಾದ ಕೊರೇಷನು ಬಾಬಿಲೋನ್ ಸಾಮ್ರಾಜ್ಯವನ್ನು ಸೋಲಿಸಿದನು, ಆದ್ದರಿಂದ ಬಾಬಿಲೋನ್ ಸಾಮ್ರಾಜ್ಯಕ್ಕೆ ಬದಲಾಗಿ ಪರ್ಷಿಯನ್ ಸಾಮ್ರಾಜ್ಯವು ಅನೇಕ ದೇಶಗಳನ್ನು ಆಳುತ್ತಿತ್ತು. ಈ ಸಮಯದಲ್ಲಿ ಇಸ್ರಾಯೇಲ್ಯರನ್ನು ಯೆಹೂದ್ಯರು ಎಂದು ಕರೆಯಲಾಗುತ್ತಿತ್ತು. ಅವರಲ್ಲಿ ಹೆಚ್ಚಿನವರು ಬಾಬಿಲೋನಿನಲ್ಲಿ ತಮ್ಮ ಇಡೀ ಜೀವನವನ್ನು ಕಳೆದರು. ವೃದ್ಧರಾದ ಕೆಲವು ಮಂದಿ ಯೆಹೂದ್ಯರು ಮಾತ್ರವೇ ಯೆಹೂದ ದೇಶವನ್ನು ನೆನಪಿಸಿಕೊಂಡರು.
![OBS Image](https://cdn.door43.org/obs/jpg/360px/obs-en-20-12.jpg)
ಪರ್ಷಿಯನ್ನರು ಬಹಳ ಬಲಿಷ್ಠರಾಗಿದ್ದರು, ಆದರೆ ಅವರು ತಾವು ವಶಪಡಿಸಿಕೊಂಡ ಜನರ ಮೇಲೆ ಕರುಣೆಯುಳ್ಳವರಾಗಿದ್ದರು. ಕೊರೇಷನು ಪರ್ಷಿಯನ್ನರ ಅರಸನಾಗಿ ಸ್ವಲ್ಪ ಸಮಯವಾದ ನಂತರ, ಯೆಹೂದಕ್ಕೆ ಹಿಂದಿರುಗಿ ಹೋಗಲು ಬಯಸುವಂಥ ಯೆಹೂದ್ಯರು ಪರ್ಷಿಯಾ ದೇಶವನ್ನು ಬಿಟ್ಟು ಯೆಹೂದಕ್ಕೆ ಹಿಂದಿರುಗಿ ಹೋಗಬಹುದು ಎಂದು ಆದೇಶ ನೀಡಿದನು. ದೇವಾಲಯದ ಪುನರ್ನಿರ್ಮಾಣಕ್ಕಾಗಿ ಅವನು ಹಣವನ್ನೂ ಸಹ ಕೊಟ್ಟನು! ಆದ್ದರಿಂದ, ಸೆರೆವಾಸದ ಎಪ್ಪತ್ತು ವರ್ಷಗಳಾದ ನಂತರ ಯೆಹೂದ್ಯರ ಚಿಕ್ಕ ಗುಂಪೊಂದು ಯೆರೂಸಲೇಮಿನ ಪಟ್ಟಣಕ್ಕೆ ಹಿಂದಿರುಗಿತು.
![OBS Image](https://cdn.door43.org/obs/jpg/360px/obs-en-20-13.jpg)
ಜನರು ಯೆರೂಸಲೇಮಿಗೆ ಬಂದಾಗ, ಅವರು ದೇವಾಲಯವನ್ನು ಮತ್ತು ಪಟ್ಟಣದ ಸುತ್ತಲಿನ ಗೋಡೆಯನ್ನು ಪುರ್ನನಿರ್ಮಿಸಿದರು. ಪರ್ಷಿಯನ್ನರು ಇನ್ನೂ ಅವರನ್ನು ಆಳುತ್ತಿದ್ದರು, ಆದರೆ ಅವರು ಪುನಃ ವಾಗ್ದತ್ತ ದೇಶದಲ್ಲಿ ವಾಸಿಸುತ್ತಿದ್ದರು ಮತ್ತು ದೇವಾಲಯದಲ್ಲಿ ಆರಾಧಿಸುತ್ತಿದ್ದರು.
_ಸತ್ಯವೇದದ ಕಥೆ: 2 ಅರಸುಗಳು 17; 24-25; 2 ಪೂರ್ವಕಾಲವೃತ್ತಾಂತ 36; ಎಜ್ರನು 1-10; ನೆಹೆಮೀಯನು 1-13_

64
content/21.md Normal file
View File

@ -0,0 +1,64 @@
# 21. ದೇವರು ಮೆಸ್ಸೀಯನನ್ನು ಕಳುಹಿಸುವೆನೆಂದು ಮಾಡಿದ ವಾಗ್ದಾನ
![OBS Image](https://cdn.door43.org/obs/jpg/360px/obs-en-21-01.jpg)
ದೇವರು ತಾನು ಲೋಕವನ್ನು ಸೃಷ್ಟಿಸಿದಾಗಲೇ, ಸ್ವಲ್ಪ ಕಾಲದ ತರುವಾಯ ತಾನು ಮೆಸ್ಸೀಯನನ್ನು ಲೋಕಕ್ಕೆ ಕಳುಹಿಸುವೆನು ಎಂದು ಆತನಿಗೆ ತಿಳಿದಿತ್ತು. ಆತನು ಇದನ್ನು ಮಾಡುವೆನೆಂದು ಆದಾಮ ಹವ್ವರಿಗೆ ವಾಗ್ದಾನ ಮಾಡಿದ್ದನು. ಹವ್ವಳ ಸಂತಾನದವನು ಹುಟ್ಟುವವನು ಸರ್ಪದ ತಲೆಯನ್ನು ಜಜ್ಜುವನು ಎಂದು ಆತನು ಮೊದಲೇ ತಿಳಿಸಿದ್ದನು . ಹವ್ವಳನ್ನು ವಂಚಿಸಿದ ಸರ್ಪವು ಖಂಡಿತವಾಗಿಯೂ ಸೈತಾನನೇ ಆಗಿದ್ದಾನೆ. ಮೆಸ್ಸೀಯನು ಸೈತಾನನನ್ನು ಸಂಪೂರ್ಣವಾಗಿ ಸೋಲಿಸುವನೆಂದು ದೇವರು ಯೋಜಿಸಿದನು.
![OBS Image](https://cdn.door43.org/obs/jpg/360px/obs-en-21-02.jpg)
ಅಬ್ರಹಾಮನ ಮೂಲಕ ಲೋಕದ ಎಲ್ಲಾ ಜನಾಂಗಗಳು ಆಶೀರ್ವಾದವನ್ನು ಹೊಂದಿಕೊಳ್ಳುವವು ಎಂದು ದೇವರು ಅವನಿಗೆ ವಾಗ್ದಾನ ಮಾಡಿದನು. ಸ್ವಲ್ಪ ಕಾಲವಾದ ಮೇಲೆ ಮೆಸ್ಸೀಯನನ್ನು ಕಳುಹಿಸುವ ಮೂಲಕ ದೇವರು ಈ ವಾಗ್ದಾನವನ್ನು ನೆರವೇರಿಸುವುದಾಗಿ ತಿಳಿದಿದ್ದನು. ಮೆಸ್ಸೀಯನು ಲೋಕದಲ್ಲಿರುವ ಎಲ್ಲಾ ಜನಾಂಗಗಳ ಜನರನ್ನು ಅವರ ಪಾಪದಿಂದ ಬಿಡಿಸಿ ರಕ್ಷಿಸುವನು.
![OBS Image](https://cdn.door43.org/obs/jpg/360px/obs-en-21-03.jpg)
ಭವಿಷ್ಯದಲ್ಲಿ ಮೋಶೆಯಂತಹ ಮತ್ತೊಬ್ಬ ಪ್ರವಾದಿಯನ್ನು ತಾನು ಕಳುಹಿಸುವುದಾಗಿ ದೇವರು ಮೋಶೆಗೆ ವಾಗ್ದಾನ ಮಾಡಿದನು. ಈ ಪ್ರವಾದಿಯು ಮೆಸ್ಸೀಯನಾಗಿದ್ದಾನೆ. ಮೆಸ್ಸೀಯನನ್ನು ಕಳುಹಿಸುವೆನು ಎಂದು ದೇವರು ಈ ರೀತಿಯಲ್ಲಿ ವಾಗ್ದಾನ ಮಾಡಿದನು.
![OBS Image](https://cdn.door43.org/obs/jpg/360px/obs-en-21-04.jpg)
ದೇವರು ಅರಸನಾದ ದಾವೀದನಿಗೆ ಅವನ ಸ್ವಂತ ಸಂತತಿಯವರಲ್ಲಿ ಒಬ್ಬನು ಮೆಸ್ಸೀಯನಾಗುವನು ಎಂದು ವಾಗ್ದಾನ ಮಾಡಿದನು. ಆತನು ಅರಸನಾಗಿರುವನು ಮತ್ತು ದೇವರ ಜನರನ್ನು ಶಾಶ್ವತವಾಗಿ ಆಳುವನು.
![OBS Image](https://cdn.door43.org/obs/jpg/360px/obs-en-21-05.jpg)
ದೇವರು ಪ್ರವಾದಿಯಾದ ಯೆರೆಮೀಯನೊಂದಿಗೆ ಮಾತನಾಡಿ, ತಾನು ಅವನೊಂದಿಗೆ ಒಂದು ದಿನ ಹೊಸ ಒಡಂಬಡಿಕೆಯನ್ನು ಸ್ಥಾಪಿಸುವುದಾಗಿ ಹೇಳಿದನು. ಈ ಹೊಸ ಒಡಂಬಡಿಕೆಯು ಸಿನಾಯಿ ಬೆಟ್ಟದಲ್ಲಿ ಇಸ್ರಾಯೇಲರೊಂದಿಗೆ ಮಾಡಿಕೊಂಡಂಥ ಹಳೆಯ ಒಡಂಬಡಿಕೆಯಂತದಲ್ಲ . ಆತನು ಜನರೊಂದಿಗೆ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವಾಗ, ಅವರು ತನ್ನನ್ನು ವೈಯಕ್ತಿಕವಾಗಿ ತಿಳಿದುಕೊಳ್ಳುವಂತೆ ಆತನು ಮಾಡುವನು. ಪ್ರತಿಯೊಬ್ಬ ವ್ಯಕ್ತಿಯು ಆತನನ್ನು ಪ್ರೀತಿಸಲು ಮತ್ತು ಆತನ ನಿಯಮಗಳಿಗೆ ವಿಧೇಯನಾಗಲು ಬಯಸುವನು. ಇದು ದೇವರು ಅವರ ಹೃದಯಗಳಲ್ಲಿ ನಿಯಮವನ್ನು ಬರೆಯುವ ರೀತಿಯಲ್ಲಿರುವುದು ಎಂದು ಆತನು ಹೇಳಿದನು. ಅವರು ಆತನ ಜನರಾಗಿರುವರು ಮತ್ತು ದೇವರು ಅವರ ಪಾಪಗಳನ್ನು ಕ್ಷಮಿಸುವನು. ಅವರೊಂದಿಗೆ ಹೊಸ ಒಡಂಬಡಿಕೆಯನ್ನು ಮಾಡಿಕೊಳ್ಳುವವನು. ಅ ಮೆಸ್ಸಿಯನೇ
![OBS Image](https://cdn.door43.org/obs/jpg/360px/obs-en-21-06.jpg)
ಬರಲಿರುವ ಮೆಸ್ಸೀಯನು ಒಬ್ಬ ಪ್ರವಾದಿಯು, ಯಾಜಕನು, ಮತ್ತು ಅರಸನು ಆಗಿರುವನು ಎಂದು ದೇವರ ಪ್ರವಾದಿಗಳು ಹೇಳಿದ್ದಾರೆ. ಪ್ರವಾದಿಯು ದೇವರ ಮಾತುಗಳನ್ನು ಕೇಳಿಸಿಕೊಂಡು ನಂತರ ದೇವರ ಸಂದೇಶಗಳನ್ನು ಜನರಿಗೆ ಪ್ರಕಟಿಸುವಂಥ ವ್ಯಕ್ತಿಯಾಗಿರುತ್ತಾನೆ. ದೇವರು ತಾನು ಕಳುಹಿಸುವೆನೆಂದು ವಾಗ್ದಾನ ಮಾಡಿದಂಥ ಮೆಸ್ಸೀಯನು ಪರಿಪೂರ್ಣನಾದ ಪ್ರವಾದಿಯಾಗಿರುವನು. ಅಂದರೆ ಮೆಸ್ಸೀಯನು ದೇವರ ಸಂದೇಶಗಳನ್ನು ಪರಿಪೂರ್ಣವಾಗಿ ಕೇಳಿಸಿಕೊಳ್ಳುವನು, ಆತನು ಅವುಗಳನ್ನು ಪರಿಪೂರ್ಣವಾಗಿ ಅರ್ಥಮಾಡಿಕೊಳ್ಳುವನು, ಮತ್ತು ಆತನು ಜನರಿಗೆ ಪರಿಪೂರ್ಣವಾಗಿ ಬೋಧಿಸುವನು.
![OBS Image](https://cdn.door43.org/obs/jpg/360px/obs-en-21-07.jpg)
ಇಸ್ರಾಯೇಲ್ಯರ ಯಾಜಕರು ಜನರಿಗಾಗಿ ದೇವರಿಗೆ ಯಜ್ಞಗಳನ್ನು ಅರ್ಪಿಸುತ್ತಾ ಇದ್ದರು. ಈ ಯಜ್ಞಗಳು ದೇವರು ಜನರನ್ನು ಅವರ ಪಾಪಗಳಿಗಾಗಿ ಶಿಕ್ಷಿಸುವುದಕ್ಕೆ ಬದಲಾಗಿದ್ದಂಥವುಗಳು ಆಗಿದ್ದವು. ಯಾಜಕರು ಜನರಿಗಾಗಿ ದೇವರ ಬಳಿಯಲ್ಲಿ ಪ್ರಾರ್ಥಿಸುತ್ತಿದ್ದರು. ಆದರೂ, ಮೆಸ್ಸೀಯನೇ ಪರಿಪೂರ್ಣನಾದ ಮಹಾಯಾಜಕನಾಗಿದ್ದನು, ಏಕೆಂದರೆ ಆತನು ತನ್ನನ್ನೇ ದೇವರಿಗೆ ಪರಿಪೂರ್ಣವಾದ ಯಜ್ಞವಾಗಿ ಸಮರ್ಪಿಸುವನು. ಅಂದರೆ ಆತನು ಎಂದಿಗೂ ಪಾಪಮಾಡುವುದಿಲ್ಲ ಮತ್ತು ಆತನು ಸ್ವತಃ ತನ್ನನ್ನೇ ಯಜ್ಞವಾಗಿ ಒಪ್ಪಿಸಿಕೊಡುವಾಗ, ಪಾಪ ಪರಿಹಾರಕ್ಕಾಗಿ ಬೇರೆ ಯಾವುದೇ ಯಜ್ಞದ ಅಗತ್ಯವಿರುವುದಿಲ್ಲ.
![OBS Image](https://cdn.door43.org/obs/jpg/360px/obs-en-21-08.jpg)
ಅರಸರು ಮತ್ತು ಮುಖಂಡರು ಜನಾಂಗಗಳನ್ನು ಆಳುತ್ತಾರೆ, ಆದರೆ ಅವರು ಕೆಲವೊಮ್ಮೆ ತಪ್ಪುಗಳನ್ನು ಮಾಡುತ್ತಾರೆ. ಅರಸನಾದ ದಾವೀದನು ಇಸ್ರಾಯೇಲ್ಯರನ್ನು ಮಾತ್ರ ಆಳಿದನು. ಆದರೆ ದಾವೀದನ ಸಂತತಿಯವನಾದ ಮೆಸ್ಸೀಯನು ಇಡೀ ಲೋಕವನ್ನು ಆಳುತ್ತಾನೆ ಮತ್ತು ಅವನು ಶಾಶ್ವತವಾಗಿ ಆಳುವನು. ಅಷ್ಟು ಮಾತ್ರವಲ್ಲದೆ ಆತನು ಯಾವಾಗಲೂ ನ್ಯಾಯಯುತವಾಗಿ ಆಳುವನು ಮತ್ತು ಸರಿಯಾದ ನಿರ್ಧಾರಗಳನ್ನು ತೆಗೆದುಕೊಳ್ಳುವನು.
![OBS Image](https://cdn.door43.org/obs/jpg/360px/obs-en-21-09.jpg)
ದೇವರ ಪ್ರವಾದಿಗಳು ಮೆಸ್ಸೀಯನ ಕುರಿತು ಇನ್ನೂ ಅನೇಕ ವಿಷಯಗಳನ್ನು ಹೇಳಿದರು. ಉದಾಹರಣೆಗೆ, ಮೆಸ್ಸೀಯನು ಬರುವುದಕ್ಕಿಂತ ಮೊದಲು ಇನ್ನೊಬ್ಬ ಪ್ರವಾದಿಯು ಬರುವನೆಂದು ಪ್ರವಾದಿಯಾದ ಮಲಾಕಿಯನು ಹೇಳಿದ್ದಾನೆ. ಆ ಪ್ರವಾದಿಯು ಅತ್ಯಂತ ಪ್ರಾಮುಖ್ಯವಾದವನಾಗಿರುವನು. ಪ್ರವಾದಿಯಾದ ಯೆಶಾಯನು, ಮೆಸ್ಸೀಯನು ಕನ್ನಿಕೆಯಲ್ಲಿ ಜನಿಸುತ್ತಾನೆ ಎಂದು ಬರೆದನು. ಮೆಸ್ಸೀಯನು ಬೇತ್ಲೆಹೇಮ್ ಎಂಬ ಊರಿನಲ್ಲಿ ಜನಿಸುತ್ತಾನೆ ಎಂದು ಪ್ರವಾದಿಯಾದ ಮೀಕನು ಹೇಳಿದನು.
![OBS Image](https://cdn.door43.org/obs/jpg/360px/obs-en-21-10.jpg)
ಮೆಸ್ಸೀಯನು ಗಲಿಲಾಯ ಸೀಮೆಯಲ್ಲಿ ವಾಸಿಸುವನು ಎಂದು ಪ್ರವಾದಿಯಾದ ಯೆಶಾಯನು ಹೇಳಿದನು. ಮೆಸ್ಸೀಯನು ತುಂಬಾ ದುಃಖಿತರಾಗಿರುವ ಜನರನ್ನು ಸಂತೈಸುವನು. ಆತನು ಸೆರೆಯಲ್ಲಿರುವವರನ್ನು ಬಿಡುಗಡೆಮಾಡುವನು. ಕೇಳಲು, ನೋಡಲು, ಮಾತನಾಡಲು, ಅಥವಾ ನಡೆಯಲು ಆಗದಂಥ ರೋಗಿಗಳನ್ನು ಸಹ ಮೆಸ್ಸೀಯನು ಗುಣಪಡಿಸುವನು.
![OBS Image](https://cdn.door43.org/obs/jpg/360px/obs-en-21-11.jpg)
ಜನರು ಮೆಸ್ಸೀಯನನ್ನು ದ್ವೇಷಿಸುತ್ತಾರೆ ಮತ್ತು ಆತನನ್ನು ಅಂಗೀಕರಿಸಿಕೊಳ್ಳಲು ನಿರಾಕರಿಸುತ್ತಾರೆ ಎಂದು ಪ್ರವಾದಿಯಾದ ಯೆಶಾಯನು ಹೇಳಿದನು. ಮೆಸ್ಸೀಯನ ಸ್ನೇಹಿತನು ಆತನಿಗೆ ದ್ರೋಹಮಾಡುವನು ಎಂದು ಇತರ ಪ್ರವಾದಿಗಳು ಹೇಳಿದರು. ಈ ಸ್ನೇಹಿತನು ಇದನ್ನು ಮಾಡುವುದಕ್ಕಾಗಿ ಬೇರೆ ಜನರಿಂದ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಳ್ಳುತ್ತಾನೆಂದು ಪ್ರವಾದಿಯಾದ ಜೆಕರ್ಯನು ಹೇಳಿದನು. ಜನರು ಮೆಸ್ಸೀಯನನ್ನು ಕೊಲ್ಲುತ್ತಾರೆ ಮತ್ತು ಅವರು ಆತನ ಬಟ್ಟೆಗಾಗಿ ಚೀಟು ಹಾಕುತ್ತಾರೆ ಎಂದು ಕೆಲವು ಪ್ರವಾದಿಗಳು ಎಂದು ಹೇಳಿದ್ದಾರೆ.
![OBS Image](https://cdn.door43.org/obs/jpg/360px/obs-en-21-12.jpg)
ಮೆಸ್ಸೀಯನು ಹೇಗೆ ಸಾಯುತ್ತಾನೆ ಎಂಬುದರ ಕುರಿತು ಪ್ರವಾದಿಗಳು ಹೇಳಿದ್ದಾರೆ. ಜನರು ಮೆಸ್ಸೀಯನಿಗೆ ಉಗುಳುವರು, ಅಪಹಾಸ್ಯ ಮಾಡುವರು ಮತ್ತು ಹೊಡೆಯುವರು ಎಂದು ಯೆಶಾಯನು ಪ್ರವಾದಿಸಿದನು. ಆತನು ಯಾವ ತಪ್ಪನ್ನು ಮಾಡದಿದ್ದರೂ ಸಹ ಅವರು ಆತನನ್ನು ತಿವಿಯುವರು ಮತ್ತು ಆತನು ಅತಿ ಸಂಕಟದಿಂದ ಮತ್ತು ಯಾತನೆಯಿಂದ ಸಾಯುವನು ಎಂದು ಪ್ರವಾದಿಗಳು ತಿಳಿಸಿದರು .
![OBS Image](https://cdn.door43.org/obs/jpg/360px/obs-en-21-13.jpg)
ಮೆಸ್ಸೀಯನು ಪಾಪಮಾಡುವುದಿಲ್ಲ ಎಂದು ಸಹ ಪ್ರವಾದಿಗಳು ಹೇಳಿದ್ದಾರೆ. ಆತನು ಪರಿಪೂರ್ಣನಾಗಿರುವನು. ಆದರೆ ಆತನು ಸಾಯುವನು ಏಕೆಂದರೆ ದೇವರು ಇತರ ಜನರ ಪಾಪಗಳಿಗಾಗಿ ಆತನನ್ನು ಶಿಕ್ಷಿಸುವನು. ಆತನು ಸತ್ತಾಗ ಜನರು ದೇವರೊಂದಿಗೆ ಸಮಾಧಾನವುಳ್ಳವರಾಗಿರಲು ಸಾಧ್ಯವಾಗುತ್ತದೆ. ಅದಕಾರಣವೇ ದೇವರು ಮೆಸ್ಸೀಯನನ್ನು ಮರಣಕ್ಕೊಳ್ಳಗಾಗುವಂತೆ ಮಾಡಲು ಇಚ್ಛಿಸಿದನು.
![OBS Image](https://cdn.door43.org/obs/jpg/360px/obs-en-21-14.jpg)
ದೇವರು ಸತ್ತವರೊಳಗಿಂದ ಮೆಸ್ಸೀಯನನ್ನು ಎಬ್ಬಿಸುವನೆಂದು ಸಹ ಪ್ರವಾದಿಗಳು ಹೇಳಿದ್ದಾರೆ. ಇವೆಲ್ಲವು ಹೊಸ ಒಡಂಬಡಿಕೆಯನ್ನು ಮಾಡುವುದಕ್ಕಿರುವಂಥ ದೇವರ ಸಂಕಲ್ಪವಾಗಿದೆ ಎಂದು ಇದು ತೋರಿಸುತ್ತದೆ, ಆದ್ದರಿಂದ ಆತನು ತನಗೆ ವಿರುದ್ಧವಾಗಿ ಪಾಪ ಮಾಡಿದ ಜನರನ್ನು ರಕ್ಷಿಸಬಲ್ಲನು.
![OBS Image](https://cdn.door43.org/obs/jpg/360px/obs-en-21-15.jpg)
ದೇವರು ಮೆಸ್ಸೀಯನ ಕುರಿತು ಅನೇಕ ವಿಷಯಗಳನ್ನು ತನ್ನ ಪ್ರವಾದಿಗಳಿಗೆ ಪ್ರಕಟಪಡಿಸಿದನು, ಆದರೆ ಆ ಪ್ರವಾದಿಗಳ ಒಬ್ಬರ ಕಾಲದಲ್ಲಿಯೂ ಮೆಸ್ಸೀಯನು ಬರಲಿಲ್ಲ. ಈ ಪ್ರವಾದನೆಗಳಲ್ಲಿ ಕೊನೆಯದಾಗಿ ನುಡಿಯಲ್ಪಟ್ಟಂಥ ಪ್ರವಾದನೆಯ 400 ವರ್ಷಗಳ ನಂತರ, ನಿಗದಿಯಾದ ಸರಿಯಾದ ಸಮಯದಲ್ಲಿ, ದೇವರು ಮೆಸ್ಸೀಯನನ್ನು ಲೋಕಕ್ಕೆ ಕಳುಹಿಸುವನು.
_ಸತ್ಯವೇದದ ಕಥೆ: ಆದಿಕಾಂಡ 3:15; 12:1-3; ಧರ್ಮೋಪದೇಶಕಾಂಡ 18:15; 2 ಸಮುವೇಲ 7; ಯೆರೆಮೀಯ 31; ಯೆಶಾಯ 59:16; ದಾನಿಯೇಲ 7; ಮಲಾಕಿ 4:5; ಯೆಶಾಯ 7:14; ಮೀಕ 5:2; ಯೆಶಾಯ 9:1-7; 35:3-5; 61; 53; ಕೀರ್ತನೆ 22:18; 35:19; 69:4; 41:9; ಜೆಕರ್ಯ 11:12-13; ಯೆಶಾಯ 50:6; ಕೀರ್ತನೆ 16:10-11_

32
content/22.md Normal file
View File

@ -0,0 +1,32 @@
# 22. ಯೋಹಾನನ ಜನನ
![OBS Image](https://cdn.door43.org/obs/jpg/360px/obs-en-22-01.jpg)
ಹಿಂದಿನ ಕಾಲದಲ್ಲಿ, ದೇವರು ತನ್ನ ಪ್ರವಾದಿಗಳೊಂದಿಗೆ ಮಾತನಾಡುತ್ತಿದ್ದನು, ಅವರು ಆತನ ಜನರಿಗೆ ಅದನ್ನು ನುಡಿಯುತ್ತಿದ್ದರು. ಅನಂತರ 400 ವರ್ಷಗಳ ಉರುಳಿಹೋದವು ಆದರೆ ಆ ಸಮಯದಲ್ಲಿ ಆತನು ಅವರೊಂದಿಗೆ ಮಾತನಾಡಲಿಲ್ಲ. ಆಗ ದೇವರು ಜಕರೀಯನೆಂಬ ಯಾಜಕನ ಬಳಿಗೆ ದೂತನನ್ನು ಕಳುಹಿಸಿದನು. ಜಕರೀಯನು ಮತ್ತು ಅವನ ಹೆಂಡತಿಯಾದ ಎಲಿಸಬೇತಳು ದೇವರನ್ನು ಗೌರವಿಸುತ್ತಿದ್ದರು. ಅವರು ತುಂಬಾ ವೃದ್ಧರಾಗಿದ್ದರು ಮತ್ತು ಅವಳಿಗೆ ಮಕ್ಕಳಿರಲಿಲ್ಲ.
![OBS Image](https://cdn.door43.org/obs/jpg/360px/obs-en-22-02.jpg)
ದೇವದೂತನು ಜಕರೀಯನಿಗೆ, "ನಿನ್ನ ಹೆಂಡತಿಯು ನಿನಗೆ ಒಬ್ಬ ಮಗನನ್ನು ಹೆರುವಳು. ನೀನು ಅವನಿಗೆ ಯೋಹಾನನೆಂದು ಹೆಸರಿಡಬೇಕು. ದೇವರು ಅವನನ್ನು ಪವಿತ್ರಾತ್ಮನಿಂದ ತುಂಬಿಸುವನು, ಮತ್ತು ಮೆಸ್ಸೀಯನನ್ನು ಸ್ವೀಕರಿಸಿಕೊಳ್ಳಲು ಜನರನ್ನು ಯೋಹಾನನು ಸಿದ್ಧಪಡಿಸುವನು!" ಎಂದು ಹೇಳಿದನು. ಜೆಕರೀಯನು, "ನಾನು ಮತ್ತು ನನ್ನ ಹೆಂಡತಿಯು ತುಂಬಾ ವೃದ್ಧರಾಗಿದ್ದೇವೆ, ಮಕ್ಕಳನ್ನು ಪಡೆಯಲು ನಮ್ಮಿಂದ ಆಗುವುದಿಲ್ಲ! ನೀನು ನನಗೆ ಹೇಳುತ್ತಿರುವುದು ಸತ್ಯವೆಂದು ತಿಳಿದುಕೊಳ್ಳುವುದಾದರೂ ಹೇಗೆ?" ಎಂದು ಪ್ರತ್ಯುತ್ತರವನ್ನು ಕೊಟ್ಟನು.
![OBS Image](https://cdn.door43.org/obs/jpg/360px/obs-en-22-03.jpg)
ದೇವದೂತನು ಜಕರೀಯನಿಗೆ, "ಈ ಶುಭವಾರ್ತೆಯನ್ನು ನಿನಗೆ ತಿಳಿಸುವುದಕ್ಕಾಗಿ ನಾನು ದೇವರಿಂದ ಕಳುಹಿಸಲ್ಪಟ್ಟಿದ್ದೇನೆ. ನೀನು ನನ್ನನ್ನು ನಂಬದೆಹೋದುದರಿಂದ ಮಗು ಹುಟ್ಟುವವರೆಗೂ ನೀನು ಮಾತನಾಡಲಾರದೆ ಇರುವಿ" ಎಂದು ಉತ್ತರಕೊಟ್ಟನು. ಕೂಡಲೇ ಜಕರೀಯನಿಗೆ ಮಾತನಾಡಲು ಆಗದೆಹೋಯಿತು. ಆಗ ಆ ದೂತನು ಜಕರೀಯನನ್ನು ಬಿಟ್ಟುಹೋದನು. ಇದಾದನಂತರ ಜಕರೀಯನು ಮನೆಗೆ ಹಿಂದಿರುಗಿ ಬಂದನು ಮತ್ತು ಅವನ ಹೆಂಡತಿಯು ಗರ್ಭಿಣಿಯಾದಳು.
![OBS Image](https://cdn.door43.org/obs/jpg/360px/obs-en-22-04.jpg)
ಎಲಿಸಬೇತಳು ಆರು ತಿಂಗಳ ಗರ್ಭಿಣಿಯಾಗಿದ್ದಾಗ, ಅದೇ ದೇವದೂತನು ಎಲಿಸಬೇತಳ ಬಂಧುವಿಗೆ ಪ್ರತ್ಯಕ್ಷನಾದನು, ಆಕೆಯ ಹೆಸರು ಮರಿಯಳು. ಅವಳು ಕನ್ನಿಕೆಯಾಗಿದ್ದಳು ಮತ್ತು ಆಕೆಗೆ ಯೋಸೇಫನೆಂಬ ಪುರುಷನೊಂದಿಗೆ ಮದುವೆಯಾಗಲು ನಿಶ್ಚಿತಾರ್ಥವಾಗಿತ್ತು. ದೇವದೂತನು, "ನೀನು ಗರ್ಭಿಣಿಯಾಗಿ ಒಬ್ಬ ಮಗನನ್ನು ಹೆರುವಿ. ನೀನು ಆತನಿಗೆ ಯೇಸುವೆಂದು ಹೆಸರಿಡಬೇಕು. ಆತನು ಪರಾತ್ಪರನಾದ ದೇವರ ಕುಮಾರನಾಗಿರುವನು ಮತ್ತು ಸದಾಕಾಲ ಆಳುವನು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-22-05.jpg)
ಮರಿಯಳು, "ನಾನು ಕನ್ನಿಕೆಯಾಗಿದ್ದೇನೆ ಇದು ಹೇಗಾದೀತು?" ಎಂದು ಕೇಳಿದಳು. ದೇವದೂತನು, "ಪವಿತ್ರಾತ್ಮನು ನಿನ್ನ ಮೇಲೆ ಬರುವನು, ಪರಾತ್ಪರನಾದ ದೇವರ ಶಕ್ತಿಯು ನಿನ್ನ ಮೇಲೆ ಬರುವುದು. ಆದುದರಿಂದ ಆ ಶಿಶುವು ಪವಿತ್ರವಾಗಿರುವುದು ಮತ್ತು ಆತನು ದೇವರ ಮಗನಾಗಿರುವನು" ಎಂದು ವಿವರಿಸಿದನು. ದೇವದೂತನು ಹೇಳಿದ್ದನ್ನು ಮರಿಯಳಯ ನಂಬಿದ್ದಳು.
![OBS Image](https://cdn.door43.org/obs/jpg/360px/obs-en-22-06.jpg)
ಇದು ಸಂಭವಿಸಿದ ಕೂಡಲೇ, ಮರಿಯಳು ಹೋಗಿ ಎಲಿಸಬೇತಳನ್ನು ಭೇಟಿಯಾದಳು. ಮರಿಯಳು ಆಕೆಯನ್ನು ವಂದಿಸಿದ ತಕ್ಷಣವೇ, ಎಲಿಸಬೇತಳ ಕೂಸು ಆಕೆಯ ಗರ್ಭದಲ್ಲಿದ್ದ ಕುಣಿದಾಡಿತು. ದೇವರು ಅವರಿಗೆ ಮಾಡಿದ್ದಂಥ ಉಪಕಾರದ ಕುರಿತಾಗಿ ಆ ಸ್ತ್ರೀಯರಿಬ್ಬರು ಸಂತೋಷಿಸಿದರು. ಮರಿಯಳು ಎಲಿಸಬೇತಳ ಭೇಟಿಯಾಗಿ ಮೂರು ತಿಂಗಳ ಕಾಲ ಅಲ್ಲಿದ್ದ ನಂತರ, ಮರಿಯಳು ಮನೆಗೆ ಹಿಂದಿರುಗಿ ಹೋದಳು.
![OBS Image](https://cdn.door43.org/obs/jpg/360px/obs-en-22-07.jpg)
ಇದಾದನಂತರ, ಎಲಿಸಬೇತಳು ತನ್ನ ಗಂಡುಮಗುವಿನ ಜನ್ಮ ನೀಡಿದಳು. ದೇವದೂತನು ಆಜ್ಞಾಪಿಸಿದಂತೆಯೇ ಜಕರೀಯನು ಮತ್ತು ಎಲಿಸಬೇತಳು ಮಗುವಿಗೆ ಯೋಹಾನನೆಂದು ಹೆಸರಿಟ್ಟರು. ಆಗ ಜಕರೀಯನು ಮತ್ತೆ ಮಾತನಾಡಲಾಗುವಂತೆ ದೇವರು ಮಾಡಿದನು. ಜಕರೀಯನು, "ದೇವರಿಗೆ ಸ್ತೋತ್ರವಾಗಲಿ, ಏಕೆಂದರೆ ಆತನು ತನ್ನ ಜನರಿಗೆ ಸಹಾಯ ಮಾಡಲು ನೆನಪಿಸಿಕೊಂಡಿದ್ದಾನೆ! ಮಗುವೇ, ನೀನಾದರೋ ಪರಾತ್ಪರನಾದ ದೇವರ ಪ್ರವಾದಿಯಾಗಿರುವಿ. ಅವರು ತಮ್ಮ ಪಾಪಗಳಿಗಾಗಿ ಕ್ಷಮಾಪಣೆಯನ್ನು ಪಡೆದುಕೊಳ್ಳುವುದು ಹೇಗೆಂದು ನೀನು ಜನರಿಗೆ ತಿಳಿಸುವಿ" ಎಂದು ಹೇಳಿದನು.
_ಸತ್ಯವೇದದ ಕಥೆ: ಲೂಕ 1_

44
content/23.md Normal file
View File

@ -0,0 +1,44 @@
# 23. ಯೇಸುವಿನ ಜನನ
![OBS Image](https://cdn.door43.org/obs/jpg/360px/obs-en-23-01.jpg)
ಮರಿಯಳಿಗೆ ಯೋಸೇಫನೆಂಬ ಸಜ್ಜನ ವ್ಯಕ್ತಿಯೊಂದಿಗೆ ನಿಶ್ಚಿತಾರ್ಥವಾಗಿತ್ತು. ಮರಿಯಳು ಗರ್ಭಿಣಿಯಾಗಿದ್ದಾಳೆಂದು ಅವನು ಕೇಳಿದಾಗ, ಅದು ತನ್ನ ಮಗುವಲ್ಲ ಎಂದು ಅವನಿಗೆ ತಿಳಿದಿತ್ತು. ಆದರೂ, ಅವನು ಮರಿಯಳನ್ನು ಅವಮಾನ ಮಾಡ ಬಯಸಲಿಲ್ಲ, ಆದ್ದರಿಂದ ಅವನು ಅವಳ ಮೇಲೆ ಕರುಣೆ ತೋರಿ ಅವಳನ್ನು ರಹಸ್ಯವಾಗಿ ಬಿಟ್ಟುಬಿಡಬೇಕೆಂದು ನಿರ್ಧರಿಸಿದನು. ಆದರೆ ಅವನು ಹಾಗೆ ಮಾಡುವ ಮುನ್ನ, ದೇವದೂತನು ಕನಸ್ಸಿನಲ್ಲಿ ಅವನ ಬಳಿಗೆ ಬಂದು ಅವನ ಸಂಗಡ ಮಾತನಾಡಿದನು.
![OBS Image](https://cdn.door43.org/obs/jpg/360px/obs-en-23-02.jpg)
ದೇವದೂತನು, "ಯೋಸೇಫನೇ, ನೀನು ಮರಿಯಳನ್ನು ಹೆಂಡತಿಯಾಗಿ ಸೇರಿಸಿಕೊಳ್ಳುವುದಕ್ಕೆ ಅಂಜಬೇಡ. ಆಕೆ ಗರ್ಭವತಿಯಾದದ್ದು ಪವಿತ್ರಾತ್ಮನಿಂದಲೇ. ಆಕೆಯು ಒಬ್ಬ ಮಗನನ್ನು ಹೆರುವಳು, ನೀನು ಆತನಿಗೆ ಯೇಸು (ಅಂದರೆ ‘ಯೆಹೋವನು ರಕ್ಷಿಸುವನು’ ಎಂದರ್ಥ) ಎಂದು ಹೆಸರಿಡಬೇಕು, ಏಕೆಂದರೆ ಆತನೇ ತನ್ನ ಜನರನ್ನು ಅವರ ಪಾಪಗಳಿಂದ ಬಿಡಿಸಿ ರಕ್ಷಿಸುವನು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-23-03.jpg)
ಆದ್ದರಿಂದ ಯೋಸೇಫನು ಮರಿಯಳನ್ನು ಮದುವೆಯಾದನು ಮತ್ತು ಅವಳನ್ನು ತನ್ನ ಹೆಂಡತಿಯಾಗಿ ತನ್ನ ಮನೆಗೆ ಕರೆದುಕೊಂಡು ಹೋದನು, ಆದರೆ ಅವನು ಆಕೆಯು ಜನ್ಮನೀಡುವವರೆಗೂ ಆಕೆಯೊಡನೆ ಮಲಗಲಿಲ್ಲ.
![OBS Image](https://cdn.door43.org/obs/jpg/360px/obs-en-23-04.jpg)
ಮರಿಯಳು ಜನ್ಮ ನೀಡುವ ಸಮಯ ಹತ್ತಿರವಾದಾಗ, ಅವಳು ಮತ್ತು ಯೋಸೇಫನು ಬೇತ್ಲೆಹೇಮ್ ಎಂಬ ಊರಿಗೆ ದೀರ್ಘ ಪ್ರಯಾಣ ಮಾಡಿದರು. ಅವರು ಅಲ್ಲಿಗೆ ಹೋಗಬೇಕಾಗಿತು ಏಕೆಂದರೆ ರೋಮಾನ್ ಅಧಿಕಾರಿಗಳು ಇಸ್ರಾಯೇಲ್ ದೇಶದಲ್ಲಿದ್ದ ಜನಸಂಖ್ಯೆಯನ್ನು ತಿಳಿದುಕೊಳ್ಳಲು ಬಯಸಿದ್ದರು. ಪ್ರತಿಯೊಬ್ಬರೂ ತಮ್ಮ ಪೂರ್ವಿಕರು ವಾಸಿಸುತ್ತಿದ್ದ ಸ್ಥಳಕ್ಕೆ ಹೋಗಬೇಕೆಂದು ಅವರು ಬಯಸಿದ್ದರು. ಅರಸನಾದ ದಾವೀದನು ಬೇತ್ಲೆಹೇಮಿನಲ್ಲಿ ಹುಟ್ಟಿದವನಾಗಿದ್ದು ಅವನು ಮರಿಯ ಮತ್ತು ಯೋಸೇಫ್ ಇವರಿಬ್ಬರಿಗೂ ಪೂರ್ವಿಕನಾಗಿದ್ದನು.
![OBS Image](https://cdn.door43.org/obs/jpg/360px/obs-en-23-05.jpg)
ಮರಿಯಳು ಮತ್ತು ಯೋಸೇಫನು ಬೇತ್ಲೆಹೇಮಿಗೆ ಹೋದರು, ಕೆಲವು ಪ್ರಾಣಿಗಳನ್ನು ಇಟ್ಟಿದ್ದ ಸ್ಥಳವನ್ನು ಬಿಟ್ಟರೆ, ಅಲ್ಲಿ ಇಳಿದುಕೊಳ್ಳಲು ಅವರಿಗೆ ಬೇರೆ ಸ್ಥಳವಿರಲಿಲ್ಲ. ಮರಿಯಳು ಅಲ್ಲಿಯೇ ತನ್ನ ಮಗುವಿಗೆ ಜನ್ಮ ನೀಡಿದಳು. ಆತನಿಗೆ ಹಾಸಿಗೆಯಿಲ್ಲದಿರುವುದರಿಂದ ಅವಳು ಅವನನ್ನು ಗೋದಲಿಯಲ್ಲಿ ಮಲಗಿಸಿದಳು . ಅವರು ಆತನಿಗೆ ಯೇಸು ಎಂದು ಹೆಸರಿಟ್ಟರು.
![OBS Image](https://cdn.door43.org/obs/jpg/360px/obs-en-23-06.jpg)
ಆ ರಾತ್ರಿಯಲ್ಲಿ, ಅದರ ಹತ್ತಿರವಿದ್ದ ಹೊಲದಲ್ಲಿ ಕೆಲವು ಕುರುಬರು ತಮ್ಮ ಹಿಂಡುಗಳನ್ನು ಕಾಯುತ್ತಿದ್ದ ರು. ಇದ್ದಕ್ಕಿದ್ದಂತೆ, ಪ್ರಕಾಶಿಸುವ ದೂತನೊಬ್ಬನು ಅವರಿಗೆ ಕಾಣಿಸಿಕೊಂಡನು ಆಗ ಅವರು ಬಹಳವಾಗಿ ಹೆದರಿದರು. ದೇವದೂತನು ಅವರಿಗೆ , "ಹೆದರಬೇಡಿರಿ, ಯಾಕೆಂದರೆ ನಾನು ನಿಮಗೋಸ್ಕರ ಶುಭವಾರ್ತೆಯನ್ನು ತಂದಿದ್ದೇನೆ, ಕರ್ತನಾಗಿರುವ ಮೆಸ್ಸೀಯನು, ಬೇತ್ಲೆಹೇಮಿನಲ್ಲಿ ಹುಟ್ಟಿದ್ದಾನೆ!" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-23-07.jpg)
ಮತ್ತು ಅ ದೂತನು ಅವರಿಗೆ "ಹೋಗಿರಿ, ಮಗುವನ್ನು ಹುಡುಕಿರಿ, ಮತ್ತು ಆತನನ್ನು ಬಟ್ಟೆಯಿಂದ ಸುತ್ತಿ, ಗೋದಲಿಯಲ್ಲಿ ಮಲಗಿಸಿರುವುದನ್ನು ನೀವು ಕಾಣುತ್ತೀರಿ." ಎಂದು ಹೇಳಿದನು . ಆಗ ಇದ್ದಕ್ಕಿದ್ದಂತೆ, ಆಕಾಶದಲ್ಲಿ ವೆಲ್ಲಾ ದೇವದೂತರ ಸೈನ್ಯವು ಕಾಣಿಸಿತು . ಅವರು ದೇವರನ್ನು ಸ್ತುತಿಸುತ್ತಾ , "ಮೇಲಣಲೋಕಗಳಲ್ಲಿ ದೇವರಿಗೆ ಮಹಿಮೆ, ಭೂಲೋಕದಲ್ಲಿ ದೇವರೊಲಿದ ಮನುಷ್ಯರೊಳಗೆ ಸಮಾಧಾನ" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-23-08.jpg)
ಅನಂತರ ದೇವದೂತರು ಹೊರಟುಹೋದರು. ಕುರುಬರು ಕೂಸನ್ನು ನೋಡಲು ತಮ್ಮ ಕುರಿಗಳನ್ನು ಬಿಟ್ಟುಹೋದರು. ಅವರು ಯೇಸುವಿದ್ದ ಸ್ಥಳಕ್ಕೆ ಬಂದರು ಮತ್ತು ದೇವದೂತನು ತಮಗೆ ಹೇಳಿದಂತೆಯೇ, ಆತನನ್ನು ಗೋದಲಿಯಲ್ಲಿ ಮಲಗಿಸಿರುವುದನ್ನು ಅವರು ಕಂಡುಕೊಂಡರು. ಅವರು ಬಹಳ ಸಂತೋಷಿಸಿದರು. ಅನಂತರ ಕುರುಬರು ತಮ್ಮ ಕುರಿಗಳಿದ್ದ ಹೊಲಗಳಿಗೆ ಹಿಂದಿರುಗಿ ಹೋದರು. ಅವರು ತಾವು ಕೇಳಿದಂಥ ಮತ್ತು ನೋಡಿದಂಥ ಎಲ್ಲಾ ಸಂಗತಿಗಳಿಗಾಗಿ ದೇವರನ್ನು ಸ್ತುತಿಸಿದರು.
![OBS Image](https://cdn.door43.org/obs/jpg/360px/obs-en-23-09.jpg)
ದೂರದ ಪೂರ್ವದ ದೇಶದಲ್ಲಿ ಕೆಲವು ಮಂದಿ ಪುರುಷರಿದ್ದರು. ಅವರು ನಕ್ಷತ್ರಗಳ ಬಗ್ಗೆ ಅಧ್ಯಯನ ಮಾಡುತ್ತಿದ್ದು ಬಹಳ ಬುದ್ಧಿವಂತರಾಗಿದ್ದರು. ಅವರು ಆಕಾಶದಲ್ಲಿ ಅಸಾಮಾನ್ಯವಾದ ನಕ್ಷತ್ರವನ್ನು ನೋಡಿದರು. ಆ ನಕ್ಷತ್ರ ಯೆಹೂದ್ಯರ ಹೊಸ ಅರಸನು ಹುಟ್ಟಿದ್ದಾನೆಂದು ಸೂಚಿಸುತ್ತದೆ ಎಂದು ಅವರು ಹೇಳಿದರು. ಆದ್ದರಿಂದ ಅವರು ಮಗುವನ್ನು ನೋಡಲು ತಮ್ಮ ದೇಶದಿಂದ ಪ್ರಯಾಣ ಬೆಳೆಸಲು ನಿರ್ಧರಿಸಿದರು. ದೀರ್ಘ ಪ್ರಯಾಣದ ನಂತರ, ಅವರು ಬೇತ್ಲೆಹೇಮಿಗೆ ಬಂದು ಯೇಸು ಮತ್ತು ಅವನ ತಂದೆತಾಯಿಗಳು ವಾಸಿಸುತ್ತಿದ್ದ ಮನೆಯನ್ನು ಕಂಡುಕೊಂಡರು.
![OBS Image](https://cdn.door43.org/obs/jpg/360px/obs-en-23-10.jpg)
ಈ ಮನುಷ್ಯರು ಆತನ ತಾಯಿಯ ಬಳಿಯಲ್ಲಿರುವ ಯೇಸುವನ್ನು ನೋಡಿದಾಗ ಅವರು ಅಡ್ಡಬಿದ್ದು ಆತನನ್ನು ಆರಾಧಿಸಿದರು. ಅವರು ಯೇಸುವಿಗೆ ಅತ್ಯುತ್ತಮವಾದ ಕಾಣಿಕೆಗಳನ್ನು ಅರ್ಪಿಸಿದರು . ಅನಂತರ ಅವರು ಮನೆಗೆ ಹಿಂದಿರುಗಿ ಹೋದರು.
_ಸತ್ಯವೇದದ ಕಥೆ: ಮತ್ತಾಯ 1; ಲೂಕ 2_

40
content/24.md Normal file
View File

@ -0,0 +1,40 @@
# 24. ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದ ಯೋಹಾನನು
![OBS Image](https://cdn.door43.org/obs/jpg/360px/obs-en-24-01.jpg)
ಜಕರೀಯ ಹಾಗೂ ಎಲಿಸಬೇತಳ ಮಗನಾದ ಯೋಹಾನನು ಬೆಳೆದು ಪ್ರವಾದಿಯಾದನು. ಅವನು ಅರಣ್ಯದಲ್ಲಿ ವಾಸವಾಗಿದ್ದು ಕಾಡುಜೇನನ್ನು ಮತ್ತು ಮಿಡತೆಗಳನ್ನು ತಿನ್ನುತ್ತಿದ್ದನು ಮತ್ತು ಒಂಟೆ ಕೂದಲಿನಿಂದ ಮಾಡಿದ ಬಟ್ಟೆಗಳನ್ನು ಧರಿಸಿದ್ದನು.
![OBS Image](https://cdn.door43.org/obs/jpg/360px/obs-en-24-02.jpg)
ಅನೇಕ ಜನರು ಯೋಹಾನನ ಉಪದೇಶವನ್ನು ಕೇಳಿಸಿಕೊಳ್ಳಲು ಅರಣ್ಯದ ಕಡೆಯಿಂದ ಬರುತ್ತಿದ್ದರು . ಅವನು ಅವರಿಗೆ ಉಪದೇಶಿಸುತ್ತಾ "ಪಶ್ಚಾತ್ತಾಪಪಡಿರಿ, ದೇವರ ರಾಜ್ಯವು ಸಮೀಪವಾಯಿತು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-24-03.jpg)
ಜನರು ಯೋಹಾನನ ಸಂದೇಶವನ್ನು ಕೇಳಿದಾಗ, ಅವರಲ್ಲಿ ಅನೇಕರು ತಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಟ್ಟರು ಮತ್ತು ಯೋಹಾನನು ಅವರಿಗೆ ದೀಕ್ಷಾಸ್ನಾನ ಮಾಡಿಸಿದನು. ಅನೇಕ ಧಾರ್ಮಿಕ ಮುಖಂಡರು ಸಹ ಯೋಹಾನನ್ನು ನೋಡಲು ಬಂದರು, ಆದರೆ ಅವರು ಪಶ್ಚಾತ್ತಾಪಪಡಲಿಲ್ಲ ಅಥವಾ ತಮ್ಮ ಪಾಪಗಳನ್ನು ಒಪ್ಪಿಕೊಳ್ಳಲಿಲ್ಲ.
![OBS Image](https://cdn.door43.org/obs/jpg/360px/obs-en-24-04.jpg)
ಯೋಹಾನನು ಧಾರ್ಮಿಕ ಮುಖಂಡರಿಗೆ, "ನೀವು ವಿಷಪೂರಿತ ಸರ್ಪಗಳು! ಪಶ್ಚಾತ್ತಾಪಪಟ್ಟು ನಿಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳಿರಿ, ದೇವರು ಒಳ್ಳೆಯ ಫಲಗಳನ್ನು ಕೊಡದ ಪ್ರತಿಯೊಂದು ಮರವನ್ನೂ ಕಡಿದು, ಅವುಗಳನ್ನು ಬೆಂಕಿಗೆ ಹಾಕುವನು" ಎಂದು ಹೇಳಿದನು., "ಇಗೋ, ನಾನು ನಿನ್ನ ಮುಂದೆ ನನ್ನ ದೂತನನ್ನು ಕಳುಹಿಸುತ್ತೇನೆ, ಅವನು ನಿನ್ನ ಮಾರ್ಗವನ್ನು ಸಿದ್ಧಪಡಿಸುವನು”.ಎಂದು ಪ್ರವಾದಿಗಳು ಹೇಳಿದ್ದ ಮಾತುಗಳನ್ನು ಯೋಹಾನನು ನೆರವೇರಿಸಿದನು
![OBS Image](https://cdn.door43.org/obs/jpg/360px/obs-en-24-05.jpg)
ಕೆಲವು ಧಾರ್ಮಿಕ ಮುಖಂಡರು ಯೋಹಾನನಿಗೆ, “ನೀನು ಮೆಸ್ಸೀಯನೋ?” ಎಂದು ಕೇಳಿದರು. ಯೋಹಾನನು, "ನಾನು ಮೆಸ್ಸೀಯನಲ್ಲ, ಆದರೆ ಆತನು ನನ್ನ ಹಿಂದೆ ಬರುತ್ತಾನೆ, ಆತನು ತುಂಬಾ ಶ್ರೇಷ್ಠನು. ಆತನ ಕೆರಗಳ ಬಾರನ್ನು ಬಿಚ್ಚುವುದಕ್ಕೂ ನಾನು ಯೋಗ್ಯನಲ್ಲ" ಎಂದು ಉತ್ತರ ಕೊಟ್ಟನು.
![OBS Image](https://cdn.door43.org/obs/jpg/360px/obs-en-24-06.jpg)
ಮರುದಿನ, ಯೇಸು ಯೋಹಾನನಿಂದ ದೀಕ್ಷಾಸ್ನಾನ ಮಾಡಿಸಿಕೊಳ್ಳಲು ಅವನ ಬಳಿಗೆ ಬಂದನು. ಯೋಹಾನನು ಆತನನ್ನು ನೋಡಿದಾಗ, "ಇಗೋ, ಲೋಕದ ಪಾಪವನ್ನು ನಿವಾರಣೆ ಮಾಡುವ ದೇವರ ಕುರಿಮರಿ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-24-07.jpg)
ಯೋಹಾನನು ಯೇಸುವಿಗೆ, "ನಿನಗೆ ದೀಕ್ಷಾಸ್ನಾನ ಮಾಡಿಸುವುದಕ್ಕೆ ನಾನು ಯೋಗ್ಯನಲ್ಲ, ಬದಲಿಗೆ ನೀನು ನನಗೆ ದೀಕ್ಷಾಸ್ನಾನ ಮಾಡಿಸಬೇಕು" ಎಂದು ಹೇಳಿದನು. ಆದರೆ ಯೇಸು, "ನೀನು ನನಗೆ ದೀಕ್ಷಾಸ್ನಾನ ಮಾಡಿಸಬೇಕು, ಯಾಕೆಂದರೆ ಅದುವೇ ಸರಿಯಾದ ಕಾರ್ಯವಾಗಿದೆ" ಎಂದು ಹೇಳಿದನು. ಯೇಸು ಪಾಪಮಾಡದಿದ್ದರೂ ಸಹ ಯೋಹಾನನು ಆತನಿಗೆ ದೀಕ್ಷಾಸ್ನಾನ ಮಾಡಿಸಿದನು.
![OBS Image](https://cdn.door43.org/obs/jpg/360px/obs-en-24-08.jpg)
ಯೇಸು ದೀಕ್ಷಾಸ್ನಾನ ಮಾಡಿಸಿಕೊಂಡು ನೀರಿನಿಂದ ಹೊರಗೆ ಬಂದಾಗ, ದೇವರ ಆತ್ಮನು ಪಾರಿವಾಳದ ರೂಪದಲ್ಲಿ ಕಾಣಿಸಿಕೊಂಡು ಆತನ ಮೇಲೆ ಇಳಿದುಬಂದು ಆತನಲ್ಲಿ ನೆಲೆಗೊಂಡನು. ಅದೇ ಸಮಯದಲ್ಲಿ ದೇವರು ಪರಲೋಕದಿಂದ ಮಾತನಾಡಿ , "ನೀನು ನನ್ನ ಮಗನು, ನಾನು ನಿನ್ನನ್ನು ಪ್ರೀತಿಸುತ್ತೇನೆ ಮತ್ತು ನಾನು ನಿನ್ನನ್ನು ಬಹಳವಾಗಿ ಮೆಚ್ಚಿಕೊಂಡಿದ್ದೇನೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-24-09.jpg)
ದೇವರು ಯೋಹಾನನಿಗೆ, "ನೀನು ದೀಕ್ಷಾಸ್ನಾನ ಮಾಡಿಸುವ ಒಬ್ಬಾತನ ಮೇಲೆ ಪವಿತ್ರಾತ್ಮನು ಇಳಿದುಬಂದು ನೆಲೆಗೊಳ್ಳುವನು. ಆ ಮನುಷ್ಯನೇ ದೇವರ ಮಗನು" ಎಂದು ಹೇಳಿದ್ದನು. ಒಬ್ಬ ದೇವರು ಮಾತ್ರವೇ ಇರುವನು . ಆದರೆ ಯೋಹಾನನು ಯೇಸುವಿಗೆ ದೀಕ್ಷಾಸ್ನಾನ ಮಾಡಿಸುವಾಗ, ತಂದೆಯಾದ ದೇವರು ಮಾತನಾಡುವುದನ್ನು ಕೇಳಿಸಿಕೊಂಡನು , ಮಗನಾದ ದೇವರನ್ನು ಅಂದರೆ ಯೇಸುವನ್ನು ನೋಡಿದನು ಮತ್ತು ಅವನು ಪವಿತ್ರಾತ್ಮನನ್ನು ನೋಡಿದನು.
_ಸತ್ಯವೇದದ ಕಥೆ: ಮತ್ತಾಯ 3; ಮಾರ್ಕ 1:9-11; ಲೂಕ 3:1-23_

36
content/25.md Normal file
View File

@ -0,0 +1,36 @@
# 25. ಸೈತಾನನು ಯೇಸುವನ್ನು ಶೋಧಿಸಿದನು
![OBS Image](https://cdn.door43.org/obs/jpg/360px/obs-en-25-01.jpg)
ಯೇಸು ದೀಕ್ಷಾಸ್ನಾನವನ್ನು ಮಾಡಿಸಿಕೊಂಡ ಕೂಡಲೇ, ಪವಿತ್ರಾತ್ಮನು ಆತನನ್ನು ಅಡವಿಗೆ ನಡೆಸಿದನು. ಯೇಸು ನಲವತ್ತು ದಿನ ಹಗಲಿರಳು ಅಲ್ಲಿದ್ದನು. ಆ ಸಮಯದಲ್ಲಿ ಆತನು ಉಪವಾಸ ಮಾಡಿದನು ಮತ್ತು ಸೈತಾನನು ಯೇಸುವಿನ ಬಳಿಗೆ ಬಂದು ಪಾಪಮಾಡುವಂತೆ ಆತನನ್ನು ಶೋಧಿಸಿದನು.
![OBS Image](https://cdn.door43.org/obs/jpg/360px/obs-en-25-02.jpg)
ಮೊದಲಿಗೆ, ಸೈತಾನನು ಯೇಸುವಿಗೆ, "ನೀನು ದೇವರ ಮಗನಾಗಿದ್ದರೆ, ಈ ಕಲ್ಲುಗಳನ್ನು ರೊಟ್ಟಿಯಾಗುವಂತೆ ಮಾಡಿ ನಿನ್ನ ಹಸಿವೆಯನ್ನು ನೀಗಿಸಿಕೋ " ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-25-03.jpg)
ಆದರೆ ಯೇಸು ಸೈತಾನನಿಗೆ, ", ಜನರು ರೊಟ್ಟಿಯಿಂದ ಮಾತ್ರ ಬದುಕುವುದಿಲ್ಲ, ಆದರೆ ಅವರಿಗೆ ಬದುಕಲು ದೇವರು ಹೇಳುವಂಥ ಎಲ್ಲವು ಅಗತ್ಯವಾಗಿವೆ ಎಂದು ದೇವರ ವಾಕ್ಯದಲ್ಲಿ ಬರೆಯಲ್ಪಟ್ಟಿದೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-25-04.jpg)
ಆಗ ಸೈತಾನನು ಯೇಸುವನ್ನು ದೇವಾಲಯದ ಗೋಪುರಕ್ಕೆ ಕರೆದುಕೊಂಡು ಹೋದನು. ಅವನು ಆತನಿಗೆ, “ನೀನು ದೇವರ ಮಗನಾಗಿದ್ದರೆ ಇಲ್ಲಿಂದ ಕೆಳಕ್ಕೆ ದುಮುಕು, ‘ದೇವರು ನಿನ್ನ ವಿಷಯವಾಗಿ ತನ್ನ ದೂತರಿಗೆ ಅಪ್ಪಣೆಕೊಡುವನು; ನಿನ್ನ ಕಾಲು ಕಲ್ಲಿಗೆ ತಗಲದಂತೆ ಅವರು ನಿನ್ನನ್ನು ಕೈಗಳಲ್ಲಿ ಎತ್ತಿಕೊಳ್ಳುವರು’ ಎಂಬುದಾಗಿ ಬರೆದಿದೆಯಲ್ಲಾ” ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-25-05.jpg)
ಆದರೆ ಯೇಸು ಸೈತಾನನು ಮಾಡಬೇಕೆಂದು ತನ್ನನ್ನು ಕೇಳಿಕೊಂಡಿದ್ದನ್ನು ಮಾಡಲಿಲ್ಲ. ಬದಲಾಗಿ ಆತನು, "ದೇವರು ಎಲ್ಲರಿಗೂ ಹೇಳುವುದೇನಂದರೆ, ‘ನಿನ್ನ ದೇವರಾಗಿರುವ ಕರ್ತನನ್ನು ಪರೀಕ್ಷಿಸಬಾರದು'" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-25-06.jpg)
ಆಗ ಸೈತಾನನು ಯೇಸುವಿಗೆ ಲೋಕದ ಎಲ್ಲಾ ಸಾಮ್ರಾಜ್ಯಗಳನ್ನು ತೋರಿಸಿದನು. ಅವುಗಳು ಎಷ್ಟು ಶಕ್ತಿಶಾಲಿಯಾಗಿವೆ ಮತ್ತು ಎಷ್ಟು ಶ್ರೀಮಂತವಾಗಿವೆ ಎಂದು ಅವನು ಆತನಿಗೆ ತೋರಿಸಿದನು. ಅವನು ಯೇಸುವಿಗೆ, "ನೀನು ನನಗೆ ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವುಗಳನ್ನೆಲ್ಲಾ ನಿನಗೆ ಕೊಡುವೆನು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-25-07.jpg)
ಯೇಸು, "ಸೈತಾನನೇ ನನ್ನಿಂದ ತೊಲಗಿ ಹೋಗು!, ‘ನಿನ್ನ ದೇವರಾದ ಕರ್ತನನ್ನು ಮಾತ್ರ ಆರಾಧಿಸು, ಆತನನ್ನು ಮಾತ್ರವೇ ದೇವರೆಂದು ಗೌರವಿಸಬೇಕೆಂದು ದೇವರು ತನ್ನ ಜನರಿಗೆ ಅಜ್ಞಾಪಿಸಿದ್ದಾನೆ " ಎಂದು ಉತ್ತರಿಸಿದನು.
![OBS Image](https://cdn.door43.org/obs/jpg/360px/obs-en-25-08.jpg)
ಯೇಸು ಸೈತಾನನ ಶೋಧನೆಗೆ ಒಳಗಾಗಲಿಲ್ಲ, ಆದ್ದರಿಂದ ಸೈತಾನನು ಆತನನ್ನು ಬಿಟ್ಟು ಹೊರಟುಹೋದನು. ಅಗ ದೇವದೂತರು ಬಂದು ಯೇಸುವಿಗೆ ಉಪಚಾರ ಮಾಡಿದರು.
_ಸತ್ಯವೇದದ ಕಥೆ: ಮತ್ತಾಯ 4:1-11; ಮಾರ್ಕ 1:12-13; ಲೂಕ 4:1-13_

44
content/26.md Normal file
View File

@ -0,0 +1,44 @@
# 26. ಯೇಸು ತನ್ನ ಸೇವೆಯನ್ನು ಪ್ರಾರಂಭಿಸಿದನು
![OBS Image](https://cdn.door43.org/obs/jpg/360px/obs-en-26-01.jpg)
ಯೇಸು ಸೈತಾನನ ಶೋಧನೆಗಳನ್ನು ನಿರಾಕರಿಸಿದ ನಂತರ , ಆತನು ಗಲಿಲಾಯದ ಸೀಮೆಗೆ ಹಿಂದಿರುಗಿದನು. ಆತನು ಅಲ್ಲಿಯೇ ವಾಸಿಸುತ್ತಿದ್ದನು. ಪವಿತ್ರಾತ್ಮನು ಆತನಿಗೆ ಹೆಚ್ಚು ಶಕ್ತಿಯನ್ನು ಕೊಡುತ್ತಿದ್ದನು, ಮತ್ತು ಯೇಸು ಒಂದು ಸ್ಥಳದಿಂದ ಇನ್ನೊಂದು ಸ್ಥಳಕ್ಕೆ ಹೋಗಿ ಜನರಿಗೆ ಬೋಧಿಸುತ್ತಿದ್ದನು. ಪ್ರತಿಯೊಬ್ಬರೂ ಆತನ ಬಗ್ಗೆ ಒಳ್ಳೆಯದನ್ನು ಹೇಳಿದರು.
![OBS Image](https://cdn.door43.org/obs/jpg/360px/obs-en-26-02.jpg)
ಯೇಸು ನಜರೇತ್ ಎಂಬ ಊರಿಗೆ ಹೋದನು. ಆತನು ಚಿಕ್ಕವನಾಗಿದ್ದಾಗ ಆತನು ವಾಸಿಸುತ್ತಿದ್ದ ಹಳ್ಳಿಯು ಇದಾಗಿತ್ತು. ಸಬ್ಬತ್ ದಿನದಲ್ಲಿ ಆತನು ಆರಾಧನೆಯ ಸ್ಥಳಕ್ಕೆ ಹೋದನು. ಮುಖಂಡರು ಪ್ರವಾದಿಯಾದ ಯೆಶಾಯನ ಸಂದೇಶಗಳಿರುವ ಒಂದು ಸುರುಳಿಯನ್ನು ಆತನಿಗೆ ಕೊಟ್ಟರು. ಆತನು ಅದನ್ನು ಓದಬೇಕೆಂದು ಅವರು ಬಯಸಿದ್ದರು. ಆದ್ದರಿಂದ ಯೇಸು ಸುರುಳಿಯನ್ನು ತೆರೆದು ಅದರ ಒಂದು ಭಾಗವನ್ನು ಜನರಿಗೆ ಓದಿಹೇಳಿದನು.
![OBS Image](https://cdn.door43.org/obs/jpg/360px/obs-en-26-03.jpg)
ಯೇಸು, "ನಾನು ಬಡವರಿಗೆ ಶುಭವಾರ್ತೆಯನ್ನು ಸಾರುವಂತೆ ದೇವರು ನನಗೆ ತನ್ನ ಆತ್ಮವನ್ನು ದಯಪಾಲಿಸಿದ್ದಾನೆ, ಸೆರೆಯಲ್ಲಿರುವವರನ್ನು ಬಿಡಿಸುವುದಕ್ಕೂ, ಕುರುಡರು ಮತ್ತೆ ನೋಡುವಂತೆ ಮಾಡುವುದಕ್ಕೂ, ಮತ್ತು ಇತರರಿಂದ ಹಿಂಸಿಸಲ್ಪಟ್ಟವರನ್ನು ಬಿಡಿಸುವುದಕ್ಕೂ ನನ್ನನ್ನು ಕಳುಹಿಸಿದ್ದಾನೆ. ಇದುವೇ ಕರ್ತನು ನಮಗೆ ಕರುಣೆ ತೋರಿ ನಮಗೆ ಸಹಾಯ ಮಾಡುವ ಸಮಯವಾಗಿದೆ." ಎಂಬ ಮಾತುಗಳನ್ನು ಓದಿದನು
![OBS Image](https://cdn.door43.org/obs/jpg/360px/obs-en-26-04.jpg)
ಓದಿದ ನಂತರ ಯೇಸು ಕುಳಿತುಕೊಂಡನು. ಎಲ್ಲರೂ ಆತನನ್ನು ಲಕ್ಷ್ಯವಿಟ್ಟು ನೋಡುತ್ತಿದ್ದರು. ಆತನು ಆಗತಾನೇ ಓದಿದ್ದಂಥ ವಾಕ್ಯಭಾಗವು ಮೆಸ್ಸೀಯನ ಕುರಿತಾಗಿರುವಂಥದ್ದು ಎಂದು ಅವರಿಗೆ ತಿಳಿದಿತ್ತು. ಯೇಸು, "ನಾನು ಈಗತಾನೇ ನಿಮಗೆ ಓದಿಹೇಳಿದ ವಿಷಯಗಳು, ಈಗಲೇ ನೆರೆವೇರುತ್ತಿವೆ " ಎಂದು ಹೇಳಿದನು. ಜನರೆಲ್ಲರು ಆಶ್ಚರ್ಯಚಕಿತರಾಗಿ . "ಇವನು ಯೋಸೇಫನ ಮಗನಲ್ಲವೇ?" ಎಂದು ಅವರು ಹೇಳಿದರು.
![OBS Image](https://cdn.door43.org/obs/jpg/360px/obs-en-26-05.jpg)
ಆಗ ಯೇಸು, "ಒಬ್ಬ ಪ್ರವಾದಿಯು ಬೆಳೆದುಬಂದ ಊರಿನಲ್ಲಿ ಜನರು ಅವನನ್ನು ಎಂದಿಗೂ ಅಂಗೀಕರಿಸುವುದಿಲ್ಲ ಎನ್ನುವುದು ಸತ್ಯ. ಪ್ರವಾದಿಯಾದ ಎಲೀಯನ ಕಾಲದಲ್ಲಿ, ಇಸ್ರಾಯೇಲಿನಲ್ಲಿ ಅನೇಕ ವಿಧವೆಯರು ಇದ್ದರು. ಆದರೆ ಮೂರುವರೆ ವರ್ಷಗಳು ಮಳೆ ಬಾರದಿರುವಾಗ, ದೇವರು ಇಸ್ರಾಯೇಲಿನ ವಿಧವೆಗೆ ಸಹಾಯಮಾಡಲು ಎಲೀಯನನ್ನು ಕಳುಹಿಸಲಿಲ್ಲ ಬದಲಿಗೆ ಬೇರೆ ದೇಶದಲ್ಲಿರುವ ವಿಧವೆಗೆ ಸಹಾಯಮಾಡಲು ದೇವರು ಎಲೀಯನನ್ನು ಕಳುಹಿಸಿದನು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-26-06.jpg)
ಯೇಸು ಮುಂದುವರಿಸಿ ಹೇಳಿದ್ದೇನಂದರೆ, "ಪ್ರವಾದಿಯಾದ ಎಲೀಷನ ಕಾಲದಲ್ಲಿ ಇಸ್ರಾಯೇಲಿನಲ್ಲಿ ಚರ್ಮರೋಗವಿದ್ದ ಅನೇಕ ಜನರಿದ್ದರು. ಆದರೆ ಎಲೀಷನು ಅವರಲ್ಲಿ ಯಾರನ್ನೂ ಗುಣಪಡಿಸಲಿಲ್ಲ, ಅವನು ಇಸ್ರಾಯೇಲ್ಯರ ಶತ್ರುಗಳ ಸೇನಾಧಿಪತಿಯಾದ ನಾಮಾನನ ಚರ್ಮರೋಗವನ್ನು ಮಾತ್ರ ಗುಣಪಡಿಸಿದನು." ಆದರೆ ಯೇಸುವಿನಿಂದ ಕೇಳಿಸಿಕೊಳ್ಳುತ್ತಿದ್ದ ಜನರು ಯೆಹೂದ್ಯರಾಗಿದ್ದರು. ಆತನು ಹೀಗೆ ಹೇಳುವುದನ್ನು ಅವರು ಕೇಳಿಸಿಕೊಂಡಾಗ, ಅವರು ಆತನ ಮೇಲೆ ಸಿಟ್ಟುಗೊಂಡರು.
![OBS Image](https://cdn.door43.org/obs/jpg/360px/obs-en-26-07.jpg)
ನಜರೇತಿನ ಜನರು ಯೇಸುವನ್ನು ಹಿಡಿದುಕೊಂಡು ಆತನನ್ನು ಆರಾಧನೆಯ ಸ್ಥಳದಿಂದ ಎಳೆದುಕೊಂಡು ಹೋದರು. ಆತನನ್ನು ಕೊಲ್ಲುವ ಸಲುವಾಗಿ ಆತನನ್ನು ದೊಬ್ಬಿಬಿಡಲು ಗುಡ್ಡದ ಅಂಚಿಗೆ ಕರೆತಂದರು. ಆದರೆ ಯೇಸು ಸಮೂಹದ ಮಧ್ಯದಲ್ಲಿ ಹಾದು ನಜರೇತ್ ಊರನ್ನು ಬಿಟ್ಟು ಹೊರಟುಹೋದನು.
![OBS Image](https://cdn.door43.org/obs/jpg/360px/obs-en-26-08.jpg)
ಅನಂತರ ಯೇಸು ಗಲಿಲಾಯದ ಸೀಮೆಯಾದ್ಯಂತ ಹಾದುಹೋದನು ಮತ್ತು ದೊಡ್ಡ ಜನಸಮೂಹವು ಆತನ ಬಳಿಗೆ ಬಂದಿತು. ಅವರು ಅಸ್ವಸ್ಥರು ಅಥವಾ ಅಂಗವಿಕಲರು ಆಗಿದ್ದ ಅನೇಕ ಜನರನ್ನು ಕರೆತಂದರು. ಇವರಲ್ಲಿ ಅನೇಕರಿಗೆ ನೋಡಲು, ನಡೆಯಲು, ಕೇಳಲು, ಅಥವಾ ಮಾತನಾಡಲು ಆಗುತ್ತಿರಲಿಲ್ಲ, ಮತ್ತು ಯೇಸು ಅವರನ್ನು ವಾಸಿಮಾಡಿದನು.
![OBS Image](https://cdn.door43.org/obs/jpg/360px/obs-en-26-09.jpg)
ದೆವ್ವ ಹಿಡಿದಿದ್ದ ಅನೇಕರನ್ನು ಸಹ ಯೇಸುವಿನ ಬಳಿಗೆ ಕರೆತಂದರು. ಅವರನ್ನು ಬಿಟ್ಟು ಹೊರಗೆ ಬರಬೇಕೆಂದು ಯೇಸು ದೆವ್ವಗಳಿಗೆ ಆಜ್ಞಾಪಿಸಿದನು, ಆದ್ದರಿಂದ ದೆವ್ವಗಳು ಹೊರಬಂದವು. ಅನೇಕ ಸಾರಿ ದೆವ್ವಗಳು, "ನೀನು ದೇವರ ಮಗ" ಎಂದು ಕೂಗುತ್ತಿದ್ದವು. ಜನಸಮೂಹವು ಅತ್ಯಾಶ್ಚರ್ಯಪಟ್ಟು ದೇವರನ್ನು ಸ್ತುತಿಸಿದರು.
![OBS Image](https://cdn.door43.org/obs/jpg/360px/obs-en-26-10.jpg)
ಅನಂತರ ಯೇಸು ಹನ್ನೆರಡು ಮಂದಿಯನ್ನು ಆರಿಸಿಕೊಂಡನು, ಅವನು ತನ್ನ ಅಪೊಸ್ತಲರು ಎಂದು ಕರೆದನು. ಅಪೊಸ್ತಲರು ಯೇಸುವಿನೊಂದಿಗೆ ಪ್ರಯಾಣ ಮಾಡಿದರು ಮತ್ತು ಆತನಿಂದ ಕಲಿತುಕೊಂಡರು.
_ಸತ್ಯವೇದದ ಕಥೆ: ಮತ್ತಾಯ 4:12-25; ಮಾರ್ಕ 1:14-15, 35-39; 3:13-21; ಲೂಕ 4:14-30, 38-44_

48
content/27.md Normal file
View File

@ -0,0 +1,48 @@
# 27. ಒಳ್ಳೆ ಸಮಾರ್ಯದವನ ಕಥೆ
![OBS Image](https://cdn.door43.org/obs/jpg/360px/obs-en-27-01.jpg)
ಯೆಹೂದ್ಯರ ಧರ್ಮಶಾಸ್ತ್ರದಲ್ಲಿ ಪರಿಣಿತನಾಗಿದ್ದ ಒಬ್ಬನು ಒಂದು ದಿನ ಯೇಸುವಿನ ಬಳಿಗೆ ಬಂದನು. ಯೇಸು ತಪ್ಪಾಗಿ ಬೋಧಿಸುತ್ತಿದ್ದಾನೆ ಎಂದು ಎಲ್ಲರಿಗೂ ತೋರಿಸಲು ಅವನು ಬಯಸಿ , “ಬೋಧಕನೇ, ನಾನು ನಿತ್ಯಜೀವವನ್ನು ಹೊಂದಿಕೊಳ್ಳಲು ಏನು ಮಾಡಬೇಕು?” ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ, "ಧರ್ಮಶಾಸ್ತ್ರದಲ್ಲಿ ಏನು ಬರೆದದೆ?" ಎಂದು ಕೇಳಿದನು.
![OBS Image](https://cdn.door43.org/obs/jpg/360px/obs-en-27-02.jpg)
ಆ ಮನುಷ್ಯನು, "ನಿನ್ನ ದೇವರಾಗಿರುವ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ, ನಿನ್ನ ಪೂರ್ಣಪ್ರಾಣದಿಂದಲೂ, ನಿನ್ನ ಪೂರ್ಣಶಕ್ತಿಯಿಂದಲೂ ನಿನ್ನ ಪೂರ್ಣ ಬುದ್ಧಿಯಿಂದಲೂ ಪ್ರೀತಿಸಬೇಕು. ಮತ್ತು ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು ಎಂದು ಹೇಳುತ್ತದೆ" ಅಂದನು. ಯೇಸು ಅವನಿಗೆ, "ನೀನು ಸರಿಯಾಗಿ ಉತ್ತರಕೊಟ್ಟಿರುವಿ! ಅದರಂತೆ ಮಾಡು, ಮಾಡಿದರೆ ನಿತ್ಯಜೀವಕ್ಕೆ ಬಾಧ್ಯನಾಗುವಿ" ಎಂದು ಉತ್ತರಕೊಟ್ಟನು.
![OBS Image](https://cdn.door43.org/obs/jpg/360px/obs-en-27-03.jpg)
ಆದರೆ ಆ ಧರ್ಮಶಾಸ್ತ್ರಜ್ಞನು ತಾನು ಜೀವಿಸುವ ರೀತಿಯು ಸರಿಯಾಗಿದೆ ಎಂದು ಜನರಿಗೆ ತೋರಿಸಲು ಬಯಸಿದ್ದನು. ಆದ್ದರಿಂದ ಅವನು ಯೇಸುವಿಗೆ, "ಹಾಗಾದರೆ ನನ್ನ ನೆರೆಯವನು ಯಾರು?" ಎಂದು ಕೇಳಿದನು.
![OBS Image](https://cdn.door43.org/obs/jpg/360px/obs-en-27-04.jpg)
ಯೇಸು ಕಥೆಯನ್ನು ಹೇಳುವ ಮೂಲಕ ಧರ್ಮಶಾಸ್ತ್ರಜ್ಞನಿಗೆ ಉತ್ತರಿಸಿದನು. "ಯೆರೂಸಲೇಮಿನಿಂದ ಯೆರಿಕೋವಿಗೆ ದಾರಿಯಲ್ಲಿ ಪ್ರಯಾಣಿಸುತ್ತಿದ್ದ ಒಬ್ಬಾನೊಬ್ಬ ಯೆಹೂದ್ಯ ಮನುಷ್ಯನಿದ್ದನು."
![OBS Image](https://cdn.door43.org/obs/jpg/360px/obs-en-27-05.jpg)
"ಆದರೆ ಕೆಲವು ಮಂದಿ ಕಳ್ಳರು ಅವನನ್ನು ಕಂಡು ಅವನ ಮೇಲೆ ಹಲ್ಲೆ ಮಾಡಿದರು. ಅವರು ಅವನಿಗಿದ್ದದ್ದೆಲ್ಲವನ್ನು ಕಿತ್ತುಕೊಂಡು ಸಾಯುವಷ್ಟರ ಮಟ್ಟಿಗೆ ಅವನನ್ನು ಹೊಡೆದು, ನಂತರ ಅವರು ಹೊರಟುಹೋದರು.”
![OBS Image](https://cdn.door43.org/obs/jpg/360px/obs-en-27-06.jpg)
"ಸ್ವಲ್ಪ ಸಮಯವಾದ ನಂತರ, ಒಬ್ಬ ಯೆಹೂದ್ಯ ಯಾಜಕನು ಅದೇ ದಾರಿಯಲ್ಲಿ ನಡೆದು ಬಂದನು. ಈ ಯಾಜಕನು ದಾರಿಯಲ್ಲಿ ಬಿದ್ದಿರುವಂಥ ಆ ಮನುಷ್ಯನನ್ನು ನೋಡಿದನು. ಅವನು ಆ ಮನುಷ್ಯನನ್ನು ನೋಡಿದಾಗ ರಸ್ತೆಯ ಇನ್ನೊಂದು ಕಡೆಗೆ ಹೋಗಿ ಅಲ್ಲಿಂದ ಹೊರಟುಹೋದನು, ಅವನು ಆ ವ್ಯಕ್ತಿಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದನು."
![OBS Image](https://cdn.door43.org/obs/jpg/360px/obs-en-27-07.jpg)
"ಇನ್ನೂ ಸ್ವಲ್ಪ ಸಮಯವಾದ ನಂತರ, ಒಬ್ಬ ಲೇವಿಯನು ದಾರಿಯಲ್ಲಿ ಬಂದನು (ಲೇವಿಯರು ದೇವಾಲಯದಲ್ಲಿ ಯಾಜಕರಿಗೆ ಸಹಾಯಮಾಡುವಂಥ ಯೆಹೂದ್ಯರ ಒಂದು ಕುಲವಾಗಿತ್ತು.) ಲೇವಿಯೂ ಕೂಡ ರಸ್ತೆಯ ಇನ್ನೊಂದು ಬದಿಗೆ ದಾಟಿಹೋದನು ಮತ್ತು ಅವನು ಕೂಡ ಆ ವ್ಯಕ್ತಿಯನ್ನು ನಿರ್ಲಕ್ಷಿಸಿದನು."
![OBS Image](https://cdn.door43.org/obs/jpg/360px/obs-en-27-08.jpg)
"ತರುವಾಯ ಆ ದಾರಿಯಲ್ಲಿ ಬಂದ ವ್ಯಕ್ತಿಯು ಸಮಾರ್ಯದಿಂದ ಬಂದಂಥ ಮನುಷ್ಯನಾಗಿದ್ದನು. (ಸಮಾರ್ಯದವರು ಮತ್ತು ಯೆಹೂದ್ಯರು ಪರಸ್ಪರ ಒಬ್ಬರನ್ನೊಬ್ಬರು ದ್ವೇಷಿಸುತ್ತಿದ್ದರು.) ಆ ಸಮಾರ್ಯದವನು ದಾರಿಯಲ್ಲಿರುವ ಮನುಷ್ಯನನ್ನು ನೋಡಿದನು. ಅವನು ಯೆಹೂದ್ಯನು ಎಂದು ಅವನು ತಿಳಿದುಕೊಂಡನು, ಆದರೂ ಅವನು ಅವನ ಮೇಲೆ ತುಂಬಾ ಕರುಣೆ ತೋರಿದನು. ಅವನು ಅವನ ಬಳಿಗೆ ಹೋಗಿ ಅವನ ಗಾಯಗಳನ್ನು ಕಟ್ಟಿದನು."
![OBS Image](https://cdn.door43.org/obs/jpg/360px/obs-en-27-09.jpg)
"ಆಗ ಸಮಾರ್ಯದವನು ಆ ಮನುಷ್ಯನನ್ನು ಎತ್ತಿ ತನ್ನ ಸ್ವಂತ ಕತ್ತೆಯ ಮೇಲೆ ಹತ್ತಿಸಿಕೊಂಡು, ಅವನನ್ನು ರಸ್ತೆಯ ಮೂಲಕ ಛತ್ರಕ್ಕೆ ಕರೆದುಕೊಂಡು ಹೋದನು. ಅಲ್ಲಿ ಅವನ ಆರೈಕೆಮಾಡುವುದನ್ನು ಮುಂದುವರೆಸಿದನು."
![OBS Image](https://cdn.door43.org/obs/jpg/360px/obs-en-27-10.jpg)
"ಮರುದಿನ, ಸಮಾರ್ಯದವನು ತನ್ನ ಪ್ರಯಾಣವನ್ನು ಮುಂದುವರೆಸಬೇಕಾಗಿತ್ತು. ಅವನು ಛತ್ರದ ಮೇಲ್ವಿಚಾರಕನಾದ ವ್ಯಕ್ತಿಗೆ ಸ್ವಲ್ಪ ಹಣವನ್ನು ಕೊಟ್ಟು, ಅವನು ಅವನಿಗೆ, 'ಈ ಮನುಷ್ಯನ ಆರೈಕೆಮಾಡು, ಇದಕ್ಕಿಂತ ಹೆಚ್ಚಾಗಿ ಏನಾದರೂ ವೆಚ್ಚಮಾಡಿದರೆ ನಾನು ಹಿಂತಿರುಗಿ ಬಂದಾಗ ನಿನಗೆ ಕೊಡುವೆನು'"
![OBS Image](https://cdn.door43.org/obs/jpg/360px/obs-en-27-11.jpg)
ಅನಂತರ ಯೇಸು ಧರ್ಮಶಾಸ್ತ್ರಜ್ಞನಿಗೆ, "ನಿನಗೆ ಹೇಗೆ ತೋರುತ್ತದೆ? ಈ ಮೂವರಲ್ಲಿ ಯಾರು ಸುಲಿಗೆಗೊಳಗಾಗಿ ಹೊಡೆತ ತಿಂದಂಥ ವ್ಯಕ್ತಿಗೆ ನೆರೆಯವನಾದನು?" ಎಂದು ಕೇಳಿದನು. "ಅವನಿಗೆ ಕರುಣೆ ತೋರಿಸಿದವನೇ" ಎಂದು ಅವನು ಉತ್ತರಿಸಿದನು. ಯೇಸು ಅವನಿಗೆ, "ಹೋಗು, ನೀನೂ ಅದರಂತೆ ಮಾಡು" ಎಂದು ಹೇಳಿದನು.
_ಸತ್ಯವೇದದ ಕಥೆ: ಲೂಕ 10:25-37_

44
content/28.md Normal file
View File

@ -0,0 +1,44 @@
# 28. ಐಶ್ವರ್ಯವಂತನಾದ ಯುವ ಅಧಿಕಾರಿ
![OBS Image](https://cdn.door43.org/obs/jpg/360px/obs-en-28-01.jpg)
ಒಂದು ದಿನ ಐಶ್ವರ್ಯವಂತನಾದ ಯುವ ಅಧಿಕಾರಿಯು ಯೇಸುವಿನ ಬಳಿಗೆ ಬಂದು, "ಒಳ್ಳೆಯ ಬೋಧಕನೇ, ನಿತ್ಯಜೀವವನ್ನು ಪಡೆದುಕೊಳ್ಳಲು ನಾನೇನು ಮಾಡಬೇಕು?" ಎಂದು ಕೇಳಿದನು. ಯೇಸು ಅವನಿಗೆ, "ನನ್ನನ್ನು ಒಳ್ಳೆಯವನೆಂದು ಯಾಕೆ ಕರೆಯುತ್ತೀ? ದೇವರೊಬ್ಬನೇ ಹೊರತು ಮತ್ತಾವನೂ ಒಳ್ಳೆಯವನಿಲ್ಲ. ಆದರೆ ನೀನು ನಿತ್ಯಜೀವವನ್ನು ಪಡೆದುಕೊಳ್ಳಲು ಬಯಸಿದರೆ, ದೇವರ ನಿಯಮಗಳನ್ನು ಅನುಸರಿಸು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-28-02.jpg)
"ನಾನು ಅನುಸರಿಸಬೇಕಾದವುಗಳು ಯಾವುವು?" ಎಂದು ಅವನು ಕೇಳಿದ. ಯೇಸು, "ನರಹತ್ಯ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳು ಸಾಕ್ಷಿ ಹೇಳಬಾರದು. ನಿನ್ನ ತಂದೆತಾಯಿಗಳನ್ನು ಸನ್ಮಾನಿಸಬೇಕು. ಮತ್ತು ನಿನ್ನ ಹಾಗೆಯೆ ನಿನ್ನ ನೆರೆಯವನನ್ನು ಪ್ರೀತಿಸಬೇಕು ಎಂಬವುಗಳೇ" ಎಂದು ಉತ್ತರಿಸಿದನು.
![OBS Image](https://cdn.door43.org/obs/jpg/360px/obs-en-28-03.jpg)
ಆದರೆ ಯುವಕನು, "ನಾನು ಬಾಲ್ಯದಿಂದಲೂ ಇವೆಲ್ಲನ್ನು ಸರಿಯಾಗಿ ಅನುಸರಿಸುತ್ತಾ ಬಂದಿದ್ದೇನೆ. ನಿತ್ಯವಾಗಿ ಜೀವಿಸಲು ನಾನು ಇನ್ನೂ ಏನು ಮಾಡಬೇಕು?" ಎಂದು ಹೇಳಿದನು. ಯೇಸು ಅವನನ್ನು ದೃಷ್ಟಿಸಿ ನೋಡಿ ಅವನನ್ನು ಪ್ರೀತಿಸಿದನು.
![OBS Image](https://cdn.door43.org/obs/jpg/360px/obs-en-28-04.jpg)
ಯೇಸು ಅವನಿಗೆ , "ನೀನು ಪೂರ್ಣನಾಗುವುದಕ್ಕೆ ಬಯಸುವುದಾದರೆ, ಹೋಗಿ ನಿನಗಿರುವುದನ್ನೆಲ್ಲಾ ಮಾರಿ, ಬಡವರಿಗೆ ಕೊಡು, ಆಗ ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ಅನಂತರ ನೀನು ಬಂದು ನನ್ನನ್ನು ಹಿಂಬಾಲಿಸು" ಎಂದು ಉತ್ತರಿಸಿದನು.
![OBS Image](https://cdn.door43.org/obs/jpg/360px/obs-en-28-05.jpg)
ಯೌವನಸ್ಥನು ಯೇಸು ಹೇಳಿದ ಮಾತನ್ನು ಕೇಳಿದಾಗ ತುಂಬಾ ದುಃಖಿತನಾದನು, ಏಕೆಂದರೆ ಅವನು ಬಹಳ ಐಶ್ವರ್ಯವಂತನಾಗಿದ್ದನು ಮತ್ತು ಅವನು ತನಗಿರುವಂಥ ವಸ್ತುಗಳನ್ನೆಲ್ಲಾ ಬಿಟ್ಟುಕೊಡಲು ಬಯಸಲಿಲ್ಲ. ಅವನು ಯೇಸುವಿನಿಂದ ತಿರುಗಿಕೊಂಡು ಹೊರಟುಹೋದನು.
![OBS Image](https://cdn.door43.org/obs/jpg/360px/obs-en-28-06.jpg)
ತರುವಾಯ ಯೇಸು ತನ್ನ ಶಿಷ್ಯರಿಗೆ, "ಐಶ್ವರ್ಯವಂತರು ದೇವರ ರಾಜ್ಯದಲ್ಲಿ ಸೇರುವುದು ಎಷ್ಟೋ ಕಷ್ಟ! ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಕಣ್ಣಿನಲ್ಲಿ ನುಗ್ಗುವುದು ಸುಲಭ" ಎಂದು ಹೇಳಿದನು
![OBS Image](https://cdn.door43.org/obs/jpg/360px/obs-en-28-07.jpg)
ಯೇಸು ಹೇಳಿದ ಮಾತನ್ನು ಶಿಷ್ಯರು ಕೇಳಿದಾಗ ಅವರಿಗೆ ಆಘಾತವಾಯಿತು. ಅವರು, "ಹಾಗಾದರೆ ಯಾರಿಗೆ ರಕ್ಷಣೆಯಾದೀತು?" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-28-08.jpg)
ಯೇಸು ತನ್ನ ಶಿಷ್ಯರನ್ನು ನೋಡಿ, "ಜನರು ತಮ್ಮನ್ನು ತಾವು ರಕ್ಷಿಸಿಕೊಳ್ಳುವದು ಅಸಾಧ್ಯ, ಆದರೆ ದೇವರಿಗೆ ಮಾಡಲು ಅಸಾಧ್ಯವಾದ್ದದು ಯಾವುದು ಇಲ್ಲ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-28-09.jpg)
ಪೇತ್ರನು ಯೇಸುವಿಗೆ, "ಶಿಷ್ಯರಾದ ನಾವು ಎಲ್ಲವನ್ನೂ ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ, ನಮಗೆ ಸಿಗುವ ಪ್ರತಿಫಲವೇನು?" ಎಂದು ಕೇಳಿದನು.
![OBS Image](https://cdn.door43.org/obs/jpg/360px/obs-en-28-10.jpg)
ಯೇಸು, "ನನ್ನ ನಿಮಿತ್ತ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಭೂಮಿಯನ್ನಾಗಲಿ, ತೊರೆದುಬಿಟ್ಟಿರುವ ಪ್ರತಿಯೊಬ್ಬನೂ ಎಲ್ಲವನ್ನೂ ನೂರರಷ್ಟಾಗಿ ಹೊಂದುವನು. ಅಲ್ಲದೆ ನಿತ್ಯಜೀವವನ್ನು ಪಡೆದುಕೊಳ್ಳುವನು. ಆದರೆ ಈಗ ಮೊದಲಿನವರಾದ ಬಹು ಮಂದಿ ಕಡೆಯವರಾಗುವರು ಮತ್ತು ಕಡೆಯವರಾದ ಬಹು ಮಂದಿ ಮೊದಲಿನವರಾಗುವರು" ಎಂದು ಉತ್ತರಿಸಿದನು.
_ಸತ್ಯವೇದದ ಕಥೆ: ಮತ್ತಾಯ 19:16-30; ಮಾರ್ಕ 10:17-31; ಲೂಕ 18:18-30_

40
content/29.md Normal file
View File

@ -0,0 +1,40 @@
# 29. ಕರುಣೆಯಿಲ್ಲದ ಸೇವಕನ ಕಥೆ
![OBS Image](https://cdn.door43.org/obs/jpg/360px/obs-en-29-01.jpg)
ಒಂದು ದಿನ, ಪೇತ್ರನು ಯೇಸುವಿಗೆ, "ಕರ್ತನೇ ನನ್ನ ಸಹೋದರನು ನನ್ನ ವಿರುದ್ಧ ಪಾಪ ಮಾಡಿದರೆ ನಾನು ಎಷ್ಟು ಸಾರಿ ಅವನನ್ನು ಕ್ಷಮಿಸಬೇಕು? ಏಳು ಸಾರಿಯೋ?” ಎಂದು ಕೇಳಿದನು. ಯೇಸು, "ಏಳು ಸಾರಿ ಅಲ್ಲ ಏಳೆಪ್ಪತ್ತು ಸಾರಿ!" ಎಂದು ಹೇಳಿದನು. ಯೇಸು ಇದರ ಮೂಲಕ ನಾವು ಯಾವಾಗಲೂ ಕ್ಷಮಿಸಬೇಕೆಂದು ಸೂಚಿಸಿದನು. ಅನಂತರ ಯೇಸು ಈ ಕಥೆಯನ್ನು ಹೇಳಿದನು.
![OBS Image](https://cdn.door43.org/obs/jpg/360px/obs-en-29-02.jpg)
ಯೇಸು, “ದೇವರ ರಾಜ್ಯವು ತನ್ನ ಸೇವಕರಿಂದ ಲೆಕ್ಕವನ್ನು ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ. ಅವನ ಸೇವಕರಲ್ಲಿ ಒಬ್ಬನು 200,000 ವರ್ಷಗಳ ಸಂಬಳದಷ್ಟು ದೊಡ್ಡ ಸಾಲವನ್ನು ತೀರಿಸಬೇಕಾಯಿತು.
![OBS Image](https://cdn.door43.org/obs/jpg/360px/obs-en-29-03.jpg)
“ಆ ಸಾಲ ತೀರಿಸುವುದಕ್ಕೆ ಆ ಸೇವಕನಿಂದ ಆಗಲಿಲ್ಲ, ಆದ್ದರಿಂದ ಅರಸನು “ಈ ಮನುಷ್ಯನನ್ನೂ, ಅವನ ಹೆಂಡತಿ, ಮಕ್ಕಳನ್ನೂ ಮಾರಿ ಅದನ್ನು ತೀರಿಸಬೇಕು” ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-29-04.jpg)
“ಆ ಸೇವಕನು ಅರಸನ ಮುಂದೆ ಮೊಣಕಾಲೂರಿ ಅವನಿಗೆ, ‘ದಯವಿಟ್ಟು ನನ್ನ ಮೇಲೆ ತಾಳ್ಮೆಯಿರಲಿ, ನಾನು ನಿನಗೆ ಸಂಪೂರ್ಣ ಹಣವನ್ನು ಕೊಟ್ಟು ಸಾಲ ತೀರಿಸುತ್ತೇನೆಂದು’ ಹೇಳಿದನು. ಅರಸನು ಆ ಸೇವಕನ ಮೇಲೆ ಕನಿಕರಪಟ್ಟು ಅವನನ್ನು ಬಿಡಿಸಿ ಆ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು.”
![OBS Image](https://cdn.door43.org/obs/jpg/360px/obs-en-29-05.jpg)
“ಆದರೆ ಆ ಸೇವಕನು ಅರಸನ ಬಳಿಯಿಂದ ಹೊರಟು ಹೋದಾಗ, ತನಗೆ ನಾಲ್ಕು ತಿಂಗಳುಗಳ ಸಂಬಳದಷ್ಟು ಸಾಲವನ್ನು ಕೊಡಬೇಕಾಗಿದ್ದ ಒಬ್ಬ ಜೊತೆ ಸೇವಕನನ್ನು ಕಂಡು ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲವನ್ನು ತೀರಿಸು’ ಎಂದು ಹೇಳಿದನು”
![OBS Image](https://cdn.door43.org/obs/jpg/360px/obs-en-29-06.jpg)
“ಅವನ ಜೊತೆ ಸೇವಕನು ಮೊಣಕಾಲೂರಿ, ‘ದಯವಿಟ್ಟು, ನನ್ನ ಮೇಲೆ ತಾಳ್ಮೆಯಿರಲಿ ನಾನು ನಿನಗೆ ಸಂಪೂರ್ಣ ಹಣವನ್ನು ಕೊಟ್ಟು ಸಾಲ ತೀರಿಸುತ್ತೇನೆಂದು’ ಹೇಳಿದನು. ಆದರೆ ಅವನು ಒಪ್ಪದೆ ಆ ಸಾಲ ತೀರಿಸುವ ತನಕ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.”
![OBS Image](https://cdn.door43.org/obs/jpg/360px/obs-en-29-07.jpg)
“ಇತರ ಸೇವಕರು ನಡೆದ ಸಂಗತಿಯನ್ನು ನೋಡಿ ಬಹಳವಾಗಿ ದುಃಖಪಟ್ಟು, ತಮ್ಮ ಅರಸನ ಬಳಿಗೆ ಹೋಗಿ ನಡೆದದ್ದನ್ನೆಲ್ಲಾ ಆತನಿಗೆ ತಿಳಿಸಿದರು.”
![OBS Image](https://cdn.door43.org/obs/jpg/360px/obs-en-29-08.jpg)
“ಅರಸನು ಅವನನ್ನು ಕರೆಯಿಸಿ, ‘ದುಷ್ಟ ಸೇವಕನೇ! ನೀನು ನನ್ನನ್ನು ಬೇಡಿಕೊಂಡದ್ದರಿಂದ ನಿನ್ನ ಸಾಲವನ್ನೆಲ್ಲಾ ನಾನು ಮನ್ನಿಸಿಬಿಟ್ಟೆನು. ನೀನು ಸಹ ಅದನ್ನೇ ಮಾಡಬೇಕಾಗಿತ್ತು. ಎಂದು ಹೇಳಿದನು. ನಂತರ ಅರಸನು ಸಿಟ್ಟುಗೊಂಡು ತನಗೆ ಕೊಡಬೇಕಾದ ಸಾಲವನ್ನು ತೀರಿಸುವ ತನಕ ಆ ಸೇವಕನನ್ನು ಸೆರೆಮನೆಗೆ ಹಾಕಿಸಿದನು.”
![OBS Image](https://cdn.door43.org/obs/jpg/360px/obs-en-29-09.jpg)
ಆಗ ಯೇಸು, “ನಿಮ್ಮಲ್ಲಿ ಪ್ರತಿಯೊಬ್ಬನೂ ತನ್ನ ಸಹೋದರನಿಗೆ ಹೃದಯಪೂರ್ವಕವಾಗಿ ಕ್ಷಮಿಸದೇ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯು ನಿಮಗೂ ಹಾಗೆಯೇ ಮಾಡುವನು” ಎಂದು ಹೇಳಿದನು.
_ಸತ್ಯವೇದದ ಕಥೆ: ಮತ್ತಾಯ 18:21-35_

40
content/30.md Normal file
View File

@ -0,0 +1,40 @@
# 30. ಯೇಸು ಐದು ಸಾವಿರ ಜನರಿಗೆ ಊಟವನ್ನು ವದಗಿಸಿದ್ದು
![OBS Image](https://cdn.door43.org/obs/jpg/360px/obs-en-30-01.jpg)
ಜನರಿಗೆ ಉಪದೇಶಿಸಲು ಮತ್ತು ಬೋಧಿಸಲು ಯೇಸು ತನ್ನ ಅಪೊಸ್ತಲರನ್ನು ಬೇರೆ ಬೇರೆ ಹಳ್ಳಿಗಳಿಗೆ ಕಳುಹಿಸಿದನು. ಯೇಸು ಇದ್ದಲ್ಲಿಗೆ ಅವರು ಹಿಂದಿರುಗಿ ಬಂದಾಗ, ಅವರು ತಾವು ಮಾಡಿದ್ದನ್ನೂ ಆತನಿಗೆ ಹೇಳಿದರು. ತರುವಾಯ ಯೇಸು ಅವರಿಗೆ ಸರೋವರದ ಆಚೇ ಕಡೆಯಲ್ಲಿರುವ ಏಕಾಂತ ಸ್ಥಳಕ್ಕೆ ತನ್ನೊಂದಿಗೆ ಬಂದು ಸ್ವಲ್ಪ ವಿಶ್ರಮಿಸಿಕೊಳ್ಳಿರಿ ಎಂದು ಆಹ್ವಾನಿಸಿದನು. ಆದ್ದರಿಂದ, ಅವರು ದೋಣಿಯನ್ನು ಹತ್ತಿ ಸರೋವರದ ಆಚೇ ಕಡೆಗೆ ಹೋದರು.
![OBS Image](https://cdn.door43.org/obs/jpg/360px/obs-en-30-02.jpg)
ಆದರೆ ಯೇಸುವು ಮತ್ತು ಶಿಷ್ಯರು ದೋಣಿಯಲ್ಲಿ ಹೋಗುವುದನ್ನು ನೋಡಿದಂಥ ಅನೇಕ ಜನರಿದ್ದರು. ಈ ಜನರು ಅವರಿಗಿಂತ ಮೊದಲು ಆಚೇ ದಡಕ್ಕೆ ಹೋಗಲು ಸರೋವರದ ದಡದಲ್ಲಿ ಓಡಿಹೋದರು. ಆದ್ದರಿಂದ ಯೇಸು ಮತ್ತು ಶಿಷ್ಯರು ಬಂದಾಗ, ಅವರಿಗಾಗಿ ಕಾಯುತ್ತಿದ್ದ ದೊಡ್ಡ ಜನಸಮೂಹವು ಅಲ್ಲಿತ್ತು.
![OBS Image](https://cdn.door43.org/obs/jpg/360px/obs-en-30-03.jpg)
ಸ್ತ್ರೀಯರ ಮತ್ತು ಮಕ್ಕಳ ಲೆಕ್ಕವನ್ನು ಹೊರತುಪಡಿಸಿ, ಜನಸಮೂಹದಲ್ಲಿ 5,000 ಕ್ಕಿಂತ ಹೆಚ್ಚು ಗಂಡಸರಿದ್ದರು ಯೇಸುವಿಗೆ ಈ ಜನರು ಕುರುಬನಿಲ್ಲದ ಕುರಿಗಳಂತೆ ಇದ್ದಾರೆ ಎಂದು ತಿಳಿದು ಜನರ ವಿಷಯದಲ್ಲಿ ಬಹು ಕನಿಕರಪಟ್ಟನು. . ಆದ್ದರಿಂದ ಆತನು ಅವರಿಗೆ ಬೋಧಿಸಿದನು ಮತ್ತು ಅವರ ಮಧ್ಯದಲ್ಲಿ ರೋಗಿಗಳಾಗಿದ್ದ ಜನರನ್ನು ಗುಣಪಡಿಸಿದನು.
![OBS Image](https://cdn.door43.org/obs/jpg/360px/obs-en-30-04.jpg)
ಸಂಜೆಯಾದಾಗ ಶಿಷ್ಯರು ಯೇಸುವಿಗೆ, "ಹೊತ್ತು ಹೋಯಿತು ಮತ್ತು ಹತ್ತಿರದಲ್ಲಿ ಯಾವ ಊರುಗಳಿಲ್ಲ. ಆದ್ದರಿಂದ ಅವರು ಹೋಗಿ ಊಟಕ್ಕಾಗಿ ಏನನ್ನಾದರೂ ಕೊಂಡುಕೊಳ್ಳುವಂತೆ ಜನರನ್ನು ಕಳುಹಿಸಿಬಿಡು" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-30-05.jpg)
ಆದರೆ ಯೇಸು ಶಿಷ್ಯರಿಗೆ, "ನೀವೇ ಅವರಿಗೆ ಊಟಕ್ಕೆ ಏನಾದರೂ ಕೊಡಿರಿ" ಎಂದು ಹೇಳಿದನು. ಅವರು, "ನಾವು ಅದನ್ನು ಹೇಗೆ ಮಾಡಲಿ? ನಮ್ಮಲ್ಲಿ ಕೇವಲ ಐದು ರೊಟ್ಟಿಗಳು ಮತ್ತು ಎರಡು ಚಿಕ್ಕ ಮೀನುಗಳಿವೆ" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-30-06.jpg)
ಒಂದೊಂದು ಗುಂಪಿನಲ್ಲಿ ಐವತ್ತೈವತ್ತು ಜನರಾಗಿ ಹುಲ್ಲಿನ ಮೇಲೆ ಕುಳಿತುಕೊಳ್ಳಿರಿ ಎಂದು ಜನಸಮೂಹಕ್ಕೆ ಹೇಳುವಂತೆ ಯೇಸು ತನ್ನ ಶಿಷ್ಯರಿಗೆ ಹೇಳಿದನು.
![OBS Image](https://cdn.door43.org/obs/jpg/360px/obs-en-30-07.jpg)
ಆಗ ಯೇಸು ಐದು ರೊಟ್ಟಿ ಮತ್ತು ಎರಡು ಮೀನುಗಳನ್ನು ತೆಗೆದುಕೊಂಡು ಆಕಾಶದ ಕಡೆಗೆ ನೋಡಿ ಆಹಾರಕ್ಕಾಗಿ ದೇವರಿಗೆ ಸ್ತೋತ್ರ ಮಾಡಿದನು.
![OBS Image](https://cdn.door43.org/obs/jpg/360px/obs-en-30-08.jpg)
ಅನಂತರ ಯೇಸು ರೊಟ್ಟಿಯನ್ನು ಮತ್ತು ಮೀನನ್ನು ತುಂಡುಗಳಾಗಿ ಮುರಿದನು. ಅದನ್ನು ಆತನು ತನ್ನ ಶಿಷ್ಯರಿಗೆ ಕೊಟ್ಟು ಜನರಿಗೆ ಹಂಚುವಂತೆ ತಿಳಿಸದನು.. ಶಿಷ್ಯರು ಜನರಿಗೆ ಆಹಾರವನ್ನು ಕೊಡುತ್ತಿದ್ದರು, ಆದರೆ ಅದು ಮುಗಿದುಹೋಗಲಿಲ್ಲ! ಜನರೆಲ್ಲರು ತಿಂದು ತೃಪ್ತರಾದರು.
![OBS Image](https://cdn.door43.org/obs/jpg/360px/obs-en-30-09.jpg)
ಅದಾದನಂತರ, ತಿನ್ನದೇ ಉಳಿದಿದ್ದ ಆಹಾರವನ್ನು ಶಿಷ್ಯರು ಕೂಡಿಸಲು, ಅದು ಹನ್ನೆರಡು ಬುಟ್ಟಿಗಳು ತುಂಬುವಷ್ಟಿತ್ತು! ಈ ಆಹಾರವೆಲ್ಲವು ಐದು ರೊಟ್ಟಿ ಮತ್ತು ಎರಡು ಮೀನುಗಳಿಂದ ಬಂದ್ದದಾಗಿತ್ತು.
_ಸತ್ಯವೇದದ ಕಥೆ: ಮತ್ತಾಯ 14:13-21; ಮಾರ್ಕ 6:31-44; ಲೂಕ 9:10-17; ಯೋಹಾನ 6:5-15_

36
content/31.md Normal file
View File

@ -0,0 +1,36 @@
# 31. ಯೇಸು ನೀರಿನ ಮೇಲೆ ನಡೆದದ್ದು
![OBS Image](https://cdn.door43.org/obs/jpg/360px/obs-en-31-01.jpg)
ಯೇಸು ಐದು ಸಾವಿರ ಜನರಿಗೆ ಊಟವನ್ನು ಕೊಟ್ಟ ನಂತರ, ಆತನು ಶಿಷ್ಯರಿಗೆ ದೋಣಿಯನ್ನು ಹತ್ತಲು ಹೇಳಿದನು. ಸರೋವರದ ಆಚೇ ಕಡೆಗೆ ದೋಣಿಯಲ್ಲಿ ಹೋಗಲು ಅವರಿಗೆ ಹೇಳಿ, ಆತನು ಸ್ವಲ್ಪ ಸಮಯದವರೆಗೆ ಅಲ್ಲಿಯೇ ಇದ್ದನು. ಆದ್ದರಿಂದ ಶಿಷ್ಯರು ಹೊರಟುಹೋದರು, ಮತ್ತು ಯೇಸು ಜನರನ್ನು ಅವರ ಮನೆಗಳಿಗೆ ಕಳುಹಿಸಿದನು. ಅದಾದ ನಂತರ ಯೇಸು ಪ್ರಾರ್ಥನೆ ಮಾಡಲು ಬೆಟ್ಟದ ಮಗ್ಗಲಲ್ಲಿ ಹೋದನು. ಆತನು ಒಬ್ಬನೇ ಅಲ್ಲಿ ಇದ್ದು ತಡರಾತ್ರಿಯವರೆಗೂ ಪ್ರಾರ್ಥಿಸಿದನು.
![OBS Image](https://cdn.door43.org/obs/jpg/360px/obs-en-31-02.jpg)
ಈ ಸಮಯದಲ್ಲಿ ಶಿಷ್ಯರು ತಮ್ಮ ದೋಣಿಯನ್ನು ಹುಟ್ಟುಹಾಕಿಕೊಂಡು ಹೋಗುತ್ತಿದ್ದರು, ಆದರೆ ಗಾಳಿಯು ಅವರಿಗೆ ವಿರುದ್ಧವಾಗಿ ಬಲವಾಗಿ ಬೀಸುತ್ತಿತ್ತು. ತಡರಾತ್ರಿಯಾದಾಗ, ಅವರು ಸರೋವರದ ಮಧ್ಯದವರೆಗೆ ಮಾತ್ರ ತಲುಪಿದ್ದರು.
![OBS Image](https://cdn.door43.org/obs/jpg/360px/obs-en-31-03.jpg)
ಆ ಸಮಯದಲ್ಲಿ ಯೇಸು ಪ್ರಾರ್ಥಿಸುವುದನ್ನು ಮುಗಿಸಿ ತನ್ನ ಶಿಷ್ಯರನ್ನು ಎದುರುಗೊಳ್ಳಲು ಅವರ ಕಡೆಗೆ ಹೋಗಲು ಪ್ರಾರಂಭಿಸಿದನು. ಆತನು ನೀರಿನ ಮೇಲೆ ನಡೆಡುಕೊಂಡು ಅವರ ದೋಣಿಯ ಕಡೆಗೆ ಹೋದನು.
![OBS Image](https://cdn.door43.org/obs/jpg/360px/obs-en-31-04.jpg)
ಆಗ ಶಿಷ್ಯರು ಆತನನ್ನು ನೋಡಿದರು. ಅವರು ಆತನನ್ನು ಭೂತ ಎಂದು ಭಾವಿಸಿದ್ದರಿಂದ ಅವರು ಬಹಳ ಭಯಪಟ್ಟರು. ಅವರು ಭಯಪಟ್ಟಿದ್ದಾರೆಂದು ಯೇಸುವಿಗೆ ತಿಳಿದಿತ್ತು, ಆದ್ದರಿಂದ ಆತನು ಅವರೊಂದಿಗೆ ಮಾತನಾಡಿ, "ಭಯಪಡಬೇಡಿರಿ ನಾನೇ!" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-31-05.jpg)
ಆಗ ಪೇತ್ರನು ಯೇಸುವಿಗೆ, "ಕರ್ತನೇ ನೀನೇ ಆದರೆ ನಾನು ನೀರಿನ ಮೇಲೆ ನಡೆದು ನಿನ್ನ ಬಳಿಗೆ ಬರುವುದಕ್ಕೆ ಅಪ್ಪಣೆ ಕೊಡು" ಎಂದನು. ಯೇಸು ಪೇತ್ರನಿಗೆ "ಬಾ!" ಅಂದನು.
![OBS Image](https://cdn.door43.org/obs/jpg/360px/obs-en-31-06.jpg)
ಆದ್ದರಿಂದ ಪೇತ್ರನು ಯೇಸುವಿನ ಬಳಿಗೆ ಹೋಗುವುದಕ್ಕೆ ದೋಣಿಯಿಂದ ಇಳಿದು ನೀರಿನ ಮೇಲೆ ನಡೆಯಲು ಪ್ರಾರಂಭಿಸಿದನು. ಆದರೆ ಸ್ವಲ್ಪ ದೂರದ ನಡೆದುಹೋದ ನಂತರ, ಅವನು ಯೇಸುವನ್ನು ನೋಡುವುದನ್ನು ಬಿಟ್ಟು ಅಲೆಗಳ ಕಡೆಗೆ ನೋಡಲು ಮತ್ತು ಬಲವಾದ ಗಾಳಿಯನ್ನು ಅನುಭವಿಸಲು ಪ್ರಾರಂಭಿಸಿದನು.
![OBS Image](https://cdn.door43.org/obs/jpg/360px/obs-en-31-07.jpg)
ಆಗ ಪೇತ್ರನು ಭಯಪಟ್ಟು ನೀರಿನಲ್ಲಿ ಮುಳುಗಲಾರಂಭಿಸಿದನು. ಅವನು, “ಕರ್ತನೇ, ನನ್ನನ್ನು ಕಾಪಾಡು” ಎಂದು ಕೂಗಿದನು. ತಕ್ಷಣವೇ ಯೇಸು ಕೈಚಾಚಿ ಅವನನ್ನು ಹಿಡಿದುಕೊಂಡನು. ಆಗ ಆತನು ಪೇತ್ರನಿಗೆ, "ನೀನು ಅಲ್ಪ ವಿಶ್ವಾಸಿ, ನಾನು ನಿನ್ನನ್ನು ಕಾಪಾಡುವಂತೆ ನೀನು ಯಾಕೆ ನನ್ನನ್ನು ನಂಬಲಿಲ್ಲ?" ಎಂದನು.
![OBS Image](https://cdn.door43.org/obs/jpg/360px/obs-en-31-08.jpg)
ಆಗ ಪೇತ್ರನೂ ಯೇಸುವೂ ದೋಣಿಯನ್ನು ಹತ್ತಿದ್ದರು, ಕೂಡಲೇ ಗಾಳಿ ಬೀಸುವುದು ನಿಂತು ಹೋಯಿತು. ನೀರು ಶಾಂತವಾಯಿತು. ಶಿಷ್ಯರು ಆತ್ಯಾಶ್ಚರ್ಯಪಟ್ಟು ಯೇಸುವಿಗೆ ಅಡ್ಡಬಿದ್ದರು. ಅವರು ಆತನನ್ನು ಆರಾಧಿಸಿ ಆತನಿಗೆ, "ನಿಜವಾಗಿ ನೀನು ದೇವಕುಮಾರನು" ಎಂದು ಹೇಳಿದರು.
_ಸತ್ಯವೇದದ ಕಥೆ: ಮತ್ತಾಯ 14:22-33; ಮಾರ್ಕ 6:45-52; ಯೋಹಾನ 6:16-21_

68
content/32.md Normal file
View File

@ -0,0 +1,68 @@
# 32. ಯೇಸು ದೆವ್ವ ಹಿಡಿದಿದ್ದ ಮನುಷ್ಯನನ್ನು ಮತ್ತು ರೋಗಿಯಾದ ಸ್ತ್ರೀಯನ್ನು ಸ್ವಸ್ಥಪಡಿಸಿದನು
![OBS Image](https://cdn.door43.org/obs/jpg/360px/obs-en-32-01.jpg)
ಯೇಸು ಮತ್ತು ಆತನ ಶಿಷ್ಯರು ಗೆರಸೇನರ ಜನರು ವಾಸಿಸುತ್ತಿದ್ದ ಸೀಮೆಗೆ ತಮ್ಮ ದೋಣಿಯಲ್ಲಿ ಹೋದರು. ಅವರು ದಡಕ್ಕೆ ತಲುಪಿ, ತಮ್ಮ ದೋಣಿಯಿಂದ ಇಳಿದರು.
![OBS Image](https://cdn.door43.org/obs/jpg/360px/obs-en-32-02.jpg)
ಅಲ್ಲಿ ದೆವ್ವ ಹಿಡಿದಿದ್ದ ಒಬ್ಬ ಮನುಷ್ಯನಿದ್ದನು.
![OBS Image](https://cdn.door43.org/obs/jpg/360px/obs-en-32-03.jpg)
ಅವನನ್ನು ಹತೋಟಿಗೆ ತರುವುದಕ್ಕೆ ಯಾರಿಂದಲೂ ಆಗುತ್ತಿರಲಿಲ್ಲ ಏಕೆಂದರೆ ಈ ಮನುಷ್ಯನು ಅಷ್ಟು ಬಲಿಷ್ಠನಾಗಿದ್ದನು. ಕೆಲವೊಮ್ಮೆ ಜನರು ಅವನ ಕೈಕಾಲುಗಳನ್ನು ಸರಪಳಿಗಳಿಂದ ಕಟ್ಟಿದ್ದರು, ಆದರೆ ಅವನು ಅವುಗಳನ್ನೂ ಒಡೆದು ಹಾಕುತ್ತಿದ್ದನು.
![OBS Image](https://cdn.door43.org/obs/jpg/360px/obs-en-32-04.jpg)
ಆ ಪ್ರದೇಶದಲ್ಲಿರುವ ಸಮಾಧಿಗಳ ಮದ್ಯೆ ಒಬ್ಬ ಮನುಷ್ಯ ಜೀವಿಸುತ್ತಿದ್ದನು. ಆತನು ಹಗಲಿರುಳು ಅರಚಾಡುತ್ತಿದ್ದನು. ಅವನು ಬಟ್ಟೆಯನ್ನು ಧರಿಸುತ್ತಿರಲಿಲ್ಲ ಮತ್ತು ಅವನು ಹರಿತವಾದ ಕಲ್ಲುಗಳಿಂದ ತನ್ನನ್ನು ತಾನೇ ಕತ್ತರಿಸಿಕೊಳ್ಳುತ್ತಿದ್ದನು.
![OBS Image](https://cdn.door43.org/obs/jpg/360px/obs-en-32-05.jpg)
ಈ ಮನುಷ್ಯನು ಯೇಸುವಿನ ಬಳಿಗೆ ಓಡಿಹೋಗಿ ಆತನ ಮುಂದೆ ಮೊಣಕಾಲೂರಿದನು. ಆಗ ಯೇಸು ಆ ಮನುಷ್ಯನೊಳಗಿದ್ದ ದೆವ್ವಕ್ಕೆ, "ಈ ಮನುಷ್ಯನನ್ನು ಬಿಟ್ಟು ಹೊರಟು ಹೋಗು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-32-06.jpg)
ದೆವ್ವವು ಮಹಾಶಬ್ದದಿಂದ, "ಯೇಸುವೇ, ಮಹೋನ್ನತನಾದ ದೇವರ ಮಗನೇ, ನನ್ನ ಗೊಡವೆ ನಿನಗೇಕೆ? ದಯವಿಟ್ಟು ನನ್ನನ್ನು ಹಿಂಸಿಸಬೇಡ!" ಎಂದು ಅಬ್ಬರಿಸಿತು. ಆಗ ಯೇಸು ದೆವ್ವಕ್ಕೆ "ನಿನ್ನ ಹೆಸರೇನು?" ಎಂದು ಕೇಳಿದನು. ಅದು, "ನನ್ನ ಹೆಸರು ದಂಡು; ಯಾಕೆಂದರೆ ನಾವು ಬಹು ಮಂದಿ ಇದ್ದೇವೆ" ಎಂದು ಹೇಳಿತು. (ಒಂದು "ಲೀಜನ್" ಅಥವಾ “ದಂಡು” ಅಂದರೆ ರೋಮನ್ ಸೈನ್ಯದಲ್ಲಿರುವ ಸಾವಿರಾರು ಸೈನಿಕರುಳ್ಳ ಒಂದು ಗುಂಪು.)
![OBS Image](https://cdn.door43.org/obs/jpg/360px/obs-en-32-07.jpg)
ದೆವ್ವಗಳು ಯೇಸುವಿಗೆ, "ದಯವಿಟ್ಟು ನಮ್ಮನ್ನು ಈ ಸೀಮೆಯಿಂದ ಹೊರಡಿಸಬೇಡ” ಎಂದು ಆತನನ್ನು ಬೇಡಿಕೊಂಡವು. ಸಮೀಪದ ಗುಡ್ಡದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು. ಆ ದೆವ್ವಗಳು, “ಆ ಹಂದಿಗಳೊಳಗೆ ಸೇರಿಕೊಳ್ಳುವುದಕ್ಕೆ ನಮ್ಮನ್ನು ಕಳುಹಿಸಿಕೊಡು!” ಎಂದು ಆತನನ್ನು ಬೇಡಿಕೊಂಡವು. ಯೇಸು, "ಸರಿ, ಅವುಗಳೊಳಗೆ ಹೋಗಿರಿ" ಅಂದನು.
![OBS Image](https://cdn.door43.org/obs/jpg/360px/obs-en-32-08.jpg)
ಆದ್ದರಿಂದ ದೆವ್ವಗಳು ಮನುಷ್ಯನಿಂದ ಹೊರಬಂದು ಹಂದಿಗಳೊಳಗೆ ಹೊಕ್ಕವು. ಆ ಹಂದಿಗಳು ಬೆಟ್ಟದ ಕಡಿದಾದ ಬದಿಯಿಂದ ಓಡಿಹೋಗಿ ಸರೋವರದೊಳಗೆ ಬಿದ್ದು ಮುಳುಗಿಹೋದವು. ಆ ಹಿಂಡಿನಲ್ಲಿ ಸುಮಾರು 2,000 ಹಂದಿಗಳಿದ್ದವು.
![OBS Image](https://cdn.door43.org/obs/jpg/360px/obs-en-32-09.jpg)
ಆ ಹಂದಿಗಳನ್ನು ಮೇಯಿಸುತ್ತಿದ್ದ ಜನರು ಅಲ್ಲಿದ್ದರು. ನಡೆದ ಸಂಗತಿಯನ್ನು ಅವರು ನೋಡಿದಾಗ ಅವರು ಊರುಗಳಿಗೆ ಓಡಿಹೋಗಿ, ಯೇಸು ಮಾಡಿದ ಸಂಗತಿಯನ್ನು ಅಲ್ಲಿರುವ ಎಲ್ಲರಿಗೂ ಅವರು ತಿಳಿಸಿದರು. ಆ ಊರಿನಿಂದ ಜನರು ಬಂದು ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನನ್ನು ನೋಡಿದರು. ಅವನು ಬಟ್ಟೆ ಧರಿಸಿಕೊಂಡು ಶಾಂತನಾಗಿ ಕುಳಿತುಕೊಂಡಿದ್ದನು ಮತ್ತು ಸಾಮಾನ್ಯ ಮನುಷ್ಯನಂತೆ ವರ್ತಿಸುತ್ತಿದ್ದನು.
![OBS Image](https://cdn.door43.org/obs/jpg/360px/obs-en-32-10.jpg)
ಜನರು ಬಹಳ ಭಯಭೀತರಾಗಿ, ತಮ್ಮ ಸೀಮೆಯನ್ನು ಬಿಟ್ಟು ಹೋಗಬೇಕೆಂದು ಯೇಸುವನ್ನು ಬೇಡಿಕೊಂಡರು. ಆದ್ದರಿಂದ ಯೇಸು ದೋಣಿಯನ್ನು ಹತ್ತಿದನು. ದೆವ್ವಗಳಿಂದ ಪೀಡಿತನಾಗಿದ್ದ ಮನುಷ್ಯನು ಯೇಸುವಿನೊಂದಿಗೆ ತಾನು ಬರುವೆನೆಂದು ಬೇಡಿಕೊಂಡನು.
![OBS Image](https://cdn.door43.org/obs/jpg/360px/obs-en-32-11.jpg)
ಆದರೆ ಯೇಸು ಅವನಿಗೆ, "ಇಲ್ಲ, ನೀನು ಮನೆಗೆ ಹೋಗಿ ದೇವರು ನಿನ್ನಲ್ಲಿ ಕರುಣೆಯಿಟ್ಟು ನಿನಗೆ ಏನೇನು ಮಾಡಿದ್ದಾನೋ ಅದನ್ನು ನೀನು ಹೇಳಬೇಕೆಂದು ನಾನು ಬಯಸುತ್ತೇನೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-32-12.jpg)
ಅದರಂತೆಯೇ ಅವನು ಹೊರಟುಹೋಗಿ ಯೇಸು ತನಗೆ ಮಾಡಿದ ಉಪಕಾರವನ್ನು ಎಲ್ಲರಿಗೂ ಹೇಳಿದನು. ಅವನ ಕಥೆಯನ್ನು ಕೇಳಿಸಿಕೊಂಡ ಪ್ರತಿಯೊಬ್ಬರು ಆಶ್ಚರ್ಯಪಟ್ಟರು.
![OBS Image](https://cdn.door43.org/obs/jpg/360px/obs-en-32-13.jpg)
ಯೇಸು ಸರೋವರದ ಈಚೇದಡಕ್ಕೆ ಹಿಂದಿರುಗಿ ಬಂದನು. ಆತನು ಅಲ್ಲಿಗೆ ಬಂದ ನಂತರ, ಜನರ ದೊಡ್ಡ ಗುಂಪು ಆತನ ಸುತ್ತಲೂ ಮುತ್ತಿಕೊಂಡು ಆತನನ್ನು ನೂಕಾಡುತ್ತಿದ್ದರು. ಆ ಗುಂಪಿನಲ್ಲಿ ಹನ್ನೆರಡು ವರ್ಷಗಳ ಕಾಲ ರಕ್ತಸ್ರಾವದಿಂದ ಬಳಲುತ್ತಿದ್ದ ಒಬ್ಬ ಸ್ತ್ರೀ ಇದ್ದಳು. ಆಕೆಯು ತನ್ನನ್ನು ಸ್ವಸ್ಥಪಡಿಸುವಂತೆ ತನ್ನ ಹಣವನ್ನೆಲ್ಲಾ ವೈದ್ಯರಿಗೆ ವ್ಯಯಮಾಡಿದ್ದಳು, ಆದರೂ ಅವಳ ರೋಗವು ಹೆಚ್ಚುತ್ತಾ ಬಂದಿತ್ತೇ ಹೊರತು ಸ್ವಲ್ಪವೂ ಗುಣಮುಖವಾಗುತ್ತಿರಲಿಲ್ಲ
![OBS Image](https://cdn.door43.org/obs/jpg/360px/obs-en-32-14.jpg)
ಯೇಸು ಅನೇಕ ಮಂದಿ ರೋಗಿಗಳನ್ನು ಗುಣಪಡಿಸಿದ್ದಾನೆ ಎಂದು ಆಕೆಯು ಕೇಳಿ, "ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ನಾನು ಕೂಡ ನಿಶ್ಚಯವಾಗಿ ಸ್ವಸ್ಥಳಾಗುವೆನು" ಎಂದು ಆಲೋಚಿಸಿಕೊಂಡಳು. ಆಕೆಯು ಯೇಸುವಿನ ಹಿಂದಿನಿಂದ ಬಂದು ಆತನ ಉಡುಪನ್ನು ಮುಟ್ಟಿದಳು. ಅವಳು ಅದನ್ನು ಮುಟ್ಟಿದ ಕೂಡಲೇ, ರಕ್ತಸ್ರಾವವು ನಿಂತುಹೋಯಿತು!
![OBS Image](https://cdn.door43.org/obs/jpg/360px/obs-en-32-15.jpg)
ತಕ್ಷಣವೇ, ಯೇಸು ತನ್ನಿಂದ ಶಕ್ತಿಯು ಹೊರಹೊಮ್ಮಿತ್ತೆಂದು ತಿಳಿದುಕೊಂಡನು. ಆದ್ದರಿಂದ ಆತನು ಸುತ್ತಲೂ ತಿರುಗಿನೋಡಿ, "ನನ್ನನ್ನು ಮುಟ್ಟಿದವರಾರು?" ಎಂದು ಕೇಳಿದನು. ಶಿಷ್ಯರು, "ನಿನ್ನ ಸುತ್ತಲೂ ಬಹಳ ಜನರು ಮುತ್ತಿಕೊಂಡು ನೂಕುತ್ತಿದ್ದಾರೆ. ಆದರೂ ‘ನನ್ನನ್ನು ಮುಟ್ಟಿದವರು ಯಾರು’ ಎಂದು ಕೇಳುತ್ತೀಯಲ್ಲಾ?" ಎಂದು ಪ್ರಶ್ನಿಸಿದರು.
![OBS Image](https://cdn.door43.org/obs/jpg/360px/obs-en-32-16.jpg)
ಆ ಸ್ತ್ರೀಯು ಭಯದಿಂದ ನಡುಗುತ್ತಾ ಯೇಸುವಿನ ಮುಂದೆ ಅಡ್ಡಬಿದ್ದಳು. ಅಗ ಆಕೆಯು ತಾನು ಮಾಡಿದ್ದನ್ನು ಮತ್ತು ತನಗೆ ಸ್ವಸ್ಥವಾಗಿರುವುದನ್ನು ಆತನಿಗೆ ತಿಳಿಸಿದಳು. ಯೇಸು ಆಕೆಗೆ, "ನಿನ್ನ ನಂಬಿಕೆಯೇ ನಿನ್ನನ್ನು ಸ್ವಸ್ಥಮಾಡಿತು; ಸಮಾಧಾನದಿಂದ ಹೋಗು" ಎಂದು ಹೇಳಿದನು.
_ಸತ್ಯವೇದದ ಕಥೆ: ಮತ್ತಾಯ 8:28-34; 9:20-22; ಮಾರ್ಕ 5:1-20; 5:24-34; ಲೂಕ 8:26-39; 8:42-48_

40
content/33.md Normal file
View File

@ -0,0 +1,40 @@
# 33. ರೈತನ ಕಥೆ
![OBS Image](https://cdn.door43.org/obs/jpg/360px/obs-en-33-01.jpg)
ಒಂದು ದಿನ ಯೇಸು ಸರೋವರದ ದಡದ ಬಳಿಯಲ್ಲಿದ್ದನು. ಆತನು ಜನರ ದೊಡ್ಡ ಗುಂಪಿಗೆ ಬೋಧಿಸುತ್ತಿದ್ದನು. ಆತನು ಬೋಧಿಸುತ್ತಿರುವುದನ್ನು ಕೇಳಿಸಿಕೊಳ್ಳಲು ಅನೇಕ ಜನರು ಬಂದರು, ಅವರೆಲ್ಲರಿಗೆ ಬೋಧಿಸಲು ಯೇಸುವಿಗೆ ಸಾಕಷ್ಟು ಸ್ಥಳಾವಕಾಶವಿರಲಿಲ್ಲ. ಆದ್ದರಿಂದ ಆತನು ನೀರಿನಲ್ಲಿದ್ದ ದೋಣಿಯನ್ನು ಹತ್ತಿ ಕುಳಿತುಕೊಂಡು, ಅಲ್ಲಿಂದ ಆತನು ಜನರಿಗೆ ಬೋಧಿಸಿದನು.
![OBS Image](https://cdn.door43.org/obs/jpg/360px/obs-en-33-02.jpg)
ಯೇಸು ಈ ಕಥೆಯನ್ನು ಹೇಳಿದನು. "ರೈತನು ಬಿತ್ತುವುದಕ್ಕೆ ಹೊರಟನು. ಅವನು ಕೈಯಿಂದ ಬೀಜಗಳನ್ನು ಬಿತ್ತುತ್ತಿರುವಾಗ ಕೆಲವು ಬೀಜಗಳು ಕಾಲ್ದಾರಿಯಲ್ಲಿ ಬಿದ್ದವು. ಹಕ್ಕಿಗಳು ಬಂದು ಅವುಗಳನ್ನೆಲ್ಲ ತಿಂದು ಬಿಟ್ಟವು."
![OBS Image](https://cdn.door43.org/obs/jpg/360px/obs-en-33-03.jpg)
“ಕೆಲವು ಬೀಜಗಳು ಬಹಳ ಮಣ್ಣಿಲ್ಲದ ಬಂಡೆಯ ನೆಲದಲ್ಲಿ ಬಿದ್ದವು. ಬಂಡೆಯ ನೆಲದಲ್ಲಿ ಬಿದ್ದ ಬೀಜಗಳು ಬೇಗ ಮೊಳೆತವು. ಆದರೆ ಅವುಗಳು ಮಣ್ಣಿನಲ್ಲಿ ಆಳವಾಗಿ ಬೇರೂರಲು ಆಗಲಿಲ್ಲ. ಸೂರ್ಯನು ಉದಯಿಸಿ ಬಿಸಿಲೇರಿದಾಗ ಆ ಸಸಿಗಳು ಬಾಡಿ ಒಣಗಿಹೋದವು.”
![OBS Image](https://cdn.door43.org/obs/jpg/360px/obs-en-33-04.jpg)
“ಮತ್ತೆ ಕೆಲವು ಬೀಜಗಳು ಮುಳ್ಳುಗಿಡಗಳಲ್ಲಿ ಬಿದ್ದವು. ಆ ಬೀಜಗಳು ಬೆಳೆಯಲು ಆರಂಭಿಸಿದವು, ಆದರೆ ಮುಳ್ಳುಗಿಡಗಳು ಅವುಗಳನ್ನು ಅಡಗಿಸಿಬಿಟ್ಟವು. ಆದ್ದರಿಂದ ಮುಳ್ಳುಗಿಡಗಳಲ್ಲಿ ಬಿದ್ದ ಬೀಜಗಳಿಂದ ಬೆಳೆದ ಸಸ್ಯಗಳು ಯಾವುದೇ ಫಲವನ್ನು ಕೊಡಲಿಲ್ಲ."
![OBS Image](https://cdn.door43.org/obs/jpg/360px/obs-en-33-05.jpg)
"ಇನ್ನು ಕೆಲವು ಬೀಜಗಳು ಒಳ್ಳೆಯ ನೆಲದಲ್ಲಿ ಬಿದ್ದವು. ಈ ಬೀಜಗಳು ಬೆಳೆದುಬಂದವು ಮತ್ತು ಬಿತ್ತಲ್ಪಟ್ಟಂಥ ಬೀಜಕ್ಕನುಗುಣವಾಗಿ 30, 60 ಅಥವಾ 100 ಪಟ್ಟು ಧಾನ್ಯವನ್ನು ಕೊಟ್ಟವು. ದೇವರನ್ನು ಹಿಂಬಾಲಿಸಲು ಬಯಸುವವನು, ನಾನು ಹೇಳುತ್ತಿರುವ ವಿಷಯಕ್ಕೆ ಗಮನ ಕೊಡಲಿ!" ಎಂದು ತಿಳಿಸಿದನು
![OBS Image](https://cdn.door43.org/obs/jpg/360px/obs-en-33-06.jpg)
ಈ ಕಥೆಯು ಶಿಷ್ಯರನ್ನು ಗೊಂದಲಕ್ಕಿಡು ಮಾಡಿತು. ಆದ್ದರಿಂದ ಯೇಸು ಅದನ್ನು ಹೀಗೆ ವಿವರಿಸಿದನು: "ಬೀಜವು ದೇವರ ವಾಕ್ಯವಾಗಿದೆ. ದೇವರ ವಾಕ್ಯವನ್ನು ಕೇಳಿ, ಅದನ್ನು ಅರ್ಥಮಾಡಿಕೊಳ್ಳದ ವ್ಯಕ್ತಿಯು ಕಾಲ್ದಾರಿಯಾಗಿರುವನು. ಅನಂತರ ಸೈತಾನನು ವಾಕ್ಯವನ್ನು ಅವನಿಂದ ತೆಗೆದುಹಾಕುತ್ತಾನೆ. ಅಂದರೆ ಸೈತಾನನು ಅ ವಾಕ್ಯಗಳನ್ನು ಅದನ್ನು ಅರ್ಥಮಾಡಿಕೊಳ್ಳದಂತೆ ಮಾಡುವನು ."
![OBS Image](https://cdn.door43.org/obs/jpg/360px/obs-en-33-07.jpg)
"ದೇವರ ವಾಕ್ಯವನ್ನು ಕೇಳಿ ಅದನ್ನು ಸಂತೋಷದಿಂದ ಸ್ವೀಕರಿಸುವಂಥ ವ್ಯಕ್ತಿಯು ಬಂಡೆಯ ನೆಲವಾಗಿರುವನು. ಆದರೆ ಅವನು ಸಂಕಟಗಳನ್ನು ಅನುಭವಿಸುವಾಗ ಅಥವಾ ಇತರ ಜನರು ಅವನನ್ನು ಹಿಂಸಿಸುವಾಗ, ಅವನು ದೇವರಿಂದ ದೂರ ಹೋಗುತ್ತಾನೆ, ಅಂದರೆ ಅವನು ದೇವರನ್ನು ನಂಬುವುದನ್ನು ನಿಲ್ಲಿಸಿಬಿಡುತ್ತಾನೆ."
![OBS Image](https://cdn.door43.org/obs/jpg/360px/obs-en-33-08.jpg)
"ಮುಳ್ಳುಗಿಡಗಳಿರುವ ನೆಲವನ್ನು ಸೂಚಿಸುವಂಥ ವ್ಯಕ್ತಿಯು ದೇವರ ವಾಕ್ಯವನ್ನು ಕೇಳುತ್ತಾನೆ, ಆದರೆ ಅವನು ಅನೇಕ ವಿಷಯಗಳ ಬಗ್ಗೆ ಚಿಂತಿಸುವುದಕ್ಕೆ ಪ್ರಾರಂಭಿಸುತ್ತಾನೆ, ಅವನು ಬಹಳಷ್ಟು ಹಣ ಸಂಪಾದಿಸಲು ಪ್ರಯತ್ನಿಸುತ್ತಾನೆ ಮತ್ತು ಅವನು ಅನೇಕ ವಸ್ತುಗಳನ್ನು ಗಳಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ಸ್ವಲ್ಪ ಕಾಲವಾದ ಮೇಲೆ ಅವನಿಗೆ ದೇವರನ್ನು ಪ್ರೀತಿಸಲು ಆಗುವುದಿಲ್ಲ. ಹಾಗಾಗಿ ಅವನು ದೇವರ ವಾಕ್ಯದಿಂದ ಏನನ್ನು ಕಲಿತ್ತಿದ್ದರೂ ದೇವರನ್ನು ಮೆಚ್ಚಿಸುವಂತೆ ಅವನು ನಡೆದುಕೊಳ್ಳುವುದಿಲ್ಲ . ಅವನು ಯಾವುದೇ ಧಾನ್ಯಫಲವನ್ನು ಕೊಡದಿರುವಂಥ ಗೋಧಿಯ ದಂಟುಗಳಂತೆ ಇದ್ದಾನೆ."
![OBS Image](https://cdn.door43.org/obs/jpg/360px/obs-en-33-09.jpg)
"ಆದರೆ ದೇವರ ವಾಕ್ಯವನ್ನು ಕೇಳಿ, ಅದನ್ನು ನಂಬಿ, ಫಲವನ್ನು ಕೊಡುವಂಥ ವ್ಯಕ್ತಿಯು ಒಳ್ಳೆಯ ನೆಲವಾಗಿರುವನು."
_ಸತ್ಯವೇದದ ಕಥೆ: ಮತ್ತಾಯ 13:1-8, 18-23; ಮಾರ್ಕ 4:1-8, 13-20; ಲೂಕ 8:4-15_

44
content/34.md Normal file
View File

@ -0,0 +1,44 @@
# 34. ಯೇಸು ಇತರ ಕಥೆಗಳನ್ನು ಹೇಳಿದನು
![OBS Image](https://cdn.door43.org/obs/jpg/360px/obs-en-34-01.jpg)
ಯೇಸು ದೇವರ ರಾಜ್ಯದ ಕುರಿತು ಅನೇಕ ಕಥೆಗಳನ್ನು ಜನರಿಗೆ ಹೇಳಿದನು. ಉದಾಹರಣೆಗೆ, ಆತನು, "ದೇವರ ರಾಜ್ಯವು ಸಾಸಿವೆ ಕಾಳಿಗೆ ಹೋಲಿಕೆಯಾಗಿದೆ. ಒಬ್ಬ ಮನುಷ್ಯನು ಅದನ್ನು ತನ್ನ ಹೊಲದಲ್ಲಿ ಬಿತ್ತಿದನು. ಅದು ಅತಿ ಸಣ್ಣ ಬೀಜವಾಗಿದೆ ಎಂದು ನಿಮಗೆ ತಿಳಿದಿದೆ.”
![OBS Image](https://cdn.door43.org/obs/jpg/360px/obs-en-34-02.jpg)
“ಆದರೂ ಅದು ಬೆಳೆದ ಮೇಲೆ ತೋಟದ ಎಲ್ಲಾ ಸಸ್ಯಗಳಿಗಿಂತ ದೊಡ್ಡದಾಗಿ ಮರವಾಗುತ್ತದೆ. ಆಕಾಶದಲ್ಲಿ ಹಾರಾಡುವ ಪಕ್ಷಿಗಳು ಬಂದು ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸ ಮಾಡುತ್ತವೆ.”
![OBS Image](https://cdn.door43.org/obs/jpg/360px/obs-en-34-03.jpg)
ಯೇಸು, "ದೇವರ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಒಬ್ಬ ಸ್ತ್ರೀಯು ಹಿಟ್ಟೆಲ್ಲಾ ಹುಳಿಯಾಗುವಷ್ಟರ ಮಟ್ಟಿಗೆ ಅದನ್ನು ರೊಟ್ಟಿಯ ಹಿಟ್ಟಿನಲ್ಲಿ ಕಲಸಿಡುತ್ತಾಳೆ." ಎಂಬ ಮತ್ತೊಂದು ಕಥೆಯನ್ನು ಹೇಳಿದನು
![OBS Image](https://cdn.door43.org/obs/jpg/360px/obs-en-34-04.jpg)
"ದೇವರ ರಾಜ್ಯವು ಒಬ್ಬನು ಹೊಲದಲ್ಲಿ ಮುಚ್ಚಿಟ್ಟ ನಿಧಿಗೆ ಹೋಲಿಕೆಯಾಗಿದೆ. ಮತ್ತೊಬ್ಬನು ಆ ನಿಧಿಯನ್ನು ಕಂಡುಕೊಂಡು, ಅದು ಬೇಕೆಂದು ಬಹಳವಾಗಿ ಬಯಸಿದನು. ಆದ್ದರಿಂದ ಅವನು ಅದನ್ನು ಮತ್ತೆ ಮುಚ್ಚಿಟ್ಟನು. ಅವರು ಸಂತೋಷದಿಂದ ತುಂಬಿದವನಾಗಿ ಹೊರಟು ಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ನಿಧಿಯಿದ್ದ ಆ ಹೊಲವನ್ನು ಕೊಂಡುಕೊಂಡನು."
![OBS Image](https://cdn.door43.org/obs/jpg/360px/obs-en-34-05.jpg)
"ದೇವರ ರಾಜ್ಯವು ಬಹು ಬೆಲೆಯುಳ್ಳ ಪರಿಪೂರ್ಣವಾದ ಮುತ್ತಿಗೆ ಹೋಲಿಕೆಯಾಗಿದೆ. ಮುತ್ತಿನ ವರ್ತಕನು ಅದನ್ನು ಕಂಡುಕೊಂಡಾಗ, ಅವನು ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಂಡನು."
![OBS Image](https://cdn.door43.org/obs/jpg/360px/obs-en-34-06.jpg)
ತಾವು ಒಳ್ಳೆಯದನ್ನು ಮಾಡುತ್ತಿರುವುದರಿಂದ ದೇವರು ತಮ್ಮನ್ನು ಅಂಗೀಕರಿಸಿಕೊಳ್ಳವನೆಂದು ಭಾವಿಸಿದಂಥ ಜನರಿದ್ದರು. ಈ ಜನರು ಒಳ್ಳೆಯದನ್ನು ಮಾಡದ ಇತರರನ್ನು ತಾತ್ಸಾರಮಾಡುತ್ತಿದ್ದರು. ಆದ್ದರಿಂದ ಯೇಸು ಅವರಿಗೆ ಈ ಕಥೆಯನ್ನು ಹೇಳಿದನು: "ಇಬ್ಬರು ಮನುಷ್ಯರಿದ್ದರು, ಅವರಿಬ್ಬರು ಪ್ರಾರ್ಥನೆ ಮಾಡಲು ದೇವಾಲಯಕ್ಕೆ ಹೋದರು. ಇವರಲ್ಲಿ ಒಬ್ಬನು ತೆರಿಗೆ ವಸೂಲಿಗಾರನಾಗಿದ್ದನು ಮತ್ತು ಇನ್ನೊಬ್ಬನು ಧಾರ್ಮಿಕ ಮುಖಂಡನಾಗಿದ್ದನು."
![OBS Image](https://cdn.door43.org/obs/jpg/360px/obs-en-34-07.jpg)
"ಧಾರ್ಮಿಕ ಮುಖಂಡನು ಈ ರೀತಿ ಪ್ರಾರ್ಥಿಸಿದನು: ‘ದೇವರೇ, ಸುಲುಕೊಳ್ಳುವವರೂ ಅನ್ಯಾಯಗಾರರೂ ಹಾದರಮಾಡುವವರೂ ಆಗಿರುವ ಜನರಂತೆಯೂ ಅಥವಾ ಈ ಸುಂಕದವನಂತೆಯ ನಾನು ಪಾಪಿಯಲ್ಲ; ಆದದರಿಂದ ನಿನಗೆ ಸ್ತೋತ್ರಮಾಡುತ್ತೇನೆ.’”
![OBS Image](https://cdn.door43.org/obs/jpg/360px/obs-en-34-08.jpg)
“’ಉದಾಹರಣೆಗೆ, ನಾನು ವಾರಕ್ಕೆ ಎರಡು ಬಾರಿ ಉಪವಾಸ ಮಾಡುತ್ತೇನೆ ಮತ್ತು ನಾನು ಪಡೆಯುವ ಎಲ್ಲಾ ಹಣದಲ್ಲಿ ಮತ್ತು ಪಧಾರ್ಥಗಳಲ್ಲಿ ಹತ್ತರಷ್ಟು ಭಾಗವನ್ನು ನೀಡುತ್ತೇನೆ.’”
![OBS Image](https://cdn.door43.org/obs/jpg/360px/obs-en-34-09.jpg)
“ಆದರೆ ತೆರಿಗೆ ವಸೂಲಿಗಾರನು ಧಾರ್ಮಿಕ ಮುಖಂಡನಿಂದ ದೂರದಲ್ಲಿ ನಿಂತುಕೊಂಡನು. ಅವನು ಆಕಾಶದ ಕಡೆಗೆ ನೋಡಲಿಲ್ಲ. ಆದರೆ ಅವನು ತನ್ನ ಮುಷ್ಠಿಯಿಂದ ತನ್ನ ಎದೆಯನ್ನು ಬಡುಕೊಳ್ಳುತ್ತಾ, ‘ದೇವರೇ, ಪಾಪಿಯಾದ ನನ್ನನ್ನು ಕರುಣಿಸು' ಎಂದು ಪ್ರಾರ್ಥಿಸಿದನು."
![OBS Image](https://cdn.door43.org/obs/jpg/360px/obs-en-34-10.jpg)
ಆಗ ಯೇಸು, "ತೆರಿಗೆ ವಸೂಲಿಗಾರನ ಪ್ರಾರ್ಥನೆಯನ್ನು ದೇವರು ಕೇಳಿದನು ಮತ್ತು ಅವನನ್ನು ನೀತಿವಂತನೆಂದು ಘೋಷಿಸಿದನು ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. ಆದರೆ ಆತನು ಧಾರ್ಮಿಕ ಮುಖಂಡನ ಪ್ರಾರ್ಥನೆಯನ್ನು ಇಷ್ಟಪಡಲಿಲ್ಲ. ದೇವರು ಹೆಚ್ಚಿಸಿಕೊಳ್ಳುವ ಪ್ರತಿಯೊಬ್ಬನನ್ನು ಅವಮಾನಿಸುವನು, ಆದರೆ ತನ್ನನ್ನು ತಗ್ಗಿಸಿಕೊಳ್ಳುವವನು ಆತನು ಸನ್ಮಾನಿಸುವನು."
_ಸತ್ಯವೇದದ ಕಥೆ: ಮತ್ತಾಯ 13:31-33, 44-46; ಮಾರ್ಕ 4:30-32; ಲೂಕ 13:18-21; 18:9-14_

56
content/35.md Normal file
View File

@ -0,0 +1,56 @@
# 35. ಕನಿಕರವುಳ್ಳ ತಂದೆಯ ಕಥೆ
![OBS Image](https://cdn.door43.org/obs/jpg/360px/obs-en-35-01.jpg)
ಒಂದಾನೊಂದು ದಿನ, ಯೇಸು ತನ್ನ ಮಾತನ್ನು ಕೇಳಲು ಕೂಡಿಬಂದಿದ್ದ ಅನೇಕ ಜನರಿಗೆ ಬೋಧಿಸುತ್ತಿದ್ದನು. ಈ ಜನರು ತೆರಿಗೆ ವಸೂಲಿಗಾರರು ಮತ್ತು ಮೋಶೆಯ ಧರ್ಮಶಾಸ್ತ್ರವನ್ನು ಅನುಸರಿಸಲು ಪ್ರಯತ್ನಿಸದ ಇತರ ಜನರಾಗಿದ್ದರು.
![OBS Image](https://cdn.door43.org/obs/jpg/360px/obs-en-35-02.jpg)
ಕೆಲವು ಮಂದಿ ಧಾರ್ಮಿಕ ನಾಯಕರು ಯೇಸು ಈ ಜನರೊಂದಿಗೆ ಸ್ನೇಹಿತನಂತೆ ಮಾತಾಡುತ್ತಿರುವುದನ್ನು ಕಂಡರು. ಆದ್ದರಿಂದ ಅವರು ಪರಸ್ಪರ ಒಬ್ಬರಿಗೊಬ್ಬರು ಆತನು ತಪ್ಪು ಮಾಡುತ್ತಿದ್ದಾನೆ ಎಂದು ಹೇಳಲು ಪ್ರಾರಂಭಿಸಿದರು. ಯೇಸು ಅವರು ಮಾತನಾಡುವುದನ್ನು ಕೇಳಿಸಿಕೊಂಡನು, ಆದ್ದರಿಂದ ಆತನು ಈ ಕಥೆಯನ್ನು ಅವರಿಗೆ ಹೇಳಿದನು.
![OBS Image](https://cdn.door43.org/obs/jpg/360px/obs-en-35-03.jpg)
"ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು, ಕಿರಿಯ ಮಗನು ತನ್ನ ತಂದೆಗೆ, 'ತಂದೆಯೇ, ನನಗೆ ನನ್ನ ಸ್ವಾಸ್ತ್ಯ ಬೇಕು!' ಎಂದು ಕೇಳಿದನು. ಆದ್ದರಿಂದ ತಂದೆಯು ತನ್ನ ಇಬ್ಬರು ಮಕ್ಕಳಿಗೂ ಆಸ್ತಿಯನ್ನು ಹಂಚಿಕೊಟ್ಟನು."
![OBS Image](https://cdn.door43.org/obs/jpg/360px/obs-en-35-04.jpg)
"ತರುವಾಯ ಕಿರಿಯ ಮಗನು ತನಗಿದ್ದದ್ದನ್ನೆಲ್ಲಾ ಕೂಡಿಸಿಕೊಂಡು ದೂರಕ್ಕೆ ಹೋಗಿ ಪಾಪಮಯವಾದ ಜೀವನ ನಡೆಸಿ ತನ್ನ ಹಣವನ್ನು ಹಾಳುಮಾಡಿಕೊಂಡನು."
![OBS Image](https://cdn.door43.org/obs/jpg/360px/obs-en-35-05.jpg)
"ಅನಂತರ, ಕಿರಿಯ ಮಗನಿದ್ದ ದೇಶದಲ್ಲಿ ಘೋರವಾದ ಬರ ಉಂಟಾಯಿತು ಮತ್ತು ಆಹಾರವನ್ನು ಕೊಂಡುಕೊಳ್ಳಲು ಅವನ ಬಳಿ ಹಣವಿರಲಿಲ್ಲ. ಅವನು ತನಗೆ ಸಿಕ್ಕಿದಂಥ ಕೆಲಸವನ್ನು ಅಂದರೆ ಹಂದಿಗಳನ್ನು ಮೇಯಿಸುವ ಕೆಲಸವನ್ನು ಮಾಡಿದನು. ಅವನು ತುಂಬಾ ನಿರ್ಗತಿಕನು ಮತ್ತು ಹಸಿದವನು ಆಗಿದ್ದನು, ಆದ್ದರಿಂದ ಹಂದಿಗಳ ಆಹಾರವನ್ನು ತಿನ್ನಲು ಬಯಸಿದನು."
![OBS Image](https://cdn.door43.org/obs/jpg/360px/obs-en-35-06.jpg)
"ಅಂತಿಮವಾಗಿ ಕಿರಿಯ ಮಗನು ತನ್ನೊಳಗೆ ತಾನು, 'ನಾನು ಏನು ಮಾಡುತ್ತಿದ್ದೇನೆ? ನನ್ನ ತಂದೆಯ ಸೇವಕರೆಲ್ಲರಿಗೆ ತಿನ್ನಲು ಬೇಕಾಕಷ್ಟು ಇದೆ, ಆದರೆ ನಾನು ಇಲ್ಲಿ ಹಸಿವಿನಿಂದಿದ್ದೇನೆ, ನಾನು ನನ್ನ ತಂದೆಯ ಬಳಿಗೆ ಹಿಂದಿರುಗಿ ಹೋಗಿ ನನ್ನನ್ನು ಅವನ ಸೇವಕರಲ್ಲಿ ಒಬ್ಬನಂತೆ ಮಾಡು ಎಂದು ಬೇಡಿಕೊಳ್ಳುವೆನು' ಅಂದುಕೊಂಡನು”
![OBS Image](https://cdn.door43.org/obs/jpg/360px/obs-en-35-07.jpg)
"ಆದ್ದರಿಂದ ಕಿರಿಯ ಮಗನು ತನ್ನ ತಂದೆಯ ಮನೆಯ ಕಡೆಗೆ ಹಿಂದಿರುಗಿ ಹೋಗಲು ಪ್ರಾರಂಭಿಸಿದನು. ಅವರು ಇನ್ನೂ ದೂರದಲ್ಲಿರುವಾಗಲೇ ಅವನ ತಂದೆಯು ಅವನನ್ನು ನೋಡಿ ಅವನಿಗಾಗಿ ಕನಿಕರಪಟ್ಟನು. ಅವನು ತನ್ನ ಮಗನ ಬಳಿಗೆ ಓಡಿಹೋಗಿ ಅವನನ್ನು ಅಪ್ಪಿಕೊಂಡು ಮುದ್ದಿಟ್ಟನು."
![OBS Image](https://cdn.door43.org/obs/jpg/360px/obs-en-35-08.jpg)
"ಮಗನು ಅವನಿಗೆ, ‘ಅಪ್ಪಾ, ನಾನು ದೇವರಿಗೆ ವಿರೋಧವಾಗಿಯೂ ನಿನಗೆ ವಿರೋಧವಾಗಿಯೂ ಪಾಪ ಮಾಡಿದ್ದೇನೆ. ನಾನು ನಿನ್ನ ಮಗನೆನಿಸಿಕೊಳ್ಳುವುದಕ್ಕೆ ಯೋಗ್ಯನಲ್ಲ’ ಎಂದು ಹೇಳಿದನು".
![OBS Image](https://cdn.door43.org/obs/jpg/360px/obs-en-35-09.jpg)
"ಆದರೆ ಅವನ ತಂದೆಯು ತನ್ನ ಆಳುಗಳಲ್ಲಿ ಒಬ್ಬನಿಗೆ, ‘ಬೇಗ ಹೋಗಿ ಅತ್ಯುತ್ತಮವಾದ ಉಡುಪನ್ನು ತಟ್ಟನೆ ತಂದು ನನ್ನ ಮಗನಿಗೆ ಉಡಿಸಿರಿ! ಇವನ ಬೆರಳಿಗೆ ಉಂಗುರವನ್ನು ತೊಡಿಸಿರಿ, ಕಾಲಿಗೆ ಪಾದರಕ್ಷೆಯನ್ನು ಮೆಡಿಸಿರಿ. ಉತ್ತಮವಾದ ಕರುವನ್ನು ತಂದು ಕೊಯ್ಯಿರಿ, ಹಬ್ಬಮಾಡೋಣ, ಉಲ್ಲಾಸಪಡೋಣ. ನನ್ನ ಮಗನು ಸತ್ತವನಾಗಿದ್ದನು, ಈಗ ಬದುಕಿ ಬಂದಿದ್ದಾನೆ! ತಪ್ಪಿಹೋಗಿದ್ದನು, ಈಗ ನಮಗೆ ಸಿಕ್ಕಿದ್ದಾನೆ!"
![OBS Image](https://cdn.door43.org/obs/jpg/360px/obs-en-35-10.jpg)
"ಆದ್ದರಿಂದ ಜನರು ಸಂಭ್ರಮಿಸುವುದಕ್ಕೆ ತೊಡಗಿದರು. ಒಡನೆಯೇ, ಹಿರಿಯ ಮಗನು ಹೊಲದ ಕೆಲಸವನ್ನು ಮುಗಿಸಿಕೊಂಡು ಮನೆಗೆ ಬಂದನು. ಅವನು ವಾದ್ಯಘೋಷಗಳನ್ನೂ ನರ್ತನಗಳನ್ನು ಕೇಳಿ, ಏನಾಗುತ್ತಿದೆ ಎಂದು ಆಶ್ಚರ್ಯಪಟ್ಟನು."
![OBS Image](https://cdn.door43.org/obs/jpg/360px/obs-en-35-11.jpg)
"ತನ್ನ ಸಹೋದರನು ಮನೆಗೆ ಬಂದ ಕಾರಣ ಅವರು ಸಂಭ್ರಮಿಸುತ್ತಿದ್ದಾರೆಂದು ಹಿರಿಯ ಮಗನಿಗೆ ತಿಳಿದುಬಂದಾಗ, ಅವನು ತುಂಬಾ ಕೋಪಗೊಂಡನು ಮತ್ತು ಮನೆಯೊಳಕ್ಕೆ ಹೋಗಲಿಲ್ಲ. ಅವನ ತಂದೆಯು ಹೊರಗೆ ಬಂದು, ಬಾ ಅವರೊಂದಿಗೆ ಸಂಭ್ರಮಿಸು ಎಂದು ಅವನನ್ನು ಬೇಡಿಕೊಂಡನು, ಆದರೆ ಅವನು ನಿರಾಕರಿಸಿದನು."
![OBS Image](https://cdn.door43.org/obs/jpg/360px/obs-en-35-12.jpg)
"ಹಿರಿಯ ಮಗನು ತನ್ನ ತಂದೆಗೆ, 'ಇಷ್ಟು ವರ್ಷಗಳು ನಾನು ನಿಷ್ಠೆಯಿಂದ ಕೆಲಸ ಮಾಡಿದ್ದೇನೆ! ನಾನು ನಿನಗೆ ಅವಿಧೇಯನಾಗಲಿಲ್ಲ. ಆದರೂ ನಾನು ನನ್ನ ಸ್ನೇಹಿತರ ಸಂಗಡ ಉಲ್ಲಾಸಪಡುವುದಕ್ಕಾಗಿ ನೀನು ಎಂದೂ ನನಗೆ ಒಂದು ಆಡನ್ನಾದರೂ ಕೊಡಲಿಲ್ಲ. ಆದರೆ ಈ ನಿನ್ನ ಮಗನು ಪಾಪದ ಕೃತ್ಯಗಳನ್ನು ಮಾಡಿ ನಿನ್ನ ಹಣವನ್ನು ಹಾಳುಮಾಡಿದನು. ಅವನು ಬಂದಾಗ ಉಲ್ಲಾಸಪಡುವುದಕ್ಕಾಗಿ ನೀನು ಅವನಿಗಾಗಿ ಅತ್ಯುತ್ತಮ ಕರುವನ್ನು ಕೊಯ್ಸಿದಿಯಲ್ಲಾ!' ಎಂದು ಹೇಳಿದನು."
![OBS Image](https://cdn.door43.org/obs/jpg/360px/obs-en-35-13.jpg)
"ತಂದೆಯು, ‘ನನ್ನ ಕಂದಾ, ನೀನು ಯಾವಾಗಲೂ ನನ್ನ ಸಂಗಡ ಇದ್ದೀ ಮತ್ತು ನನ್ನದೆಲ್ಲಾ ನಿನ್ನದೇ. ಆದರೆ ಉಲ್ಲಾಸಪಡುವುದೂ ನ್ಯಾಯವಾದದ್ದೇ, ಏಕೆಂದರೆ ಈ ನಿನ್ನ ತಮ್ಮ ಸತ್ತವನಾಗಿದ್ದನು, ಈಗ ಬದುಕಿ ಬಂದಿದ್ದಾನೆ, ಅವನು ತಪ್ಪಿಹೋಗಿದ್ದನು, ಈಗ ಸಿಕ್ಕಿದ್ದಾನೆ!' ಎಂದು ಹೇಳಿದನು"
_ಸತ್ಯವೇದದ ಕಥೆ: ಲೂಕ 15:11-32_

32
content/36.md Normal file
View File

@ -0,0 +1,32 @@
# 36. ರೂಪಾಂತರ
![OBS Image](https://cdn.door43.org/obs/jpg/360px/obs-en-36-01.jpg)
ಒಂದಾನೊಂದು ದಿನ, ಯೇಸು ತನ್ನ ಶಿಷ್ಯರಾದ ಪೇತ್ರ, ಯಾಕೋಬ, ಮತ್ತು ಯೋಹಾನರನ್ನು ತನ್ನೊಂದಿಗೆ ಕರೆದುಕೊಂಡು ಹೋದನು. (ಯೋಹಾನನೆಂಬ ಶಿಷ್ಯನು, ಯೇಸುವಿಗೆ ದೀಕ್ಷಾಸ್ನಾನ ಮಾಡಿಸಿದ ವ್ಯಕ್ತಿಯಲ್ಲ.) ಅವರು ಪ್ರಾರ್ಥನೆ ಮಾಡುವುದಕ್ಕಾಗಿ ಎತ್ತರವಾದ ಬೆಟ್ಟಕ್ಕೆ ಹೋದರು.
![OBS Image](https://cdn.door43.org/obs/jpg/360px/obs-en-36-02.jpg)
ಯೇಸು ಪ್ರಾರ್ಥಿಸುತ್ತಿರುವಾಗ, ಆತನ ಮುಖವು ಸೂರ್ಯನ ಹಾಗೆ ಪ್ರಕಾಶಿಸಿತು. ಆತನ ವಸ್ತ್ರಗಳು ಬೆಳಕಿನಂತೆ ಬೆಳ್ಳಗಾದವು, ಭೂಲೋಕದಲ್ಲಿರುವ ಯಾವ ಅಗಸನಾದರೂ ಅಷ್ಟು ಬೆಳ್ಳಗೆ ಮಾಡಲಾಗದಷ್ಟು ಬೆಳ್ಳಗಾದವು.
![OBS Image](https://cdn.door43.org/obs/jpg/360px/obs-en-36-03.jpg)
ಆಗ ಮೋಶೆ ಮತ್ತು ಪ್ರವಾದಿಯಾದ ಎಲೀಯನು ಕಾಣಿಸಿಕೊಂಡರು. ಈ ಪುರುಷರು ಈ ಸಂಗತಿಗಿಂತ ನೂರಾರು ವರ್ಷಗಳ ಹಿಂದೆ ಈ ಭೂಮಿಯಲ್ಲಿ ಜೀವಿಸುತ್ತಿದ್ದರು. ಅವರು ಯೇಸುವಿನೊಂದಿಗೆ ಆತನ ಮರಣದ ಬಗ್ಗೆ ಮಾತನಾಡಿದರು, ಯಾಕೆಂದರೆ ಆತನು ಶೀಘ್ರದಲ್ಲಿಯೇ ಯೆರೂಸಲೇಮಿನಲ್ಲಿ ಸಾಯಲಿದ್ದನು.
![OBS Image](https://cdn.door43.org/obs/jpg/360px/obs-en-36-04.jpg)
ಮೋಶೆ ಮತ್ತು ಎಲೀಯನು ಯೇಸುವಿನೊಂದಿಗೆ ಮಾತನಾಡುತ್ತಿರುವಾಗ, ಪೇತ್ರನು ಯೇಸುವಿಗೆ, "ನಾವು ಇಲ್ಲೇ ಇರುವುದು ಒಳ್ಳೆಯದು. ಮೂರು ಗುಡಾರಗಳನ್ನು ಕಟ್ಟೋಣ ನಿನಗೊಂದು, ಮೋಶೆಗೊಂದು, ಎಲೀಯನಿಗೊಂದು" ಎಂದು ಹೇಳಿದನು. ಪೇತ್ರನಿಗೆ ತಾನು ಏನು ಹೇಳುತ್ತಿದ್ದೇನೆಂಬುದೇ ಅವನಿಗೆ ತಿಳಿಯಲಿಲ್ಲ.
![OBS Image](https://cdn.door43.org/obs/jpg/360px/obs-en-36-05.jpg)
ಪೇತ್ರನು ಮಾತನಾಡುತ್ತಿರುವಾಗ, ಪ್ರಕಾಶಮಾನವಾದ ಮೋಡವು ಬಂದು ಅವರ ಮೇಲೆ ಕವಿಯಿತು. ಆ ಮೋಡದೊಳಗಿನಿಂದ ಬಂದ ವಾಣಿಯನ್ನು ಅವರು ಕೇಳಿಸಿಕೊಂಡರು. ಅದು ಹೇಳಿದ್ದೇನಂದರೆ, “ಈತನು ನನ್ನ ಪ್ರಿಯ ಕುಮಾರನು. ಈತನನ್ನು ನಾನು ಮೆಚ್ಚಿಕೊಂಡಿದ್ದೇನೆ. ಈತನಿಗೆ ಕಿವಿಗೊಡಿರಿ.” ಈ ಮೂವರು ಶಿಷ್ಯರು ಬಹಳವಾಗಿ ಹೆದರಿ ಬೋರಲು ಬಿದ್ದರು.
![OBS Image](https://cdn.door43.org/obs/jpg/360px/obs-en-36-06.jpg)
ಆಗ ಯೇಸು ಅವರನ್ನು ಮುಟ್ಟಿ, "ಹೆದರಬೇಡಿರಿ ಏಳಿರಿ" ಎಂದು ಹೇಳಿದನು. ಅವರು ಸುತ್ತಲೂ ನೋಡಿದಾಗ, ಯೇಸು ಮಾತ್ರವೇ ಅಲ್ಲಿದ್ದನು.
![OBS Image](https://cdn.door43.org/obs/jpg/360px/obs-en-36-07.jpg)
ಯೇಸು ಮತ್ತು ಮೂವರು ಶಿಷ್ಯರು ಬೆಟ್ಟದಿಂದ ಇಳಿದು ಹೋದರು. ಆಗ ಯೇಸು ಅವರಿಗೆ, "ಇಲ್ಲಿ ಸಂಭವಿಸಿದ್ದರ ಬಗ್ಗೆ ಯಾರಿಗೂ ಏನೂ ಹೇಳಬೇಡಿರಿ. ನಾನು ಬೇಗನೇ ಸಾಯುತ್ತೇನೆ ಮತ್ತು ನಂತರ ಜೀವಿತನಾಗಿ ಎದ್ದುಬರುತ್ತೇನೆ. ಅದಾದನಂತರ ನೀವು ಜನರಿಗೆ ಈ ಸಂಗತಿಯನ್ನು ಜನರಿಗೆ ತಿಳಿಸಬಹುದು " ಎಂದು ಹೇಳಿದನು.
_ಸತ್ಯವೇದದ ಕಥೆ: ಮತ್ತಾಯ 17:1-9; ಮಾರ್ಕ 9:2-8; ಲೂಕ 9:28-36_

48
content/37.md Normal file
View File

@ -0,0 +1,48 @@
# 37. ಯೇಸು ಲಾಜರನನ್ನು ಸತ್ತವರೊಳಗಿಂದ ಎಬ್ಬಿಸಿದನು
![OBS Image](https://cdn.door43.org/obs/jpg/360px/obs-en-37-01.jpg)
ಲಾಜರನೆಂಬ ಒಬ್ಬ ಮನುಷ್ಯನಿದ್ದನು. ಅವನಿಗೆ ಮರಿಯ ಮತ್ತು ಮಾರ್ಥ ಎಂಬ ಇಬ್ಬರು ಸಹೋದರಿಯರು ಇದ್ದರು. ಅವರೆಲ್ಲರು ಯೇಸುವಿನ ಅ ಆಪ್ತ ಸ್ನೇಹಿತರಾಗಿದ್ದರು. ಒಂದು ದಿನ, ಲಾಜರನು ತುಂಬಾ ಅಸ್ವಸ್ಥನಾಗಿದ್ದಾನೆ ಎಂದು ಯಾರೊಬ್ಬರು ಯೇಸುವಿಗೆ ತಿಳಿಸಿದರು. ಯೇಸು ಅದನ್ನು ಕೇಳಿದಾಗ, "ಈ ರೋಗವು ಲಾಜರನ ಮರಣದೊಂದಿಗೆ ಅಂತ್ಯಗೊಳ್ಳುವುದಿಲ್ಲ, ಬದಲಿಗೆ ಇದು ಜನರು ದೇವರನ್ನು ಮಹಿಮೆಪಡಿಸುವಂತೆ ಮಾಡುತ್ತದೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-37-02.jpg)
ಯೇಸು ತನ್ನ ಸ್ನೇಹಿತರನ್ನು ಪ್ರೀತಿಸಿದಾಗ್ಯೂ ಆತನು ತಾನಿದ್ದ ಸ್ಥಳದಲ್ಲೇ ಎರಡು ದಿನಗಳ ಕಾಲ ಕಾದಿದ್ದನು. ಆ ಎರಡು ದಿನಗಳಾದ ನಂತರ, ಆತನು ತನ್ನ ಶಿಷ್ಯರಿಗೆ, "ನಾವು ತಿರುಗಿ ಯೂದಾಯಕ್ಕೆ ಹೋಗೋಣ" ಎಂದು ಹೇಳಿದನು. ಆಗ ಶಿಷ್ಯರು "ಗುರುವೇ, ಸ್ವಲ್ಪ ದಿನಗಳ ಹಿಂದೆ ಅಲ್ಲಿನ ಜನರು ನಿಮ್ಮನ್ನು ಕೊಲ್ಲಬೇಕೆಂದು ಬಯಸಿದ್ದರು!" ಎಂದು ಉತ್ತರಿಸಿದರು. ಯೇಸು, "ನಮ್ಮ ಸ್ನೇಹಿತನಾದ ಲಾಜರನು ನಿದ್ರೆ ಮಾಡುತ್ತಿದ್ದಾನೆ, ನಾನು ಅವನನ್ನು ನಿದ್ರೆಯಿಂದ ಎಬ್ಬಿಸಬೇಕಾಗಿದೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-37-03.jpg)
ಯೇಸುವಿನ ಶಿಷ್ಯರು, "ಗುರುವೇ, ಲಾಜರನು ನಿದ್ರೆ ಮಾಡುತ್ತಿದ್ದರೆ ಸ್ವಸ್ಥನಾಗುವನು" ಎಂದರು. ಆಗ ಯೇಸು ಅವರಿಗೆ, "ಲಾಜರನು ಸತ್ತು ಹೋದನು. ಮತ್ತು ನಾನು ಅಲ್ಲಿ ಇಲ್ಲದೆ ಇದ್ದದ್ದಕ್ಕೆ ಸಂತೋಷಪಡುತ್ತೇನೆ, ಯಾಕೆದರೆ ಅದರಿಂದ ನೀವು ನನ್ನನ್ನು ನಂಬುವದಕ್ಕೆ ಮಾರ್ಗವಾಯಿತು" ಎಂದು ಸ್ಪಷ್ಟವಾಗಿ ಹೇಳಿದನು.
![OBS Image](https://cdn.door43.org/obs/jpg/360px/obs-en-37-04.jpg)
ಯೇಸು ಲಾಜರನ ಊರಿಗೆ ಬಂದಾಗ ಲಾಜರನು ಸತ್ತುಹೋಗಿ ಆಗಲೇ ನಾಲ್ಕು ದಿನಗಳಾಗಿತ್ತು. ಮಾರ್ಥನು ಯೇಸುವನ್ನು ಎದುರುಗೊಳ್ಳುವುದಕ್ಕೆ ಹೋಗಿ, "ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ತಮ್ಮನು ಸಾಯುತ್ತಿರಲಿಲ್ಲ. ಈಗಲಾದರೂ ನೀನು ದೇವರನ್ನು ಏನು ಕೇಳಿಕೊಂಡರೂ ಅದನ್ನು ದೇವರು ನಿನಗೆ ಅನುಗ್ರಹಿಸುವನೆಂದು ನಾನು ನಂಬುತ್ತೇನೆ" ಎಂದು ಹೇಳಿದಳು.
![OBS Image](https://cdn.door43.org/obs/jpg/360px/obs-en-37-05.jpg)
ಅದಕ್ಕೆ ಯೇಸು, "ನಾನೇ ಪುನರುತ್ಥಾನವೂ ಜೀವವೂ ಆಗಿದ್ದೇನೆ. ನನ್ನಲ್ಲಿ ನಂಬಿಕೆ ಇಡುವವನು ಸತ್ತರೂ ಬದುಕುವನು. ಬದುಕುತ್ತಾ ನನ್ನನ್ನು ನಂಬುವ ಪ್ರತಿಯೊಬ್ಬನು ಎಂದಿಗೂ ಸಾಯುವುದಿಲ್ಲ. ಇದನ್ನು ನೀನು ನಂಬುತ್ತೀಯೋ?” ಎಂದು ಕೇಳಿದನು. ಆಗ ಮಾರ್ಥಳು, "ಹೌದು ಕರ್ತನೇ, ದೇವಕುಮಾರನಾದ ಮೆಸ್ಸೀಯನು ನೀನೇ ಎಂದು ನಾನು ನಂಬಿದ್ದೇನೆ" ಎಂದು ಉತ್ತರಕೊಟ್ಟಳು.
![OBS Image](https://cdn.door43.org/obs/jpg/360px/obs-en-37-06.jpg)
ಆಗ ಮರಿಯಳು ಬಂದು ಯೇಸುವಿನ ಪಾದಕ್ಕೆ ಬಿದ್ದು, "ಕರ್ತನೇ, ನೀನು ಇಲ್ಲಿ ಇದ್ದಿದ್ದರೆ ನನ್ನ ಸಹೋದರನು ಸಾಯುತ್ತಿರಲಿಲ್ಲ" ಎಂದು ಹೇಳಿದಳು. ಯೇಸು ಅವರಿಗೆ, "ನೀವು ಲಾಜರನನ್ನು ಎಲ್ಲಿ ಇಟ್ಟಿದ್ದೀರಿ?" ಎಂದು ಕೇಳಿದನು. ಅವರು ಆತನಿಗೆ, "ಸಮಾಧಿಯಲ್ಲಿಟ್ಟಿದ್ದೇವೆ ಬಂದು ನೋಡು" ಎಂದು ಹೇಳಿದರು. ಆಗ ಯೇಸು ಅತ್ತನು.
![OBS Image](https://cdn.door43.org/obs/jpg/360px/obs-en-37-07.jpg)
ಆ ಸಮಾಧಿಯು ಒಂದು ಗವಿಯಾಗಿತ್ತು ಅದರ ಬಾಯಿಗೆ ಒಂದು ಕಲ್ಲನ್ನು ಮುಚ್ಚಲಾಗಿತ್ತು. ಯೇಸು ಸಮಾಧಿಯ ಬಳಿಗೆ ಬಂದಾಗ ಆತನು ಅವರಿಗೆ, "ಕಲ್ಲನ್ನು ತೆಗೆಯಿರಿ" ಎಂದು ಹೇಳಿದನು. ಆದರೆ ಮಾರ್ಥಳು, "ಅವನು ಸತ್ತು ನಾಲ್ಕು ದಿನಗಳಾದವು. ದುರ್ವಾಸನೆ ಇರುತ್ತದೆ" ಎಂದು ಹೇಳಿದಳು.
![OBS Image](https://cdn.door43.org/obs/jpg/360px/obs-en-37-08.jpg)
ಯೇಸು, "ನೀನು ನನ್ನನ್ನು ನಂಬಿದರೆ ದೇವರ ಶಕ್ತಿಯನ್ನು ಕಾಣುವಿ ಎಂದು ನಾನು ನಿಮಗೆ ಹೇಳಲಿಲ್ಲವೋ?" ಎಂದನು. ಆದ್ದರಿಂದ ಅವರು ಕಲ್ಲನ್ನು ತೆಗೆದುಹಾಕಿದರು.
![OBS Image](https://cdn.door43.org/obs/jpg/360px/obs-en-37-09.jpg)
ಆಗ ಯೇಸು ಕಣ್ಣೆತ್ತಿ ಪರಲೋಕದ ಕಡೆಗೆ ನೋಡಿ, "ತಂದೆಯೇ ನೀನು ನನಗೆ ಕಿವಿಗೊಟ್ಟಿದ್ದಕ್ಕಾಗಿ ನಿನಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. ನೀನು ನನಗೆ ಯಾವಾಗಲೂ ಕಿವಿಗೊಡುತ್ತೀ ಎಂದು ನನಗೆ ತಿಳಿದೇ ಇದೆ. ಆದರೂ ನೀನೇ ನನ್ನನ್ನು ಕಳುಹಿಸಿಕೊಟ್ಟಿರುವಿ ಎಂದು ಇಲ್ಲಿ ನಿಂತಿರುವ ಈ ಜನರೆಲ್ಲರು ನಂಬುವಂತೆ ಅವರಿಗೋಸ್ಕರ ಈ ಮಾತುಗಳನ್ನಾಡಿದ್ದೇನೆ" ಎಂದು ಹೇಳಿದನು. ಆಗ ಯೇಸು, "ಲಾಜರನೇ, ಹೊರಗೆ ಬಾ" ಎಂದು ಕೂಗಿದನು.
![OBS Image](https://cdn.door43.org/obs/jpg/360px/obs-en-37-10.jpg)
ಆದ್ದರಿಂದ ಲಾಜರನು ಹೊರಗೆ ಬಂದನು! ಅವನು ಇನ್ನೂ ಶವವಸ್ತ್ರದಿಂದ ಸುತ್ತಲ್ಪಟ್ಟವನಾಗಿದ್ದನು. ಯೇಸು ಅವರಿಗೆ, "ಆ ಶವವಸ್ತ್ರಗಳನ್ನು ಬಿಚ್ಚಿಹಾಕುವಂತೆ ಅವನಿಗೆ ಸಹಾಯ ಮಾಡಿ ಅವನನ್ನು ಬಿಡಿಸಿರಿ!" ಎಂದು ಹೇಳಿದನು. ಈ ಅದ್ಭುತದ ನಿಮಿತ್ತವಾಗಿ ಅನೇಕ ಮಂದಿ ಯೆಹೂದ್ಯರು ಯೇಸುವನ್ನು ನಂಬಿದ್ದರು.
![OBS Image](https://cdn.door43.org/obs/jpg/360px/obs-en-37-11.jpg)
ಆದರೆ ಯೆಹೂದ್ಯರ ಧಾರ್ಮಿಕ ಮುಖಂಡರು ಯೇಸುವನ್ನು ದ್ವೇಷಿಸಿದರು, ಅವರು ಯೇಸುವನ್ನು ಮತ್ತು ಲಾಜರನನ್ನು ಕೊಲ್ಲುವುದು ಹೇಗೆ ಎಂದು ಸಂಚು ರೂಪಿಸಲು ಒಟ್ಟಾಗಿ ಕೂಡಿಬಂದರು.
_ಸತ್ಯವೇದದ ಕಥೆ: ಯೋಹಾನ 11:1-46_

64
content/38.md Normal file
View File

@ -0,0 +1,64 @@
# 38. ಯೇಸುವಿಗೆ ದ್ರೋಹ ಬಗೆದ ವಿಚಾರ
![OBS Image](https://cdn.door43.org/obs/jpg/360px/obs-en-38-01.jpg)
ಪ್ರತಿ ವರ್ಷವು ಯೆಹೂದ್ಯರು ಪಸ್ಕಹಬ್ಬವನ್ನು ಆಚರಿಸುತ್ತಿದ್ದರು. ಅನೇಕ ಶತಮಾನಗಳ ಹಿಂದೆ ಈಜಿಪ್ಟಿನ ಗುಲಾಮಗಿರಿಯಿಂದ ದೇವರು ತಮ್ಮ ಪೂರ್ವಿಕರನ್ನು ಹೇಗೆ ಬಿಡಿಸಿದ್ದನೆಂಬುದರ ಕುರಿತಾದ ಆಚರಣೆಯಾಗಿದೆ. ಯೇಸು ಸಾರ್ವಜನಿಕವಾಗಿ ಉಪದೇಶಿಸಲು ಮತ್ತು ಬೋಧಿಸಲು ಪ್ರಾರಂಭಿಸಿ ಸುಮಾರು ಮೂರು ವರ್ಷಗಳಾದ ನಂತರ ಇದೇ ಮೊದಲ ಬಾರಿಗೆ, ಯೇಸು ತನ್ನ ಶಿಷ್ಯರಿಗೆ ಈ ಪಸ್ಕವನ್ನು ಯೆರೂಸಲೇಮಿನಲ್ಲಿ ಅವರೊಂದಿಗೆ ಆಚರಿಸಲು ಬಯಸಿದ್ದು ಮತ್ತು ಅಲ್ಲಿ ತಾನು ಕೊಲ್ಲಲ್ಪಡುವನು ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-38-02.jpg)
ಯೇಸುವಿನ ಶಿಷ್ಯರಲ್ಲಿ ಯೂದನೆಂಬ ಒಬ್ಬ ಮನುಷ್ಯನಿದ್ದನು. ಯೂದನು ಅಪೊಸ್ತಲರ ಹಣದ ಚೀಲದ ಮೇಲ್ವಿಚಾರಕನಾಗಿದ್ದನು, ಆದರೆ ಅವನು ಅನೇಕಬಾರಿ ಆ ಚೀಲದಿಂದ ಹಣವನ್ನು ಕಳವು ಮಾಡಿದ್ದನು. ಯೇಸು ಮತ್ತು ಶಿಷ್ಯರು ಯೆರೂಸಲೇಮಿಗೆ ಬಂದ ನಂತರ ಯೂದನು ಯೆಹೂದ್ಯ ಮುಖಂಡರ ಬಳಿಗೆ ಹೋದನು. ಹಣಕ್ಕೆ ಬದಲಾಗಿ ಯೇಸುವನ್ನು ಅವರಿಗೆ ಹಿಡಿದುಕೊಡುವ ಮೂಲಕ ಯೇಸುವಿಗೆ ದ್ರೋಹ ಬಗೆಯುವ ಪ್ರಸ್ತಾಪವನ್ನು ಅವನು ಅವರ ಮುಂದಿಟ್ಟನು. ಯೆಹೂದ್ಯ ಮುಖಂಡರು ಯೇಸುವನ್ನು ಮೆಸ್ಸೀಯನನ್ನಾಗಿ ಅಂಗೀಕರಿಸಿಕೊಂಡಿರಲಿಲ್ಲ ಎಂದು ಅವನಿಗೆ ತಿಳಿದಿತ್ತು. ಅವರು ಆತನನ್ನು ಕೊಲ್ಲಲು ಬಯಸಿದ್ದರು ಎಂದು ಅವನಿಗೆ ತಿಳಿದಿತ್ತು.
![OBS Image](https://cdn.door43.org/obs/jpg/360px/obs-en-38-03.jpg)
ಯೇಸುವನ್ನು ತಮಗೆ ಹಿಡಿದುಕೊಡುವ ಮೂಲಕ ಆತನಿಗೆ ದ್ರೋಹ ಬಗೆಯಲು, ಮಹಾಯಾಜಕನ ನೇತೃತ್ವದಲ್ಲಿ ಯೆಹೂದ್ಯ ಮುಖಂಡರು ಯೂದನಿಗೆ ಮೂವತ್ತು ಬೆಳ್ಳಿ ನಾಣ್ಯಗಳನ್ನು ಕೊಟ್ಟರು. ಇದು ಪ್ರವಾದಿಗಳು ಹೇಳಿದಂತೆಯೇ ಸಂಭವಿಸಿತು. ಯೂದನು ಒಪ್ಪಿಕೊಂಡು, ಹಣವನ್ನು ತೆಗೆದುಕೊಂಡು ಹೊರಟುಹೋದನು. ಅವರು ಯೇಸುವನ್ನು ಬಂಧಿಸಲು ಸಹಾಯಕವಾಗುವಂಥ ಒಂದು ಅವಕಾಶಕ್ಕಾಗಿ ಅವನು ಎದುರುನೋಡಲಾರಂಭಿಸಿದರು.
![OBS Image](https://cdn.door43.org/obs/jpg/360px/obs-en-38-04.jpg)
ಯೆರೂಸಲೇಮಿನಲ್ಲಿ ಯೇಸು ತನ್ನ ಶಿಷ್ಯರೊಂದಿಗೆ ಪಸ್ಕಹಬ್ಬವನ್ನು ಆಚರಿಸಿದನು. ಪಸ್ಕಹಬ್ಬದ ಊಟದ ಸಮಯದಲ್ಲಿ ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಮುರಿದುಬಿಟ್ಟು, “ಇದನ್ನು ತೆಗೆದುಕೊಂಡು ತಿನ್ನಿರಿ, ಇದು ನಿಮಗೋಸ್ಕರ ಕೊಟ್ಟಿರುವ ನನ್ನ ದೇಹ, ನನ್ನನ್ನು ನೆನಪಿಸಿಕೊಳ್ಳುವುದಕ್ಕೋಸ್ಕರ ಹೀಗೆ ಮಾಡಿರಿ" ಎಂದು ಹೇಳಿದನು. ಈ ರೀತಿಯಾಗಿ, ಯೇಸು ತಾನು ಅವರಿಗಾಗಿ ಸಾಯುವನೆಂದು , ಅಂದರೆ ತನ್ನ ದೇಹವನ್ನು ಯಜ್ಞವಾಗಿ ಅರ್ಪಿಸುವೆನು ಎಂದು ಹೇಳಿದನು
![OBS Image](https://cdn.door43.org/obs/jpg/360px/obs-en-38-05.jpg)
ಅಮೇಲೆ ಯೇಸು ದ್ರಾಕ್ಷಾರಸದ ಪಾತ್ರೆಯನ್ನು ತೆಗೆದುಕೊಂಡು, "ಇದನ್ನು ಕುಡಿಯಿರಿ. ದೇವರು ನಿಮ್ಮ ಪಾಪಗಳನ್ನು ಕ್ಷಮಿಸುವಂತೆ ನಾನು ನಿಮಗಾಗಿ ಸುರಿಸಲ್ಪಡುವ ನನ್ನ ರಕ್ತ ಹೊಸ ಒಡಂಬಡಿಕೆಯ ರಕ್ತ. ನೀವು ಇದನ್ನು ಕುಡಿಯುವ ಪ್ರತಿಯೊಂದು ಸಾರಿಯು ನನ್ನನ್ನು ನೆನಪಿಸಿಕೊಳ್ಳುವುದಕ್ಕಾಗಿ ನಾನು ಈಗ ಮಾಡುತ್ತಿರುವುದನ್ನು ನೀವು ಮಾಡಿರಿ."
![OBS Image](https://cdn.door43.org/obs/jpg/360px/obs-en-38-06.jpg)
ಆಗ ಯೇಸು ತನ್ನ ಶಿಷ್ಯರಿಗೆ, "ನಿಮ್ಮಲ್ಲಿ ಒಬ್ಬನು ನನ್ನನ್ನು ಹಿಡಿದುಕೊಡುವನು" ಎಂದು ಹೇಳಿದನು. ಶಿಷ್ಯರು ಆಘಾತಕ್ಕೊಳಗಾದರು, ಮತ್ತು ಅಂತಹ ಕೆಲಸವನ್ನು ಮಾಡುವವನು ಯಾರು ಎಂದು ಕೇಳಿದರು. ಯೇಸು, "ನಾನು ಈ ರೊಟ್ಟಿಯ ತುಂಡನ್ನು ಯಾರಿಗೆ ಕೊಡುತ್ತೇನೋ, ಅವನೇ ದ್ರೋಹ ಬಗೆಯುವವನು" ಎಂದು ಹೇಳಿ ಆ ರೊಟ್ಟಿಯನ್ನು ಆತನು ಯೂದನಿಗೆ ಕೊಟ್ಟನು.
![OBS Image](https://cdn.door43.org/obs/jpg/360px/obs-en-38-07.jpg)
ಯೂದನು ರೊಟ್ಟಿಯನ್ನು ತೆಗೆದುಕೊಂಡ ಕೂಡಲೇ, ಸೈತಾನನು ಅವನೊಳಗೆ ಪ್ರವೇಶಿಸಿದನು. ಯೇಸುವನ್ನು ಬಂಧಿಸಲು ಯೆಹೂದ್ಯ ಮುಖಂಡರಿಗೆ ಸಹಾಯ ಮಾಡುವುದಕ್ಕಾಗಿ ಯೂದನು ಹೊರಟುಹೋದನು. ಅದು ರಾತ್ರಿಯ ಸಮಯವಾಗಿತ್ತು.
![OBS Image](https://cdn.door43.org/obs/jpg/360px/obs-en-38-08.jpg)
ಊಟವಾದ ನಂತರ ಯೇಸು ಮತ್ತು ಆತನ ಶಿಷ್ಯರು ಎಣ್ಣೇಮರದ ಗುಡ್ಡಕ್ಕೆ ನಡೆದುಕೊಂಡು ಹೋದರು. ಯೇಸು, "ಕುರುಬನನ್ನು ಹೊಡೆಯುವೆನು, ಹಿಂಡಿನ ಕುರಿಗಳು ಚದರಿಹೋಗುವವು ಎಂದು ಬರೆದಿರುವ ಹಾಗೆ ನೀವೆಲ್ಲರೂ ಈ ರಾತ್ರಿ ನನ್ನನ್ನು ತೊರೆದು ಹೋಗುವಿರಿ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-38-09.jpg)
ಪೇತ್ರನು, "ಎಲ್ಲರೂ ನಿನ್ನನ್ನು ಬಿಟ್ಟುಹೋದರೂ ನಾನು ಮಾತ್ರ ನಿನ್ನನ್ನು ಬಿಟ್ಟುಹೋಗುವುದಿಲ್ಲ!" ಎಂದು ಉತ್ತರಿಸಿದನು. ಆಗ ಯೇಸು ಪೇತ್ರನಿಗೆ, "ಸೈತಾನನು ನಿಮ್ಮೆಲ್ಲರನ್ನು ನಾಶಮಾಡಲು ಬಯಸಿದನು, ಆದರೆ ನಿನ್ನ ನಂಬಿಕೆಯು ಕುಂದಿಹೋಗಬಾರದು ಎಂದು ನಾನು ನಿನಗಾಗಿ ಪ್ರಾರ್ಥಿಸಿದೆನು. ಆದರೂ ಸಹ, ಈ ರಾತ್ರಿಯಲ್ಲಿ ಕೋಳಿ ಕೂಗುವ ಮುನ್ನ ನೀನು ನನ್ನನ್ನು ಅರಿಯನೆಂದು ಮೂರು ಸಾರಿ ನಿರಾಕರಿಸುವಿ."
![OBS Image](https://cdn.door43.org/obs/jpg/360px/obs-en-38-10.jpg)
ಆಗ ಪೇತ್ರನು ಯೇಸುವಿಗೆ, "ನಾನು ಸಾಯಬೇಕಾದರೂ ಸಹ ನಾನು ನಿನ್ನನ್ನು ಎಂದಿಗೂ ಅಲ್ಲಗಳೆಯುವುದಿಲ್ಲ" ಎಂದು ಹೇಳಿದನು. ಅದರಂತೆಯೇ ಇತರ ಶಿಷ್ಯರೆಲ್ಲರೂ ಹೇಳಿದರು.
![OBS Image](https://cdn.door43.org/obs/jpg/360px/obs-en-38-11.jpg)
ಅನಂತರ ಯೇಸು ತನ್ನ ಶಿಷ್ಯರೊಂದಿಗೆ ಗೆತ್ಸೇಮನೆ ಎಂಬ ಸ್ಥಳಕ್ಕೆ ಹೋದನು. ಸೈತಾನನು ತಮ್ಮನ್ನು ಅವರನ್ನು ಶೋಧಿಸದಂತೆ ಪ್ರಾರ್ಥಿಸಬೇಕು ಎಂದು ಯೇಸು ತನ್ನ ಶಿಷ್ಯರಿಗೆ ಹೇಳಿದನು. ತರುವಾಯ ಯೇಸು ಪ್ರಾರ್ಥಿಸಲು ಹೋದನು.
![OBS Image](https://cdn.door43.org/obs/jpg/360px/obs-en-38-12.jpg)
ಯೇಸು ಮೂರು ಬಾರಿ, "ನನ್ನ ತಂದೆಯೇ, ಸಾಧ್ಯವಾದರೆ, ದಯವಿಟ್ಟು ಈ ಸಂಕಷ್ಟದ ಪಾತ್ರೆಯಿಂದ ಕುಡಿಯದಂತೆ ಮಾಡು, ಆದರೆ ಜನರ ಪಾಪಗಳನ್ನು ಕ್ಷಮಿಸಲು ಬೇರೆ ಮಾರ್ಗವಿಲ್ಲದಿದ್ದರೆ, ನಿನ್ನ ಚಿತ್ತವನ್ನು ನೆರವೇರಲಿ" ಎಂದು ಪ್ರಾರ್ಥಿಸಿದನು. ಯೇಸು ಬಹಳ ಮನಗುಂದಿದವನಾದನು ಮತ್ತು ಆತನ ಬೆವರು ರಕ್ತದ ಹನಿಗಳಂತೆ ಇತ್ತು. ದೇವರು ಆತನನ್ನು ಬಲಪಡಿಸಲು ದೇವದೂತನನ್ನು ಕಳುಹಿಸಿದನು.
![OBS Image](https://cdn.door43.org/obs/jpg/360px/obs-en-38-13.jpg)
ಪ್ರತಿ ಬಾರಿ ಪ್ರಾರ್ಥನೆ ಮಾಡಿದ ನಂತರ, ಯೇಸು ತನ್ನ ಶಿಷ್ಯರ ಬಳಿಗೆ ಹಿಂದಿರುಗಿ ಬಂದನು, ಆದರೆ ಅವರು ನಿದ್ದೆ ಮಾಡುತ್ತಿದ್ದರು. ಆತನು ಮೂರನೆಯ ಬಾರಿಗೆ ಹಿಂದಿರುಗಿ ಬಂದಾಗ ಯೇಸು, "ಎದ್ದೇಳಿರಿ, ನನಗೆ ದ್ರೋಹ ಬಗೆಯುವವನು ಇಲ್ಲಿಗೆ ಬಂದಿದ್ದಾನೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-38-14.jpg)
ಯೂದನು ಯೆಹೂದ್ಯ ಮುಖಂಡರು, ಸೈನಿಕರು ಮತ್ತು ಬಹು ಜನರ ಗುಂಪಿನ ಸಂಗಡ ಅಲ್ಲಿಗೆ ಬಂದನು. ಅವರು ಕತ್ತಿಗಳನ್ನು ಮತ್ತು ದೊಣ್ಣೆಗಳನ್ನು ಹಿಡಿದುಕೊಂಡು ಬಂದರು. ಯೂದನು ಯೇಸುವಿನ ಬಳಿಗೆ ಬಂದು, "ವಂದನೆ , ಗುರುವೇ," ಎಂದು ಹೇಳಿ ಆತನಿಗೆ ಮುದ್ದಿಟ್ಟನು. ಬಂಧಿಸಬೇಕಾದ ಮನುಷ್ಯನನ್ನು ಯೆಹೂದ್ಯ ಮುಖಂಡರಿಗೆ ತೋರಿಸಿಕೊಡುವುದಕ್ಕಾಗಿ ಅವನು ಇದನ್ನು ಮಾಡಿದನು. ಆಗ ಯೇಸು, ಯೂದನಿಗೆ, “ಮುದ್ದಿಟ್ಟು ನನ್ನನ್ನು ಹಿಡಿದುಕೊಡುತ್ತೀಯಾ?" ಎಂದು ಕೇಳಿದನು.
![OBS Image](https://cdn.door43.org/obs/jpg/360px/obs-en-38-15.jpg)
ಸೈನಿಕರು ಯೇಸುವನ್ನು ಬಂಧಿಸುತ್ತಿರುವಾಗ, ಪೇತ್ರನು ತನ್ನ ಕತ್ತಿಯನ್ನು ತೆಗೆದು ಮಹಾಯಾಜಕನ ಸೇವಕನ ಕಿವಿಯನ್ನು ಕತ್ತರಿಸಿಬಿಟ್ಟನು. ಯೇಸು, "ನಿನ್ನ ಕತ್ತಿಯನ್ನು ತಿರುಗಿ ಒರೆಯಲ್ಲಿ ಹಾಕು! ನನ್ನನ್ನು ರಕ್ಷಿಸುವುದಕ್ಕೆ ದೇವದೂತರ ಸೈನ್ಯ ಕಳುಹಿಸು ಎಂದು ನಾನು ತಂದೆಯನ್ನು ಬೇಡಿಕೊಳ್ಳಬಹುದು, ಆದರೆ ನಾನು ನನ್ನ ತಂದೆಗೆ ವಿಧೇಯನಾಗಬೇಕು" ಎಂದು ಹೇಳಿದನು. ಆಗ ಯೇಸು ಮನುಷ್ಯನ ಕಿವಿಯನ್ನು ಗುಣಪಡಿಸಿದನು. ಆಗ ಶಿಷ್ಯರೆಲ್ಲರೂ ಓಡಿಹೋದರು.
_ಸತ್ಯವೇದದ ಕಥೆ: ಮತ್ತಾಯ 26:14-56; ಮಾರ್ಕ 14:10-50; ಲೂಕ 22:1-53; ಯೋಹಾನ 12:6; 18:1-11_

52
content/39.md Normal file
View File

@ -0,0 +1,52 @@
# 39. ಯೇಸುವನ್ನು ನ್ಯಾಯವಿಚಾರಣೆಗೆ ಒಳಪಡಿಸಿಡಿದ್ದು
![OBS Image](https://cdn.door43.org/obs/jpg/360px/obs-en-39-01.jpg)
ಆಗ ಮಧ್ಯರಾತ್ರಿಯಾಗಿತ್ತು. ಸೈನಿಕರು ಯೇಸುವನ್ನು ಮಹಾಯಾಜಕನ ಮನೆಗೆ ಕರೆದೊಯ್ದರು, ಏಕೆಂದರೆ ಅವನು ಯೇಸುವನ್ನು ಪ್ರಶ್ನಿಸಲು ಬಯಸಿದನು. ಪೇತ್ರನು ಅವರನ್ನು ದೂರದಿಂದ ಹಿಂಬಾಲಿಸುತ್ತಿದ್ದನು. ಸೈನಿಕರು ಯೇಸುವನ್ನು ಮನೆಯೊಳಗೆ ಕರೆದುಕೊಂಡು ಹೋದಾಗ, ಪೇತ್ರನು ಹೊರಗೆ ಇದ್ದುಕೊಂಡು ಬೆಂಕಿ ಕಾಯಿಸಿಕೊಳ್ಳುತ್ತಿದ್ದನು.
![OBS Image](https://cdn.door43.org/obs/jpg/360px/obs-en-39-02.jpg)
ಯೆಹೂದ್ಯ ಮುಖಂಡರು ಮನೆಯ ಒಳಗೆ ಯೇಸುವನ್ನು ನ್ಯಾಯವಿಚಾರಣೆ ಮಾಡುತ್ತಿದ್ದರು. ಆತನ ಬಗ್ಗೆ ಸುಳ್ಳುಸಾಕ್ಷಿ ಹೇಳಿದ್ದ ಅನೇಕ ಜನರನ್ನು ಅವರು ಕರೆತಂದರು. ಆದರೆ ಅವರ ಹೇಳಿಕೆಗಳು ಪರಸ್ಪರ ತಾಳೆಯಾಗಲಿಲ್ಲ, ಆದ್ದರಿಂದ ಯೆಹೂದ್ಯ ಮುಖಂಡರು ಆತನನ್ನು ತಪ್ಪಿತಸ್ಥನೆಂದು ಸಾಬೀತುಪಡಿಸಲು ಆಗಲಿಲ್ಲ. ಯೇಸು ಏನು ಹೇಳಲಿಲ್ಲ.
![OBS Image](https://cdn.door43.org/obs/jpg/360px/obs-en-39-03.jpg)
ಅಂತಿಮವಾಗಿ, ಮಹಾಯಾಜಕನು ಯೇಸುವನ್ನು ದಿಟ್ಟಿಸಿ ನೋಡಿ, "ನೀನು ದೇವಕುಮಾರನಾದ ಮೆಸ್ಸೀಯನಾಗಿದ್ದರೆ ಅದನ್ನು ನಮಗೆ ಹೇಳಬೇಕು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-39-04.jpg)
ಯೇಸು, "ನಾನೇ, ನಾನು ದೇವರೊಂದಿಗೆ ಆಸೀನನಾಗಿ ಪರಲೋಕದಿಂದ ಬರುವುದನ್ನು ನೀವು ನೋಡುತ್ತೀರಿ" ಎಂದು ಹೇಳಿದನು. ಮಹಾಯಾಜಕನು ಯೇಸು ಹೇಳಿದ ಮಾತಿನ ನಿಮಿತ್ತ ಅವನು ಕೋಪಗೊಂಡು ತನ್ನ ಬಟ್ಟೆಗಳನ್ನು ಹರಿದುಕೊಂಡನು ಏಕೆಂದರೆ. ಅವನು ಇತರ ಮುಖಂಡರಿಗೆ, "ಈ ಮನುಷ್ಯನು ಏನು ಮಾಡಿದ್ದಾನೆಂದು ನಮಗೆ ಹೇಳಲು ಬೇರೆ ಯಾವುದೇ ಸಾಕ್ಷಿಗಳು ಬೇಕಾಗಿಲ್ಲ! ಆತನು ತಾನೇ ದೇವಕುಮಾರನೆಂದು ಹೇಳುವುದನ್ನು ನೀವು ಕೇಳಿದಿರಿ, ಆತನ ಬಗ್ಗೆ ನಿಮ್ಮ ನಿರ್ಣಯ ಏನು?" ಎಂದು ಕೂಗಿ ಹೇಳಿದನು.
![OBS Image](https://cdn.door43.org/obs/jpg/360px/obs-en-39-05.jpg)
ಎಲ್ಲಾ ಯೆಹೂದ್ಯ ಮುಖಂಡರು ಮಹಾಯಾಜಕನಿಗೆ, "ಈತನು ಸಾಯುವದಕ್ಕೆ ಯೋಗ್ಯನು!" ಎಂದು ಉತ್ತರಿಸಿದರು. ನಂತರ ಅವರು ಯೇಸುವಿನ ಕಣ್ಣಿಗೆ ಬಟ್ಟೆಕಟ್ಟಿ, ಆತನ ಮೇಲೆ ಉಗುಳಿ, ಆತನನ್ನು ಹೊಡೆದು, ಅಪಹಾಸ್ಯ ಮಾಡಿದರು.
![OBS Image](https://cdn.door43.org/obs/jpg/360px/obs-en-39-06.jpg)
ಪೇತ್ರನು ಮನೆಯ ಹೊರಗೆ ಕಾಯುತ್ತಿದ್ದನು. ದಾಸಿಯೊಬ್ಬಳು ಅವನನ್ನು ನೋಡಿದಳು. ಅವಳು ಅವನಿಗೆ, "ನೀನು ಸಹ ಯೇಸುವಿನೊಂದಿಗೆ ಇದ್ದವನು!" ಎಂದು ಹೇಳಿದಳು. ಪೇತ್ರನು ಅದನ್ನು ನಿರಾಕರಿಸಿದನು. ಅನಂತರ ಇನ್ನೊಬ್ಬ ದಾಸಿಯು ಹಾಗೆಯೇ ಹೇಳಿದಳು, ಪೇತ್ರನು ಮತ್ತೆ ನಿರಾಕರಿಸಿದನು. ಅಂತಿಮವಾಗಿ ಸ್ವಲ್ಪ ಜನರು, "ನೀನು ಯೇಸುವಿನೊಂದಿಗೆ ಇದ್ದವನು ಎಂದು ನಮಗೆ ತಿಳಿದಿದೆ ಏಕೆಂದರೆ ನೀವಿಬ್ಬರೂ ಗಲಿಲಾಯದಿಂದ ಬಂದವರಾಗಿದ್ದೀರಿ" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-39-07.jpg)
ಆಗ ಪೇತ್ರನು, "ನಾನು ಈ ಮನುಷ್ಯನನ್ನು ಬಲ್ಲವನಾಗಿದ್ದರೆ ದೇವರು ನನ್ನನ್ನು ಶಪಿಸಲಿ!" ಎಂದು ಹೇಳಿದನು. ಪೇತ್ರನು ಹೀಗೆ ಅಣೆಯಿಟ್ಟು ಹೇಳಿದ ತಕ್ಷಣವೇ ಕೋಳಿಯು ಕೂಗಿತು. ಯೇಸು ತಿರುಗಿಕೊಂಡು ಪೇತ್ರನನ್ನು ನೋಡಿದನು.
![OBS Image](https://cdn.door43.org/obs/jpg/360px/obs-en-39-08.jpg)
ಪೇತ್ರನು ಹೊರಗೆ ಹೋಗಿ ವ್ಯಥೆಪಟ್ಟು ಅತ್ತನು. ಅದೇ ಸಮಯದಲ್ಲಿ, ಯೇಸುವನ್ನು ದ್ರೋಹದಿಂದ ಹಿಡಿದುಕೊಟ್ಟಿದ್ದ ಯೂದನು, ಯೆಹೂದ್ಯ ಮುಖಂಡರು ಯೇಸುವಿಗೆ ಮರಣದಂಡನೆಯ ತೀರ್ಪನ್ನು ವಿಧಿಸಿದನ್ನು ನೋಡಿದನು. ಯೂದನು ದುಃಖಿತನಾದನು ಮತ್ತು ಅವನು ಹೋಗಿ ಆತ್ಮಹತ್ಯೆ ಮಾಡಿಕೊಂಡನು.
![OBS Image](https://cdn.door43.org/obs/jpg/360px/obs-en-39-09.jpg)
ಆ ಸಮಯದಲ್ಲಿ ಪಿಲಾತನು ರಾಜ್ಯಪಾಲನಾಗಿದ್ದನು. ಅವನು ರೋಮ್ ಸಾಮ್ರಾಜ್ಯಕ್ಕಾಗಿ ಕಾರ್ಯನಿರ್ವಹಿಸುತ್ತಿದ್ದನು. ಯೆಹೂದ್ಯ ಮುಖಂಡರು ಯೇಸುವನ್ನು ಅವನ ಬಳಿಗೆ ಕರೆತಂದರು. ಪಿಲಾತನು ಯೇಸುವನ್ನು ಅಪರಾಧಿಯೆಂದು ನಿರ್ಣಯಿಸಿ ಆತನನ್ನು ಕೊಲ್ಲಿಸಬೇಕೆಂದು ಎಂದು ಅವರು ಬಯಸಿದರು. ಆಗ ಪಿಲಾತನು ಯೇಸುವಿಗೆ, "ನೀನು ಯೆಹೂದ್ಯರ ಅರಸನೋ?" ಎಂದು ಕೇಳಿದನು.
![OBS Image](https://cdn.door43.org/obs/jpg/360px/obs-en-39-10.jpg)
ಯೇಸು, “ನೀನು ಸತ್ಯವನ್ನು ಹೇಳಿದ್ದಿ, ಆದರೆ ನನ್ನ ರಾಜ್ಯವು ಈ ಲೋಕದಲ್ಲಿಲ್ಲ. ನನ್ನ ರಾಜ್ಯವು ಈ ಲೋಕದ್ದಾಗಿದ್ದರೆ ನನ್ನ ಸೇವಕರು ನನಗಾಗಿ ಹೋರಾಡುತ್ತಿದ್ದರು. ದೇವರ ಕುರಿತು ಸತ್ಯವನ್ನು ಹೇಳಲು ನಾನು ಈ ಲೋಕಕ್ಕೆ ಬಂದಿದ್ದೇನೆ. ಸತ್ಯವನ್ನು ಪ್ರೀತಿಸುವ ಪ್ರತಿಯೊಬ್ಬರು ನನ್ನಲ್ಲಿ ಕಿವಿಗೊಡುತ್ತಾರೆ" ಎಂದು ಉತ್ತರಕೊಟ್ಟನು. ಪಿಲಾತನು, "ಸತ್ಯ ಎಂದರೇನು?" ಎಂದು ಕೇಳಿದನು.
![OBS Image](https://cdn.door43.org/obs/jpg/360px/obs-en-39-11.jpg)
ಯೇಸುವಿನೊಂದಿಗೆ ಮಾತನಾಡಿದ ನಂತರ, ಪಿಲಾತನು ಜನಸಮೂಹದ ಬಳಿಗೆ ಹೋಗಿ, "ಈ ಮನುಷ್ಯನಲ್ಲಿ ಮರಣಕ್ಕೆ ಯೋಗ್ಯವಾಗಿರುವ ಯಾವ ಕಾರಣವು ನನಗೆ ಕಾಣುತ್ತಿಲ್ಲ" ಎಂದು ಹೇಳಿದನು. ಆದರೆ ಯೆಹೂದ್ಯ ಮುಖಂಡರು ಮತ್ತು ಜನಸಮೂಹವು "ಆತನನ್ನು ಶಿಲುಬೆಗೇರಿಸು" ಎಂದು ಕೂಗಿದರು. ಪಿಲಾತನು, "ಆತನು ಯಾವ ತಪ್ಪನ್ನು ಮಾಡಿಲ್ಲ, ಆತನು ತಪ್ಪಿತಸ್ಥನಲ್ಲ" ಎಂದು ಹೇಳಿದನು. ಆದರೆ ಅವರು ಇನ್ನೂ ಜೋರಾಗಿ ಕೂಗಿದರು. ಆಗ ಪಿಲಾತನು ಮೂರನೆಯ ಬಾರಿ "ಅವನು ತಪ್ಪಿತಸ್ಥನಲ್ಲ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-39-12.jpg)
ಜನಸಮೂಹವು ದಂಗೆ ಏಳಬಹುದೆಂದು ಪಿಲಾತನು ಹೆದರಿದನು, ಆದ್ದರಿಂದ ಅವನು ತನ್ನ ಸೈನಿಕರು ಯೇಸುವನ್ನು ಶಿಲುಬೆಗೇರಿಸುವರು ಎಂದು ಒಪ್ಪಿಕೊಂಡನು. ರೋಮನ್ ಸೈನಿಕರು ಯೇಸುವನ್ನು ಕೊರಡೆಯಿಂದ ಹೊಡೆದರು ಮತ್ತು ರಾಜರ ನಿಲುವಂಗಿಯನ್ನು ಉಡಿಸಿದರು ಮತ್ತು ಆತನ ತಲೆಯ ಮೇಲೆ ಮುಳ್ಳುಗಳಿಂದ ಮಾಡಿದ ಕಿರೀಟವನ್ನು ಇಟ್ಟರು. ನಂತರ ಅವರು "ಇಗೋ, ಯೆಹೂದ್ಯರ ಅರಸನು!" ಎಂದು ಹೇಳುವ ಮೂಲಕ ಆತನನ್ನು ಅಪಹಾಸ್ಯ ಮಾಡಿದರು.
_ಸತ್ಯವೇದದ ಕಥೆ: ಮತ್ತಾಯ 26:57-27:26; ಮಾರ್ಕ 14:53-15:15; ಲೂಕ 22:54-23:25; ಯೋಹಾನ 18:12-19:16_

40
content/40.md Normal file
View File

@ -0,0 +1,40 @@
# 40. ಯೇಸುವನ್ನು ಶಿಲುಬೆಗೇರಿಸಿದ್ದು
![OBS Image](https://cdn.door43.org/obs/jpg/360px/obs-en-40-01.jpg)
ಸೈನಿಕರು ಯೇಸುವನ್ನು ಅಪಹಾಸ್ಯ ಮಾಡಿದ ಬಳಿಕ, ಅವರು ಆತನನ್ನು ಶಿಲುಬೆಗೆ ಹಾಕಲು ಕರೆದುಕೊಂಡು ಹೋದರು. ಆತನು ಯಾವ ಶಿಲುಬೆಯ ಮೇಲೆ ಸಾಯಬೇಕಾಗಿತ್ತೋ ಆ ಶಿಲುಬೆಯನ್ನು ಆತನು ಹೊರುವಂತೆ ಅವರು ಮಾಡಿದರು.
![OBS Image](https://cdn.door43.org/obs/jpg/360px/obs-en-40-02.jpg)
ಸೈನಿಕರು ಯೇಸುವನ್ನು "ಕಪಾಲಸ್ಥಳ" ಎಂದು ಕರೆಯಲ್ಪಡುವ ಸ್ಥಳಕ್ಕೆ ಕರೆತಂದರು ಮತ್ತು ಆತನ ಕೈ ಕಾಲುಗಳನ್ನು ಮೊಳೆಯಿಂದ ಶಿಲುಬೆಗೆ ಜಡಿದರು. ಆದರೆ ಯೇಸು, "ತಂದೆಯೇ, ಅವರನ್ನು ಕ್ಷಮಿಸು ತಾವು ಏನು ಮಾಡುತ್ತೇವೆಂಬುದನ್ನು ಅವರು ಅರಿಯರು" ಎಂದು ಹೇಳಿದನು. ಅವರು ಶಿಲುಬೆಯಲ್ಲಿ ಆತನ ತಲೆಯ ಮೇಲೆ ಒಂದು ಸಂಕೇತವನ್ನು ಹಾಕಿದರು. ಅದರಲ್ಲಿ "ಯೆಹೂದ್ಯರ ಅರಸನು" ಎಂದು ಹೇಳಲಾಗಿತ್ತು. ಪಿಲಾತನು ಹೀಗೆ ಬರೆಯಲು ಹೇಳಿದ್ದನು.
![OBS Image](https://cdn.door43.org/obs/jpg/360px/obs-en-40-03.jpg)
ಅನಂತರ ಸೈನಿಕರು ಯೇಸುವಿನ ವಸ್ತ್ರಕ್ಕಾಗಿ ಚೀಟು ಹಾಕಿದರು. ಅವರು ಇದನ್ನು ಮಾಡಿದಾಗ, "ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು" ಎಂಬ ಪ್ರವಾದನೆಯನ್ನು ಅವರು ನೆರವೇರಿಸಿದರು.
![OBS Image](https://cdn.door43.org/obs/jpg/360px/obs-en-40-04.jpg)
ಸೈನಿಕರು ಅದೇ ಸಮಯದಲ್ಲಿ ಶಿಲುಬೆಗೇರಿಸಿದ ಇಬ್ಬರು ಕಳ್ಳರು ಸಹ ಇದ್ದರು. ಅವರನ್ನು ಯೇಸುವಿನ ಎಡಬಲಗಡೆಗಳಲ್ಲಿ ಶಿಲುಬೆಗೇರಿಸಿದರು. ಕಳ್ಳರಲ್ಲಿ ಒಬ್ಬನು ಯೇಸುವನ್ನು ಅಪಹಾಸ್ಯ ಮಾಡಿದನು, ಆದರೆ ಇನ್ನೊಬ್ಬನು, "ದೇವರು ನಿನ್ನನ್ನು ಶಿಕ್ಷಿಸುವನೆಂದು ನೀನು ಭಯಪಡುವುದಿಲ್ಲವೋ? ನಾವು ಅನೇಕ ತಪ್ಪು ಕೆಲಸಗಳನ್ನು ಮಾಡಿದ ಅಪರಾಧಗಳಾಗಿದ್ದೇವೆ, ಆದರೆ ಈ ಮನುಷ್ಯನು ನಿರಾಪರಾಧಿ" ಎಂದು ಹೇಳಿದನು. ಆಗ ಅವನು ಯೇಸುವಿಗೆ, "ನೀನು ನಿನ್ನ ರಾಜ್ಯದಲ್ಲಿ ಅರಸನಾಗುವಾಗ ನನ್ನನ್ನು ನೆನಪಿಸಿಕೋ" ಎಂದು ಹೇಳಿದನು. ಯೇಸು ಅವನಿಗೆ, “ಈಹೊತ್ತು ನೀನು ನನ್ನೊಂದಿಗೆ ಪರದೈಸಿನಲ್ಲಿ ಇರುವಿ” ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-40-05.jpg)
ಯೆಹೂದ್ಯ ಮುಖಂಡರು ಮತ್ತು ಜನಸಮೂಹದಲ್ಲಿರುವ ಇತರ ಜನರು ಯೇಸುವನ್ನು ಅಪಹಾಸ್ಯ ಮಾಡಿದರು. ಅವರು ಆತನಿಗೆ, "ನೀನು ದೇವರ ಮಗನಾಗಿದ್ದರೆ ಶಿಲುಬೆಯಿಂದ ಇಳಿದು ನಿನ್ನನ್ನು ನೀನೇ ರಕ್ಷಿಸಿಕೋ. ಹಾಗಾದರೆ ನಾವು ನಿನ್ನನ್ನು ನಂಬುತ್ತೇವೆ" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-40-06.jpg)
ಆಗ ನಡುಮಧ್ಯಾಹ್ನ ಆಗಿದ್ದರೂ ಸಹ ಆ ಪ್ರದೇಶದ ಮೇಲೆಲ್ಲಾ ಕತ್ತಲೆಯ ಮೋಡವು ಕವಿಯಿತು. ಮಧ್ಯಾಹ್ನದಲ್ಲಿ ಕತ್ತಲೆಯಾಯಿತು ಮತ್ತು ಮೂರು ಗಂಟೆಗಳ ಕಾಲ ಅಲ್ಲಿ ಕತ್ತಲೆಯಾಗಿತು.
![OBS Image](https://cdn.door43.org/obs/jpg/360px/obs-en-40-07.jpg)
ಆಗ ಯೇಸು, "ತೀರಿತು!, ತಂದೆಯೇ, ನಾನು ನನ್ನ ಆತ್ಮವನ್ನು ನಿನ್ನ ಕೈಗೆ ಒಪ್ಪಿಸುತ್ತೇನೆ" ಎಂದು ಕೂಗಿ ಹೇಳಿದನು. ಆಗ ಆತನು ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು. ಆತನು ಸತ್ತಾಗ ಭೂಕಂಪ ಉಂಟಾಯಿತು. ದೇವಾಲಯದಲ್ಲಿ ದೇವರ ಪ್ರಸನ್ನತೆಯಿಂದ ಜನರನ್ನು ಬೇರ್ಪಡಿಸಿದ ದೊಡ್ಡ ಪರದೆ ಮೇಲಿನಿಂದ ಕೆಳಕ್ಕೆ ಎರಡು ಭಾಗವಾಗಿ ಹರಿದುಹೋಯಿತು.
![OBS Image](https://cdn.door43.org/obs/jpg/360px/obs-en-40-08.jpg)
ಯೇಸು ತನ್ನ ಮರಣದ ಮೂಲಕ, ಜನರು ದೇವರ ಬಳಿಗೆ ಬರಲು ಮಾರ್ಗವನ್ನು ತೆರೆದನು. ಯೇಸುವನ್ನು ಕಾಯುತ್ತಿದ್ದ ಸೈನಿಕನು ನಡೆಯುತ್ತಿರುವುದ್ದನ್ನೆಲ್ಲ ನೋಡಿ, "ಖಂಡಿತವಾಗಿಯೂ, ಈ ಮನುಷ್ಯನು ನಿರಾಪರಾಧಿಯು, ಈತನು ದೇವರ ಮಗನು ಆಗಿದ್ದಾನೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-40-09.jpg)
ಆಗ ಯೋಸೇಫನು ಮತ್ತು ನಿಕೋದೇಮನು ಎಂಬ ಇಬ್ಬರು ಯೆಹೂದ್ಯ ಮುಖಂಡರು ಬಂದರು. ಯೇಸು ಮೆಸ್ಸೀಯನೆಂದು ಅವರು ನಂಬಿದ್ದರು. ಅವರು ಯೇಸುವಿನ ದೇಹವನ್ನು ಕೊಡಬೇಕೆಂದು ಪಿಲಾತನನ್ನು ಬೇಡಿಕೊಂಡರು. ಅವರು ಆತನ ದೇಹವನ್ನು ಬಟ್ಟೆಯಲ್ಲಿ ಸುತ್ತಿಟ್ಟರು. ನಂತರ ಅವರು ಅದನ್ನು ಬಂಡೆಯಲ್ಲಿ ಕೆತ್ತಲ್ಪಟ್ಟಿದ್ದ ಸಮಾಧಿಗೆ ತೆಗೆದುಕೊಂಡು ಹೋಗಿ ಅದರೊಳಗೆ ಇಟ್ಟರು. ಅನಂತರ ಅವರು ಅದರ ದ್ವಾರವನ್ನು ಮುಚ್ಚಲು ಸಮಾಧಿಯ ಮುಂದೆ ಒಂದು ದೊಡ್ಡ ಕಲ್ಲನ್ನು ಉರುಳಿಸಿದರು.
_ಸತ್ಯವೇದದ ಕಥೆ: ಮತ್ತಾಯ 27:27-61; ಮಾರ್ಕ 15:16-47; ಲೂಕ 23:26-56; ಯೋಹಾನ 19:17-42_

36
content/41.md Normal file
View File

@ -0,0 +1,36 @@
# 41. ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದನು
![OBS Image](https://cdn.door43.org/obs/jpg/360px/obs-en-41-01.jpg)
ಸೈನಿಕರು ಯೇಸುವನ್ನು ಶಿಲುಬೆಗೇರಿಸಿದ ನಂತರ, ಯೆಹೂದ್ಯ ಮುಖಂಡರು ಪಿಲಾತನಿಗೆ, "ಆ ಸುಳ್ಳುಗಾರನಾದ ಯೇಸು ಮೂರು ದಿನಗಳ ನಂತರ ತಾನು ಸತ್ತವರೊಳಗಿಂದ ಎದ್ದುಬರುತ್ತೇನೆಂದು ಹೇಳಿದ್ದಾನೆ. ಆತನ ಶಿಷ್ಯರು ದೇಹವನ್ನು ಕದ್ದುಕೊಂಡುಹೋಗದಂತೆ ಸಮಾಧಿಯನ್ನು ಯಾರಾದರೂ ಕಾಯಬೇಕು. ಇಲ್ಲದಿದ್ದರೆ ಅವರು ಅದನ್ನು ಕದ್ದುಕೊಂಡುಹೋಗಿ ಆತನು ಸತ್ತವರೊಳಗಿಂದ ಎದ್ದುಬಂದಿದ್ದಾನೆಂದು ಅವರು ಹೇಳುತ್ತಾರೆ" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-41-02.jpg)
ಪಿಲಾತನು, "ನೀವು ಕೆಲವು ಮಂದಿ ಸೈನಿಕರು ಕರೆದುಕೊಂಡು ಹೋಗಿ ಆದಷ್ಟು ಭದ್ರವಾಗಿ ಸಮಾಧಿಯನ್ನು ಕಾಯಿರಿ" ಎಂದು ಹೇಳಿದನು. ಆದ್ದರಿಂದ ಅವರು ಸಮಾಧಿಯ ದ್ವಾರದಲ್ಲಿದ್ದ ಕಲ್ಲಿನ ಮೇಲೆ ಮುದ್ರೆಯನ್ನು ಹಾಕಿದರು. ಯಾರೂ ದೇಹವನ್ನು ಕದ್ದುಕೊಂಡುಹೋಗದಂತೆ ಅವರು ಸೈನಿಕರನ್ನು ಅಲ್ಲಿ ಕಾವಲಿರಿಸಿದರು.
![OBS Image](https://cdn.door43.org/obs/jpg/360px/obs-en-41-03.jpg)
ಯೇಸು ಸತ್ತ ದಿನದ ಮರುದಿನವು ಸಬ್ಬತ್ ದಿನವಾಗಿತ್ತು. ಸಬ್ಬತ್ ದಿನದಲ್ಲಿ ಯಾರೂ ಕೆಲಸ ಮಾಡಬಾರದಿತ್ತು, ಆದ್ದರಿಂದ ಯೇಸುವಿನ ಸ್ನೇಹಿತರಲ್ಲಿ ಯಾರು ಆತನ ಸಮಾಧಿಯ ಬಳಿಗೆ ಹೋಗಲಿಲ್ಲ. ಆದರೆ ಸಬ್ಬತ್ ದಿನದ ಮರುದಿನ, ಮುಂಜಾನೆಯಲ್ಲೇ ಅನೇಕ ಸ್ತ್ರೀಯರು ಯೇಸುವಿನ ಸಮಾಧಿಯ ಬಳಿಗೆ ಹೋಗಲು ಸಿದ್ಧರಾದರು. ಅವರು ಆತನ ದೇಹದ ಮೇಲೆ ಹೆಚ್ಚು ಸುಗಂಧದ್ರವ್ಯಗಳನ್ನು ಹಚ್ಚಲು ಬಯಸಿದರು.
![OBS Image](https://cdn.door43.org/obs/jpg/360px/obs-en-41-04.jpg)
ಸ್ತ್ರೀಯರು ಬರುವುದಕ್ಕಿಂತ ಮೊದಲು ಸಮಾಧಿಯ ಬಳಿಯಲ್ಲಿ ದೊಡ್ಡ ಭೂಕಂಪ ಉಂಟಾಯಿತು. ಪರಲೋಕದಿಂದ ದೇವದೂತನು ಇಳಿಬಂದು, ಸಮಾಧಿಯ ದ್ವಾರಕ್ಕೆ ಮುಚ್ಚಿದ್ದ ಕಲ್ಲನ್ನು ಉರುಳಿಸಿಬಿಟ್ಟು ಅದರ ಮೇಲೆ ಕುಳಿತುಕೊಂಡನು. ಈ ದೇವದೂತನು ಮಿಂಚಿನಂತೆ ಪ್ರಕಾಶಮಾನವಾಗಿ ಹೊಳೆಯುತ್ತಿದ್ದನು. ಸಮಾಧಿಯ ಬಳಿಯಲ್ಲಿದ್ದ ಸೈನಿಕರು ಅವನನ್ನು ನೋಡಿದರು. ಅವರು ಹೆದರಿ ನಡುಗಿ ಸತ್ತವರ ಹಾಗಾದರು.
![OBS Image](https://cdn.door43.org/obs/jpg/360px/obs-en-41-05.jpg)
ಸ್ತ್ರೀಯರು ಸಮಾಧಿಯ ಬಳಿಗೆ ಬಂದಾಗ ದೇವದೂತನು ಅವರಿಗೆ, "ಭಯಪಡಬೇಡಿರಿ, ಯೇಸು ಇಲ್ಲಿಲ್ಲ, ಆತನು ತಾನು ಹೇಳಿದಂತೆಯೇ ಸತ್ತವರೊಳಗಿಂದ ಎದ್ದಿದ್ದಾನೆ! ಬನ್ನಿರಿ ಸಮಾಧಿಯನ್ನು ನೋಡಿರಿ" ಎಂದು ಹೇಳಿದನು. ಸ್ತ್ರೀಯರು ಸಮಾಧಿಯೊಳಗೆ ನೋಡಿ ಮತ್ತು ಯೇಸುವಿನ ದೇಹವನ್ನು ಇಟ್ಟಿದ್ದ ಸ್ಥಳವನ್ನು ನೋಡಿದರು. ಆತನ ದೇಹವು ಅಲ್ಲಿರಲಿಲ್ಲ!
![OBS Image](https://cdn.door43.org/obs/jpg/360px/obs-en-41-06.jpg)
ಆಗ ದೇವದೂತನು ಸ್ತ್ರೀಯರಿಗೆ, "ಹೋಗಿರಿ, ಯೇಸು ಸತ್ತವರೊಳಗಿಂದ ಎದ್ದಿದ್ದಾನೆ ಮತ್ತು ಆತನು ನಿಮಗಿಂತಲೂ ಮೊದಲೇ ಗಲಿಲಾಯಕ್ಕೆ ಹೋಗುತ್ತಾನೆ ಎಂದು ಶಿಷ್ಯರಿಗೆ ಹೇಳಿರಿ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-41-07.jpg)
ಸ್ತ್ರೀಯರು ಆಶ್ಚರ್ಯಚಕಿತರು ಮತ್ತು ಅತಿ ಸಂತೋಷವುಳ್ಳವರು ಆದರು. ಅವರು ಶಿಷ್ಯರಿಗೆ ಶುಭವಾರ್ತೆಯನ್ನು ಹೇಳಲು ಓಡಿಹೋದರು.
![OBS Image](https://cdn.door43.org/obs/jpg/360px/obs-en-41-08.jpg)
ಶಿಷ್ಯರಿಗೆ ಶುಭವಾರ್ತೆಯನ್ನು ಹೇಳಲು ಸ್ತ್ರೀಯರು ಹೋಗುತ್ತಿರುವಾಗ ಯೇಸು ಅವರಿಗೆ ಕಾಣಿಸಿಕೊಂಡನು. ಅವರು ಆತನ ಪಾದಗಳಿಗೆ ಅಡ್ಡಬಿದ್ದರು. ಆಗ ಯೇಸು, "ಭಯಪಡಬೇಡಿರಿ, ನನ್ನ ಶಿಷ್ಯರ ಬಳಿಗೆ ಹೋಗಿ ಗಲಿಲಾಯಕ್ಕೆ ಹೋಗಬೇಕೆಂದು ಅವರಿಗೆ ಹೇಳಿರಿ, ಅಲ್ಲಿ ಅವರು ನನ್ನನ್ನು ನೋಡುವರು" ಎಂದು ಹೇಳಿದನು.
_ಸತ್ಯವೇದದ ಕಥೆ: ಮತ್ತಾಯ 27:62-28:15; ಮಾರ್ಕ 16:1-11; ಲೂಕ 24:1-12; ಯೋಹಾನ 20:1-18_

48
content/42.md Normal file
View File

@ -0,0 +1,48 @@
# 42. ಯೇಸು ಪರಲೋಕಕ್ಕೆ ಹಿಂದಿರುಗಿ ಹೋದನು
![OBS Image](https://cdn.door43.org/obs/jpg/360px/obs-en-42-01.jpg)
ದೇವರು ಯೇಸುವನ್ನು ಸತ್ತವರೊಳಗಿಂದ ಎಬ್ಬಿಸಿದ ದಿನದಲ್ಲಿ, ಆತನ ಶಿಷ್ಯರಲ್ಲಿ ಇಬ್ಬರು ಸಮೀಪದ ಊರಿಗೆ ಹೋಗುತ್ತಿದ್ದರು. ಅವರು ನಡೆದುಕೊಂಡು ಹೋಗುತ್ತಿರುವಾಗ ಯೇಸುವಿಗೆ ಸಂಭವಿಸಿದ್ದ ಕಾರ್ಯಗಳ ಕುರಿತು ಅವರು ಮಾತನಾಡುತ್ತಿದ್ದರು. ಆತನೇ ಮೆಸ್ಸೀಯನೆಂದು ಅವರು ನಿರೀಕ್ಷಿಸಿಕೊಂಡಿದ್ದರು, ಆದರೆ ಆತನು ಕೊಲ್ಲಲ್ಪಟ್ಟನು. ಆದರೆ ಈಗ ಆ ಸ್ತ್ರೀಯರು ಆತನು ಮತ್ತೆ ಬದುಕಿಬಂದಿದ್ದಾನೆಂದು ಹೇಳಿದರು. ಯಾವುದನ್ನು ನಂಬಬೇಕೆಂದು ಅವರಿಗೆ ತಿಳಿದಿರಲಿಲ್ಲ.
![OBS Image](https://cdn.door43.org/obs/jpg/360px/obs-en-42-02.jpg)
ಯೇಸು ಅವರ ಹತ್ತಿರಕ್ಕೆ ಬಂದು ಅವರ ಜೊತೆಯಲ್ಲಿ ನಡೆಯಲು ಆರಂಭಿಸಿದನು, ಆದರೆ ಅವರು ಅವನನ್ನು ಗುರುತನ್ನು ಹಿಡಿಯಲಿಲ್ಲ. ಅವರು ಮಾತನಾಡುತ್ತಿರುವ ಸಂಗತಿಗಳು ಏನೆಂದು ಆತನು ಕೇಳಿದನು. ಹಿಂದಿನ ಕೆಲವು ದಿನಗಳಲ್ಲಿ ಯೇಸುವಿಗೆ ಸಂಭವಿಸಿದ ಎಲ್ಲಾ ಸಂಗತಿಗಳ ಬಗ್ಗೆ ಅವರು ಆತನಿಗೆ ತಿಳಿಸಿದರು. ಯೆರೂಸಲೇಮಿನಲ್ಲಿ ನಡೆದದ್ದನ್ನು ತಿಳಿಯದಿರುವಂಥ ಪರಸ್ಥಳದವನೊಟ್ಟಿಗೆ ತಾವು ಮಾತನಾಡುತ್ತಿದ್ದೇವೆಂದು ಅವರು ಭಾವಿಸಿದರು.
![OBS Image](https://cdn.door43.org/obs/jpg/360px/obs-en-42-03.jpg)
ಅನಂತರ ಯೇಸು, ಮೆಸ್ಸೀಯನ ಕುರಿತು ದೇವರ ವಾಕ್ಯದಲ್ಲಿ ಹೇಳಿರುವಂಥದ್ದನ್ನು ಅವರಿಗೆ ವಿವರಿಸಿದನು. ದುಷ್ಟ ಮನುಷ್ಯರು ಮೆಸ್ಸೀಯನನ್ನು ಹಿಂಸಿಸಿ ಕೊಲ್ಲುತ್ತಾರೆ ಎಂದು ಪ್ರವಾದಿಗಳು ಬಹಳ ಕಾಲದ ಹಿಂದೆಯೇ ಹೇಳಿದ್ದರು ಅದರೊಂದಿಗೆ. ಪ್ರವಾದಿಗಳು ಆತನು ಮೂರನೆಯ ದಿನದಲ್ಲಿ ಮತ್ತೆ ಎದ್ದುಬರುತ್ತಾನೆ ಎಂದು ಸಹ ತಿಳಿಸಿದ್ದರು .
![OBS Image](https://cdn.door43.org/obs/jpg/360px/obs-en-42-04.jpg)
ಆ ಇಬ್ಬರು ಮನುಷ್ಯರು ಇಳಿದುಕೊಳ್ಳಲು ಬಯಸಿದಂಥ ಊರಿಗೆ ಅವರು ಬಂದಾಗ ಸಂಜೆಯಾಯಿತು. ಅವರು ತಮ್ಮೊಂದಿಗೆ ಇಳಿದುಕೊಳ್ಳುವಂತೆ ಯೇಸುವನ್ನು ಆಹ್ವಾನಿಸಿದರು, ಆದ್ದರಿಂದ ಆತನು ಅವರೊಂದಿಗೆ ಮನೆಗೆ ಹೋದನು. ಅವರು ತಮ್ಮ ರಾತ್ರಿ ಊಟವನ್ನು ಮಾಡಲು ಕುಳಿತುಕೊಂಡರು. ಯೇಸು ಒಂದು ರೊಟ್ಟಿಯನ್ನು ತೆಗೆದುಕೊಂಡು, ದೇವರ ಸ್ತೋತ್ರ ಮಾಡಿದ ನಂತರ ಅದನ್ನು ಮುರಿದನು. ಕೂಡಲೇ, ಅವರು ಆತನನ್ನು ಯೇಸು ಎಂದು ಗುರುತು ಹಿಡಿದರು. ಆದರೆ ಆ ಕ್ಷಣದಲ್ಲಿ, ಆತನು ಅವರ ದೃಷ್ಟಿಯಿಂದ ಮಾಯವಾದನು.
![OBS Image](https://cdn.door43.org/obs/jpg/360px/obs-en-42-05.jpg)
ಆ ಇಬ್ಬರು ಮನುಷ್ಯರು ಪರಸ್ಪರ ಒಬ್ಬರಿಗೊಬ್ಬರು, "ಆತನು ಯೇಸುವಾಗಿದ್ದನು! ಅದ್ದರಿಂದಲೇ ಆತನು ದೇವರ ವಾಕ್ಯವನ್ನು ನಮಗೆ ವಿವರಿಸಿ ಹೇಳಿದಾಗ ನಾವು ಉತ್ಸುಕರಾಗಿದ್ದೇವು!" ಎಂದು ಹೇಳಿದರು. ತಕ್ಷಣವೇ ಅವರು ಅಲ್ಲಿಂದ ಹೊರಟು ಯೆರೂಸಲೇಮಿಗೆ ಮರಳಿಬಂದರು. ಅವರು ಬಂದು ಶಿಷ್ಯರಿಗೆ, "ಯೇಸು ಜೀವಂತವಾಗಿದ್ದಾನೆ! ನಾವು ಅವನನ್ನು ನೋಡಿದೆವು!" ಎಂದು ಹೇಳಿದರು.
![OBS Image](https://cdn.door43.org/obs/jpg/360px/obs-en-42-06.jpg)
ಶಿಷ್ಯರು ಮಾತನಾಡುತ್ತಿರುವಾಗ, ಇದ್ದಕ್ಕಿದ್ದಂತೆ ಯೇಸು ಅವರಿದ್ದ ಕೋಣೆಯಲ್ಲಿ ಪ್ರತ್ಯಕ್ಷನಾದನು. ಆತನು, "ನಿಮಗೆ ಸಮಾಧಾನವಾಗಲಿ!" ಎಂದನು ಹೇಳಿದನು. ಆತನು ಭೂತವೆಂದು ಶಿಷ್ಯರು ಭಾವಿಸಿದರು, ಆದರೆ ಯೇಸು "ನೀವು ಯಾಕೆ ಭಯಪಡುತ್ತೀರಿ? ನಿಜವಾಗಿಯೂ ನಾನು ಯೇಸು, ನನ್ನ ಕೈ ಮತ್ತು ಕಾಲಗಳನ್ನು ನೋಡಿರಿ, ನನ್ನಗಿರುವಂತೆ ಭೂತಕ್ಕೆ ದೇಹವಿಲ್ಲ" ಎಂದು ಹೇಳಿದನು. ತಾನು ಭೂತವಲ್ಲ ಎಂದು ತೋರಿಸಲು, ಆತನು ತಿನ್ನತಕ್ಕ ಪದಾರ್ಥವೇನಾದರೂ ಇದ್ದರೆ ಕೊಡಿರಿ ಎಂದು ಕೇಳಿದನು. ಅವರು ಆತನಿಗೆ ಒಂದು ತುಂಡು ಮೀನನ್ನು ಕೊಟ್ಟರು ಮತ್ತು ಆತನು ಅದನ್ನು ತಿಂದನು.
![OBS Image](https://cdn.door43.org/obs/jpg/360px/obs-en-42-07.jpg)
ಯೇಸು, "ನನ್ನ ಬಗ್ಗೆ ದೇವರ ವಾಕ್ಯದಲ್ಲಿ ಹೇಳಿರುವಂಥದ್ದೆಲ್ಲವೂ ನೆರವೇರುತ್ತದೆ ಎಂದು ನಾನು ನಿಮಗೆ ಹೇಳಿರಲಿಲ್ಲವೇ" ಎಂದು ಹೇಳಿದನು. ಆಗ ಅವರು ದೇವರ ವಾಕ್ಯವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳುವಂತೆ ಯೇಸು ಮಾಡಿದನು. ಆತನು, "ಮೆಸ್ಸೀಯನಾದ ನಾನು, ಕಷ್ಟ ಪಟ್ಟು, ಸತ್ತು ಮೂರನೆಯ ದಿನದಲ್ಲಿ ಜೀವಿತನಾಗಿ ಎದ್ದು ಬರುವನೆಂದು ಬಹಳ ಕಾಲದ ಹಿಂದೆಯೇ ಪ್ರವಾದಿಗಳು ಬರೆದಿದ್ದರು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-42-08.jpg)
"ನನ್ನ ಶಿಷ್ಯರು ದೇವರ ಸಂದೇಶವನ್ನು ಸಾರುವರು. ಪಶ್ಚಾತ್ತಾಪ ಪಡಬೇಕೆಂದು ಅವರು ಪ್ರತಿಯೊಬ್ಬರಿಗೂ ಹೇಳುವರು. ಅವರು ಪಶ್ಚಾತ್ತಾಪ ಪಟ್ಟರೆ ದೇವರು ಅವರ ಪಾಪಗಳನ್ನು ಕ್ಷಮಿಸುವನು. ನನ್ನ ಶಿಷ್ಯರು ಪ್ರಾರಂಭವಾಗಿ ಈ ಸಂದೇಶವನ್ನು ಯೆರೂಸಲೇಮಿನಲ್ಲಿ ಸಾರುವರು. ಅನಂತರ ಅವರು ಎಲ್ಲಾ ಕಡೆಯಿರುವ ಜನಾಂಗಗಳ ಬಳಿಗೆ ಹೋಗಿ ಸಾರುವರು ಎಂದು ಸಹ ಪ್ರವಾದಿಗಳು ಬರೆದಿದ್ದಾರೆ. ನಾನು ಹೇಳಿದ್ದಂಥ, ಮಾಡಿದ್ದಂಥ ಮತ್ತು ನನಗೆ ಸಂಭವಿಸಿದ್ದಂಥ ಎಲ್ಲದರ ಬಗ್ಗೆ ನೀವು ಸಾಕ್ಷಿಗಳಾಗಿದ್ದೀರಿ."
![OBS Image](https://cdn.door43.org/obs/jpg/360px/obs-en-42-09.jpg)
ಮುಂದಿನ ನಲವತ್ತು ದಿನಗಳಲ್ಲಿ, ಯೇಸು ತನ್ನ ಶಿಷ್ಯರಿಗೆ ಹಲವಾರು ಬಾರಿ ಕಾಣಿಸಿಕೊಂಡನು. ಒಮ್ಮೆ ಆತನು ಒಂದೇ ಸಮಯದಲ್ಲಿ 500 ಕ್ಕಿಂತ ಹೆಚ್ಚು ಜನರಿಗೆ ಕಾಣಿಸಿಕೊಂಡನು! ಆತನು ತನ್ನ ಶಿಷ್ಯರಿಗೆ ತಾನು ಜೀವಂತನಾಗಿ ಎದ್ದು ಬಂದಿದ್ದೇನೆ ಎಂದು ಅನೇಕ ವಿಧಗಳಲ್ಲಿ ಸಾಬೀತು ಮಾಡಿದನು ಮತ್ತು ದೇವರ ರಾಜ್ಯದ ಕುರಿತು ಅವರಿಗೆ ಬೋಧಿಸಿದನು.
![OBS Image](https://cdn.door43.org/obs/jpg/360px/obs-en-42-10.jpg)
ಯೇಸು ತನ್ನ ಶಿಷ್ಯರಿಗೆ, "ಪರಲೋಕದಲ್ಲಿ ಮತ್ತು ಭೂಲೋಕದಲ್ಲಿ ಇರುವ ಎಲ್ಲರನ್ನು ಆಳುವ ಅಧಿಕಾರವನ್ನು ದೇವರು ನನಗೆ ಕೊಟ್ಟಿದ್ದಾನೆ. ಆದ್ದರಿಂದ ಎಲ್ಲಾ ಜನಾಂಗಗಳ ಬಳಿಗೆ ಹೋಗಿ ಅವರನ್ನು ಶಿಷ್ಯರನ್ನಾಗಿ ಮಾಡಿರಿ. ಅದನ್ನು ಮಾಡುವುದಕ್ಕಾಗಿ ಅವರನ್ನು ತಂದೆ, ಮಗ, ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿರಿ. ನಾನು ನಿಮಗೆ ಆಜ್ಞಾಪಿಸಿದ ಎಲ್ಲವನ್ನು ಅನುಸರಿಸುವುದಕ್ಕೆ ಅವರಿಗೆ ಉಪದೇಶ ಮಾಡಿರಿ ಎಂದು ಹೇಳುತ್ತೇನೆ. ನಾನು ಯಾವಾಗಲೂ ನಿಮ್ಮೊಂದಿಗೆ ಇರುತ್ತೇನೆ ಎಂದು ನೆನಪಿಟ್ಟುಕೊಳ್ಳಿರಿ " ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-42-11.jpg)
ಯೇಸು ಸತ್ತವರೊಳಗಿಂದ ಎದ್ದುಬಂದು ನಲವತ್ತು ದಿನಗಳಾದ ಬಳಿಕ ಆತನು ತನ್ನ ಶಿಷ್ಯರಿಗೆ, "ನನ್ನ ತಂದೆಯು ನಿಮಗೆ ಶಕ್ತಿಯನ್ನು ದಯಪಾಲಿಸುವವರೆಗೂ ಯೆರೂಸಲೇಮಿನಲ್ಲಿ ಕಾದುಕೊಂಡಿರಿ. ಆತನು ನಿನ್ನ ಮೇಲೆ ಪವಿತ್ರಾತ್ಮನನ್ನು ಕಳುಹಿಸುವ ಮೂಲಕ ಇದನ್ನು ಮಾಡುತ್ತಾನೆ" ಎಂದು ಹೇಳಿದನು. ಆಗ ಯೇಸು ಪರಲೋಕಕ್ಕೆ ಏರಿಹೋದನು ಮತ್ತು ಮೋಡವೊಂದು ಆತನನ್ನು ಕವಿದುಕೊಂಡಿದ್ದರಿಂದ, ಆತನು ಅವರ ಕಣ್ಣಿಗೆ ಮರೆಯಾದನು. ಸಕಲವನ್ನು ಆಳಲು ಯೇಸು ಪರಲೋಕದಲ್ಲಿ ದೇವರ ಬಲಗಡೆಯಲ್ಲಿ ಅಸೀನನಾದನು.
_ಸತ್ಯವೇದದ ಕಥೆ: ಮತ್ತಾಯ 28:16-20; ಮಾರ್ಕ 16:12-20; ಲೂಕ 24:13-53; ಯೋಹಾನ 20:19-23; ಅ.ಕೃ 1:1-11_

56
content/43.md Normal file
View File

@ -0,0 +1,56 @@
# 43. ಸಭೆಯ ಪ್ರಾರಂಭ
![OBS Image](https://cdn.door43.org/obs/jpg/360px/obs-en-43-01.jpg)
ಯೇಸು ಪರಲೋಕಕ್ಕೆ ಹಿಂದಿರುಗಿ ಹೋದ ನಂತರ, ಯೇಸು ಅವರಿಗೆ ಆಜ್ಞಾಪಿಸಿದಂತೆಯೇ ಶಿಷ್ಯರು ಯೆರೂಸಲೇಮಿನಲ್ಲಿ ಇದ್ದರು. ಅಲ್ಲಿದ್ದ ವಿಶ್ವಾಸಿಗಳು ಸತತವಾಗಿ ಪ್ರಾರ್ಥಿಸಲು ಕೂಡಿಬಂದಿದ್ದರು.
![OBS Image](https://cdn.door43.org/obs/jpg/360px/obs-en-43-02.jpg)
ಪಸ್ಕಹಬ್ಬವಾದ 50 ದಿನಗಳ ನಂತರ, ಪಂಚಾಶತ್ತಮ ಎಂದು ಕರೆಯಲ್ಪಡುವ ಪ್ರಾಮುಖ್ಯವಾದ ದಿನವನ್ನು ಯೆಹೂದ್ಯರು ಪ್ರತಿವರ್ಷವು ಆಚರಿಸುತ್ತಿದ್ದರು. ಪಂಚಾಶತ್ತಮದ ಸಮಯದಲ್ಲಿ ಯೆಹೂದ್ಯರು ಗೋಧಿ ಸುಗ್ಗಿಯನ್ನು ಆಚರಿಸುತ್ತಿದ್ದರು. ಪಂಚಾಶತ್ತಮದ ದಿನವನ್ನು ಒಟ್ಟಾಗಿ ಆಚರಿಸುವುದಕ್ಕಾಗಿ ಲೋಕದ ಎಲ್ಲಾ ಕಡೆಯಿಂದ ಯೆಹೂದ್ಯರು ಯೆರೂಸಲೇಮಿಗೆ ಬಂದರು. ಈ ವರ್ಷದ ಪಂಚಾಶತ್ತಮದ ಸಮಯವು, ಯೇಸು ಪರಲೋಕಕ್ಕೆ ಹಿಂದಿರುಗಿ ಹೋಗಿ ಸುಮಾರು ಒಂದು ವಾರವಾದ ನಂತರ ಬಂದಿತು.
![OBS Image](https://cdn.door43.org/obs/jpg/360px/obs-en-43-03.jpg)
ವಿಶ್ವಾಸಿಗಳೆಲ್ಲರು ಒಟ್ಟಾಗಿ ಕೂಡಿಬಂದಿದ್ದಾಗ, ಇದ್ದಕ್ಕಿದ್ದಂತೆ ಅವರು ಇದ್ದ ಮನೆಯಲ್ಲಿ ಬಿರುಗಾಳಿಯಂಥ ಶಬ್ದವು ತುಂಬಿಕೊಂಡಿತು. ಆಗ ಬೆಂಕಿಯ ಜ್ವಾಲೆಯಂತೆ ಕಾಣಿಸಿಕೊಳ್ಳುವಂಥ ಏನೋ ಒಂದು ಎಲ್ಲ ವಿಶ್ವಾಸಿಗಳ ತಲೆಯ ಮೇಲೆ ಕಾಣಿಸಿಕೊಂಡಿತು. ಅವರೆಲ್ಲರು ಪವಿತ್ರಾತ್ಮನಿಂದ ತುಂಬಿದವರಾದರು ಮತ್ತು ಅವರು ಬೇರೆ ಭಾಷೆಗಳಲ್ಲಿ ದೇವರನ್ನು ಸ್ತುತಿಸಿದರು. ಈ ಭಾಷೆಗಳು ಪವಿತ್ರಾತ್ಮನು ಅವರಿಗೆ ನೀಡಿದ ಶಕ್ತಿಯ ಪ್ರಕಾರ ಅವರು ಮಾತನಾಡಿದ ಭಾಷೆಗಳಾಗಿದ್ದವು.
![OBS Image](https://cdn.door43.org/obs/jpg/360px/obs-en-43-04.jpg)
ಯೆರೂಸಲೇಮಿನಲ್ಲಿರುವ ಜನರು ಈ ಶಬ್ದವನ್ನು ಕೇಳಿದಾಗ ಏನು ನಡೆಯುತ್ತಿದೆಯೆಂದು ನೋಡಲು ಅವರು ಗುಂಪಾಗಿ ಕೂಡಿಬಂದರು. ವಿಶ್ವಾಸಿಗಳು ದೇವರು ಮಾಡಿದ ಮಹತ್ತುಗಳ ಬಗ್ಗೆ ಘೋಷಿಸುತ್ತಿರುವುದನ್ನು ಅವರು ಕೇಳಿಸಿಕೊಂಡರು. ಅವರು ಬೆರಗಾದರು ಏಕೆಂದರೆ ಅವರು ತಮ್ಮ ಸ್ವಂತ ಭಾಷೆಗಳಲ್ಲಿ ಈ ವಿಷಯಗಳನ್ನು ಕೇಳಿಸಿಕೊಳ್ಳುತ್ತಿದ್ದರು.
![OBS Image](https://cdn.door43.org/obs/jpg/360px/obs-en-43-05.jpg)
ಅಲ್ಲಿದ್ದ ಜನರು “ಶಿಷ್ಯರು ಕುಡಿದು ಮತ್ತರಾಗಿದ್ದಾರೆ” ಎಂದು ಹೇಳಿದರು. ಆದರೆ ಪೇತ್ರನು ಎದ್ದು ನಿಂತು ಅವರಿಗೆ ಹೇಳಿದ್ದೇನಂದರೆ, “ನನ್ನ ಮಾತನ್ನು ಕೇಳಿರಿ! ಈ ಜನರು ಕುಡಿದು ಮತ್ತರಾಗಿಲ್ಲ! ಬದಲಿಗೆ, ಪ್ರವಾದಿಯಾದ ಯೋವೇಲನು ಏನಾಗುವುದೆಂದು ಹೇಳಿದ್ದನ್ನೋ ಆ ಸಂಗತಿಯನ್ನು ನೀವು ನೋಡುತ್ತಿರುವಿರಿ. ಅದೇನೆದರೆ: ದೇವರು, "ಕೊನೆಯ ದಿನಗಳಲ್ಲಿ, ನಾನು ನನ್ನ ಆತ್ಮವನ್ನು ಸುರಿಸುವೆನು' ಎಂದು ಹೇಳಿದ್ದನು"
![OBS Image](https://cdn.door43.org/obs/jpg/360px/obs-en-43-06.jpg)
"ಇಸ್ರಾಯೇಲ್ ಜನರೇ, ಯೇಸು ತಾನು ಯಾರೆಂದು ತೋರಿಸುವುದಕ್ಕಾಗಿ ಅನೇಕ ಅದ್ಭುತ ಕಾರ್ಯಗಳನ್ನು ಮಾಡಿದ್ದಂಥ ವ್ಯಕ್ತಿಯಾಗಿದ್ದನು. ಆತನು ದೇವರ ಶಕ್ತಿಯಿಂದ ಅನೇಕ ಅತಿಶಯವಾದ ಕಾರ್ಯಗಳನ್ನು ಮಾಡಿದನು. ನೀವು ಇದನ್ನು ಬಲ್ಲಿರಿ ಏಕೆಂದರೆ ಈ ಕಾರ್ಯಗಳನ್ನು ನೀವು ನೋಡಿದರೂ ನೀವು ಆತನನ್ನು ಶಿಲುಬೆಗೆ ಹಾಕಿಸಿದ್ದೀರಿ!"
![OBS Image](https://cdn.door43.org/obs/jpg/360px/obs-en-43-07.jpg)
"ಯೇಸು ಸತ್ತನು, ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು. ‘ನಿನ್ನ ಪವಿತ್ರನನ್ನು ಕೊಳೆಯಲು ಬಿಡಲಾರೆ’ ಎಂದು ಪ್ರವಾದಿಯು ಬರೆದಿರುವಂಥದ್ದು ನೆರವೇರುವಂತೆ ಇದಾಯಿತು. ದೇವರು ಯೇಸುವನ್ನು ಜೀವಂತವಾಗಿ ಎಬ್ಬಿಸಿದ್ದನೆಂಬುದಕ್ಕೆ ನಾವು ಸಾಕ್ಷಿಗಳಾಗಿದ್ದೇವೆ."
![OBS Image](https://cdn.door43.org/obs/jpg/360px/obs-en-43-08.jpg)
"ತಂದೆಯಾದ ದೇವರು ಯೇಸುವನ್ನು ತನ್ನ ಬಲಗಡೆಯಲ್ಲಿ ಕುಳಿತುಕೊಳ್ಳುವಂತೆ ಮಾಡುವುದರ ಮೂಲಕ ಈಗ ಆತನನ್ನು ಸನ್ಮಾನಿಸಿದ್ದಾನೆ. ಮತ್ತು ಯೇಸು ತಾನು ಕಳುಹಿಸುವೆನೆಂದು ವಾಗ್ದಾನ ಮಾಡಿದಂತೆಯೇ ಆತನು ನಮಗೆ ಪವಿತ್ರಾತ್ಮನನ್ನು ಕಳುಹಿಸಿಕೊಟ್ಟಿದ್ದಾನೆ. ಈಗ ನೀವು ನೋಡುತ್ತಿರುವ ಮತ್ತು ಕೇಳುತ್ತಿರುವ ಸಂಗತಿಗಳನ್ನು ಮಾಡುತ್ತಿರುವುದು ಪವಿತ್ರಾತ್ಮನೇ."
![OBS Image](https://cdn.door43.org/obs/jpg/360px/obs-en-43-09.jpg)
"ನೀವು ಯೇಸುವೆಂಬ ಈ ಮನುಷ್ಯನನ್ನು ಶಿಲುಬೆಗೆ ಹಾಕಿದ್ದೀರಿ. ಆದರೆ ದೇವರು ಯೇಸುವನ್ನು ಸಕಲಕ್ಕೆ ಕರ್ತನನ್ನಾಗಿಯೂ ಮತ್ತು ಮೆಸ್ಸೀಯನನ್ನಾಗಿಯೂ ಮಾಡಿದ್ದಾನೆಂದು ನಿಸ್ಸಂದೇಹವಾಗಿ ತಿಳಿದಿರಲಿ!" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-43-10.jpg)
ಪೇತ್ರನ ಮಾತನ್ನು ಕೇಳುತ್ತಿದ್ದ ಜನರು ಅವನು ಹೇಳಿದ ವಿಷಯಗಳಿಂದ ತೀವ್ರವಾಗಿ ಪ್ರಚೋದಿಸಲ್ಪಟ್ಟರು. ಆದ್ದರಿಂದ ಅವರು ಪೇತ್ರನನ್ನು ಮತ್ತು ಶಿಷ್ಯರನ್ನು, "ಸಹೋದರರೇ, ನಾವು ಏನು ಮಾಡಬೇಕು?" ಎಂದು ಕೇಳಿದರು.
![OBS Image](https://cdn.door43.org/obs/jpg/360px/obs-en-43-11.jpg)
ಪೇತ್ರನು ಅವರಿಗೆ, "ನಿಮ್ಮಲ್ಲಿ ಪ್ರತಿಯೊಬ್ಬನು ನಿಮ್ಮ ಪಾಪಗಳಿಗಾಗಿ ಪಶ್ಚಾತ್ತಾಪಪಡಬೇಕು, ಆಗ ದೇವರು ನಿಮ್ಮನ್ನು ಕ್ಷಮಿಸುವನು. ಮತ್ತು ಯೇಸು ಕ್ರಿಸ್ತನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕು. ಆಗ ಆತನು ನಿಮಗೆ ಪವಿತ್ರಾತ್ಮನನ್ನು ದಾನವಾಗಿ ಕೊಡುವನು" ಎಂದು ಉತ್ತರಿಸಿದನು.
![OBS Image](https://cdn.door43.org/obs/jpg/360px/obs-en-43-12.jpg)
ಪೇತ್ರನು ಹೇಳಿದ ವಿಷಯವನ್ನು ಸುಮಾರು 3,000 ಜನರು ನಂಬಿದ್ದರು ಮತ್ತು ಯೇಸುವಿನ ಶಿಷ್ಯರಾದರು. ಅವರು ದೀಕ್ಷಾಸ್ನಾನ ಮಾಡಿಸಿಕೊಂಡು ಯೆರೂಸಲೇಮಿನಲ್ಲಿರುವ ಸಭೆಯ ಅಂಗವಾದರು.
![OBS Image](https://cdn.door43.org/obs/jpg/360px/obs-en-43-13.jpg)
ಅಪೊಸ್ತಲರು ಅವರಿಗೆ ಬೋಧಿಸುವುದನ್ನು ವಿಶ್ವಾಸಿಗಳು ನಿರಂತರವಾಗಿ ಕೇಳುತ್ತಿದ್ದರು. ಅವರು ಅನೇಕಸಾರಿ ಒಟ್ಟಿಗೆ ಸೇರಿಬರುತ್ತಿದ್ದರು, ಒಟ್ಟಿಗೆ ಊಟಮಾಡುತ್ತಿದ್ದರು ಮತ್ತು ಅವರು ಅನೇಕಸಾರಿ ಪರಸ್ಪರ ಒಬ್ಬರಿಗೊಬ್ಬರು ಪ್ರಾರ್ಥಿಸುತ್ತಿದ್ದರು. ಅವರು ಒಟ್ಟಿಗೆ ದೇವರನ್ನು ಸ್ತುತಿಸುತ್ತಿದ್ದರು ಮತ್ತು ಅವರು ತಮ್ಮಗಿದ್ದೆದ್ದಲ್ಲವನ್ನೂ ಪರಸ್ಪರ ಹಂಚಿಕೊಳ್ಳುತ್ತಿದ್ದರು. ಪಟ್ಟಣದಲ್ಲಿದ್ದ ಎಲ್ಲರೂ ಅವರ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು. ಪ್ರತಿದಿನ, ಹೆಚ್ಚೆಚ್ಚು ಜನರು ವಿಶ್ವಾಸಿಗಳಾಗುತ್ತಿದ್ದರು.
_ಸತ್ಯವೇದದ ಕಥೆ: ಅಪೊಸ್ತಲರ ಕೃತ್ಯಗಳು 2_

40
content/44.md Normal file
View File

@ -0,0 +1,40 @@
# 44. ಪೇತ್ರ ಯೋಹಾನರು ಭಿಕ್ಷುಕನನ್ನು ವಾಸಿಮಾಡಿದ್ದು
![OBS Image](https://cdn.door43.org/obs/jpg/360px/obs-en-44-01.jpg)
ಒಂದು ದಿನ, ಪೇತ್ರ ಮತ್ತು ಯೋಹಾನರು ದೇವಾಲಯಕ್ಕೆ ಹೋದರು. ಅದರ ದ್ವಾರದ ಬಳಿಯಲ್ಲಿ ಕುಂಟುನೊಬ್ಬನು ಕುಳಿತುಕೊಂಡು ಹಣಕ್ಕಾಗಿ ಭಿಕ್ಷೆಬೇಡುತ್ತಿದ್ದನು.
![OBS Image](https://cdn.door43.org/obs/jpg/360px/obs-en-44-02.jpg)
ಪೇತ್ರನು ಆ ಕುಂಟನನ್ನು ನೋಡಿ "ನಿನಗೆ ಕೊಡಲು ನನ್ನಲ್ಲಿ ಹಣವಿಲ್ಲ. ಆದರೆ ನಾನು ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ. ಯೇಸುವಿನ ಹೆಸರಿನಲ್ಲಿ ಎದ್ದು ನಡೆದಾಡು" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-44-03.jpg)
ತಕ್ಷಣವೇ, ದೇವರು ಕುಂಟನನ್ನು ವಾಸಿಮಾಡಿದನು. ಅವನು ನಡೆಯಲು, ಕುಣಿಯಲು ಮತ್ತು ದೇವರನ್ನು ಕೊಂಡಾಡಲು ಪ್ರಾರಂಭಿಸಿದನು. ದೇವಾಲಯದ ಅಂಗಳದಲ್ಲಿದ್ದ ಜನರು ಬೆರಗಾದರು.
![OBS Image](https://cdn.door43.org/obs/jpg/360px/obs-en-44-04.jpg)
ವಾಸಿಯಾದ ಮನುಷ್ಯನನ್ನು ನೋಡಲು ಬೇಗನೇ ಜನಸಮೂಹವು ಬಂದಿತು. ಪೇತ್ರನು ಅವರಿಗೆ, “ಈ ಮನುಷ್ಯನು ವಾಸಿಯಾಗಿದ್ದಾನೆ, ಆದರೆ ಆಶ್ಚರ್ಯಪಡಬೇಡಿರಿ. ನಾವು ನಮ್ಮ ಸ್ವಂತ ಶಕ್ತಿಯಿಂದಾಗಲಿ ಅಥವಾ ನಾವು ದೇವರನ್ನು ಸನ್ಮಾನಿಸುವ ಕಾರಣದಿಂದಾಗಲಿ ಅವನನ್ನು ಗುಣಪಡಿಸಲಿಲ್ಲ. ಆದರೆ ನಾವು ಯೇಸುವನ್ನು ನಂಬುವುದ್ದರಿಂದ ಯೇಸು ಈ ಮನುಷ್ಯನನ್ನು ತನ್ನ ಶಕ್ತಿಯಿಂದ ಗುಣಪಡಿಸಿದನು."
![OBS Image](https://cdn.door43.org/obs/jpg/360px/obs-en-44-05.jpg)
"ಯೇಸುವನ್ನು ಕೊಲ್ಲಬೇಕೆಂದು ರೋಮನ್ ರಾಜ್ಯಪಾಲನಿಗೆ ಹೇಳಿದವರು ನೀವು. ನೀವು ಎಲ್ಲರಿಗೂ ಜೀವವನ್ನು ಕೊಡುವಾತನನ್ನು ಕೊಲ್ಲಿಸಿದ್ದೀರಿ. ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು. ನೀವು ಆಗ ಏನು ಮಾಡಿದ್ದೀರಿ ಎಂಬುದರ ಅರಿವು ನಿಮಗಿರಲಿಲ್ಲ. ಆದರೆ ನೀವು ಆ ಕಾರ್ಯಗಳನ್ನು ಮಾಡಿದಾಗ, ಪ್ರವಾದಿಗಳು ಹೇಳಿರುವ ಮಾತು ನೆರವೇರಿತು. ಅವರು ಮೆಸ್ಸೀಯನು ಕಷ್ಟಗಳನ್ನನುಭವಿಸಿ ಸಾಯುತ್ತಾನೆ ಎಂದು ಹೇಳಿದ್ದರು. ದೇವರು ಅದನ್ನು ಈ ರೀತಿಯಾಗಿ ಮಾಡಿದನು. ಆದ್ದರಿಂದ ಈಗ ಪಶ್ಚಾತ್ತಾಪಪಡಿರಿ ಮತ್ತು ದೇವರ ಕಡೆಗೆ ತಿರುಗಿಕೊಳ್ಳಿರಿ, ಆತನು ನಿಮ್ಮ ಪಾಪಗಳನ್ನು ತೊಳೆದುಬಿಡುವನು” ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-44-06.jpg)
ದೇವಾಲಯದ ಮುಖಂಡರು ಪೇತ್ರ ಮತ್ತು ಯೋಹಾನರು ಹೇಳುವುದನ್ನು ಕೇಳಿಸಿಕೊಂಡಾಗ ತುಂಬಾ ಬೇಸರಗೊಂಡರು. ಆದ್ದರಿಂದ ಅವರನ್ನು ಬಂಧಿಸಿ ಸೆರೆಮನೆಗೆ ಹಾಕಿದರು. ಆದರೆ ಪೇತ್ರನು ಹೇಳಿದ್ದನ್ನು ಅನೇಕರು ನಂಬಿದ್ದರು. ಯೇಸುವನ್ನು ನಂಬಿದ ಗಂಡಸರ ಸಂಖ್ಯೆಯು ಸುಮಾರು 5,000 ಕ್ಕೆ ಏರಿತು.
![OBS Image](https://cdn.door43.org/obs/jpg/360px/obs-en-44-07.jpg)
ಮರುದಿನ, ಯೆಹೂದ್ಯ ಮುಖಂಡರು ಪೇತ್ರ ಮತ್ತು ಯೋಹಾನರನ್ನು ಮಹಾಯಾಜಕನ ಹಾಗೂ ಇತರ ಧಾರ್ಮಿಕ ಮುಖಂಡರ ಬಳಿಗೆ ಕರೆತಂದರು. ಅವರು ಕುಂಟನಾಗಿದ್ದ ಮನುಷ್ಯನನ್ನು ಸಹ ಕರೆತಂದರು. ಅವರು ಪೇತ್ರ ಮತ್ತು ಯೋಹಾನರಿಗೆ, "ಈ ಕುಂಟನಾದ ಮನುಷ್ಯನನ್ನು ನೀವು ಯಾವ ಶಕ್ತಿಯನ್ನು ಗುಣಪಡಿಸಿದ್ದೀರಿ?" ಎಂದು ಕೇಳಿದರು.
![OBS Image](https://cdn.door43.org/obs/jpg/360px/obs-en-44-08.jpg)
ಪೇತ್ರನು ಅವರಿಗೆ, "ನಿಮ್ಮ ಮುಂದೆ ನಿಂತಿರುವ ಈ ಮನುಷ್ಯನು ಮೆಸ್ಸೀಯನಾದ ಯೇಸುವಿನ ಶಕ್ತಿಯಿಂದ ಗುಣವಾಗಿದ್ದಾನೆ. ನೀವು ಯೇಸುವನ್ನು ಶಿಲುಬೆಗೆ ಹಾಕಿಸಿದ್ದೀರಿ, ಆದರೆ ದೇವರು ಆತನನ್ನು ಜೀವಂತವಾಗಿ ಎಬ್ಬಿಸಿದನು! ನೀವು ಆತನನ್ನು ತಿರಸ್ಕರಿಸಿದ್ದೀರಿ, ಆದರೆ ರಕ್ಷಣೆಹೊಂದಲು ಯೇಸುವಿನ ಶಕ್ತಿಯನ್ನು ಹೊರತುಪಡಿಸಿ ಬೇರೆ ಯಾವ ಮಾರ್ಗವಿಲ್ಲ! ಎಂದು ಉತ್ತರಿಸಿದನು.
![OBS Image](https://cdn.door43.org/obs/jpg/360px/obs-en-44-09.jpg)
ಪೇತ್ರ ಯೋಹಾನರು ಬಹಳ ಧೈರ್ಯದಿಂದ ಮಾತನಾಡಿದ್ದರಿಂದ ಮುಖಂಡರು ಆಶ್ಚರ್ಯಪಟ್ಟರು . ಅವರು ಈ ಮನುಷ್ಯರು ಅವಿದ್ಯಾವಂತರಾದ ಸಾಮಾನ್ಯ ಮನುಷ್ಯರೆಂದು ತಿಳಿದಾಗ್ಯೂ ಆ ಮನುಷ್ಯರು ಯೇಸುವಿನೊಂದಿಗೆ ಇದ್ದವರು ಎಂದು ಅವರು ನೆನಪಿಸಿಕೊಂಡರು. ಆದ್ದರಿಂದ ಅ ಮುಖಂಡರು ಅವರಿಗೆ, "ಯೇಸು ಎಂಬ ಈ ಮನುಷ್ಯನ ಬಗ್ಗೆ ಜನರಿಗೆ ಬೋಧಿಸಿದರೆ ನಾವು ನಿಮ್ಮನ್ನು ಹೆಚ್ಚಾಗಿ ಶಿಕ್ಷಿಸುತ್ತೇವೆ" ಎಂದು ಹೇಳಿದರು. ಈ ರೀತಿಯ ಅನೇಕ ಸಂಗತಿಗಳನ್ನು ಹೇಳಿದ ನಂತರ ಅವರು ಪೇತ್ರ ಯೋಹಾನರನ್ನು ಕಳುಹಿಸಿಬಿಟ್ಟರು.
_ಸತ್ಯವೇದದ ಕಥೆ: ಅಪೊಸ್ತಲರ ಕೃತ್ಯಗಳು 3:1-4:22_

56
content/45.md Normal file
View File

@ -0,0 +1,56 @@
# 45. ಸ್ತೆಫನನು ಮತ್ತು ಫಿಲಿಪ್ಪನು
![OBS Image](https://cdn.door43.org/obs/jpg/360px/obs-en-45-01.jpg)
ಸ್ತೆಫನನೆಂಬ ವ್ಯಕ್ತಿಯು ಆದಿ ಕ್ರೈಸ್ತ ನಾಯಕರಲ್ಲಿ ಒಬ್ಬನಾಗಿದ್ದನು. ಎಲ್ಲರು ಅವನನ್ನು ಗೌರವಿಸುತ್ತಿದ್ದರು. ಪವಿತ್ರಾತ್ಮನು ಅವನಿಗೆ ಹೆಚ್ಚು ಶಕ್ತಿಯನ್ನು ಮತ್ತು ಜ್ಞಾನವನ್ನು ದಯಪಾಲಿಸಿದನು. ಸ್ತೆಫನನು ಅನೇಕ ಅದ್ಭುತಗಳನ್ನು ಮಾಡಿದನು. ಯೇಸುವಿನಲ್ಲಿ ನಂಬಿಕೆಯಿಡುವಂತೆ ಅವನು ಅವರಿಗೆ ಬೋಧಿಸಿದಾಗ ಅನೇಕ ಜನರು ಆತನನ್ನು ನಂಬಿದರು .
![OBS Image](https://cdn.door43.org/obs/jpg/360px/obs-en-45-02.jpg)
ಒಂದು ದಿನ ಸ್ತೆಫನನು ಯೇಸುವಿನ ಬಗ್ಗೆ ಬೋಧಿಸುತ್ತಿದ್ದನು, ಆಗ ಯೇಸುವನ್ನು ನಂಬದ ಕೆಲವು ಮಂದಿ ಯೆಹೂದ್ಯರು ಬಂದು ಅವನ ಸಂಗಡ ತರ್ಕಮಾಡಲು ಪ್ರಾರಂಭಿಸಿದರು. ಅವರು ಬಹಳ ಕೋಪಗೊಂಡು, ಧಾರ್ಮಿಕ ಮುಖಂಡರ ಬಳಿಗೆ ಹೋಗಿ ಅವನ ಬಗ್ಗೆ ಸುಳ್ಳುಸಾಕ್ಷಿ ಹೇಳಿದರು. ಅವರು, "ಸ್ತೆಫನನು ಮೋಶೆಯ ಬಗ್ಗೆಯೂ ಮತ್ತು ದೇವರ ಬಗ್ಗೆಯೂ ತಪ್ಪಾಗಿ ಮಾತನಾಡುತ್ತಿರುವುದನ್ನು ನಾವು ಕೇಳಿದ್ದೇವೆ" ಎಂದು ಹೇಳಿದರು. ಹಾಗಾಗಿ ಧಾರ್ಮಿಕ ಮುಖಂಡರು ಸ್ತೆಫನನನ್ನು ಬಂಧಿಸಿ, ಅವನನ್ನು ಮಹಾಯಾಜಕನ ಬಳಿಗೂ ಮತ್ತು ಯೆಹೂದ್ಯರ ಇತರ ಮುಖಂಡರ ಬಳಿಗೂ ಕರೆತಂದರು. ಅನೇಕ ಸುಳ್ಳುಸಾಕ್ಷಿಗಳವರು ಮುಂದೆ ಬಂದು ಸ್ತೆಫನನ ಕುರಿತು ಸುಳ್ಳುಸಾಕ್ಷಿ ಹೇಳಿದರು.
![OBS Image](https://cdn.door43.org/obs/jpg/360px/obs-en-45-03.jpg)
ಮಹಾಯಾಜಕನು ಸ್ತೆಫನನಿಗೆ, "ಈ ಜನರು ನಿನ್ನ ಬಗ್ಗೆ ಸತ್ಯವನ್ನು ಹೇಳುತ್ತಿದ್ದಾರೆಯೇ?" ಎಂದು ಕೇಳಿದನು. ಮಹಾಯಾಜಕನಿಗೆ ಉತ್ತರಿಸುವ ಸಲುವಾಗಿ ಸ್ತೆಫನನು ಅನೇಕ ವಿಷಯಗಳನ್ನು ಹೇಳಲಾರಂಭಿಸಿದನು. ಅಬ್ರಹಾಮನು ಜೀವಿಸಿದ ಸಮಯದಿಂದ ಯೇಸುವಿನ ಸಮಯದವರೆಗೂ ದೇವರು ಇಸ್ರಾಯೇಲ್ ಜನರಿಗಾಗಿ ಅನೇಕ ಅದ್ಭುತವಾದ ಕಾರ್ಯಗಳನ್ನು ಮಾಡಿದ್ದಾನೆಂದು ಅವನು ಹೇಳಿದನು. ಆದರೆ ಜನರು ಯಾವಾಗಲೂ ದೇವರಿಗೆ ಅವಿಧೇಯರಾಗಿದ್ದರು. ಸ್ತೆಫನನು, "ನೀವು ಮೊಂಡರು ಮತ್ತು ದೇವರಿಗೆ ವಿರುದ್ಧವಾಗಿ ತಿರುಗಿಬಿದ್ದವರು. ನಿಮ್ಮ ಪಿತೃಗಳು ಯಾವಾಗಲೂ ದೇವರನ್ನು ತಿರಸ್ಕರಿಸಿದಂತೆಯೇ ಆತನ ಪ್ರವಾದಿಗಳನ್ನು ಕೊಂದಂತೆ ನೀವು ಯಾವಾಗಲೂ ಪವಿತ್ರಾತ್ಮನನ್ನು ತಿರಸ್ಕರಿಸುತ್ತೀರಿ ಕೊಲ್ಲಲ್ಲುತ್ತಿದ್ದೀರಿ. ಆದರೆ ನೀವು ಅವರು ಮಾಡಿದಕ್ಕಿಂತಲೂ ಹೆಚ್ಚಿನ ತಪ್ಪನ್ನು ನೀವು ಮಾಡಿದ್ದೀರಿ! ನೀವು ಮೆಸ್ಸೀಯನನ್ನು ಕೊಂದಿದ್ದೀರಿ!" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-45-04.jpg)
ಧಾರ್ಮಿಕ ನಾಯಕರು ಇದನ್ನು ಕೇಳಿದಾಗ, ಅವರು ಬಹಳ ಕೋಪಗೊಂಡು, ತಮ್ಮ ಕಿವಿಗಳನ್ನು ಮುಚ್ಚಿಕೊಂಡು ಜೋರಾಗಿ ಕೂಗಿದರು. ಅವರು ಸ್ತೆಫನನು ಪಟ್ಟಣದಿಂದ ಹೊರಕ್ಕೆ ಎಳೆದುಕೊಂಡು ಹೋಗಿ ಅವನನ್ನು ಕೊಲ್ಲುವುದಕ್ಕಾಗಿ ಅವನ ಮೇಲೆ ಕಲ್ಲೆಸೆದರು.
![OBS Image](https://cdn.door43.org/obs/jpg/360px/obs-en-45-05.jpg)
ಸ್ತೆಫನನು ಸಾಯುತ್ತಿರುವಾಗ, "ಯೇಸುವೇ, ನನ್ನಾತ್ಮವನ್ನು ಸೇರಿಸಿಕೋ" ಎಂದು ಕೂಗಿದನು. ಆಗ ಅವನು ಮೊಣಕಾಲೂರಿ, "ಕರ್ತನೇ, ಈ ಪಾಪವನ್ನು ಅವರ ಮೇಲೆ ಹೊರಿಸಬೇಡ”" ಎಂದು ಮತ್ತೊಮ್ಮೆ ಕೂಗಿದನು. ಅನಂತರ ಅವನು ಸತ್ತನು.
![OBS Image](https://cdn.door43.org/obs/jpg/360px/obs-en-45-06.jpg)
ಆ ದಿನದಲ್ಲಿ, ಬಹಳ ಜನರು ಯೆರೂಸಲೇಮಿನಲ್ಲಿ ಯೇಸುವಿನ ಶಿಷ್ಯರನ್ನು ಹಿಂಸಿಸಲು ಪ್ರಾರಂಭಿಸಿದರು, ಆದ್ದರಿಂದ ವಿಶ್ವಾಸಿಗಳು ಬೇರೆ ಸ್ಥಳಗಳಿಗೆ ಓಡಿಹೋದರು. ಆದರೆ ಈ ನಡುವೆಯೂ, ಅವರು ಹೋದಲ್ಲೆಲ್ಲಾ ಯೇಸುವಿನ ಬಗ್ಗೆ ಸಾರಿದರು.
![OBS Image](https://cdn.door43.org/obs/jpg/360px/obs-en-45-07.jpg)
ಯೇಸುವನ್ನು ನಂಬಿದ್ದ ಫಿಲಿಪ್ಪನೆಂಬ ಒಬ್ಬ ವಿಶ್ವಾಸಿಯಿದ್ದನು. ಬಹುತೇಕ ಇತರ ಎಲ್ಲಾ ವಿಶ್ವಾಸಿಗಳು ಮಾಡಿದಂತೆಯೇ ಇವನು ಸಹ ಯೆರೂಸಲೇಮಿನಿಂದ ತಪ್ಪಿಸಿಕೊಂಡು . ಸಮಾರ್ಯದ ಸೀಮೆಗೆ ಹೋದನು. ಅಲ್ಲಿ ಅವನು ಯೇಸುವಿನ ಬಗ್ಗೆ ಜನರಿಗೆ ಸಾರಿದನು. ಅನೇಕ ಜನರು ಆತನನ್ನು ನಂಬಿ ರಕ್ಷಣೆಹೊಂದಿದರು. ಒಂದು ದಿನ, ದೇವರ ಬಳಿಯಿಂದ ಒಬ್ಬ ದೇವದೂತನು ಫಿಲಿಪ್ಪನ ಬಳಿಗೆ ಬಂದು, ಅಡವಿಗೆ ಹೋಗಬೇಕು ಮತ್ತು ಅಲ್ಲಿರುವ ಒಂದು ದಾರಿಯಲ್ಲಿ ನಡೆದುಕೊಂಡು ಹೋಗಬೇಕೆಂದು ಅವನಿಗೆ ಹೇಳಿದನು. ಫಿಲಿಪ್ಪನು ಅಲ್ಲಿಗೆ ಹೋದನು. ಅವರು ದಾರಿಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ, ತನ್ನ ರಥದಲ್ಲಿ ಪ್ರಯಾಣ ಮಾಡುತ್ತಿದ್ದ ಒಬ್ಬ ಮನುಷ್ಯನನ್ನು ನೋಡಿದನು. ಈ ಮನುಷ್ಯನು ಇಥಿಯೋಪ್ಯದ ಪ್ರಮುಖ ಅಧಿಕಾರಿಯಾಗಿದ್ದನು. ಪವಿತ್ರಾತ್ಮನು ಫಿಲಿಪ್ಪನಿಗೆ ಈ ಮನುಷ್ಯನ ಬಳಿಗೆ ಹೋಗಿ ಮಾತನಾಡು ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-45-08.jpg)
ಆದ್ದರಿಂದ ಫಿಲಿಪ್ಪನು ರಥದ ಬಳಿಗೆ ಹೋದನು. ಇಥಿಯೋಪ್ಯದವನು ದೇವರ ವಾಕ್ಯವನ್ನು ಓದುತ್ತಿರುವುದನ್ನು ಅವನು ಕೇಳಿಸಿಕೊಂಡನು. ಪ್ರವಾದಿಯಾದ ಯೆಶಾಯನು ಬರೆದಿರುವಂಥದ್ದನ್ನು ಅವನು ಓದುತ್ತಿದ್ದನು. ಆ ಮನುಷ್ಯನು ಓದುತ್ತಿದ್ದದು ಏನೆಂದರೆ, “ವಧಿಸುವಸ್ಥಾನಕ್ಕೆ ಒಯ್ಯಲ್ಪಡುವ ಕುರಿಮರಿಯಂತೆ ಅವರು ಆತನು ಒಯ್ಯದರು, ಕುರಿಮರಿಯು ಮೌನವಾಗಿರುವಂತೆಯೇ, ಆತನು ಸಹ ಒಂದು ಮಾತನ್ನು ಆಡಲಿಲ್ಲ. ಅವರು ಆತನಿಗೆ ಅನ್ಯಾಯವನ್ನು ಮಾಡಿದರು ಮತ್ತು ಆತನನ್ನು ಗೌರವಿಸಲಿಲ್ಲ. ಅವರು ಆತನ ಪ್ರಾಣವನ್ನು ತೆಗೆದುಬಿಟ್ಟರು."
![OBS Image](https://cdn.door43.org/obs/jpg/360px/obs-en-45-09.jpg)
ಫಿಲಿಪ್ಪನು ಇಥಿಯೋಪ್ಯದವನಿಗೆ, "ನೀನು ಓದುತ್ತಿರುವುದು ನಿನಗೆ ಅರ್ಥವಾಗುತ್ತಿದೆಯೋ?" ಎಂದು ಕೇಳಿದನು. ಇಥಿಯೋಪ್ಯದವನು, "ಇಲ್ಲ, ಯಾರಾದರೂ ನನಗೆ ಅರ್ಥ ತಿಳಿಸಿಕೊಡದ ಹೊರತು ಅದು ನನಗೆ ಅರ್ಥವಾಗುವುದಿಲ್ಲ. ದಯವಿಟ್ಟು ನನ್ನ ಬಳಿಯಲ್ಲಿ ಬಂದು ಕುಳಿತುಕೋ. ಯೆಶಾಯನು ಯಾರ ಕುರಿತು ಬರೆದಿದ್ದಾನೆ, ತನ್ನ ಕುರಿತೋ ಅಥವಾ ಮತ್ತೊಬ್ಬನ ಕುರಿತೋ?” ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-45-10.jpg)
ಫಿಲಿಪ್ಪನು ರಥವನ್ನೇರಿ ಕುಳಿತುಕೊಂಡನು. ಆಗ ಅವನು ಇಥಿಯೋಪ್ಯದ ಮನುಷ್ಯನಿಗೆ ಯೆಶಾಯನು ಯೇಸುವಿನ ಬಗ್ಗೆ ಬರೆದಿದ್ದಾನೆ ಎಂದು ಹೇಳಿದನು. ಫಿಲಿಪ್ಪನು ದೇವರ ವಾಕ್ಯದ ಇತರ ಭಾಗಗಳ ಕುರಿತಾಗಿಯೂ ಸಹ ಮಾತನಾಡಿದನು. ಈ ರೀತಿಯಾಗಿ, ಅವನು ಆ ಮನುಷ್ಯನಿಗೆ ಯೇಸುವಿನ ಸುವಾರ್ತೆಯನ್ನು ಹೇಳಿದನು.
![OBS Image](https://cdn.door43.org/obs/jpg/360px/obs-en-45-11.jpg)
ಫಿಲಿಪ್ಪನು ಮತ್ತು ಇಥಿಯೋಪ್ಯದವನು ಪ್ರಯಾಣ ಮಾಡಿಕೊಂಡು ಬರುತ್ತಿರುವಾಗ, ಅವರು ನೀರಿರುವ ಜಾಗಕ್ಕೆ ಬಂದರು. ಇಥಿಯೋಪ್ಯದವನು, "ಆಗೋ! ಇಲ್ಲಿ ನೀರಿದೆ ನನಗೆ ದೀಕ್ಷಾಸ್ನಾನ ಮಾಡಿಸಬಹುದೇ?" ಎಂದು ಕೇಳಿದನು. ಅವನು ಸಾರಥಿಗೆ ರಥವನ್ನು ನಿಲ್ಲಿಸಲು ಹೇಳಿದನು.
![OBS Image](https://cdn.door43.org/obs/jpg/360px/obs-en-45-12.jpg)
ಅವರು ನೀರಿನೊಳಗೆ ಇಳಿದರು ಮತ್ತು ಫಿಲಿಪ್ಪನು ಇಥಿಯೋಪ್ಯದವನಿಗೆ ದೀಕ್ಷಾಸ್ನಾನ ಮಾಡಿಸಿದನು. ಅವರು ನೀರನ್ನು ಬಿಟ್ಟು ಮೇಲಕ್ಕೆ ಬಂದ ನಂತರ, ತಕ್ಷಣವೇ ಪವಿತ್ರಾತ್ಮನು ಫಿಲಿಪ್ಪನನ್ನು ಇನ್ನೊಂದು ಸ್ಥಳಕ್ಕೆ ಎತ್ತಿಕೊಂಡು ಹೋದನು. ಅಲ್ಲಿ ಫಿಲಿಪ್ಪನು ಯೇಸುವಿನ ಕುರಿತು ಜನರಿಗೆ ಹೇಳುವುದನ್ನು ಮುಂದುವರಿಸಿದನು.
![OBS Image](https://cdn.door43.org/obs/jpg/360px/obs-en-45-13.jpg)
ಇಥಿಯೋಪ್ಯದವನು ತನ್ನ ಮನೆಯ ಕಡೆಗೆ ಹೋಗಲು ಪ್ರಯಾಣವನ್ನು ಮುಂದುವರಿಸಿದನು. ಅವನು ಯೇಸುವನ್ನು ತಿಳಿದುಕೊಂಡಿದ್ದರಿಂದ ಅವನು ಸಂತೋಷವುಳ್ಳವನಾದನು.
_ಸತ್ಯವೇದದ ಕಥೆ: ಅಪೊಸ್ತಲರ ಕೃತ್ಯಗಳು 6:8-8:5; 8:26-40_

44
content/46.md Normal file
View File

@ -0,0 +1,44 @@
# 46. ಪೌಲನು ಕ್ರೈಸ್ತನಾದದ್ದು
![OBS Image](https://cdn.door43.org/obs/jpg/360px/obs-en-46-01.jpg)
ಯೇಸುವನ್ನು ನಂಬದಂಥ ಸೌಲನೆಂಬ ಒಬ್ಬ ಮನುಷ್ಯನಿದ್ದನು. ಅವನು ಯುವಕನಾಗಿದ್ದಾಗ ಸ್ತೆಫನನನ್ನು ಕೊಂದ ಜನರ ಬಟ್ಟೆಗಳನ್ನು ಕಾದಿದ್ದನು. ತರುವಾಯ ಅವನು ವಿಶ್ವಾಸಿಗಳನ್ನು ಹಿಂಸಿಸಿದನು. ಅವನು ಯೆರೂಸಲೇಮಿನಲ್ಲಿ ಮನೆಮನೆಗಳಿಗೆ ಹೋಗಿ ಗಂಡಸರನ್ನೂ ಹೆಂಗಸರನ್ನೂ ಬಂಧಿಸಿ ಸೆರೆಮನೆಗೆ ಹಾಕಿಸಿದನು. ಆಗ ಮಹಾಯಾಜಕನು ಸೌಲನಿಗೆ ದಮಸ್ಕ ಪಟ್ಟಣಕ್ಕೆ ಹೋಗಲು ಅನುಮತಿ ನೀಡಿದನು. ಅಲ್ಲಿರುವ ಕ್ರೈಸ್ತರನ್ನು ಬಂಧಿಸಿ ಯೆರೂಸಲೇಮಿಗೆ ಕರೆತರುವಂತೆ ಅವನು ಸೌಲನಿಗೆ ಹೇಳಿದನು.
![OBS Image](https://cdn.door43.org/obs/jpg/360px/obs-en-46-02.jpg)
ಆದ್ದರಿಂದ ಸೌಲನು ದಮಸ್ಕಕ್ಕೆ ಪ್ರಯಾಣ ಮಾಡಲಾರಂಭಿಸಿದನು. ಅವನು ಪಟ್ಟಣವನ್ನು ತಲುಪುವುದಕ್ಕಿಂತ ಮೊದಲು ಆಕಾಶದಿಂದ ಒಂದು ಬೆಳಕು ಅವನ ಸುತ್ತಲು ಮಿಂಚಿತು ಮತ್ತು ಅವನು ನೆಲಕ್ಕೆ ಬಿದ್ದನು. ಆಗ “ಸೌಲನೇ, ಸೌಲನೇ, ನೀನು ನನ್ನನ್ನು ಯಾಕೆ ಹಿಂಸೆಪಡಿಸುತ್ತೀ?” ಎಂದು ಯಾರೋ ಹೇಳುವುದನ್ನು ಸೌಲನು ಕೇಳಿಸಿಕೊಂಡನು. ಸೌಲನು, "ಕರ್ತನೇ, ನೀನಾರು?" ಎಂದು ಕೇಳಿದನು. ಯೇಸು ಅವನಿಗೆ, "ನೀನು ಹಿಂಸೆಪಡಿಸುತ್ತಿರುವ ಯೇಸುವೇ ನಾನು!" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-46-03.jpg)
ಸೌಲನು ಮೇಲೆದ್ದು ಬಂದಾಗ ಅವನಿಗೆ ಕಣ್ಣು ಕಾಣಲಿಲ್ಲ. ಅವನ ಸ್ನೇಹಿತರು ಅವನನ್ನು ದಮಸ್ಕಕ್ಕೆ ಕರೆದುಕೊಂಡು ಹೋದರು. ಮೂರು ದಿನಗಳ ಕಾಲ ಸೌಲನು ಏನೂ ತಿನ್ನಲಿಲ್ಲ ಅಥವಾ ಏನೂ ಕುಡಿಯಲಿಲ್ಲ.
![OBS Image](https://cdn.door43.org/obs/jpg/360px/obs-en-46-04.jpg)
ದಮಸ್ಕದಲ್ಲಿ ಅನನೀಯನೆಂಬ ಒಬ್ಬ ಶಿಷ್ಯನಿದ್ದನು. ದೇವರು ಅವನಿಗೆ, "ಸೌಲನು ತಂಗಿರುವ ಮನೆಗೆ ಹೋಗು, ಅವನ ಕಣ್ಣು ಪುನಃ ಕಾಣುವಂತೆ ಅವನ ಮೇಲೆ ನಿನ್ನ ಕೈಯನ್ನಿಡು " ಎಂದು ಹೇಳಿದನು. ಆದರೆ ಅನನೀಯನು, "ಕರ್ತನೇ, ಆ ಮನುಷ್ಯನು ವಿಶ್ವಾಸಿಗಳನ್ನು ಹೇಗೆ ಹಿಂಸಿಸಿದ್ದಾನೆಂದು ನಾನು ಕೇಳಿದ್ದೇನೆ" ಎಂದು ಹೇಳಿದನು. ದೇವರು ಅವನಿಗೆ, "ನೀನು ಹೋಗು! ನನ್ನ ಹೆಸರನ್ನು ಯೆಹೂದ್ಯರಿಗೂ ಮತ್ತು ಇತರ ಜನಾಂಗಗಳಿಗೂ ಪ್ರಕಟಿಸುವುದಕ್ಕಾಗಿ ಆ ಮನುಷ್ಯನನ್ನು ನಾನು ಆರಿಸಿಕೊಂಡಿದ್ದೇನೆ. ಅವನು ನನ್ನ ಹೆಸರಿನ ನಿಮಿತ್ತ ಬಹಳ ಹಿಂಸೆಯನ್ನು ಅನುಭವಿಸುವನು" ಎಂದು ಉತ್ತರಕೊಟ್ಟನು.
![OBS Image](https://cdn.door43.org/obs/jpg/360px/obs-en-46-05.jpg)
ಅನನೀಯನು ಸೌಲನ ಬಳಿಗೆ ಹೋಗಿ ಅವನ ಮೇಲೆ ತನ್ನ ಕೈಗಳನ್ನು ಇಟ್ಟು, “ನೀನು ಇಲ್ಲಿಗೆ ಬಂದ ದಾರಿಯಲ್ಲಿ ನಿನಗೆ ಕಾಣಿಸಿಕೊಂಡ ಯೇಸು ನಿನಗೆ ಪುನಃ ಕಣ್ಣು ಕಾಣುವಂತೆಯೂ, ನೀನು ಪವಿತ್ರಾತ್ಮಭರಿತನಾಗುವಂತೆಯೂ ನನ್ನನ್ನು ನಿನ್ನ ಬಳಿಗೆ ಕಳುಹಿಸಿದ್ದಾನೆ” ಎಂದು ಹೇಳಿದನು. ತಕ್ಷಣವೇ ಸೌಲನಿಗೆ ಪುನಃ ಕಣ್ಣು ಕಾಣಿಸಿದವು ಮತ್ತು ಅನನೀಯನು ಅವನಿಗೆ ದೀಕ್ಷಾಸ್ನಾನ ಮಾಡಿಸಿದನು. ತರುವಾಯ ಸೌಲನು ಊಟಮಾಡಿ ಬಲಹೊಂದಿದನು.
![OBS Image](https://cdn.door43.org/obs/jpg/360px/obs-en-46-06.jpg)
ಕೂಡಲೇ, ಸೌಲನು ದಮಸ್ಕದಲ್ಲಿದ್ದ ಯೆಹೂದ್ಯರಿಗೆ "ಯೇಸು ದೇವರ ಮಗನು!" ಎಂದು ಸಾರಲು ಪ್ರಾರಂಭಮಾಡಿದನು. ಸೌಲನು ವಿಶ್ವಾಸಿಗಳನ್ನು ಕೊಲ್ಲಲು ಪ್ರಯತ್ನಿಸುವವನಾಗಿದ್ದು ಈಗ ಅವನು ಯೇಸುವನ್ನು ನಂಬಿದವನಾಗಿದ್ದಾನೆ ಎಂದು ಯೆಹೂದ್ಯರು ತಿಳಿದು ಬೆರಗಾದರು! ಸೌಲನು ಯೆಹೂದ್ಯರೊಂದಿಗೆ ವಾದಿಸಿದನು. ಯೇಸುವೇ ಮೆಸ್ಸೀಯನೆಂದು ಅವನು ರುಜುವಾತುಪಡಿಸಿದನು.
![OBS Image](https://cdn.door43.org/obs/jpg/360px/obs-en-46-07.jpg)
ಅನೇಕ ದಿನಗಳಾದ ನಂತರ, ಯೆಹೂದ್ಯರು ಸೌಲನನ್ನು ಕೊಲ್ಲಲು ಒಳಸಂಚು ಮಾಡಿದರು. ಅವರು ಅವನನ್ನು ಕೊಲ್ಲುವುದಕ್ಕಾಗಿ ಪಟ್ಟಣದ ದ್ವಾರಗಳಲ್ಲಿ ಅವನಿಗಾಗಿ ಕಾಯುವುದಕ್ಕೆ ಜನರನ್ನು ಕಳುಹಿಸಿದರು. ಆದರೆ ಸೌಲನಿಗೆ ಆ ಗೂಢಾಲೋಚನೆಯು ತಿಳಿದುಬಂದಿತು ಮತ್ತು ಅವನ ಸ್ನೇಹಿತರು ತಪ್ಪಿಸಿಕೊಳ್ಳಲು ಅವನಿಗೆ ಸಹಾಯ ಮಾಡಿದರು. ಒಂದು ರಾತ್ರಿಯಲ್ಲಿ ಅವರು ಅವನನ್ನು ಪುಟ್ಟಿಯಲ್ಲಿ ಕೂರಿಸಿ ಗೋಡೆಯ ಮೇಲಿಂದ ಕೆಳಕ್ಕೆ ಇಳಿಸಿದರು. ಸೌಲನು ದಮಸ್ಕದಿಂದ ತಪ್ಪಿಸಿಕೊಂಡು ಹೋದ ನಂತರ, ಅವನು ಯೇಸುವಿನ ಬಗ್ಗೆ ಸಾರುವುದನ್ನು ಮುಂದುವರಿಸಿದನು.
![OBS Image](https://cdn.door43.org/obs/jpg/360px/obs-en-46-08.jpg)
ಸೌಲನು ಅಪೊಸ್ತಲರನ್ನು ಭೇಟಿಯಾಗಲು ಯೆರೂಸಲೇಮಿಗೆ ಹೋದನು, ಆದರೆ ಅವರು ಅವನಿಗೆ ಭಯಪಟ್ಟರು. ಅನಂತರ ಬಾರ್ನಬನೆಂಬ ವಿಶ್ವಾಸಿಯು ಸೌಲನನ್ನು ಅಪೊಸ್ತಲರ ಬಳಿಗೆ ಕರೆದುಕೊಂಡು ಹೋದನು. ಸೌಲನು ದಮಸ್ಕದಲ್ಲಿ ಧೈರ್ಯದಿಂದ ಪ್ರಚಾರ ಮಾಡಿದ್ದನ್ನು ಅವನು ಅವರಿಗೆ ಹೇಳಿದನು. ಇದಾದ ನಂತರ, ಅಪೊಸ್ತಲರು ಸೌಲನನ್ನು ಅಂಗೀಕರಿಸಿಕೊಂಡರು.
![OBS Image](https://cdn.door43.org/obs/jpg/360px/obs-en-46-09.jpg)
ಯೆರೂಸಲೇಮಿನಲ್ಲಿ ಉಂಟಾದ ಹಿಂಸೆಯ ನಿಮಿತ್ತ ಓಡಿಹೋದ ಕೆಲವು ಮಂದಿ ವಿಶ್ವಾಸಿಗಳು ಅಂತಿಯೋಕ್ಯ ಪಟ್ಟಣದವರೆಗೂ ಹೋದರು ಮತ್ತು ಯೇಸುವಿನ ಬಗ್ಗೆ ಸಾರಿದರು. ಅಂತಿಯೋಕ್ಯದಲ್ಲಿದ್ದ ಅಧಿಕ ಜನರು ಯೆಹೂದ್ಯರಾಗಿರಲಿಲ್ಲ, ಆದರೆ ಮೊದಲ ಬಾರಿಗೆ, ಅವರಲ್ಲಿ ಅನೇಕರು ಸಹ ವಿಶ್ವಾಸಿಗಳಾದರು. ಈ ಹೊಸ ವಿಶ್ವಾಸಿಗಳಿಗೆ ಯೇಸುವಿನ ಬಗ್ಗೆ ಬೋಧಿಸಲು ಮತ್ತು ಸಭೆಯನ್ನು ಬಲಪಡಿಸಲು ಬಾರ್ನಬನು ಮತ್ತು ಸೌಲನು ಅಲ್ಲಿಗೆ ಹೋದರು. ಅಂತಿಯೋಕ್ಯದಲ್ಲಿಯೇ ಯೇಸುವಿನಲ್ಲಿ ನಂಬಿಕೆಯಿಟ್ಟಿರುವ ವಿಶ್ವಾಸಿಗಳನ್ನು ಪ್ರಥಮಬಾರಿಗೆ "ಕ್ರೈಸ್ತರು" ಎಂದು ಕರೆಯಲಾಯಿತು.
![OBS Image](https://cdn.door43.org/obs/jpg/360px/obs-en-46-10.jpg)
ಒಂದು ದಿನ ಅಂತಿಯೋಕ್ಯದಲ್ಲಿರುವ ಕ್ರೈಸ್ತರು ಉಪವಾಸವಿದ್ದು ಪ್ರಾರ್ಥಿಸುತ್ತಿದ್ದರು. ಪವಿತ್ರಾತ್ಮನು ಅವರಿಗೆ, "ನಾನು ಬಾರ್ನಬ ಮತ್ತು ಸೌಲರನ್ನು ಕರೆದ ಸೇವೆಗಾಗಿ ಅವರನ್ನು ಪ್ರತ್ಯೇಕಿಸಿರಿ" ಎಂದು ಹೇಳಿದನು. ಆದ್ದರಿಂದ ಅಂತಿಯೋಕ್ಯದಲ್ಲಿರುವ ಸಭೆಯವರು ಬಾರ್ನಬನಿಗಾಗಿ ಮತ್ತು ಸೌಲನಿಗಾಗಿ ಪ್ರಾರ್ಥಿಸಿದರು ಮತ್ತು ಅವರ ಮೇಲೆ ಕೈಗಳನ್ನು ಇಟ್ಟರು. ಅನಂತರ ಯೇಸುವಿನ ಸುವಾರ್ತೆಯನ್ನು ಇತರ ಅನೇಕ ಸ್ಥಳಗಳಲ್ಲಿ ಸಾರಲು ಅವರನ್ನು ಕಳುಹಿಸಿಕೊಟ್ಟರು. ಬಾರ್ನಬ ಮತ್ತು ಸೌಲರು ವಿವಿಧ ಜನರ ಗುಂಪುಗಳಿಗೆ ಬೋಧಿಸಿದರು, ಮತ್ತು ಅನೇಕ ಜನರು ಯೇಸುವನ್ನು ನಂಬಿದರು.
_ಸತ್ಯವೇದದ ಕಥೆ: ಅಪೊಸ್ತಲರ ಕೃತ್ಯಗಳು 8:3; 9:1-31; 11:19-26; 13:1-3_

60
content/47.md Normal file
View File

@ -0,0 +1,60 @@
# 47. ಫಿಲಿಪ್ಪಿ ಪಟ್ಟಣದಲ್ಲಿ ಪೌಲನು ಮತ್ತು ಸೀಲನು
![OBS Image](https://cdn.door43.org/obs/jpg/360px/obs-en-47-01.jpg)
ಸೌಲನು ರೋಮನ್ ಸಾಮ್ರಾಜ್ಯದಾದ್ಯಂತ ಪ್ರಯಾಣ ಮಾಡುವಾಗ, ಅವನು "ಪೌಲ್" ಎಂಬ ತನ್ನ ರೋಮನ್ ಹೆಸರನ್ನು ಬಳಸಲಾರಂಭಿಸಿದನು. ಒಂದು ದಿನ, ಪೌಲ ಮತ್ತು ಅವನ ಸ್ನೇಹಿತನಾದ ಸೀಲನು ಯೇಸುವಿನ ಸುವಾರ್ತೆಯನ್ನು ಸಾರಲು ಫಿಲಿಪ್ಪಿಯ ಪಟ್ಟಣಕ್ಕೆ ಹೋದರು. ಪಟ್ಟಣದ ಹೊರಗಿರುವ ನದೀತೀರದ ಸ್ಥಳಕ್ಕೆ ಅವರು ಹೋದರು, ಜನರು ಪ್ರಾರ್ಥಿಸುವುದಕ್ಕಾಗಿ ಅಲ್ಲಿ ಕೂಡಿಬರುತ್ತಿದ್ದರು. ಅಲ್ಲಿ ಅವರು ವರ್ತಕಳಾಗಿದ್ದ ಲುದ್ಯಳೆಂಬ ಸ್ತ್ರೀಯನ್ನು ಭೇಟಿಯಾದರು. ಅವಳು ದೇವರನ್ನು ಪ್ರೀತಿಸಿಸುವವಳು ಆರಾಧಿಸುವವಳು ಆಗಿದ್ದಳು.
![OBS Image](https://cdn.door43.org/obs/jpg/360px/obs-en-47-02.jpg)
ಯೇಸುವಿನ ಕುರಿತಾದ ಸಂದೇಶವನ್ನು ನಂಬುವಂತೆ ದೇವರು ಲುದ್ಯಳನ್ನು ಶಕ್ತಗೊಳಿಸಿದನು. ಪೌಲ ಸೀಲರು ಅವಳನ್ನು ಮತ್ತು ಅವಳ ಕುಟುಂಬದವರನ್ನು ದೀಕ್ಷಾಸ್ನಾನ ಮಾಡಿಸಿದರು. ಅವಳು ಪೌಲ ಸೀಲರನ್ನು ತನ್ನ ಮನೆಗೆ ಬಂದು ಉಳಿದುಕೊಳ್ಳುವಂತೆ ಆಹ್ವಾನಿಸಿದಳು, ಆದ್ದರಿಂದ ಅವರು ಅಲ್ಲಿ ಉಳಿದುಕೊಂಡರು.
![OBS Image](https://cdn.door43.org/obs/jpg/360px/obs-en-47-03.jpg)
ಯೆಹೂದ್ಯರು ಪ್ರಾರ್ಥಿಸುತ್ತಿದ್ದ ಸ್ಥಳದಲ್ಲಿ ಪೌಲ ಸೀಲರು ಅನೇಕಸಾರಿ ಜನರನ್ನು ಸಂಧಿಸುತ್ತಿದ್ದರು. ಪ್ರತಿದಿನ ಅವರು ಅಲ್ಲಿಗೆ ನಡೆಡುಕೊಂಡು ಹೋಗುತ್ತಿರುವಾಗ, ದೆವ್ವ ಹಿಡಿದ್ದಿದ ದಾಸಿಯು ಅವರನ್ನು ಹಿಂಬಾಲಿಸುತ್ತಿದ್ದಳು. ಈ ದೆವ್ವದ ಮೂಲಕ ಅವಳು ಜನರಿಗೆ ಭವಿಷ್ಯದ ಬಗ್ಗೆ ಕಣಿ ಹೇಳುತ್ತಿದ್ದಳು, ಅವಳು ಕಣಿ ಹೇಳುವುದರಿಂದ ತನ್ನ ಯಜಮಾನರಿಗೆ ತುಂಬಾ ಹಣ ಸಂಪಾದಿಸಿಕೊಡುತ್ತಿದ್ದಳು.
![OBS Image](https://cdn.door43.org/obs/jpg/360px/obs-en-47-04.jpg)
ಅವರು ನಡೆದುಹೋಗುತ್ತಿರುವಾಗ ಆ ದಾಸಿಯು, "ಈ ಮನುಷ್ಯರು ಪರಾತ್ಪರನಾದ ದೇವರ ಸೇವಕರು. ಅವರು ನಿಮಗೆ ರಕ್ಷಣೆಯ ಮಾರ್ಗವನ್ನು ಸಾರುತ್ತಾರೆ!" ಎಂದು ಕೂಗುತ್ತಿದ್ದಳು. ಅವಳು ಪದೇಪದೇ ಹೀಗೆ ಮಾಡುತ್ತಿದ್ದುದರಿಂದ ಪೌಲನು ಬೇಸರಗೊಂಡನು.
![OBS Image](https://cdn.door43.org/obs/jpg/360px/obs-en-47-05.jpg)
ಅಂತಿಮವಾಗಿ, ಒಂದು ದಿನ ದಾಸಿಯು ಕೂಗಲು ಪ್ರಾರಂಭಿಸಿದಾಗ, ಪೌಲನು ಅವಳ ಕಡೆಗೆ ತಿರುಗಿಕೊಂಡು, ಅವಳಲ್ಲಿದ್ದ ದೆವ್ವಕ್ಕೆ, "ಯೇಸುವಿನ ನಾಮದಲ್ಲಿ ಇವಳನ್ನು ಬಿಟ್ಟು ಹೋಗು" ಎಂದು ಹೇಳಿದನು. ತಕ್ಷಣವೇ ದೆವ್ವವು ಅವಳನ್ನು ಬಿಟ್ಟುಹೋಯಿತು.
![OBS Image](https://cdn.door43.org/obs/jpg/360px/obs-en-47-06.jpg)
ದಾಸಿಯ ಯಜಮಾನರು ಬಹಳ ಕೋಪಗೊಂಡರು! ದೆವ್ವದ ಸಹಾಯವಿಲ್ಲದೆ ಜನರಿಗೆ ಭವಿಷ್ಯವನ್ನು ಹೇಳಲು ದಾಸಿಯಿಂದ ಆಗುವುದಿಲ್ಲ ಎಂದು ಅವರು ಅರಿತುಕೊಂಡರು. ಜನರಿಗೆ ಮುಂದೆ ಏನು ಸಂಭವಿಸಬಹುದು ಎಂದು ಹೇಳುವುದಕ್ಕೆ ಅವಳಿಗೆ ಸಾಧ್ಯವಾಗದೆ ಇರಬಹುದು ಮತ್ತು ಜನರು ಅವಳ ಯಜಮಾನರಿಗೆ ಹಣವನ್ನು ಕೊಡುವುದಿಲ್ಲ ಎಂಬುದು ಇದರ ಅರ್ಥವಾಗಿದೆ.
![OBS Image](https://cdn.door43.org/obs/jpg/360px/obs-en-47-07.jpg)
ಆದ್ದರಿಂದ ದಾಸಿಯ ಯಜಮಾನರು ಪೌಲ ಸೀಲರನ್ನು ರೋಮನ್ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋದರು. ಅವರು ಪೌಲ ಸೀಲರನ್ನು ಹೊಡೆದರು, ಅನಂತರ ಅವರನ್ನು ಸೆರೆಮನೆಗೆ ಹಾಕಿದರು.
![OBS Image](https://cdn.door43.org/obs/jpg/360px/obs-en-47-08.jpg)
ಅವರು ಪೌಲ ಸೀಲರನ್ನು ಹೆಚ್ಚು ಕಾವಲುಗಾರರಿದ್ದ ಸೆರೆಮನೆಯ ಭಾಗದಲ್ಲಿ ಹಾಕಿದರು. ಅವರು ಅವರ ಕಾಲುಗಳಿಗೆ ಮರದ ದೊಡ್ಡ ದಿಮ್ಮಿಗಳನ್ನು ಬಿಗಿದರು. ಆದರೆ ಮಧ್ಯರಾತ್ರಿಯಲ್ಲಿ ಪೌಲ ಸೀಲರು ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಿದ್ದರು.
![OBS Image](https://cdn.door43.org/obs/jpg/360px/obs-en-47-09.jpg)
ಇದ್ದಕ್ಕಿದ್ದಂತೆ ಭೀಕರವಾದ ಭೂಕಂಪ ಉಂಟಾಯಿತು! ಸೆರೆಮನೆಯ ಕದಗಳೆಲ್ಲಾ ತೆರೆದವು, ಕೈದಿಗಳೆಲ್ಲರ ಬೇಡಿಗಳು ಕಳಚಿಬಿದ್ದವು.
![OBS Image](https://cdn.door43.org/obs/jpg/360px/obs-en-47-10.jpg)
ಆಗ ಸೆರೆಮನೆಯ ಅಧಿಕಾರಿಗೆ ಎಚ್ಚರವಾಯಿತು. ಸೆರೆಮನೆಯ ಕದಗಳು ತೆರೆದಿರುವುದನ್ನು ಅವನು ಕಂಡನು. ಕೈದಿಗಳೆಲ್ಲರು ತಪ್ಪಿಸಿಕೊಂಡಿದ್ದಾರೆಂದು ಅವನು ಭಾವಿಸಿದನು. ಅವರನ್ನು ತಪ್ಪಿಸಿಕೊಂಡು ಹೋಗಲು ಬಿಟ್ಟಿದ್ದಕ್ಕಾಗಿ ರೋಮನ್ ಅಧಿಕಾರಿಗಳು ತನ್ನನ್ನು ಕೊಲ್ಲುತ್ತಾರೆ ಎಂದು ಅವನು ಭಯಪಟ್ಟು, ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು! ಆದರೆ ಪೌಲನು ಅವನನ್ನು ನೋಡಿ, "ನಿಲ್ಲಿಸು! ನೀನೇನೂ ಹಾನಿಮಾಡಿಕೊಳ್ಳಬೇಡ, ನಾವೆಲ್ಲಾ ಇಲ್ಲೇ ಇದ್ದೇವೆ" ಎಂದು ಕೂಗಿದರು.
![OBS Image](https://cdn.door43.org/obs/jpg/360px/obs-en-47-11.jpg)
ಸೆರೆಮನೆಯ ಅಧಿಕಾರಿಯು ನಡುಗುತ್ತಾ ಪೌಲ ಸೀಲರ ಮುಂದೆ ಬಂದು, "ರಕ್ಷಣೆಹೊಂದುವುದಕ್ಕೆ ನಾನೇನು ಮಾಡಬೇಕು?" ಎಂದು ಕೇಳಿದನು. ಪೌಲನು, "ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು" ಎಂದು ಹೇಳಿದನು. ಆಗ ಸೆರೆಮನೆಯ ಅಧಿಕಾರಿಯು ಪೌಲ ಸೀಲರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದನು. ಪೌಲನು ಅವನ ಮನೆಯಲ್ಲಿದ್ದವರೆಲ್ಲರಿಗೂ ಯೇಸುವಿನ ಸುವಾರ್ತೆಯನ್ನು ಸಾರಿದನು.
![OBS Image](https://cdn.door43.org/obs/jpg/360px/obs-en-47-12.jpg)
ಸೆರೆಮನೆಯ ಅಧಿಕಾರಿಯು ಮತ್ತು ಅವನ ಕುಟುಂಬದವರು ಯೇಸುವನ್ನು ನಂಬಿದರು, ಆದ್ದರಿಂದ ಪೌಲ ಸೀಲರು ಅವರಿಗೆ ದೀಕ್ಷಾಸ್ನಾನ ಮಾಡಿಸಿದರು. ಆಗ ಸೆರೆಮನೆಯ ಅಧಿಕಾರಿಯು ಪೌಲ ಸೀಲರಿಗೆ ಊಟ ಬಡಿಸಿದನು ಮತ್ತು ಅವರು ಒಟ್ಟಾಗಿ ಸಂತೋಷಿಸಿದರು.
![OBS Image](https://cdn.door43.org/obs/jpg/360px/obs-en-47-13.jpg)
ಮರುದಿನ ಪಟ್ಟಣದ ನಾಯಕರು ಪೌಲ ಸೀಲರನ್ನು ಸೆರೆಮನೆಯಿಂದ ಬಿಡುಗಡೆ ಮಾಡಿದರು ಮತ್ತು ಫಿಲಿಪ್ಪಿ ಪಟ್ಟಣವನ್ನು ಬಿಟ್ಟುಹೋಗಬೇಕೆಂದು ಅವರನ್ನು ಬೇಡಿಕೊಂಡರು. ಪೌಲ ಸೀಲರು ಲುದ್ಯಳನ್ನು ಮತ್ತು ಇನ್ನಿತರ ಸ್ನೇಹಿತರನ್ನು ಸಂಧಿಸಿದರು, ಅನಂತರ ಅವರು ಪಟ್ಟಣವನ್ನು ಬಿಟ್ಟು ಹೊರಟು ಹೋದರು. ಯೇಸುವಿನ ಸುವಾರ್ತೆಯು ಹರಡುತ್ತಲೇ ಇತ್ತು ಮತ್ತು ಸಭೆಯು ಬೆಳೆಯುತ್ತಲೇ ಇತ್ತು.
![OBS Image](https://cdn.door43.org/obs/jpg/360px/obs-en-47-14.jpg)
ಪೌಲನು ಮತ್ತು ಇತರ ಕ್ರೈಸ್ತ ನಾಯಕರು ಅನೇಕಾನೇಕ ಪಟ್ಟಣಗಳಿಗೆ ಪ್ರಯಾಣ ಮಾಡುತ್ತಿದ್ದರು. ಅವರು ಯೇಸುವಿನ ಸುವಾರ್ತೆಯನ್ನು ಜನರಿಗೆ ಸಾರಿದರು ಮತ್ತು ಬೋಧಿಸಿದರು. ಸಭೆಗಳಲ್ಲಿದ್ದ ವಿಶ್ವಾಸಿಗಳನ್ನು ಪ್ರೋತ್ಸಾಹಿಸಲು ಮತ್ತು ಅವರಿಗೆ ಬೋಧಿಸಲು ಅವರು ಅನೇಕ ಪತ್ರಿಕೆಗಳನ್ನು ಸಹ ಬರೆದರು. ಈ ಪತ್ರಿಕೆಗಳಲ್ಲಿ ಕೆಲವು ಸತ್ಯವೇದದ ಪುಸ್ತಕಗಳಾಗಿ ಮಾರ್ಪಟ್ಟವು.
_ಸತ್ಯವೇದದ ಕಥೆ: ಅಪೊಸ್ತಲರ ಕೃತ್ಯಗಳು 16:11-40_

60
content/48.md Normal file
View File

@ -0,0 +1,60 @@
# 48. ಯೇಸು ವಾಗ್ದತ್ತ ಮೆಸ್ಸೀಯನಾಗಿದ್ದಾನೆ
![OBS Image](https://cdn.door43.org/obs/jpg/360px/obs-en-48-01.jpg)
ದೇವರು ಲೋಕವನ್ನು ಸೃಷ್ಟಿಸಿದಾಗ, ಎಲ್ಲವೂ ಪರಿಪೂರ್ಣವಾಗಿತ್ತು. ಪಾಪವಿರಲಿಲ್ಲ. ಆದಾಮ ಹವ್ವರು ಒಬ್ಬರನ್ನೊಬ್ಬರು ಪರಸ್ಪರ ಪ್ರೀತಿಸುತ್ತಿದ್ದರು, ಮತ್ತು ಅವರು ಸಹ ದೇವರನ್ನು ಪ್ರೀತಿಸುತ್ತಿದ್ದರು. ಅಲ್ಲಿ ರೋಗವಾಗಲಿ ಅಥವಾ ಮರಣವಾಗಲಿ ಇರಲಿಲ್ಲ. ಲೋಕವು ಹೀಗಿರಬೇಕೆಂದು ದೇವರು ಬಯಸಿದ್ದನು.
![OBS Image](https://cdn.door43.org/obs/jpg/360px/obs-en-48-02.jpg)
ಸೈತಾನನು ತೋಟದಲ್ಲಿ ಹವ್ವಳ ಸಂಗಡ ಸರ್ಪದ ಮೂಲಕ ಮಾತನಾಡಿದನು, ಏಕೆಂದರೆ ಅವನು ಅವಳನ್ನು ಮೋಸಗೊಳಿಸಬೇಕೆಂದು ಬಯಸಿದನು. ಆಗ ಅವಳು ಮತ್ತು ಆದಾಮನು ದೇವರಿಗೆ ವಿರೋಧವಾಗಿ ಪಾಪಮಾಡಿದರು. ಅವರು ಪಾಪಮಾಡಿದ ಕಾರಣ ಭೂಮಿಯ ಮೇಲಿರುವ ಎಲ್ಲರು ಸಾಯುಬೇಕಾಯಿತು.
![OBS Image](https://cdn.door43.org/obs/jpg/360px/obs-en-48-03.jpg)
ಆದಾಮ ಹವ್ವರು ಪಾಪಮಾಡಿದ್ದರಿಂದ, ಇನ್ನೂ ಹೆಚ್ಚಿನ ಕೆಡುಕು ಸಂಭವಿಸಿತು. ಅವರು ದೇವರಿಗೆ ಶತ್ರುಗಳಾಗಿ ಮಾರ್ಪಟ್ಟರು. ಇದರ ಪರಿಣಾಮವಾಗಿ, ಅಂದಿನಿಂದ ಪ್ರತಿಯೊಬ್ಬ ವ್ಯಕ್ತಿಯು ಪಾಪ ಮಾಡಿದವನಾದನು. ಪ್ರತಿಯೊಬ್ಬ ವ್ಯಕ್ತಿಯು ಜನ್ಮತಃ ದೇವರಿಗೆ ಶತ್ರುವಾದನು . ಜನರು ಹಾಗೂ ದೇವರ ನಡುವೆ ಸಮಾಧಾನ ಇರಲಿಲ್ಲ. ಆದರೆ ದೇವರು ಸಮಾಧಾನವನ್ನುಂಟು ಮಾಡಲು ಬಯಸಿದನು.
![OBS Image](https://cdn.door43.org/obs/jpg/360px/obs-en-48-04.jpg)
ಹವ್ವಳ ಸಂತಾನದವರಲ್ಲಿ ಒಬ್ಬನು ಸೈತಾನನ ತಲೆಯನ್ನು ಜಜ್ಜುವನೆಂದು . ಸೈತಾನನು ಆತನ ಹಿಮ್ಮಡಿಯನ್ನು ಕಚ್ಚುವೆನೆಂದು ದೇವರು ವಾಗ್ದಾನ ಮಾಡಿದನು ಸ. ಬೇರೆ ರೀತಿಯಲ್ಲಿ ಹೇಳುವುದಾದರೆ, ಸೈತಾನನು ಮೆಸ್ಸೀಯನನ್ನು ಕೊಲ್ಲುವನು, ಆದರೆ ದೇವರು ಆತನನ್ನು ಬದುಕಿಸುವನು. ಅದಾದ ನಂತರ, ಮೆಸ್ಸೀಯನು ಸೈತಾನನ ಶಕ್ತಿಯನ್ನು ಶಾಶ್ವತವಾಗಿ ತೆಗೆದುಹಾಕುವನು. ಅನೇಕ ವರ್ಷಗಳ ನಂತರ, ಯೇಸುವೇ ಮೆಸ್ಸೀಯನು ಎಂದು ದೇವರು ತೋರಿಸಿದನು.
![OBS Image](https://cdn.door43.org/obs/jpg/360px/obs-en-48-05.jpg)
ದೇವರು ತಾನು ಕಳುಹಿಸಲಿದ್ದ ಜಲಪ್ರಳಯದಿಂದ ತನ್ನ ಕುಟುಂಬವನ್ನು ರಕ್ಷಿಸಿಕೊಳ್ಳಲು ಹಡಗನ್ನು ಕಟ್ಟಬೇಕೆಂದು ಆತನು ನೋಹನಿಗೆ ಹೇಳಿದನು. ಹೀಗೆ ದೇವರು ತನ್ನಲ್ಲಿ ನಂಬಿಕೆಯಿಟ್ಟಿದ ಜನರನ್ನು ರಕ್ಷಿಸಿದನು. ಅದೇ ರೀತಿಯಾಗಿ ದೇವರ ಸಂಹಾರಕ್ಕೆ ಅವರೆಲ್ಲರು ಯೋಗ್ಯರಾಗಿದ್ದರು ಏಕೆಂದರೆ ಅವರು ಪಾಪಮಾಡಿದ್ದರು. ಆದರೆ ತನ್ನಲ್ಲಿ ನಂಬಿಕೆಯಿಡುವ ಪ್ರತಿಯೊಬ್ಬನನ್ನು ರಕ್ಷಿಸಲು ದೇವರು ಯೇಸುವನ್ನು ಕಳುಹಿಸಿದನು.
![OBS Image](https://cdn.door43.org/obs/jpg/360px/obs-en-48-06.jpg)
ನಾನೂರು ವರ್ಷಗಳ ಕಾಲ ಯಾಜಕರು ದೇವರಿಗೆ ಯಜ್ಞವನ್ನು ಅರ್ಪಿಸುತ್ತಿದ್ದರು. ಅವರು ಪಾಪ ಮಾಡಿದ್ದಾರೆ ಎಂದು ಮತ್ತು ಅವರು ದೇವರ ಶಿಕ್ಷೆಗೆ ಅರ್ಹರಾಗಿದ್ದಾರೆ ಎಂದು ಇದು ಜನರಿಗೆ ತೋರಿಸುತ್ತದೆ. ಆದರೆ ಆ ಯಜ್ಞಗಳ ಅವರಿಗೆ ಪಾಪ ಕ್ಷಮಾಪಣೆ ದೊರಕಲ್ಲಿಲ್ಲ. ಯೇಸು ಶ್ರೇಷ್ಠನಾದ ಮಹಾಯಾಜಕನಾಗಿದ್ದು ಯಾಜಕರಿಂದ ಮಾಡಲಾಗದಂಥದ್ದನ್ನು ಆತನು ಮಾಡಿದನು. ಎಲ್ಲರ ಪಾಪವನ್ನು ನಿವಾರಿಸುವಂಥ ಏಕೈಕ ಯಜ್ಞವಾಗಿ ಆತನು ತನ್ನನ್ನು ತಾನು ಸಮರ್ಪಿಸಿಕೊಟ್ಟನು. ಅವರೆಲ್ಲರ ಪಾಪಗಳಿಗಾಗಿ ದೇವರು ತನ್ನನ್ನು ಶಿಕ್ಷಿಸಬೇಕೆಂಬುದನ್ನು ಆತನು ಅಂಗೀಕರಿಸಿಕೊಂಡನು. ಈ ಕಾರಣಕ್ಕಾಗಿಯೇ ಯೇಸು ಪರಿಪೂರ್ಣನಾದ ಮಹಾಯಾಜಕನಾಗಿದ್ದಾನೆ.
![OBS Image](https://cdn.door43.org/obs/jpg/360px/obs-en-48-07.jpg)
ದೇವರು ಅಬ್ರಹಾಮನಿಗೆ, "ನಾನು ನಿನ್ನ ಮೂಲಕ ಭೂಮಿಯಲ್ಲಿರುವ ಎಲ್ಲಾ ಜನಾಂಗಗಳನ್ನು ಆಶೀರ್ವದಿಸುವೆನು" ಎಂದು ಹೇಳಿದನು. ಯೇಸು ಈ ಅಬ್ರಹಾಮನ ಸಂತಾನದವನಾಗಿದ್ದನು. ದೇವರು ಅಬ್ರಹಾಮನ ಮೂಲಕ ಎಲ್ಲಾ ಜನಾಂಗಗಳನ್ನು ಆಶೀರ್ವದಿಸುತ್ತಾನೆ, ಏಕೆಂದರೆ ಯೇಸುವಿನಲ್ಲಿ ನಂಬಿಕೆ ಇಡುವ ಪ್ರತಿಯೊಬ್ಬರನ್ನು ದೇವರು ಪಾಪದಿಂದ ರಕ್ಷಿಸುತ್ತಾನೆ. ಈ ಜನರು ಯೇಸುವಿನಲ್ಲಿ ನಂಬಿಕೆಯಿಡುವಾಗ, ದೇವರು ಅವರನ್ನು ಅಬ್ರಹಾಮನ ಸಂತಾನದವರೆಂದು ಪರಿಗಣಿಸುತ್ತಾನೆ.
![OBS Image](https://cdn.door43.org/obs/jpg/360px/obs-en-48-08.jpg)
ದೇವರು ಅಬ್ರಹಾಮನಿಗೆ ಅವನ ಮಗನಾದ ಇಸಾಕನನ್ನು ತನಗೆ ಯಜ್ಞವಾಗಿ ಅರ್ಪಿಸಬೇಕೆಂದು ಹೇಳಿದನು. ಆದರೆ ದೇವರು ಇಸಾಕನಿಗೆ ಬದಲಾಗಿ ಯಜ್ಞಕ್ಕೋಸ್ಕರ ಒಂದು ಕುರಿಮರಿಯನ್ನು ಕೊಟ್ಟನು. ನಾವೆಲ್ಲರೂ ನಮ್ಮ ಪಾಪಗಳಿಗಾಗಿ ಸಾಯಲು ಅರ್ಹರಾಗಿದ್ದೇವು! ಆದರೆ ದೇವರು ನಮ್ಮ ಸ್ಥಾನದಲ್ಲಿ ಸಾಯಲು ಯೇಸುವನ್ನು ಯಜ್ಞವಾಗಿ ಕೊಟ್ಟನು. ಅದಕ್ಕಾಗಿಯೇ ನಾವು ಯೇಸುವನ್ನು ದೇವರ ಕುರಿಮರಿ ಎಂದು ಕರೆಯುತ್ತೇವೆ.
![OBS Image](https://cdn.door43.org/obs/jpg/360px/obs-en-48-09.jpg)
ದೇವರು ಈಜಿಪ್ಟಿನ ಮೇಲೆ ಕೊನೆಯ ಬಾಧೆಯನ್ನು ಬರಮಾಡಿದಾಗ, ಪ್ರತಿಯೊಂದು ಇಸ್ರಾಯೇಲ್ಯ ಕುಟುಂಬವು ಒಂದೊಂದು ಕುರಿಮರಿಯನ್ನು ಕೊಲ್ಲಬೇಕೆಂದು ಆತನು ಹೇಳಿದನು. ಆ ಕುರಿಮರಿಗೆ ಯಾವ ಕುಂದುಕೊರತೆಗಳು ಇರಬಾರದೆಂಬ ನಿಯಮವಿತ್ತು ಅನಂತರ ಅವರು ಅದರ ರಕ್ತವನ್ನು ಬಾಗಿಲಿನ ನಿಲವುಕಂಬಗಳಿಗೂ ಮತ್ತು ಮೇಲಿನಪಟ್ಟಿಗಳಿಗೂ ಹಚ್ಚಬೇಕಾಗಿತ್ತು. ದೇವರು ರಕ್ತವನ್ನು ನೋಡಿದಾಗ, ಆತನು ಅವರ ಮನೆಗಳನ್ನು ದಾಟಿಹೋದನು ಮತ್ತು ಅವರ ಚೊಚ್ಚಲ ಮಕ್ಕಳನ್ನು ಕೊಲ್ಲಲಿಲ್ಲ. ಈ ಆಚರಣೆಯನ್ನು ದೇವರು ಪಸ್ಕವೆಂದು ಕರೆದನು.
![OBS Image](https://cdn.door43.org/obs/jpg/360px/obs-en-48-10.jpg)
ಯೇಸು ಪಸ್ಕದ ಕುರಿಮರಿಯಂತಿರುವನು. ಆತನು ಎಂದೂ ಪಾಪ ಮಾಡಿರಲಿಲ್ಲ, ಆದ್ದರಿಂದ ಆತನಲ್ಲಿ ಯಾವ ತಪ್ಪು ಇರಲಿಲ್ಲ. ಆತನು ಪಸ್ಕ ಹಬ್ಬದ ಸಮಯದಲ್ಲಿ ಸತ್ತನು. ಒಬ್ಬನು ಯೇಸುವನ್ನು ನಂಬುವಾಗ, ಯೇಸುವಿನ ರಕ್ತವು ಆ ವ್ಯಕ್ತಿಯ ಪಾಪಕ್ಕಾಗಿ ಕ್ರಯವನ್ನು ಕಟ್ಟುತ್ತದೆ. ಇದು ದೇವರು ಆ ವ್ಯಕ್ತಿಯನ್ನು ದಾಟಿ ಹೋದಂತೆ ಇರುತ್ತದೆ, ಏಕೆಂದರೆ ಆತನು ಅವನನ್ನು ಶಿಕ್ಷಿಸುವುದಿಲ್ಲ.
![OBS Image](https://cdn.door43.org/obs/jpg/360px/obs-en-48-11.jpg)
ದೇವರು ಇಸ್ರಾಯೇಲ್ಯರೊಂದಿಗೆ ಒಡಂಬಡಿಕೆ ಮಾಡಿಕೊಂಡನು, ಯಾಕೆಂದರೆ ಆತನು ಅವರು ತನಗೆ ಸೇರಿದವರಾಗಿರಬೇಕೆಂದು ಆರಿಸಿಕೊಂಡ ಜನರಾಗಿದ್ದರು. ಆದರೆ ಈಗ ದೇವರು ಎಲ್ಲರಿಗೋಸ್ಕರವಾಗಿ ಹೊಸ ಒಡಂಬಡಿಕೆಯನ್ನು ಮಾಡಿದ್ದಾನೆ. ಯಾರೇ ಆಗಲಿ ಯಾವುದೇ ಜನಾಂಗದವನಾಗಲಿ ಈ ಹೊಸ ಒಡಂಬಡಿಕೆಯನ್ನು ಅಂಗೀಕರಿಸಿದರೆ, ಅವನು ದೇವರ ಜನರೊಂದಿಗೆ ಸೇರುತ್ತಾನೆ. ಅವನು ಯೇಸುವನ್ನು ನಂಬುವುದರಿಂದ ಆತನು ಇದನ್ನು ಮಾಡುತ್ತಾನೆ.
![OBS Image](https://cdn.door43.org/obs/jpg/360px/obs-en-48-12.jpg)
ಮೋಶೆಯು ದೇವರ ವಾಕ್ಯವನ್ನು ಮಹಾ ಶಕ್ತಿಯಿಂದ ಘೋಷಿಸಿದಂಥ ಪ್ರವಾದಿಯಾಗಿದ್ದಾನೆ. ಆದರೆ ಯೇಸು ಎಲ್ಲಾ ಪ್ರವಾದಿಗಳಿಗಿಂತಲೂ ಮಹಾ ಪ್ರವಾದಿಯಾಗಿದ್ದಾನೆ. ಆತನು ದೇವರಾಗಿದ್ದಾನೆ, ಆದ್ದರಿಂದ ಆತನು ಮಾಡಿದ್ದೆಲ್ಲವು ಮತ್ತು ಹೇಳಿದ್ದೆಲ್ಲವು ದೇವರ ಕ್ರಿಯೆಗಳು ಮತ್ತು ಮಾತುಗಳು ಆಗಿವೆ. ಆದ್ದರಿಂದಲೇ ಪವಿತ್ರಗ್ರಂಥವು ಯೇಸುವನ್ನು ದೇವರ ವಾಕ್ಯ ಎಂದು ಕರೆಯುತ್ತದೆ.
![OBS Image](https://cdn.door43.org/obs/jpg/360px/obs-en-48-13.jpg)
ದಾವೀದನ ಸಂತಾನದವರಲ್ಲಿ ಒಬ್ಬಾತನು ದೇವರ ಜನರ ಮೇಲೆ ಶಾಶ್ವತವಾಗಿ ಆಳುವನು ಎಂದು ದೇವರು ಆತನಿಗೆ ವಾಗ್ದಾನ ಮಾಡಿದ್ದನು. ಯೇಸು ದೇವರ ಮಗನು ಮತ್ತು ಮೆಸ್ಸೀಯನು ಆಗಿದ್ದಾನೆ, ಆದ್ದರಿಂದ ಆತನು ದಾವೀದನ ಸಂತಾನದವನಾಗಿದ್ದಾನೆ ಮತ್ತು ಆತನು ಶಾಶ್ವತವಾಗಿ ಆಳುತ್ತಾನೆ.
![OBS Image](https://cdn.door43.org/obs/jpg/360px/obs-en-48-14.jpg)
ದಾವೀದನು ಇಸ್ರಾಯೇಲರ ಅರಸನಾಗಿದ್ದನು, ಆದರೆ ಯೇಸು ಇಡೀ ವಿಶ್ವದ ಅರಸನಾಗಿದ್ದಾನೆ! ಆತನು ತಿರುಗಿ ಬಂದು ತನ್ನ ರಾಜ್ಯವನ್ನು ನೀತಿಯಿಂದಲೂ ಶಾಂತಿಯಿಂದಲೂ ಶಾಶ್ವತವಾಗಿ ಆಳುವನು.
_ಸತ್ಯವೇದದ ಕಥೆ: ಆದಿಕಾಂಡ 1-3, 6, 14, 22; ವಿಮೋಚನಕಾಂಡ 12, 20; 2 ಸಮುವೇಲ 7; ಇಬ್ರಿಯ 3:1-6, 4:14-5:10, 7:1-8:13, 9:11-10:18; ಪ್ರಕಟಣೆ 21_

76
content/49.md Normal file
View File

@ -0,0 +1,76 @@
# 49. ದೇವರ ಹೊಸ ಒಡಂಬಡಿಕೆ
![OBS Image](https://cdn.door43.org/obs/jpg/360px/obs-en-49-01.jpg)
ದೇವದೂತನು ಕನ್ಯೆಯಾದ ಮರಿಯಳಿಗೆ, ನೀನು ದೇವರ ಮಗನಿಗೆ ಜನ್ಮ ನೀಡುವಿ ಎಂದು ಹೇಳಿದನು. ಅವಳು ಇನ್ನೂ ಕನ್ನಿಕೆಯಾಗಿದ್ದಳು, ಆದರೆ ಪವಿತ್ರಾತ್ಮನು ಅವಳ ಮೇಲೆ ಇಳಿದು ಬಂದು ಅವಳು ಗರ್ಭಿಣಿಯಾಗುವಂತೆ ಮಾಡಿದನು. ಅವಳು ಗಂಡುಮಗುವಿಗೆ ಜನ್ಮ ನೀಡಿ ಆತನಿಗೆ ಯೇಸು ಎಂದು ಹೆಸರಿಟ್ಟಳು. ಆದ್ದರಿಂದ ಯೇಸು ದೇವರೂ ಮತ್ತು ಮನುಷ್ಯನೂ ಆಗಿದ್ದಾನೆ.
![OBS Image](https://cdn.door43.org/obs/jpg/360px/obs-en-49-02.jpg)
ಯೇಸು ತಾನು ದೇವರೆಂದು ತೋರ್ಪಡಿಸುವಂಥ ಅನೇಕ ಅದ್ಭುತಗಳನ್ನು ಮಾಡಿದನು. ಆತನು ನೀರಿನ ಮೇಲೆ ನಡೆದನು ಮತ್ತು ಬಿರುಗಾಳಿಯನ್ನು ನಿಲ್ಲಿಸಿದನು. ಆತನು ಅನೇಕ ರೋಗಿಗಳನ್ನು ಗುಣಪಡಿಸಿದನು ಮತ್ತು ಇತರ ಅನೇಕರಿಂದ ದೆವ್ವಗಳನ್ನು ಬಿಡಿಸಿದನು. ಆತನು ಸತ್ತವರನ್ನು ಬದುಕಿಸಿದನು ಮತ್ತು ಆತನು ಐದು ರೊಟ್ಟಿಯನ್ನೂ ಎರಡು ಸಣ್ಣ ಮೀನುಗಳನ್ನೂ 5,000 ಜನರಿಗೆ ಪೋಷಿಸಲು ಬೇಕಾದಷ್ಟು ಆಗುವಂತೆ ಮಾರ್ಪಡಿಸಿದನು.
![OBS Image](https://cdn.door43.org/obs/jpg/360px/obs-en-49-03.jpg)
ಯೇಸು ಶ್ರೇಷ್ಠ ಬೋಧಕನು ಸಹ ಆಗಿದ್ದನು. ಆತನು ಬೋಧಿಸಿದ್ದೆಲ್ಲವನ್ನು, ಆತನು ಸರಿಯಾಗಿಯೇ ಬೋಧಿಸಿದನು. ಆತನು ದೇವರ ಮಗನಾಗಿರುವುದ್ದರಿಂದ ಆತನು ಏನು ಮಾಡಬೇಕೆಂದು ಜನರಿಗೆ ಹೇಳಿದನ್ನೋ ಅದನ್ನು ಅವರು ಮಾಡಲೇಬೇಕು. ಉದಾಹರಣೆಗೆ, ನೀವು ನಿಮ್ಮನ್ನು ಪ್ರೀತಿಸಿಕೊಳ್ಳುವ ಹಾಗೆಯೇ ಇತರ ಜನರನ್ನು ಸಹ ಪ್ರೀತಿಸಬೇಕು ಎಂದು ಆತನು ಬೋಧಿಸಿದನು.
![OBS Image](https://cdn.door43.org/obs/jpg/360px/obs-en-49-04.jpg)
ನೀವು ನಿಮ್ಮ ಆಸ್ತಿಯನ್ನಾಗಲಿ, ಬೇರೆ ಯಾವುದನ್ನಾಗಲಿ ಪ್ರೀತಿಸುವುದಕ್ಕಿಂತ ಹೆಚ್ಚಾಗಿ ನೀವು ದೇವರನ್ನು ಪ್ರೀತಿಸಬೇಕು ಎಂದು ಆತನು ಬೋಧಿಸಿದನು.
![OBS Image](https://cdn.door43.org/obs/jpg/360px/obs-en-49-05.jpg)
ಈ ಲೋಕದಲ್ಲಿ ಬೇರೆ ಎಲ್ಲವನ್ನೂ ಗಳಿಸಿಕೊಳ್ಳುವುದಕ್ಕಿಂತ ದೇವರ ರಾಜ್ಯದಲ್ಲಿ ಇರುವುದು ಉತ್ತಮವೆಂದು ಸಹ ಯೇಸು ಹೇಳಿದನು. ನೀವು ಆತನ ರಾಜ್ಯವನ್ನು ಸೇರಬೇಕಾದರೆ ದೇವರು ತಾನೇ ನಿಮ್ಮನ್ನು ನಿಮ್ಮ ಪಾಪಗಳಿಂದ ರಕ್ಷಿಸಬೇಕು.
![OBS Image](https://cdn.door43.org/obs/jpg/360px/obs-en-49-06.jpg)
ಯೇಸು ಅವರಿಗೆ ಸ್ವಲ್ಪ ಜನರು ಮಾತ್ರವೇ ತನ್ನನ್ನು ಅಂಗೀಕರಿಸಿಕೊಳ್ಳುತ್ತಾರೆ ಇನ್ನು ಕೆಲವರು ಆತನನ್ನು ಅಂಗಿಕರಿಸುವುದಿಲ್ಲ , ಮತ್ತು ತನ್ನನ್ನು ಅಂಗಿಕರಿಸುವ ಜನರನ್ನು ದೇವರು ರಕ್ಷಿಸುತ್ತಾನೆ ಎಂದು ಹೇಳಿದನು. ಕೆಲವರು ಒಳ್ಳೆಯ ಮಣ್ಣಿನಂತೆ ಇದ್ದಾರೆ, ಏಕೆಂದರೆ ಅವರು ಯೇಸುವಿನ ಸುವಾರ್ತೆಯನ್ನು ಸ್ವೀಕರಿಸಿಕೊಳ್ಳುತ್ತಾರೆ ಮತ್ತು ದೇವರು ಅವರನ್ನು ರಕ್ಷಿಸುತ್ತಾನೆ ಎಂದು ಸಹ ಹೇಳಿದನು. ಆದರೆ ಇತರ ಜನರು ದಾರಿಯಲ್ಲಿರುವ ಗಡುಸಾದ ಮಣ್ಣಿನಂತೆ ಇದ್ದಾರೆ. ದೇವರ ವಾಕ್ಯವು ದಾರಿಯಲ್ಲಿ ಬೀಳುವ ಬೀಜದಂತೆ ಇದೆ, ಆದರೆ ಅಲ್ಲಿ ಏನೂ ಬೆಳೆಯುವುದಿಲ್ಲ. ಈ ಜನರು ಯೇಸುವಿನ ಕುರಿತಾದ ಸಂದೇಶವನ್ನು ತಿರಸ್ಕರಿಸುತ್ತಾರೆ. ಅವರು ಆತನ ರಾಜ್ಯದಲ್ಲಿ ಸೇರಲು ನಿರಾಕರಿಸುತ್ತಾರೆ.
![OBS Image](https://cdn.door43.org/obs/jpg/360px/obs-en-49-07.jpg)
ದೇವರು ಪಾಪಿಗಳನ್ನು ಹೆಚ್ಚಾಗಿ ಪ್ರೀತಿಸುತ್ತಾನೆ, ಆತನು ಅವರನ್ನು ಕ್ಷಮಿಸಲು ಮತ್ತು ಅವರನ್ನು ತನ್ನ ಮಕ್ಕಳನ್ನಾಗಿ ಮಾಡಿಕೊಳ್ಳಲು ಬಯಸುತ್ತಾನೆ ಎಂದು ಯೇಸು ಬೋಧಿಸಿದನು.
![OBS Image](https://cdn.door43.org/obs/jpg/360px/obs-en-49-08.jpg)
ದೇವರು ಪಾಪವನ್ನು ದ್ವೇಷಿಸುತ್ತಾನೆ ಎಂದು ಸಹ ಯೇಸು ನಮಗೆ ಹೇಳಿದನು. ಆದಾಮ ಹವ್ವರು ಪಾಪಮಾಡಿದ್ದರಿಂದ, ಅವರ ಸಂತತಿಯವರು ಸಹ ಪಾಪ ಮಾಡುತ್ತಾರೆ. ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯು ಪಾಪ ಮಾಡಿ ದೇವರಿಂದ ದೂರವಾಗಿದ್ದಾನೆ. ಎಲ್ಲರೂ ದೇವರಿಗೆ ಶತ್ರುಗಳಾಗಿದ್ದಾರೆ.
![OBS Image](https://cdn.door43.org/obs/jpg/360px/obs-en-49-09.jpg)
ದೇವರು ಲೋಕದಲ್ಲಿರುವ ಎಲ್ಲರನ್ನು ಎಷ್ಟಾಗಿ ಪ್ರೀತಿಸಿದನೆಂದರೆ : ಆತನು ತನ್ನ ಒಬ್ಬನೇ ಮಗನನ್ನು ಈ ಲೋಕಕ್ಕೆ ಕೊಟ್ಟನು, ಆದ್ದರಿಂದ ಆತನನ್ನು ನಂಬುವವರನ್ನು ದೇವರು ಶಿಕ್ಷಿಸುವುದಿಲ್ಲ. ಆದರೆ ಅವರು ಆತನೊಂದಿಗೆ ನಿತ್ಯವಾಗಿ ಜೀವಿಸುವರು.
![OBS Image](https://cdn.door43.org/obs/jpg/360px/obs-en-49-10.jpg)
ನೀವು ಪಾಪಮಾಡಿದ್ದರಿಂದ ನೀವು ಸಾಯುವುದಕ್ಕೆ ಅರ್ಹರಾಗಿದ್ದೀರಿ. ದೇವರು ನಿಮ್ಮ ಮೇಲೆ ಕೋಪಗೊಳ್ಳುವುದು ಸರಿಯೇ, ಆದರೆ ಆತನು ಅದಕ್ಕೆ ಬದಲಿಗೆ ಯೇಸುವಿನ ಮೇಲೆ ಕೋಪಗೊಂಡನು. ಯೇಸುವನ್ನು ಶಿಲುಬೆಯ ಮರಣಕ್ಕೆ ಒಪ್ಪಿಸುವುದರ ದೇವರು ಆತನನ್ನು ಶಿಕ್ಷಿಸಿದನು.
![OBS Image](https://cdn.door43.org/obs/jpg/360px/obs-en-49-11.jpg)
ಯೇಸು ಪಾಪ ಮಾಡಲಿಲ್ಲ, ಆದರೂ ದೇವರು ತನ್ನನ್ನು ಶಿಕ್ಷಿಸಲು ಆತನು ಸಮ್ಮತಿಸಿದನು. ಆತನು ಸಾಯಲು ಒಪ್ಪಿಕೊಂಡನು. ಹೀಗೆ ಆತನು ನಿಮ್ಮ ಪಾಪಗಳನ್ನು ಮತ್ತು ಲೋಕದಲ್ಲಿರುವ ಪ್ರತಿಯೊಬ್ಬ ವ್ಯಕ್ತಿಯ ಪಾಪಗಳನ್ನು ನಿವಾರಿಸುವಂಥ ಪರಿಪೂರ್ಣವಾದ ಯಜ್ಞವಾದನು. ಯೇಸು ತನ್ನನ್ನು ತಾನು ದೇವರಿಗೆ ಯಜ್ಞವಾಗಿ ಅರ್ಪಿಸಿದನು, ಆದ್ದರಿಂದ ದೇವರು ಯಾವುದೇ ಪಾಪವನ್ನಾಗಲಿ, ಎಂಥ ಘೋರ ಪಾಪಗಳನ್ನಾಗಲಿ ಕ್ಷಮಿಸುವನು.
![OBS Image](https://cdn.door43.org/obs/jpg/360px/obs-en-49-12.jpg)
ನೀವು ತುಂಬಾ ಒಳ್ಳೆ ಕೆಲಸಗಳನ್ನು ಮಾಡಿದರೂ, ಅದು ದೇವರು ನಿಮ್ಮನ್ನು ರಕ್ಷಿಸುವಂತೆ ಮಾಡುವುದಿಲ್ಲ. ಬೇರೆ ಯಾವ ಕಾರ್ಯಗಳನ್ನು ಮಾಡುವುದರ ಮೂಲಕ ನೀವು ಆತನಿಗೆ ಸ್ನೇಹಿತರಾಗಲು ಸಾಧ್ಯವಿಲ್ಲ. ಅದಕ್ಕೆ ಬದಲಾಗಿ, ಯೇಸು ದೇವರ ಮಗನೆಂದು, ಆತನು ನಿಮಗೆ ಬದಲಾಗಿ ಶಿಲುಬೆಯಲ್ಲಿ ಸತ್ತನು ಮತ್ತು ದೇವರು ಆತನನ್ನು ಜೀವಂತವಾಗಿ ಎಬ್ಬಿಸಿದನು ಎಂದು ನೀವು ನಂಬಬೇಕು. ಹೀಗೆ ನೀವು ನಂಬಿದರೆ ನೀವು ಮಾಡಿರುವ ಪಾಪವನ್ನು ದೇವರು ಕ್ಷಮಿಸುತ್ತಾನೆ.
![OBS Image](https://cdn.door43.org/obs/jpg/360px/obs-en-49-13.jpg)
ಯೇಸುವಿನಲ್ಲಿ ನಂಬಿಕೆಯಿಡುವ ಮತ್ತು ಆತನನ್ನು ತಮ್ಮ ಕರ್ತನನ್ನಾಗಿ ಅಂಗೀಕರಿಸಿಕೊಳ್ಳುವ ಎಲ್ಲರನ್ನು ದೇವರು ರಕ್ಷಿಸುತ್ತಾನೆ. ಆದರೆ ಆತನನ್ನು ನಂಬದವರನ್ನು ಆತನು ರಕ್ಷಿಸುವುದಿಲ್ಲ. ನೀವು ಶ್ರೀಮಂತರಾಗಿರಲಿ ಅಥವಾ ಬಡವರಾಗಿರಲಿ ಪುರುಷರಾಗಿರಲಿ ಸ್ತ್ರೀಯಾಗಿರಲಿ, ವೃದ್ಧರಾಗಿರಲಿ ಅಥವಾ ಯುವಕರಾಗಿರಲಿ, ನೀವು ಎಲ್ಲೇ ಜೀವಿಸುತ್ತಿರಲಿ ಇದ್ಯಾವುದು ದೊಡ್ಡ ವಿಷಯವೇ ಅಲ್ಲ. ದೇವರು ನಿಮ್ಮನ್ನು ಪ್ರೀತಿಸುತ್ತಾನೆ ಮತ್ತು ನೀವು ಯೇಸುವಿನಲ್ಲಿ ನಂಬಿಕೆಯಿಡಬೇಕೆಂದು ಬಯಸುತ್ತಾನೆ, ಏಕೆಂದರೆ ಆದರ ಮೂಲಕ ಆತನು ನಿಮಗೆ ಸ್ನೇಹಿತನಾಗಲು ಬಯಸುತ್ತಾನೆ.
![OBS Image](https://cdn.door43.org/obs/jpg/360px/obs-en-49-14.jpg)
ನೀವು ಆತನನ್ನು ನಂಬಿ ದೀಕ್ಷಾಸ್ನಾನ ಮಾಡಿಸಿಕೊಳ್ಳಬೇಕೆಂದು ಯೇಸು ನಿಮ್ಮನ್ನು ಕರೆಯುತ್ತಿದ್ದಾನೆ. ಯೇಸುವೇ ಮೆಸ್ಸೀಯನೂ, ದೇವರ ಒಬ್ಬನೇ ಮಗನೂ ಆಗಿದ್ದಾನೆಂದು ನೀವು ನಂಬುತ್ತೀರಾ? ನೀವು ಪಾಪಿಯಾಗಿದ್ದೀರಿ ಮತ್ತು ದೇವರು ನಿಮ್ಮನ್ನು ಶಿಕ್ಷಿಸಲು ನೀವು ಅರ್ಹರಾಗಿದ್ದೀರಿ ಎಂದು ನೀವು ನಂಬುತ್ತೀರಾ? ನಿಮ್ಮ ಪಾಪಗಳನ್ನು ನಿವಾರಿಸಲು ಯೇಸು ಶಿಲುಬೆಯಲ್ಲಿ ಸತ್ತನೆಂದು ನೀವು ನಂಬುತ್ತೀರಾ?
![OBS Image](https://cdn.door43.org/obs/jpg/360px/obs-en-49-15.jpg)
ನೀವು ಯೇಸುವನ್ನು ಮತ್ತು ಆತನು ನಿಮಗಾಗಿ ಮಾಡಿದ್ದನ್ನು ನಂಬಿದರೆ, ನೀವು ಕ್ರೈಸ್ತರಾಗುವಿರಿ! ಸೈತಾನನು ತನ್ನ ಕತ್ತಲೆಯ ರಾಜ್ಯದಲ್ಲಿ ಇನ್ನು ಮುಂದೆ ನಿಮ್ಮನ್ನು ಆಳುವದಿಲ್ಲ. ದೇವರು ಈಗ ತನ್ನ ಬೆಳಕಿನ ರಾಜ್ಯದಲ್ಲಿ ನಿಮ್ಮನ್ನು ಆಳುತ್ತಿದ್ದಾನೆ. ನೀವು ಹಿಂದೆ ಮಾಡುತ್ತಿದ್ದ ಹಾಗೆ ಪಾಪಮಾಡದಂತೆ ದೇವರು ನಿಮ್ಮನ್ನು ತಪ್ಪಿಸಿದ್ದಾನೆ. ಆತನು ನಿಮಗೆ ಹೊಸದಾದ, ಸರಿಯಾದ ಜೀವನಕ್ರಮವನ್ನು ದಯಪಾಲಿಸಿದ್ದಾನೆ.
![OBS Image](https://cdn.door43.org/obs/jpg/360px/obs-en-49-16.jpg)
ನೀನು ಕ್ರೈಸ್ತನಾಗಿದ್ದರೆ, ಯೇಸು ಮಾಡಿದ ಕಾರ್ಯದ ನಿಮಿತ್ತವಾಗಿ ದೇವರು ನಿನ್ನ ಪಾಪಗಳನ್ನು ಕ್ಷಮಿಸಿದ್ದಾನೆ. ಈಗ ದೇವರು ನಿನ್ನನ್ನು ಶತ್ರುವಾಗಿ ಅಲ್ಲ ಬದಲಾಗಿ ನಿನ್ನನ್ನು ಅಪ್ತ ಸ್ನೇಹಿತನಾಗಿ ಪರಿಗಣಿಸುತ್ತಾನೆ.
![OBS Image](https://cdn.door43.org/obs/jpg/360px/obs-en-49-17.jpg)
ನೀವು ದೇವರ ಸ್ನೇಹಿತರಾಗಿದ್ದರೆ ಮತ್ತು ಕರ್ತನಾದ ಯೇಸುವಿನ ಸೇವಕರಾಗಿದ್ದರೆ, ಯೇಸು ನಿಮಗೆ ಬೋಧಿಸುವುದನ್ನು ಅನುಸರಿಸಲು ನೀವು ಬಯಸುತ್ತೀರಿ. ನೀವು ಕ್ರೈಸ್ತರಾಗಿದ್ದರೂ ಕೂಡ, ಸೈತಾನನು ಪಾಪಮಾಡುವಂತೆ ನಿಮ್ಮನ್ನು ಪ್ರಲೋಭಿಸುತ್ತಾನೆ. ಆದರೆ ದೇವರು ತಾನು ಏನು ಮಾಡುತ್ತೇನೆಂದು ಹೇಳುತ್ತಾನೋ ಅದನ್ನು ಆತನು ಯಾವಾಗಲೂ ಮಾಡುತ್ತಾನೆ. ನೀವು ನಿಮ್ಮ ಪಾಪಗಳನ್ನು ಅರಿಕೆಮಾಡಿದರೆ ನಿಮ್ಮನ್ನು ಕ್ಷಮಿಸುವೆನು ಎಂದು ಆತನು ಹೇಳುತ್ತಾನೆ. ಪಾಪದ ವಿರುದ್ಧ ಹೋರಾಡಲು ಆತನು ನಿಮಗೆ ಬಲವನ್ನು ಕೊಡುವನು.
![OBS Image](https://cdn.door43.org/obs/jpg/360px/obs-en-49-18.jpg)
ನೀವು ಪ್ರಾರ್ಥಿಸಬೇಕೆಂದು ಮತ್ತು ತನ್ನ ವಾಕ್ಯವನ್ನು ಅಧ್ಯಯನ ಮಾಡಬೇಕೆಂದು ದೇವರು ನಿಮಗೆ ಹೇಳುತ್ತಾನೆ. ನೀವು ಇತರ ಕ್ರೈಸ್ತರೊಂದಿಗೆ ಸೇರಿ ಆತನನ್ನು ಆರಾಧಿಸಬೇಕೆಂದು ಸಹ ಆತನು ಹೇಳುತ್ತಾನೆ. ಆತನು ನಿಮಗಾಗಿ ಮಾಡಿರುವಂಥದ್ದನ್ನು ನೀವು ಬೇರೆ ಜನರಿಗೆ ಹೇಳಬೇಕು. ನೀವು ಈ ಎಲ್ಲಾ ಕಾರ್ಯಗಳನ್ನು ಮಾಡಿದರೆ, ನೀವು ಆತನ ಬಲವಾದ ಸ್ನೇಹಿತರಾಗುವಿರಿ.
_ಸತ್ಯವೇದದ ಕಥೆ: ರೋಮಾಪುರ 3:21-26, 5:1-11; ಯೋಹಾನ 3:16; ಮಾರ್ಕ 16:16; ಕೊಲೊಸ್ಸೆ 1:13-14; 2 ಕೊರಿಂಥ 5:17-21; 1 ಯೋಹಾನ 1:5-10_

72
content/50.md Normal file
View File

@ -0,0 +1,72 @@
# 50. ಹಿಂದಿರುಗಿ ಬರಲಿರುವ ಯೇಸು
![OBS Image](https://cdn.door43.org/obs/jpg/360px/obs-en-50-01.jpg)
ಸುಮಾರು 2,000 ವರ್ಷಗಳಿಂದ, ಲೋಕದಾದ್ಯಂತ ಅನೇಕಾನೇಕ ಜನರು ಮೆಸ್ಸೀಯನಾಗಿರುವ ಯೇಸುವಿನ ಸುವಾರ್ತೆಯನ್ನು ಕೇಳುತ್ತಿದ್ದಾರೆ. ಸಭೆಯು ಬೆಳೆಯುತ್ತಿದೆ. ಯೇಸು ತಾನು ಲೋಕದ ಅಂತ್ಯದಲ್ಲಿ ಹಿಂದಿರುಗಿ ಬರುವೆನು ಎಂದು ವಾಗ್ದಾನ ಮಾಡಿದ್ದಾನೆ. ಆತನು ಇನ್ನೂ ಹಿಂದಿರುಗಿ ಬರಲಿಲ್ಲವಾದರೂ ಕೂಡ, ಆತನು ತನ್ನ ವಾಗ್ದಾನವನ್ನು ನೆರವೇರಿಸುತ್ತಾನೆ .
![OBS Image](https://cdn.door43.org/obs/jpg/360px/obs-en-50-02.jpg)
ಯೇಸುವಿನ ಬರೋಣವನ್ನು ಎದುರುನೋಡುತ್ತಿರುವ ನಾವು ಪರಿಶುದ್ಧರಾಗಿ ಮತ್ತು ಆತನನ್ನು ಗೌರವಿಸುವವರಾಗಿ ಜೀವಿಸಬೇಕೆಂದು ದೇವರು ಬಯಸುತ್ತಾನೆ. ನಾವು ಆತನ ರಾಜ್ಯದ ಕುರಿತು ಇತರರಿಗೆ ಹೇಳಬೇಕೆಂದು ಸಹ ಆತನು ಅಪೇಕ್ಷಿಸುತ್ತಾನೆ. ಯೇಸು ಇ ಲೋಕದಲ್ಲಿ ಜೀವಿಸುತ್ತಿದ್ದಾಗ, "ನನ್ನ ಶಿಷ್ಯರು ದೇವರ ರಾಜ್ಯದ ಕುರಿತಾದ ಶುಭವಾರ್ತೆಯನ್ನು ಲೋಕದ ಎಲ್ಲೆಡೆಯಿರುವ ಜನರಿಗೆ ಸಾರುತ್ತಾರೆ, ಆಗ ಅಂತ್ಯವು ಬರುತ್ತದೆ" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-50-03.jpg)
ಇನ್ನೂ ಅನೇಕ ಜನರು ಯೇಸುವಿನ ಕುರಿತಾಗಿ ಕೇಳಿಸಿಕೊಂಡಿಲ್ಲ . ಯೇಸು ಸ್ವರ್ಗಕ್ಕೆ ಹಿಂದಿರುಗಿ ಹೋಗುವ ಮುಂಚೆ ಆತನು ಕ್ರೈಸ್ತರಿಗೆ ‘ಶುಭವಾರ್ತೆಯನ್ನು ಅರಿಯದ ಜನರಿಗೆ ಶುಭವಾರ್ತೆಯನ್ನು ಸಾರಿರಿ’ ಎಂದು ಹೇಳಿದನು. ಆತನು, "ನೀವು ಹೋಗಿ, ಎಲ್ಲಾ ಜನರನ್ನು ಶಿಷ್ಯರನ್ನಾಗಿ ಮಾಡಿರಿ!" ಮತ್ತು "ಹೊಲಗಳು ಕೊಯ್ಲಿಗೆ ಬಂದಿವೆ!" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-50-04.jpg)
ಯೇಸು, "ದಾಸನು ತನ್ನ ಯಜಮಾನನಿಗಿಂತ ದೊಡ್ಡವನಲ್ಲ. ಈ ಲೋಕದ ಪ್ರಮುಖ ಜನರು ನನ್ನನ್ನು ದ್ವೇಷಿಸಿದ್ದಾರೆ, ಅವರು ನಿಮ್ಮನ್ನು ಹಿಂಸಿಸುವರು ಮತ್ತು ನನ್ನ ನಿಮಿತ್ತವಾಗಿ ನಿಮ್ಮನ್ನು ಕೊಲ್ಲುವರು. ಈ ಲೋಕದಲ್ಲಿ ನೀವು ಸಂಕಷ್ಟವನ್ನುಭವಿಸುತ್ತೀರಿ, ಆದರೆ ಧೈರ್ಯವಾಗಿರಿ ಏಕೆಂದರೆ ಈ ಲೋಕವನ್ನು ಆಳುವ ಸೈತಾನನನ್ನು ನಾನು ಸೋಲಿಸಿದ್ದೇನೆ. ನೀವು ಕಡೇವರೆಗೂ ನನಗೆ ನಂಬಿಗಸ್ತರಾಗಿದ್ದರೆ ದೇವರು ನಿಮ್ಮನ್ನು ರಕ್ಷಿಸುತ್ತಾನೆ!" ಎಂದು ಹೇಳಿದನು.
![OBS Image](https://cdn.door43.org/obs/jpg/360px/obs-en-50-05.jpg)
ಲೋಕವು ಅಂತ್ಯವಾಗುವಾಗ ಜನರಿಗೆ ಏನೆಲ್ಲಾ ಸಂಭವಿಸುತ್ತದೆಂದು ವಿವರಿಸಲು ಯೇಸು ತನ್ನ ಶಿಷ್ಯರಿಗೆ ಒಂದು ಕಥೆಯನ್ನು ಹೇಳಿದನು. ಆತನು ಹೇಳಿದ್ದೇನಂದರೆ, “ಒಬ್ಬ ಮನುಷ್ಯನು ತನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದನು. ಅವನು ಮಲಗಿದ್ದಾಗ ಅವನ ಶತ್ರು ಬಂದು ಗೋಧಿ ಬೀಜಗಳ ನಡುವೆ ಕಳೆಯ ಬೀಜಗಳನ್ನು ಬಿತ್ತಿ ಹೊರಟುಹೋದನು.”
![OBS Image](https://cdn.door43.org/obs/jpg/360px/obs-en-50-06.jpg)
"ಸಸ್ಯಗಳು ಮೊಳಕೆಯೊಡೆದು ಬಂದಾಗ, ಆ ಮನುಷ್ಯನ ಸೇವಕರು, 'ಯಜಮಾನನೇ, ನೀನು ಆ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದ್ದಿ. ಆದರೆ ಅದರಲ್ಲಿ ಕಳೆಗಳು ಏಕಿವೆ?' ಆ ಮನುಷ್ಯನು, 'ನನ್ನ ಶತ್ರುಗಳು ಮಾತ್ರವೇ ಅವುಗಳನ್ನು ಬಿತ್ತಲು ಬಯಸುತ್ತಾರೆ, ಇದು ನನ್ನ ಶತ್ರುಗಳಲ್ಲಿ ಒಬ್ಬರ ಕೆಲಸವಾಗಿದೆ.'"
![OBS Image](https://cdn.door43.org/obs/jpg/360px/obs-en-50-07.jpg)
"ಸೇವಕರು ತಮ್ಮ ಯಜಮಾನನಿಗೆ, 'ನಾವು ಕಳೆಗಳನ್ನು ಕಿತ್ತುಹಾಕಲೇ?' ಎಂದು ಕೇಳಿದರು. ಯಜಮಾನನು, 'ಬೇಡ, ನೀವು ಹಾಗೇ ಮಾಡುವಾಗ ನೀವು ಗೋಧಿಗಳನ್ನು ಸಹ ಕಿತ್ತುಹಾಕುವಿರಿ. ಕೊಯ್ಲಿನ ತನಕ ಕಾಯಿರಿ. ಅನಂತರ ಕಳೆಗಳನ್ನು ಕಿತ್ತು ತೆಗೆದು ಹೊರೆಕಟ್ಟಿ ಅವುಗಳನ್ನು ಸುಟ್ಟುಹಾಕಿರಿ. ಆದಾದ ನಂತರ ಗೋಧಿಗಳನ್ನು ನನ್ನ ಕಣಜಕ್ಕೆ ತುಂಬಿರಿ.'"
![OBS Image](https://cdn.door43.org/obs/jpg/360px/obs-en-50-08.jpg)
ಶಿಷ್ಯರು ಈ ಕಥೆಯ ಅರ್ಥವನ್ನು ಅರ್ಥಮಾಡಿಕೊಳ್ಳಲಿಲ್ಲ, ಆದ್ದರಿಂದ ಅವರು ಅದನ್ನು ವಿವರಿಸಿ ಹೇಳು ಎಂದು ಯೇಸುವನ್ನು ಕೇಳಿದರು. ಯೇಸು ಹೇಳಿದ್ದೇನಂದರೆ, "ಒಳ್ಳೆಯ ಬೀಜವನ್ನು ಬಿತ್ತಿದ್ದ ವ್ಯಕ್ತಿಯು ಮೆಸ್ಸೀಯನನ್ನು ಪ್ರತಿನಿಧಿಸುತ್ತಾನೆ. ಹೊಲವು ಈ ಲೋಕವನ್ನು ಪ್ರತಿನಿಧಿಸುತ್ತದೆ ಒಳ್ಳೆಯ ಬೀಜವು ದೇವರ ರಾಜ್ಯದ ಜನರನ್ನು ಪ್ರತಿನಿಧಿಸುತ್ತದೆ."
![OBS Image](https://cdn.door43.org/obs/jpg/360px/obs-en-50-09.jpg)
"ಕಳೆಗಳು ದುಷ್ಟನಾದ ಸೈತಾನನಿಗೆ ಸೇರಿರುವ ಜನರನ್ನು ಪ್ರತಿನಿಧಿಸುತ್ತವೆ. ಕಳೆಗಳನ್ನು ಬಿತ್ತಿದ್ದ ಆ ಮನುಷ್ಯನ ಶತ್ರುವು, ಸೈತಾನನನ್ನು ಪ್ರತಿನಿಧಿಸುತ್ತದೆ. ಕೊಯ್ಲು ಲೋಕದ ಅಂತ್ಯವನ್ನು ಪ್ರತಿನಿಧಿಸುತ್ತದೆ ಮತ್ತು ಕೊಯ್ಲುಗಾರರು ದೇವರ ದೂತರನ್ನು ಪ್ರತಿನಿಧಿಸುತ್ತಾರೆ."
![OBS Image](https://cdn.door43.org/obs/jpg/360px/obs-en-50-10.jpg)
"ಲೋಕವು ಅಂತ್ಯಗೊಳ್ಳುವಾಗ, ದೇವದೂತರು ಸೈತಾನನಿಗೆ ಸಂಬಂಧಪಟ್ಟಂಥ ಎಲ್ಲಾ ಜನರನ್ನು ಒಟ್ಟುಗೂಡಿಸುತ್ತಾರೆ. ದೇವದೂತರು ಅವರನ್ನು ಬಹಳ ಉರಿಯುವ ಬೆಂಕಿಗೆ ಹಾಕುವರು. ಈ ಜನರು ಅಲ್ಲಿ ಭಯಂಕರವಾದ ಯಾತನೆಯಿಂದ ಗೋಳಾಡುವರು ಮತ್ತು ತಮ್ಮ ಹಲ್ಲುಗಳನ್ನು ಕಡಿಯುವರು. ಆದರೆ ನೀತಿವಂತರು, ಯೇಸುವನ್ನು ಹಿಂಬಾಲಿಸಿದವರು ತಮ್ಮ ತಂದೆಯಾದ ದೇವರ ರಾಜ್ಯದಲ್ಲಿ ಸೂರ್ಯನಂತೆಯೇ ಪ್ರಕಾಶಿಸುವರು."
![OBS Image](https://cdn.door43.org/obs/jpg/360px/obs-en-50-11.jpg)
ಲೋಕದ ಅಂತ್ಯ ಬರುವುದಕ್ಕಿಂತ ಮುಂಚೆಯೇ ಆತನು ಭೂಮಿಗೆ ಹಿಂದಿರುಗಿ ಬರುವನೆಂದು ಯೇಸು ಹೇಳಿದನು. ಆತನು ಪರಲೋಕಕ್ಕೆ ಹೋದಂತೆಯೇ ಆತನು ಹಿಂದಿರುಗಿ ಬರುವನು. ಅಂದರೆ ಅವನಿಗೆ ನಿಜವಾದ ದೇಹವಿರುತ್ತದೆ ಮತ್ತು ಆತನು ಆಕಾಶದ ಮೇಘಗಳ ಮೇಲೆ ಬರುತ್ತಾನೆ. ಯೇಸು ಹಿಂದಿರುಗಿ ಬರುವಾಗ, ಸತ್ತುಹೋಗಿರುವ ಎಲ್ಲಾ ಕ್ರೈಸ್ತರು ಸತ್ತವರೊಳಗಿಂದ ಎದ್ದು ಆಕಾಶದಲ್ಲಿ ಆತನನ್ನು ಭೇಟಿಯಾಗುತ್ತಾರೆ.
![OBS Image](https://cdn.door43.org/obs/jpg/360px/obs-en-50-12.jpg)
ಅನಂತರ ಇನ್ನೂ ಜೀವಂತವಾಗಿರುವ ಕ್ರೈಸ್ತರು ಆಕಾಶಕ್ಕೆ ಒಯ್ಯಲ್ಪಡುವರು, ಸತ್ತವರೊಳಗಿಂದ ಎದ್ದು ಬಂದ ಇತರ ಕ್ರೈಸ್ತರೊಂದಿಗೆ ಸೇರಿಕೊಳ್ಳುತ್ತಾರೆ. ಅವರೆಲ್ಲರು ಅಲ್ಲಿ ಯೇಸುವಿನೊಂದಿಗೆ ಇರುವರು. ಅದಾದ ನಂತರ ಯೇಸು ತನ್ನ ಜನರೊಂದಿಗೆ ಜೀವಿಸುತ್ತಾನೆ. ಅವರು ಒಟ್ಟಾಗಿ ಜೀವಿಸುವಾಗ ಅವರಿಗೆ ನಿತ್ಯವಾದ ಶಾಂತಿಯು ದೊರಕುತ್ತದೆ.
![OBS Image](https://cdn.door43.org/obs/jpg/360px/obs-en-50-13.jpg)
ಯೇಸು ತನ್ನನ್ನು ನಂಬುವ ಎಲ್ಲರಿಗೂ ಕಿರೀಟವನ್ನು ಕೊಡುವೆನೆಂದು ವಾಗ್ದಾನ ಮಾಡಿದ್ದಾನೆ. ಅವರು ಸದಾಕಾಲವೂ ದೇವರೊಂದಿಗಿದ್ದು ಎಲ್ಲವನ್ನು ನಿತ್ಯವಾಗಿ ಆಳುತ್ತಾರೆ. ಅವರಿಗೆ ಪರಿಪೂರ್ಣ ಶಾಂತಿ ಇರುತ್ತದೆ.
![OBS Image](https://cdn.door43.org/obs/jpg/360px/obs-en-50-14.jpg)
ಆದರೆ ಯೇಸುವನ್ನು ನಂಬದಂಥ ಎಲ್ಲರಿಗೂ ದೇವರು ನ್ಯಾಯತೀರ್ಪು ಮಾಡುವನು. ಆತನು ಅವರನ್ನು ನರಕಕ್ಕೆ ಹಾಕುವನು. ಅವರು ಅಲ್ಲಿ ಗೋಳಾಡುವರು, ತಮ್ಮ ಹಲ್ಲುಗಳನ್ನು ಕಡಿಯುವರು ಮತ್ತು ಅವರು ನಿತ್ಯವಾಗಿ ಯಾತನೆಯನ್ನುಭವಿಸುವರು. ಆರದ ಬೆಂಕಿಯು ಅವರನ್ನು ನಿರಂತರವಾಗಿ ದಹಿಸುತ್ತದೆ ಮತ್ತು ಹುಳುಗಳು ಅವರನ್ನು ತಿನ್ನುವುದನ್ನು ನಿಲ್ಲಿಸುವುದಿಲ್ಲ.
![OBS Image](https://cdn.door43.org/obs/jpg/360px/obs-en-50-15.jpg)
ಯೇಸು ಹಿಂದಿರುಗಿ ಬರುವಾಗ, ಆತನು ಸೈತಾನನನ್ನು ಮತ್ತು ಅವನ ರಾಜ್ಯವನ್ನು ಸಂಪೂರ್ಣವಾಗಿ ನಾಶಮಾಡುವನು. ಆತನು ಸೈತಾನನನ್ನು ನರಕಕ್ಕೆ ಹಾಕುತ್ತಾನೆ. ಸೈತಾನನು ನಿತ್ಯವಾಗಿ ಅಲ್ಲಿ ಸುಡಲ್ಪಡುತ್ತಾನೆ, ದೇವರನ್ನು ಅನುಸರಿಸುವ ಬದಲು ಆತನನ್ನು ಹಿಂಬಾಲಿಸಲು ನಿರ್ಧರಿಸಿದ ಎಲ್ಲರೂ ಅವನೊಂದಿಗೆ ಸುಡಲ್ಪಡುತ್ತಾರೆ.
![OBS Image](https://cdn.door43.org/obs/jpg/360px/obs-en-50-16.jpg)
ಆದಾಮ ಮತ್ತು ಹವ್ವರು ದೇವರಿಗೆ ಅವಿಧೇಯರಾಗಿ ಪಾಪವನ್ನು ಈ ಲೋಕಕ್ಕೆ ತಂದ ಕಾರಣ ದೇವರು ಅದನ್ನು ಶಪಿಸಿದನು ಮತ್ತು ಅದನ್ನು ನಾಶಮಾಡಲು ನಿರ್ಧರಿಸಿದನು. ಆದರೆ ಒಂದು ದಿನ ದೇವರು ಹೊಸ ಪರಲೋಕವನ್ನು ಮತ್ತು ಹೊಸ ಭೂಮಿಯನ್ನು ಸೃಷ್ಟಿಸುತ್ತಾನೆ ಅದು ಪರಿಪೂರ್ಣವಾಗಿರುತ್ತದೆ.
![OBS Image](https://cdn.door43.org/obs/jpg/360px/obs-en-50-17.jpg)
ಯೇಸು ಮತ್ತು ಆತನ ಜನರು ಹೊಸ ಭೂಮಿಯ ಮೇಲೆ ಜೀವಿಸುತ್ತಾರೆ, ಮತ್ತು ಅವರು ಎಲ್ಲದರ ಮೇಲೆ ನಿತ್ಯವಾಗಿ ಆಳುತ್ತಾರೆ. ಆತನು ಜನರ ಕಣ್ಣೀರನ್ನು ಒರೆಸುತ್ತಾನೆ. ಯಾರೂ ಸಂಕಟಪಡುವುದಿಲ್ಲ ಅಥವಾ ದುಃಖಿಸುವುದಿಲ್ಲ. ಅವರು ಅಳುವುದಿಲ್ಲ. ಅವರು ಅಸ್ವಸ್ಥರಾಗುವುದಿಲ್ಲ ಅಥವಾ ಸಾಯುವುದಿಲ್ಲ. ಮತ್ತು ಅಲ್ಲಿ ಕೆಟ್ಟದ್ದೇನೂ ಇರುವುದಿಲ್ಲ. ಯೇಸು ತನ್ನ ರಾಜ್ಯವನ್ನು ನ್ಯಾಯವಾಗಿ ಶಾಂತಿಯಿಂದ ಆಳುತ್ತಾನೆ. ಆತನು ಆತನ ಜನರೊಂದಿಗೆ ಶಾಶ್ವತವಾಗಿರುತ್ತಾನೆ.
_ಸತ್ಯವೇದದ ಕಥೆ: ಮತ್ತಾಯ 24:14; 28:18; ಯೋಹಾನ 15:20, 16:33; ಪ್ರಕಟಣೆ 2:10; ಮತ್ತಾಯ 13:24-30, 36-42; 1 ಥೆಸಲೋನಿಕ 4:13-5:11; ಯಾಕೋಬ 1:12; ಮತ್ತಾಯ 22:13; ಪ್ರಕಟಣೆ 20:10, 21:1-22:21_

12
content/back/intro.md Normal file
View File

@ -0,0 +1,12 @@
### ಭಾಗಿಯಾಗಿರಿ!
ಈ ಲೋಕದಲ್ಲಿರುವ ಎಲ್ಲಾ ಭಾಷೆಗಳಲ್ಲಿ ದೃಶ್ಯಗಳ ಮೂಲಕ (ವಿಷುಯಲ್) ಈ ಕಿರು-ಸತ್ಯವೇದವನ್ನು ಲಭ್ಯವಾಗುವಂತೆ ಮಾಡಲು ನಾವು ಬಯಸುತ್ತೇವೆ ಮತ್ತು ನೀವು ಅದಕ್ಕೆ ಸಹಾಯ ಮಾಡಬಹುದು! ಇದು ಅಸಾಧ್ಯವೇನೂ ಅಲ್ಲ - ಈ ಕೃತಿಯನ್ನು ಭಾಷಾಂತರಿಸಲು ಮತ್ತು ವಿತರಿಸಲು ಕ್ರಿಸ್ತನ ಇಡೀ ದೇಹವು ಒಟ್ಟಾಗಿ ಕಾರ್ಯನಿರ್ವಹಿಸಿದರೆ ಇದನ್ನು ಕಾರ್ಯರೂಪಕ್ಕೆ ತರಬಹುದೆಂದು ನಾವು ಭಾವಿಸುತ್ತೇವೆ.
### ಉಚಿತವಾಗಿ ಹಂಚಿರಿ
ಇದಕ್ಕೆ ಯಾವುದೇ ನಿರ್ಬಂಧವಿಲ್ಲ, ಈ ಪುಸ್ತಕದ ಎಷ್ಟು ಪ್ರತಿಗಳನ್ನಾದರೂ ನೀವು ಇತರರಿಗೆ ಕೊಡಬಹುದು. ಎಲ್ಲಾ ಡಿಜಿಟಲ್ ಆವೃತ್ತಿಗಳು ಆನ್ಲೈನಿನಲ್ಲಿ ಉಚಿತವಾಗಿ ದೊರಕುತ್ತವೆ, ಮತ್ತು ನಾವು ಉಚಿತ ಪರವಾನಗಿಯನ್ನು ಬಳಸುತ್ತಿರುವ ಕಾರಣದಿಂದಾಗಿ, ಸ್ವಾಮ್ಯಶುಲ್ಕವನ್ನು ಪಾವತಿಸದೆಯೇ ಜಗತ್ತಿನ ಯಾವುದೇ ಭಾಗದಲ್ಲಿಯಾದರೂ ಅನ್ ಫೋಲ್ಡಿಂಗ್ ವರ್ಡ್ ® ಓಪನ್ ಬೈಬಲ್ ಸ್ಟೋರೀಸ್ ಗಳನ್ನು ವಾಣಿಜ್ಯಾತ್ಮಕವಾಗಿ ಮರುಪ್ರಕಟಿಸಬಹುದು. ಹೆಚ್ಚಿನ ಮಾಹಿತಿಳು [openbiblestories.org] () ಲ್ಲಿ ನಿಮಗೆ ಲಭ್ಯವಿರುವುದು.
###ವಿಸ್ತರಿಸಿರಿ!
ಅನ್ ಫೋಲ್ಡಿಂಗ್ ವರ್ಡ್ ® ಓಪನ್ ಬೈಬಲ್ ಸ್ಟೋರೀಸ್ ಗಳನ್ನು ಇತರ ಭಾಷೆಗಳಲ್ಲಿ ವೀಡಿಯೊಗಳಾಗಿ ಮತ್ತು ಮೊಬೈಲ್ ಫೋನ್ ಅಪ್ಲಿಕೇಷನ್ಗಳನ್ನು [openbiblestories.org] ಇದರಲ್ಲಿ ಪಡೆದುಕೊಳ್ಳಿರಿ (https://openbiblestories.org). ಆನ್ ಫೋಲ್ಡಿಂಗ್ ವರ್ಡ್ ® ಓಪನ್ ಬೈಬಲ್ ಸ್ಟೋರೀಸ್ ಗಳನ್ನು ನಿಮ್ಮ ಭಾಷೆಗೆ ಅನುವಾದಿಸಲು ವೆಬ್ಸೈಟ್ನಲ್ಲಿ ನೀವು ಸಹಾಯವನ್ನು ಪಡೆದುಕೊಳ್ಳಬಹುದು.

19
content/front/intro.md Normal file
View File

@ -0,0 +1,19 @@
** ಅನ್ ಫೋಲ್ಡಿಂಗ್ ವರ್ಡ್ ® ಓಪನ್ ಬೈಬಲ್ ಸ್ಟೋರೀಸ್**
**ಯಾವುದೇ ಭಾಷೆಯಲ್ಲಿಯೂ ಲಭ್ಯವಿರುವ ಅನಿರ್ಬಂಧಿತವಾದ ವಿಷುಯಲ್ ಕಿರು-ಸತ್ಯವೇದ**
[https://openbiblestories.org](https://openbiblestories.org)
*ಸ್ವಾಮ್ಯಹಕ್ಕು © 2019 ಆನ್ ಫೋಲ್ಡಿಂಗ್ ವರ್ಡ್*
ಈ ಕೆಲಸವನ್ನು ಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್-ಶೇರ್ಅಲೈಕ್ 4.0 ಇಂಟರ್ನ್ಯಾಷನಲ್ ಲೈಸೆನ್ಸ್ (CC BY-SA) ಅಡಿಯಲ್ಲಿ ಲಭ್ಯವಿರುತ್ತದೆ . ಈ ಪರವಾನಗಿಯ ಪ್ರತಿಯನ್ನು ವೀಕ್ಷಿಸಲು, [http://creativecommons.org/licenses/by-sa/4.0/](http://creativecommons.org/licenses/by-sa/4.0/) ಗೆ ಭೇಟಿ ನೀಡಿ ಅಥವಾ ಕ್ರಿಯೇಟಿವ್ ಕಾಮನ್ಸ್, ಪೋಸ್ಟ್ ಬಾಕ್ಸ್ 1866, ಮೌಂಟೇನ್ ವ್ಯೂ, CA 94042, ಯುಎಸ್ಎ ಗೆ ಪತ್ರವನ್ನು ಕಳುಹಿಸಿರಿ.
ಅನ್ ಫೋಲ್ಡಿಂಗ್ ವರ್ಡ್ ® ಎಂಬುದು ಆನ್ ಫೋಲ್ಡಿಂಗ್ ವರ್ಡ್ ನ ನೋಂದಾಯಿತ ವ್ಯಾಪಾರ ಮುದ್ರೆಯಾಗಿದೆ. ಆನ್ ಫೋಲ್ಡಿಂಗ್ ವರ್ಡ್ ಎಂಬ ಹೆಸರನ್ನು ಅಥವಾ ಲೋಗೊ ಇವುಗಳನ್ನು ಬಳಸಲು ಆನ್ ಫೋಲ್ಡಿಂಗ್ ವರ್ಡ್ ನ ಲಿಖಿತ ಅನುಮತಿ ಬೇಕಾಗುತ್ತದೆ. CC BY-SA ಪರವಾನಗಿಯ ನಿಯಮಗಳಡಿಯಲ್ಲಿ, ನೀವು ಅನ್ ಫೋಲ್ಡಿಂಗ್ ವರ್ಡ್ ® ಟ್ರೇಡ್ಮಾರ್ಕ್ ಅನ್ನು ಹಾಗೆಯೇ ಇರಿಸಿಕೊಳ್ಳುವವರೆಗೆ ಬದಲಾದ ಈ ಕೆಲಸದ ನಕಲು ಪ್ರತಿಗಳನ್ನು ನೀವು ಮಾಡಿಕೊಳ್ಳಬಹುದು ಮತ್ತು ಪುನರ್ವಿತರಣ ಮಾಡಬಹುದು. ನೀವು ನಕಲು ಪ್ರತಿಯನ್ನು ಬದಲಾಯಿಸಿದರೆ ಅಥವಾ ಈ ಕೃತಿಯನ್ನು ಭಾಷಾಂತರಿಸಿದರೆ, ಇದರಿಂದ ಉತ್ಪನ್ನವಾದ ಕೃತಿಯನ್ನು ರಚಿಸಿದಂತೆ ಆಗುತ್ತದೆ, ಆದ್ದರಿಂದ ನೀವು ಅನ್ ಫೋಲ್ಡಿಂಗ್ ವರ್ಡ್ ® ಟ್ರೇಡ್ಮಾರ್ಕ್ ಅನ್ನು ತೆಗೆದುಹಾಕಬೇಕು.
ಉತ್ಪನ್ನವಾದ ಕೃತಿಯಲ್ಲಿ, ನೀವು ಮಾಡಿದ ಬದಲಾವಣೆಗಳನ್ನು ಸೂಚಿಸಬೇಕು ಮತ್ತು ಈ ಕೆಳಗಿರುವುದು ಕೃತಿಯ ಮೂಲವಾಗಿದೆ ಎಂದು ಹೇಳಬೇಕು: “ ಅನ್ ಫೋಲ್ಡಿಂಗ್ ವರ್ಡ್ ನ ಮೂಲ ಕೃತಿಯು [https://openbiblestories.org] (https://openbiblestories.org) ನಲ್ಲಿ ಲಭ್ಯವಿದೆ". ನಿಮ್ಮ ಉತ್ಪನ್ನದ ಕೃತಿಯನ್ನೂ (CC BY-SA) ಪರವಾನಗಿಯ ಅಡಿಯಲ್ಲಿ ಲಭ್ಯವಾಗುವಂತೆ ನೀವು ಮಾಡಬೇಕು.
ಈ ಕೃತಿಯನ್ನು ನೀವು ಭಾಷಾಂತರ ಮಾಡುವುದರ ಕುರಿತು ನೀವು ಅನ್ ಫೋಲ್ಡಿಂಗ್ ವರ್ಡ್ ಗೆ ತಿಳಿಸಲು ಬಯಸಿದರೆ, ದಯವಿಟ್ಟು ನಮ್ಮನ್ನು ಸಂಪರ್ಕಿಸಿ [https://unfoldingword.org/contact/](https://unfoldingword.org/contact/).
ಕಲಾಕೃತಿಯ ಮೂಲ: ಈ ಕಥೆಗಳಲ್ಲಿ ಬಳಸಲಾದ ಎಲ್ಲಾ ಚಿತ್ರಗಳು © ಸ್ವೀಟ್ ಪಬ್ಲಿಷಿಂಗ್ ಗೆ ಸಂಬಂಧಪಟ್ಟವುಗಳಾಗಿವೆ ([www.sweetpublishing.com] (http://www.sweetpublishing.com)) ಮತ್ತು ಕ್ರಿಯೇಟಿವ್ ಕಾಮನ್ಸ್ ಅಟ್ರಿಬ್ಯೂಷನ್-ಶೇರ್ಅಲೈಕ್ ಲೈಸೆನ್ಸ್ ಆಡಿಯಲ್ಲಿ ಲಭ್ಯವಾಗಿವೆ ([http] : //creativecommons.org/licenses/by-sa/3.0] (http://creativecommons.org/licenses/by-sa/3.0)).
*ಪ್ರಪಂಚದಾದ್ಯಂತ ಕ್ರಿಸ್ತನಲ್ಲಿರುವ ನಮ್ಮ ಸಹೋದರರು ಮತ್ತು ಸಹೋದರಿಯರಿಗೆ ಅಂದರೆ ಜಾಗತಿಕ ಸಭೆಗೆ ಬರೆಯುವುದು - ನಿಮ್ಮನ್ನು ಆಶೀರ್ವದಿಸಲು, ಬಲಪಡಿಸಲು ಮತ್ತು ಪ್ರೋತ್ಸಾಹಿಸಲು ದೇವರು ತನ್ನ ವಾಕ್ಯಗಳ ಈ ದೃಶ್ಯ (ವಿಷುವಲ್) ಅವಲೋಕನವನ್ನು ಅಥವಾ ಪಕ್ಷಿನೋಟವನ್ನು ಉಪಯೋಗಿಸಲಿ ಎಂಬುದು ನಮ್ಮ ಪ್ರಾರ್ಥನೆಯಾಗಿದೆ.*

2
content/front/title.md Normal file
View File

@ -0,0 +1,2 @@
ಅನ್ ಫೋಲ್ಡಿಂಗ್ ವರ್ಡ್® ಓಪನ್ ಬೈಬಲ್ ಸ್ಟೋರೀಸ್

48
manifest.yaml Normal file
View File

@ -0,0 +1,48 @@
dublin_core:
conformsto: rc0.2
contributor:
- 'Acsah Jacob'
- 'Antoney Raj'
- 'Cdr. Thomas Mathew'
- 'Hind Prakash'
- 'Shojo John'
creator: 'Door43 World Missions Community'
description: '50 key stories of the Bible, from Creation to Revelation, for evangelism & discipleship, in text, audio, and video, on any mobile phone, in any language, for free. It increases understanding of the historical and redemptive narrative of the entire Bible.'
format: 'text/markdown'
identifier: 'obs'
issued: '2019-06-25'
modified: '2019-06-25'
language:
identifier: kn
title: 'ಕನ್ನಡ'
direction: ltr
publisher: 'Door43'
relation:
- 'kn/tn'
- 'kn/tq'
- 'kn/tw'
- 'kn/ulb'
rights: 'CC BY-SA 4.0'
source:
-
identifier: obs
language: en
version: '4'
subject: 'Open Bible Stories'
title: 'Open Bible Stories'
type: 'book'
version: '4.1'
checking:
checking_entity:
- 'BCS'
- 'Cdr. Thomas Mathew'
checking_level: '3'
projects:
-
categories:
identifier: 'obs'
path: './content'
sort: 0
title: 'Open Bible Stories'
versification:

15
media.yaml Normal file
View File

@ -0,0 +1,15 @@
projects:
-
identifier: 'obs'
version: {latest}
media:
-
identifier: 'pdf'
version: 1
contributor: []
url: 'https://cdn.door43.org/obs/txt/1/kn/obs-kn-v4_1.pdf'
-
identifier: 'door43'
version: '{latest}'
contributor: []
url: 'https://door43.org/u/Door43-Catalog/kn_obs/'